Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ - Vistara News

ಕಾಲಿವುಡ್

Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ

Movie Review: Vikram ಕಮಲ ಹಾಸನ್‌, ಫಹಾದ್‌ ಫಾಸಿಲ್‌ ಹಾಗೂ ವಿಜಯ್‌ ಸೇತುಪತಿಯಂತಹ ಘಟಾನುಘಟಿಗಳನ್ನು ಒಟ್ಟಿಗೇ ನೋಡುವ ಖುಷಿಯೇ ಬೇರೆ. ಮೂವರಿಗೂ ನ್ಯಾಯ ನೀಡಿ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವ ರೋಚಕತೆ ವಿಕ್ರಮ್‌ ಚಿತ್ರದಲ್ಲಿದೆ. ಅದನ್ನು ನೋಡಿಯೇ ಅನುಭವಿಸಬೇಕು.

VISTARANEWS.COM


on

Movie review: Vikram
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

Movie Review: Vikram
ಚಿತ್ರ: ವಿಕ್ರಂ(ತಮಿಳು)
ನಿರ್ದೇಶನ: ಲೋಕೇಶ್‌ ಕನಕರಾಜ್
ನಿರ್ಮಾಪಕರು: ಕಮಲ ಹಾಸನ್, ಮಹೇಂದ್ರನ್
ಸಂಗೀತ: ಅನಿರುದ್ಧ್ ರವಿಚಂದ್ರನ್
ಛಾಯಾಗ್ರಹಣ: ಗಿರೀಶ್‌ ಗಂಗಾಧರನ್
ತಾರಾಗಣ: ಕಮಲ ಹಾಸನ್‌, ವಿಜಯ್‌ ಸೇತುಪತಿ, ಸೂರ್ಯ, ಫಹಾದ್ ಫಾಸಿಲ್‌, ಕಾಳಿದಾಸ್‌ ಜಯರಾಮ್‌, ಗಾಯತ್ರಿ
ರೇಟಿಂಗ್:‌ 3.5/5

ಮಲ್ಟಿಸ್ಟಾರರ್‌ ಮೂವಿ ಎಂದರೆ ಅದರ ಮೇಲಿನ ನಿರೀಕ್ಷೆಯ ಲೆವೆಲ್‌ ಜಾಸ್ತಿನೇ ಇರುತ್ತದೆ. ಅದರಲ್ಲೂ ಕಮಲ ಹಾಸನ್‌, ಫಹಾದ್‌ ಫಾಸಿಲ್‌ ಹಾಗೂ ವಿಜಯ್‌ ಸೇತುಪತಿಯಂತಹ ಘಟಾನುಘಟಿಗಳನ್ನು ಒಟ್ಟಿಗೇ ನೋಡುವ ಖುಷಿಯೇ ಬೇರೆ. ವಿಕ್ರಮ್‌ ಸಿನಿಮಾದಲ್ಲಿ ಈ ಮೂವರ ನಟನೆಗೆ ಎಂಥವರೂ ಫಿದಾ ಆಗುವುದು ಖಂಡಿತ!

1984ರಲ್ಲಿ ಕಮಲ್ ಹಾಸ‌ನ್ ಅಭಿನಯಿಸಿದ ವಿಕ್ರಮ್‌ ಎನ್ನುವ ಸಿನಿಮಾದ ಶೀರ್ಷಿಕೆಯನ್ನೇ ಈ ಚಿತ್ರಕ್ಕೂ ಇಡಲಾಗಿದೆ. ಆ ಚಿತ್ರದಲ್ಲಿ ಕಮಲ ಹಾಸನ್ ಒಬ್ಬ ಸೀಕ್ರೆಟ್‌ ಏಜೆಂಟ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.‌ 2022ರ ಈ ಸಿನಿಮಾದಲ್ಲಿ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಿದರೆ ಚೆಂದ.

ಯಾರು ಈ ವಿಕ್ರಮ್?‌ ಏನು ಕಥೆ?

ವಿಕ್ರಮ್‌ ಸಿನಿಮಾದ ಓಪನಿಂಗ್‌ ಭಯಂಕರ! ಆರಂಭದಲ್ಲೇ ಒಂದು ಶಾಕ್‌ ನೀಡಲಾಗಿದೆ. ಆ ಶಾಕ್‌, ಆ ಸಸ್ಪೆನ್ಸ್ ನ್ನು ಸಿನಿಮಾದುದ್ದಕ್ಕೂ ಕಾಪಾಡಿಕೊಳ್ಳಲಾಗಿದೆ. ಒಂದು ಇಂಟರೆಸ್ಟಿಂಗ್‌ ಸಸ್ಪೆನ್ಸ್‌ ಕತೆ ಇದರದ್ದು. ಒಂದು ಹುಡುಕಾಟದ, ಒಂದು ಅನ್ಯಾಯದ ವಿರುದ್ಧದ ಜರ್ನಿ. ಈ ಜರ್ನಿಯಲ್ಲಿ ಒಳ್ಳೆಯವರು ಯಾರು? ಯಾರು ಕೆಟ್ಟವರು? ಬಿಸಿನೆಸ್‌ ಯಾವುದು? ಯಾವುದರಿಂದ ಸಮಾಜದ ಮೇಲೆ ಪರಿಣಾಮ ಆಗುತ್ತಿದೆ? ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ಲೋಕೇಶ್‌ ಕನಕರಾಜ್ ಕಥೆಯನ್ನು ಹೆಣೆದಿದ್ದಾರೆ.

ಆರಂಭದಲ್ಲಿ ವಿಕ್ರಮ್‌ ಯಾರು? ಎಂಬ ಪ್ರಶ್ನೆಯನ್ನು ಹುಟ್ಟಿಸಿ, ರೋಚಕ ತಿರುವುಗಳೊಂದಿಗೆ ಮುಂದುವರಿಸಿ ಮಧ್ಯಂತರದ ಅವಧಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಲಾಗಿದೆ. ರೌಡಿಸಂ ಆಧಾರಿತ ಚಿತ್ರಗಳು ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿದ್ದು, ವಿಕ್ರಮ್‌ ಅವುಗಳ ನಡುವೆಯೇ ಸ್ವಲ್ಪ ಬೇರೆಯಾಗಿ ನಿಲ್ಲುತ್ತದೆ.

ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖ ಅಂಶಗಳು:

  1. ಈ ಚಿತ್ರಕ್ಕೆ ಸಂಗೀತ ನೀಡಿದ ಅನಿರುದ್ಧ್ ರವಿಚಂದ್ರನ್‌ಗೆ ಹಾಗೂ ಛಾಯಾಗ್ರಾಹಕ ಗಿರೀಶ್‌ ಗಂಗಾಧರನ್‌ಗೆ ಮೊದಲು ಸೆಲ್ಯೂಟ್‌ ಹೇಳಲೇಬೇಕು. ಮ್ಯೂಸಿಕ್‌ ಹಾಗೂ ಮೇಕಿಂಗ್‌ ಈ ಚಿತ್ರದ ಹೈಲೈಟ್ಸ್.‌ ಒಂದೊಂದು ಫ್ರೇಮ್‌ ನ್ನು ಕೂಡ ಅದ್ಭುತವಾಗಿ ಚಿತ್ರಿಸಿದ್ದಾರೆ. ಮುಂದಿನ ದೃಶ್ಯ ಏನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವಲ್ಲಿ ಛಾಯಾಗ್ರಾಹಕ, ಸಂಕಲನಕಾರ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಒಂದೊಂದು ಪಾತ್ರದ ಎಂಟ್ರಿಯಿಂದ ಆರಂಭಗೊಂಡು ಚಿತ್ರದ ಅಂತ್ಯದವರೆಗೂ ಅನಿರುದ್ಧ್‌ ನೀಡಿರುವ ಸಂಗೀತ ಮೈ ರೋಮಾಂಚನಗೊಳಿಸುತ್ತದೆ.‌ ಅನಿರುದ್ಧ್‌ ವಿಭಿನ್ನ ಬಗೆಯ ಸಂಗೀತವನ್ನು ಪ್ರತಿಯೊಂದು ಸಿನಿಮಾಗೆ ನೀಡುತ್ತಿದ್ದಾರೆ ಹಾಗೂ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವ ಭರವಸೆ ಮೂಡಿಸಿದ್ದಾರೆ.
  2. ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಮೆರೆದಿರುವ ರೀತಿಯನ್ನು ನಿಜಕ್ಕೂ ಮೆಚ್ಚಲೇಬೆಕು. ಕಣ್ಣಲ್ಲೇ ಎದುರಾಳಿಯನ್ನು ಹೆದರಿಸುವಂತಹ ಉಲಗ ನಯಗನ್ (ಕಮಲ ಹಾಸನ್)‌ ನಟನೆ ಮನಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಫಹಾದ್‌ ಫಾಸಿಲ್‌ ಹಾಗೂ ವಿಜಯ್‌ ಸೇತುಪತಿ ಇಬ್ಬರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ.
    ಉಳಿದವರೂ ರೋಷ, ಆಕ್ರೋಷವನ್ನು ವ್ಯಕ್ತ ಪಡಿಸುವಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
  3. ಒಂದು ಅದ್ಭುತ ಕಥೆಯನ್ನು ಇದರಲ್ಲಿ ಹೇಳಲಾಗಿದೆ. ಕಥೆಯನ್ನು ಹಂತ ಹಂತಗಳಲ್ಲಿ ರೋಚಕ ತಿರುವುಗಳೊಂದಿಗೆ ರೂಪಿಸಲಾಗಿದೆ. ಅದಕ್ಕೆ ತಕ್ಕಂತೆ ಸೂಕ್ತವಾದ ಸಂಭಾಷಣೆ ಇಲ್ಲಿದೆ. ವಾಟ್‌ ಈಸ್‌ ಪ್ಲಾನ್‌ ಬಿ? ಎಂಬ ಪ್ರಶ್ನೆಗೆ ಕಮಲ ಹಾಸನ್‌ ʼಪ್ಲಾನ್‌ ಬಿ ಈಸ್‌ ಟು ಮೇಕ್‌ ಪ್ಲಾನ್‌ ಎ ವರ್ಕ್ʼ ಎಂಬ ಪಂಚಿಂಗ್‌ ಡೈಲಾಗ್ಸ್‌ ಕೂಡ ಇದೆ.

ಯಾರ ದೊಡ್ಡಮ್ಮ ಹೆಚ್ಚು ಸೌಂಡ್‌ ಮಾಡಿದ್ದು?

ಕೆಜಿಎಫ್‌ ಸಿನಿಮಾದಲ್ಲಿ ರಾಕಿಭಾಯ್‌ ಒಂದು ಪೊಲೀಸ್‌ ಸ್ಟೇಷನ್‌ನ್ನೇ ಸುಟ್ಟು ಹಾಕಿದ್ದ. ಅದಕ್ಕೆ ಬಳಸಿದ್ದ ಗನ್‌ ಹೆಸರು ʼದೊಡ್ಡಮ್ಮʼ. ಅಲ್ಲಿ ರಾಕಿಭಾಯ್‌ ಕೈಯ್ಯಲ್ಲಿದ್ದ ʼದೊಡ್ಡಮ್ಮʼ ವಿಕ್ರಮ್‌ ಸಿನಿಮಾದಲ್ಲಿ ಕಮಲ ಹಾಸನ್‌ ಕೈಯಲ್ಲೂ ಇದೆ. ಕೆಜಿಫ್‌ನಲ್ಲಿ ಹೊಸ ಗನ್‌, ಆದರೆ ಇಲ್ಲಿ ಹಳತು. ಸೂಕ್ಷ್ಮವಾಗಿ ಗಮನಿಸಿದರೆ ಹಳೇ ʼದೊಡ್ಡಮ್ಮʼನ ಕೂಗೇ ಹೆಚ್ಚಿದ್ದಂತೆ ಕಾಣುತ್ತದೆ.

ವಿಕ್ರಂ ಪಾರ್ಟ್‌ 2?

Movie Review
Suriya in Vikram

ವಿಕ್ರಂ ಚಿತ್ರದ ಅಂತ್ಯದಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಆ ಪ್ರಶ್ನೆಗಳಿಗೆ ಉತ್ತರವಾಗಿ ಎರಡನೇ ಪಾರ್ಟ್‌ ಬರಬಹುದು.

ಈ ಚಿತ್ರದಲ್ಲಿ ಮತ್ತೊಂದು ಮುಖ್ಯವಾದ ವಿಷಯ ಎಂದರೆ ನಟ ಸೂರ್ಯ. ವಿಕ್ರಂ ಚಿತ್ರತಂಡದವರು ಈ ಸಿನಿಮಾದಲ್ಲಿ ನಟ ಸೂರ್ಯ ಕೂಡ ಅಭಿನಯಿಸುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು. ಅವರ ಎಂಟ್ರಿ ಮಾತ್ರ ಭಯಂಕರ! ಒಂದು ಮುಖ್ಯ ಪಾತ್ರದಲ್ಲಿ ಸೂರ್ಯ ಅಭಿನಯಿಸಿದ್ದಾರೆ. ಮುಂಬರಲಿರುವ ಎರಡನೇ ಪಾರ್ಟ್‌ನಲ್ಲಿ ಸೂರ್ಯ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಸ್ಪಷ್ಟವಾಗಿದೆ. ಈ ಚಿತ್ರವು ಪ್ರೇಕ್ಷಕರನ್ನು ಪಾರ್ಟ್‌ 2 ನೋಡಲು ಕುತೂಹಲ ಮೂಡಿಸುವಲ್ಲಿ ಗೆದ್ದಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟಿದ, ಜನರು ಮೆಚ್ಚುವ ಸಿನಿಮಾ ಇದು.‌

ಇದನ್ನೂ ಓದಿ: Review: ಇನ್ನೂ ಬೆಸ್ಟ್‌ ಆಗಬಹುದಿತ್ತು ʼಬೀಸ್ಟ್‌ʼ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

Kanguva Budget: ಭಾರತೀಯ ಚಿತ್ರರಂಗದಲ್ಲಿ ಅತೀ ದೊಡ್ಡ ಬಜೆಟ್ ನ ಚಿತ್ರ ಕಂಗುವ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ. ತಮಿಳು ನಟ ಸೂರ್ಯ ಶಿವಕುಮಾರ್ ಹಾಗೂ ಬಾಲಿವುಡ್ ಸ್ಟಾರ್ ಬಾಬಿ ಡಿ’ಯೋಲ್‌ ಅಭಿನಯದ ಈ ಚಿತ್ರ ಈಗಾಗಲೇ ಸಿನಿ ರಸಿಕರನ್ನು ಮೋಡಿ ಮಾಡಿದೆ.

VISTARANEWS.COM


on

By

Kanguva Budget
Koo

ಚೆನ್ನೈ: ಹೊಸ ವರ್ಷದಂದು (new year) ಪೋಸ್ಟರ್ (poster) ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಕಂಗುವ (Kanguva). ತಮಿಳು (tamil) ನಟ (actor) ಸೂರ್ಯ (surya), ದಿಶಾ ಪಟಾನಿ (disha patani) ಅಭಿನಯದ ಈ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಚಿತ್ರದ ಕುರಿತು ಹೊಸಹೊಸ ಮಾಹಿತಿಗಾಗಿ ವೀಕ್ಷಕರು ಕಾಯುವಂತೆ ಮಾಡಿದೆ.

ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರಗಳಲ್ಲಿ ಒಂದು ಎಂದು ಊಹಿಸಲಾಗಿರುವ ಕಂಗುವವನ್ನು (Kanguva Budget) ಸುಮಾರು 300 ಕೋಟಿಗೂ ಹೆಚ್ಚು ಬಜೆಟ್‌ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರವೂ ಚಿತ್ರರಂಗದಲ್ಲಿ ಬಹು ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.

ಕಂಗುವ ಬಗ್ಗೆ ಭಾರಿ ಚರ್ಚೆ

ಸ್ಟುಡಿಯೋ ಗ್ರೀನ್ ಮತ್ತು ಸೂರ್ಯ ಶಿವಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಕಂಗುವ” ದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಣ್ಣಿಗೆ ಹಬ್ಬದಂತಿರುವ ಚಿತ್ರದ ದೃಶ್ಯಗಳು, ಬೆರಗುಗೊಳಿಸುವ ವಿನ್ಯಾಸ, ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಅದ್ಬುತ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ದೇಶದಾದ್ಯಂತ ಸಾಕಷ್ಟು ಮಂದಿ ಇದನ್ನು ನೋಡಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ


ಶಕ್ತಿಶಾಲಿ ನಾಯಕನಾಗಿ ಸೂರ್ಯ ಮತ್ತು ಖಳನಾಯಕನಾಗಿ ಬಾಬಿ ಡಿ’ಯೋಲ್‌ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಎಲ್ಲರೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುಬಾರಿ ಚಿತ್ರ

ಕಂಗುವವರ ಮಹತ್ವಾಕಾಂಕ್ಷೆಯ ಕಥೆಯ ಹಂದರವನ್ನು ಒಳಗೊಂಡಿರುವ ಈ ಚಿತ್ರದ ಬಜೆಟ್ 350 ಕೋಟಿಗೂ ಮೀರಿದೆ ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ.


ಚಿತ್ರದ ಪ್ಯಾನ್-ವರ್ಲ್ಡ್ ಪ್ರಾಜೆಕ್ಟ್ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಸುಂದರ ದೃಶ್ಯಗಳು, ಭವ್ಯವಾದ ಛಾಯಾಗ್ರಹಣ ಮತ್ತು ವಿಸ್ತಾರವಾದ ಈ ಚಿತ್ರ ಚಲನಚಿತ್ರ ನಿರ್ಮಾಪಕರು ಅದರ ಸೃಷ್ಟಿಗೆ ಸುರಿದ ಅಪಾರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ವೆಟ್ರಿ ಪಳನಿಸಾಮಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಗಾಯಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣುವ ನಿರೀಕ್ಷೆಯಿದೆ.

ಸ್ಟುಡಿಯೋ ಗ್ರೀನ್‌ ಬೆಂಬಲದಿಂದ ನಿರ್ದೇಶಕ ಶಿವ ಅವರ ವಿಶಿಷ್ಟ ಕಲ್ಪನೆಗೆ ಜೀವ ತುಂಬಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ ಸಿನಿರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖರಾಗಿರುವ ಸ್ಟುಡಿಯೋ ಗ್ರೀನ್ ಮಾಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಕಳೆದ 16 ವರ್ಷಗಳಲ್ಲಿ ಸತತವಾಗಿ “ಸಿಂಗಂ” ಸರಣಿ, “ಪರುತಿ ವೀರನ್,” “ಸಿರುತೈ,” “ಕೊಂಬನ್,” “ನಾನ್ ಮಹನ್ ಅಲ್ಲಾ,” “ಮದ್ರಾಸ್,” “ಟೆಡ್ಡಿ,” ಮತ್ತು ತೀರಾ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದ್ದಾರೆ.

“ಪಾತು ತಾಲಾ.” ಅವರು “ಬಾಹುಬಲಿ: ದಿ ಬಿಗಿನಿಂಗ್” ನಂತಹ ಪ್ರಮುಖ ಬ್ಲಾಕ್‌ಬಸ್ಟರ್‌ಗಳನ್ನು ವಿತರಿಸಿದ ಕಾರಣ ಅವರಿಂದಲೇ ಚಿತ್ರ ಬಿಡುಗಡೆ ಮಾಡಿಸಬೇಕು ಎಂದು ಹಲವಾರು ಮಂದಿ ನಿರ್ದೇಶಕರು ಕಾಯುವಂತಾಗಿದೆ.
ಸ್ಟುಡಿಯೋ ಗ್ರೀನ್ ಕಂಗುವಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ವಿತರಕರೊಂದಿಗೆ ಕೈಜೋಡಿಸಿದೆ. 2024 ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Continue Reading

ಕಾಲಿವುಡ್

Actor Rajinikanth: ಲೋಕೇಶ್ ಕನಕರಾಜ್-ರಜನಿ ಸಿನಿಮಾಗೆ ಟಾಲಿವುಡ್‌ ಖ್ಯಾತ ನಟ ಭರ್ಜರಿ ಎಂಟ್ರಿ?

Actor Rajinikanth: ‘ತಲೈವರ್ 171’ ಗಾಗಿ (Thailaiver 171) ಲೋಕೇಶ್ ಕನಕರಾಜ್ (Lokesh Kanagaraj) ಅವರೊಂದಿಗೆ ಕೈ ಜೋಡಿಸುವುದು ಪಕ್ಕಾ ಎಂದು ಸನ್ ಪಿಕ್ಚರ್ಸ್‌ನ ಅಧಿಕೃತ ಟ್ವಿಟರ್‌ ಪೇಜ್‌ನಲ್ಲಿ ಈ ಹಿಂದೆ ಪೋಸ್ಟ್‌ ಮಾಡಿತ್ತು. ಇದೀಗ ಹೊಸ ಮಾಹಿತಿ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಅವರು ಈ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.

VISTARANEWS.COM


on

Actor Rajinikanth Thailaiver 171 lokesh kanakaraj entry
Koo

ಬೆಂಗಳೂರು: ʻಜೈಲರ್’ ಬಳಿಕ ರಜನಿಕಾಂತ್ (Actor Rajinikanth) ‘ಲಾಲ್ ಸಲಾಂ’ (Lal Salaam) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ನಂತರ ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್‌ ಕೊಟ್ಟಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಲೈವಾ ನಟಿಸುವುದು ಫಿಕ್ಸ್‌ ಆಗಿದೆ. ‘ತಲೈವರ್ 171’ ಗಾಗಿ (Thailaiver 171) ಲೋಕೇಶ್ ಕನಕರಾಜ್ (Lokesh Kanagaraj) ಅವರೊಂದಿಗೆ ಕೈ ಜೋಡಿಸುವುದು ಪಕ್ಕಾ ಎಂದು ಸನ್ ಪಿಕ್ಚರ್ಸ್‌ನ ಅಧಿಕೃತ ಟ್ವಿಟರ್‌ ಪೇಜ್‌ನಲ್ಲಿ ಈ ಹಿಂದೆ ಪೋಸ್ಟ್‌ ಮಾಡಿತ್ತು. ಇದೀಗ ಹೊಸ ಮಾಹಿತಿ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಅವರು ಈ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಈ ಸುದ್ದಿ ನಿಜ ಅಂತಾದರೆ ರಜನಿಕಾಂತ್‌ ಹಾಗೂ ನಾರ್ಜುನ ಅವರು 32 ವರ್ಷಗಳ ಬಳಿಕ ತೆರೆ ಮೇಲೆ ನೋಡಬಹುದು. ನಾಗಾರ್ಜುನಗೆ ಮಲ್ಟಿಸ್ಟಾರರ್ ಸಿನಿಮಾ ಹೊಸದೇನು ಅಲ್ಲ. ಇತ್ತೀಚೆಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜತೆ ಕಾಣಿಸಿಕೊಂಡಿದ್ದರು. ಈಗ ಧನುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಊಪಿರಿ’ ಸಿನಿಮಾದಲ್ಲೂ ಕಾರ್ತಿ ಜೊತೆ ನಾಗಾರ್ಜುನ ಜತೆ ನಟಿಸಿದ್ದರು. ಹೀಗಾಗಿ ರಜನಿಕಾಂತ್ ಜತೆ ನಟಿಸಬಹುದು ಎಂದು ಹೇಳಲಾಗುತ್ತಿದೆ.

ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್‌ ಫಾಸಿಲ್‌ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಇಬ್ಬರು ಜತೆಯಾಗಿ ನಟಿಸುತ್ತಿರುವ ಫೋಟೊ ಇಂಟರ್‌ನೆಟ್‌ನಲ್ಲಿ ಹರಿದಾಡಿ ವೈರಲ್‌ ಆಗಿತ್ತು. ವಿಶೇಷ ಎಂದರೆ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ರಾಣಾ ದಗ್ಗುಬಾಟಿ, ಮಲಯಾಳಂ ನಟಿ ಮಂಜು ವಾಯಿಯರ್‌, ರಿತಿಕಾ ಸಿಂಗ್‌, ದುಶಾರಾ ವಿಜಯನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತ ಸಂಯೋಜಿಸಲಿದ್ದಾರೆ.

ಇದನ್ನೂ ಓದಿ: Actor Rajinikanth: ಬಾಲಿವುಡ್‌ ಖ್ಯಾತ ನಿರ್ಮಾಪಕರೊಂದಿಗೆ ಕೈ ಜೋಡಿಸಿದ ರಜನಿಕಾಂತ್‌; ತಲೈವಾ ಹೊಸ ಚಿತ್ರ ಯಾವಾಗ?

ಕಥೆ ಏನು?

‘ವೆಟ್ಟೈಯನ್’ ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಿರುವನಂತಪುರಂ, ತಿರುನೆಲ್ವೇಲಿ ಮತ್ತು ಮುಂಬೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈಗಾಗಲೇ ಚಿತ್ರೀಕರಣ ನಡೆದಿದೆ. ತಮಿಳು ಜತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಟೀಸರ್‌ ಬಿಡುಗಡೆ

ಇತ್ತೀಚೆಗೆ ‘ವೆಟ್ಟೈಯನ್’ ಚಿತ್ರದ ಟೀಸರ್‌ ಬಿಡುಗಡೆಯಾಗಿತ್ತು. ಲಾಠಿ ಹಿಡಿದು ರಜನಿಕಾಂತ್‌ ಆಗಮಿಸುವ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಜತೆಗೆ ರಜನಿಕಾಂತ್ ತಮ್ಮದೇ ಶೈಲಿಯಲ್ಲಿ ಕನ್ನಡಕ ಹಾಕಿಕೊಳ್ಳುತ್ತ ಡೈಲಾಗ್‌ ಹೇಳುವ ದೃಶ್ಯ, ಕೈ ಹಿಂಬದಿಯಲ್ಲಿಟ್ಟುಕೊಂಡು ಚಿಟಿಕೆ ಹೊಡೆಯುವ ಸೀನ್‌ ಗಮನ ಸೆಳೆದಿತ್ತು. ‌ʼವೆಟ್ಟೈಯನ್‌ʼ ಎಂದರೆ ಕನ್ನಡದಲ್ಲಿ ಬೇಟೆಗಾರ ಎಂದರ್ಥ. ಈ ಸಿನಿಮಾದಲ್ಲಿ ರಜನಿಕಾಂತ್‌ ಅಪರಾಧಿಗಳ ಬೇಟೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಆಗಲೇ ಪ್ರೇಕ್ಷಕರು ಊಹಿಸಿದ್ದರು.

Continue Reading

ಕಾಲಿವುಡ್

Nayanthara-Vignesh Shivan: ಪತಿಯ ಕಂಡು ನಯನತಾರಾ ನಾಚಿ ನೀರಾಗಿದ್ದೇಕೆ!

Nayanthara-Vignesh Shivan: ನಯನತಾರಾ ಇತ್ತೀಚೆಗೆ ಕುಟುಂಬದ ಜತೆಗೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆಗಾಗ ಅವಳಿ ಮಕ್ಕಳ ಜತೆ ಸಮಯ ಕಳೆಯುತ್ತಿರುವ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಪತಿ ಜತೆ ಕ್ಯೂಟ್‌ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ನಯನತಾರಾ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ನಟಿ ನಯನತಾರಾ (Actress Nayanthara ) ಮತ್ತು ನಿವಿನ್ ಪೌಲ್‌ ಮುಂಬರುವ ಮಲಯಾಳಂ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’ಗ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

VISTARANEWS.COM


on

Nayanthara-Vignesh Shivan latest pictures
Koo

ನಟಿ ನಯನತಾರಾ ಪತಿ ವಿಘ್ನೇಶ್ ಶಿವನ್ (Nayanthara-Vignesh Shivan) ಅವರೊಂದಿಗೆ ಕೆಲವು ಸುಂದರವಾದ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ದಂಪತಿ ಟ್ರೆಡಿಷನಲ್‌ ಲುಕ್‌ನಲ್ಲಿ ಕ್ಯೂಟ್‌ ಆಗಿ ಕಂಡಿದ್ದಾರೆ.

ನಯನತಾರಾ ಲ್ಯಾವೆಂಡರ್ ಬಣ್ಣದ ಸೀರೆ ಮತ್ತು ವಿಘ್ನೇಶ್ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ನಯನತಾರಾ ಒಂದು ಫೋಟೊದಲ್ಲಿ ಪತಿ ಕಂಡು ನಾಚಿ ನೀರಾಗಿದ್ದಾರೆ.

ವಿಘ್ನೇಶ್ ಅವರು ಕೂಡ ತಮ್ಮ ಇನ್‌ಸ್ಟಾದಲ್ಲಿ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಜೋಡಿ ಉದ್ಯಾನವನದಲ್ಲಿ ಸುಂದರ ಸಮಯ ಕಳೆದಿದೆ.

ಇದನ್ನೂ ಓದಿ: Lady Superstar: ಖ್ಯಾತ ನಿರ್ದೇಶಕರ ಚಿತ್ರದಲ್ಲಿ ನಟಿಸ್ತಾರಾ ನಯನತಾರಾ?

ನಿರ್ದೇಶಕ ಶಂಕರ್ ಅವರ ಪುತ್ರಿ ಐಶ್ವರ್ಯಾ ಮತ್ತು ತರುಣ್ ಕಾರ್ತಿಕೇಯನ್ ಅವರ ಮದುವೆಗೆಂದು ನಯನತಾರಾ ದಂಪತಿ ರೆಡಿಯಾಗಿರುವ ಫೋಟೊಗಳಿವು.

ಈ ಅದ್ಧೂರಿ ವಿವಾಹಕ್ಕೆ ರಜನಿಕಾಂತ್, ಕಮಲ್ ಹಾಸನ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Continue Reading

ಕಾಲಿವುಡ್

Lok Sabha Election 2024: ಚೆನ್ನೈನಲ್ಲಿ ಮತ ಚಲಾಯಿಸಿದ ರಜನಿಕಾಂತ್​, ಧನುಷ್, ಕಮಲ್ ಹಾಸನ್, ವಿಜಯ್‌!

Lok Sabha Election 2024: ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಮತಗಟ್ಟೆಯಿಂದ ನಿರ್ಗಮಿಸುವಾಗ ಅಭಿಮಾನಿಗಳು ಅವರನ್ನು ಗುಂಪುಗೂಡಿದ್ದಾರೆ. ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಮತ ಚಲಾಯಿಸಿದರು.

VISTARANEWS.COM


on

Lok Sabha Election 2024 Rajinikanth Kamal Haasan Dhanush Vijay Sethupathi vote in Chennai
Koo

ಚೆನ್ನೈ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಇಂದು (ಏ.19) ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (voting) ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು. ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಮತ್ತು ಕಮಲ್ ಹಾಸನ್ (Kamal Haasan) ಏಪ್ರಿಲ್ 19 ರಂದು ಚೆನ್ನೈನ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ನಟ ಧನುಷ್ ಅವರು ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಮತ ಚಲಾಯಿಸಿದರು. ವಿಜಯ್ ಸೇತುಪತಿ ಕಿಲ್ಪಾಕ್‌ನ (Vijay Sethupathi vote in Chennai) ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಮತಗಟ್ಟೆಯಿಂದ ನಿರ್ಗಮಿಸುವಾಗ ಅಭಿಮಾನಿಗಳು ಅವರನ್ನು ಗುಂಪುಗೂಡಿದ್ದಾರೆ. ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಮತ ಚಲಾಯಿಸಿದರು.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಂದು ಮತದಾನ ಮಾಡಲಿರುವ ರಾಜ್ಯಗಳು

ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 2 ಕ್ಷೇತ್ರಗಳು
ಅರುಣಾಚಲ ಪ್ರದೇಶದ 2 ಕ್ಷೇತ್ರಗಳು
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.

ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.

Continue Reading
Advertisement
Ethnic Collection
ಫ್ಯಾಷನ್16 mins ago

Ethnic Collection: ‘ಹೀರಾಮಂಡಿ’ ವೆಬ್ ಸೀರಿಸ್‌ ಪ್ರೇರಿತ ಸಾಂಪ್ರದಾಯಿಕ ಫ್ಯಾಷನ್ ಕಲೆಕ್ಷನ್‌ ಬಿಡುಗಡೆ ಮಾಡಿದ ಅಜಿಯೋ

Self Harming in Bengaluru
ಬೆಂಗಳೂರು18 mins ago

Self Harming : ಬೆಂಗಳೂರಲ್ಲಿ ರೈಲಿಗೆ ಸಿಲುಕಿ ಮೂವರು ಸಾವು; ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

Voting awareness by the newly married couple at the reception
ಕರ್ನಾಟಕ23 mins ago

Lok Sabha Election 2024: ಆರತಕ್ಷತೆಯಲ್ಲಿ ವಧು-ವರರಿಂದ ಮತದಾನ ಜಾಗೃತಿ

Tamannaah Bhatia and Sanjay Dutt
ಕ್ರೀಡೆ29 mins ago

IPL Streaming Case: ಏನಿದು ಐಪಿಎಲ್​ ಲೈವ್ ಸ್ಟ್ರೀಮಿಂಗ್ ಕೇಸ್​; ತಮನ್ನಾ,ಜಾಕ್ವೆಲಿನ್, ಸಂಜಯ್​ ದತ್​ಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದೇಕೆ?

World Malaria Day
ಆರೋಗ್ಯ1 hour ago

World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

supreme court wealth redistribution
ಪ್ರಮುಖ ಸುದ್ದಿ1 hour ago

ವಿಸ್ತಾರ Explainer: Wealth redistribution: ನಿಮ್ಮ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾ? ಸುಪ್ರೀಂ ಕೋರ್ಟ್ ಮುಂದಿದೆ ಕೇಸ್‌

Lok Sabha Election 2024 BJP rejects Sam Pitroda statement
Lok Sabha Election 20241 hour ago

Lok Sabha Election 2024: ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು; ‘ಕೈ’ಗೆ ಇಕ್ಕಟ್ಟು, ಬಿಜೆಪಿಗೆ ಅಸ್ತ್ರ

Anant-Radhika wedding
ವಾಣಿಜ್ಯ2 hours ago

Anant- Radhika  wedding: 1,500 ಕೋಟಿ ರೂ. ದಾಟಲಿದೆ ಅಂಬಾನಿ ಮಗನ ಮದುವೆ ಖರ್ಚು!

Ballari Lok Sabha constituency Congress candidate e Tukaram election campaign at apmc market
ಬಳ್ಳಾರಿ2 hours ago

Lok Sabha Election 2024: ತಾಯಿ ನಾನು ನಿಮ್ಮ ಮಗನಂತೆ, ಮತ ನೀಡಿ ಗೆಲ್ಲಿಸಿ ಎಂದ ಈ. ತುಕಾರಾಂ

Rahul Gandhi
ದೇಶ2 hours ago

Rahul Gandhi: ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಖಚಿತ; ಸ್ಮೃತಿ ಇರಾನಿಗೆ ಕೈ ನಾಯಕ ಸವಾಲು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ3 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20244 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌