Ozone day | ಸದ್ಯದ ತುರ್ತು ಹೊಣೆ, ಓಝೋನ್ ರಕ್ಷಣೆ - Vistara News

ಪರಿಸರ

Ozone day | ಸದ್ಯದ ತುರ್ತು ಹೊಣೆ, ಓಝೋನ್ ರಕ್ಷಣೆ

ತೂತು ತೂತಾಗುತ್ತಿರುವ ಓಝೋನ್‌ ಪದರದಿಂದ ಚರ್ಮದ ಕ್ಯಾನ್ಸರ್‌ ಹೆಚ್ಚಳವಾಗುವುದು ಗ್ಯಾರಂಟಿ. ಇದರಿಂದ ಪಾರಾಗಲು ಓಝೋನ್‌ ಪದರ ರಕ್ಷಣೆಯೊಂದೇ ದಾರಿ. ಇಂದು ಜಾಗತಿಕ ಓಝೋನ್‌ ಸಂರಕ್ಷಣಾ ದಿನ.

VISTARANEWS.COM


on

ozone layer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
someshwara

– ಸೋಮೇಶ್ವರ ಗುರುಮಠ

ಪ್ರತಿವರ್ವೂ ಸೆಪ್ಟೆಂಬರ್ ೧೬ರಂದು “ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನʼʼವನ್ನು ಆಚರಿಸಲಾಗುತ್ತದೆ. ೧೯೮೭ರ ಸೆಪ್ಟೆಂಬರ್ ೧೬ರಂದು ಕೆನಡಾದ ಮಾಂಟ್ರಿಯಲ್ ನಗರದಲ್ಲಿ ಓಝೋನ್ ಪದರ ಉಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ನಡುವೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ಒಪ್ಪಂದದ ನೆನಪಿಗಾಗಿ ವಿಶ್ವಸಂಸ್ಥೆಯು ೧೯೯೪ರಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲು ನಿರ್ಧರಿಸಿತು. ಅಂತೆಯೇ ಈ ವರ್ಷದ ಓಝೋನ್ ದಿನದ ಘೋಷವಾಕ್ಯ “ಭೂಮಿಯ ಮೇಲಿನ ಜೀವಸಂರಕ್ಷಣೆಗಾಗಿ ಜಾಗತಿಕ ಸಹಕಾರ” ಎಂಬುದಾಗಿದೆ.

ಈ “ಓಝೋನ್” ಎಂದರೇನು? ಓಝೋನ್, ಆಮ್ಲಜನಕದ ಒಂದು ರೂಪ. ಓಝೋನಿನ ಒಂದು ಅಣುವಿನಲ್ಲಿ ಆಮ್ಲಜನಕದ ಮೂರು ಪರಮಾಣುಗಳು ಬಂಧಗೊಂಡಿರುತ್ತವೆ. ಆಮ್ಲಜನಕದ ಒಂದು ಅಣುವಿನಲ್ಲಿ, ಆಮ್ಲಜನಕದ ಎರಡು ಪರಮಾಣುಗಳು ಬಂಧಗೊಂಡಿರುತ್ತವೆ. ಭೂಮಿಯ ಮೇಲಿನ ಹವಾಗೋಲವನ್ನು ದಾಟಿ ಹೋದಂತೆಲ್ಲ ಶಾಖ ಕಡಿಮೆಯಾಗುತ್ತ ಹೋಗುತ್ತದೆ. ಗಾಳಿ ವಿರಳವಾಗುತ್ತಿರುತ್ತದೆ. ಇದನ್ನು ʻಸ್ತರಗೋಲ’ ಎನ್ನಲಾಗುತ್ತದೆ. ಈ ಸ್ತರಗೋಲದ ಮೇಲ್ಭಾಗವೇ ಓಝೋನ್ ಪದರವಾಗಿದೆ. ಇದು ಸಾಮಾನ್ಯವಾಗಿ ೧೫ರಿಂದ ೩೦ ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಅಂದಾಜು ೨ರಿಂದ ೫ ಮಿ.ಮೀ. ದಪ್ಪದ ಹೊದಿಕೆಯಾದ ಓಝೋನ್ ತುಂಬಾ ಅಸ್ಥಿರವಾದದ್ದು. ಏಕೆಂದರೆ, ಸೂರ‍್ಯನ ಕಿರಣಗಳಲ್ಲಿ ಕಂಡುಬರುವ ೨೪೦ ನ್ಯಾನೋ ಮೀಟರ್‌ಗಳಿಗಿಂತ ಹೆಚ್ಚು ಅಲೆಯುದ್ದವನ್ನು ಹೊಂದಿರುವ ಯು.ವಿ. ಕಿರಣಗಳನ್ನು ಹೀರಿಕೊಂಡು ಆಮ್ಲಜನಕದ ಅಣು ಮತ್ತು ಪರಮಾಣುಗಳಾಗಿ ಒಡೆಯುತ್ತದೆ. ಈ ಆಮ್ಲಜನಕದ ಅಣು ಮತ್ತು ಪರಮಾಣುಗಳು ೨೪೦ ನ್ಯಾನೋ ಮೀಟರ್‌ಗಳಿಗಿಂತ ಕಡಿಮೆ ಅಲೆಯುದ್ದದ ಯು.ವಿ. ಕಿರಣಗಳನ್ನ ಹೀರಿಕೊಂಡು ‘ಓಝೋನ್’ ಅಣುವಾಗಿ ಪರಿವರ್ತನೆಯಾಗುತ್ತದೆ. ಈ ರೀತಿ ಆಮ್ಲಜನಕ ಮತ್ತು ಓಝೋನ್ ಸಂತುಲನ ಸ್ಥಿತಿಯನ್ನು ಹೊಂದಿರುತ್ತವೆ. ಭೂಮಿಯ ಮೇಲಿನ ಜೀವ ಜಂತುಗಳನ್ನು ಅತ್ಯಂತ ಅಪಾಯಕಾರಿಯಾಗಿರುವ ಯು.ವಿ. ಕಿರಣಗಳಿಂದ ರಕ್ಷಿಸುತ್ತದೆ.

ನಮಗೆಲ್ಲ ಅರಿವಿರುವಂತೆ ಈ ಯು.ವಿ. ಕಿರಣಗಳು ಭೂಮಿಗೆ ಬಿದ್ದುದೇ ಆದರೆ ಬೆಳೆಗಳು ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತವೆ. ಮಾನವನಿಗೆ ಚರ್ಮದ ಕ್ಯಾನ್ಸರ್, ದೃಷ್ಟಿಯ ದೋಷ ಕೂಡ ಉಂಟಾಗಬಹುದು. ಅಂತೆಯೇ ಈ ಓಝೋನ್ ಪದರವಿಲ್ಲದಿದ್ದರೆ ಭೂಮಿಯು ಮತ್ತಷ್ಟು ತಾಪಮಾನದಿಂದ ಕುದಿಯಬೇಕಾಗುತ್ತದೆ. ಓಝೋನ್ ಪದರಕ್ಕೆ ಆಗುತ್ತಿರುವ ಹಾನಿಯು ಸಂಪೂರ್ಣವಾಗಿ ಮಾನವನಿಂದಲೇ ಆಗುತ್ತಿದೆ. ಇಂಗಾಲದ ಡೈ ಆಕ್ಸೈಡ್ ವಿಸರ್ಜನೆ, ಪಳೆಯುಳಿಕೆ ಇಂಧನಗಳನ್ನು ಸುಡುವುದು, ಸಾರಜನಕದ ಆಕ್ಸೈಡ್ ರಚನೆಯಾಗುವಂತೆ ಮಾಡುವುದು, ರೆಫ್ರಿಜರೇಟರ್, ರೋಗ ನಿರೋಧಕ ಔಷಧಿಗಳು, ಶುಚಿಕಾರಕಗಳು, ಪ್ಲಾಸ್ಟಿಕ್ ನೊರೆಯಲ್ಲಿ ಪ್ರಚೋದಕಗಳನ್ನಾಗಿ ಕ್ಲೋರೋಫ್ಲೋರೋ ಇಂಗಾಲದ ಸಂಯೋಜನಾ ಅಂಶಗಳನ್ನು ಬಳಸುವುದು ಇತ್ಯಾದಿಗಳು ಕಾರಣವಾಗುತ್ತಿವೆ.

ಇನ್ನು ಕ್ಲೋರೋಫ್ಲೋರೋಗಳು ಭೂಮಿಯ ಮೇಲೆ ಹಾನಿ ಅಥವಾ ವಿಷಕಾರಿಯಾಗಿರುವುದಿಲ್ಲ, ಬದಲಿಗೆ ಇದು ವಾಯುಮಂಡಲ ಸೇರಿದಾಗ ಅಲ್ಲಿ ಸಂಚಯಗೊಂಡು ಓಝೋನ್ ಪದರದ ನಾಶಕ್ಕೆ ನಾಂದಿ ಹಾಡುತ್ತವೆ. ಆಶ್ಚರ್ಯವೆಂಬಂತೆ ಇವುಗಳು ಭೂಮಿಯಿಂದ ವಾಯುಮಂಡಲ ತಲುಪಲು ವರ್ಷಗಳನ್ನು ತೆಗೆದುಕೊಳ್ಳುತ್ತವಾದರೂ, ಅಲ್ಲಿ ಸೇರಿದ ನಂತರ ಓಝೋನ್ ಪದರವನ್ನು ರಂಧ್ರಗೊಳಿಸಿಬಿಡುತ್ತವೆ. ಈ ಪ್ರಕ್ರಿಯೆ ಹೇಗಿರುತ್ತದೆಂದರೆ – ವಾಯುಮಂಡಲ ಸೇರಿದ ಕ್ಲೋರೋಫ್ಲೋರೋಗಳು ಅದೃಶ್ಯ ಕಿರಣಗಳ ಬಲವಾದ ವಿಕಿರಣಕ್ಕೆ ಒಳಗಾಗಿ, ಒಡೆದು ಪ್ರತ್ಯೇಕವಾಗುತ್ತವೆ. ಆಗ ಬಿಡುಗಡೆಯಾಗುವ ಕ್ಲೋರಿನ್ ಅನಿಲವು ಓಝೋನ್ ಕಣದ ಮೇಲೆ ದಾಳಿ ಮಾಡಿ, ಅಲ್ಲಿರುವ ಮೂರು ಆಮ್ಲಜನಕ ಅಣುಗಳಲ್ಲಿ ಒಂದನ್ನು ದೂರ ತಳ್ಳುತ್ತದೆ. ಇದರ ಫಲವಾಗಿ ಕ್ಲೋರಿನ್ ಮಾನಾಕ್ಸೈಡ್ ಕಣ ರಚಿತವಾಗುತ್ತದೆ. ಓಝೋನ್ ಪದರ ನಾಶವಾಗುತ್ತದೆ.

ಇದನ್ನೂ ಓದಿ | ಸಕ್ಕರೆ ಕಡಿಮೆ ತಿನ್ನಿ, ಪರಿಸರ ಉಳಿಸಿ ಎನ್ನುತ್ತಿದ್ದಾರೆ ಸ್ಪೇನ್​​ ವಿಜ್ಞಾನಿಗಳು !; ಅದು ಹೇಗೆ ಸಾಧ್ಯ?

ಈ ರೀತಿಯ ನಾಶ ಪ್ರಕ್ರಿಯೆ ಮುಂದುವರಿದಂತೆಲ್ಲ, ಮುಕ್ತವಾಗಿರುವ ಒಂದು ಆಮ್ಲಜನಕದ ಕಣವು ಹೊಸದಾಗಿ ರಚಿತವಾದ ಕ್ಲೋರಿನ್ ಮಾನಾಕ್ಸೈಡ್ ಜೊತೆ ಸೇರಿ ಮತ್ತೊಂದು ಆಮ್ಲಜನಕದ ಕಣವನ್ನು ದೂರ ತಳ್ಳುತ್ತದೆ. ಇದರ ಪರಿಣಾಮವಾಗಿ ಕ್ಲೋರಿನ್ ಕಣ ಸ್ವತಂತ್ರವಾಗಿ ಚಕ್ರಸ್ವರೂಪವನ್ನು ಪುನರ್ ಪ್ರಾರಂಭಿಸುತ್ತದೆ. ಇದರಿಂದ ಓಝೋನ್ ಕಣಗಳು ಹೆಚ್ಚಿನ ಪ್ರಮಾಣದಲ್ಲಿ ಶಿಥಿಲವಾಗಿ ಪದರವು ಬರಿದಾಗುತ್ತದೆ.

ಇನ್ನು ಕ್ಲೋರಿಕ್ ಮತ್ತು ಬ್ರೋಮಿನ್ ಒಳಗೊಂಡ ಕ್ಲೋರೋಫ್ಲೋರೋ ಕಾರ್ಬನ್ ಹಾಗೂ ಹ್ಯಾಲೋಜನ್ ರಾಸಾಯನಿಕಗಳು ಓಝೋನ್ ಪದರ ನಾಶಕ್ಕೆ ಕಾರಣವಾಗುವಂಥವು. ನಾವು ನಿತ್ಯ ಬಳಸುವ ರೆಫ್ರಿಜೆರೇಟರ್ ಮತ್ತು ಹವಾನಿಯಂತ್ರಕಗಳಲ್ಲಿ ಮುಖ್ಯವಾಗಿ ಕ್ಲೋರೋಫ್ಲೋರೋ ಕಾರ್ಬನ್ನನ್ನು ಬಳಸಲಾಗುತ್ತದೆ. ಫ್ರಿಜ್ ಹಳೆಯದಾಯಿತೆಂದು ಎಸೆದಾಗಲೂ ಅದರಿಂದ ಕ್ಲೋರೋಫ್ಲೋರೋ ಕಾರ್ಬನ್ ಉತ್ಪತ್ತಿಯಾಗಿ ಓಝೋನ್ ಪದರ ನಾಶಕ್ಕೆ ಕಾರಣವಾಗುತ್ತದೆ. ದುರಂತವೆಂದರೆ ಒಂದು ಕ್ಲೋರೋಫ್ಲೋರೋ ಕಾರ್ಬನ್ ಅಣು ೧೦೦ ವರ್ಷಗಳ ಕಾಲ ಭಿನ್ನವಾಗದೆ ಹಾಗೇ ಉಳಿಯಬಲ್ಲದ್ದಾಗಿದೆಯಲ್ಲದೇ, ಇಂಥ ಒಂದು ಕಣ ೨೦ ಸಾವಿರ ಓಝೋನ್ ಅಣುಗಳನ್ನು ನಾಶಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಜೊತೆಗೆ ಓಝೋನ್ ನಾಶ ತಾಪಮಾನ ಏರಿಕೆಗೂ ಮತ್ತು ʻಹಸಿರುಮನೆ’ ಪರಿಣಾಮಕ್ಕೂ ಕಾರಣವಾಗಬಲ್ಲದು.

ಹಿಂದೊಮ್ಮೆ ೧೯೭೪ರಲ್ಲಿ ಅಂಟಾರ್ಟಿಕಾ ಪ್ರದೇಶದ ಮೇಲೆ ಓಝೋನ್ ಪದರದ ರಂಧ್ರವು ಕಾಣಿಸಿಕೊಂಡಾಗಿನಿಂದ ಇದರ ಕುರಿತ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಸರಹದ್ದನ್ನು ಮೀರಿದ ಪರಿಸರ ಮಾಲಿನ್ಯ ನಿಯಂತ್ರಿಸುವ ಬಗ್ಗೆ ೧೯೭೪ರಲ್ಲಿ ಜರುಗಿದ ಹೆಲ್ಸಿಂಕಿ ಸಮಾವೇಶದಲ್ಲಿ ಬಾಲ್ಟಿಕ್ ಸಮುದ್ರಕ್ಕೆ ತ್ಯಾಜ್ಯ ವಸ್ತುಗಳನ್ನು ಎಸೆದಿರುವ ಬಗ್ಗೆ ಹಲವಾರು ರಾಷ್ಟ್ರಗಳು ಒಪ್ಪಂದಕ್ಕೆ ಬಂದಿದ್ದವು. ಜೊತೆಗೆ ೧೯೮೯ರಲ್ಲಿ ಜರುಗಿದ್ದ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಅಮೆರಿಕವು ವಿಶ್ವದ ೨೪ ಕೈಗಾರಿಕಾ ಪ್ರಧಾನ ರಾಷ್ಟ್ರಗಳೊಡನೆ ಓಝೋನ್ ಪದರ ಬರಿದಾಗಲು ಕಾರಣವಾಗುವ ಅನಿಲ ವಿಸರ್ಜನಾ ನಿಯಂತ್ರಣಕ್ಕೆ ಒಪ್ಪಿಗೆ ಸೂಚಿಸಿತ್ತಂತೆ. ಆದರೆ ಇಂದಿನ ಸ್ಥಿತಿಗತಿಗಳೇ ಇನ್ನೂ ವಿಭಿನ್ನ ರೀತಿಯಲ್ಲಿ ಪ್ರಕೃತಿ ವಿನಾಶದ ಬಗ್ಗೆ ಮುನ್ಸೂಚನೆ ನೀಡುತ್ತಿವೆ. ವಿಶ್ವದ ದೊಡ್ಡಣ್ಣ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ʻಹವಾಮಾನ ವೈಪರೀತ್ಯ’ ಸಮಾವೇಶಗಳು ಫಲ ನೀಡುತ್ತಿಲ್ಲ, ಭಾರತೀಯ ಸರ್ಕಾರದ ಪರಿಸರ ಸಂರಕ್ಷಣಾ ನೀತಿಗಳು ಜನಮನವನ್ನು ತಲುಪಿಲ್ಲ ಎಂಬುದಕ್ಕೆ ಅವರ ಅಸಹಕಾರಗಳೇ ನಿದರ್ಶನವಾಗುತ್ತಿವೆ. ಇಂತಿರುವಾಗ ಈಗ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ನಮ್ಮ ಜೀವಪದರಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಹೀಗಾಗಿ ಸದ್ಯದ ತುರ್ತು ಹೊಣೆ ಓಝೋನ್ ರಕ್ಷಣೆ ಎನ್ನುವುದನ್ನು ಮರೆಯುವಂತಿಲ್ಲ.

ಇದನ್ನೂ ಓದಿ | ಪರಿಸರದಿಂದ ನಾವೆಲ್ಲರೂ ಬಹಳಷ್ಟು ಪಾಠ ಕಲಿಯಬಹುದು; ಶಿವಾನಂದ ಕಳವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೃಷಿ

Plastic Mulching: ವಿಸ್ತಾರ ಗ್ರಾಮ ದನಿ: ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್‌ ಬಳಕೆಯ ಸೈಡ್‌ ಎಫೆಕ್ಟ್‌ ಎಷ್ಟೊಂದು!

ಕೃಷಿ ಭೂಮಿಯಲ್ಲಿ ಇತ್ತೀಚೆಗೆ (plastic mulching) ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್‌ ಹೊದಿಕೆ) ಬಳಕೆ ಹೆಚ್ಚುತ್ತಿದೆ. ಇದರ ಸಾಧಕ ಬಾಧಕಗಳೇನು ಎಂಬ ಬಗ್ಗೆ ಪ್ರಗತಿಪರ ಕೃಷಿಕ, ಲೇಖಕ ಅರವಿಂದ ಸಿಗದಾಳ್ ಅವರು ಇಲ್ಲಿ ಅವಲೋಕನ ನಡೆಸಿದ್ದಾರೆ.

VISTARANEWS.COM


on

Plastic Mulching
Koo
-ಅರವಿಂದ ಸಿಗದಾಳ್, ಮೇಲುಕೊಪ್ಪ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ (ಪ್ಲಾಸ್ಟಿಕ್ ಹೊದಿಕೆ) ಬಗ್ಗೆ ಚರ್ಚೆ (plastic mulching) ನಡೆಯುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್ ಬಳಕೆಯೂ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಅನುಕೂಲ ಮತ್ತು ತೊಂದರೆ ಎರಡೂ ಇವೆ. ಈ ಹಿನ್ನೆಲೆಯಲ್ಲಿ ಚರ್ಚೆಗೆ ಪೂರಕವಾಗಿ ಒಂದಿಷ್ಟು ಸಂಗ್ರಹಿತ ವಿಷಯಗಳು ಇಲ್ಲಿ ಕೊಟ್ಟಿದ್ದೇನೆ.

ಪ್ಲಾಸ್ಟಿಕ್ ಮಲ್ಚಿಂಗ್ ಅನುಕೂಲಗಳು

  1. ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಅದನ್ನು ಹೆಚ್ಚು ಕಾಲ ಕಾಯ್ದುಕೊಳ್ಳುತ್ತದೆ.
  2. ತೇವಾಂಶ ಮತ್ತು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ.
  3. ಸಸ್ಯ ಪೋಷಕಾಂಶಗಳ ನಷ್ಟವನ್ನು ಮಿತಿಗೊಳಿಸುತ್ತದೆ, ಇಳುವರಿ ಹೆಚ್ಚಾಗುತ್ತದೆ.
  4. ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಅನುಕೂಲ.
  5. ಕಳೆಗಳ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಕಳೆಗಳು ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಸೂರ್ಯನ ಬೆಳಕನ್ನು ಪಡೆಯುವುದನ್ನು ಪ್ಲಾಸ್ಟಿಕ್ ಮಲ್ಚಿಂಗ್ ತಡೆಯುತ್ತದೆ.

ತೊಂದರೆಗಳು ಸಾಕಷ್ಟಿವೆ

ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಎಷ್ಟು ಅನುಕೂಲಗಳಿವೆಯೋ ಅದಕ್ಕಿಂತ ಹತ್ತು ಪಟ್ಟು, ನೂರು ಪಟ್ಟು ತೊಂದರೆಗಳಿವೆ. ಅನುಕೂಲಗಳು ತಕ್ಷಣಕ್ಕೆ ಸಿಗುವಂತವುಗಳಾದರೆ, ತೊಂದರೆಗಳು ದೀರ್ಘಕಾಲಿಕ.
ಪ್ಲಾಸ್ಟಿಕ್ ಸವಕಳಿಯಾಗುವುದಕ್ಕೆ, ನಾಶವಾಗುವುದಕ್ಕೆ ಶತಮಾನಗಳೇಬೇಕು. ಆದರೆ, ಭೂಮಿಗೆ ತಾಗಿಸಿದ ದಿನದಿಂದಲೇ ನಿಧಾನವಾಗಿ ಸವಕಳಿಯ ಕ್ರಿಯೆ ಆರಂಭವಾಗುತ್ತದೆ. ವಿಭಜನೆಗೊಂಡ ಪ್ಲಾಸ್ಟಿಕ್‌ನ ಕಣಗಳು ಮಣ್ಣಿನ ಫಲವತ್ತತೆಗೆ ಭಯಾನಕ ವಿಷವೇ ಸರಿ. ಸ್ನಾನದ ಮನೆಯಲ್ಲಿ ಸೋಪಿನ ಒಂದು ಸಣ್ಣ ಹನಿ ತೇವವಿದ್ದ ಜಾಗದಲ್ಲಿ ಬಿದ್ದಾಗ ಹೇಗೆ ವಿಸ್ತರಿಸುತ್ತದೋ, ಅದೇ ರೀತಿ ಪ್ಲಾಸ್ಟಿಕ್‌ನ ಕಣಗಳು ಭೂಮಿಯಲ್ಲಿ ಬಿದ್ದಾಗ ಮಣ್ಣಿನಲ್ಲಿ ಅದು ವಿಸ್ತರಿಸುತ್ತಾ… ಮಣ್ಣು ವಿಷವಾಗುತ್ತಾ ಹೋಗುತ್ತದೆ. ಹೌದು, ಈ ಕ್ರಿಯೆ ತುಂಬ ನಿಧಾನವಾದ ಗತಿಯಲ್ಲಿ ನೆಡೆಯುವುದು. ಒಂದು ರೀತಿಯಲ್ಲಿ ಸ್ಲೋ ಪಾಯಿಸನ್. ಕೆಲವು ಸಮಯದವರೆಗೆ ಇರುವೆ, ಏಡಿ, ಎರೆಹುಳುಗಳು ಮತ್ತು ಅನೇಕ ಸೂಕ್ಷ್ಮ ಜೀವಿಗಳು ಈ ಪ್ಲಾಸ್ಟಿಕ್‌ನ್ನು ಆಶ್ರಯವಾಗಿಸಿಕೊಂಡು ಬದುಕಬಹುದು. ಆದರೆ ಯಾವಾಗ ಪ್ಲಾಸ್ಟಿಕ್‌ನ ಸವಕಳಿ ನಿಧಾನವಾಗಿ ಹೆಚ್ಚಾಗುತ್ತದೋ… ಆಗ ಯಾವ ಜೀವ ಜಂತುಗಳೂ, ಸೂಕ್ಷ್ಮ ಜೀವಿಗಳೂ ಅಲ್ಲಿ ಬದುಕಲಾರವು. ಪೆಟ್ರೋಲಿಯಂ ಪ್ರಾಡಕ್ಟ್‌ನ ಉತ್ಪನ್ನವಾದ ಪ್ಲಾಸ್ಟಿಕ್ ರಾಸಾಯನಿಕ ಕಣಗಳು ಮಣ್ಣಿನ ಫಲವತ್ತತೆಯನ್ನು ಶಾಶ್ವತವಾಗಿ ನಾಶಮಾಡುತ್ತದೆ. ಮಣ್ಣನ್ನು ಬರಡಾಗಿಸುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ಮಲ್ಚಿಂಗ್ ತೊಂದರೆಗಳು ಹಲವಾರಿವೆ.

Disadvantages of plastic mulching

ಪ್ಲಾಸ್ಟಿಕ್ ಮಲ್ಚಿಂಗ್ ಅನಾನುಕೂಲಗಳು

ಪ್ಲಾಸ್ಟಿಕ್ ಮಲ್ಚ್ ಮಣ್ಣನ್ನು ಪರಿಣಾಮಕಾರಿಯಾಗಿ ಬೆಚ್ಚಗಾಗಿಸುತ್ತದೆ, ಮಣ್ಣಿನ ತಾಪಮಾನವನ್ನು ಬದಲಾಯಿಸುವುದು ಎಲ್ಲಾ ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಬೆಳೆಗಳು ಮಣ್ಣಿನ ತಾಪಮಾನಕ್ಕೆ ಸಾಕಷ್ಟು ಸಂವೇದನಾಶೀಲವಾಗಿರುತ್ತವೆ ಆದ್ದರಿಂದ ಮಣ್ಣಿನ ಬೆಚ್ಚಗಾಗುವಿಕೆಯೂ ಅನೈಸರ್ಗಿಕವಾದಾಗ ಅದೂ ಅಪಾಯಕಾರಿಯೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಪೆಟ್ರೋಲಿಯಂ-ಆಧಾರಿತ ವಸ್ತುಗಳಿಂದ ಪಡೆಯಲಾಗಿದೆ, ಇದು ಉತ್ಪಾದನೆಗೆ ದುಬಾರಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಕಾರಕವಾಗಿದೆ.

ಸೂರ್ಯನ ಬೆಳಕು-ಶಾಖ, ಗಾಳಿ, ನೀರು ಅಥವಾ ಇನ್ಯಾವುದೋ ಕಾಸ್ಮಿಕ್ ಎನರ್ಜಿಗಳಿಂದ ಮಣ್ಣಿನಲ್ಲಿ ಸಹಜವಾಗಿ ನೆಡೆಯುವ “ವಿಧಿ’ವತ್ತಾದ ರಾಸಾಯನಿಕ ಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದ ಕಡಿಮೆ ಆಗಬಹುದು ಅಥವಾ ತಟಸ್ಥವಾಗಬಹುದು ಮತ್ತು ಪರಿಣಾಮವಾಗಿ ಮಣ್ಣಿನ ಮೇಲೆ ದೀರ್ಘಕಾಲದ ಅಪಾಯ ಉಂಟಾಗಬಹುದು. ಮಣ್ಣಿನ ಸಹಜ ಸಂವೇದನಾಶೀಲತೆ ಅಥವಾ ನೈಸರ್ಗಿಕವಾಗಿ ಮಣ್ಣಿನಲ್ಲಿ ನೆಡೆಯುವ ಸಹಜವಾದ ರಾಸಾಯನಿಕ ಪ್ರಕ್ರಿಯೆಗಳು ಪ್ಲಾಸ್ಟಿಕ್ ಮಲ್ಚಿನಿಂದಾಗಿ ಅತಿ ವೇಗವನ್ನು ಪಡೆದು ವಿಪರೀತವಾಗಿ ಋಣಾತ್ಮಕ ಪರಿಣಾಮ ಉಂಟಾಗಬಹುದು.

Crops with Plastic Mulch

ಮಲ್ಷಿಂಗ್ ಮಾಡುವ ಪ್ಲಾಸ್ಟಿಕ್ ವೇಸ್ಟ್‌ಗಳು ಮರು ಬಳಕೆ ಮಾಡಲು ಸೂಕ್ತವಲ್ಲದ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ 3-4 ವರ್ಷಗಳ ನಂತರ ಮರುಬಳಕೆಯಾಗದ ಒಂದು ಬೃಹತ್ ತ್ಯಾಜ್ಯವಾಗುವ ಈ ಪ್ಲಾಸ್ಟಿಕ್ ಭೂಮಿಗೆ ಒಂದು ಶಾಶ್ವತ ಅಪಾಯಕಾರಿ ವಸ್ತು. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ನ್ನು ಕೃಷಿಯಲ್ಲಿ ಬಳಸುವುದು ಪ್ರಪಂಚದ-ಪರಿಸರದ ದೃಷ್ಟಿಯಿಂದ ಒಳ್ಳೆಯದಲ್ಲ. ಬಳಸಿ, ತ್ಯಾಜ್ಯವಾದ ಪ್ಲಾಸ್ಟಿಕ್‌ನ್ನು ವಿಲೇವಾರಿ ಮಾಡುವುದು ಕಷ್ಟ.

ಮಣ್ಣಿಗೆ ಹೆಚ್ಚಿನ ಆರ್ದ್ರತೆಯು ಯಾವಾಗಲೂ ಉತ್ತಮವಲ್ಲ, ಮತ್ತು ಅತಿಯಾದ ಆರ್ದ್ರತೆಯು ಭಯಾನಕ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ತೇವಾಂಶವು ನೀರು ಮತ್ತು ಬೆಳೆಗಳನ್ನು ಮುಳುಗಿಸಬಹುದು.
ಆರ್ದ್ರ ಬೆಳವಣಿಗೆಯ ಪರಿಸ್ಥಿತಿಗಳು ಮಾಲಿನ್ಯ ಮತ್ತು ರೋಗಕ್ಕೆ ಕಾರಣವಾಗಬಹುದು. ಅಡಿಕೆ ತೋಟದಲ್ಲಿನ ಕೊಳೆ, ಎಲೆಚುಕ್ಕಿ ಇತ್ಯಾದಿಗಳ ಫಂಗಸ್‌ಗಳ ಉತ್ಪತ್ತಿಗೂ ಪ್ಲಾಸ್ಟಿಕ್ ಮಲ್ಚಿಂಗ್ ಕಾರಣವಾಗಬಹುದು.

Plastic mulching cropland

ಮಲ್ಚಿಂಗ್ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣ, ದೀರ್ಘಬಾಳಿಕೆಗಳಿಗಾಗಿ ಬಳಸುವ ಕೆಮಿಕಲ್‌ಗಳು ಮಣ್ಣಿಗೆ ವಿಷಕಾರಿಗಳಾಗಿರಬಹುದು. ಜತೆಗೆ ಗೊಬ್ಬರವಾಗಿ ಬಳಸುತ್ತಿರುವ, ಪೆಸ್ಟಿಸೈಡ್, ಇನ್ಸೆಕ್ಟಿಸೈಡ್, ಫಂಗಿಸೈಡ್ ಕೆಮಿಕಲ್‌ಗಳೊಂದಿಗೆ ಮಲ್ಚಿಂಗ್ ಪ್ಲಾಸ್ಟಿಕ್ ಕೆಮಿಕಲ್‌ಗಳು ಸೇರಿ ಗದ್ದೆ ತೋಟಗಳು ಮತ್ತಷ್ಟು ಮಾಲಿನ್ಯವಾಗಬಹುದು. ಪರೋಕ್ಷವಾಗಿ ತಿನ್ನುವ ಆಹಾರ ಪದಾರ್ಥಗಳು ಮತ್ತಷ್ಟು ವಿಷವಾಗಬಹುದು.

ಪ್ಲಾಸ್ಟಿಕ್ ಮಲ್ಚಿಂಗ್ ಸಾವಯವ ಪದ್ದತಿಗೆ ವಿರುದ್ದವಾದ ಕ್ರಮ. ಪ್ಲಾಸ್ಟಿಕ್ ಮಲ್ಚಿಂಗ್‌ನಿಂದ ಇರುವೆ, ಚಿಕ್ಳಿಯಿರುವೆ, ಏಡಿ, ಎರೆಹುಳುಗಳಿಗೆ ದೀರ್ಘಾವದಿಯಲ್ಲಿ ಅಪಾಯಕಾರಿ ಆಗಬಹುದು. ಮಣ್ಣಿನ ಅಗತ್ಯ ಸೂಕ್ಷ್ಮ ಜೀವಿಗಳೂ ನಾಶವಾಗಬಹುದು.

ಸಾವಯವ ತ್ಯಾಜ್ಯಗಳು ಮಣ್ಣಿನ ಜೊತೆ ಬೆರೆಯುವುದಕ್ಕೆ, ಗೊಬ್ಬರವಾಗಿ ಮಣ್ಣಿನ ಜೊತೆ ಸಂಯೋಜನೆಗೊಳ್ಳುವುದಕ್ಕೆ, ಸಾವಯವ ತ್ಯಾಜ್ಯಗಳಲ್ಲಿನ ಕಾರ್ಬನ್, ಪೋಶಕಾಂಶಗಳು ಮಣ್ಣಿನಲ್ಲಿ ಮಿಳಿತವಾಗುವುದಕ್ಕೆ ಪ್ಲಾಸ್ಟಿಕ್ ಮಲ್ಚಿಂಗ್‌ನಲ್ಲಿರುವ ಕೆಮಿಕಲ್ ಮತ್ತು ನೀರು, ಗಾಳಿ ಮತ್ತು ಉಷ್ಣತೆಗಳನ್ನು ವ್ಯತ್ಯಾಸಗೊಳಿಸುವ ಶಕ್ತಿ ತಡೆ ಒಡ್ಡಬಹುದು.

Plastic Mulching - Using Plastic Mulches and Drip Irrigation for Vegetable Production

ಪ್ಲಾಸ್ಟಿಕ್‌ ಕಡಿಮೆ ಮಾಡಲೇಬೇಕಿದೆ

ಹಾಗಾಗಿ ಪ್ಲಾಸ್ಟಿಕ್ ಬಗ್ಗೆ ನಾವು ಅಂತರ ಕಾಪಾಡಿಕೊಳ್ಳಬೇಕಾದ, ಜಾಗೃತಿಗೊಳ್ಳಬೇಕಾದ ಒಂದು ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪರಿಸರ, ಹವಾಮಾನ ವೈಪರೀತ್ಯ, ಪ್ರತೀ ಮನೆಯಲ್ಲೂ ಷೋಕೇಸ್‌ನ ಒಂದು ಭಾಗ ಪುಟ್ಟ ಮೆಡಿಕಲ್ ಶಾಪ್ ಆಗುತ್ತಿರುವ ಅನಿವಾರ್ಯತೆಯ ನಮ್ಮ ಅನಾರೋಗ್ಯಗಳನ್ನು ಗಮನಿಸುತ್ತ ಪ್ಲಾಸ್ಟಿಕ್ ಬಗ್ಗೆ, ಅದನ್ನು ನಮ್ಮ ಜೀವನದಲ್ಲಿ ಗ್ರಾಮ್ ಗಳಷ್ಟಾದರೂ ಕಮ್ಮಿ ಮಾಡುವ ಬಗ್ಗೆ ಯೋಚಿಸಬೇಕಾಗಿದೆ.:
ಪ್ಲಾಸ್ಟಿಕ್ ಅತಿ ಬಳಕೆಯಿಂದಾಗಿ ಹವಾಮಾನ ಬಿಕ್ಕಟ್ಟನ್ನು ಹೆಚ್ಚು ತೀವ್ರಗೊಳಿಸುತ್ತಿದ್ದೇವೆ. ಅಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಅವುಗಳ ತ್ಯಾಜ್ಯದಿಂದ ನಮ್ಮ ವಾತಾವರಣದಲ್ಲಿ ವಿಷದ ಸಾಂದ್ರತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ಪರಿಣಾಮ ನಿತ್ಯ ಅನಾರೋಗ್ಯರಾಗುತ್ತಿದ್ದೇವೆ, ಬೇಗನೆ ಸಾವಿನ ಕಡೆಗೆ ವಾಲುತ್ತಿದ್ದೇವೆ.
ಪ್ಲಾಸ್ಟಿಕ್ ಎಂಬ ‘ಭಸ್ಮಾಸುರ”ನ ಸುಡುವ ಕರವನ್ನು ನಮ್ಮ ತಲೆ ಮೇಲೆ ನಾವೇ ಇಟ್ಟುಕೊಳ್ಳುತ್ತಿದ್ದೇವೆ. ಆ ಭಸ್ಮಾಸುರ ಕರಗಳು ಪರಿಸರವನ್ನು, ನಮ್ಮನ್ನೂ ಸೇರಿದಂತೆ ಜೀವ ಸಂಕುಲಗಳ ಆರೋಗ್ಯವನ್ನು, ಆಯಸ್ಸನ್ನು ಸುಡುತ್ತಿವೆ. ಸುಡುವುದನ್ನು ತಡೆಯುವ ಯಾವ ಮಲ್ಚಿಂಗ್ ಹೊದಿಕೆಗಳೂ ನಮ್ಮ ತಲೆ ಮೇಲೆ ಇಲ್ಲ!

Continue Reading

ಪರಿಸರ

World Water Day: ನಮ್ಮ ಜೀವ ನದಿಗಳಿಗೆ ಮರುಜೀವ ನೀಡೋಣ; ಶ್ರೀ ಶ್ರೀ ರವಿಶಂಕರ್ ವಿಶೇಷ ಲೇಖನ

ಭಾರತವನ್ನು ಜಲದಿಂದ (World Water Day) ಸಮೃದ್ಧಿಯಾಗಿಸುವುದು ಮೂಲಭೂತ ಹಂತದಲ್ಲಿನ ಕೆಲಸ. ನೀರಿನ ಲಭ್ಯತೆಯು ಈ ಜಗತ್ತಿನ ಶಾಂತಿ ಹಾಗೂ ಸ್ಥಿರತೆಗಾಗಿ ಅತ್ಯವಶ್ಯಕ. ವಿಶ್ವ ನೀರಿನ ದಿನದ ಹಿನ್ನೆಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಬರೆದಿರುವ ಸ್ಫೂರ್ತಿದಾಯಕ ಲೇಖನ ಇಲ್ಲಿದೆ.

VISTARANEWS.COM


on

World Water Day
Koo
Ravi Shankar Guruji
-ಗುರುದೇವ್ ಶ್ರೀ ಶ್ರೀ ರವಿಶಂಕರ್

ಈ ವರ್ಷದ ವಿಶ್ವ ನೀರಿನ ದಿನದ (World Water Day) ಘೋಷಣಾ ವಾಕ್ಯ: “ಶಾಂತಿಗಾಗಿ ನೀರು”. ನೀರು ನಮ್ಮ ಜೀವನದೊಡನೆ ಆಳವಾಗಿ ಸಂಬಂಧಪಟ್ಟಿದೆ. ಸಂಸ್ಕೃತದಲ್ಲಿ ನೀರನ್ನು “ಆಪಃ” ಎಂದು ಕರೆಯುತ್ತಾರೆ. ಪ್ರೀತಿಪಾತ್ರರಾದವರು, ಆಪ್ತರು ಎಂಬ ಅರ್ಥವನ್ನೂ ಈ ಪದ ಹೊಂದಿದೆ. ಎಲ್ಲಾ ಪ್ರಾಚೀನ ನಾಗರಿಕತೆಗಳು ನದಿಗಳ ದಡದಲ್ಲಿ – ಭಾರತದ ಗಂಗಾ ಅಥವಾ ಯಮುನ ದಡದಲ್ಲಿ, ಈಜಿಪ್ಟ್‌ನ ನೈಲ್ ನದಿಯ ದಡದಲ್ಲಿ, ಅಮೆರಿಕದ ಅಮೆಜಾನ್ ನದಿಯ ದಡದಲ್ಲಿ ಸಮೃದ್ಧವಾಗಿದ್ದವು. ಭಾರತದ ನಾಗರಿಕತೆಯು ನದಿಗಳೊಡನೆ ಆಳವಾದ ಸಾಂಸ್ಕೃತಿಕ ಬಂಧವನ್ನು ಹೊಂದಿದೆ. ಭಗವಾನ್ ಶ್ರೀ ರಾಮನು ತನ್ನ ಜೀವನವನ್ನು ಸರಯು ನದಿಯ ದಡದಲ್ಲಿ ಕಳೆದ. ಗಂಗೆಯು ಭಗವಾನ್ ಶಿವನ ಜಟೆಯಿಂದ ಹೊರಹೊಮ್ಮಿದ್ದಾಳೆ ಎಂಬಂತೆ ಚಿತ್ರೀಕರಿಸಲಾಗಿದೆ ಮತ್ತು ಅನೇಕ ಸಾವಿರ ವರ್ಷಗಳಿಂದ ಯೋಗಿಗಳು ಗಂಗಾ ನದಿಯ ತೀರದಲ್ಲಿ ಧ್ಯಾನ ಮಾಡುತಲಿದ್ದಾರೆ. ಗಂಗೆಯು ಜ್ಞಾನದ ಸೂಚಕವಾದರೆ, ಯಮುನೆಯು ಭಕ್ತಿಯ ಸೂಚಕ. ಗೋಪಿಯರಿಗೆ ಭಗವಾನ್ ಕೃಷ್ಣನ ಮೇಲಿನ ಭಕ್ತಿ ಮತ್ತು ಪ್ರೇಮವು ಅರಳಿದ್ದು ಯಮುನ ನದಿಯ ದಡದಲ್ಲಿ. ನಮ್ಮ ನದಿಗಳಿಗೆ ಮರುಜೀವ ನೀಡಲು ನಮ್ಮಿಂದ ಏನೆಲ್ಲಾ ಸಾಧ್ಯವೋ, ಅದನ್ನೆಲ್ಲಾ ಮಾಡಬೇಕು. ಇಲ್ಲಿ ಧರ್ಮವು ಬಲು ಮುಖ್ಯ ಪಾತ್ರವನ್ನು ವಹಿಸಬಲ್ಲದು. ಜನರು ಧಾರ್ಮಿಕವಾಗಿ ನಡೆದುಕೊಂಡು, ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳುವಂತೆ- ನದಿಗಳನ್ನು, ಪರ್ವತಗಳನ್ನು, ಕಾಡುಗಳನ್ನು ಮತ್ತು ಇತರ ಜಲದ ಸಂಪನ್ಮೂಲಗಳನ್ನು ಸಂರಕ್ಷಿಸುವಂತೆ ಧರ್ಮವು ಪ್ರೇರೇಪಣೆಯನ್ನು ನೀಡಬಲ್ಲದು. ಅತೀ ಉತ್ತಮವಾದ ನಿಯಮಗಳನ್ನು ನಾವು ಹೊಂದಬಹುದಾದರೂ, ಆ ನಿಯಮಗಳನ್ನು ಜಾರಿಗೆ ತರಲು, ಮೂಲಭೂತ ಹಂತದ ಜನರಲ್ಲಿ. ಇದರ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಧಾರ್ಮಿಕ ಸಂಸ್ಥೆಗಳು ಇಲ್ಲಿ ಬಲು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಲ್ಲವು.

Blue Earth world with dripping water on two hand at wait on abstract black background.

ಜಲ ಸಮೃದ್ಧಿಯ ಗುರಿ

ಭಾರತವನ್ನು ಜಲದಿಂದ ಸಮೃದ್ಧಿಯಾಗಿಸುವುದು ಮೂಲಭೂತ ಹಂತದಲ್ಲಿನ ಕೆಲಸ. ನೀರಿನ ಲಭ್ಯತೆಯು ಈ ಜಗತ್ತಿನ ಶಾಂತಿ ಹಾಗೂ ಸ್ಥಿರತೆಗಾಗಿ ಅತ್ಯವಶ್ಯಕ. ಭಾರತಲ್ಲಿ ನಾವು ಈ ನಿಟ್ಟಿನಲ್ಲೇ ಕೆಲಸ ಮಾಡಿದ್ದೇವೆ. ಮೂಲಭೂತ ಹಂತದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸುಮಾರು 70 ನದಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದೆವು. ಈ ನದಿಗಳು ಬಹುತೇಕ ಮಟ್ಟಿಗೆ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಇದ್ದವು. ಒಣಗಿದ ನದಿಪಾತ್ರಗಳ ಶೋಷಣೆ ಮತ್ತು ಅತಿಕ್ರಮಣವು ಸರ್ವೇಸಾಮಾನ್ಯವಾಗಿತ್ತು. ವಿಪರೀತ ನೀರು ಪ್ರವಾಹದ ರೂಪದಲ್ಲಿ ಕೊಚ್ಚಿಹೋಗುತ್ತಿತ್ತು ಅಥವಾ ಅನೇಕ ತಿಂಗಳ ಬರ ಇರುತ್ತಿತ್ತು. ರೈತರಿಗೆ ಬೆಳೆಗಳನ್ನು ಬೆಳೆಯಲಾಗದೆ ಅಪಾರ ನಷ್ಟವನ್ನು ಅನುಭವಿಸುತ್ತಿದ್ದರು. ದಿನೇದಿನೆ ತಮ್ಮ ಪ್ರಾಣಗಳನ್ನು ತೆಗೆದುಕೊಳ್ಳುತ್ತಿದ್ದ ರೈತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಬಾಹ್ಯದಲ್ಲಿ ಬದಲಾವಣೆಗಳನ್ನು ಕಾಣುವ ಮೊದಲು, ಆ ಬದಲಾವಣೆಯು ನಮ್ಮ ಆಂತರ್ಯದಿಂದ ಬರಬೇಕು. ಹೃದಯವು ತೆರೆದಿದ್ದಾಗ ಸೇವೆ ಮಾಡದ ಹೊರತು ಬೇರೆ ಯಾವ ಆಯ್ಕೆಯೂ ಇರುವುದಿಲ್ಲ. ಈ ರೀತಿಯಾಗಿ ನಮ್ಮ ಸ್ವಯಂಸೇವಕರ ಜಾಲವು ಅನೇಕ ವರ್ಷಗಳಿಂದ ಬೆಳೆಯುತ್ತಾ ಬಂದಿದೆ. ತಮ್ಮ ಆಂತರ್ಯದಲ್ಲಿ ಅವರು ಅನುಭವಿಸಿದ ಸಂತೋಷದಿಂದ ಸ್ಫೂರ್ತಿ ಪಡೆದ ಅವರೆಲ್ಲರೂ, ಇತರರಲ್ಲೂ ಅದೇ ಸಂತೋಷವನ್ನು ತರಲು ನಿರ್ಧರಿಸಿದರು. ಮೂಲಭೂತ ಹಂತದ ಗ್ರಾಮಸ್ಥರ ಬಳಿಗೆ ತಲುಪಿ, ಅವರಿಗೆಲ್ಲರಿಗೂ ಸ್ಫೂರ್ತಿ ನೀಡಿ, ಅವರಿಗೆ ಧ್ಯಾನ, ಉಸಿರಾಟ, ಯೋಗ ಮತ್ತಿನ್ನಿತರ ಅಭ್ಯಾಸಗಳನ್ನು ಅವರಿಗೆ ಕಲಿಸಿ, ಅವರ ಆಂತರ್ಯದಿಂದ ಅವರು ಸಂತೋಷವಾಗಿ, ಬಲಿಷ್ಠರಾಗಿರುವಂತೆ ಮಾಡಿದರು. ಅವರೊಡನೆ ಕೆಲಸ ಮಾಡಿ ನೂರಾರು ಪುನರ್ಜಲೀಕರಣ ಬಾವಿಗಳನ್ನು ನಿರ್ಮಿಸಿದರು. ಇದರಿಂದ ಬರುವ ಮಳೆನೀರು ಭೂಮಿಯೊಳಗೆ, ಆ ಬಾವಿಗಳ ಮೂಲಕ ಹೊಕ್ಕುವಂತಾಯಿತು. ಕಾಡುಗಳ ಪುನಸ್ಥಾಪನಾ ಕಾರ್ಯವನ್ನು ಆರಂಭಿಸಿದೆವು. ಭೂಮಿಯಿಂದ ತೀವ್ರವಾಗಿ ನೀರನ್ನು ಹೀರಿಕೊಳ್ಳುವಂತಹ ಮರಗಳಾದ ಅಕೇಷಿಯ ಮರಗಳ ಬದಲಿಗೆ ಸ್ಥಳೀಯ ವೃಕ್ಷಗಳಾದ ಮಾವು, ಆಲದ ಮರ, ಹಾಗೂ ಇತರ ವೃಕ್ಷಗಳನ್ನು ನದಿ ಪಾತ್ರಗಳಲ್ಲಿ ನೆಡಲು ಆರಂಭಿಸಿದೆವು.
ಭೂ ಸಮೀಕ್ಷೆ ನಡೆಸಿದ ನಂತರ, ಪುನರ್ಜಲೀಕರಣ ಬಾವಿಗಳನ್ನು ನಿರ್ಮಿಸಿದ ನಂತರ, ಸರಿಯಾದ ಜಾತಿಯ ಮರಗಳನ್ನು ನೆಟ್ಟಿದ್ದರಿಂದ, ಅನೇಕ ಸಾವಿರ ನೀರಿನ ಕೊಳವೆಗಳು ಮರುಜೀವ ಪಡೆದುಕೊಂಡದ್ದು ಪವಾಡಸದೃಶವಾಗಿತ್ತು. ಇಂದು 70ಕ್ಕೂ ಹೆಚ್ಚು ನದಿಗಳು, ಐದು ರಾಜ್ಯಗಳಲ್ಲಿ ವರ್ಷವಿಡೀ ಹರಿಯುತ್ತವೆ. ಹಕ್ಕಿಗಳು ಮತ್ತೆ ಬರಲಾರಂಭಿಸಿವೆ, ಮೋಡಗಳೂ ಸಹ.

Water pouring in woman's hands. World Water Day concept.

ವಿದರ್ಭ ರೈತರಿಂದ ಧನ್ಯವಾದ

ಕಳೆದ ಮೇ ತಿಂಗಳಲ್ಲಿ ವಿದರ್ಭ ಪ್ರದೇಶದ ಸುಮಾರು ಸಾವಿರ ರೈತರು ನಮ್ಮ ಬೆಂಗಳೂರಿನ ಆಶ್ರಮಕ್ಕೆ ವಿಮಾನದಲ್ಲಿ ಬಂದು, ನಮ್ಮ ಸ್ವಯಂಸೇವಕರು ತಂದ ಪರಿವರ್ತನೆಗೆ ಧನ್ಯವಾದಗಳನ್ನು ಅರ್ಪಿಸಿದರು. ವಿದರ್ಭ ಪ್ರದೇಶದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಗಳು ನಡೆಯುತ್ತಿತ್ತು. ಹಿಂದಿಗಿಂತಲೂ ಈಗ ಅವರೆಲ್ಲರೂ ನಾಲ್ಕು ಪಟ್ಟು ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ 19,500 ಗ್ರಾಮಗಳು ಇದರ ಲಾಭವನ್ನು ಪಡೆದುಕೊಂಡಿವೆ.
ಒಬ್ಬರು ಒತ್ತಡದಿಂದ ಮುಕ್ತವಾಗಿ, ಸ್ಪಷ್ಟವಾದಾಗ, ಅವರು ಸೂಕ್ಷ್ಮತೆಯನ್ನುಳ್ಳ ವ್ಯಕ್ತಿಗಳಾಗುತ್ತಾರೆ, ಅಕ್ಕರೆಯನ್ನು, ಆದರವನ್ನು, ಬದ್ಧತೆಯನ್ನು ತೋರುತ್ತಾರೆ. ಜನರ ಮಾನಸಿಕ ಆರೋಗ್ಯ ಬಗ್ಗೆ ಗಮನವನ್ನು ನೀಡಿ, ಅವರಿಗೆ ಸ್ಫೂರ್ತಿ ನೀಡಿ, ಸೇವೆ ಮಾಡಲು ಧಾರ್ಮಿಕ ಸಂಸ್ಥೆಗಳು ಪ್ರೇರೇಪಿಸಿದರೆ, ನಮ್ಮ ನದಿಗಳಿಗೆ ಮತ್ತೆ ಮರುಜೀವ ತರಬಹುದು. ಇದರಿಂದ ಸಹಜವಾಗಿಯೇ ಸಮೃದ್ಧಿ, ಸ್ಥಿರತೆ ಮತ್ತು ಶಾಂತಿಯು ಎಲ್ಲೆಡೆಯೂ ತುಂಬಿ ತುಳುಕುತ್ತಿರುತ್ತದೆ.

Continue Reading

ಪರಿಸರ

International Forests Day: ಕಾಡುಗಳ ನಾಶದಿಂದ ವಿಶ್ವ ಸಾಗುತ್ತಿದೆ ಅಳಿವಿನ ಅಂಚಿಗೆ!

ʻಕಾಲ ಕೆಟ್ಟೋಗಿದೆʼ ಎಂದು ಗೊಣಗುವ ನಮಗೆ ಅದನ್ನು ಹಾಳು ಮಾಡಿಕೊಂಡಿರುವುದು ಯಾರೆಂಬ ತಿಳಿವಳಿಕೆ ಬೇಡವೇ? ಬರ, ಅತಿವೃಷ್ಟಿ, ಪ್ರವಾಹ, ಚಂಡಮಾರುತಗಳು, ಭೂಕುಸಿತ ಮುಂತಾದ ನೈಸರ್ಗಿಕ ಪ್ರಕೋಪಗಳಿಗೆ ಮುಖ್ಯ ಕಾರಣ ಅರಣ್ಯಗಳು ಎದ್ವಾತದ್ವಾ ನಾಶವಾಗುತ್ತಿರುವುದು. ಇದೇ ಹಿನ್ನೆಲೆಯಲ್ಲಿ, ಮಾರ್ಚ್‌ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಅರಣ್ಯ ದಿನದ (International Forests Day) ಮಹತ್ವವನ್ನು ಅರಿತುಕೊಳ್ಳಬೇಕಿದೆ.

VISTARANEWS.COM


on

International Forests Day
Koo

ಕಾಡುಗಳೇಕೆ ಬೇಕು (International Forests Day) ಎಂದು ಕೇಳಿದರೆ ಒಂದನೇ ತರಗತಿಯ ಮಗುವೂ ಶಾಲೆಯಲ್ಲಿ ತನಗೆ ಕಲಿಸಿದ ಉತ್ತರವನ್ನು ಹೇಳೀತು. ಹಾಗಾದರೆ ಎಲ್ಲರೂ ಬಾಲ್ಯದಿಂದಲೇ ಕಾಡುಗಳ ಪ್ರಾಮುಖ್ಯತೆಯ ಬಗ್ಗೆ ಅರಿತವರಲ್ಲವೇ? ಕಲಿತಿದ್ದು ಹೌದಾದರೂ ಆಚರಣೆಯಲ್ಲಿ ಇಲ್ಲದಿರುವುದೇ ತೊಡಕಾಗಿದೆ. ಹಾಗಾಗಿಯೇ ಎಲ್ಲರೂ ತಿಳಿದಿರುವ ವಿಷಯದ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಒದಗಿದೆ. ಇದೇ ಹಿನ್ನೆಲೆಯಲ್ಲಿ, ಮಾರ್ಚ್‌ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಅರಣ್ಯ ದಿನದ ಮಹತ್ವವನ್ನು ತಿಳಿದುಕೊಳ್ಳಬೇಕಿದೆ.
ಅರಣ್ಯಗಳು, ಬೆಟ್ಟಗಳು, ಕುರುಚಲು ಕಾಡುಗಳು ಮುಂತಾದ ಎಲ್ಲ ರೀತಿಯ ಕಾನನಗಳ ಮಹತ್ವವನ್ನು ತಿಳಿದುಕೊಳ್ಳುವುದನ್ನು ಪ್ರೋತ್ಸಾಹಿಸುವುದು ಅಂತಾರಾಷ್ಟ್ರೀಯ ಅರಣ್ಯ ದಿನದ ಮುಖ್ಯ ಉದ್ದೇಶ. ಭೂಮಿಯ ಆರೋಗ್ಯ ಕಾಪಾಡುವಲ್ಲಿ, ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಅರಣ್ಯಗಳ ಪಾತ್ರ ಎಷ್ಟು ಮಹತ್ತರವಾದದ್ದು, ವನಗಳನ್ನು ನಿರ್ನಾಮ ಮಾಡುತ್ತಿರುವುದರಿಂದ ವಿಶ್ವವೇ ಹೇಗೆ ಅಳಿವಿನಂಚಿಗೆ ಸಾಗುತ್ತಿದೆ ಎಂಬಂಥ ಹಲವು ವಿಷಯಗಳ ಬಗ್ಗೆ ಜಾಗೃತಿ ಮಾಡಿಸುವುದು ಈ ದಿನದ ಧ್ಯೇಯ. ಹಾಗಾಗಿ ಕಾಡುಗಳು ನಮಗೇಕೆ ಬೇಕು ಎನ್ನುವುದಕ್ಕೆ ಒಂದಿಷ್ಟು ಮುಖ್ಯ ಕಾರಣಗಳಿವು:

Tropical Rain Forest

ಎಲ್ಲರಿಗೂ ಮನೆ

ಭೂಮಿಯ ಮೇಲಿರುವ ಶೇ. 80ರಷ್ಟು ಚರಾಚರ ಪ್ರಪಂಚಕ್ಕೆ ಮನೆಯೆನಿಸಿರುವುದು- ಕಾಡುಗಳು. ಅದರಲ್ಲೂ ಅರ್ಧಕ್ಕಿಂತ ಹೆಚ್ಚು ಜೀವಿಗಳು ಬದುಕುತ್ತಿರುವುದು ನಿಬಿಡವಾದ ಮಳೆಕಾಡುಗಳಲ್ಲಿ. 60 ಸಾವಿರಕ್ಕೂ ಹೆಚ್ಚಿನ ಪ್ರಭೇದದ ಮರಗಳನ್ನು ಇವು ಹೊಂದಿವೆ. 1.6 ಶತಕೋಟಿಗೂ ಹೆಚ್ಚಿನ ಜನ ತಮ್ಮ ಬದುಕಿಗಾಗಿ ಅರಣ್ಯಗಳನ್ನೇ ಆಶ್ರಯಿಸಿದ್ದಾರೆ. ನೀರು, ಆಹಾರ, ಆಶ್ರಯ, ಔಷಧ, ಇಂಧನ, ಉತ್ಪನ್ನಗಳೆಲ್ಲ ಇದರಲ್ಲಿ ಸೇರಿವೆ. ಪ್ರಾಣವಾಯುವಿಗಾಗಿ ಎಲ್ಲರೂ ಆಶ್ರಯಿಸಿರುವುದು ಮರಗಳನ್ನೇ ಎನ್ನುವುದನ್ನು ಲೆಕ್ಕಕ್ಕೆ ಸೇರಿಸಿದರೆ ಅಂಕಿ-ಅಂಶಗಳು ಬೇರೆಯೇ ಆಗುತ್ತವೆ! ಇಷ್ಟಾಗಿಯೂ, ವರ್ಷಂಪ್ರತಿ 13 ದಶಲಕ್ಷ ಹೆಕ್ಟೇರ್‌ ಅರಣ್ಯ ನಾಶವಾಗುತ್ತಿದೆ. ಅಂದಾಜಿಗೆ ಹೇಳುವುದಾರೆ, ಇಂಗ್ಲೆಂಡ್‌ನ ಭೂಭಾಗದಷ್ಟು ಅರಣ್ಯ ಪ್ರತಿವರ್ಷ ನಶಿಸುತ್ತಿದೆ.

ಹವಾಮಾನ

ʻಕಾಲ ಕೆಟ್ಟೋಗಿದೆʼ ಎಂದು ಗೊಣಗುವ ನಮಗೆ ಅದನ್ನು ಹಾಳು ಮಾಡಿಕೊಂಡಿರುವುದು ಯಾರೆಂಬ ತಿಳಿವಳಿಕೆ ಇಲ್ಲದಿದ್ದರೆ ಹೇಗೆ? ಬರ, ಅತಿವೃಷ್ಟಿ, ಪ್ರವಾಹ, ಚಂಡಮಾರುತಗಳು, ಭೂಕುಸಿತ ಮುಂತಾದ ನೈಸರ್ಗಿಕ ಪ್ರಕೋಪಗಳಿಗೆ ಮುಖ್ಯ ಕಾರಣ ಅರಣ್ಯಗಳು ಎದ್ವಾತದ್ವಾ ನಾಶವಾಗುತ್ತಿರುವುದು. ಮರಗಳ ಬೇರು ಭೂಮಿಯಾಳಕ್ಕೆ ಇಳಿಯುತ್ತಿದ್ದಂತೆ ಭೂಕುಸಿತವಾಗದಂತೆ ತಡೆಯುತ್ತದೆ; ಮಳೆ ನೀರನ್ನು ಹೀರಿಕೊಂಡು ಜಲಕ್ಷಾಮ ಕಾಡದಂತೆ ನೋಡಿಕೊಳ್ಳುತ್ತದೆ. ವಾತಾವರಣದಲ್ಲಿ ತೇವವನ್ನು ಕಾಪಿಟ್ಟುಕೊಂಡು ಬಿಸಿಯೇರದಂತೆ ತಡೆಯುತ್ತದೆ. ಅರಣ್ಯಗಳ ಆರೋಗ್ಯ ಚೆನ್ನಾಗಿದ್ದಂತೆ, ಇಡೀ ಪರಿಸರ ವ್ಯವಸ್ಥೆ ಹಾಗೂ ಭೂಮಿಯ ಆರೋಗ್ಯವೂ ಚೆನ್ನಾಗಿರುತ್ತದೆ.

forest new

ನಿಸರ್ಗವೆಂಬ ವೈದ್ಯ

ಇವು ಭೂಮಿಯ ಆರೋಗ್ಯ ಕಾಪಾಡುವುದಕ್ಕೆ ಮಾತ್ರವಲ್ಲ, ನಮಗೆ ಮದ್ದರೆಯುವುದಕ್ಕೂ ಬೇಕು. ಅರಣ್ಯಗಳೆಂದರೆ ಔಷಧೀಯ ಸಸ್ಯಗಳಿಗೆ ಆಶ್ರಯತಾಣಗಳು. ಮಳೆ ಕಾಡುಗಳ ವಿಷಯದಲ್ಲಿ ಹೇಳುವುದಾದರೆ, ಈವರೆಗೆ ವೈಜ್ಞಾನಿಕವಾಗಿ ಕೇವಲ ಶೇ.1ರಷ್ಟು ಸಸ್ಯಗಳ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆದಿದೆ. ಉಳಿದಂತೆ ನಿತ್ಯಹರಿದ್ವರ್ಣ ಕಾಡುಗಳ ಔಷಧೀಯ ಸಾಧ್ಯತೆಗಳ ಬಗ್ಗೆ ಸಂಶೋಧನೆಯ ಸಾಧ್ಯತೆ ಅಪಾರವಾಗಿದೆ. ಆಗಿರುವ ಅಲ್ಪ ಶೋಧನೆಯನ್ನೇ ಆಧರಿಸಿ, ಶೇ.25ರಷ್ಟು ಔಷಧ ಕಂಪನಿಗಳು ತಮ್ಮ ಉತ್ಪನ್ನಗಳು ಸಿದ್ಧ ಮಾಡುತ್ತಿವೆ.

ಖರ್ಚಿಲ್ಲದ ಹವಾನಿಯಂತ್ರಣ

ಭೂಮಿಯ ಮೇಲಿನ ಕಾಡುಗಳ ಪ್ರಮಾಣ ಕಡಿಮೆಯಾಗುತ್ತಿರುವಂತೆ ಭೂಮಿಯ ತಾಪಮಾನ ಏರುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಅವೆಲ್ಲ ನಮಗೆ ತಾಗುವುದಿಲ್ಲ ಎಂದೇ ಈಗಲೂ ನಾವು ಭಾವಿಸುತ್ತೇವೆ. ಇನ್ನೂ ಸರಳವಾಗಿ ಹೇಳುವುದಿದ್ದರೆ, ನಗರ ಪ್ರದೇಶದಲ್ಲಿ ಇರುವವರಿಗೆ ಕಾಂಕ್ರೀಟ್‌ ಕಾಡಿನಿಂದ ನಿಜವಾದ ಕಾಡಿಗೆ ಬಂದರೆ ತಾಪವಾನದಲ್ಲಿ ಆಗುವ ವ್ಯತ್ಯಾಸ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ನಗರಗಳಲ್ಲೂ ವಿಸ್ತಾರವಾದ ಬಡಾವಣೆಗಳು, ರಸ್ತೆಯಂಚಿನಲ್ಲಿ ಸಾಕಷ್ಟು ಮರಗಳು, ಬಹಳಷ್ಟು ಹಸಿರು ಪಾರ್ಕುಗಳಿರುವ ಭಾಗಗಳಲ್ಲಿನ ಉಷ್ಣತೆಯು ಇಕ್ಕಟ್ಟಾದ ಹಸಿರಿಲ್ಲದ ವಸತಿ ಪ್ರದೇಶಗಳಿಗಿಂತ ಕಡಿಮೆಯೇ ಅನುಭವಕ್ಕೆ ಬರುತ್ತದೆ. ಹಸಿರಾಗಿರುವ ಪ್ರದೇಶಗಳಲ್ಲಿ ಕೃತಕ ಹವಾನಿಯಂತ್ರಣಗಳ ವೆಚ್ಚವನ್ನು ಶೇ. 50ರಿಂದ 80ರವರೆಗೆ ತಗ್ಗಿಸಬಹುದು.

Forest

ಬದುಕು ಸ್ವಸ್ಥ

ಹೆಚ್ಚು ಗಿಡಮರಗಳಿದ್ದ ಪ್ರದೇಶಗಳಲ್ಲಿ ಒಮ್ಮೆ ಕಿವಿಗೊಟ್ಟರೆ- ಬದುಕಿನ ಸಂಗೀತವೇ ಭಿನ್ನ ಅಲ್ಲಿ. ಹಾಗಿರುವಾಗ ಮಾನವನ ಹಸ್ತಕ್ಷೇಪವಿಲ್ಲದ ಅರಣ್ಯಗಳಲ್ಲಿರುವ ಜೀವಂತಿಕೆ ವರ್ಣನೆಗೆ ನಿಲುಕದ್ದು. ಆ ಸ್ಥಳಗಳಿಗೆ ಒಮ್ಮೆ ಹೋದರೆ ಮೈ ಸೋಕುವ ತಂಗಾಳಿ, ಕಣ್ಣಿಗೆ ಅಚ್ಚ ಹಸಿರು, ಎದೆಗೆ ಸ್ವಚ್ಛ ಉಸಿರು, ಕಿವಿಗೆ ಕಲರವ- ಅಂತೂ ಬದುಕಿನ ಸ್ವಾಸ್ಥ್ಯವನ್ನೇ ಇವು ಬದಲಿಸಿಬಿಡುತ್ತವೆ. ಇಂಥ ಸ್ವಾಸ್ಥ್ಯ ತಾಣಗಳನ್ನು ನಾಶ ಪಡಿಸಿಬಿಟ್ಟರೆ ಸಣ್ಣ ಕೀಟಗಳಿಂದ ಹಿಡಿದು ದೊಡ್ಡ ಪ್ರಾಣಿಗಳವರೆಗೆ ಎಲ್ಲದರ ಬದುಕಿನ ಲಯವೂ ಹಾಳಾಗಿಹೋಗುತ್ತದೆ. ಹಾಗಾಗಿ ಬದುಕು ಸುಂದರ, ಸ್ವಸ್ಥ, ಸುರಕ್ಷಿತ ಎನಿಸುವುದಕ್ಕೆ ಕಾನುನುಗಳೇ ಬೇಕು.

ಇದನ್ನೂ ಓದಿ: World Sparrow Day: ಇಂದು ಗುಬ್ಬಚ್ಚಿಗಳ ದಿನ; ಈ ಪುಟ್ಟ ಹಕ್ಕಿಗಳನ್ನು ಉಳಿಸೋಣ

Continue Reading

ಪರಿಸರ

World Sparrow Day: ಇಂದು ಗುಬ್ಬಚ್ಚಿಗಳ ದಿನ; ಈ ಪುಟ್ಟ ಹಕ್ಕಿಗಳನ್ನು ಉಳಿಸೋಣ

ಭಾರತದ ದಕ್ಷಿಣ ಭಾಗದಲ್ಲಿ ಗುಬ್ಬಿಗಳ ಸಂಖ್ಯೆ (World Sparrow Day) ತೀವ್ರವಾಗಿ ಇಳಿಮುಖವಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಆಘಾತಕಾರಿ ಎನಿಸುವಷ್ಟು, ಶೇ. 70-80ರಷ್ಟು ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಭಾಗದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಮುಖವಾಗಿದೆ. ಇಷ್ಟೊಂದು ತೀವ್ರ ಪ್ರಮಾಣ ಕುಸಿಯುತ್ತಿರುವ ಈ ಗುಬ್ಬಿಗಳನ್ನು ನಮ್ಮ ಮುಂದಿನ ತಲೆಮಾರುಗಳು ನೋಡಬೇಡವೇ?

VISTARANEWS.COM


on

World Sparrow Day
Koo

ಕೆಲವು ಪ್ರಾಣಿಗಳು (World Sparrow Day) ಮಾನವರ ಜೊತೆಜೊತೆಗೇ ವಿಕಾಸ ಹೊಂದುತ್ತ ಬಂದಂಥವು. ಸೃಷ್ಟಿ ಪಥದಲ್ಲಿ ಅವುಗಳ ಉಗಮ, ವಿಕಾಸಗಳ ಹಾದಿ ಬೇರೆಯಾದರೂ ಮಾನವನೊಂದಿಗೆ ಅತ್ಯಂತ ನಿಕಟ ಸಂಬಂಧ ಇರಿಸಿಕೊಂಡಂಥವು. ಸಾವಿರಾರು ವರ್ಷಗಳಿಂದ ಎಷ್ಟು ಮನೆಯ ಮಕ್ಕಳು ಹಿಡಿಯುವುದಕ್ಕೆಂದು ಗುಬ್ಬಚ್ಚಿಗಳನ್ನು ಅಟ್ಟಿಸಿಕೊಂಡು ಹೋಗಿಲ್ಲ? ಮನೆಯ ಜಗುಲಿಯಲ್ಲಿ ನೇತಾಡಿಸಿದ್ದ ಫೋಟೋಗಳ ಹಿಂದೆ ಎಷ್ಟು ಮನೆಗಳಲ್ಲಿ ಗುಬ್ಬಿಗಳು ಮನೆ ಕಟ್ಟಿಕೊಂಡಿದ್ದಿಲ್ಲ? ಆದರೆ ಅವೆಲ್ಲ ಒಂದಾನೊಂದು ಕಾಲದ ಮಾತಾಯಿತು. ಈಗ ಮಕ್ಕಳಿಗೆ ಹಿಡಿಯುವುದಕ್ಕೆ, ಫೋಟೋಗಳ ಹಿಂದೆ ಗೂಡು ಕಟ್ಟುವುದಕ್ಕೆ ಗುಬ್ಬಿಗಳೇ ಕಾಣೆಯಾಗುತ್ತಿವೆ. ಹೀಗೆ ಕಾಣೆಯಾಗುತ್ತಿರುವ ಗುಬ್ಬಿಗಳನ್ನು ಉಳಿಸಬೇಕೆಂಬ ಅರಿವು ಮೂಡಿಸುವ ಉದ್ದೇಶ ಮಾರ್ಚ್‌ 20ರಂದು ಹಮ್ಮಿಕೊಂಡಿರುವ (World Sparrow Day) ʻವಿಶ್ವ ಗುಬ್ಬಚ್ಚಿಗಳ ದಿನʼದ್ದು.

House sparrow (Passer domesticus) in a perch by the water

ಪರಿಸರದಲ್ಲಿ ಗುಬ್ಬಿ ಪಾತ್ರ

ಇಡೀ ಪರಿಸರ ವ್ಯವಸ್ಥೆಯಲ್ಲಿ ಗುಬ್ಬಿಗಳ ಪಾತ್ರವೇನು ಎಂಬುದರಿಂದ ಹಿಡಿದು, ಈ ಮುದ್ದು ಹಕ್ಕಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳ ಉಳಿವಿಗಾಗಿ ಶ್ರಮಿಸುವ ಅಗತ್ಯದ ಬಗ್ಗೆಯೂ ಅರಿತುಕೊಳ್ಳುವ ದಿನವಿದು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಭಾರತದ ದಕ್ಷಿಣ ಭಾಗದಲ್ಲಿ ಗುಬ್ಬಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಆಘಾತಕಾರಿ ಎನಿಸುವಷ್ಟು, ಶೇ. 70-80ರಷ್ಟು ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಭಾಗದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಮುಖವಾಗಿದೆ. ಇಷ್ಟೊಂದು ತೀವ್ರ ಪ್ರಮಾಣ ಕುಸಿಯುತ್ತಿರುವ ಈ ಗುಬ್ಬಿಗಳ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳು ಇಲ್ಲಿವೆ.

House sparrow

ತೂಕ ಎಷ್ಟು?

ಚಿಂವ್‌ ಚಿಂವ್‌ ಗುಬ್ಬಿ ಎಂದೇ ಕರೆಸಿಕೊಳ್ಳುವ ಈ ಹಕ್ಕಿಗಳ ತೂಕ 26-32 ಗ್ರಾಂಗಳಷ್ಟೆ. 14-16 ಸೆಂ.ಮೀ.ಗಳಷ್ಟು ದೊಡ್ಡದಿರುವ ಇವು, ತಮ್ಮ ರೆಕ್ಕೆಗಳನ್ನು 25 ಸೆಂ.ಮೀ.ವರೆಗೂ ಬಿಡಿಸಬಲ್ಲವು. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಈ ಗುಬ್ಬಚ್ಚಿಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಕೆಲವು ಮಹಾನಗರಗಳಲ್ಲಿ ಇವುಗಳ ಸಂಖ್ಯೆ ಶೇ. 99ರಷ್ಟು ಕಾಣೆಯಾಗಿದೆ.

Sparrow Birds on Tree Branches

ಏಷ್ಯಾದ ಮೂಲ ನಿವಾಸಿ

ಏಷ್ಯಾ ಮತ್ತು ಯುರೋಪ್‌ ಖಂಡಗಳ ಮೂಲನಿವಾಸಿಗಳಿವು. ಅಲ್ಲಿಂದ ವಿಶ್ವದ ಬಹಳಷ್ಟು ದೇಶಗಳಿಗೆ ವಲಸೆ ಹೋದಂಥವು. ಏಷ್ಯಾ ಖಂಡದ ಭಾರತ, ನೇಪಾಳ, ಶ್ರೀಲಂಕಾ, ಭೂತಾನ್‌, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಇವು ಸಾಮಾನ್ಯವಾಗಿ ಕಾಣುತ್ತವೆ. ಆದರೆ ಅಂಟಾರ್ಟಿಕಾದಂಥ ಅತೀವ ಚಳಿಯ ಭಾಗಗಳಲ್ಲಿ, ಜಪಾನ್‌, ಚೀನಾಗಳಲ್ಲೂ ಗುಬ್ಬಚ್ಚಿಗಳಿಲ್ಲ. ಹಾಗೆ ನೋಡಿದರೆ ಅಮೆರಿಕಾದ ವಲಸಿಗರ ಪೈಕಿ ಗುಬ್ಬಚ್ಚಿಗಳನ್ನೂ ಲೆಕ್ಕಕ್ಕೆ ಹಿಡಿಯಬಹುದು. ಬ್ರಿಟನ್‌ನಿಂದ ಉತ್ತರ ಅಮೆರಿಕಕ್ಕೆ 1851ರ ಹೊತ್ತಿಗೆ ವಲಸೆ ಹೋದಂಥವು ಇವು ಎಂದು ಹೇಳಲಾಗುತ್ತದೆ.

 Sparrow in water

ಇವು ಈಜಬಲ್ಲವು

ಈ ಹಕ್ಕಿಗಳು ತಮ್ಮ ಉಳಿವಿನ ಪ್ರಶ್ನೆ ಬಂದಾಗ ನೀರಲ್ಲಿ ಈಜಬಲ್ಲವು. ಅದರಲ್ಲೂ ಸಾವು-ಉಳಿವಿನ ಹೊತ್ತಿನಲ್ಲಿ, ನೀರಿನಾಳದಲ್ಲೂ ಸ್ವಲ್ಪ ದೂರದವರೆಗೆ ಈಜಲು ಸಾಧ್ಯವಾಗುವಂತೆ ಇವುಗಳ ದೇಹ ರಚನೆಗೊಂಡಿದೆ. ವಯಸ್ಕ ಹಕ್ಕಿಗಳು ಬಹುಪಾಲು ಸಸ್ಯಾಹಾರಿಗಳು. ಆದರೆ ಮರಿ ಗುಬ್ಬಚ್ಚಿಗಳು ಹುಳುಹುಪ್ಪಡಿಗಳನ್ನು ತಿನ್ನುತ್ತವೆ. ಬೆಳವಣಿಗೆಯ ಹಂತದಲ್ಲಿ ಅವುಗಳ ದೇಹಕ್ಕೆ ಅಗತ್ಯವಾದ ಸತ್ವಗಳಿಗಾಗಿ ಪಾಲಕ ಹಕ್ಕಿಗಳು ಮೊಟ್ಟೆಯೊಡೆದು ಬಂದ ಮರಿಗಳಿಗೆ ಕೀಟಗಳನ್ನು ತಿನ್ನಿಸುತ್ತವೆ. ಗುಬ್ಬಚ್ಚಿ ಮರಿಗಳನ್ನು ಅತಿ ಹೆಚ್ಚು ಬೇಟೆಯಾಡಿ ಸ್ವಾಹಾ ಮಾಡುವುದು ಬೆಕ್ಕುಗಳು. ಹಾಗಾಗಿ ಬೆಕ್ಕುಗಳು ತಲುಪಲಾರದಂಥ ಸಂದಿಗಳನ್ನೇ ಗುಬ್ಬಿಗಳು ಗೂಡು ಕಟ್ಟಲು ಹುಡುಕುತ್ತವೆ.

 Sparrow

10,000 ವರ್ಷಗಳ ಹಿಂದಿನದು

ನಿಸರ್ಗದ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳದ್ದು ಸುಮಾರು 10,000 ವರ್ಷಗಳ ದೀರ್ಘ ಅನುಭವ. ಇದರದ್ದು ಮಾನವನ ಜೊತೆಗಿನ ಸಂಬಂಧವೂ ಪ್ರಾಚೀನ ಕಾಲದ್ದು. ಆದರೆ ಕಳೆದ ಮೂರು ದಶಕಗಳಿಂದ ಇವುಗಳ ಸಂತತಿ ಅಳಿಯುತ್ತಿದೆ. ನಗರ ಪ್ರದೇಶಗಳಲ್ಲಂತೂ ಬಹುತೇಕ ಕಣ್ಮರೆಯೇ ಆಗಿಹೋಗಿವೆ. ಇದಕ್ಕೆ ಕಾರಣಗಳು ಹಲವಾರಿವೆ.

Mobile tower

ಮೊಬೈಲ್‌ ಟವರ್‌ನಿಂದ ಅಪಾಯ

ಆಧುನಿಕ ಮೂಲಸೌಕರ್ಯಗಳು ಹೆಚ್ಚೆಚ್ಚು ಅಭಿವೃದ್ಧಿ ಹೊಂದುತ್ತ ಹೋದಂತೆ ಮರಗಿಡಗಳು ನಾಶವಾದವು; ಮನೆಯ ಸುತ್ತ-ಮುತ್ತ ಗುಬ್ಬಚ್ಚಿಗಳ ನೆಲೆಗಳು ನಶಿಸಿದವು. ಮೊಬೈಲ್‌ ಟವರ್‌ಗಳ ತರಂಗಗಳು ಸಹ ಗುಬ್ಬಿಗಳ ನಾಶಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕೀಟನಾಶಕಗಳ ಮಿತಿಮೀರಿದ ಬಳಕೆಯಿಂದಲೂ ಗುಬ್ಬಿಗಳು ಸಾಯುತ್ತಿವೆ.

Continue Reading
Advertisement
Sania Mirza
ಕ್ರೀಡೆ10 mins ago

Sania Mirza: ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಸಾನಿಯಾ ಮಿರ್ಜಾ?; ಈ ಪಕ್ಷದಿಂದ ಆಫರ್​

Savadatti Yallamma
ಕರ್ನಾಟಕ12 mins ago

ಬರದ ಮಧ್ಯೆಯೂ ಭರ್ಜರಿ ಕಾಣಿಕೆ; ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 11 ಕೋಟಿ ರೂ. ಸಂಗ್ರಹ!

Heart Attack
ಬೆಂಗಳೂರು25 mins ago

Heart Attack : ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ

Ranbir Kapoor Raha Kapoor
ಬಾಲಿವುಡ್33 mins ago

Ranbir Kapoor: ಅತ್ಯಂತ ಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ ಆಗಲಿದ್ದಾರಂತೆ ರಣಬೀರ್- ಆಲಿಯಾ ಮಗಳು!

Cows
ಕರ್ನಾಟಕ1 hour ago

ಹಾಸನದಲ್ಲಿ ಅಕ್ರಮ ಗೋಮಾಂಸ ಜಾಲ; 60 ಗೋವುಗಳನ್ನು ಕೊಂದ ರಾಕ್ಷಸರು!

R Ashwin
ಕ್ರೀಡೆ1 hour ago

IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

Bangalore water crisis IT companies
ಬೆಂಗಳೂರು1 hour ago

Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Chikkaballapur
ಕರ್ನಾಟಕ2 hours ago

ಚಿಕ್ಕಬಳ್ಳಾಪುರದಲ್ಲಿ ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ; ವೃದ್ಧೆಯ ತಪ್ಪೇನು?

Actor Suriya announces film
ಕಾಲಿವುಡ್2 hours ago

Actor Suriya: ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕಾಲಿವುಡ್‌ ನಟ ಸೂರ್ಯ: ಅಚ್ಚರಿಯಾಗಿದೆ ಪೋಸ್ಟರ್‌!

Yuva Rajkumar Yuva cutout
ಸಿನಿಮಾ2 hours ago

Yuva Rajkumar: ʻಯುವʼನ ಆರ್ಭಟ ಶುರು: ಸಿನಿಮಾ ನೋಡಿ ಬೆಳ್ಳುಳ್ಳಿ ಕಬಾಬ್‌ ಚಂದ್ರು ಏನಂದ್ರು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202421 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202423 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌