ಶ್‌..! ʼKGFʼ2 ಮಾನ್‌ಸ್ಟರ್‌ ಇಸ್‌ ಹಿಯರ್ - Vistara News

ಸಿನಿಮಾ

ಶ್‌..! ʼKGFʼ2 ಮಾನ್‌ಸ್ಟರ್‌ ಇಸ್‌ ಹಿಯರ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಮೊಸ್ಟ್‌ ಅವೈಟೆಡ್‌ ಸಿನಿಮಾ ಕೆಜಿಎಫ್‌ 2 ಬಿಡುಗಡೆಗೊಂಡು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್‌ 1 ಚಿತ್ರಕ್ಕೆ ಸೂಕ್ತ ಅಂತ್ಯ ಕೆಜಿಎಫ್‌ 2ನಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ರ: ಕೆಜಿಎಫ್‌ ಚಾಪ್ಟರ್-2‌.
ನಿರ್ದೇಶಕ: ಪ್ರಶಾಂತ್‌ ನೀಲ್‌.
ನಿರ್ಮಾಪಕ: ವಿಜಯ್‌ ಕಿರಗಂದೂರ್‌
ಬ್ಯಾನರ್: ಹೊಂಬಾಳೆ ಫಿಲ್ಮ್ಸ್‌
ಸಂಗೀತ: ರವಿ ಬಸ್ರೂರ್‌


ತಾರಾಗಣ: ಯಶ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್ತ್‌, ರವೀನಾ ಟಂಡನ್‌, ಅಚ್ಯುತ್‌ ಕುಮಾರ್‌, ಪ್ರಕಾಶ್‌ ರಾಜ್. ಮಾಳವಿಕಾ ಅವಿನಾಶ್‌,ಅರ್ಚನಾ ಜೋಯ್ಸ್‌, ಅಯ್ಯಪ್ಪ ಪಿ ಶರ್ಮಾ, ಹರೀಶ್‌ ರೈ, ದಿನೇಶ್‌ ಮಂಗಳೂರು.

ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ ಚಾಪ್ಟರ್‌ 1 ಅತ್ಯತ್ತಮ ಸಿನಿಮಾ ಎಂದು ಹೆಸರು ಮಾಡಿತ್ತು. ಚಿತ್ರದ ಯಶಸ್ಸಿಗೆ ಅವರು ಆಯ್ದುಕೊಂಡ ಕಥೆ, ತಾರಾಗಣ, ಪ್ರಬಲವಾದ ಚಿತ್ರತಂಡ ಪ್ರಮುಖ ಪಾತ್ರವಹಿಸಿತ್ತು. ಕೆಜಿಎಫ್‌ 1 ಮುಗಿಯುವ ಹೊತ್ತಿಗೆ ಎರಡನೇ ಭಾಗದಲ್ಲಿ ಏನು ಹೊಸತನ್ನು ಕಾಣಬಹುದು ಎಂಬ ಕುತೂಹಲ ಕೆರಳಿಸಿತ್ತು. ರಾಕಿ ಭಾಯ್‌ ಗರುಡನನ್ನು ಕೊಂದ ಮೇಲೆ ಕೆಜಿಎಫ್‌ನ ಸುಲ್ತಾನನಾಗಿ ಪಟ್ಟಕ್ಕೆ ಏರ್ತಾರಾ? ರೀನಾ ಮತ್ತು ರಾಕಿ ಭಾಯ್‌ ಒಂದಾಗ್ತಾರಾ? ರಮಿಕಾ ಸೇನ್‌ ರಾಕಿ ವಿರುದ್ಧ ಏನು ಕ್ರಮ ಕೈಗೊಳ್ತಾರೆ? ಗುರುಪಾಂಡ್ಯನ್‌ ಸೇರಿದಂತೆ ಉಳಿದವರ ಕಥೆ ಏನಾಗುತ್ತೆ? ಇನಾಯತ್‌ ಖಲೀಲ್‌ ಹಡಗುಗಳು ಭಾರತದ ಪೋರ್ಟ್‌ ಪ್ರವೇಶ ಪಡೆಯುತ್ತಾ? ಅಧೀರ ಕೆಜಿಎಫ್‌ಗೆ ಆಗಮಿಸಿದರೆ ರಾಕಿ ಏನು ಮಾಡಬಹುದು?

ಕೆಜಿಎಫ್‌ 1 ಹೀಗೆ ಹಲವಾರು ಪ್ರಶ್ನೆಗಳನ್ನು ಪ್ರೇಕ್ಷಕರ ಮನದಲ್ಲಿ ಹುಟ್ಟು ಹಾಕಿತ್ತು. ನಿರ್ದೇಶಕ ಪ್ರಶಾಂತ್‌ ನೀಲ್ ಇದಕ್ಕೆ ಉತ್ತರವಾಗಿ‌ ಎರಡನೇ ಭಾಗ ಬರಲಿದೆ ಎಂದು ಭರವಸೆ ನೀಡಿದ್ದರು. ರಾಕಿ ತನ್ನ ತಾಯಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವದರಲ್ಲಿ ಹೇಗೆ ಯಶಸ್ವಿಯಾದರೋ ಅದೇ ರೀತಿ ಪ್ರಶಾಂತ್‌ ಕೂಡ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಕೆಜಿಎಫ್‌ ಮೊದಲ ಭಾಗಕ್ಕೆ ಸೂಕ್ತ ಅಂತ್ಯವನ್ನು ಕೆಜಿಎಫ್‌ ಚಾಪ್ಟರ್‌ 2ನಲ್ಲಿ ನೀಡಲಾಗಿದೆ ಎಂದು ಹೇಳಬಹುದು.


ಏನು ಕಥೆ?


ಕೆಜಿಎಫ್‌ 2 ಮೊದಲ ಭಾಗದ ಮುಂದುವರೆದ ಕಥೆಯಾಗಿದೆ. ಮೊದಲ ಭಾಗದ ಕಥೆಗೆ ಸೂಕ್ತವಾದ ಅಂತ್ಯವನ್ನು ಎರಡನೇ ಭಾಗದಲ್ಲಿ ನೀಡಲಾಗಿದೆ ಎಂದು ಹೇಳಬಹುದು. ಈಗಾಗಲೇ ಟ್ರೇಲರ್‌ನಲ್ಲಿ ತೋರಿಸಿದ ಹಾಗೆ ರಾಕಿ ತನ್ನ ತಾಯಿಗೆ ರಾಜನಂತೆ ಬಾಳುವ ಮಾತು ಕೊಟ್ಟಿದ್ದ. ಆ ಮಾತನ್ನು ಉಳಿಸಿಕೊಳ್ಳಲು ಕೆಜಿಎಫ್‌ ಮೇಲೆ ರಾಜ್ಯಭಾರ ಮಾಡಬೇಕೆಂಬುದು ರಾಕಿ ಆಸೆ. ಕೆಜಿಎಫ್‌ ತನ್ನ ಹಿಡಿತಕ್ಕೆ ಪಡೆಯುವ ಮೂಲಕ ಇಡೀ ದೇಶದ ಮೇಲೆ ಹುಕೂಮತ್‌ ನಡೆಸಬೇಕು ಎಂಬ ರಾಕಿಯ ಹಂಬಲ. ಯಾರಿಗೂ ಭಯಪಡದೇ ಒಂಟಿಯಾಗಿ ಎಲ್ಲರನ್ನೂ ಎದುರಿಸಿ ತನ್ನ ಸಾಮ್ಯಜ್ಯವನ್ನು ಕಟ್ಟುವುದರಲ್ಲಿ ರಾಕಿ ಸಫಲತೆಯನ್ನು ಕಾಣ್ತಾರೆ. ಆದರೆ ಕೆಜಿಎಫ್‌ ಜಾಗದ ಮೇಲೆ ಉಳಿದವರೂ ಕಣ್ಣು ಹಾಕಿರುತ್ತಾರೆ ಎಂದು ಈಗಾಗಲೇ ಮೊದಲ ಭಾಗದಲ್ಲಿ ತಿಳಿಸಿದ್ದಾರೆ. ಆದರೆ, ಕೆಜಿಎಫ್‌ ವಶಪಡಿಸಿಕೊಳ್ಳುವ ಸಮರದಲ್ಲಿ ಯಾರು ಯಾರೊಂದಿಗೆ ಕೈ ಮಿಲಾಯಿಸಿ, ಯಾರ ವಿರುದ್ಧ ಯುದ್ಧ ಮಾಡಲು ಸಿದ್ಧರಾಗುತ್ತಾರೆ ಎಂಬುದೇ ಸ್ವಾರಸ್ಯ. ಒಂದು ಜಾಗಕ್ಕೆ, ಒಂದು ಪಟ್ಟಕ್ಕಾಗಿ ನಡೆಯುವ ರಾಜಕೀಯ ತಂತ್ರಗಳು, ಕೊಲೆಗಳು, ರಕ್ತಪಾತಗಳು, ಎಲ್ಲವೂ ಸೇರಿ ಕೊನೆಗೆ ಕೆಜಿಎಫ್‌ನಲ್ಲಿ ಏನಾಗುತ್ತದೆ? ಎಂಬುದೇ ಈ ಚಿತ್ರದ ಕಥೆ.

ಚಿತ್ರದಲ್ಲಿ ಆಕರ್ಷಿಸುವ ಅಂಶಗಳು:

  1. ಈವರೆಗೆ ಹಾಲಿವುಡ್‌ನಲ್ಲಿ ಡಾರ್ಕ್‌ ಥೀಮ್‌ ಇಟ್ಟುಕೊಂಡು ಅನೇಕ ಸಿನಿಮಾಗಳನ್ನು ಮಾಡಲಾಗಿದೆ. ಆದರೆ, ಕನ್ನಡದಲ್ಲಿ ಈ ರೀತಿಯ ಒಂದು ಪ್ರಯತ್ನ ಅಪರೂಪ. ಡಾರ್ಕ್‌ ಶೇಡ್‌ ಇಟ್ಟು ಚಿತ್ರವನ್ನು ನಿರ್ದೇಶಿಸಿ ಪ್ರೇಕ್ಷಕರ ಮನಮುಟ್ಟುವುದು ಸುಲಭದ ಕಾರ್ಯವಲ್ಲ ಆದರೆ ಕೆಜಿಎಫ್‌ ಇದರಲ್ಲಿ ಗೆದ್ದಿದೆ ಎಂದು ಹೇಳಬಹುದು.
  2. ಅಬ್ಬರಿಸುವ ರೌಡಿಗಳ ನಡುವೆ ತಾಯಿಯ ಸೆಂಟಿಮೆಂಟ್‌ ನೀಡಿದ್ದು ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ. ಹೌದು ಅನ್ನಿಸುವ ಕಥೆ, ಚಿತ್ರಕಥೆ ಚಿತ್ರದ ಗೆಲುವು.
  3. ರೌಡಿಸಂ ಕಥೆಯನ್ನು ಆಧರಿಸಿ ಹಲವಾರು ಚಿತ್ರಗಳು ಬಂದಿದೆ. ಕೆಜಿಎಫ್‌ ಇದೇ ಕೆಟಗರಿಗೆ ಸೇರಿಯೂ ಸ್ವಲ್ಪ ವಿಭಿನ್ನವಾಗಿ ನಿಲ್ಲುತ್ತದೆ. ಒಂದು ಚೂರು ಕ್ಲಾಸ್‌, ಸ್ವಲ್ಪ ಮಾಸ್‌, ಸ್ವಲ್ಪ ಕಲ್ಟ್‌ ಸಿನಿಮಾದ ವಿಭಾಗಕ್ಕೆ ಸೇರುತ್ತದೆ. ಇದು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಅದ್ಭುತ ಪ್ರಯತ್ನ. ಚಿತ್ರದ ಸೆಟ್‌, ಹಾಗೂ ಮೇಕಿಂಗ್‌ ಗಮನಸೆಳೆಯುತ್ತದೆ.
  4. ತೆರೆಯ ಹಿಂದೆ ಕೆಲಸ ಮಾಡಿದ ತಂಡದ ಪರಿಶ್ರಮ ತೆರೆಯ ಮೇಲೆ ಕಾಣುತ್ತದೆ. ಛಾಯಗ್ರಾಹಕ ಭುವನ್‌ ಗೌಡ ತಮ್ಮ ಕೆಜಿಎಫ್‌ 1 ಚಿತ್ರದಲ್ಲೇ ಸಾಮರ್ಥ್ಯವನ್ನು ತೋರಿದ್ದರು. ಅವರು ಅದ್ಭುತವಾಗಿ ಕ್ಯಾಮೆರಾ ಹಿಂದೆ ಕೆಲಸ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
  5. ಚಿತ್ರದಲ್ಲಿ ಹೊಸತನಬೇಕು ಎಂಬ ನಿಟ್ಟಿನಲ್ಲಿ ಹೊಸ ಟಕ್ನೀಶಿಯನ್‌ ಹಾಗೂ ಎಡಿಟರ್‌ಗಳಿಗೆ ಅವಕಾಶ ನೀಡಲಾಗಿದೆ. ಉದಾಹರಣೆಗೆ ಎಡಿಟಿಂಗ್‌ ಮಾಡಲು 18 ವರ್ಷದ ಯುವಕರೊಬ್ಬರಿಗೆ ಅವಕಾಶ ನೀಡಿದ್ದು ಅದ್ಭುತ ಕಾರ್ಯವನ್ನು ಮಾಡಿದ್ದಾರೆ.
  6. ರವಿ ಬಸ್ರೂರ್‌ ನೀಡಿದ ಹಿನ್ನಲೆ ಸಂಗೀತ ಚಿತ್ರದ ದೃಶ್ಯಗಳಿಗೆ ಪೂರಕವಾಗಿದೆ. ಭಾವಕ್ಕೆ ತಕ್ಕ ಸಂಗೀತ ನಿಡಿದ್ದಾರೆ.
  7. ನಿರ್ದೇಶಕ ಪ್ರಶಾಂತ್‌ ಬರೆದ ಸಂಭಾಷಣೆ ಚಿತ್ರದ ಶ್ರೀಮಂತಿಕೆ. ಪ್ರಶಾಂತ್ ಅವರ ಸಂಭಾಷಣೆ ಬರೆಯುವ ಶೈಲಿ ವಿಭಿನ್ನ. ದೀರ್ಘ ಸಂಭಾಷಣೆಯನ್ನು ಬರೆಯುವ ಹಾದಿಯನ್ನು ಆರಿಸಿಕೊಳ್ಳದೆ ವನ್‌ ಲೈನರ್ಸ್‌ ಮಾತುಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಈ ರೀತಿಯ ಪಂಚಿಗ್‌ ಲೈನ್ಸ್‌ಗಳು ಪ್ರೇಕ್ಷಕರ ಮನದಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಈ ಹಿಂದೆ ಕೂಡ ಉಗ್ರಂ ಹಾಗೂ ಕೆಜಿಎಫ್‌ 1 ಸಿನಿಮಾಗಳಲ್ಲಿ ಪಂಚಿಂಗ್‌ ಡೈಲಾಗ್‌ಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹೇಗಿದೆ ಅಭಿನಯ?

  • ರಾಕಿಂಗ್‌ ಸ್ಟಾರ್‌ ಯಶ್‌ ರಾಕಿ ಪಾತ್ರಕ್ಕೆ ಹೊಂದುತ್ತಾರೆ. ಅವರ ಮಾತುಗಳಲ್ಲಿ ಒಂದು ಹಾಸ್ಯಮಯವಾದ ಧಾಟಿ ಅಥವಾ ವ್ಯಂಗ್ಯವಾಗಿ ಟೀಕಿಸಿ ಎದುರಾಳಿಯನ್ನು ಕೆಣಕುವ ಧಾಟಿ ಸಹಜವಾಗಿಯೇ ಇದೆ. ಇದು ಸಣ್ಣ ಹಳ್ಳಿಯಿಂದ ಬಂದು, ಏನೂ ಅರಿಯದ ಮಾಸ್‌ ಲೀಡರ್‌ ಆಗಿ ಬೆಳೆದು ನಿಂತ ರಾಕಿ ಪಾತ್ರಕ್ಕೆ ಹೊಂದುತ್ತದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ ಕೂಡ ರೀನಾ ಪಾತ್ರಕ್ಕೆ ಒಪ್ಪುತ್ತಾರೆ. ಕೆಜಿಎಫ್‌ 1 ಚಿತ್ರದಲ್ಲಿ ಉತ್ತಮ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಕೂಡ ಅವರದ್ದು ಪ್ರಬುದ್ಧ ನಟನೆ.
  • ಅಧೀರ ಹಾಗೂ ರಮಿಕಾ ಸೇನ್ ಗಮನ ಸೆಳೆಯುವ ಪ್ರಮುಖ ಪಾತ್ರಗಳು. ಅಧೀರನ ಪಾತ್ರದಲ್ಲಿ ಸಂಜಯ್‌ ದತ್ತ್‌ ಹಾಗೂ ರಮಿಕಾ ಸೇನ್‌ ಪಾತ್ರದಲ್ಲಿ ರವಿನಾ ಟಂಡನ್‌ ಇಬ್ಬರೂ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಅಭಿನಯಿಸಿದ್ದಾರೆ. ನಟಿ ರವಿನಾ ಟಂಡನ್‌ ಕೆಲವು ವರ್ಷಗಳ ಹಿಂದೆ ಬಾಲಿವುಡ್‌ನ ಉತ್ತಮ ನಟಿಯರಲ್ಲಿ ಒಬ್ಬರು ಆದರೆ ಇತ್ತೀಚೆಗೆ ಅವರು ಯಾವುದೇ ಸಿನಿಮಾಗಳನ್ನು ಮಾಡಿದ್ದು ಕಂಡುಬಂದಿಲ್ಲ. ಆದರೆ ಕೆಜಿಎಫ್‌ 2ರಲ್ಲಿ ಅವರ ಅಭಿನಯ ಶ್ಲಾಘನೀಯ.
  • ನಟ ಸಂಜಯ್‌ ದತ್ತ್‌ ಮಾನ್ಸ್‌ಟರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಬಾಲಿವುಡ್‌ನ ಅಗ್ನಿಪಥ್‌ ಸಿನಿಮಾದಲ್ಲಿ ನಿರ್ದಾಕ್ಷಿಣ್ಯವಾಗಿ ಜನರನ್ನು ಹತ್ಯೆ ಮಾಡುವ ರಾಕ್ಷಸನಂತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದರು ಕೂಡ. ಅಧೀರ ಕೂಡ ಅದೇ ರೀತಿಯ ಒಂದು ಪಾತ್ರ. ಆ ಪಾತ್ರಕ್ಕೆ ಅವಶ್ಯಕತೆಯಿರುವ ಗತ್ತು, ಗಾಂಭೀರ್ಯತೆಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿದ್ದಾರೆ.
  • ಆನಂದ್‌ ಇಂಗಳಗಿ ಅವರ ಮಗನಾಗಿ ರಾಕಿಯ ಕಥೆಯನ್ನು ಹೇಳುವ ವಿಜಯೇಂದ್ರ ಇಂಗಳಗಿ ಪಾತ್ರವನ್ನು ಪ್ರಕಾಶ್‌ ರೈ ನಿರ್ವಹಿಸಿದ್ದಾರೆ. ಅವರ ವಿಶಿಷ್ಟ ಡೈಲಾಗ್‌ ಹೇಳುವ ರೀತಿಯಿಂದ ಆಕರ್ಷಿಸಿದ್ದಾರೆ.
  • ಇನ್ನು ಉಳಿದಂತೆ ಎಲ್ಲಾ ಸಹಾಯಕ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಬಹುದು.

ಉತ್ತಮಗೊಳಿಸಬಹುದಾಗಿದ್ದ ಅಂಶಗಳು:

  1. ಚಿತ್ರದಲ್ಲಿ ಬರುವ ಹಾಡುಗಳು ವಿಶೇಷ ಅಂತನಿಸುವುದಿಲ್ಲ. ಕೆಜಿಎಫ್‌ 1ರ ಚಿತ್ರದ ಹಾಡುಗಳಿಗೆ ಹೋಲುತ್ತಿರುವದಕ್ಕೆ ಏಕತಾನತೆಯ ರೂಪ ಪಡೆದುಕೊಂಡಂತಿದೆ.
  2. ಪ್ರಕಾಶ್‌ ರೈ ಉತ್ತಮವಾಗಿ ಅಭಿನಯಿಸಿದ್ದರೂ ಪ್ರೇಕ್ಷಕರು ರಾಕಿ ಕಥೆಯನ್ನು ಆನಂದ್‌ ಇಂಗಳಗಿ ಬಾಯಲ್ಲಿ ಕೇಳಿದರೆ ಹೆಚ್ಚು ಖುಷಿಯಾಗುತ್ತಿತ್ತು. ಅನಂತ್‌ನಾಗ್‌ ಅವರನ್ನು ತೆರಯ ಮೇಲೆ ಕಾಣದೇ ನಿರಾಸೆ ಉಂಟುಮಾಡುತ್ತದೆ.

ಕೊನೆಯದಾಗಿ‌:

ರಾಕಿ ಪಾತ್ರಕ್ಕೆ ಬಿಲ್ಡಪ್‌ ಕೊಟ್ಟಿದ್ದು ಹೆಚ್ಚಾಯಿತು ಅಂತ ಅನ್ನಿಸಬಹುದು. ಆದರೆ, ಒಬ್ಬ ಸುಲ್ತಾನಂತೆ ರಾಜ್ಯಭಾರ ಮಾಡುವ ಗ್ಯಾಂಗ್‌ಸ್ಟರ್‌ಗೆ ಅಷ್ಟು ಬಿಲ್ಡಪ್ ಕೊಡುವ ವಿನಾಯಿತಿ ಇರುತ್ತದೆ. ಅದು ಕಥೆಗೆ ಎಲ್ಲೂ ಅಡಚಣೆ ಉಂಟುಮಾಡುವುದಿಲ್ಲ. ಕಾಲಕಾಲಕ್ಕೆ ಸರಿಯಾಗಿ ತಿರುವುಗಳನ್ನು ನೀಡಲಾಗಿದ್ದು, ಎಲ್ಲೂ ಬೋರ್‌ ಹೊಡೆಸದ ಅದ್ಧೂರಿ ಸಿನಿಮಾ ಎಂದು ಹೇಳಬಹುದು.

ಈ ಚಿತ್ರದ ಅಂತ್ಯದಲ್ಲಿ ಏನಾಗುತ್ತದೆ ಎಂದು ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಕೆಜಿಎಫ್‌ ಚಾಪ್ಟರ್‌ 3 ಬರಬಹುದಾ? ಎಂಬ ಕುತೂಹಲವನ್ನು ಈ ಪ್ರೇಕ್ಷಕರ ಮನದಲ್ಲಿ ಹುಟ್ಟುಹಾಕಿದೆ.

ಹೆಚ್ಚಿನ ಓದಿಗಾಗಿ: RRR ಸಿನಿ ವಿಮರ್ಶೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

Tarak Ponnappa: ಅಜರಾಮರ’ ಸಿನಿಮಾದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ ತಾರಕ್‌ ಮುಂದೆ ‘ಬೃಹಸ್ಪತಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ ತಾರಕ್ ‘ಮೋಕ್ಷ’, ‘ಯುವರಾಜ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿ ರೇಣು ಮಹಾರಾಜನ ಪಾತ್ರದಲ್ಲಿ ತಾರಕ್ ಪೊನ್ನಪ್ಪ (Tarak Ponnappa) ಪಾತ್ರ ನಿರ್ವಹಿಸಿದ್ದರು.ಕಾರಣಾಂತರಗಳಿಂದ ಈ ಧಾರಾವಾಹಿಗೆ ತಾರಕ್ ಪೊನ್ನಪ್ಪ ವಿದಾಯ ಹೇಳಿದ್ದಾರೆ.

VISTARANEWS.COM


on

Tarak Ponnappa out of udho udho sri renuka yellamma serial
Koo

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿ ರೇಣು ಮಹಾರಾಜನ ಪಾತ್ರದಲ್ಲಿ ತಾರಕ್ ಪೊನ್ನಪ್ಪ (Tarak Ponnappa) ಪಾತ್ರ ನಿರ್ವಹಿಸಿದ್ದರು.

ಕಾರಣಾಂತರಗಳಿಂದ ಈ ಧಾರಾವಾಹಿಗೆ ತಾರಕ್ ಪೊನ್ನಪ್ಪ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ರೇಣು ಮಹಾರಾಜನ ಪಾತ್ರವನ್ನು ನಟ ಹರೀಶ್ ಪ್ರಭಾತ್ ನಿಭಾಯಿಸಲಿದ್ದಾರೆ.

ಈ ಧಾರಾವಾಹಿ ಶುರುವಾದಾಗಿನಿಂದಲೂ ತಾರಕ್ ಪೊನ್ನಪ್ಪ ಅವರು ರೇಣು ಮಹಾರಾಜನ ಪಾತ್ರವನ್ನು ನಿರ್ವಹಿಸಿದ್ದರು. ಅವರ ಘನತೆ ಗಾಂಭೀರ್ಯ ಅದ್ಭುತ ನಟನೆಗೆ ಜನರು ಖುಷಿಪಟ್ಟಿದ್ದರು.

‘ಅಜರಾಮರ’ ಸಿನಿಮಾದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ ತಾರಕ್‌ ಮುಂದೆ ‘ಬೃಹಸ್ಪತಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ ತಾರಕ್ ‘ಮೋಕ್ಷ’, ‘ಯುವರಾಜ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ದ್ದರು.

ಇದನ್ನೂ ಓದಿ: Junior NTR: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ಜ್ಯೂನಿಯರ್‌ ಎನ್‌ಟಿಆರ್‌-ಪ್ರಶಾಂತ್​ ನೀಲ್!

ಈಗ ತಾರಕ್‌ ಅವರಿಗೆ ಬೇರೆ ಕೆಲಸಗಳ, ಕಮಿಟ್‌ಮೆಂಟ್‌ ಗಳಿರುವುದರಿಂದ ತಾರಕ್ ಪೊನ್ನಪ್ಪ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

Continue Reading

South Cinema

Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

Mahesh Babu: ವೈರಲ್‌ ಆದ ವಿಡಿಯೊದಲ್ಲಿ ಮಹೇಶ್ ಕಪ್ಪು ಮತ್ತು ಬಿಳಿ ಜಾಕೆಟ್‌ನಲ್ಲಿ ಬೂದು ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನೊಂದಿಗೆ ಕಾಣಿಸಿಕೊಂಡಿದ್ದರು. ಮಹೇಶ್​ ಬಾಬು ಅವರು ವಿಶೇಷ ತರಬೇತಿ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದುಬೈನಿಂದ ಮಹೇಶ್‌ ಬಾಬು ಅವರು ವಾಪಸ್​ ಹೈದರಾಬಾದ್​ಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್‌ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ದುಬೈನಿಂದ ಶೂಟಿಂಗ್‌ ಮುಗಿಸಿ ವಾಪಸ್‌ ಬರುವಾಗ ಮಹೇಶ್‌ ಬಾಬು ಅವರ ಲುಕ್‌ ಬಹಿರಂಗವಾಗಿದೆ.

VISTARANEWS.COM


on

Mahesh Babu SS Rajamouli return from Dubai
Koo

ಬೆಂಗಳೂರು: ಟಾಲಿವುಡ್‌ ನಟ ಮಹೇಶ್‌ ಬಾಬು (Mahesh Babu) ಹಾಗೂ ನಿರ್ದೇಶಕ ರಾಜಮೌಳಿ (SS Rajamouli) ಅವರು ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್‌ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ದುಬೈನಿಂದ ಶೂಟಿಂಗ್‌ ಮುಗಿಸಿ ವಾಪಸ್‌ ಬರುವಾಗ ಮಹೇಶ್‌ ಬಾಬು ಅವರ ಲುಕ್‌ ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಮಹೇಶ್‌ ಬಾಬು ಅವರ ಲುಕ್‌ ಡಿಫ್‌ರೆಂಟ್‌ ಆಗಿರಲಿದೆ ಎಂದು ಈ ಮುಂಚೆ ರಾಜಮೌಳಿ ಅವರು ಹೇಳಿದ್ದರು. ಆ ಲುಕ್​ ಬಹಿರಂಗ ಆಗಬಾರದು ಎಂಬುದು ರಾಜಮೌಳಿ ಅವರ ಉದ್ದೇಶ ಆಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಈಗ ಮಹೇಶ್​ ಬಾಬು ಅವರು ಹೊಸ ಗೆಟಪ್​ ಬಹಿರಂಗ ಆಗಿದೆ.

ವೈರಲ್‌ ಆದ ವಿಡಿಯೊದಲ್ಲಿ ಮಹೇಶ್ ಕಪ್ಪು ಮತ್ತು ಬಿಳಿ ಜಾಕೆಟ್‌ನಲ್ಲಿ ಬೂದು ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನೊಂದಿಗೆ ಕಾಣಿಸಿಕೊಂಡಿದ್ದರು. ಮಹೇಶ್​ ಬಾಬು ಅವರು ವಿಶೇಷ ತರಬೇತಿ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದುಬೈನಿಂದ ಮಹೇಶ್‌ ಬಾಬು ಅವರು ವಾಪಸ್​ ಹೈದರಾಬಾದ್​ಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದ ಪಾತ್ರಕ್ಕಾಗಿ ಅವರು ಕೂದಲು ಬೆಳೆಸಿದ್ದಾರೆ ಎಂದು ವರದಿಯಾಗಿದೆ. ರಾಜಮೌಳಿ ಇತ್ತೀಚೆಗೆ ಆರ್‌ಆರ್‌ಆರ್ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಜಪಾನ್‌ಗೆ ಬಂದಿದ್ದರು.

ಇದನ್ನೂ ಓದಿ: Mahesh Babu: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತ ಎಲ್ಲಿ? ಯಾವಾಗ?

ಎಸ್‌ಎಸ್ ರಾಜಮೌಳಿ (SS Rajamouli) ಅವರು ಪತ್ನಿ ರಮಾ ರಾಜಮೌಳಿ ಅವರೊಂದಿಗೆ ಮಾರ್ಚ್ 18ರಂದು ಜಪಾನ್‌ನಲ್ಲಿ ‘ಆರ್‌ಆರ್‌ಆರ್’ ಪ್ರದರ್ಶನಕ್ಕೆ ಹಾಜರಾಗಿದ್ದರು. ಮತ್ತೊಮ್ಮೆ ಸಿನಿಮಾ ಸ್ಕ್ರೀನಿಂಗ್‌ಗಾಗಿ ನಿರ್ದೇಶಕ ರಾಜಮೌಳಿ ಅಲ್ಲಿಗೆ ಹೋಗಿದ್ದರು. ಅಭಿಮಾನಿಗಳೊಂದಿಗೆ ಸಂವಾದದ ಸಮಯದಲ್ಲಿ, ಅವರು ಮಹೇಶ್ ಬಾಬು ಅವರೊಂದಿಗಿನ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದರು.

ಜಪಾನ್‌ನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮಗಿಸಿದ್ದೇವೆ. ಚಿತ್ರ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. ಇನ್ನೂ ಕಾಸ್ಟಿಂಗ್ ಪೂರ್ಣಗೊಂಡಿಲ್ಲ. ಮುಖ್ಯ ನಾಯಕ, ಅಂದರೆ ಮಹೇಶ್‌ ಬಾಬು ಅವರು ಮಾತ್ರ ಫಿಕ್ಸ್‌ ಆಗಿದ್ದಾರೆ. ಆತ ತುಂಬಾ ಒಳ್ಳೆಯ ನಟ. ಸುಂದರ ಕೂಡ. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆʼʼ ಎಂದಿದ್ದರು

2022ರಲ್ಲಿ ತೆರೆಕಂಡ ʼಆರ್‌.ಆರ್‌.ಆರ್‌.ʼ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅವರು ಈ ಚಿತ್ರಕ್ಕಾಗಿಯೇ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ. ದಾಖಲೆ ಬರೆದ ʼಬಾಹುಬಲಿʼ, ʼಬಾಹುಬಲಿ 2ʼ, ʼಆರ್‌.ಆರ್‌.ಆರ್‌.ʼ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್‌ ಅವರೇ ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದ ಬರವಣಿಗೆಯಲ್ಲಿ ತೊಡಗಿರುವುದು ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣ. ಇತ್ತೀಚೆಗೆ ತೆರೆಕಂಡ ಮಹೇಶ್‌ ಬಾಬು ಅಭಿನಯದ ʼಗುಂಟೂರು ಖಾರಂʼ ಸಿನಿಮಾ ಸಾಧಾರಣ ಗೆಲುವು ದಾಖಲಿಸಿದೆ. ಹೀಗಾಗಿ ಅವರು ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದತ್ತ ಗಮನ ಹರಿಸಿದ್ದಾರೆ.

Continue Reading

ಒಟಿಟಿ

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

Tillu Square: ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಲು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಜ್ಯೂನಿಯರ್‌ ಎನ್‌ಟಿಆರ್‌ ಅವರು (Jr NTR Fans) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೀಗ ಸಿನಿಮಾ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

VISTARANEWS.COM


on

Tillu Square anupama parameswaran movie tillu square release date
Koo

ಬೆಂಗಳೂರು: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅಭಿನಯದ ʻಟಿಲ್ಲು ಸ್ಕ್ವೇರ್’ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿದ್ದು ಗೊತ್ತೇ ಇದೆ. 2002ರಲ್ಲಿ ಬಂದಿದ್ದ ʻಡಿಜೆ ಟಿಲ್ಲು’ ಚಿತ್ರದ ಮುಂದುವರಿದ ಭಾಗ ಈ `ಟಿಲ್ಲು ಸ್ಕ್ವೇರ್’. ಸಿದ್ದು ಜೊನ್ನಲಗಡ್ಡ ( Siddhu Jonnalagadda ) ಈ ಚಿತ್ರದ ನಾಯಕ. ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಕೊಂಡಿತ್ತು. ಇದೀಗ ಸಿನಿಮಾ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

‘ಟಿಲ್ಲು ಸ್ಕ್ವೇರ್’ 2024, ಮಾರ್ಚ್ 29ರಂದು ರಿಲೀಸ್ ಆಗಿತ್ತು. ‘ಡಿಜೆ ಟಿಲ್ಲು’ 30 ಕೋಟಿ ರೂಪಾಯಿ ಲೂಟಿ ಮಾಡಿದ್ದರೆ, ‘ಟಿಲ್ಲು ಸ್ಕ್ವೇರ್’ ಬಾಕ್ಸಾಫೀಸ್‌ನಲ್ಲಿ ಬರೋಬ್ಬರು 125 ಕೋಟಿ ರೂಪಾಯಿ ದೋಚಿದೆ. ಈ ವರ್ಷದ ಟಾಲಿವುಡ್‌ನ ಮೋಸ್ಟ್ ಸಕ್ಸೆಸ್‌ಫುಲ್‌ ಸಿನಿಮಾ ಎನಿಸಿಕೊಂಡಿದೆ. ನೆಟ್‌ಫ್ಲಿಕ್ಸ್ ‘ಟಿಲ್ಲು ಸ್ಕ್ವೇರ್’ ಸಿನಿಮಾ ಖರೀದಿ ಮಾಡಿದೆ. ತನ್ನ ಅಫಿಶಿಯಲ್ ಎಕ್ಸ್ ಖಾತೆಯಲ್ಲಿ ಏಪ್ರಿಲ್ 26ಕ್ಕೆ ‘ಟಿಲ್ಲು ಸ್ಕ್ವೇರ್’ ರಿಲೀಸ್ ಆಗುವುದಾಗಿ ಅನೌನ್ಸ್ ಮಾಡಿದೆ. ಈ ಸಿನಿಮಾ, ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: Tillu Square: 100 ಕೋಟಿ ರೂ. ಗಳಿಕೆ ಕಂಡ ಅನುಪಮಾ ಪರಮೇಶ್ವರನ್ ಸಿನಿಮಾ

`ಟಿಲ್ಲು ಸ್ಕ್ವೇರ್’ ಒಳ್ಳೆಯ ಕಥಾಹಂದರ ಮತ್ತು ಆಕರ್ಷಕ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
ಟಿಲ್ಲು ಸ್ಕ್ವೇರ್‌ನ ನಿರ್ಮಾಪಕರ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಕೇವಲ 9 ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ದಾಟಿದೆ. ತೆಲುಗು ಚಿತ್ರ ಟಿಲ್ಲು ಸ್ಕ್ವೇರ್ 100 ಕೋಟಿ ಗಳಿಸಿದ ಮೊದಲ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ʻಜಾತಿ ರತ್ನಲುʼ ಸಿನಿಮಾ ಈ ಮುಂಚೆ ದಾಖಲೆ ಮಾಡಿತ್ತು.

ಟಿಲ್ಲು ಸ್ಕ್ವೇರ್ ಚಿತ್ರವನ್ನ ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. `ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇವೆ.

Continue Reading

ಸಿನಿಮಾ

Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

Neha Murder Case: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆಯಾದ ಯುವತಿ. ಈ ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಫಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಿನಿಮಾ ತಾರೆಯರು ಕೂಡ ಧ್ವನಿ ಎತ್ತಿದ್ದಾರೆ.

VISTARANEWS.COM


on

Neha Murder Case dhruva sarja priya savadi and kavya shastry condemn
Koo

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ  ನೇಹಾ ಹಿರೇಮಠ (Neha Murder Case)  ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಫಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಿನಿಮಾ ತಾರೆಯರು ಕೂಡ ಧ್ವನಿ ಎತ್ತಿದ್ದಾರೆ. ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (dhruva sarja) ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಸಹೋದರಿ ನೇಹಾ ಹಿರೇಮಠ ಅವರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್​ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಇದನ್ನು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ಪೋಸ್ಟ್​ ಮಾಡಿದ್ದಾರೆ. 

ನಟಿ ಪ್ರಿಯಾ ಸವದಿ (priya savadi) ಕೂಡ ಮಾಧ್ಯಮದ ಮುಂದೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಆಕೆ ನನಗೆ ಸಂಬಂಧಿಯೇ ಆಗಬೇಕಂದಿಲ್ಲ. ಇಲ್ಲಿ ಎಲ್ಲಾರೂ ನಮಗೆ ಅಕ್ಕಾ ತಂಗಿಯರೇ. ನನ್ನ ಅಕ್ಕ-ತಂಗಿನೇ ಬೇಕಾಗಿತ್ತಾ ಇವನಿಗೆ. ಇಲ್ಲಿ ಬಂದಿರುವ ಪ್ರತಿಯೊಬ್ಬರಿಗೂ ಆಕೆ ತಂಗಿ, ಅಕ್ಕ, ಮಗಳೇ.. ಆ ಆರೋಪಿಯನ್ನು ನಮಗೆ ಕೈಗೆ ಕೊಡಿ. ಅವನಿಗೆ ಶಿಕ್ಷೆ ಯಾರು ಕೊಡುತ್ತಾರೆ? ಅವನಿಗೆ ಮನೆಯಲ್ಲಿ ಯಾರೂ ಇಲ್ಲವಾ? ಮುಸ್ಲಿಂ ಅವ್ರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೀದಿಗೆ ಬಿಡ್ತಾರಾ? ಆದರೆ ಅವರಿಗೆ ಚೆನ್ನಾಗಿರೋ ಹುಡುಗೀರು ಬೇಕು. ಸರ್ಕಾರದವರು ಐದು, ಹತ್ತು ವರ್ಷ ಇರುತ್ತಾರೆ ಹೋಗುತ್ತಾರೆ. ಅವರಿಗೆ ಇದರ ನೆನಪು ಸಹ ಇರುವುದಿಲ್ಲ. ಎಲ್ಲಾ ಮುಚ್ಚಿ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

“ಹಂತಕ ಫಯಾಜ್‌ನನ್ನು ಎನ್ ಕೌಂಟರ್ ಮಾಡಬೇಕು. ಅವನಿಗೆ ಯಾವುದೇ ಕರುಣೆ ಬೇಕಾಗಿಲ್ಲ. ನೇಹಾ ಹಿರೇಮಠ್ ಕೊಲೆ ಖಂಡನೀಯ. ಕೊಲೆಗಾರನಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು” ಎಂದು ನಟಿ ಕಾವ್ಯಾ ಶಾಸ್ತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏನಿದು ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌, ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿತ್ತು. ನೇಹಾ ಹಿರೇಮಠ ಕೊಲೆಯಾದ ಯುವತಿ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ!

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಳು. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು.

Continue Reading
Advertisement
Lok sabha election-2024
Latest9 mins ago

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Viral Video
ದೇಶ13 mins ago

Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

AC Helmet
ದೇಶ18 mins ago

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

Tarak Ponnappa out of udho udho sri renuka yellamma serial
ಕಿರುತೆರೆ21 mins ago

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

electoral Bond
ಪ್ರಮುಖ ಸುದ್ದಿ34 mins ago

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

boat capsizes in bhatkal
ಉತ್ತರ ಕನ್ನಡ38 mins ago

Boat Capsizes: ಭಾರೀ ಗಾಳಿ ಮಳೆಗೆ ಅರಬ್ಬೀ ಸಮುದ್ರದಲ್ಲಿ ಬೋಟ್‌ ಮುಳುಗಡೆ, ನಾಲ್ವರ ರಕ್ಷಣೆ; ಇಲ್ಲಿದೆ ವಿಡಿಯೋ

Mahesh Babu SS Rajamouli return from Dubai
South Cinema1 hour ago

Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

MS Dhoni
ಪ್ರಮುಖ ಸುದ್ದಿ1 hour ago

MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

Modi In Karnataka
ಪ್ರಮುಖ ಸುದ್ದಿ1 hour ago

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

MS Dhoni
ಪ್ರಮುಖ ಸುದ್ದಿ2 hours ago

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ20 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌