Shahrukh Khan | ʻದೇಶಭಕ್ತಿ ಸಾರುವ ಚಿತ್ರ ಪಠಾಣ್‌ʼ: ಟ್ವೀಟ್‌ನಲ್ಲಿ ಅಭಿಮಾನಿಗಳ ಜತೆ ಶಾರುಖ್‌ ಹೇಳಿದ್ದೇನು? - Vistara News

ಬಾಲಿವುಡ್

Shahrukh Khan | ʻದೇಶಭಕ್ತಿ ಸಾರುವ ಚಿತ್ರ ಪಠಾಣ್‌ʼ: ಟ್ವೀಟ್‌ನಲ್ಲಿ ಅಭಿಮಾನಿಗಳ ಜತೆ ಶಾರುಖ್‌ ಹೇಳಿದ್ದೇನು?

ಆನ್‌ಲೈನ್‌ನಲ್ಲಿ ಅಭಿಮಾನಿಗಳೊಂದಿಗೆ ಶಾರುಖ್‌ ಖಾನ್‌ (Shahrukh Khan ) ಸಂವಾದ ನಡೆಸಿದ್ದಾರೆ. ಟ್ವೀಟ್‌ಗಳ ಮೂಲಕ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

VISTARANEWS.COM


on

Shahrukh Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ʻಪಠಾಣ್‌ʼ ಸಿನಿಮಾದ ಕೇಸರಿ ವಿವಾದದ ಬೆನ್ನಲ್ಲೇ ನಟ ಶಾರುಖ್‌ ಖಾನ್‌ (Shahrukh Khan) ಆನ್‌ಲೈನ್‌ನಲ್ಲಿ ಅಭಿಮಾನಿಗಳೊಂದಿಗೆ #AskSRK ಟ್ಯಾಗ್‌ನಲ್ಲಿ ಸಂವಾದ ನಡೆಸಿದ್ದಾರೆ. ಟ್ವೀಟ್‌ಗಳ ಮೂಲಕ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ʻಪಠಾಣ್‌ʼ ಸಿನಿಮಾ ದೇಶಭಕ್ತಿ ಸಾರುವ ಚಿತ್ರ ಎಂದು ಶಾರುಖ್‌ ಹೇಳಿದ್ದಾರೆ.

ತಮ್ಮ ಮುಂಬರುವ ಚಿತ್ರ ‘ಪಠಾಣ್’ ಬಿಡುಗಡೆಗೆ ಸಿದ್ಧರಾಗಿರುವ ಶಾರುಖ್ ಖಾನ್, ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸ್ವಲ್ಪ ಸಮಯ ಮೀಸಲಿಟ್ಟಿದ್ದಾರೆ. ಡಿಸೆಂಬರ್‌ 17 ಶನಿವಾರ ಸಂಜೆ, ಅವರು ಸರಣಿ ಟ್ವೀಟ್ ಮಾಡಿದ್ದಾರೆ. ತಮ್ಮ 15 ನಿಮಿಷಗಳ ಕಾಲ ಅಭಿಮಾನಿಗಳಿಗೆ ಮೀಸಲಿಟ್ಟ ಶಾರುಖ್‌ ಅವರಿಗೆ ಅಭಿಮಾನಿಯೊಬ್ಬರು ಕಾರ್ಯಕ್ರಮ 15 ನಿಮಿಷಗಳ ಕಾಲ ಮಾತ್ರ ಏಕೆ? ಎಂದು ಪ್ರಶ್ನೆ ಕೇಳಿದ್ದಾರೆ. ಉತ್ತರಿಸಿದ ಶಾರುಖ್‌ ಖಾನ್‌ ʻʻಎಲ್ಲರಿಗೂ 15 ನಿಮಿಷದ ಜನಪ್ರಿಯತೆ ಬೇಕು. ಪಠಾಣ್‌ ಕೂಡ ದೇಶಭಕ್ತಿಯ ಸಿನಿಮಾ. ಆದರೆ ಆ್ಯಕ್ಷನ್‌ ರೀತಿಯಲ್ಲಿ ಇದೆʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

ಅಭಿಮಾನಿಯೊಬ್ಬರು ಶಾರುಖ್ ಅವರನ್ನು ʻಸ್ವದೇಶ್‌ʼ ಮತ್ತು ʻಚಕ್ ದೇʼಯಂತಹ ಚಿತ್ರಗಳಲ್ಲಿ ಏಕೆ ಕೆಲಸ ಮಾಡುವುದಿಲ್ಲ ಎಂದು ಕೇಳಿದ್ದಾರೆ. ʻʻನಾವು ಅಂತಹ ಎರಡು ಚಲನಚಿತ್ರಗಳನ್ನು ಈಗಾಗಲೇ ಮಾಡಿದ್ದೇವೆ, ನಾನು ಅದನ್ನು ಎಷ್ಟು ಬಾರಿ ಮಾಡಬೇಕು?” ಎಂದು ಶಾರುಖ್‌ ಉತ್ತರ ನೀಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಪಠಾಣ್‌ ಮೊದಲ ದಿನ ಎಷ್ಟು ಗಳಿಕೆ ಕಾಣಬಹುದು ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಶಾರುಖ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻನಾನು ಈ ಪ್ರೆಡಿಕ್ಷನ್‌ನಲ್ಲಿ ಭಾಗಿಯಾಗಿಲ್ಲ. ನಾನು ನಿಮಗೆ ಮನರಂಜನೆ ನೀಡುವ ಮತ್ತು ನಿಮ್ಮನ್ನು ನಗಿಸುವುದರಲ್ಲಿದ್ದೇನೆ. ಈಗ ನನ್ನ ತಂಡವು ನನ್ನನ್ನು ಕೆಲಸಕ್ಕೆ ಕರೆಯುತ್ತಿದೆ. ಇನ್ನೊಂದು ದಿನ ನಿಮ್ಮೊಂದಿಗೆ ಮಾತನಾಡುತ್ತೇನೆ. ಪ್ರೀತಿ ಮತ್ತು ನಿಮ್ಮ ಸಮಯಕ್ಕೆ ಧನ್ಯವಾದಗಳು. ಶೀಘ್ರದಲ್ಲೇ ಥಿಯೇಟರ್‌ನಲ್ಲಿ ಭೇಟಿಯಾಗೋಣʼʼ ಎಂದು ಅವರು ಟ್ವಿಟರ್‌ನಲ್ಲಿ ತಮ್ಮ ಚಾಟ್ ಅನ್ನು ಅಂತ್ಯಗೊಳಿಸಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಮುಂದಿನ ವರ್ಷ ಜನವರಿ 25 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಈಗಾಗಲೇ ಒಂದು ಗುಂಪು ಪಠಾಣ್‌ ಸಿನಿಮಾದ ʻಬೇಷರಮ್‌ ರಂಗ್‌ʼ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನಿಸಿ ಕೆಲವರ ಭಾವನೆಗೆ ದಕ್ಕೆ ತರಲಾಗಿದೆ ಎಂದು ಆರೋಪಿಸಿ, ಸಿನಿಮಾ ಬಾಯ್ಕಾಟ್‌ ಮಾಡಬೇಕೆಂದು ಕರೆ ನೀಡಿದೆ.

ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್‌ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Silence 2 review: ಕುತೂಹಲ ಕೆರಳಿಸುವ ಕತೆ; ಮನೋಜ್ ಬಾಜಪೇಯಿ ಮನೋಜ್ಞ ಅಭಿನಯ!

Silence 2 review: ಸೈಲೆನ್ಸ್ 2 ಚಿತ್ರದ ಮುಖ್ಯ ಪಾತ್ರದಾರಿ ಮನೋಜ್ ಬಾಜಪೇಯಿ ಆಗಿದ್ದರಿಂದ ಚಿತ್ರದ ಹೆಚ್ಚಿನ ಭಾಗ ಅವರಿಗೆ ಮೀಸಲಾಗಿದೆ. ಇವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಮತ್ತೊಮ್ಮೆ ಗಟ್ಟಿಯಾಗಿ ನೆಲೆಯೂರಿದ್ದಾರೆ. ಚಿತ್ರದ ಕತೆಯೂ ಕುತೂಹಲಕರವಾಗಿದೆ.

VISTARANEWS.COM


on

Silence 2
Koo

ಬೆಂಗಳೂರು: ಸೈಲೆನ್ಸ್ 2 (Silence 2) ಚಿತ್ರ ಒಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಮುಂಬೈ ನ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣದಿಂದ ಪ್ರಾರಂಭವಾಗುತ್ತದೆ. ಅಂದು ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ನಲ್ಲಿ ಹಲವಾರು ಮಂದಿ ಸಾವನಪ್ಪಿದ ನಂತರ ತನಿಖೆಗಾಗಿ ವಿಶೇಷ ಅಪರಾಧ ತಂಡವನ್ನು ಕರೆಯಲಾಗುತ್ತದೆ. ತನಿಖೆ ಮುಂದುವರಿಯುತ್ತಿದ್ದಂತೆ ಪ್ರಕರಣದಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದಿದೆ ಎಂದು ತೋರುತ್ತದೆ.

ಎಸಿಪಿ ಅವಿನಾಶ್ ವರ್ಮಾ (ಮನೋಜ್ ಬಾಜಪೇಯಿ) ಮತ್ತು ಅವರ ತಂಡ ಮುಂಬೈ ನ ನೈಟ್ ಕ್ಲಬ್ ನಲ್ಲಿ ನಡೆದ ಶೂಟೌಟ್ ಪ್ರಕರಣ ತನಿಖೆಯನ್ನು ವಹಿಸಿಕೊಳ್ಳುತ್ತಾರೆ. ಅವರು ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡಿದಷ್ಟು ಅದರ ದಿಕ್ಕು ಬದಲಾಗುತ್ತಾ ಹೋಗುತ್ತದೆ. ಈ ಶೂಟೌಟ್ ಪ್ರಕರಣ ಮೊದಲ ನೋಟಕ್ಕೆ ರಾಜಕೀಯ ಪ್ರೇರಿತ ಎಂದು ಭಾವಿಸಲಾಗಿದ್ದರೂ ಹೆಚ್ಚಿನ ವಿವರಗಳು ಬಹಿರಂಗಗೊಂಡಂತೆ ಗುರಿ ಬೇರೆ ಯಾರೋ ಎಂದು ಶಂಕೆ ಎಸಿಪಿಗೆ ಹುಟ್ಟಿಕೊಳ್ಳುತ್ತದೆ.

ಆ ರಾತ್ರಿ ನಡೆದ ಶೂಟೌಟ್ ಪ್ರಕರಣದಲ್ಲಿ ಸಾವನಪ್ಪಿದ ಬಲಿಪಶುಗಳಲ್ಲಿ ಒಬ್ಬರಾದ ಅಜ್ಮಾ ಖಾನ್ ಅವರ ಮೇಲೆ ಗುಂಡು ಹಾರಿಸಿದ ರೀತಿ ತನಿಖಾ ಅಧಿಕಾರಿಗಳ ಜೊತೆಗೆ ಪ್ರೇಕ್ಷಕರ ಆಸಕ್ತಿಯನ್ನು ಕೆರಳಿಸುತ್ತದೆ. ಶೀಘ್ರದಲ್ಲಿಯೇ ಎಸಿಪಿ ಅವಿನಾಶ್ ವರ್ಮಾ ನೇತೃತ್ವದ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ರಹಸ್ಯವನ್ನು ಬಿಚ್ಚಿಡಲು ಪ್ರಾರಂಭಿಸುತ್ತದೆ. ತನಿಖೆಯನ್ನು ಹೆಚ್ಚಿಸಿದಾಗ ಇನ್ನೂ ಕೆಲವು ಪಾತ್ರಗಳು ಅನಾವರಣಗೊಳ್ಳುತ್ತದೆ.

ಸೈಲೆನ್ಸ್ 2 ಚಿತ್ರದ ಮುಖ್ಯ ಪಾತ್ರದಾರಿ ಮನೋಜ್ ಬಾಜಪೇಯಿ ಆಗಿದ್ದರಿಂದ ಚಿತ್ರದ ಹೆಚ್ಚಿನ ಭಾಗ ಅವರಿಗೆ ಸಂಬಂಧಿಸಿದಾಗಿದೆ. ಇವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಮತ್ತು ಆಗಾಗ ಪ್ರೇಕ್ಷಕರು ಹಾಸ್ಯದಲ್ಲಿ ಮುಳುಗುವಂತೆ ಮಾಡುವಂತಹ ಆಕರ್ಷಕ ಸಂಭಾಷಣೆಗಳು ಅವರ ಬಾಯಿಂದ ಕೇಳಿಬರುತ್ತದೆ. ಆರತಿ ಪಾರುಲ್ ಗುಲಾಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಮತ್ತು ಖಳನಾಯಕನಾದ ಅರ್ಜುನ್ ಪಾತ್ರದಲ್ಲಿ ದಿನಕರ್ ಶರ್ಮಾ ಉತ್ತಮವಾಗಿ ನಟಿಸಿದ್ದಾರೆ.

ಇದನ್ನೂ ಓದಿ: Ram Navami 2024: ರಾಮ ನವಮಿಯನ್ನು ವಿಶೇಷವಾಗಿ ಆಚರಿಸುವ ಟಾಪ್‌ 5 ಸ್ಥಳಗಳಿವು

ನೀವು ಕೊಲೆಯ ರಹಸ್ಯವನ್ನು ಬಯಸಿದರೆ ಸೈಲೆನ್ಸ್ 2 ಚಿತ್ರವನ್ನು ಖಂಡಿತವಾಗಿಯೂ ವೀಕ್ಷಿಸಬಹುದು. ಕೆಲವು ಸಣ್ಣಪುಟ್ಟ ನ್ಯೂನತೆಗಳ ಹೊರತಾಗಿ ಈ ಚಿತ್ರವನ್ನೊಮ್ಮೆ ವೀಕ್ಷಿಸಬಹುದಾಗಿದೆ. ಈ ಚಿತ್ರ ಜಿ 5 ಒಟಿಟಿಯಲ್ಲಿ ಲಭ್ಯ ಇದೆ.

Continue Reading

ಸಿನಿಮಾ

Movie release: ಹಾರರ್, ಥ್ರಿಲರ್, ಆ್ಯಕ್ಷನ್.. ಒಟಿಟಿಯಲ್ಲಿ ಬರಲಿವೆ ಸೂಪರ್ ಹಿಟ್ ಮೂವಿಗಳು

Movie release: ಸುಮಾರು ಎರಡು ವಾರಗಳ ಬಳಿಕ ಈ ವಾರದಲ್ಲಿ ಹಲವಾರು ಚಿತ್ರಗಳು ಒಟಿಟಿಯಲ್ಲಿ ಬರಲು ಸಜ್ಜಾಗಿದೆ. ಹಾರರ್, ಥ್ರಿಲರ್, ಆಕ್ಷನ್, ರೋಮ್ಯಾಂಟಿಕ್ ಸೇರಿದಂತೆ ಸೂಪರ್ ಹಿಟ್ ಮೂವಿಗಳು ಈ ವಾರ ತೆರೆ ಕಾಣಲಿದೆ.

VISTARANEWS.COM


on

By

Movie release
Koo

ಬೆಂಗಳೂರು: ಹೊರಗೆ ಬಿಸಿಲು ತೀವ್ರವಾಗಿದೆ. ಹೀಗಿರುವಾಗ ಮನೆಯೊಳಗೆ ಕುಳಿತು ತಂಪಾದ ಜ್ಯೂಸು ಕುಡಿಯುತ್ತಾ, ತಿಂಡಿಗಳನ್ನು ಮೆಲ್ಲುತ್ತಾ ಇಷ್ಟವಾದ ಸಿನಿಮಾಗಳನ್ನು ನೋಡುತ್ತಾ ರಜೆ ಕಳೆಯಬಹುದು. ಯಾಕೆಂದರೆ ಈ ವಾರ ಹಲವು ಹೊಸ ಚಿತ್ರಗಳು ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ. ಅತ್ಯಂತ ನಿರೀಕ್ಷಿತ ಚಿತ್ರಗಳಾದ ಯನಿವನ್ ಬಟ್ ಯು (Anyone But You), ಡ್ಯೂನ್: ಪಾರ್ಟ್ 2 (Dune: Part 2), ಡ್ರೀಮ್ ಸಿನಾರಿಯೊ (Dream Scenario) ಮತ್ತು ಝಾಕ್ ಸ್ನೈಡರ್ಸ್ ರೆಬೆಲ್ ಮೂನ್ – ಪಾರ್ಟ್ 2: ದಿ ಸ್ಕಾರ್ಗಿವರ್ (Zack Snyder’s Rebel Moon – Part Two: The Scargiver) ಕೂಡ ಸೇರಿದೆ.

ಇನ್ನು ವಿದ್ಯಾ ಬಾಲನ್ (Vidya Balan) ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ. ದೋ ಔರ್ ದೋ ಪ್ಯಾರ್ (Do Aur Do Pyaar ) ಕೂಡ ಈ ವಾರ ಥಿಯೇಟರ್‌ಗಳಿಗೆ ಆಗಮಿಸಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಹೀಗಾಗಿ ಮನೆಯಿಂದ ಹೊರಬಂದು ದೊಡ್ಡ ಪರದೆಯ ಮೇಲೆ ಈ ಚಿತ್ರ ನೋಡಬಹುದು.

ಇಷ್ಟೇ ಅಲ್ಲದೇ ಸೀ ಯು ಇನ್ ಅನದರ್ ಲೈಫ್, ದಿ ಗ್ರಿಮ್ ವೇರಿಯೇಷನ್ಸ್, ದಿ ಟೂರಿಸ್ಟ್: ಸೀಸನ್ 2 ಮತ್ತು ಚೀಫ್ ಡಿಟೆಕ್ಟಿವ್ 1958 ಸರಣಿಯು ತೆರೆಗೆ ಬರಲು ಕಾಯುತ್ತಿದೆ. ಈ ವಾರ ನೆಟ್ ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಒಟಿಟಿಯಲ್ಲಿ ಬರಲು ಸಿದ್ದವಾಗಿರುವ ಚಿತ್ರಗಳು ಇಂತಿದೆ.

ಇದನ್ನೂ ಓದಿ: Priyanka Chopra: ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ!

ಡ್ಯೂನ್: ಪಾರ್ಟ್ ಟು

ಬುಕ್ ಮೈ ಶೋ (BookMyShow ) ನಲ್ಲಿ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶನದ ತಿಮೋತಿ ಚಲಾಮೆಟ್, ಝೆಂಡಯಾ, ಜೇವಿಯರ್ ಬಾರ್ಡೆಮ್, ರೆಬೆಕಾ ಫರ್ಗುಸನ್, ಜೋಶ್ ಬ್ರೋಲಿನ್, ಫ್ಲಾರೆನ್ಸ್ ಪಗ್, ಆಸ್ಟಿನ್ ಬಟ್ಲರ್, ಲಿಯಾ ಸೆಡೌಕ್ಸ್, ಕ್ರಿಸ್ಟೋಫರ್ ವಾಕೆನ್ ಮೊದಲಾದವರು ಅಭಿನಯಿಸಿರುವ ಚಿತ್ರ ಡ್ಯೂನ್: ಪಾರ್ಟ್ ಟು ಏಪ್ರಿಲ್ 16ರಂದು ಬಿಡುಗಡೆಯಾಗಲಿದೆ. ಸಾಹಸಮಯ ದೃಶ್ಯಗಳಿಂದಾಗಿಯೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ.


ಅವರ್ ಲಿವಿಂಗ್ ವರ್ಲ್ಡ್

ಜೇಮ್ಸ್ ಹನಿಬೋರ್ನ್ ನಿರ್ದೇಶನದ ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 17ರಂದು ತೆರೆಗೆ ಬರಲಿದೆ. ಪ್ರಮುಖ ಪಾತ್ರಧಾರಿಯಾಗಿ ಕೇಟ್ ಬ್ಲಾಂಚೆಟ್ ಕಾಣಿಸಿಕೊಂಡಿದ್ದು,ಇದರಲ್ಲಿ ಎಮ್ಮಿ ಪ್ರಶಸ್ತಿ ವಿಜೇತ ತಂಡವು ಜೀವಂತ ಜಗತ್ತನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಪ್ರಯತ್ನಿಸುವ ಸಾಹಸಗಾಥೆಯನ್ನು ಒಳಗೊಂಡ ಚಿತ್ರವಿದು. ಅತ್ಯಂತ ರೋಮಾಂಚಕ ದೃಶ್ಯಗಳು ಮನ ಸೆಳೆಯುತ್ತದೆ.


ಸೀ ಯು ಇನ್ ಅನೆದರ್ ಲೈಫ್

ಜಾರ್ಜ್ ಸ್ಯಾಂಚೆಜ್-ಕಾಬೆಜುಡೊ, ಬೋರ್ಜಾ ಸೋಲರ್ ನಿರ್ದೇಶನದ ಈ ಚಿತ್ರದಲ್ಲಿ ರಾಬರ್ಟೊ ಗುಟೈರೆಜ್, ಪೋಲ್ ಲೋಪೆಜ್, ತಮಾರಾ ಕ್ಯಾಸೆಲ್ಲಾಸ್, ಕ್ವಿಮ್ ಅವಿಲಾ, ಮೌರಾದ್ ಔವಾನಿ, ಜೈಮ್ ಜಟಾರಿನ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 17 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಈ ಚಿತ್ರ ತೆರೆಗೆ ಬರಲಿದೆ. ಮ್ಯಾನುಯೆಲ್ ಜಬೋಯಿಸ್ ಅವರ ಪುಸ್ತಕವನ್ನು ಆಧರಿಸಿ ನಿರ್ಮಿಸಿರುವ ಈ ಕಿರುಸರಣಿಯು 11M ರೈಲು ಬಾಂಬ್ ದಾಳಿಯ ಹಿನ್ನೆಲೆಯನ್ನು ಹೊಂದಿದೆ.


ದಿ ಗ್ರಿಮ್ಮ್ ವರಿಯೇಷನ್ಸ್

ಯೊಕೊ ಕನೆಮೊರಿ, ಯಸುಹಿರೊ ಅಕಮಾಟ್ಸು, ಜುನಿಚಿರೊ ಹಶಿಗುಚಿ, ಯುಮಿ ಕಾಮಮುರಾ, ಮಸಾಟೊ ಟಕೆಯುಚಿ, ಶಿಂಟಾರೊ ನಕಾಜವಾ ನಿರ್ದೇಶಿಸರುವ ಅನಿಮೇಷನ್ ಚಿತ್ರ ಏಪ್ರಿಲ್ 17ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ತತ್ಸುಹಿಸಾ ಸುಜುಕಿ, ಕೆಂಜಿ ನೊಜಿಮಾ, ಮಿಸಾಟೊ ಫುಕುಯೆನ್ ಧ್ವನಿ ನೀಡಿರುವ ಚಿತ್ರದಲ್ಲಿ ಜಪಾನೀಸ್ ಮೂಲ ನೆಟ್ ಅನಿಮೇಷನ್ (ONA) ಸಂಕಲನ ಸರಣಿಯು ಸಹೋದರರಾದ ಜಾಕೋಬ್ ಮತ್ತು ವಿಲ್‌ಹೆಲ್ಮ್ ಮತ್ತು ಅವರ ಕಿರಿಯ ಸಹೋದರಿ, ಮುಗ್ಧ ಮತ್ತು ಕುತೂಹಲಕಾರಿ ಚಾರ್ಲೆಟ್ ಸುತ್ತ ಸುತ್ತುತ್ತದೆ.


ದಿ ಸೀಕ್ರೆಟ್ ಸ್ಕೋರ್

ಜುವಾನ್ ಕಾರ್ಲೋಸ್ ಡಿ ಲಾಕಾ ನಿರ್ದೇಶಿಸಿದ ಈ ಚಿತ್ರದಲ್ಲಿ ವಾಲ್ ಡೊರಾಂಟೆಸ್, ಜುವಾನ್ಮಾ ಪಿಯಾನೋ, ಜೋಸ್ ಪೆರಾಲ್ಟಾ, ಡೇನಿಯಲ್ ಅಬ್ರೆಗೊ, ಮೊನಿಕಾ ಪ್ಲೆಹ್ನ್, ಡಿಯಾಗೋ ಸ್ಯಾಂಡೋವಲ್, ಪಾವೊಲಾ ಗೊಮೆಜ್, ಮಿಚೆಲ್ ಅಲ್ಮಾಗುರ್, ಸೀಸರ್ ಅಕೋಸ್ಟಾ, ಡೇವಿಡ್ ಅಂಗುಲೋ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಏಪ್ರಿಲ್ 17ರಂದು ಚಿತ್ರ ತೆರೆಗೆ ಬರಲಿದೆ.


ಸುಗಾ: ಅಗಸ್ಟ್ ಡಿ ಟೂರ್ ಡಿ-ಡೇ ದಿ ಮೂವಿ

ಜುನ್-ಸೂ ಪಾರ್ಕ್ ನಿರ್ದೇಶನದ ಸುಗಾ, ಜಿಮಿನ್, ಜಂಗ್‌ಕುಕ್ ಅಭಿನಯಿಸಿರುವ ಈ ಚಿತ್ರ ಏಪ್ರಿಲ್ 18ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. ಎನ್‌ಕೋರ್ ಸಂಗೀತ ಕಛೇರಿಗಾಗಿ ಪ್ರಪಂಚದಾದ್ಯಂತ ಪ್ರಯಾಣಿಸುವ ತಂಡದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ.


ಆರ್ಟಿಕಲ್ 370

ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಯಾಮಿ ಗೌತಮ್, ಪ್ರಿಯಾಮಣಿ, ಸ್ಕಂದ ಠಾಕೂರ್, ಅಶ್ವಿನಿ ಕೌಲ್, ವೈಭವ್ ತತ್ವವಾದಿ, ಅರುಣ್ ಗೋವಿಲ್, ಕಿರಣ್ ಕರ್ಮಾರ್ಕರ್ ಅಭಿನಯದ ಚಿತ್ರ ಜಿಯೋ ಸಿನಿಮಾದಲ್ಲಿ ಏಪ್ರಿಲ್ 19ರಂದು ತೆರೆ ಕಾಣಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮೇಲೆ ಚಿತ್ರ ಕೇಂದ್ರೀಕರಿಸಿದೆ. ಈಗಾಗಲೇ ಈ ಚಿತ್ರ ತೆರೆಗೆ ಬಂದಿದ್ದು, ನೋಡಲಾಗದೇ ಇದ್ದರೆ ಈ ವಾರ ಓಟಿಟಿಯಲ್ಲಿ ಕಾಣಬಹುದು.


ಚೀಫ್ ಡಿಟೆಕ್ಟಿವ್ 1958

ಕಿಮ್ ಸಿಯೋಂಗ್-ಹೂನ್ ನಿರ್ದೇಶನದ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಲೀ ಜೆ-ಹೂನ್, ಲೀ ಡಾಂಗ್-ಹ್ವಿ, ಚೋಯ್ ವೂ-ಸಂಗ್, ಯೂನ್ ಹ್ಯುನ್-ಸೂ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಈ ಚಿತ್ರ ಏಪ್ರಿಲ್ 19ರಂದು ತೆರೆ ಕಾಣಲಿದೆ. ಚೀಫ್ ಇನ್ಸ್‌ಪೆಕ್ಟರ್ (1971) ಸರಣಿಯ ಪೂರ್ವಭಾವಿ ಕಥೆಯನ್ನು ಅಂದರೆ 1950 ರಿಂದ 1960 ರ ದಶಕದ ಕಥೆಯನ್ನು ಇದು ಒಳಗೊಂಡಿದೆ.


ಡ್ರೀಮ್ ಸಿನಾರಿಯೋ

ಕ್ರಿಸ್ಟೋಫರ್ ಬೋರ್ಗ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಿಕೋಲಸ್ ಕೇಜ್, ಜೂಲಿಯಾನ್ನೆ ನಿಕೋಲ್ಸನ್, ಮೈಕೆಲ್ ಸೆರಾ, ಟಿಮ್ ಮೆಡೋಸ್, ಡೈಲನ್ ಗೆಲುಲಾ, ಡೈಲನ್ ಬೇಕರ್ ಮುಖ್ಯ ಭೂಮಿಕಾಯಲ್ಲಿ ಕಾಣಿಸಿಕೊಂಡಿದ್ದಾರೆ. ಲಯನ್ಸ್‌ಗೇಟ್ ಪ್ಲೇ ನಲ್ಲಿ ಏಪ್ರಿಲ್ 19ರಂದು ಪ್ರದರ್ಶನ ಕಾಣಲಿದೆ.


ರೆಬೆಲ್ ಮೂನ್- ಪಾರ್ಟ್ ಟು: ದಿ ಸ್ಕ್ಯಾರ್ಗಿವೆರ್

ಝಾಕ್ ಸ್ನೈಡರ್ ನಿರ್ದೇಶನದ ಈ ಚಿತ್ರದಲ್ಲಿ ಸೋಫಿಯಾ ಬೌಟೆಲ್ಲಾ, ಚಾರ್ಲಿ ಹುನ್ನಮ್, ಮೈಕೆಲ್ ಹುಯಿಸ್ಮನ್, ಜಿಮನ್ ಹೌನ್ಸೌ, ಡೂನಾ ಬೇ, ರೇ ಫಿಶರ್, ಕ್ಲಿಯೋಪಾತ್ರ ಕೋಲ್ಮನ್, ಜೆನಾ ಮ್ಯಾಲೋನ್, ಫ್ರಾ ಫೀ, ಎಡ್ ಸ್ಕ್ರೇನ್, ಆಂಥೋನಿ ಹಾಪ್ಕಿನ್ಸ್ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19 ರಂದು ನೆಟ್‌ಫ್ಲಿಕ್ಸ್ ಚಿತ್ರ ತೆರೆ ಕಾಣಲಿದೆ.


ಸೀರೆನ್

ಆಂಟೋನಿ ಭಾಗ್ಯರ ನಿರ್ದೇಶನದ ಈ ಚಿತ್ರದಲ್ಲಿ ಜಯಂ ರವಿ, ಕೀರ್ತಿ ಸುರೇಶ್, ಅನುಪಮಾ ಪರಮೇಶ್ವರನ್, ಯೋಗಿ ಬಾಬು ಮತ್ತು ಸಮುದ್ರಕನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಏಪ್ರಿಲ್ 19ರಂದು ಚಿತ್ರ ತೆರೆ ಕಾಣಲಿದೆ. ಆಕ್ಷನ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಇದೊಂದು ಒಳ್ಳೆಯ ಸಿನೆಮಾ.


ದಿ ಟೂರಿಸ್ಟ್ : ಸೀಸನ್ 2

ಕ್ರಿಸ್ ಸ್ವೀನಿ ನಿರ್ದೇಶನದ ಈ ಚಿತ್ರದಲ್ಲಿ ಜೇಮೀ ಡೋರ್ನಾನ್, ಡೇನಿಯಲ್ ಮ್ಯಾಕ್ಡೊನಾಲ್ಡ್, ಓಲ್ವೆನ್ ಫೌರೆ, ಗ್ರೆಗ್ ಲಾರ್ಸೆನ್, ವಿಕ್ಟೋರಿಯಾ ಹರಾಲಾಬಿಡೌ, ಕಾನರ್ ಮ್ಯಾಕ್‌ನೀಲ್, ಮಾರ್ಕ್ ಮೆಕೆನ್ನಾ, ನೆಸ್ಸಾ ಮ್ಯಾಥ್ಯೂಸ್, ಡೈರ್ಮೇಡ್ ಮುರ್ತಾಗ್, ಫ್ರಾನ್ಸಿಸ್ ಮ್ಯಾಗೀ ಮುಖ್ಯ ಪಾತ್ರಧಾರಿಗಳು. ಏಪ್ರಿಲ್ 19 ರಂದು ಲಯನ್ಸ್‌ಗೇಟ್ ಪ್ಲೇ ನಲ್ಲಿ ಈ ಚಿತ್ರ ತೆರೆ ಕಾಣಲಿದೆ.


ಎನಿ ಒನ್ ಬಟ್ ಯು

ವಿಲ್ ಗ್ಲುಕ್ ನಿರ್ದೇಶನದ ಈ ಚಿತ್ರದಲ್ಲಿ ಸಿಡ್ನಿ ಸ್ವೀನಿ, ಗ್ಲೆನ್ ಪೊವೆಲ್, ಅಲೆಕ್ಸಾಂಡ್ರಾ ಶಿಪ್, ಗಾಟಾ, ಹ್ಯಾಡ್ಲಿ ರಾಬಿನ್ಸನ್, ಮಿಚೆಲ್ ಹರ್ಡ್, ಡರ್ಮಟ್ ಮುಲ್ರೋನಿ, ಡ್ಯಾರೆನ್ ಬಾರ್ನೆಟ್ ಮತ್ತು ರಾಚೆಲ್ ಗ್ರಿಫಿತ್ಸ್. ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 19ರಂದು ಈ ಚಿತ್ರ ತೆರೆ ಕಾಣಲಿದೆ.


ಲವ್ ಸೆಕ್ಸ್ ಔರ್ ಧೋಖಾ 2

ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರದಲ್ಲಿ ನಿಮೃತ್ ಕೌರ್ ಅಹ್ಲುವಾಲಿಯಾ, ಅನುಪಮ್ ಜೋರ್ದಾರ್, ರೊಸಾನಾ ಎಲ್ಸಾ ಸ್ಕುಗಿಯಾ, ಉರ್ಫಿ ಜಾವೇದ್, ಅನು ಮಲಿಕ್ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಳೆದ ಪ್ರೀತಿ ಹೇಗಿರುತ್ತದೆ ಎನ್ನುವುದನ್ನು ಈ ಚಿತ್ರ ವಿವರಿಸುತ್ತದೆ.


ಸಿವಿಲ್ ವಾರ್

ಅಲೆಕ್ಸ್ ಗಾರ್ಲ್ಯಾಂಡ್ ನಿರ್ದೇಶನ ನಿರ್ದೇಶನದ ಕರ್ಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್, ನಿಕ್ ಆಫರ್ಮನ್ ಅವರು ಅಭಿನಯಿಸಿರುವ ಚಿತ್ರ ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಿಲಿಟರಿ-ಎಂಬೆಡೆಡ್ ಪತ್ರಕರ್ತರ ತಂಡವು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವ ಎರಡನೇ ಅಮೇರಿಕನ್ ಅಂತರ್ಯುದ್ಧದ ಸಮಯದಲ್ಲಿ ಪ್ರಯಾಣಿಸುವ ಕಥೆಯನ್ನು ಇದು ಒಳಗೊಂಡಿದೆ.


ದೋ ಔರ್ ದೋ ಪ್ಯಾರ್

ಶಿರ್ಷಾ ಗುಹಾ ಠಾಕುರ್ತಾ ಅವರ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್, ಪ್ರತೀಕ್ ಗಾಂಧಿ, ಇಲಿಯಾನಾ ಡಿ’ಕ್ರೂಜ್, ಸೆಂಧಿಲ್ ರಾಮಮೂರ್ತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. 2017 ರ ರೊಮ್ಯಾಂಟಿಕ್ ಕಾಮಿಡಿ ದಿ ಲವರ್ಸ್‌ನ ಅಧಿಕೃತ ರೂಪಾಂತರ ವಾದ ಈ ಚಿತ್ರದಲ್ಲಿ ದಂಪತಿ ದೂರವಾಗಿ ಮತ್ತೆ ತಮ್ಮ ಹೊಸ ಸಂಗಾತಿಗಾಗಿ ಹುಡುಕುವ ಕಥೆಯನ್ನು ಇದು ಒಳಗೊಂಡಿದೆ.

Continue Reading

ಬಾಲಿವುಡ್

Salman Khan: ಸಲ್ಮಾನ್ ನಿವಾಸದ ಬಳಿ ಗುಂಡು ಹಾರಾಟದ ಸಂಚು ನಡೆದಿದ್ದು ಅಮೆರಿಕದಲ್ಲಿ, ಕೆನಡಾಕ್ಕೂ ಇದೆ ನಂಟು!

Salman Khan ಪೊಲೀಸ್ ಮೂಲಗಳ ಪ್ರಕಾರ ಆ ಇಬ್ಬರು ವ್ಯಕ್ತಿಗಳು ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನವರು ಎನ್ನಲಾಗಿದೆ. ಈಗಾಗಲೇ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಲಾರೆನ್ಸ್ ಬಿಷ್ಣೋಯ್ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ. ಹಾಗಾಗಿ ಈ ಯೋಜನೆ ಅಮೆರಿಕದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Salman Khan
Koo

ಮುಂಬೈ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರು ವಾಸವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾದ ಘಟನೆ ಹಿನ್ನೆಲೆಯಲ್ಲಿ ಪೊಲೀಸ್‌ ತನಿಖೆ ಚುರುಕಾಗಿದೆ. ಇದರ ಸಂಚು ರೂಪುಗೊಂಡಿದ್ದು ಅಮೆರಿಕದಲ್ಲಿ ಎಂಬುದು ಗೊತ್ತಾಗಿದೆ.

ಸಾಮಾನ್ಯವಾಗಿ ನಟ ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಗುಂಡಿನ ದಾಳಿ ನಡೆಸುವಂತಹ ದೃಶ್ಯಾವಳಿಗಳನ್ನು ನೋಡಿರುವ ಜನರು ಇದೀಗ ನಟ ಸಲ್ಮಾನ್ ಖಾನ್ ಅವರ ನಿವಾಸದ ಮುಂದೆಯೇ ಗುಂಡು ಹಾರಿಸಿದ ಶಬ್ದ ಕೇಳಿ ಹೌಹಾರಿದ್ದಾರೆ.

ಕೊಲೆಗೆ ಸಂಚು?

ದುಷ್ಕರ್ಮಿಗಳ ಈ ಕೃತ್ಯ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ವ್ಯಕ್ತಿಗಳು ಟೋಪಿಗಳನ್ನು ಧರಿಸಿದ್ದು, ಅದರಲ್ಲಿ ಒಬ್ಬ ಕಪ್ಪು ಜಾಕೆಟ್ ಮತ್ತು ಡೆನಿಮ್ ಪ್ಯಾಂಟ್ , ಬಿಳಿ ಟೀ ಶರ್ಟ್ ಧರಿಸಿದ್ದರೆ ಇನ್ನೊಬ್ಬ ಡೆನಿಮ್ ಪ್ಯಾಂಟ್ ಮತ್ತು ಕೆಂಪು ಟೀ ಶರ್ಟ್ ಧರಿಸಿದ್ದ ಎನ್ನಲಾಗಿದೆ. ಅವರು ನಟನ ನಿವಾಸದ ಕಡೆಗೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಹಾಗಾಗಿ ನಟ ಸಲ್ಮಾನ್ ಖಾನ್ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

ಪೊಲೀಸ್ ಮೂಲಗಳ ಪ್ರಕಾರ ಆ ಇಬ್ಬರು ವ್ಯಕ್ತಿಗಳು ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನವರು ಎನ್ನಲಾಗಿದೆ. ಈಗಾಗಲೇ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಲಾರೆನ್ಸ್ ಬಿಷ್ಣೋಯ್ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ. ಹಾಗಾಗಿ ಈ ಯೋಜನೆ ಅಮೆರಿಕದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಅನ್ಮೋಲ್ ಬಿಷ್ಣೋಯ್ ಫೇಸ್ ಬುಕ್ ಪೋಸ್ಟ್ ಮೂಲಕ ಈ ಘಟನೆಯ ಹೊಣೆಯನ್ನು ಹೊತ್ತಿದ್ದಾನೆ ಎನ್ನಲಾಗಿದೆ. ಹಾಗಾಗಿ ಈ ಘಟನೆಯ ಹೊಣೆಯನ್ನು ಹೊತ್ತಿರುವ ಫೇಸ್ ಬುಕ್ ಪುಟದ ಐಪಿ ವಿಳಾಸವನ್ನು ಕೆನಡಾದಲ್ಲಿ ಪತ್ತೆಹಚ್ಚಲಾಗಿದೆಯಂತೆ. ಅಲ್ಲದೇ ಫೇಸ್ ಬುಕ್ ಪೋಸ್ಟ್ ರಚಿಸಲು ವಿಪಿಎನ್ ಅನ್ನು ಬಳಸಿರುವ ಸಾಧ್ಯತೆ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಲ್ಮಾನ್ ಖಾನ್ ಅವರ ನಿವಾಸದ ಬಳಿ ಗುಂಡು ಹಾರಿಸಿದ ಶಂಕಿತರು ಬಳಸಿದ ಬೈಕ್ ಸೆಕೆಂಡ್ ಹ್ಯಾಂಡ್ ಬೈಕ್ ಆಗಿದ್ದು, ಅದನ್ನು ರಾಯಗಡ್ ಜಿಲ್ಲೆಯಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬೈಕ್ ಮಾರಾಟದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Loksabha Election 2024: ಐವರು ಪತ್ನಿಯರು, 150 ಮೊಮ್ಮಕ್ಕಳು; ಒಂದೇ ಕುಟುಂಬದಲ್ಲಿದ್ದಾರೆ 350 ಮತದಾರರು!

ಈ ಹಿಂದೆ ನಟ ಸಲ್ಮಾನ್ ಖಾನ್ ಅವರಿಗೆ ಮಾಡಲಾದ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅವರ ಭದ್ರತಾ ವ್ಯವಸ್ಥೆಯನ್ನು ವೈ+ಗೆ ಹೆಚ್ಚಿಸಿದ್ದರು. ಇದೀಗ ವೈ+ ಭದ್ರತೆಯ ಜೊತೆಗೆ ಎರಡು ಕಮಾಂಡೊಗಳು ಮತ್ತು ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಸೇರಿದಂತೆ ಹನ್ನೊಂದು ಭದ್ರತಾ ಸಿಬ್ಬಂದಿಗಳು ಎಲ್ಲಾ ಸಮಯದಲ್ಲೂ ನಟನನ್ನು ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Continue Reading

ಬಾಲಿವುಡ್

Salman Khan: ಗುಂಡಿನ ದಾಳಿಗೆ ʻಐ ಡೋಂಟ್‌ ಕೇರ್‌ʼ ಎಂದ ಸಲ್ಮಾನ್‌ ಖಾನ್‌!

Salman Khan: ತನಿಖೆ ನಡೆಸಿದ ಪೊಲೀಸರಿಗೆ ಏ.14ರಂದೇ ಮಹತ್ವದ ಮಾಹಿತಿ ಲಭಿಸಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರು ದುಷ್ಕರ್ಮಿಗಳು ಕ್ಯಾಪ್‌ ಧರಿಸಿರುವುದು ಕಂಡು ಬಂದಿತ್ತು. ಆ ಪೈಕಿ ಒಬ್ಬ ಬಿಳಿ ಟೀ ಶರ್ಟ್‌, ಕಪ್ಪು ಜಾಕೆಟ್‌ ಮತ್ತು ಜೀನ್ಸ್‌ ಧರಿಸಿದ್ದರೆ, ಇನ್ನೊಬ್ಬ ಕೆಂಪು ಟೀ ಶರ್ಟ್‌ ಮತ್ತು ಜೀನ್ಸ್‌ ಧರಿಸಿದ್ದ. ಬೈಕ್‌ನಲ್ಲಿ ಬಂದ ಇವರು ಸಲ್ಮಾನ್‌ ಮನೆ ಎದುರು ಶೂಟ್‌ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

VISTARANEWS.COM


on

Salman Khan to continue work after firing incident
Koo

ಬೆಂಗಳೂರು: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದೆದುರು ಏಪ್ರಿಲ್‌ 14ರಂದು ಗುಂಡಿನ ದಾಳಿ ನಡೆದಿತ್ತು. ಈ ಬಗ್ಗೆ ತನಿಖೆ ಕೂಡ ಆರಂಭ ಆಗಿದೆ. ಈ ಪ್ರಕರಣ ಆದ ಬಳಿಕ ಸಲ್ಲು ಅಭಿಮಾನಿಗಳಿಗೆ ನಟನ ಬಗ್ಗೆ ಆತಂಕ ಶುರುವಾಗಿತ್ತು. ಜತೆಗೆ ಸಲ್ಮಾನ್‌ ಅವರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೀಗ ವರದಿಯ ಪ್ರಕಾರ ಸಲ್ಮಾನ್‌ ಖಾನ್‌ ತಮ್ಮ ಮುಂಬರುವ ಸಿನಿಮಾಗಳ ಕೆಲಸವನ್ನು ಮುಂದುವರಿಸಲಿದ್ದಾರೆ ಎಂದು ವರದಿಯಾಗಿದೆ. ಯಾವುದೇ ಯೋಜನೆಗಳನ್ನು ರದ್ದುಗೊಳಿಸದಂತೆ ಅವರು ತಮ್ಮ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ಸದ್ಯ ಯಾವುದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಅವರ ಕೈಯಲ್ಲಿ ಜಾಹೀರಾತುಗಳಿವೆ. ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು ʻʻಸಲ್ಮಾನ್ ಅವರು ಮೊದಲೇ ಯೋಜಿಸಿದಂತೆ ತಮ್ಮ ಕೆಲಸಕ್ಕೆ ಹೆಚ್ಚು ಗಮನ ಹರಿಸಿದ್ದಾರೆ. ಈ ಗುಂಡಿನ ಘಟನೆಯ ಬಗ್ಗೆ, ಅದರ ಹಿಂದೆ ಇರುವ ಆರೋಪಿಗಳಿಗೆ ಅವರು ಹೆಚ್ಚಾಗಿ ಗಮನ ಕೊಡುತ್ತಿಲ್ಲ. ಚಿತ್ರರಂಗದ ಸ್ನೇಹಿತರಿಗೆ ಅಭಿಮಾನಿಗಳಿಗೆ ನಟ ಚಿಂತಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಎಲ್ಲರ ಹಿತದೃಷ್ಟಿಯಿಂದ ಮನೆಗೆ ಬರುವವರಿಗೆ ಕೂಡ ಭೇಟಿ ನೀಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಗುಂಡಿನ ದಾಳಿಯ ಬಳಿಕ ಅರ್ಬಾಜ್ ಖಾನ್, ಶುರಾ ಖಾನ್, ಮಾಜಿ ಸಚಿವ ಬಾಬಾ ಸಿದ್ದಿಕ್, ಸಹೋದರಿ ಅರ್ಪಿತಾ ಖಾನ್, ಆಯುಷ್ ಶರ್ಮಾ, ಸೋದರಳಿಯ ಅರ್ಹಾನ್ ಮತ್ತು ಇತರರು ಸಲ್ಮಾನ್‌ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಶೂಟೌಟ್‌ ಪ್ರಕರಣ: ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

ಗುಂಡು ಹಾರಿಸಿದ ಇಬ್ಬರು ಯಾರು? ಯಾವ ಗ್ಯಾಂಗ್‌?

ಗುಂಡು ಹಾರಿಸುತ್ತಿರುವ ಇಬ್ಬರು ವ್ಯಕ್ತಿಗಳು ಹರಿಯಾಣದ ಗುರುಗ್ರಾಮ್‌ನವರು ಮತ್ತು ಸುಲಿಗೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಸೇರಿದವರು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಬ್ಬ ವಿಶಾಲ್ ಎಂದು ಗುರುತಿಸಲಾಗಿದ್ದು, ಈತ ಕುಖ್ಯಾತ ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋದಾರಾ (Rohit Godara) ಜತೆ ಸಂಬಂಧ ಹೊಂದಿದ್ದು ವರದಿಯಾಗಿದೆ. ರೋಹಿತ್ ಗೋದಾರಾ ಹಿಂಸಾತ್ಮಕ ಅಪರಾಧಗಳ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಗುರುಗ್ರಾಮ ಮೂಲದ ಉದ್ಯಮಿ ಸಚಿನ್ ಮುಂಜಾಲ್ ( Sachin Munjal) ಅವರ ಹತ್ಯೆಗೆ ಸಂಬಂಧಿಸಿದಂತೆ ವಿಶಾಲ್ ಬೇಕಾಗಿದ್ದ. ಸದ್ಯ ವಿದೇಶದಲ್ಲಿ ನೆಲೆಸಿರುವ ರೋಹಿತ್ ಗೋದಾರಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮುಂಜಾಲ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Continue Reading
Advertisement
t20 World Cup
ಕ್ರೀಡೆ4 mins ago

T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

Donuru Ananya Reddy
ದೇಶ6 mins ago

UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

Lok Sabha Election 2024:
ಕರ್ನಾಟಕ7 mins ago

Lok Sabha Election 2024: ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 87 ಲಕ್ಷ ರೂ. ಜಪ್ತಿ

IPL 2024
ಕ್ರೀಡೆ19 mins ago

IPL 2024: ಮುಂಬೈ ಪಂದ್ಯದ ಟಾಸ್​ ಕಳ್ಳಾಟ ಬಿಚ್ಚಿಟ್ಟ ಆರ್​ಸಿಬಿ ನಾಯಕ; ವಿಡಿಯೊ ವೈರಲ್​

Lok Sabha Election 2024
Lok Sabha Election 202419 mins ago

Lok Sabha Election 2024: ರಾಮ ನವಮಿ ಆಚರಣೆ; ಪಶ್ವಿಮ ಬಂಗಾಳದಲ್ಲಿ ಬಿಜೆಪಿ – ಟಿಎಂಸಿ ಮಧ್ಯೆ ವಾಗ್ವಾದ

IPL 2024
ಪ್ರಮುಖ ಸುದ್ದಿ28 mins ago

IPL 2024 : ನಾವು ಪುಟಿದೆದ್ದು ತಿರುಗೇಟು ನೀಡ್ತೇವೆ; ಆರ್​ಸಿಬಿ ಕೋಚ್​ ಭರವಸೆಯ ನುಡಿ

Road Rage in Bengaluru
ಬೆಂಗಳೂರು31 mins ago

Road Rage : ನಿಲ್ಲದ ರೋಡ್‌ ರೇಜ್; ನಿವೃತ್ತ ಬ್ರಿಗೇಡಿಯರ್ ಕಾರು ಅಡ್ಡಗಟ್ಟಿ ಬೆಲ್ಟ್‌ನಿಂದ ಹೊಡೆದು ಹಲ್ಲೆ

Lok Sabha Election 2024 Farmer farm set on fire in support of CN Manjunath
Lok Sabha Election 20241 hour ago

Lok Sabha Election 2024: ಡಾ. ಮಂಜುನಾಥ್‌ ಬೆಂಬಲಿಸಿದ ರೈತನ ಜಮೀನಿಗೆ ಬೆಂಕಿ; ಇದು ಕೈ ಕಾರ್ಯಕರ್ತರ ಕೃತ್ಯ ಎಂದ ಬಿಜೆಪಿ!

Actor Dwarakish
ಸಿನಿಮಾ1 hour ago

‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

Uttarakaanda Movie
ಸ್ಯಾಂಡಲ್ ವುಡ್1 hour ago

Uttarakaanda Movie: ಶಿವಣ್ಣ- ಧನಂಜಯ್‌ ಅಭಿನಯದ ʼಉತ್ತರಕಾಂಡʼ ಚಿತ್ರಕ್ಕೆ ಚೈತ್ರಾ ಆಚಾರ್‌ ಎಂಟ್ರಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ12 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌