IND VS NZ | ಕಿವೀಸ್​​ ವಿರುದ್ಧದ ಮೊದಲ ಟಿ20 ಮಳೆಯಿಂದ ರದ್ದು; ಭಾರತದ ಯುವ ಆಟಗಾರರಿಗೆ ನಿರಾಸೆ - Vistara News

Latest

IND VS NZ | ಕಿವೀಸ್​​ ವಿರುದ್ಧದ ಮೊದಲ ಟಿ20 ಮಳೆಯಿಂದ ರದ್ದು; ಭಾರತದ ಯುವ ಆಟಗಾರರಿಗೆ ನಿರಾಸೆ

ಭಾರತ ಮತ್ತು ನ್ಯೂಜಿಲ್ಯಾಂಡ್​(IND VS NZ) ವಿರುದ್ಧ ವೆಲ್ಲಿಂಗ್ಟನ್​ ಮೈದಾನದಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ಟಾಸ್​ ಕಾಣದೆ ರದ್ದುಗೊಂಡಿದೆ.

VISTARANEWS.COM


on

Match abandoned without a ball bowled (no toss)
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೆಲ್ಲಿಂಗ್ಟನ್​: ಬಹುನಿರೀಕ್ಷಿತ ಭಾರತ ಮತ್ತು ನ್ಯೂಜಿಲ್ಯಾಂಡ್​(IND VS NZ) ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ವೆಲ್ಲಿಂಗ್ಟನ್​ ಕ್ರಿಕೆಟ್​ ಮೈದಾನದಲ್ಲಿ ನಡೆಯಬೇಕಿತ್ತು. ಆದರೆ ಇದಕ್ಕೆ ಮಳೆರಾಯ ಅನುವು ನೀಡದ ಕಾರಣ ಅಂತಿಮವಾಗಿ ಪಂದ್ಯ ರದ್ದುಗೊಳಿಸಲಾಯಿತು.

2024ರ ವಿಶ್ವ ಕಪ್​ ಸಿದ್ಧತೆಗೆ ಹಿರಿಯ ಆಟಗಾರರನ್ನು ಹೊರತುಪಡಿಸಿ ಯುವ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾಗಿದ್ದ ಟೀಮ್ ಇಂಡಿಯಾಗೆ ಮೊದಲ ಪಂದ್ಯದಲ್ಲೇ ಮಳೆಯಿಂದ ವಿಘ್ನ ಎದುರಾಗಿದೆ. ಸರಣಿಯ ದ್ವಿತೀಯ ಪಂದ್ಯ ನವೆಂಬರ್​ 20ರಂದು ಭಾನುವಾರ ಮೌಂಟ್‌ ಮೌಂಗನಿಯ ಬೇ ಓವಲ್‌ ಮೈದಾನದಲ್ಲಿ ನಡೆಯಲಿದೆ.

ಉಭಯ ತಂಡಕ್ಕೂ ನಿರಾಸೆ

ಟಿ20 ವಿಶ್ವ ಕಪ್‌ ಸೆಮಿಫೈನಲ್​ ಸೋಲಿನ ಬಳಿಕ ಹೊಸ ಹುರುಪಿನೊಂದಿಗೆ ಟಿ20 ಸರಣಿ ಆಡಲು ಎದುರು ನೋಡುತ್ತಿದ್ದ ಭಾರತ ಹಾಗೂ ನ್ಯೂಜಿಲ್ಯಾಂಡ್​ ನಡುವಣ ಆಟಗಾರರಿಗೆ ಭಾರಿ ನಿರಾಸೆಯಾಯಿತು. ಅದರಲ್ಲೂ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಎದುರು ನೋಡುತ್ತಿದ್ದ ಟೀಮ್​ ಇಂಡಿಯಾದ ಯುವ ಆಟಗಾರರ ಕನಸಿಗೆ ಮಳೆರಾಯ ತಣ್ಣೀರೆರಚಿದ್ದಾನೆ.

ಇದನ್ನೂ ಓದಿ | IND VS NZ | ವೆಲ್ಲಿಂಗ್ಟನ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ಟಿ20 ಸಾಧನೆ ಹೇಗಿದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Senior citizen: 2050ರ ವೇಳೆಗೆ ಭಾರತವು ವಿಶ್ವದ ಶೇ. 17 ಹಿರಿಯ ನಾಗರಿಕರನ್ನು ಹೊಂದಲಿದೆ. ಇದರಿಂದ ಅವರ ಅಗತ್ಯತೆಗಳನ್ನು ಪೂರೈಸವು ಹಿರಿಯ ನಾಗರಿಕ ಕೇಂದ್ರಗಳ ಬೇಡಿಕೆಯೂ ಹೆಚ್ಚಾಗಲಿದೆ ಎನ್ನುತ್ತದೆ ವರದಿಯೊಂದು. ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Senior citizen
Koo

ನವದೆಹಲಿ: ಭಾರತವು (india) 2050ರ ವೇಳೆಗೆ 340 ಮಿಲಿಯನ್ ಹಿರಿಯ ನಾಗರಿಕರನ್ನು (Senior citizen) ಹೊಂದಲಿದೆ. ಇದು ವಿಶ್ವದ ವಯಸ್ಸಾದ ಜನಸಂಖ್ಯೆಯ (population) ಸರಿಸುಮಾರು ಶೇ. 17ರಷ್ಟು ಇರಲಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್ ಇ (CBRE) ಸೌತ್ ಏಷ್ಯಾದ ವರದಿ ಬುಧವಾರ ತಿಳಿಸಿದೆ.

ವಿಶ್ವದಲ್ಲೇ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಆರೈಕೆ ಮತ್ತು ಜೀವನಶೈಲಿಯ ಆಯ್ಕೆಗಳನ್ನು ಬಯಸುತ್ತಿರುವ ಹಿರಿಯರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಹಿರಿಯ ಜೀವನ ಸೌಲಭ್ಯಗಳ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

ದೇಶದಲ್ಲಿ ಪ್ರಸ್ತುತ ಹಿರಿಯರ ಆರೈಕೆ ಕೇಂದ್ರಗಳೂ ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ರಾಷ್ಟ್ರದಾದ್ಯಂತ 18,000 ಘಟಕಗಳಿದ್ದು, ಸಂಘಟಿತ ಹಿರಿಯ ಜೀವನ ಮತ್ತು ಆರೈಕೆ ವಿಭಾಗಗಳಲ್ಲಿ ಶೇ. 62ರಷ್ಟನ್ನು ಹೊಂದಿರುವ ದಕ್ಷಿಣ ಪ್ರದೇಶದಲ್ಲೇ ಇದು ಹೆಚ್ಚಾಗಿದೆ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

2024ರಲ್ಲಿ ಹಿರಿಯ ಜೀವನ ಸೌಲಭ್ಯಗಳ ಒಟ್ಟು ಅಂದಾಜು ಗುರಿ ಸುಮಾರು 1 ಮಿಲಿಯನ್ ಆಗಿದ್ದು, ಮುಂದಿನ 10 ವರ್ಷಗಳಲ್ಲಿ 2.5 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ವೇಗವಾಗಿ ಹೆಚ್ಚಳ

ಭಾರತದ ಹಿರಿಯ ಜನಸಂಖ್ಯೆಯು ಗಮನಾರ್ಹವಾಗಿ ಶೇ. 25.4 ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಇದು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಾಗಿದೆ. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ ಎಂದು ಸಿಬಿಆರ್ ಇ ಯ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ತಿಳಿಸಿದ್ದಾರೆ.


ಹೆಚ್ಚುತ್ತಿದೆ ಬೇಡಿಕೆ

ಕಳೆದ ದಶಕದಲ್ಲಿ ಭಾರತವು ಹಿರಿಯ ಜೀವನ ಯೋಜನೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಈ ವಲಯದಲ್ಲಿ ಹೆಚ್ಚುತ್ತಿರುವ ಸ್ವೀಕಾರ ಮತ್ತು ಬೇಡಿಕೆಯನ್ನುಇದು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಆರೈಕೆ ಘಟಕಗಳಲ್ಲಿ ಹೆಚ್ಚಿನವು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಪುಣೆ ಮತ್ತು ದೆಹಲಿ- ಎನ್ ಸಿಆರ್ ನಗರಗಳಲ್ಲಿ ಕೇಂದ್ರೀಕೃತವಾಗಿದೆ.

ಹಲವು ಕ್ರಮ

ಭಾರತದಲ್ಲಿ ವರ್ಧಿತ ವಯೋಸಹಜ ಆರೈಕೆಗಾಗಿ ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (NPHCE), ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳಂತಹ ಹಲವಾರು ನೀತಿ ಉಪಕ್ರಮಗಳನ್ನು ಸರ್ಕಾರವು ಕೈಗೊಳ್ಳುತ್ತದೆ.

ವಯಸ್ಸಾದ ಜನಸಂಖ್ಯೆಯ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು ಪೂರೈಸಲು ರಚನಾತ್ಮಕ ಆರೈಕೆ ಕಾರ್ಯಕ್ರಮಗಳು, ಉದ್ದೇಶಿತ ನೀತಿಗಳು ಮತ್ತು ವಿಶೇಷ ವೈದ್ಯಕೀಯ ಸೇವೆಗಳ ಅಗತ್ಯವನ್ನು ಗುರುತಿಸಲಾಗಿದೆ. ಭಾರತ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ಆರೈಕೆ ಕ್ಷೇತ್ರದ ಉದ್ಯಮದ ಬಗ್ಗೆ ಜನ ನಾಯಕರು ಮಾತನಾಡುತ್ತಿದ್ದಾರೆ ಎಂದು ಕನ್ಸಲ್ಟಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮಿ ಕೌಶಲ್ ತಿಳಿಸಿದ್ದಾರೆ.

Continue Reading

Latest

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Lok sabha election 2024: ದೇಶ ಬಹುದೊಡ್ಡ ಚುನಾವಣೆಯನ್ನು ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮತವನ್ನು ಬೇರೆಯವರಿಗೆ ಚಲಾಯಿಸಲು ಅಧಿಕಾರ ಇದೆಯೇ ? ಒಂದು ವೇಳೆ ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬೇಕು? ನಮ್ಮ ಅಸಲಿ ಮತ ವ್ಯರ್ಥವಾಗುತ್ತದೆಯೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

By

Lok sabha election-2024
Koo

ಲೋಕಸಭಾ ಚುನಾವಣೆ- 2024ರ (lok sabha election-2024) ಮೊದಲ ಹಂತದ ( first phase) ಚುನಾವಣೆ (election) ನಾಳೆ ದೇಶದ ಕೆಲವು ಕಡೆ ನಡೆಯಲಿದೆ. ಮತದಾರರಲ್ಲಿ (voters) ಹಲವು ಪ್ರಶ್ನೆಗಳು, ಗೊಂದಲಗಳು ಕಾಡುತ್ತಿದೆ. ಇದರಲ್ಲಿ ನಮ್ಮ ಮತವನ್ನು (vote) ಬೇರೆಯವರು ಚಲಾವಣೆ ಮಾಡಿದರೆ ಏನಾಗುತ್ತದೆ, ಈ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂಬುದು ಕೂಡ ಒಂದು.

ದೇಶದ ಬಹುದೊಡ್ಡ ಚುನಾವಣೆಗಾಗಿ ಚುನಾವಣಾ ಅಧಿಕಾರಿಗಳು (election officers), ವಿವಿಧ ಪಕ್ಷಗಳ ಅಭ್ಯರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಈಗಾಗಲೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇದರಲ್ಲಿ ಬಹುದೊಡ್ಡ ಪಾಲುದಾರ ಪ್ರತಿಯೊಬ್ಬ ಮತದಾರ. ಅವರ ಅಧಿಕಾರ, ಹಕ್ಕನ್ನು ಬೇರೆಯವರು ಚಲಾಯಿಸಲು ಸಾಧ್ಯವಿಲ್ಲ.

ಒಂದು ವೇಳೆ ಅಕ್ರಮವಾಗಿ ಅಥವಾ ಆಕಸ್ಮಿಕವಾಗಿ ನಮ್ಮ ಮತವನ್ನು ಬೇರೆಯವರು ಚಲಾಯಿಸಿಸಿದರೆ ಏನು ಮಾಡಬೇಕು, ಹೀಗಾದಾಗ ನಮ್ಮ ಮತದಾನದ ಹಕ್ಕನ್ನು ನಾವು ಮತ್ತೆ ಚಲಾಯಿಸಲು ಸಾಧ್ಯವೇ ? ಈ ಸಂದರ್ಭದಲ್ಲಿ ನಾವು ಏನು ಕ್ರಮ ಕೈಗೊಳ್ಳಬಹುದು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಇದನ್ನೂ ಓದಿ: Modi Letter: ಸಾಮಾನ್ಯ ಎಲೆಕ್ಷನ್‌ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!

ಬೇರೆಯವರು ನಮ್ಮ ಮತ ಚಲಾಯಿಸಬಹುದೇ?

ಬೇರೆಯವರು ನಮ್ಮ ಮತ ಚಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಚಲಾಯಿಸಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದಿಂದ ಒಂದು ನಿಬಂಧನೆಯನ್ನು ಮಾಡಲಾಗಿದೆ. ಮತದಾರನ ಬಳಿ ವೋಟರ್ ಐಡಿ ಮತ್ತು ವೋಟಿಂಗ್ ಸ್ಲಿಪ್ ಇದ್ದರೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ನಿಮ್ಮ ಮತವನ್ನು ಟೆಂಡರ್ಡ್ ಬ್ಯಾಲೆಟ್ ಪೇಪರ್ ಎಂದು ಗುರುತಿಸಲಾಗುತ್ತದೆ ಮತ್ತು ಪ್ರತ್ಯೇಕವಾಗಿ ಇರಿಸಲಾಗುತ್ತದೆ.


ತಕ್ಷಣ ದೂರು ನೀಡಿ

ಮತಗಟ್ಟೆ ಅಧಿಕಾರಿಯು ಮತಗಟ್ಟೆಯೊಳಗೆ ಬರುವಾಗ ನಿಮ್ಮ ಮತವು ಈಗಾಗಲೇ ಚಲಾವಣೆಯಾಗಿದೆ ಎಂದು ತಿಳಿಸಿದರೆ ಭಾರತೀಯ ಚುನಾವಣಾ ಕಾಯಿದೆ 1961ರ ಅಡಿಯಲ್ಲಿ ಯಾರಾದರೂ ನಿಮ್ಮ ಹೆಸರಿನಲ್ಲಿ ಮತ ಚಲಾಯಿಸಿದರೆ ತಕ್ಷಣ ಸ್ಥಳದಲ್ಲಿರುವ ಪ್ರಿಸೈಡಿಂಗ್ ಅಧಿಕಾರಿಗೆ ದೂರು ನೀಡಿ. ಆಗ ಟೆಂಡರ್ಡ್ ಮತವನ್ನು ಚಲಾಯಿಸಲು ಕಾನೂನು ನಿಮಗೆ ಅವಕಾಶ ನೀಡುತ್ತದೆ.

ಚುನಾವಣಾ ನಿಯಮಗಳ ನಿಯಮ 49ಪಿ ಪ್ರಕಾರ ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ನಿಮಗೆ ನೀಡಲಾಗುತ್ತದೆ ಮತ್ತು ಟೆಂಡರ್ ಮಾಡಿದ ಮತಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸಹಿ ಮಾಡಬೇಕಾಗುತ್ತದೆ. ವಿದ್ಯುನ್ಮಾನ ಮತಯಂತ್ರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಟೆಂಡರ್ ಮಾಡಿದ ಮತಪತ್ರವು ಬ್ಯಾಲೆಟ್ ಯೂನಿಟ್‌ನಲ್ಲಿ ಪ್ರದರ್ಶಿಸಲಾದ ಬ್ಯಾಲೆಟ್ ಪೇಪರ್‌ನಂತೆಯೇ ಇರುತ್ತದೆ. ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ಪ್ರಿಸೈಡಿಂಗ್ ಅಧಿಕಾರಿಗೆ ಮರಳಿ ನೀಡಬೇಕು.

ಹೇಗೆ ಮತ ಹಾಕುವುದು?

ಬಾಣದ ಕ್ರಾಸ್ ಮಾರ್ಕ್ ರಬ್ಬರ್ ಸ್ಟಾಂಪ್ ಸಹಾಯದಿಂದ ನಿಮ್ಮ ಅಭ್ಯರ್ಥಿಯ ಆಯ್ಕೆಯನ್ನು ಗುರುತಿಸಿದ ಅನಂತರ ನೀವು ಟೆಂಡರ್ ಮಾಡಿದ ಮತಪತ್ರವನ್ನು ಪ್ರಿಸೈಡಿಂಗ್ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಅದನ್ನು ಪ್ರತ್ಯೇಕ ಕವರ್‌ನಲ್ಲಿ ಇಡುತ್ತಾರೆ.

ಚಾಲೆಂಜ್ಡ್ ವೋಟ್

ಟೆಂಡರ್ ಮಾಡಿದ ಬ್ಯಾಲೆಟ್ ಪೇಪರ್ ಅನ್ನು ಚಾಲೆಂಜ್ಡ್ ವೋಟ್ ಎಂದೂ ಕರೆಯುತ್ತಾರೆ. ಬಳಿಕ ನಿಮ್ಮ ಜಾಗದಲ್ಲಿ ಯಾರು ಮತ ಹಾಕಿದ್ದಾರೆ ಎಂಬುದನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಅದನ್ನು ತೆಗೆದು ನಿಮ್ಮ ಮತವನ್ನು ಎಣಿಕೆಗೆ ಹಾಕಲಾಗುತ್ತದೆ.

ಗುರುತಿನ ಪುರಾವೆ ನೀಡಬೇಕು

ಮತದಾರರಾಗಿ ನಿಮ್ಮ ಗುರುತಿನ ಬಗ್ಗೆ ಯಾವುದೇ ಅಭ್ಯರ್ಥಿಯ ಪೋಲಿಂಗ್ ಏಜೆಂಟ್‌ ಪ್ರಶ್ನಿಸಿದರೆ ಚುನಾವಣಾ ಅಧಿಕಾರಿಗಳು ನಿಮ್ಮ ಗುರುತಿನ ಪುರಾವೆಯನ್ನು ಕೇಳುತ್ತಾರೆ. ಇದಕ್ಕಾಗಿ ನೀವು ಎಪಿಕ್ ಅಥವಾ ಪಾಸ್‌ಪೋರ್ಟ್, ರೇಷನ್ ಕಾರ್ಡ್‌ನಂತಹ ಯಾವುದೇ ದಾಖಲೆಯನ್ನು ಹೊಂದಿರಬೇಕು. ಆದರೂ ಅವರು ಸವಾಲು ಮಾಡಿ ಮತದಾನಕ್ಕೆ ಅನುಮತಿ ನೀಡದೇ ಇದ್ದರೆ ಪ್ರಿಸೈಡಿಂಗ್ ಅಧಿಕಾರಿಯಿಂದ ಲಿಖಿತ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ.

ಎಷ್ಟು ಮತದಾರರು?

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸುಮಾರು 97 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಭಾರತದಲ್ಲಿ 96.88 ಕೋಟಿ ಜನರು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ, ಇದು ವಿಶ್ವದ ಅತಿದೊಡ್ಡ ಮತದಾರರ ಪೂಲ್ ಆಗಿದೆ. ಆಯೋಗದ ಪ್ರಕಾರ, 2019 ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರ ಸಂಖ್ಯೆ ಶೇ. 6ರಷ್ಟು ಹೆಚ್ಚಾಗಿದೆ.

ಯಾವಾಗ ನಡೆಯಲಿದೆ ಚುನಾವಣೆ?

2024ರ ಲೋಕಸಭೆ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 19 ರಂದು ಪ್ರಾರಂಭವಾಗಲಿದೆ. ಬಳಿಕ ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ಮತದಾನ ನಡೆದು ಮತ ಎಣಿಕೆಯು ದೇಶಾದ್ಯಂತ ಜೂನ್ 4 ರಂದು ನಡೆಯಲಿದೆ.

Continue Reading

Latest

Lok sabha election 2024: ಮಥುರಾದಲ್ಲಿ ಹೇಮಾಮಾಲಿನಿ ಗೆಲುವು ಪಕ್ಕಾ; ಏನು ಹೇಳುತ್ತೆ ಲೆಕ್ಕ?

Lok sabha election 2024: ಬಿಜೆಪಿ ಪ್ರಾಬಲ್ಯದ ಕೃಷ್ಣ ನಗರಿ ಮಥುರಾದಲ್ಲಿ ಮೂರನೇ ಬಾರಿಗೆ ಕಣಕ್ಕೆ ಇಳಿದಿರುವ ಹೇಮಾಮಾಲಿನಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ಹಲವು ಕಾರಣಗಳು ಇವೆ. ಅದು ಏನು ಗೊತ್ತೆ? ಇಲ್ಲಿದೆ ಈ ಪ್ರತಿಷ್ಠಿತ ಚುನಾವಣಾ ಕಣದ ವಿಶ್ಲೇಷಣೆ.

VISTARANEWS.COM


on

By

Lok sabha election-2024
Koo

ಮಥುರಾ: ಲೋಕ ಸಭಾ ಚುನಾವಣೆಯಲ್ಲಿ (Lok sabha election-2024) ಈ ಬಾರಿ ಹಲವಾರು ಕ್ಷೇತ್ರಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದರಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷದ (BJP) ಭದ್ರಕೋಟೆಯಾದ ಮಥುರಾ (mathura) ಲೋಕಸಭಾ ಕ್ಷೇತ್ರವೂ ಒಂದು. ಮಥುರಾದಲ್ಲಿ ಬಿಜೆಪಿ ಮತ್ತೆ ಹಾಲಿ ಸಂಸದೆ (MP) ಹೇಮಾ ಮಾಲಿನಿ (hema malini) ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದೆ.

ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ವಿಧಿಸಿಕೊಂಡಿರುವ ಅಲಿಖಿತ ವಯಸ್ಸಿನ ಮಿತಿ ನಿರ್ಬಂಧವನ್ನು ಮುರಿದು 75ರ ಹರೆಯದ ನಟಿ ಹೇಮಮಾಲಿನಿ ಅವರಿಗೆ ಇಲ್ಲಿ ಟಿಕೆಟ್ ನೀಡಲಾಗಿದೆ.

ಬಿಜೆಪಿಯ ಭದ್ರಕೋಟೆ

ಜಾಟ್ ಪ್ರಾಬಲ್ಯದ ಮಥುರಾವು ಸಾಂಪ್ರದಾಯಿಕವಾಗಿ ಭಾರತೀಯ ಜನತಾ ಪಕ್ಷ ಅಥವಾ ಅದರ ಮಿತ್ರ ಪಕ್ಷಗಳ ಭದ್ರಕೋಟೆಯಾಗಿದೆ. ಭಾರತದ ಪ್ರಸಿದ್ಧ ಜಾಟ್ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಮಣಿ ರಾಮ್ ಬಗ್ರಿ ನೇತೃತ್ವದಲ್ಲಿ ಬಿಜೆಪಿ 1977ರಲ್ಲಿ ಮೊದಲ ಇಲ್ಲಿ ಪ್ರಾಬಲ್ಯ ಸಾಧಿಸಿತ್ತು.

ಇದನ್ನೂ ಓದಿ: Lok sabha election: ತಮಿಳುನಾಡಿನಲ್ಲಿ ಬಿಜೆಪಿ ಆಗಲಿದೆ 2ನೇ ಅತಿದೊಡ್ಡ ಪಕ್ಷ; ಸಮೀಕ್ಷೆ ಹೇಳೋದಿಷ್ಟು

ಬಿಜೆಪಿ ರಚನೆ ಬಳಿಕ…

1975- 77ರ ತುರ್ತು ಪರಿಸ್ಥಿತಿಯ ಬಳಿಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಎದುರಿಸಲು ಭಾರತೀಯ ಜನತಾ ಪಕ್ಷವನ್ನು ಬಲಪಡಿಸಲಾಯಿತು. ಭಾರತೀಯ ಜನಸಂಘ, ಜನತಾ ಮೋರ್ಚಾ, ಭಾರತೀಯ ಲೋಕದಳ, ಸ್ವತಂತ್ರ ಪಕ್ಷ ಮತ್ತು ಸೋಷಿಯಲಿಸ್ಟ್ ಪಾರ್ಟಿ ಆಫ್ ಇಂಡಿಯಾದಂತಹ ಪಕ್ಷಗಳ ಆದರ್ಶ ನಾಯಕರನ್ನು ಒಳಗೊಂಡಿರುವ ಬಿಜೆಪಿ ಮೂಲಭೂತವಾಗಿ ಒಂದು ಸಂಯುಕ್ತ ವಿರೋಧ ಪಕ್ಷವಾಗಿ ಜನರ ಪ್ರೀತಿಗೆ ಪಾತ್ರವಾಗಿತ್ತು.

ವಾಜಪೇಯಿ ಅವರನ್ನು ಸೋಲಿಸಿದ್ದ ಪ್ರತಾಪ್

1977ರ ಲೋಕಸಭಾ ಚುನಾವಣೆಯ ಮೊದಲು ಸ್ವತಂತ್ರ ಅಭ್ಯರ್ಥಿಗಳಾದ ಸ್ವಾತಂತ್ರ್ಯ ಹೋರಾಟಗಾರ ರಾಜಾ ಗಿರಿರಾಜ್ ಸರಣ್ ಸಿಂಗ್ (1952) ಮತ್ತು ರಾಜಾ ಮಹೇಂದ್ರ ಪ್ರತಾಪ್ (1957) ಅವರು ಇಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದರು. ಪ್ರತಾಪ್ ಅವರು ಆ ವರ್ಷ ಭಾರತೀಯ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸಿದ್ದರು.

1962ರಲ್ಲಿ ರೈತ ನಾಯಕ ಚೌಧರಿ ದಿಗಂಬರ ಸಿಂಗ್ ಅವರು ಪ್ರತಾಪ್ ಅವರನ್ನು ಸೋಲಿಸಿ ಗೆದ್ದಾಗ ಕಾಂಗ್ರೆಸ್ ಮೊದಲ ಬಾರಿಗೆ ಇಲ್ಲಿ ಅಧಿಕಾರಕ್ಕೆ ಬಂದಿತು. ಅವರ ಅನಂತರ ಮತ್ತೊಬ್ಬ ಕಾಂಗ್ರೆಸ್ ನಾಯಕ ಚಕಲೇಶ್ವರ್ ಸಿಂಗ್ ಅಧಿಕಾರ ವಹಿಸಿಕೊಂಡರು.

ಚೌಧರಿ ದಿಗಂಬರ್ ಸಿಂಗ್ 1980ರಲ್ಲಿ ಜನತಾ ಪಕ್ಷದ ಟಿಕೆಟ್‌ನಲ್ಲಿ ಲೋಕಸಭೆಗೆ ಮರಳಿದರು. ಅವರು 1969ರಲ್ಲಿ ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿ ದಳಕ್ಕೆ ಸೇರಿದರು. 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಅನಂತರ ಮನ್ವೇಂದ್ರ ಸಿಂಗ್ ಸ್ಥಾನವನ್ನು ಗೆದ್ದಾಗ ಕಾಂಗ್ರೆಸ್ ಇಲ್ಲಿ ಮರಳಿ ಅಧಿಕಾರಕ್ಕೆ ಬಂದಿತ್ತು. ಆದರೆ ಅವರು ಜನತಾ ದಳಕ್ಕೆ ಸೇರಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಜಗಜೀವನ್ ರಾಮ್ ಅವರು ಜನ ಮೋರ್ಚಾ ಮತ್ತು ಲೋಕದಳವನ್ನು ಒಳಗೊಂಡಿರುವ ಜನತಾ ಪಕ್ಷದ ಒಡೆದ ಘಟಕಕ್ಕೆ ಸೇರಿದರು. ಮತ್ತೆ ಜನತಾ ದಳ ಟಿಕೆಟ್‌ನಲ್ಲಿ ಗೆದ್ದರು.

ಭಾರತೀಯ ಜನಸಂಘ ವಿಕಸನಗೊಂಡ ಬಳಿಕ ಸ್ವಾಮಿ ಸಚ್ಚಿದಾನಂದ ಹರಿ ಸಾಕ್ಷಿ ಜಿ. ಮಹಾರಾಜ್ ಅವರು 1991 ರಲ್ಲಿ ಮಥುರಾದಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಗೆಲುವು ತಂದು ಕೊಟ್ಟರು. ಈ ಗೆಲುವಿನಲ್ಲಿ ಸಾಕ್ಷಿ ಮಹಾರಾಜ್ ಜಾಟ್ ಪ್ರಾಬಲ್ಯದ ಕ್ಷೇತ್ರದಲ್ಲಿ ಗೆದ್ದ ಮೊದಲ ಒಬಿಸಿ ನಾಯಕರಾದರು. ಮುಂದಿನ ಮೂರು ಚುನಾವಣೆಗಳಲ್ಲಿ 1996, 1998 ಮತ್ತು 1999ರಲ್ಲಿ ಚೌಧರಿ ತೇಜ್ವೀರ್ ಸಿಂಗ್ ಬಿಜೆಪಿಯಿಂದ ಮಥುರಾ ಸ್ಥಾನವನ್ನು ಗೆದ್ದರು.

2004ರಲ್ಲಿ ಮನ್ವೇಂದ್ರ ಸಿಂಗ್ ಗೆಲುವಿನ ಮೂಲಕ ಮತ್ತೆ ಕಾಂಗ್ರೆಸ್ ಮಥುರಾಗೆ ಮರಳಿತ್ತು. 2009ರಲ್ಲಿ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ, ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಅವರು ಕಣಕ್ಕಿಳಿದು ಗೆದ್ದಿದ್ದರು. 2014ರಲ್ಲಿ ಜಯಂತ್ ಚೌಧರಿ ವಿರುದ್ಧ ಹೇಮಾ ಮಾಲಿನಿ ಅವರನ್ನು ಬಿಜೆಪಿ ಕಣಕ್ಕಿಳಿಸಿ ಗೆಲುವು ಸಾಧಿಸಿತು. 2019ರಲ್ಲೂ ಗೆಲುವು ಹೇಮಾ ಮಾಲಿನಿ ಅವರದಾಯಿತು.


ಕೃಷ್ಣನ ನಗರಿಯಲ್ಲಿ ಡ್ರೀಮ್ ಗರ್ಲ್

ಹೇಮಾ ಮಾಲಿನಿ ಅವರಿಗೆ ಸೆಲೆಬ್ರಿಟಿ ಸ್ಥಾನಮಾನ ಇತ್ತು ಮತ್ತು ಅವರು ಜಾಟ್ ಸಮುದಾಯದ ಸೊಸೆ ಎಂಬುದು ಪ್ಲಸ್ ಪಾಯಿಂಟ್. ನಟ ಧರ್ಮೇಂದ್ರ ಡಿ’ಯೋಲ್ ಅವರೊಂದಿಗಿನ ವಿವಾಹದಿಂದಾಗಿ ಅವರು ಜಾಟ್‌ಗಳು ಮತ್ತು ರೈತರ ಸಮುದಾಯದಿಂದ ಬೆಂಬಲವನ್ನು ಪಡೆದು ಚೌಧರಿ ಕುಟುಂಬ ರಾಜಕಾರಣವನ್ನು ಉರುಳಿಸಿದರು.

ಶೇ. 35ಕ್ಕಿಂತ ಹೆಚ್ಚು ಚಾಟ್ ಮತದಾರರ ಒಲವು ಹೊಂದಿರುವ ಹೇಮಾ ಮಾಲಿನಿ ಈ ಬಾರಿ ಮತ್ತೆ ಮಥುರಾದಿಂದ ಲೋಕಸಭೆಗೆ ಮರಳಲು ಬಯಸಿದ್ದಾರೆ. ಜಯಂತ್ ಚೌಧರಿ ಈಗ ಎನ್‌ಡಿಎ ಸೇರಿಕೊಂಡಿರುವುದರಿಂದ ಕೃಷ್ಣ ನಗರಿಯ ಮತಗಳು ಬಿಜೆಪಿಗೆ ಸಿಗುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಇಲ್ಲಿ ಬಿಜೆಪಿ ಆಡಳಿತ

ಮಥುರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಾದ ಛಾಟಾ, ಮಂತ್, ಗೋವರ್ಧನ್, ಮಥುರಾ ಮತ್ತು ಬಲದೇವ್ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಬಿಜೆಪಿಯ ಹೇಮಾ ಮಾಲಿನಿಯ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

2011 ರ ಜನಗಣತಿಯ ಪ್ರಕಾರ ಮಥುರಾ ಜಿಲ್ಲೆಯ ಒಟ್ಟು ಜನಸಂಖ್ಯೆ ಸುಮಾರು 25.5 ಲಕ್ಷ. ಮಥುರಾ ಕ್ಷೇತ್ರವು 2019 ರಲ್ಲಿ 18 ಲಕ್ಷ ಮತದಾರರನ್ನು ಹೊಂದಿತ್ತು ಮತ್ತು ಶೇ. 61ರಷ್ಟು ಇಲ್ಲಿ ಮತದಾನವಾಗಿತ್ತು.

Continue Reading

ಪ್ರವಾಸ

Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!

Summer Tour: ಸುಂದರ ತಾಣಗಳಲ್ಲಿ ಈ ಬೇಸಿಗೆಯನ್ನು ಕಳೆಯಬೇಕು ಎನ್ನುವ ಯೋಚನೆ ಮಾಡುತ್ತಿದ್ದರೆ ಪಾಂಡಿಚೇರಿಯಲ್ಲಿ ಸುತ್ತಬಹುದು. ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ.

VISTARANEWS.COM


on

By

Summer tour
Koo

ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ತಾಣಕ್ಕೆ ಈ ಬಾರಿ ಬೇಸಿಗೆಯಲ್ಲಿ ಪ್ರವಾಸ (Summer tour) ಹೋಗಬೇಕು ಎನ್ನುವ ಯೋಜನೆ ಇದ್ದರೆ ಭಾರತದ (india) ‘ಫ್ರೆಂಚ್ ರಾಜಧಾನಿ’ ಪಾಂಡಿಚೇರಿಗೆ (Pondicherry) ಪ್ರವಾಸ ಹೊರಡುವ ಪ್ಲಾನ್ ಮಾಡಿಕೊಳ್ಳಬಹುದು. ಅತ್ಯಂತ ಶಾಂತಿಯುತ ನಗರವಾದ ಪಾಂಡಿಚೇರಿ ಫ್ರೆಂಚ್ (french) ಪ್ರೇರಿತ ನಗರ ವಿನ್ಯಾಸದಿಂದಾಗಿ ವಿಶ್ವದಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಸುಂದರ ತಾಣಗಳಲ್ಲಿ ಸುತ್ತಬೇಕು ಎನ್ನುವ ಯೋಚನೆ ಇದ್ದರೆ ಪಾಂಡಿಚೇರಿಯಲ್ಲಿ ಹರಸಾಹಸ ಮಾಡಬೇಕಾಗಿಲ್ಲ. ಯಾಕೆಂದರೆ ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಇಲ್ಲಿನ ಅನುಭವಗಳ ಶ್ರೇಣಿಯು ಪ್ರವಾಸಿಗರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲಿಗೆ ಪ್ರವಾಸ ಯೋಜನೆ ಮಾಡಿಕೊಂಡರೆ ಖಂಡಿತಾ ಯಾರಿಗೂ ನಿರಾಸೆಯಂತೂ ಆಗೋದಿಲ್ಲ.

ಫೆಂಚರ ನೆನಪುಗಳನ್ನು ಹೇಳುವ ಮರಗಳಿಂದ ಕೂಡಿದ ಬೌಲೆವಾರ್ಡ್‌ಗಳು, ಚಿನ್ನದ ಕಡಲತೀರಗಳು ಮತ್ತು ಕಲಾತ್ಮಕವಾಗಿ ಪುನಃಸ್ಥಾಪಿಸಿದ ವಸಾಹತುಶಾಹಿ ವಾಸ್ತುಶಿಲ್ಪಗಳು ಆಧುನಿಕತೆಯೊಂದಿಗೆ ಬೆರೆತು ತನ್ನ ಹಿಂದಿನ ನೆನಪುಗಳ ಕಥೆ ಹೇಳುತ್ತದೆ.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಇತಿಹಾಸದ ಹೆಗ್ಗುರುತು

ಫ್ರೆಂಚ್ ವಸಾಹತುಶಾಹಿ ಟ್ರಯಲ್ ನಲ್ಲಿ ವಾಲ್ಕ್ ಡೌನ್ ಹಿಸ್ಟರಿಯನ್ನು ಕಾಣಬಹುದು. 28 ವಿಕ್ಟೋರಿಯನ್ ಸೈಟ್‌ಗಳಲ್ಲಿ 300 ವರ್ಷಗಳ ಇತಿಹಾಸವನ್ನು ಹೇಳುವಂತಿದೆ. ಮೈರಿ, ರಾಜ್ ನಿವಾಸ್ ಮತ್ತು ಹಳೆಯ ಲೈಟ್‌ಹೌಸ್‌ನಂತಹ ಹೆಗ್ಗುರುತುಗಳು ಬಂದರು ಚಟುವಟಿಗೆಳ ಬಗ್ಗೆ ವರ್ಣಿಸುತ್ತದೆ. ಫ್ರೆಂಚ್ ರಾಜಮನೆತನದ ಹಳದಿ ಬಣ್ಣವನ್ನು ಬಳಸಿ ಸೊಗಸಾದ ಟೌನ್‌ಹೌಸ್‌ಗಳಿಂದ ಲೇಪನ ಮಾಡಿ ನಿರ್ಮಿಸಲಾಗಿರುವ ಲ್ಯಾಟಿನ್ ಕ್ವಾರ್ಟರ್‌ಗಳನ್ನು ಇಲ್ಲಿ ನೋಡಲು ಮರೆಯದಿರಿ. ಇಲ್ಲಿನ ಲೆ ಕೆಫೆಯ ಪ್ಯಾಕೆಟ್ ಊಟದ ಪಾಕಪದ್ಧತಿಯು ರೋಮಾಂಚಕ ಅನುಭವ ಕೊಡುವುದು. ಇದು ಫ್ರಾಂಕೋ-ತಮಿಳು ಸಂಸ್ಕೃತಿಯನ್ನು ಸಾರುತ್ತದೆ.


ಸೆರೆನಿಟಿ ಬೀಚ್‌

ಬೆರಗುಗೊಳಿಸುವ ಸೂರ್ಯೋದಯವನ್ನು ಕಾಣಬೇಕಾದರೆ ಸೆರೆನಿಟಿ ಬೀಚ್ ಗೆ ಹೋಗಬಹುದು. ಸೂರ್ಯೋದಯವನ್ನು ನೋಡುತ್ತಾ ಸಮುದ್ರಕ್ಕೆ ಹೊರಟಿರುವ ಮೀನುಗಾರರನ್ನು ಮುಂಜಾನೆ ಇಲ್ಲಿಗೆ ಭೇಟಿ ಕೊಡಬಹುದು. ಹಸಿರು ಅಲೆಗಳು ಕಿತ್ತಳೆ ಆಕಾಶದಲ್ಲಿ ಕರಗುವಂತೆ ಕಾಣುವ ದೋಣಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇಲ್ಲಿ ಸಾಹಸಮಯ ಜಲಕ್ರೀಡೆಯಲ್ಲೂ ಪಾಲ್ಗೊಳ್ಳಬಹುದು. ಮೀನುಗಾರರ ಬದುಕಿನ ಅನುಭವದೊಂದಿಗೆ ಫ್ರೆಶ್ ಸಮುದ್ರಾಹಾರವನ್ನು ಇಲ್ಲಿ ಸವಿಯಬಹುದು.


ಪ್ರೊಮೆನೇಡ್ ಬೀಚ್ ರಸ್ತೆ

ಪಾಂಡಿಚೇರಿಯ ಪ್ರತಿಯೊಂದು ಬೀಚ್ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದರಲ್ಲಿ ಪ್ರೊಮೆನೇಡ್ ಬೀಚ್ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವುದು ಒಂದು ಸುಂದರ ಅನುಭವ. ಬೀಸುವ ತಂಗಾಳಿಯೊಂದಿಗೆ ಜಲಾಭಿಮುಖವನ್ನು ಹೆಲ್ಮೆಟ್ ಧರಿಸಿ ಬೈಸಿಕಲ್ ಓಡಿಸಲು ಅವಕಾಶವಿದೆ. ಇದರೊಂದಿದೆ ಚಿತ್ತಾಕರ್ಷಕ ಬ್ರಿಟಿಷ್ ವಿಲ್ಲಾಗಳು, ತಮಿಳು ದೇವಾಲಯಗಳನ್ನು ಕಾಣಬಹುದು. ಇಲ್ಲಿ ಕ್ಯಾಂಡಲ್-ಲೈಟ್ ಕೆಫೆಗಳು ಮತ್ತು ಜೆಲಾಟೊ ಜಾಯಿಂಟ್‌ಗಳು ಅದ್ಬುತ ಅನುಭವ ಕೊಡುವುದು.

ಅರಬಿಂದೋ ಆಶ್ರಮ

ಪ್ರಶಾಂತವಾದ ತಾಣದ ಹುಡುಕಾಟದಲ್ಲಿದ್ದಾರೆ ಧ್ಯಾನ ಮಾಡಲು ಸೂಕ್ತವಾದ ಸ್ಥಳ ಮಾತೃಮಂದಿರ ಉದ್ಯಾನವನದಲ್ಲಿರುವ ಅರಬಿಂದೋ ಆಶ್ರಮ. ಮಿರ್ರಾ ಅಲ್ಫಾಸ್ಸಾ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ಇಲ್ಲಿನ ಸುಂದರವಾದ ಹಳ್ಳಿಗಾಡಿನ ಸೊಂಪಾದ ವಿಹಂಗಮ ನೋಟಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಸೊಂಪಾದ ಹುಲ್ಲುಹಾಸುಗಳ ಮೇಲೆ ನಡೆಯುವುದು ಹೆಚ್ಚು ಖುಷಿ ಕೊಡುತ್ತದೆ.

ವೈಬ್ರೆಂಟ್ ಬಜಾರ್

ಕಲಾತ್ಮಕ ಸಮುದಾಯದಿಂದ ನಿರ್ವಹಿಸಲ್ಪಡುವ ವೈಬ್ರೆಂಟ್ ಬಜಾರ್ ವಿಶಿಷ್ಟವಾದ ಸ್ಥಳೀಯ ಸಾಮಗ್ರಿಗಳನ್ನು ಒಳಗೊಂಡಿದೆ. ಕೇರಳದ ಸಾಂಪ್ರದಾಯಿಕ ಬ್ಲಾಕ್ ಪ್ರಿಂಟಿಂಗ್ ವಿಧಾನಗಳನ್ನು ಬಳಸಿಕೊಂಡು ಮುದ್ರಿಸಲಾದ ಬಿಳಿ ಕಾಟನ್ ಶರ್ಟ್‌ಗಳು, ಕೈಯಿಂದ ಮಾಡಿದ ಸಾವಯವ ಸಾಬೂನುಗಳು, ಸಾಂಪ್ರದಾಯಿಕವಾಗಿ ಹೊರತೆಗೆಯಲಾದ ಸುಗಂಧ ದ್ರವ್ಯಗಳು ಮತ್ತು ಜೇನುತುಪ್ಪ ಇಲ್ಲಿ ಹೆಚ್ಚು ಬೇಡಿಕೆಯುಳ್ಳ ವಸ್ತುಗಳು.


ಟೆಂಪಲ್ ರೀಫ್‌ನಲ್ಲಿ ಸ್ಕೂಬಾ

ಉಷ್ಣವಲಯದ ನೀರಿನಲ್ಲಿ ಸ್ಕೂಬಾ ಮಾಡಿ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು. ಸ್ತಬ್ಧ ಬೀಚ್ ಕರಾವಳಿಯಲ್ಲಿ ವರ್ಣರಂಜಿತ ಹವಳದ ಬಂಡೆಗಳಿಂದ ಬೀಸುತ್ತಿರುವ ಸ್ಪಾಟ್ ಏಂಜೆಲ್ ಮೀನುಗಳು, ಬೆರಗುಗೊಳಿಸುವ ನೀರೊಳಗಿನ ಜೀವವೈವಿಧ್ಯವನ್ನು ಹತ್ತಿರದಿಂದ ನೋಡಬಹುದು. ಇದಕ್ಕಾಗಿ ಪರಿಣಿತರು ಮೊದಲ ಬಾರಿಗೆ ಸ್ಕೂಬಾ ಮಾಡುವವರಿಗೆ ತರಬೇತಿ ನೀಡುತ್ತಾರೆ.

ತಮಿಳು- ಫ್ರೆಂಚ್ ಪಾಕಶಾಲೆ

ಪಾಂಡಿಚೇರಿಗೆ ಭೇಟಿ ನೀಡಿದರೆ ತಮಿಳು- ಫ್ರೆಂಚ್ ಪಾಕಶಾಲೆಗೆ ಭೇಟಿಯಾಗುವುದನ್ನು ತಪ್ಪಿಸಬೇಡಿ. ವಿಶ್ವ ಮಟ್ಟದ ಸುಪ್ರಸಿದ್ದ ಖಾದ್ಯಗಳೊಂದಿಗೆ ಸ್ಥಳೀಯ ಮಸಾಲೆಗಳನ್ನು ಬೆಸೆಯುವ ಇನ್ವೆಂಟಿವ್ ಈಸ್ಟ್-ಮೀಟ್ಸ್-ವೆಸ್ಟ್ ಪಾಕಪದ್ಧತಿ ಎಲ್ಲರನ್ನೂ ಸೆಳೆಯುತ್ತದೆ. ಇಲ್ಲಿನ ಸುಪ್ರಸಿದ್ದ ಸಹಿ ಭಕ್ಷ್ಯಗಳೆಂದರೆ ಕ್ರಿಯೋಲ್ ಥಾಲಿ, ಮಸಾಲಾ ಆಮ್ಲೆಟ್, ಕರಿ ಎಲೆಯ ಐಸ್ ಕ್ರೀಮ್, ಸಮುದ್ರಾಹಾರಗಳಲ್ಲಿ ಸ್ಟ್ಯೂ, ತರಕಾರಿ ಕಟ್ಲೆಟ್‌ಗಳು, ಚಿಕ್ ಹೆರಿಟೇಜ್ ಕೆಫೆಗಳಲ್ಲಿ ಕ್ರೋಸೆಂಟ್‌ಗಳು, ಆಕರ್ಷಕ ಬಿಸ್ಟ್ರೋಗಳಲ್ಲಿ ಪಾಂಡಿಯ ಪ್ರಸಿದ್ಧ ಕಾಫಿ, ವೈನ್, ಚೀಸ್ ನ ರುಚಿ ನೋಡಬಹುದು.

Continue Reading
Advertisement
Self Harming In chitradurga
ಚಿತ್ರದುರ್ಗ11 mins ago

Self Harming : ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

Saffron Row
ದೇಶ15 mins ago

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

gold rate today 18
ಚಿನ್ನದ ದರ31 mins ago

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Rohit sharma
ಕ್ರೀಡೆ35 mins ago

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

summer special trains
ಬೆಂಗಳೂರು43 mins ago

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Senior citizen
ಲೈಫ್‌ಸ್ಟೈಲ್49 mins ago

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Lok sabha election-2024
Latest54 mins ago

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Darshan and Sumalatha Ambareesh
ಪ್ರಮುಖ ಸುದ್ದಿ1 hour ago

Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

Uttarakaanda Movie doodh peda diganth mirchi mallige
ಸ್ಯಾಂಡಲ್ ವುಡ್1 hour ago

Uttarakaanda Movie: ʻಉತ್ತರಕಾಂಡʼ ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್ ಈಗʻಮಿರ್ಚಿ ಮಲ್ಲಿಗೆʼ!

Shubman Gill
ಕ್ರೀಡೆ1 hour ago

Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌