PM Speech: ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪೂರ್ಣ ಪಾಠ - Vistara News

ದೇಶ

PM Speech: ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪೂರ್ಣ ಪಾಠ

CMಗಳ ಜತೆಗೆ ಮೋದಿ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದರು. ಕೊರೊನಾ, ಇಂಧನ ಬೆಲೆ ಏರಿಕೆ ಸೇರಿ ಅನೇಕ ವಿಚಾರಗಳನ್ನು ತಮ್ಮ 20 ನಿಮಿಷಗಳ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೊರೋನಾ ಸೋಂಕು ದೇಶದಲ್ಲಿ ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಕೊರೊನಾ ಜತೆಗೆ, ಇಂಧನ ಬೆಲೆ ಏರಿಕೆ ಸೇರಿ ಅನೇಕ ವಿಚಾರಗಳನ್ನು ತಮ್ಮ 20 ನಿಮಿಷಗಳ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಮೋದಿಯವರ ಭಾಷಣದ ಪೂರ್ಣ ಪಾಠ ಇಲ್ಲಿದೆ.

ಶ್ರದ್ಧಾಂಜಲಿ

ತಮಿಳುನಾಡಿನ ತಂಜಾವೂರ್‌ನಲ್ಲಿ ವಿದ್ಯುತ್‌ ಘಾತಕ್ಕೆ ಸಿಲುಕಿ ಮೃತಪಟ್ಟವರ ಕುರಿತು ಮೊದಲಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬದ ಜತೆಗೆ ನಮ್ಮ ಕಾಮನೆಗಳಿವೆ.

ಎಲ್ಲರಿಗೂ ಪ್ರಶಂಸೆ

ಕಳೆದ ಎರಡು ವರ್ಷಗಳಲ್ಲಿ ಕೋರೋನಾ ಕುರಿತಂತೆ ನಮ್ಮ 24ನೇ ಸಭೆ ಇದು. ಕೊರೋನಾ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಒಟ್ಟಿಗೆ ಕೆಲಸ ಮಾಡಿದ್ದು ಕೊರೋನಾ ಎದುರಿಸಲು ಪ್ರಮುಖ ಪಾತ್ರ ವಹಿಸಿದೆ. ಎಲ್ಲ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾಗಳು ಹಾಗೂ ಅಧಿಕಾರಿಗಳಿಗೆ ಇದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸುತ್ತೇನೆ.

ಈಗ ಕೆಲವು ರಾಜ್ಯಗಳಲ್ಲಿ ಕೊರೋನಾ ಹೆಚ್ಚುತ್ತಿರುವ ಕುರಿತು ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವರು ಹಾಗೂ ಅನೇಕ ಮುಖ್ಯಮಂತ್ರಿಗಳೂ ಪ್ರಮುಖ ಅಂಶಗಳನ್ನು ಪ್ರಸ್ತುತಪಡಿಸಿದ್ದೀರ. ಕೊರೋನಾ ಸವಾಲು ಇನ್ನೂ ನಿವಾರಣೆ ಆಗಿಲ್ಲ. ಒಮಿಕ್ರಾನ್‌ ಹಾಗೂ ಅದರ ಎಲ್ಲ ರೂಪಾಂತರಗಳು ಯಾವ ರೀತಿ ಗಂಭಿರ ಪರಿಸ್ಥಿತಿ ನಿರ್ಮಿಸಬಹುದು ಎಂದು ಯೂರೊಪಿಯನ್‌ ದೇಶಗಳಲ್ಲಿ ನಾವು ನೋಡುತ್ತಿದ್ದೇವೆ. ಈ ರೂಪಾಂತರಿಗಳಿಂದಾಗಿ ಅನೇಕ ಅಲೆಗಳು ಬಂದಿವೆ. ಆದರೆ ಭಾರತದಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ನಿಯಂತ್ರಿಸಿದ್ದೇವೆ.

ಆದರೆ ಕಳೆದ ಕೆಲವು ವಾರಗಳಿಂದ ಸೋಂಕು ಏರಿಕೆ ಕಂಡಿದ್ದು, ನಾವು ಜಾಗರೂಕರಾಗಿರಬೇಕು. ಕೆಲವು ತಿಂಗಳ ಹಿಂದೆ ಬಂದ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ದೇಶದ ಎಲ್ಲ ಜನರೂ ಈ ಅಲೆಯಿಂದ ಹೊರಬಂದಿದ್ದಾರೆ. ಕಳೆದ ಎರಡು ವರ್ಷದಲ್ಲಿ ಆಕ್ಸಿಜನ್‌ ಸರಬರಾಜಿನಿಂದ ಹಿಡಿದು ಆರೋಗ್ಯ ಮೂಲಸೌಕರ್ಯದವರೆಗೆ ಅನೇಕ ಸುಧಾರಣೆಯನ್ನು ದೇಶ ಕಂಡಿದೆ. ಯಾವುದೇ ರಾಜ್ಯದಲ್ಲಿ ಸ್ಥಿತಿ ಅನಿಯಂತ್ರಿತ ಎಂದು ಕಂಡುಬಂದಿಲ್ಲ. ಕೋವಿಡ್‌ ಲಸಿಕೆಯ ಪಾತ್ರ ಇದರಲ್ಲಿ ಪ್ರಮುಖವಾಗಿದೆ.

ದೇಶದೆಲ್ಲೆಡೆಯೂ ಲಸಿಕೆಯು ಎಲ್ಲ ಭಾರತೀಯರನ್ನೂ ತಲುಪಿದೆ. ಭಾರತದ 96% ವಯಸ್ಕರು ಕರೊನಾ ಮೊದಲ ಡೋಸ್‌ ಪಡೆದಿದ್ದಾರೆ, 15 ವರ್ಷದೊಳಗಿನ 85% ಜನರಿಗೆ ಎರಡನೇ ಡೋಸ್‌ ಸಹ ನೀಡಲಾಗಿದೆ. ಕೊರೋನಾದಿಂದ ಬಚಾವಾಗಲು ವ್ಯಾಕ್ಸಿನ್‌ ಅತಿ ದೊಡ್ಡ ರಕ್ಷಣೆ ಎಂದು ತಜ್ಞರು ಹೇಳಿದ್ದಾರೆ.

ಮಕ್ಕಳಿಗೆ, ಶಿಕ್ಷಕರಿಗೆ ಲಸಿಕೆ

ಅನೇಕ ಸಮಯದ ನಂತರ ಶಾಲೆಗಳು ಆರಂಭವಾಗಿವೆ. ಸೋಂಕು ಹರಡಬಹುದು ಎಂಬ ಚಿಂತೆ ಪೋಷಕರಿಗೆ ಶುರುವಾಗಿದೆ. ಕೆಲವೆಡೆ ಮಕ್ಕಳು ಸೋಂಕಿಗೊಳಗಾಗದ ವರದಿಗಳೂ ಇವೆ. ಆದರೆ ಸಾಕಷ್ಟು ಮಕ್ಕಳಿಗೂ ಲಸಿಕೆ ಸಿಕ್ಕಿರುವುದು ಸಂತಸ. 6-12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಬಹುದು ಎಂಬದು ನಿನ್ನೆ ಅನುಮತಿ ಸಿಕ್ಕಿದೆ. ಎಲ್ಲ ಅರ್ಹ ಮಕ್ಕಳಿಗೆ ಬೇಗನೆ ಲಸಿಕೆ ನೀಡುವುದು ನಮ್ಮ ಪ್ರಾಥಮಿಕ ಆದ್ಯತೆ. ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಅಭಿಯಾನ ನಡೆಸಬೇಕಿದೆ. ಶಿಕ್ಷಕರು ಹಾಗೂ ಪೋಷಕರು ಇದರ ಕುರಿತು ಜಾಗೃತರಾಗಬೇಕು. ದೇಶದ ಎಲ್ಲ ವಯಸ್ಕರಿಗೆ ಮೂರನೇ ಡೋಸ್‌ ಸಹ ಲಭ್ಯವಿದೆ. ಶಿಕ್ಷಕರು, ಪೋಷಕರು ಸೇರಿ ಎಲ್ಲ ಅರ್ಹರೂ ಈ ಮುಂಜಾಗ್ರತಾ ಲಸಿಕೆ ಪಡೆದುಕೊಳ್ಳಬೇಕು.

ಮೂರನೇ ಅಲೆಯಲ್ಲಿ ನಾವು ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣ ಕಂಡಿದ್ದೇವೆ. ಆದರೆ ಇದನ್ನು ನಾವು ಸಫಲವಾಗಿ ನಿರ್ವಹಣೆ ಮಾಡಿದ್ದೇವೆ. ಇದೇ ಮಾರ್ಗವನ್ನು ನಾವು ಮುಂದುವರಿಸಬೇಕಿದೆ. ನಮ್ಮ ತಜ್ಞರು ಎಲ್ಲ ಪರಿಸ್ಥಿತಿಯನ್ನೂ ಅವಲೋಕಿಸುತ್ತಿದ್ದಾರೆ. ಮುಂಚೆಯೇ ಸೋಂಕನ್ನು ತಡೆಯುವ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುವ ನಿರ್ಧಾರ ಮಾಡಬೇಕು. ಟ್ರೇಸ್‌, ಟ್ರಾಕ್‌, ಟ್ರೀಟ್‌ ಮಾರ್ಗವನ್ನು ನಾವು ಅನುಸರಿಸಬೇಕಿದೆ.

ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದವರಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿ ಅದರ ಮಾದರಿಯನ್ನು ಜಿನೋಮ್‌ ಪರೀಕ್ಷೆಗೆ ಕಳಿಸಬೇಕು. ಇದರಿಂದ ರೂಪಾಂತರಿಗಳ ಮಾಹಿತಿ ಲಭಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು. ಆದರೆ ಎಲ್ಲಿಯೂ ಭಯವನ್ನು ಸೃಷ್ಟಿಸಬಾರದು.

ಆರೋಗ್ಯ ಮೂಲಸೌಕರ್ಯ ವೃದ್ಧಿಸುವ ಕಾರ್ಯ ವೇಗವಾಗಿ ನಡೆಯಬೇಕು. ಹಾಸಿಗೆ, ವೆಂಟಿಲೇಟರ್‌, ಪಿಎಸ್‌ಎ ಆಕ್ಸಿಜನ್‌ ಘಟಕ ಸ್ಥಿತಿಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದರೂ ಈ ಎಲ್ಲ ಸೌಲಭ್ಯಗಳೆಲ್ಲವೂ ಸಮಯದಲ್ಲಿ ಲಭ್ಯವಾಗಿರುವಂತೆ ಸಿದ್ಧವಾಗಿರಬೇಕು. ಯಾವುದೇ ಕೊರತೆ ಇದ್ದರೂ ಮೇಲ್ಮಟ್ಟದಿಂದ ಪರಿಶೀಲಿಸಿ ಪೂರ್ತಿ ಮಾಡಬೇಕು.

ಮೆಡಿಕಲ್‌ ಕಾಲೇಜ್‌, ಜಿಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯ ಹಾಗೂ ಮಾನವ ಸಂಪನ್ಮೂಲವನ್ನು ಹೆಚ್ಚಿಸಬೇಕು. ಪರಸ್ಪರ ಸಂವಾದ ಹಾಗೂ ಸಹಯೋಗದಲ್ಲಿ ಕೊರೋನಾ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಹಾಗೂ ಹೊಸ ಮಾರ್ಗ ಹುಡುಕುತ್ತೇವೆ. ಕೊ ಆಪರೇಟಿವ್‌ ಫೇಡರಲಿಸಂಗೆ ಅನುಗುಣವಾಗಿ ಭಾರತ ಕೊರೋನಾ ವಿರುದ್ಧ ಯುದ್ಧ ನಡೆಸುತ್ತಿದೆ. ವೈಶ್ವಿಕ ಕಾರಣಗಳಿಗಾಗಿ ದೇಶದ ಆಂತರಿಕ ಪರಿಸ್ಥಿತಿಗಳ ಮೇಲೆ ಆಗುವ ಪ್ರಭಾವವನ್ನು ಕೇಂದ್ರ ಹಾಗೂ ರಾಜ್ಯಗಳು ಒಟ್ಟಾಗಿ ಎದುರಿಸುತ್ತಿವೆ.

ಇಂಧನ ತೆರಿಗೆ ಕಡಿಮೆ ಮಾಡಿ

ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕ ನಿರ್ಣಯಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಯೋಜನೆ ಹಿಂದಿಗಿಂತ ಹೆಚ್ಚು ಅವಶ್ಯಕವಿದೆ. ಯುದ್ಧ ಪರಿಸ್ಥಿತಿ ಉಂಟಾಗಿದೆ. ಸಪ್ಲೈ ಚೈನ್‌ ಪರಿಣಾಮ ನೋಡಿದರೆ, ಪ್ರತಿದಿನ ಸವಾಲು ಹೆಚ್ಚಾಗುತ್ತಿದೆ. ಈ ಯುದ್ಧ ಅನೇಕ ಸವಾಲು ತಂದೊಡ್ಡುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಮನ್ವಯತೆಯನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ.

ಪೆಟ್ರೋಲ್‌ ಡೀಸೆಲ್‌ ದರ ಹೆಚ್ಚಳವಾಗಿರುವುದರ ಕುರಿತು ಚರ್ಚೆ ನಡೆಯುತ್ತಿದೆ. ದೇಶವಾಸಿಗಳ ಮೇಲೆ ಇದರ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಎಕ್ಸೈಸ್‌ ಸುಂಕ ಕಡಿಮೆ ಮಾಡಿದೆ. ರಾಜ್ಯಗಳೂ ತಮ್ಮ ತೆರಿಗೆಯನ್ನು ಕಡಿತ ಮಾಡಲು ಕಳೆದ ನವೆಂಬರ್‌ನಲ್ಲೆ ಆಗ್ರಹ ಮಾಡಲಾಗಿತ್ತು. ಇದರ ಲಾಭವನ್ನು ನಾಗರಿಕರಿಗೆ ತಲುಪಿಸಲು ಕೋರಿದ್ದೆವು. ಕೆಲವು ರಾಜ್ಯಗಳು ಕಡಿಮೆ ಮಾಡಿದವು. ಆದರೆ ಕೆಲವು ರಾಜ್ಯಗಳಿಂದಾಗಿ ಅವರ ನಾಗರಿಕರಿಗೆ ಅದರ ಲಾಭ ಸಿಕ್ಕಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಬೇರೆಯವರ ಹೋಲಿಕೆಯಲ್ಲಿ ಇಂಧನ ದರ ಹೆಚ್ಚಿದೆ. ಇದು ಈ ರಾಜ್ಯಗಳ ಜನರಿಗೆ ಅನ್ಯಾಯ ಹಾಗೂ ಪಕ್ಕದ ರಾಜ್ಯಗಳ ಮೇಲೆಯೂ ಹೊರೆಯಾಗುತ್ತಿದೆ.

ಕರ್ನಾಟಕ ತೆರಿಗೆ ಕಡಿತ ಮಾಡದಿದ್ದರೆ ₹5,000 ಕೋಟಿಯಷ್ಟು, ಗುಜರಾತ್‌ 3,500 ಕೋಟಿಯಷ್ಟು ಹೆಚ್ಚು ತೆರಿಗೆ ಸಂಗ್ರಹಿಸುತ್ತಿದ್ದವು. ಗುಜರಾತ್‌ ಹಾಗೂ ಕರ್ನಾಟಕದ ಪಕ್ಕದ ರಾಜ್ಯಗಳು ಇದೇ ಸಮಯದಲ್ಲಿ ₹3,500-₹5,000 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್‌ ಸೇರಿ ಅನೇಕ ಕಾರಣಗಳಿಂದ ಈ ಮಾತನ್ನು ಕೇಳಿಲ್ಲ. ಆ ರಾಜ್ಯದ ಜನರ ಮೇಲಿನ ಹೊರೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಈ ರಾಜ್ಯಗಳು ಹೆಚ್ಚು ಆದಾಯ ಗಳಿಸಿವೆ. ದೇಶ ಹಿತದಲ್ಲಿ, ಕಳೆದ ನವೆಂಬರ್‌ನಲ್ಲಿ ಕಡಿಮೆ ಮಾಬೇಕತ್ತು. ಈಗಲಾದರೂ ನಿಮ್ಮ ರಾಜ್ಯದ ನಾಗರಿಕರಿಗೆ ಇದರ ಲಾಭ ವರ್ಗಾವಣೆ ಮಾಡಿ ಎಂದು ಕೋರುತ್ತೇನೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ 42% ರಾಜ್ಯಗಳಿಗೇ ಸಿಗುತ್ತದೆ. ಜಾಗತಿಕ ಸಂಕಷ್ಟದ ಸಮಯದಲ್ಲಿ ಒಂದು ತಂಡವಾಗಿ ನಾವೆಲ್ಲರೂ ಕೆಲಸ ಮಾಡಬೇಕು. ರಸಗೊಬ್ಬರಕ್ಕಾಗಿ ನಾವು ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ರೈತರ ಮೇಲೆ ನಾವು ಹೊರೆ ಹೊರಿಸಿಲ್ಲ. ನಿಮ್ಮ ರಾಜ್ಯ, ನೆರೆ ರಾಜ್ಯ ಹಾಗೂ ದೇಶವಾಸಿಗಳ ಹಿತದಲ್ಲಿ ಪ್ರಾಥಮಿಕತೆ ನೀಡಿ.

ತೆರಿಗೆ ಕಡಿತ ಮಾಡದಿದ್ದದ್ದಕ್ಕೆ ಚೆನ್ನೈನಲ್ಲಿ ಪೆಟ್ರೋಲ್‌ ದರ ₹112, ಜೈಪುರದಲ್ಲಿ ₹118, ಹೈದರಾಬಾದ್‌ನಲ್ಲಿ ₹119, ಕೊಲ್ಕತಾದಲ್ಲಿ ₹115, ಮುಂಬೈಯಲ್ಲಿ ₹120ಕ್ಕಿಂತ ಹೆಚ್ಚಿದೆ. ಅದೇ ತೆರಿಗೆ ಕಡಿತ ಮಾಡಿರುವ ದಿಯು ದಮನ್‌ನಲ್ಲಿ ₹ 102, ಲಖನೌನಲ್ಲಿ ₹ 101, ಜಮ್ಮುವಿನಲ್ಲಿ ₹106, ಗುವಾಹಟಿಯಲ್ಲಿ ₹105, ಗುರುಗ್ರಾಮ್‌ನಲ್ಲಿ ₹103, ಡೆಹ್ರಾಡೂನ್‌ನಲ್ಲಿ ₹105 ಇದೆ. ಆರು ತಿಂಗಳಲ್ಲಿ ಎಷ್ಟು ಸಂಪಾದಿಸಿದರೋ ಅರು ಒಂದೆಡೆ. ಈಗಲಾದರೂ ದೇಶದೊಂದಿಗೆ ಸಹಯೋಗ ನೀಡಿ ಎಂದು ಪ್ರಾರ್ಥನೆ ಮಾಡುತ್ತೇನೆ.

ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆ

ದೇಶದಲ್ಲಿ ಬಿಸಿಲು ಹೆಚ್ಚುತ್ತಿದೆ. ಸಮಯಕ್ಕೂ ಮೊದಲೇ ಬಿಸಿಲು ಏರಿಕೆ ಕಾಣುತ್ತಿದೆ. ಅಗ್ನಿ ಅವಘಡಗಳು ಹೆಚ್ಚುತ್ತಿವೆ. ಅರಣ್ಯ, ಕಟ್ಟಡ, ಆಸ್ಪತ್ರೆಗಳಲ್ಲಿ ಅವಘಡ ನಡೆಯುತ್ತಿದೆ. ಕಳೆದ ವರ್ಷ ಅನೇಕ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡದಿಂದ ಸಾಕಷ್ಟು ತೊಂದರೆ ಅನುಭವಿಸಿದೆವು, ಅನೇಕರು ಪ್ರಾಣ ತೆತ್ತರು. ಈ ವರ್ಷ ವಿಶೇಷವಾಗಿ ಆಸ್ಪತ್ರೆಗಳ ಸೇಫ್ಟಿ ಆಡಿಟ್‌ ಮಾಡಬೇಕು. ಇಂತಹ ಘಟನೆಗಳು ಕಡಿಮೆಯಾಗುವಂತೆ ಹಾಗೂ ಇಂತಹ ಘಟನೆಗಳು ಸಂಭವಿಸಿದಾಗ ಪ್ರತಿಕ್ರಿಯೆಯ ಸಮಯವನ್ನೂ ಕಡಿಮೆ ಮಾಡುವತ್ತ ಕ್ರಮ ಕೈಗೊಳ್ಳಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Lok sabha election-2024: ಮತದಾನ ಎಂಬುದು ದೇಶಕ್ಕಾಗಿ ನಾವು ನಿಭಾಯಿಸಲೇ ಬೇಕಾದ ಕರ್ತವ್ಯ. ಐದು ವರ್ಷಗಳಿಗೊಮ್ಮೆ ಬರುವ ಈ ಹಬ್ಬದಲ್ಲಿ ಭಾಗಿಯಾಗುವುದನ್ನು ಯಾರೂ ತಪ್ಪಿಸಿಕೊಳ್ಳಬಾರದು. ಮತಗಟ್ಟೆಗಳಿಗೊಮ್ಮೆ ಸುತ್ತು ಹಾಕಿ ನೋಡಿದರೆ ತಿಳಿಯುತ್ತದೆ ನಮ್ಮ ಒಂದು ಮತ ಎಷ್ಟು ಅಮೂಲ್ಯ ಎಂಬುದು.

VISTARANEWS.COM


on

By

Lok sabha election-2024
Koo

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ (india) ಮತ್ತೆ ಲೋಕಸಭಾ ಚುನಾವಣೆಯಲ್ಲಿ (Lok sabha election-2024) ಮತದಾನ (vote) ಮಾಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಗ್ರಾಮ (village), ತಾಲ್ಲೂಕು (taluk), ಜಿಲ್ಲೆ (district), ರಾಜ್ಯ (state), ದೇಶ (nation) ಮಟ್ಟದ ಯಾವುದಾದರೊಂದು ಚುನಾವಣೆ (election) ಭಾರತದಲ್ಲಿ ನಡೆಯುತ್ತಲೇ ಇರುತ್ತದೆ. ಇದು ಹಲವಾರು ವಿಶೇಷ ಘಟನೆಗಳಿಗೆ ಸಾಕ್ಷಿಯಾಗುತ್ತದೆ.

ಹೊಸ ಮತದಾರರಿಂದ ಹಿಡಿದು ಹಿರಿಯ ನಾಗರಿಕರು (Senior citizens) ಇದೇ ಮೊದಲು ಎಂಬ ಹುಮ್ಮಸ್ಸಿನಿಂದ ಮತದಾನ ಮಾಡುತ್ತಾರೆ. ಇವರ ನಡುವೆ ಈ ಬಾರಿ ಮತದಾನ ಮಾಡದಿದ್ದರೆ ಏನಾಯಿತು ಎಂದು ನಿರ್ಲಕ್ಷ ತೋರುವ ಯುವ, ಮಧ್ಯವಯಸ್ಕರೂ ಇರುತ್ತಾರೆ. ಇವರೆಲ್ಲರಿಗೂ ವಯಸ್ಸಾದ ಹಿರಿಯ ಮತದಾರರು ಅದರಲ್ಲೂ ಶತಾಯುಷಿ ಮತದಾರರು ಸ್ಫೂರ್ತಿಯಾಗುತ್ತಾರೆ.

ಲೋಕಸಭಾ ಚುನಾವಣೆ ದೇಶದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಮತದಾನ ಎಂಬುದು ದೇಶಕ್ಕಾಗಿ ನಾವು ಮಾಡುವ ಕರ್ತವ್ಯ. ಇದನ್ನು ಪ್ರತಿಯೊಬ್ಬರೂ ನಿಭಾಯಿಸಲೇಬೇಕು. ಮತಗಟ್ಟೆಗಳಿಗೊಮ್ಮೆ ಸುತ್ತು ಹಾಕಿದಾಗ ನಮ್ಮ ಮತ ಎಷ್ಟು ಅಮೂಲ್ಯ ಎಂಬುದು ಗೊತ್ತಾಗುತ್ತದೆ. ಯಾಕೆಂದರೆ ಅಲ್ಲಿ ವಯಸ್ಸಾದ ನಾಗರಿಕರು, ಅಂಗವಿಕಲರು, ಗರ್ಭಿಣಿಯರು, ಪುಟ್ಟಪುಟ್ಟ ಮಕ್ಕಳನ್ನು ಹೊತ್ತು ಬರುವ ತಾಯಂದಿರು.. ಹೀಗೆ ಕೆಲವರು ಎಷ್ಟೇ ಕಷ್ಟವಾದರೂ ಮತದಾನ ಮಾಡುವುದನ್ನು ತಪ್ಪಿಸುವುದಿಲ್ಲ.

ಮತದಾರರಿಗೆ ಸ್ಫೂರ್ತಿ ತುಂಬಲು ಹರಿಯಾಣದಲ್ಲಿ ಹೊಸ ಯೋಜನೆ ಮಾಡಲಾಗಿದೆ. ಅಲ್ಲಿ ಶತಾಯುಷಿ ಮತದಾರರನ್ನು ಚುನಾವಣೆಗಾಗಿ ಜಿಲ್ಲೆಗಳ ಐಕಾನ್ ಗಳಾಗಿ ಗುರುತಿಸಲಾಗಿದೆ.

ಇದನ್ನೂ ಓದಿ: PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನುರಾಗ್ ಅಗರ್ವಾಲ್ ಅವರು ಶುಕ್ರವಾರ ಪಲ್ವಾಲ್ ಜಿಲ್ಲೆಯ 118 ವರ್ಷದ ಧರ್ಮವೀರ್ ರಾಜ್ಯದ ಅತ್ಯಂತ ಹಿರಿಯ ಮತದಾರರಾಗಿದ್ದಾರೆ. ವಯಸ್ಸಾದ ಇವರಂತಹ ಮತದಾರರು ಯುವ ಮತದಾರರಿಗೆ ಸ್ಫೂರ್ತಿಯಾಗುತ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.


ಐಕಾನ್ ಶತಾಯುಷಿಗಳು

ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಯೋವೃದ್ಧರು ಮತ್ತು ಯುವ ಮತದಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಜಿಲ್ಲೆಗಳ ಐಕಾನ್‌ಗಳಾಗಿ ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಹಿರಿಯ ಮಹಿಳೆ

ಮಹಿಳೆಯರಲ್ಲಿ ಸಿರ್ಸಾ ಜಿಲ್ಲೆಯ 117 ವರ್ಷದ ಬಲ್ಬೀರ್ ಕೌರ್ ರಾಜ್ಯದ ಅತ್ಯಂತ ಹಿರಿಯ ಮಹಿಳಾ ಮತದಾರರಾಗಿದ್ದು, ಸೋನೆಪತ್ ಜಿಲ್ಲೆಯ 116 ವರ್ಷದ ಭಗವಾನಿ ಅನಂತರದ ಸ್ಥಾನದಲ್ಲಿದ್ದಾರೆ ಎಂದರು.

ಶತಾಯುಷಿ ಮತದಾರರು

ಪಾಣಿಪತ್ ಜಿಲ್ಲೆಯ ಲಕ್ಷಿಶೇಕ್‌ಗೆ 115 ವರ್ಷ, ರೋಹ್ಟಕ್‌ನ ಚಂದ್ರೋ ಕೌರ್, ಫತೇಹಾಬಾದ್ ಜಿಲ್ಲೆಯ ರಾಣಿ ಮತ್ತು ಕುರುಕ್ಷೇತ್ರ ಜಿಲ್ಲೆಯ ಅಂಟಿದೇವಿ ಅವರ ವಯಸ್ಸು 112. ಇನ್ನು ಸರ್ಜಿತ್ ಕೌರ್ ಮತ್ತು ಚೋಬಿ ದೇವಿ ಇಬ್ಬರಿಗೂ 111 ವರ್ಷ, ರೇವಾರಿ ಜಿಲ್ಲೆಯ ನಾರಾಯಣಿ ಅವರಿಗೆ 110 ವರ್ಷ. ಕೈತಾಲ್ ಜಿಲ್ಲೆಯಲ್ಲಿ 109 ವರ್ಷ ವಯಸ್ಸಿನ ಮತದಾರ ಫುಲ್ಲಾ ಮತ್ತು ಫರಿದಾಬಾದ್ ಜಿಲ್ಲೆಯ ಚಂದೇರಿ ದೇವಿ 109 ವರ್ಷ ವಯಸ್ಸಿನವರಾಗಿದ್ದಾರೆ ಎಂದರು.

ಜಿಂದ್ ಜಿಲ್ಲೆಯ ರಾಮದೇವಿ ಮತ್ತು ನುಹ್ ಜಿಲ್ಲೆಯ ಹರಿ 108 ವರ್ಷ ವಯಸ್ಸಿನವರು. ಜಜ್ಜರ್ ಜಿಲ್ಲೆಯ ಮೇವಾ ದೇವಿ, ಕರ್ನಾಲ್ ಜಿಲ್ಲೆಯ ಗುಲ್ಜಾರ್ ಸಿಂಗ್, ಹಿಸಾರ್ ಜಿಲ್ಲೆಯ ಶಾಡ್ಕಿನ್ ಮತ್ತು ಶ್ರೀರಾಮ್ ಮತ್ತು ಚಾರ್ಖಿ ದಾದ್ರಿಯ ಗೀನಾ ದೇವಿ 106 ವರ್ಷ ವಯಸ್ಸಿನ ಮತದಾರರು. ಭಿವಾನಿ ಜಿಲ್ಲೆಯ ಹರ್ದೇಯಿ ಅವರಿಗೆ 103 ವರ್ಷ ಮತ್ತು ಯಮುನಾನಗರದ ಫೂಲ್ವತಿ ಅವರಿಗೆ 100 ವರ್ಷ ವಯಸ್ಸಾಗಿದೆ ಎಂದು ಅವರು ತಿಳಿಸಿದರು.

ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಚುನಾವಣಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಚುನಾವಣೆಯ ಐಕಾನ್‌ಗಳನ್ನು ಮಾಡಲು ಅಗರ್ವಾಲ್ ಒತ್ತಾಯಿಸಿದರು.

ಈ ಬಾರಿ ಘೋಷಣೆ ಏನು?

ಈ ವರ್ಷ, ಭಾರತೀಯ ಚುನಾವಣಾ ಆಯೋಗವು ‘ಚುನಾವ್ ಕಾ ಪರ್ವ್ ದೇಶ್ ಕಾ ಗರ್ವ್’ ಎಂಬ ಘೋಷಣೆಯನ್ನು ಲೋಕಸಭೆ ಚುನಾವಣೆಯ ಪ್ರಮುಖ ಘೋಷಣೆಯನ್ನಾಗಿ ಮಾಡಿದೆ. ಇದರಿಂದಾಗಿ ನಾಗರಿಕರು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಐದು ವರ್ಷಕ್ಕೊಮ್ಮೆ ಬರುವ ಹಬ್ಬ

ರಾಜ್ಯದ 18- 19 ವರ್ಷ ವಯೋಮಾನದ ಯುವಕರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದಾಗ ಪ್ರಜಾಪ್ರಭುತ್ವದ ಶಕ್ತಿ ಹಾಗೂ ಮತದಾನದ ಮಹತ್ವ ತಿಳಿಯುತ್ತದೆ. ಐದು ವರ್ಷಕ್ಕೊಮ್ಮೆ ಪ್ರಜಾಪ್ರಭುತ್ವದ ಹಬ್ಬ ಬರುವುದರಿಂದ ಯುವಕರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಅವರು ಹೇಳಿದರು.

Continue Reading

ದೇಶ

Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

Viral Video ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ ಹಾಗಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಮಹಿಳೆಯೊಬ್ದಳು ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜನರು ಕೂಡ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾದರೆ ಅದು ಬಡತನಕ್ಕೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ನಿಟ್ಟಿನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಆದರೆ ಕೆಲವರು ಇದಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಅದರಲ್ಲೂ ಮುಸ್ಲಿಮ್ ಸಮುದಾಯದವರು ಈ ವಿಚಾರದಲ್ಲಿ ಸಂಪೂರ್ಣವಾಗಿ ಹಾದಿ ತಪ್ಪುತ್ತಿದ್ದಾರೆ. ಮಕ್ಕಳನ್ನು ದೇವರು ಕೊಡುವುದು ಎಂದು ಸಬೂಬು ನೀಡುತ್ತಾತೆ. ಈ ಕಾರಣಕ್ಕೆ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದ್ಯಾವುದೂ ಅರಿವಿಲ್ಲದ ಅವರು ಸರ್ಕಾರವನ್ನು ದೂರಲು ಆರಂಭಿಸುತ್ತಾರೆ. ಅಂತೆಯೇ 7 ಮಕ್ಕಳನ್ನು ಹೊಂದಿರುವ ಮುಸ್ಲಿಂ ಮಹಿಳೆಯೊಬ್ಬಳು “ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ. ಹಾಗಾಗಿ ರಾಹುಲ್ ಗಾಂಧಿ (Rahul Gandhi) ಪ್ರಧಾನಿಯಾಗಬೇಕು” ಎಂದು ಹೇಳಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ( Viral Video) ಆಗಿದೆ. ಜನರು ಕೂಡಾ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳೆಯು ದೇವರು ನಮಗೆ  7 ಮಕ್ಕಳನ್ನು ಕರುಣಿಸಿದ್ದಾನೆ. ಆದರೆ ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ. ಹಾಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಬೇಕು. ಇದರಿಂದ ಬಡತನ ದೂರವಾಗುತ್ತದೆ ಎಂದು ರಾಹುಲ್ ಗಾಂಧಿ ಪರ ಬೆಂಬಲ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವಿವಾದ ಹುಟ್ಟುಹಾಕಿದೆ.

ಈ ವಿಡಿಯೋಗೆ 37.9k ವೀವ್ಸ್ ಸಿಕ್ಕಿದ್ದು, ಸುಮಾರು 3000 ಲೈಕ್ಸ್ ಬಂದಿದೆ. 1000ಕ್ಕೂ ಹೆಚ್ಚು ಈ ವಿಡಿಯೋ ಮರುಪೋಸ್ಟ್ ಆಗಿದೆ. ಹಾಗೇ ಆಕೆಗೆ 7 ಮಂದಿ ಮಕ್ಕಳನ್ನು ದೇವರು ಕೊಟ್ಟಿದ್ದಾನೆ ಎಂದ ಮೇಲೆ ಆಕೆಯ ಬಡತನಕ್ಕೆ ದೇವರೇ ಕಾರಣನಾಗುತ್ತಾನೆ ಹೊರತು ಪ್ರಧಾನಿ ಮೋದಿಯವರು ಹೇಗೆ ಕಾರಣವಾಗುತ್ತಾರೆ ಎಂದು ಜನರು ವ್ಯಂಗ್ಯಮಾಡಿದ್ದಾರೆ. ಹಾಗೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳು ಪಡಿತರ ಚೀಟಿಗೆ ಅರ್ಹತೆ ಹೊಂದಿರಬಾರದು ಎಂದು ಹಲವರು ವಾದಿಸಿದ್ದಾರೆ. ಇದು ಟೀಕೆಗೆ ಕಾರಣವಾಗಿದೆ.

ಈ ಹಿಂದೆ ಏಪ್ರಿಲ್ 17ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ರಾಹುಲ್ ಗಾಂಧಿ ಬಡತನ ನಿರ್ಮೂಲನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಡತನವನ್ನು ತಕ್ಷಣವೇ ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ, ಸಂಘಟಿತ ಪ್ರಯತ್ನಗಳು ಅದನ್ನು ಗಮನಾರ್ಹವಾಗಿ ನಿವಾರಿಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರ ಬಡತನ ನಿರ್ಮೂಲನೆಯ ಪ್ರತಿಜ್ಞೆಯನ್ನು ಲೇವಡಿ ಮಾಡಿದ್ದರು.

ಇದನ್ನೂ ಓದಿ: Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿಯವರು ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿಯವರ ಘೋಷಣೆಯನ್ನು ಲೇವಡಿ ಮಾಡಿದ್ದಾರೆ. ಮತ್ತು ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಪಕ್ಷವು ನೀಡಿರುವ ದೀರ್ಘಾವಾಧಿಯ ಭರವಸೆಗಳನ್ನು ಎತ್ತಿ ಹಿಡಿದ ಅವರು, ಕಾಂಗ್ರೆಸ್ ನವರ ಘೋಷಣೆ ನಗೆಪಾಟಲಿಗೀಡಾಗಿದೆ ಎಂದು ವ್ಯಂಗ್ಯವಾಡಿದ್ದರು.

Continue Reading

ದೇಶ

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

AC Helmet ಮನೆಯಲ್ಲಿ, ಆಫೀಸ್ ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ಸಣ್ಣಗೆ ಬೆವರುತ್ತಿದ್ದಾರೆ. ಇನ್ನು ಹೊರಗಡೆ ಕೂಲಿ ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದು. ಅದರಲ್ಲೂ ಸುಡುಬಿಸಿಲನ್ನೂ ಲೆಕ್ಕಿಸದೇ ಕರ್ತವ್ಯನಿರತರಾಗಿರುವ ಟ್ರಾಫಿಕ್ ಪೊಲೀಸರ ಪಾಡಂತೂ ವಿವರಿಸಲು ಅಸಾಧ್ಯ.

VISTARANEWS.COM


on

AC Helmet
Koo

ಅಹಮದಾಬಾದ್: ಬಿಸಿಲಿನ ತಾಪ ಸಿಕ್ಕಾಪಟ್ಟೆ ಹೆಚ್ಚಿದೆ. ಮನೆಯಲ್ಲಿ, ಆಫೀಸ್ ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ಸಣ್ಣಗೆ ಬೆವರುತ್ತಿದ್ದಾರೆ. ಇನ್ನು ಹೊರಗಡೆ ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದು. ಅದರಲ್ಲೂ ಸುಡುಬಿಸಿಲನ್ನೂ ಲೆಕ್ಕಿಸದೇ ಕರ್ತವ್ಯನಿರತರಾಗಿರುವ ಟ್ರಾಫಿಕ್ ಪೊಲೀಸರ (Traffic Police) ಪಾಡಂತೂ ವಿವರಿಸಲು ಅಸಾಧ್ಯ. ಸುಡುವ ಇವರ ನೆತ್ತಿ ತಣ್ಣಗಿರಲಿ ಎಂದು ಎಸಿ ಹೆಲ್ಮಟ್ (AC Helmet) ಎಂಬ ವಿಶೇಷವಾದ ಹೆಲ್ಮೆಟ್ ಅನ್ನು ಪರಿಚಯಿಸಲಾಗಿದೆ. ಏನಿದು ಎಂಬ ಕುತೂಹಲ ನಿಮಗೂ ಇರಬಹುದು. ಇದಕ್ಕೆ ಸಂಬಂಧಪಟ್ಟ ಮಾಹಿತಿಗಳು ಇಲ್ಲಿವೆ.

ಸುಡುವ ಬಿಸಿಲಿನಲ್ಲಿ ನಿಂತು ಕಾರ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಇದು ಖುಷಿ ನೀಡುವ ಸಂಗತಿಯಾಗಿದೆ. ಬಿಸಿಲಿನ ತಾಪವನ್ನು ನಿಭಾಯಿಸಲು ಅಹಮದಾಬಾದ್ ಪೊಲೀಸರು ವಿಶೇಷ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅಹಮದಾಬಾದ್ ನಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಐದು ಜನ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ಗಳ್ನು ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಎಸಿ ಹೆಲ್ಮೆಟ್ ಧರಿಸಿ ಖುಷಿಯಲ್ಲಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯದಲ್ಲಿ ಅಹಮದಾಬಾದ್ ನ ಪಿರಾನಾ, ಥಕ್ಕರ್ ನಗರ ಮತ್ತು ನಾನಾ ಚಿಲೋಡ್ ಪ್ರದೇಶಗಳನ್ನು ಈ ಎಸಿ ಹೆಲ್ಮೆಟ್ ಗಳ ಪ್ರಾಯೋಗಿಕ ಹಂತಕ್ಕಾಗಿ ಆಯ್ಕೆ ಮಾಡಲಾಗಿದೆ. ಇದು ಯಶಸ್ವಿಯಾದರೆ ನಗರದ ಎಲ್ಲಾ ಟ್ರಾಫಿಕ್ ಅಧಿಕಾರಿಗಳಿಗೆ ಹೆಲ್ಮೆಟ್ ಗಳನ್ನು ವಿತರಿಸಲಾಗುವುದು ಎನ್ನಲಾಗಿದೆ.

ಈ ಹೆಲ್ಮೆಟ್ ಗಳು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ಫ್ಯಾನ್ ರೀತಿಯ ಅಂತರ್ನಿರ್ಮಿತ ರಚನೆಯನ್ನು ಹೊಂದಿರುವ ಪ್ಲಾಸ್ಟಿಕ್ ಟಾಪ್ ಅನ್ನು ಒಳಗೊಂಡಿದೆ. ಈ ಹೆಲ್ಮೆಟ್ ಅನ್ನು ತಂಪಾಗಿಸುವ ಕಾರ್ಯವನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಸೊಂಟದ ಸುತ್ತಲೂ ಆರಾಮವಾಗಿ ಕಟ್ಟಿಕೊಂಡಿರುವ ಬ್ಯಾಟರಿ ಮಾಡುತ್ತದೆ. ಈ ಹೆಲ್ಮೆಟ್ ಗಳು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆಯಂತೆ. ಇದು ತಂಪಾಗಿಸುವುದರ ಜೊತೆಗೆ ಟ್ರಾಫಿಕ್ ಪೊಲೀಸರನ್ನು ಧೂಳು, ಮಾಲಿನ್ಯಕಾರಕಗಳಿಂದ ರಕ್ಷಣೆ ಕೂಡ ನೀಡುತ್ತದೆಯಂತೆ. ಹಾಗೇ ಈ ಹೆಲ್ಮೆಟ್ ಸಾಮಾನ್ಯ ಹೆಲ್ಮೆಟ್ ಗಳಿಗೆ ಹೋಲಿಸಿದರೆ 500ಗ್ರಾಂಗಳಷ್ಟು ಭಾರವನ್ನು ಹೊಂದಿದೆಯಂತೆ.

ಈ ಎಸಿ ಹೆಲ್ಮಟ್ ಗಳ ಪ್ರಾಯೋಗಿಕ ಹಂತವು ಆಗಸ್ಟ್ 10, 2023ರಂದು ಪ್ರಾರಂಭವಾಯಿತು. ಇದೀಗ ಅವು ಪ್ರಾಯೋಗಿಕ ಹಂತದಲ್ಲಿದ್ದು, ಯಾವುದೇ ಸಮಸ್ಯೆಯಾಗದೆ ಅನುಕೂಲಕರವಾಗಿದ್ದರೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ವಿತರಿಸಲಾಗುತ್ತದೆಯಂತೆ.

ಇದನ್ನೂ ಓದಿ: Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!

ಈ ಕುರಿತು ಮಾತನಾಡಿದ ಅಹಮದಾಬಾದ್ ನ ಸಂಚಾರ ಪೂರ್ವದ ಉಪಪೊಲೀಸ್ ಕಮಿಷನರ್ ಸಫಿನ್ ಹಸನ್, “ಎಸಿ ಹೆಲ್ಮೆಟ್ ಗಳನ್ನು ಪ್ರತಿಕ್ರಿಯೆಗಾಗಿ ಹಿರಿಯ ಅಧಿಕಾರಿಗಳು ನನಗೆ ಹಸ್ತಾಂತರಿಸಿದ್ದಾರೆ. ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ ನಾವು ಮೂರು ಸ್ಥಳಗಳಲ್ಲಿ ಇದನ್ನು ಪ್ರಾಯೋಗಿಕ ಹಂತವಾಗಿ ಬಳಸಲಾಗಿದೆ. ಇದು 8 ಗಂಟೆಗಳ ಕಾಲ ಕೆಲಸ ಮಾಡಲಿದ್ದು, ಟ್ರಾಫಿಕ್ ಪೊಲೀಸರನ್ನು ಮಾಲಿನ್ಯ ಮತ್ತು ಧೂಳಿನಿಂದ ರಕ್ಷಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಆರಂಭದಲ್ಲಿ ಹೆಲ್ಮೆಟ್ ಗಳನ್ನು ಪರಿಚಯಿಸುವ ಮೊದಲು ಕಾರ್ಟ್ರಿಡ್ಜ್ ಮಾಸ್ಕ್ ಗಳನ್ನು ಪ್ರಯೋಗಿಸಿದ್ದೇವೆ. ಆದರೆ ದುರದೃಷ್ಟವಶಾತ್ ಅವು ತೃಪ್ತಿಕರ ಫಲಿತಾಂಶಗಳನ್ನು ನೀಡಲಿಲ್ಲ ಮತ್ತು ಅಧಿಕಾರಿಗಳಿಗೆ ಉಸಿರಾಟದ ಸಮಸ್ಯೆಯನ್ನು ಉಂಟುಮಾಡಿದೆ” ಎಂಬುದಾಗಿ ಅವರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

Electoral Bond: ಸುಪ್ರೀಂ ಕೋರ್ಟ್​​ ಈಗಷ್ಟೇ ಈ ಯೋಜನೆಯಲ್ಲಿ ಪಾರದರ್ಶಕತೆ ತಂದಿದೆ. ಈ ಮೊದಲು ಎಲ್ಲವೂ ಮೋಸದ ಜಾಲವಾಗಿತ್ತು ಎಂದು ಅವರು ಹೇಳಿದ್ದಾರೆ. ಯೋಜನೆಯ ಕೆಲವು ಅಂಶಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವೆ ಸೀತಾರಾಮನ್ ಸಮಾಲೋಚನೆ ಯ ನಂತರ ಅವುಗಳನ್ನು ಮರಳಿ ತರುವ ಸಾಧ್ಯತೆಗಳಿವೆ ಎಂದು ಹೇಳಿದರು.

VISTARANEWS.COM


on

electoral Bond
Koo

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಈ ಎಲ್ಲ ಪಾಲುದಾರರ ಜತೆ ಸಮಾಲೋಚನೆಯ ಮಾಡಿ ಚುನಾವಣಾ ಬಾಂಡ್ (Electoral Bond) ಯೋಜನೆಯನ್ನು ಮರಳಿ ತರುವ ಸಾಧ್ಯತೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳಿವು ನೀಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಅವರು “ನಾವು ಇನ್ನೂ ಮಧ್ಯಸ್ಥಗಾರರೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಬೇಕಾಗಿದೆ ಮತ್ತು ಎಲ್ಲರಿಗೂ ಸ್ವೀಕಾರಾರ್ಹವಾದ ಚೌಕಟ್ಟನ್ನು ರಚಿಸಲು ಅಥವಾ ತರಲು ನಾವು ಏನು ಮಾಡಬೇಕು ಎಂಬುದನ್ನು ಪರಿಶೀಲಿಸಬೇಕಾಗಿದೆ. ಮುಖ್ಯವಾಗಿ ಪಾರದರ್ಶಕತೆಯ ಮಟ್ಟವನ್ನು ಉಳಿಸಿಕೊಳ್ಳಬೇಕು. ಕಪ್ಪು ಹಣ ಇಲ್ಲಿಗೆ ಪ್ರವೇಶಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ನಿವಾಳಿಸಬೇಕು ಎಂದು ಹೇಳಿದರು. ಆದಾಗ್ಯೂ, ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂದು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಸುಪ್ರೀಂ ಕೋರ್ಟ್​​ ಈಗಷ್ಟೇ ಈ ಯೋಜನೆಯಲ್ಲಿ ಪಾರದರ್ಶಕತೆ ತಂದಿದೆ. ಈ ಮೊದಲು ಎಲ್ಲವೂ ಮೋಸದ ಜಾಲವಾಗಿತ್ತು ಎಂದು ಅವರು ಹೇಳಿದ್ದಾರೆ. ಯೋಜನೆಯ ಕೆಲವು ಅಂಶಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವೆ ಸೀತಾರಾಮನ್ ಸಮಾಲೋಚನೆ ಯ ನಂತರ ಅವುಗಳನ್ನು ಮರಳಿ ತರುವ ಸಾಧ್ಯತೆಗಳಿವೆ ಎಂದು ಹೇಳಿದರು.

ಹಿಂದೆಯೂ ಸಮರ್ಥಿಸಿಕೊಂಡಿದ್ದರು

ಚುನಾವಣಾ ಬಾಂಡ್ ಯೋಜನೆಯನ್ನು ಹಣಕಾಸು ಸಚಿವರು ಸಮರ್ಥಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಈ ಯೋಜನೆಯು “ಹಿಂದಿನ ಕಪ್ಪು ಹಣಕ್ಕಿಂತ ಒಂದು ಹೆಜ್ಜೆ ಉತ್ತಮ” ಎಂದು ಹೇಳಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​​ಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಬಿಜೆಪಿ ಆಡಳಿತವು ಚುನಾವಣಾ ಹಣಕಾಸು ಶುದ್ಧೀಕರಣಕ್ಕಾಗಿ ಕಾನೂನನ್ನು ತಂದಿದೆ ಎಂದು ಹೇಳಿದ್ದರು. ಚುನಾವಣಾ ನಿಧಿಯು ಹೆಚ್ಚು ಪಾರದರ್ಶಕತೆಯನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ತರಲು ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಗಳಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರವು ಜನವರಿ 2, 2018 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿತ್ತು. ಫೆಬ್ರವರಿ 2024 ರಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತು.

Continue Reading
Advertisement
Neha Murder Case
ಹುಬ್ಬಳ್ಳಿ27 mins ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Lok sabha election-2024
Latest39 mins ago

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Viral Video
ದೇಶ42 mins ago

Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

AC Helmet
ದೇಶ48 mins ago

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

Tarak Ponnappa out of udho udho sri renuka yellamma serial
ಕಿರುತೆರೆ51 mins ago

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

electoral Bond
ಪ್ರಮುಖ ಸುದ್ದಿ1 hour ago

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

boat capsizes in bhatkal
ಉತ್ತರ ಕನ್ನಡ1 hour ago

Boat Capsizes: ಭಾರೀ ಗಾಳಿ ಮಳೆಗೆ ಅರಬ್ಬೀ ಸಮುದ್ರದಲ್ಲಿ ಬೋಟ್‌ ಮುಳುಗಡೆ, ನಾಲ್ವರ ರಕ್ಷಣೆ; ಇಲ್ಲಿದೆ ವಿಡಿಯೋ

Mahesh Babu SS Rajamouli return from Dubai
South Cinema2 hours ago

Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

MS Dhoni
ಪ್ರಮುಖ ಸುದ್ದಿ2 hours ago

MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

Modi In Karnataka
ಪ್ರಮುಖ ಸುದ್ದಿ2 hours ago

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ27 mins ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ20 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

ಟ್ರೆಂಡಿಂಗ್‌