Book translation | ದಿನಕ್ಕೊಂದು ಪುಸ್ತಕ ಅನುವಾದಕ್ಕೆ ಮುಂದಾದ ತಮಿಳುನಾಡು ಸರ್ಕಾರ - Vistara News

ಕಲೆ/ಸಾಹಿತ್ಯ

Book translation | ದಿನಕ್ಕೊಂದು ಪುಸ್ತಕ ಅನುವಾದಕ್ಕೆ ಮುಂದಾದ ತಮಿಳುನಾಡು ಸರ್ಕಾರ

ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ.

VISTARANEWS.COM


on

MK Stalin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ನಿಟ್ಟನಲ್ಲಿ ಹಲವು ದೇಶಗಳ ಪ್ರಕಾಶಕರೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದ್ದಾರೆ.

365ರಲ್ಲಿ ತಮಿಳಿನ 90 ಅತ್ಯುತ್ತಮ ಕೃತಿಗಳ ವಿದೇಶಿ ಭಾಷಾ ಅನುವಾದ, 60 ತಮಿಳು ಕೃತಿಗಳ ಇತರ ಭಾರತೀಯ ಭಾಷಾ ಅನುವಾದ, 170 ಇತರ ಭಾಷಾ ಕೃತಿಗಳ ತಮಿಳು ಅನುವಾದ, 45 ಕೃತಿಗಳ ಅನ್ಯಾನ್ಯ ಭಾಷಾ ಅನುವಾದಗಳು ಬರಲಿವೆ ಎಂದು ಅವರು ತಿಳಿಸಿದ್ದಾರೆ.

ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 3 ಕೋಟಿ ರೂ. ಅನುವಾದದ ಹಕ್ಕುಗಳಿಗಾಗಿ ತೆಗೆದಿರಿಸಿದೆ. 6 ಕೋಟಿ ರೂ.ಗಳನ್ನು ಪುಸ್ತಕ ಮೇಳಕ್ಕೆ ಮೀಸಲಾಗಿಟ್ಟಿದೆ. ಔದ್ಯಮಿಕ ಬೆಳವಣಿಗೆ, ಚೆಸ್‌ ಒಲಿಂಪಿಯಾಡ್‌, ಎಟಿಪಿ ಟೆನ್ನಿಸ್‌ ಟೂರ್ನಮೆಂಟ್‌ಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ತಮಿಳುನಾಡು ಈಗ ಪುಸ್ತಕಗಳ ಮೂಲಕವೂ ಸೆಳೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ | ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ

ಪೆರಿಯಾರ್‌ ಅವರು ಪ್ರಕಾಶನ ಉದ್ಯಮ ಇನ್ನೂ ಬೆಳೆಯುವ ಮುನ್ನವೇ ಕಮ್ಯುನಿಸ್ಟ್‌ ಪುಸ್ತಕಗಳನ್ನು, ಲೆನಿನ್‌ ಕೃತಿಗಳನ್ನು ಭಾಷಾಂತರಿಸಿದ್ದರು. ಜಗತ್ತನ್ನು ತಮಿಳಿಗೆ ತರುವುದು ಹಾಗೂ ತಮಿಳನ್ನು ಜಗತ್ತಿಗೆ ಕೊಂಡೊಯ್ಯುವುದು ಈ ಎರಡೂ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ನಾಯಕರ ಕನಸನ್ನು ನನಸು ಮಾಡಲು ನಾವು ಯತ್ನಿಸುತ್ತಿದ್ದೇವೆ ಎಂದರು. ಕಳೆದ ಒಂದು ವರ್ಷದಲ್ಲಿ ಸರ್ಕಾರ 173 ಕೃತಿಗಳನ್ನು ಪ್ರಕಟಿಸಿದೆ. ಶ್ರೇಷ್ಠ ಕೃತಿಗಳು ಅನುವಾದಗೊಂಡಾಗ, ಭಾಷೆ ಸಹಾ ಬೆಳೆಯುತ್ತದೆ ಎಂದರು.

ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಹೊಸ ಪುಸ್ತಕ: ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲ. ಈ ಕೃತಿಯ ಪರಿಚಯ ಹಾಗೂ ಆಯ್ದ ಭಾಗ ಇಲ್ಲಿದೆ.

VISTARANEWS.COM


on

sunday read new book ramanenu devane
Koo

:: ಡಾ. ಕೆ.ಎಸ್‌. ಕಣ್ಣನ್‌

ಹೊಸ ಪುಸ್ತಕ: “ರಾಮನು (Sri Rama) ಮನುಷ್ಯನೋ ದೇವನೋ?” – ಎಂಬ ಪ್ರಶ್ನೆಗೆ ಉತ್ತರ ಕೊಡುವ ಕೃತಿ: “ರಾಮನೇನು ದೇವನೇ?” ತಾನು ಮನುಷ್ಯನೆಂದು ರಾಮನೇ ಹೇಳಿಕೊಂಡಿರುವುದುಂಟು; ರಾಮಾಯಣದ ಆರಂಭದಲ್ಲೂ, ನಾರದರನ್ನು ವಾಲ್ಮೀಕಿಗಳು ಕೇಳುವುದೂ ನಾನಾ ಗುಣಸಂಪನ್ನನಾದ ನರನ ಬಗ್ಗೆಯೇ; ಆಗ ನಾರದರು ಹೇಳುವುದೂ ಅಂತಹೊಬ್ಬ ಮನುಷ್ಯನ ಬಗ್ಗೆಯೇ.

ಆದರೂ, ನಮ್ಮ ಪರಂಪರೆಯಂತೂ ಸಾವಿರಾರು ವರ್ಷಗಳಿಂದ ರಾಮನನ್ನು ದೇವರೆಂದೇ ಪೂಜಿಸಿಕೊಂಡು ಬಂದಿದೆ. ಆತನ ಸುಗುಣ-ಸುರೂಪಗಳನ್ನೂ ಜೀವಿತ-ಸಂದೇಶಗಳನ್ನೂ ಸ್ಮರಿಸಿ ರೂಪಿಸಿ ಹಾಡಿ ಕೊಂಡಾಡಿ ವಿರಚಿತವಾದ ಕಾವ್ಯ-ನಾಟಕಗಳೆಷ್ಟು, ಚಿತ್ರ-ಶಿಲ್ಪಗಳೆಷ್ಟು, ಮಂದಿರ-ದೇವಾಲಯಗಳೆಷ್ಟು – ಲೆಕ್ಕವಿಡುವವರಾರು! “ಇಂತಹ ಭಾಷೆಯಲ್ಲಿ ಶ್ರೀರಾಮಚಂದ್ರನನ್ನು ಕುರಿತಾದ ಸ್ತುತಿಯಿಲ್ಲ”- ಎನ್ನಲಾಗುವ ಒಂದೇ ಒಂದು ಭಾರತೀಯಭಾಷೆಯಾದರೂ ಉಂಟೆ? ಹೀಗಿದ್ದರೂ, ಕೆಲ ಸಂಪ್ರದಾಯಸ್ಥರಿಗೂ ಒಮ್ಮೊಮ್ಮೆ ಸಂಶಯಗಳು ಮೂಡಿರುವುದುಂಟು. ಪಾಶ್ಚಾತ್ಯವಿಮರ್ಶಕರಂತೂ, “ರಾಮನನ್ನು ದೇವನೆಂದಿರುವ ಭಾಗಗಳೆಲ್ಲಾ ಪ್ರಕ್ಷಿಪ್ತವೇ ಆಗಿರಬೇಕು (ಎಂದರೆ, ಆಮೇಲೇ ಸೇರಿಸಿರುವಂತಹವಾಗಿರಬೇಕು)” – ಎಂಬುದಾಗಿಯೇ ತಮ್ಮ ತರ್ಕವನ್ನು ಆರಂಭಿಸುತ್ತಾರೆ. ಅಸೂಯಾಪ್ರೇರಿತವಾದ ದುರ್ಮದದಿಂದ, ಇತರಸಂಸ್ಕೃತಿಗಳನ್ನು ಹೀನಾಯಮಾಡುವ ಅವರ ಸಹಜಪ್ರವೃತ್ತಿಗಂತೂ ಸಾಕಷ್ಟೇ ನಿದರ್ಶನಗಳಿವೆ..

ಹಾಗಾದರೆ ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲವೆನ್ನಬಹುದು! ಈ ಕೃತಿಯನ್ನು ರಚಿಸಿದ ಪ್ರೊ. ಕೆ. ಎಸ್. ಕಣ್ಣನ್ ಅವರು ರಾಮಾಯಣದ ಎಲ್ಲ ಮುಖ್ಯಪ್ರಸಂಗಗಳನ್ನೂ ಕ್ರಮಬದ್ಧವಾಗಿ ಪರಿಶೀಲಿಸಿ ಇಲ್ಲಿ ವಿವರಿಸಿದ್ದಾರೆ. ವಾಲ್ಮೀಕಿರಾಮಾಯಣದ ಮೂಲವಾಕ್ಯಗಳನ್ನು ಅವಶ್ಯವಿರುವೆಡೆಯಲ್ಲೆಲ್ಲಾ ಇದಕ್ಕಾಗಿ ಉದ್ಧರಿಸಿದ್ದಾರೆ; ಸಾಮಾನ್ಯರಿಗೂ ಅರ್ಥವು ಸ್ಫುಟವಾಗಲೆಂದು ಅವುಗಳೆಲ್ಲದರ ಅನುವಾದ-ವಿವರಣೆಗಳನ್ನೂ ತಿಳಿಗನ್ನಡದಲ್ಲಿ ಕೊಟ್ಟಿದ್ದಾರೆ. ರಾಮಾಯಣದಿಂದ ಮಾತ್ರವಲ್ಲದೆ, ಇತರ ಹಲವು ಪ್ರಸಿದ್ಧಗ್ರಂಥಗಳಿಂದಲೂ ಸೇರಿದಂತೆ, ಸುಮಾರು 400ಕ್ಕೂ ಮೀರಿದ ಉದ್ಧೃತಿಗಳು ಈ ಕೃತಿಯಲ್ಲಿವೆ! ಅಷ್ಟೇ ಅಲ್ಲ, ಉಲ್ಲೇಖಗೊಂಡ ಸಮಸ್ತವಾಕ್ಯಗಳಿಗೂ ಆಕರ-ಅಧ್ಯಾಯ-ಶ್ಲೋಕಸಂಖ್ಯೆಗಳನ್ನು ಬಿಡದೇ ಸೂಚಿಸಲಾಗಿದೆ.

ಈ ಕೃತಿಯ ಲೇಖಕರಾದ ಪ್ರೊ. ಕೆ. ಎಸ್. ಕಣ್ಣನ್ ಅವರು ಮದ್ರಾಸಿನಲ್ಲಿಯ ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ಕೆಲಸ ಮಾಡಿ ಈಚೆಗಷ್ಟೆ ನಿವೃತ್ತರಾಗಿರುವವರು. ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಇವರು ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಈ ಕೃತಿಯ ಆಯ್ದ ಭಾಗ ಇಲ್ಲಿದೆ:

“ರಾಮಾಯಣಾಖ್ಯಂ ಮಧು”

ಸೀತೆಯ ಚರಿತ – ರಾಮನ ಅಯನ

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ, ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ಅಯನವೆಂದರೆ ಮಾರ್ಗ, ರಾಮನ ಅಯನವೇ ರಾಮಾಯಣ. ಸಂಧಿನಿಯಮದಿಂದಾಗಿ ʼಅಯನ’ದಲ್ಲಿಯ ʼನ’ಕಾರವು ʼಣ’ಕಾರವಾಗಿದೆ. ಅಯನವೆಂದರೆ ಮಾರ್ಗ, ಹೋಗುವಿಕೆ (ʼಅಯ ಗತʼ ಎಂದು ಧಾತು). ಅಷ್ಟನ್ನು ಮಾತ್ರ ಹೇಳುವುದು ರಾಮಾಯನ ಎನಿಸಿಕೊಳ್ಳುತ್ತದೆ. ಈ ರಾಮಾಯನವನ್ನು ಕುರಿತಾದ ಕಾವ್ಯ ಎನ್ನುವಲ್ಲಿ, ಆ ಕಾವ್ಯದ ಹೆಸರಾಗಿ ಬಂದಾಗ ನಕಾರವು ಣಕಾರವಾಗುತ್ತದೆ.

ರಾಮಾಯನವನ್ನು ಹೇಳುವ ಕಾವ್ಯದ ಹೆಸರು ರಾಮಾಯಣ. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿಯಿದು. ರಾಮನು ಹೋದ ದಾರಿಯು ನಮಗೆ ಆದರ್ಶ. ರಾವಣನು ಹಾಕಿದ ಹೆಜ್ಜೆ ಆದರ್ಶವಲ್ಲ. ಈ ಭಾವವನ್ನು ತಿಳಿಸುವ ಗಾದೆ ಮಾತೊಂದು ಸಂಸ್ಕೃತದಲ್ಲಿದೆ: “ರಾಮನ ಹಾಗೆ ವರ್ತಿಸಬೇಕು. ರಾವಣನ ಹಾಗಲ್ಲ”.

ಪ್ರಪಂಚದಲ್ಲಿ ರಾಮನೊಬ್ಬನೇ ಒಳ್ಳೆಯವ ಎಂದೇನೂ ಇಲ್ಲವಲ್ಲ? ರಾವಣನೊಬ್ಬನೇ ಕೆಟ್ಟವ ಎಂದು ಕೂಡ ಅಲ್ಲವಲ್ಲವೇ? ಎಂದೇ, ʼರಾಮ’ನಿಗೊಂದು ʼಆದಿ’, ʼರಾವಣ’ನಿಗೊಂದು ʼಆದಿ’ ಸೇರಿಸಿದರು. ʼಆದಿ’ ಎಂದರೆ ʼಮೊದಲಾದʼ. ಅಲ್ಲಿಗೆ ಗಾದೆಯ ಪೂರ್ಣರೂಪ “ರಾಮ ಮೊದಲಾದವರ ಹಾಗೆ ಇರತಕ್ಕದ್ದು, ರಾವಣ ಮೊದಲಾದವರಂತೆ ಇರತಕ್ಕದ್ದಲ್ಲ”. ಗಾದೆ ಹೀಗೆ: ʼರಾಮಾssದಿವದ್ ವರ್ತಿತವ್ಯಂ, ನ ರಾವಣಾssದಿವತ್ʼ.

ರಾವಣನು ಪುಲಸ್ತ್ಯ ವಂಶದವನು. ಎಂದೇ ರಾವಣನು ʼಪೌಲಸ್ತ್ಯʼನೆನಿಸುವನು. ರಜೋಗುಣಭರಿತನಾಗಿದ್ದು ಧರ್ಮವನ್ನೂ ಅಮರರನ್ನೂ ಲೆಕ್ಕಿಸೆನೆನ್ನುವ ಆ ಅಹಂಕಾರಿಯ ಮಾರಣವೇ ಈ ಕಾವ್ಯ ಎಂದೇ ವಾಲ್ಮೀಕಿಗಳು ರಾಮಾಯಣವನ್ನು “ಪೌಲಸ್ತ್ಯವಧ” ಎಂದೂ ಕರೆದಿದ್ದಾರೆ. ರಾಮನು ಒಳ್ಳೆಯವನಿರಬಹುದು, ಸೀತೆಯು ಒಳ್ಳೆಯವಳಲ್ಲವೆ? ವಾಲ್ಮೀಕಿ ಮಹರ್ಷಿಯು ಗಂಡಸಾದ್ದರಿಂದ ಗಂಡಸಾದ ರಾಮನನ್ನೇ ಹೊಗಳಿದ್ದಾನೋ ಏನೋ? ಎಂದು ಸಂಶಯಪಡಬೇಕಿಲ್ಲ. ವಾಲ್ಮೀಕಿಗಳೇ ಹೇಳುವಂತೆ “ಸೀತಾಯಾಃ ಚರಿತಂ ಮಹತ್”: ಸೀತೆಯ ನಡೆಯೂ ರಾಮನದಷ್ಟೇ ಹಿರಿದಾದುದೇ.

ರಾಮನ ಹೆಸರೇ ಮಧುರವಾದದ್ದು.
ರಾಮೇತಿ ಮಧುರಾಂ ವಾಣೀಂ ವಿಶ್ವಾಮಿತ್ರೋsಭ್ಯಭಾಷತ | (1.21.9)
ಋಷಯೋ ರಾಮ ರಾಮೇತಿ ಮಧುರಾಂ ವಾಚಮ್ ಅಬ್ರುವನ್ (1.73.21)

ಸೀತೆಯ ಹೆಸರೂ ಮಧುರವೇ.
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುಧ್ಯತೇ । (5.34.42)

ರಾಮನು ಇಳಿದು ಬಂದವನೇ? ಮೇಲಕ್ಕೆ ಏರಿದವನೇ? ಸಂಶಯವೂ ಬರುವುದುಂಟು. ರಾಮನನ್ನು ನಾವು ಆದರಿಸುತ್ತೇವೆ, ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆತನನ್ನು ದೇವರೆಂದೇ ಭಾವಿಸುತ್ತೇವೆ. ಆದರೆ, ಒಮ್ಮೊಮ್ಮೆ ಕೆಲವರಿಗೆ ಸ್ವಲ್ಪ ಸಂಶಯವೂ ಬರುವುದುಂಟು. ರಾಮನು ವಾಸ್ತವವಾಗಿ ದೇವನೇ? ಎಂದು. ಏಕೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೇ? ಮರೆಯಲ್ಲಿ ನಿಂತಲ್ಲವೇ ರಾಮನು ವಾಲಿಯನ್ನು ಕೊಂದದ್ದು? ಅದೇನು ದೊಡ್ಡ ಗುಣವೇ? ತನಗೆ ಯಾವ ದ್ರೋಹವನ್ನೂ ಮಾಡದಿದ್ದ ಸೀತೆಯನ್ನು, “ಅಘೋರಚಕ್ಷುಷ್ಕಳೂ ಅಪತಿಘ್ನಿಯೂ’ ಆದ ಕೈಹಿಡಿದ ಮಡದಿಯನ್ನು – ರಾಮನು ಪರಿತ್ಯಾಗ ಮಾಡಲಿಲ್ಲವೇ? ಅದರಲ್ಲಿ ದೋಷವಿಲ್ಲವೇ? ಎಂದು ʼಕೇಳುವವರುಂಟು’ ಎನ್ನುವುದಕ್ಕಿಂತ, ನಮಗೇ ಕೆಲವೊಮ್ಮೆ ಹಾಗೆನ್ನಿಸಲೂಬಹುದು.

ಕೃತಿ: ರಾಮನೇನು ದೇವನೇ?
ಪ್ರಕಾಶಕರು: ಶ್ರೀ ಭಾರತೀ ಪ್ರಕಾಶನ, ಬೆಂಗಳೂರು
ಪುಟ: 200, ಬೆಲೆ: ರೂ. 200.
ಪ್ರತಿಗಳಿಗೆ: 95915 42454

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

ಧವಳ ಧಾರಿಣಿ ಅಂಕಣ: ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.

VISTARANEWS.COM


on

manthare ramayana dhavala dharini
Koo

ಮೋಹಪಾಶದ ಅಧಿಕಾರ ಯಾವತ್ತಿಗೂ ಸ್ಥಿರವಲ್ಲ

dhavala dharini by Narayana yaji

ಧವಳ ಧಾರಿಣಿ ಅಂಕಣ: ನ ಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಠನ್ತಿ ಭಾಮಿನಿ
ಸ್ಥಾಪ್ಯಮಾನೇತು ಸರ್ವೇಷು ಸುಮಹಾನನಯೋ ಭವೇತ್ ৷৷ರಾ. ಅ.8.23৷৷

ಪ್ರಿಯ ಹೆಣ್ಣೇ, ರಾಜನ ಮಕ್ಕಳೆಲ್ಲರಿಗೂ ರಾಜ್ಯದಲ್ಲಿ ಬಾಧ್ಯತೆಯಿರುವುದಿಲ್ಲ. ಹಾಗೇ ಹುಟ್ಟಿದ ಮಕ್ಕಳೆಲ್ಲರಿಗೂ ಪಟ್ಟವನ್ನು ಗಟ್ಟಿದಲ್ಲಿ ಅದು ಸಂಪ್ರದಾಯಕ್ಕೂ ರಾಜನೀತಿಗೂ ವಿರುದ್ಧವಾಗುತ್ತದೆ. ಈರ್ಷ್ಯಾಸೂಯೆಗಳುಂಟಾಗಿ ದೊಡ್ಡ ಅನರ್ಥಕ್ಕೆ ಕಾರಣವಾಗುತ್ತದೆ.

ಮಂಥರೆಯ ಈ ಮಾತು ರಾಜತ್ವವೆನ್ನುವುದು ಪಿತ್ರಾರ್ಜಿತವಾದ ಸಂಪತ್ತಲ್ಲ. ಅದನ್ನು ಮಕ್ಕಳಿಗೆಲ್ಲ ಸಮನಾಗಿ ಹಂಚುವ ವ್ಯವಹಾರವೂ ಅಲ್ಲ, ಅದು ಅರ್ಹರಿಗೆ ಮಾತ್ರ ಸಲ್ಲಬೇಕಾಗುತ್ತದೆ ಎನ್ನುವ ವೇದವಾಣಿಯನ್ನು ದೃಢೀಕರಿಸುತ್ತದೆ. ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.

ವಾಲ್ಮೀಕಿಯ ಕಾವ್ಯದಲ್ಲಿ ಈಕೆಯ ಪೂರ್ವಾಪರಗಳ ಕುರಿತು ವಿವರಗಳೇನೂ ಸಿಗುವುದಿಲ್ಲ. ಈಕೆಯ ಪ್ರವೇಶದ ಹೊತ್ತಿಗೆ ಈಕೆಯ ಹೆಸರನ್ನು ವಾಲ್ಮೀಕಿ ಹೇಳುವುದಿಲ್ಲ. “ಜ್ಞಾತಿದಾಸಿ ಯತೋ ಜಾತಾ ಕೈಕೇಯ್ಯಾಸ್ತು ಸಹೋಷಿತಾ” (ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಕೈಕೇಯಿಯ ಜನನ ಕಾಲದಿಂದಲೇ ಅವಳೊಡನೆ ಇರುವ ಕುಟುಂಬದ ಆಳು) ಎಂದು ಅವಳ ಕುರಿತು ಹೇಳುತ್ತಾನೆ. ಯಾವ ಪಾತ್ರವನ್ನೂ ವಾಲ್ಮೀಕಿ ಕೀಳಾಗಿ ನೋಡುವುದಿಲ್ಲ. ಆದರೆ ಮಂಥರೆಯ ಪಾತ್ರವನ್ನು ಆತ ಅಷ್ಟು ಇಷ್ಟಪಟ್ಟಿಲ್ಲ, ಅದಕ್ಕೆ ಕಾವ್ಯದ ಕ್ರಮದಂತೆ ಪಾತ್ರದ ಪ್ರವೇಶದಲ್ಲಿ ಆತ ಜ್ಞಾತಿದಾಸಿ ಯತೋ ಜಾತಾ, ಎಂದು ಹೇಳಿರುವುದು. ಅಯೋಧ್ಯೆಯ ಜನಪದವನ್ನು ವಿವರಿಸುವಾಗ ಅಲ್ಲಿನ ಜನರ ಸದ್ಗುಣಗಳ ಕುರಿತು ವಿವರವಾಗಿ ಹೇಳಿದ್ದಾನೆ. ಅಲ್ಲಿನ ನಾರಿಯರನ್ನು ವರನಾರಿಯರು ಎಂದು ವರ್ಣಿಸಿದ್ದಾನೆ. ಅಂತಹ ಕೋಸಲಸೀಮೆಯಲ್ಲಿ ಮಂಥರೆಯಂತವಳು ಇರಲು ಸಾಧ್ಯವಿಲ್ಲವೆನ್ನುವುದನ್ನು ತಿಳಿಸುವುದು ಕವಿಯ ಉದ್ದೇಶ. ರಾಮನ ಪಟ್ಟಾಭಿಷೇಕವನ್ನು ಎಲ್ಲರೂ ಸಂಭ್ರಮಿಸುವಾಗ, ಲೋಕಪ್ರಿಯವಾದ ಪಟ್ಟಾಭಿಷೇಕವನ್ನು ಹಾಳು ಮಾಡುವವರು ಪುಣ್ಯಸ್ಥಳವಾದ ಅಯೋಧ್ಯೆಯಲ್ಲಿ ಹುಟ್ಟಿರಲು ಸಾಧ್ಯವೇ ಇಲ್ಲವೆನ್ನುವ ಅರ್ಥವನ್ನೂ ಮಾಡಬಹುದು.

ಎರಡನೆಯ ಶ್ಲೋಕದಲ್ಲಿ ಆಕೆಯ ಹೆಸರು ಮಂಥರೆ ಎಂದು ಹೇಳಿರುವುದು ಕಾವ್ಯದ ಮುಂದುವರಿಕೆಗೆ ಸಹಾಯವಾಗಲಿ ಎಂದು. ಈ ನಡೆ ಬಹುಶಃ ನಂತರ ರಾಮಾಯಣವನ್ನು ಬರೆದ ಕವಿಗಳಿಗೆ ಅಷ್ಟು ಇಷ್ಟವಾಗಿಲ್ಲ. ಪದ್ಮಪುರಾಣ ಈಕೆಯನ್ನು “ಮಂಥರಾನಾಮ ಕಾರ್ಯಾರ್ಥಮಪ್ಸರಾ ಪ್ರೇಷಿತಾ ಸುರೈಃ – ದೇವತೆಗಳು ರಾವಣವಧೆಯ ಕಾರ್ಯವನ್ನು ಸುಗಮಗೊಳಿಸುವ ಕಾರಣಕ್ಕೆ ಅಪ್ಸರೆಯೊಬ್ಬಳನ್ನು ಭೂಲೋಕಕ್ಕೆ ಕಳುಹಿಸಿದರು ಎಂದು ವಿವರಿಸಿದೆ. ಆನಂದ ರಾಮಾಯಣವೂ ಆಕೆಯನ್ನು ಶಾಪಗ್ರಸ್ತ ಅಪ್ಸರೆ ಎನ್ನುತ್ತದೆ. ಕೆಲವು ಕಥೆಗಳಲ್ಲಿ ಆಕೆ ಅಶ್ವಪತಿಗೆ ಅರಣ್ಯದಲ್ಲಿ ಸಿಕ್ಕ ಅನಾಥ ಮಗು ಎಂದು ತಿಳಿಸುತ್ತದೆ. ಆಕೆಯ ಶರೀರವನ್ನು ಅದಾಗಲೇ ಇರುವೆಗಳು ಮುತ್ತಿದ್ದವು, ಆ ಕಾರಣದಿಂದ ಆಕೆ ಕುಬ್ಜೆಯಾಗಿ ಉಳಿದಳು. ಕುವೆಂಪು “ರಾಮಾಯಣ ದರ್ಶನಂ”ದಲ್ಲಿ ಮಂಥರೆಯ ಕುರಿತು ಅಶ್ವಪತಿ ಮಹಾರಾಜ “ತಂದನೂರಿಗವಳಂ ದಾರಿಯಲಿ ನಡೆವ ಮಾರಿಯಂ ಮನೆಗೆ ತರುವಂತೆ” ಎಂದು ವರ್ಣಿಸುತ್ತಾರೆ.

ತಾಯಿಯಿಲ್ಲದ ಕೈಕೇಯಿಯನ್ನು ಆಕೆ ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೈಕೆಯೂ ಬಾಲ್ಯದಲ್ಲಿ ತಾಯಿಯಿಲ್ಲದೇ ಬೆಳೆದವಳು. ಆಕೆಗೆ ತಾಯಿಯ ಪ್ರೇಮವನ್ನು ಕೊಟ್ಟವಳು ಮಂಥರೆ. ಲೋಕವೆಲ್ಲವೂ ಆಕೆಯನ್ನು ಅನಿಷ್ಠೆ, ಗೂಬೆ, ಕುಬ್ಜೆ ಎಂದು ತಿರಸ್ಕರಿಸುತ್ತಿದ್ದರೆ ಆಕೆಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡಳು ಕೈಕೆ. ಈ ಆಶ್ರಯವೆನ್ನುವುದು ಅವಳ ಬದುಕಿಗೆ “ಮಳೆಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ, ಚೈತ್ರನಾಗಮವಾಯ್ತು ಮಂಥರೆಯ ಶಿಶಿರಕ್ಕೆ” (ರಾ.ದ. ಕುವೆಂಪು) ದಶರಥನೊಡನೆ ಕೈಕೇಯಿಯ ವಿವಾಹವಾದ ಮೇಲೆ ಅವಳ ಸಂಗಡವೇ ಅಯೋಧ್ಯೆಗೆ ಬಂದವಳು. ಕೈಕೇಯಿಯ ಅಂತರಂಗದ ಗುಟ್ಟುಗಳು ಈಕೆಗೆ ಗೊತ್ತಿತ್ತು. ಬಾಲ್ಯದಿಂದಲೂ ಮಂಥರೆ ಆಕೆಯ ಲಾಲನೆ ಪಾಲನೆ ಮಾಡಿರುವುದರಿಂದ ತಾಯಿಯಿಲ್ಲದವಳಿಗೆ ಈಕೆಯ ಮೇಲೆ ವಿಶೇಷ ಮಮತೆ ಮೂಡಿತ್ತು ಎನಿಸುತ್ತದೆ. ವೃದ್ಧಪತಿಯನ್ನು ಸದಾ ತನ್ನ ವಶದಲ್ಲಿ ಇರಿಸಿಕೊಳ್ಳಲು ಕೈಕೇಯಿಗೆ ಸಲಹೆ ನೀಡಿದವಳೇ ಮಂಥರೆ. ಕೌಸಲ್ಯೆಯನ್ನು ಕಂಡರೆ ಆಕೆಗೆ ಆಗುತ್ತಲೇ ಇರಲಿಲ್ಲ.

ವಾಲ್ಮೀಕಿ ರಾಮಾಯಣದ ನಂತರ ನನ್ನನ್ನು ಬಹುವಾಗಿ ಕಾಡಿದುದು ಕುವೆಂಪು ಅವರ “ರಾಮಾಯಣ ದರ್ಶನಂ”. ಇಲ್ಲಿ ಪಾತ್ರಗಳು ರಸದಲ್ಲಿ ಮುಳುಗೇಳುತ್ತವೆ. “ಮಮತೆಯ ಸುಳಿ ಮಂಥರೆ” ಎನ್ನುತ್ತಾ ಕೈಕೆಯ ಕುರಿತು, ವಿಶೇಷವಾಗಿ ಭರತನ ಮೇಲಿರುವ ಆಕೆಯ ಪ್ರೇಮವನ್ನು ಓದಿದ ಮೇಲೆ ಆಕೆಯನ್ನು ಬೈಯ್ಯುವ ಮನಸ್ಸು ಯಾರಿಗೂ ಬರಲಾರದು. ರಾಮಾಯಣದ ನಡೆಯೆಲ್ಲವೂ ವಿಧಿಯ ಹಸ್ತದ ಸೂತ್ರಗಳು, ಮಂಥರೆ ಈ ರಾಮಾಯಣವೆನ್ನುವ ಮೊಸರನ್ನು ಕಡೆದು ನವನೀತವನ್ನು ಕೊಡುವ ಕಡೆಗೋಲು ಎನ್ನುವ ಭಾವವನ್ನು ಕುವೆಂಪುವಿನಂತೆ ವರ್ಣಿಸಲು ಮತ್ಯಾರಿಗೂ ಸಾಧ್ಯವಾಗಲಿಕ್ಕಿಲ್ಲ. ಬೆಣ್ಣೆ ಕಡೆದುಕೊಟ್ಟ ಕಡೆಗೋಲನ್ನು ತೊಳೆದು ಒಣಗಿಸುವ ಹಾಗೇ ಮಂಥರೆಯ ಬದುಕಾಯಿತು. ಹೀಗೆ ನಿಟ್ಟಿಸಿರು ಬಿಡುವಾಗ ಕುವೆಂಪು ರಾಮಯಾಣದ ವಿಶೇಷವನ್ನು ಬಣ್ಣಿಸುವುದು ಹೀಗೆ.

ನೆಯ್ದಾಳುತಿದೆ ಜಗವನೊಂದತಿ ವಿರಾಣ್ ಮನಂ,
ಸೂಕ್ಷ್ಮಾತ್ಮಿಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ. ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ?
ಮಥಿಸಿದುದು ದಶಸಿರನ ವಿಧಿ ಮಂಥರೆಯ ಮನದಿ

king dasharatha

ರಾಮಾಯಣದ ಅಂತಿಮ ಗುರಿಯಾಗಿರುವ ರಾವಣ ವಧೆಯೆನ್ನುವ ಹಾರುಗೋಲಿಗೆ ಚಿಮ್ಮುಹಲಗೆಯಾಗುವವಳು ಮಂಥರೆ ಎನ್ನುವದನ್ನು ಮಾರ್ಮಿಕವಾಗಿ ವರ್ಣಿಸಲಾಗಿದೆ. ದಶರಥನ ಕನಸಿನ ವಿಹಾರವನ್ನು ಭಂಗಗೊಳಿಸಿದವಳು ಇವಳು.

ಅಶ್ವಪತಿ ಮಹಾರಾಜ ಮತ್ತು ಜನಕ ಮಹಾರಾಜನಿಗೆ ಹೇಳಿ ಕಳುಹಿಸುವಷ್ಟು ಸಮಯವಿಲ್ಲದಿದ್ದರೂ ಬೇರೆ ಎಲ್ಲರಿಗೂ ಹೇಳಿಕೆ ಕಳುಹಿಸಿ ಅವರು ಬಂದು ಬಿಡಾರವನ್ನು ಹೂಡಿಯಾಗಿತ್ತು! ಸುಮಾರು ಒಂbತ್ತರಿಂದ ಹನ್ನೆರಡು ವರ್ಷಗಳ ಕಾಲ ಅಯೋಧ್ಯೆಯ ರಕ್ಷಣೆಯನ್ನು ಹೊತ್ತ ರಾಮ ಸಹಜವಾಗಿಯೇ ಜನಮಾನಸದಲ್ಲಿ ತನ್ನ ಪ್ರಭಾವವನ್ನು ಬೀರಿದ್ದ. ಅಯೋಧ್ಯೆಯಲ್ಲಿ ಮಾರನೆಯ ದಿನವೇ ಶ್ರೀರಾಮನಿಗೆ ಪಟ್ಟಾಭಿಷೇಕವೆನ್ನುವ ವಿಷಯವನ್ನು ಕೇಳಿದೊಡನೆ ಪ್ರಜೆಗಳ ಸಂಭ್ರಮ ಮೇರೆ ಮೀರಿತ್ತು. ಪರ್ವಕಾಲದಲ್ಲಿ ಉಕ್ಕಿಬರುವ ಸಮುದ್ರರಾಜನ ನಿನಾದದಂತೆ ಮೂಲೆ ಮೂಲೆಗಳಿಂದ ತಂಡ ತಂಡವಾಗಿ ಪ್ರಜಾಸಮೂಹ ಅಯೋಧ್ಯೆಯತ್ತ ಆಗಮಿಸುತ್ತಿದ್ದವರ ಸಂಭ್ರಮ ನಗರಿಯ ತುಂಬೆಲ್ಲ ಕೇಳಿಬರುತ್ತಿತ್ತು. ಯಕ್ಷಗಾನದ ಪಾರ್ತಿಸುಬ್ಬ ರಾಮಾಭಿಷೇಕದ ಕಾಲದ ಅಯೋಧ್ಯೆಯ ಸಂಭ್ರಮವನ್ನು ವಾರ್ದಿಕ ಷಟ್ಪದಿಯಲ್ಲಿ ವರ್ಣಿಸುವುದು ಹೀಗೆ:

ಕುಶನೆ ಕೇಳಿಂತಯೋಧ್ಯಾಪುರದ ಸಂಭ್ರಮವ
ವಶವಲ್ಲ ಹೇಳಿ ತುದಿಗಾಣಿಸುವಡರಿದೆಮೆಗೆ
ಪಸರಿಸಿತು ಮಂದಿ ಕುದುರೆಗಳ ಸಂದಣಿಯಿಂದ ನಾನಾರವಂಗಳಿಂದ I
ವಸುಧೆ ಹಿಗ್ಗಿದಳು ಕೆಂಧೂಳೆದ್ದು ನಭಗಳಂ
ಮುಸುಕಿ ದಿಗ್ಗಜ ಬೆದರೆ ಕೂರ್ಮನೆದೆಗೆಟ್ಟ ಫಣಿ
ಕುಸಿದ ಸುರರಾಕಾಶದಲ್ಲಿ ಜಯಜಯವೆಂದು ದೇವದುಂದುಭಿ ಮೊಳಗಿತು II

ಪಾರ್ತಿಸುಬ್ಬನ ರಾಮಾಯಣವಾಗಲಿ ಇನ್ನಿತರ ಕವಿಗಳ ಯಕ್ಷಗಾನ ಪ್ರಸಂಗಗಳು ಯಕ್ಷಗಾನ ವಲಯದಿಂದ ಆಚೆಗೆ ವಿದ್ವಾಂಸರ ದೃಷ್ಟಿಗೆ ಬೀಳದೇ ಇರುವದು ಕನ್ನಡ ಸಾಹಿತ್ಯಲೋಕಕ್ಕೆ ದೊಡ್ಡ ನಷ್ಟವಾಗಿದೆ.

ಹೀಗೆ ಅಯೋಧ್ಯೆಗೆ ಅಯೋಧ್ಯೆಯೇ ಸಂಭ್ರಮಿಸುತ್ತಿರುವಾಗ ಆಕಸ್ಮಿಕವಾಗಿ ಉಪ್ಪರಿಗೆಯನ್ನು ಹತ್ತಿದ ದಾಸಿಯೋರ್ವಳು ಇದೇನು ಸಂಭ್ರಮ ಎಂದು ಚಕಿತಳಾಗಿ ಇನ್ನೊಬ್ಬ ದಾಸಿಯ ಹತ್ತಿರ ಕೇಳಿದಳು ಎಂದು ವಾಲ್ಮೀಕಿ ಇವಳ ಪಾತ್ರದ ಪ್ರವೇಶ ಮಾಡಿಸುತ್ತಾನೆ. ರಾಮಪಟ್ಟಾಭಿಷೇಕದ ವಿಷಯ ಯಾವಾಗ ಕಿವಿಗೆ ಬಿತ್ತೋ ತಕ್ಷಣ ಮಂಥರೆಗೆ ಆಗಬಾರದ್ದು ಆಗಿಹೋಯಿತೆನ್ನುವ ಸಂಕಟವುಂಟಾಯಿತು. ಉರುಳುತ್ತಲೇ ಕೈಲಾಸಶಿಖರಾಕಾರದ ಪ್ರಾಸಾದದಿಂದ ಕೆಳಗಿಳಿದು ಬಂದು ಕೈಕೇಯಿಯ ಅರಮನೆಗೆ ಹೋದವಳೇ, ಅವಳನ್ನು ಕರ್ಕಶ ಧ್ವನಿಯಿಂದ ಕೂಗಿ “ಮೂರ್ಖಳೆ, ಎದ್ದೇಳು, ಇನ್ನೂ ಮಲಗಿರುವೆ ಯಾಕೆ” ಎನ್ನುತ್ತಾ ಆಕೆಯನ್ನು ಬೈಯುತ್ತಾ ಎಬ್ಬಿಸುತ್ತಾಳೆ. ಆಗ ತಾನೇ ರಾತ್ರಿ ಮುಸುಕಿದ ಸಮಯ, ಕೈಕೆ ನಿದ್ರೆ ಮಾಡುತ್ತಿದ್ದಳು. ಆಕೆಯನ್ನು ಎಬ್ಬಿಸುವಾಗ “ಭಯವು ನಿನ್ನನ್ನು ಸುತ್ತುವರಿದು ನಿಂತಿದೆ” ಎನ್ನುವ ಕಾವ್ಯಮಯ ಭಾಷೆ ಈ ಭಾಗದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದರ್ಥದಲ್ಲಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಪಡುತ್ತಾ ತಾನು ರಾಜನ ಮುದ್ದಿನ ಮಡದಿ ಎನ್ನುವ ಆತ್ಮವಿಶ್ವಾಸದಲ್ಲಿ ಕೈಕೆ ಬೇರೇನನ್ನೂ ಯೋಚಿಸಿಲ್ಲ ಎನ್ನುವದು ಸ್ಪಷ್ಟ.

ಅಶ್ವಪತಿ ಮಹಾರಾಜ ವೃದ್ಧನಾದ ದಶರಥನಿಗೆ ಕೈಕೆಯನ್ನು ಕೊಡುವಾಗ ಅವಳ ಮನೋಭಾವನೆಯನ್ನು ಕೇಳಲೇ ಇಲ್ಲ. ಹಾಗಂತ ಇವಳು ಆ ಕುರಿತು ಬೇಸರವನ್ನೇನೂ ಮಾಡಲೂ ಇಲ್ಲ. ಚಕ್ರವರ್ತಿಯ ಕೈಹಿಡಿದ ಆಕೆಗೆ ಏನೂ ತಿಳಿಯದ ಮುಗ್ಧಳೇನೂ ಆಗಿರಲಿಲ್ಲವೆನ್ನುವದಕ್ಕೆ ಅವಳು ಧಶರಥನ ಸಂಗಡ ಶಂಬರನೊಡನೆ ನಡೆದ ಯುದ್ಧದಲ್ಲಿ ಭಾಗವಹಿಸಿದ ಘಟನೆಯನ್ನು ನೆನಪಿಸಬಹುದು. ಅವಳನ್ನು ಭರತ “ಆತ್ಮ ಕಾಮಾ ಸದಾ ಚಂಡಿ” ಎನ್ನುವ ಮೂಲಕವಾಗಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಮತ್ತು ಹಟಸ್ವಭಾವದವಳು ಎನ್ನುವುದಾಗಿ ವರ್ಣಿಸುತ್ತಾನೆ. ಅಶ್ವಪತಿ ಮತ್ತು ದಶರಥನ ನಡುವೆ ರಾಜ್ಯದ ಉತ್ತರಾಧಿಕಾರಿಯಾಗಿ ಕೈಕೇಯಿಯ ಸಂತಾನಕ್ಕೆ ನೀಡುವ ವಿಷಯ ದಶರಥ, ಸುಮಂತ್ರ ಮತ್ತು ಅಶ್ವಪತಿಗೆ ಬಿಟ್ಟರೆ ಮತ್ತೆ ಯಾರಿಗೂ ತಿಳಿದಿಲ್ಲ. ಅರಸನಿಗೆ ತಾನು ಬೇಕಾದವಳು ಎನ್ನುವ ಜಂಬ ಸಹಜವಾಗಿ ಕೈಕೇಯಿಯಲ್ಲಿದ್ದ ಕಾರಣ ಆಕೆ ಇನ್ನಿತರ ರಾಣಿಯರ ಮತ್ತು ಅರಮನೆಯಲ್ಲಿ ಅಧಿಕಾರವನ್ನು ಚಲಾಯಿಸುತ್ತಿದ್ದಳು. ಆಕೆಯ ಗಿಣಿಗಳು ಕೌಸಲ್ಯೆಯ ದಾಸಿಯರೇನಾದರು ಬಂದರೆ ಅವರನ್ನು ಕಚ್ಚು ಎಂದು ಹೇಳುತ್ತಿದ್ದವಂತೆ. ಬಹುಶಃ ಇದು ಕೈಕೇಯಿ ಹೇಳಿಕೊಟ್ಟ ಪಾಠವಾಗಿರಲಿಕ್ಕಿಲ್ಲ. ಮಂಥರೆ ಕಲಿಸಿದ್ದಾಗಿರಬಹುದು. ಅಶ್ವಮೇಧ, ಪುತ್ರಕಾಮೇಷ್ಠಿ ಯಾಗಗಳಲ್ಲಿ ಪ್ರಧಾನಳಾಗಿ ಕೌಸಲ್ಯೆ ಕುಳಿತಾಗಲೂ ಕೈಕೆ ಅದಕ್ಕೆ ಪ್ರತಿರೋಧವನ್ನು ಹೇಳಲಿಲ್ಲವೆನ್ನುವುದು ಸ್ವಭಾವತಃ ಆಕೆಯಲ್ಲಿ ಸಂಶಯ ಸ್ವಭಾವವಿರಲಿಲ್ಲ ಎನ್ನುವುದನ್ನು ತಿಳಿಸುತ್ತದೆ.

king dasharatha

ಭರತನಿಗಿಂತಲೂ ರಾಮನನ್ನು ಹೆಚ್ಚಿಗೆ ಹಚ್ಚಿಕೊಂಡ ಕೈಕೇಯಿಗೆ ಮಂಥರೆ “ಅನಿಷ್ಟಳೇ, ರಾಜ ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತಿಲ್ಲ” ಮುಂತಾದ ಸಾವಿರ ಬಗೆಯಲ್ಲಿ ಚಾಡಿ ಹೇಳಿದರೂ ಆಕೆ ರಾಮನ ಪಟ್ಟಾಭಿಷೇಕದ ವಿಷಯವನ್ನು ಕೇಳಿ ಸಂತೋಷವನ್ನೇ ವ್ಯಕ್ತಪಡಿಸುತ್ತಾಳೆ. ಭರತ ಇಲ್ಲದಿದ್ದಾಗ ರಾಮನಿಗೆ ಪಟ್ಟಕಟ್ಟುವುದು ಒಂದು ಸಂಚು, ಮುಂದೆ ರಾಮ ಭರತನನ್ನು ಕೊಲ್ಲಿಸಬಹುದು ಎಂದಾಗಲೂ ಆಕೆಯ ಮನಸ್ಸನ್ನು ತಿರುಗಿಸಲಾಗಿಲ್ಲ. ರಾಜ್ಯ ಭರತನ ಸಂತತಿಗೂ ಸಿಗದ ಕಾರಣವನ್ನು ಇಲ್ಲಿ ಪ್ರಾರಂಭದಲ್ಲಿಯೇ ನೀಡಲಾಗಿದೆ. ಅದನ್ನು ಎತ್ತಿ ಹಿಡಿಯುತ್ತಾ ದಶರಥ ಭರತನಿಲ್ಲದ ವೇಳೆಯಲ್ಲಿ ರಾಮನಿಗೆ ಪಟ್ಟಾಭಿಷೇಕಕ್ಕೆ ಏರ್ಪಾಡು ಮಾಡಿರುವುದು ಒಂದು ಸಂಚು ಎನ್ನುವುದನ್ನು ಸಂದರ್ಭಕ್ಕನುಗುಣವಾಗಿ ಕಥೆಯನ್ನು ಕಟ್ಟಿ ಹೇಳಿದವಳೇ ಕೊನೆಯ ಅಸ್ತ್ರವಾಗಿ “ನೀನು ಕೌಸಲ್ಯೆಯ ದಾಸಿಯಾಗುವೆ, ಭರತನ ಪ್ರಾಣ ಈ ಎಲ್ಲಾ ಕಾರಣಗಳಿಂದ ಅಪಾಯದಲ್ಲಿದೆ” ಎನ್ನುವ ಮಾತುಗಳು ಆಕೆಯನ್ನು ತಿರುಗಿಸುತ್ತವೆ.

ಪ್ರಪಂಚದ ಎಲ್ಲಾ ಹೆಣ್ಣುಜೀವಿಗಳು ತನಗೆ ಬರುವ ಎಂತಹ ಕಷ್ಟಗಳನ್ನಾದರೂ ಸಹಿಸಿಕೊಳ್ಳುತ್ತವೆ. ಆದರೆ ತನ್ನ ಮಕ್ಕಳಿಗೆ ಅಪಾಯ ಬಂತೆಂದರೆ ಆಕೆ ಸಮಗ್ರ ಜಗತ್ತನ್ನೇ ಎದುರಿಸಲೂ ಹಿಂದೆಮುಂದೆ ನೋಡುವದಿಲ್ಲ. ಮಂಥರೆ ದುರ್ಬೋಧಿಸಿದಂತೆಲ್ಲ ಕೈಕೆ ಬದಲಾಗುವದು ಕ್ರಿಯೆಗೆ ಒಂದು ಸಹಜ ಪ್ರತಿಕ್ರಿಯೆಯಷ್ಟೆ. ಈಗ ಮಂಥರೆಯೇ ಅವಳಿಗೆ ವರಗಳ ಕುರಿತು ಜ್ಞಾಪಿಸಿ ಕೋಪಾಗಾರಕ್ಕೆ ಹೋಗಲು ಸಲಹೆ ನೀಡುವದು. ಇಲ್ಲಿಂದ ಮುಂದೆ ಕೈಕೆ ರಣಚಂಡಿಯಾಗಿ ಬದಲಾಗುವದನ್ನು ನೋಡಬಹುದು. ಈ ರೀತಿಯ ಸ್ವಭಾವವನ್ನು ಗ್ರೀಕ್ ನಾಟಕಗಳಲ್ಲಿ ಬರುವ Character of Hamartia (ದುರಂತದೋಷ) ಅಂದರೆ ಸೌಮ್ಯವಾಗಿರುವ ಪಾತ್ರ ತಕ್ಷಣ ಋಣಾತ್ಮಕವಾಗಿ ಬದಲಾಗಿ ಸಂಪೂರ್ಣ ದುರಂತಕ್ಕೆ ಕಾರಣವಾಗುವುದು. ಮಂಥರೆಯ ದುರ್ಬೀಜ ಚನ್ನಾಗಿಯೇ ಕೆಲಸ ಮಾಡಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣದಲ್ಲಿ ಮಂಥರೆಯ ಪಾತ್ರವನ್ನು ಓರ್ವ ವಿಷಬೀಜವೆಂದು ಸುಲಭಕ್ಕೆ ಹೇಳಿಬಿಡಬಹುದು. ಅಥವಾ ಇವಕ್ಕೆಲ್ಲ ಕಾರಣ ಆಕೆ ಶಾಪಗ್ರಸ್ತಳಾಗಿರುವುದು ಎನ್ನುವ ಸಮಾಧಾನವನ್ನು ಪಟ್ಟುಕೊಳ್ಳಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಪಂಚವೇ ಆಕೆಯನ್ನು ಕುಬ್ಜೆ, ಅನಿಷ್ಟೆ ಎಂದು ಹೀಗೆಳೆವಾಗ ಮರುಭೂಮಿಯಲ್ಲಿ ಸಿಕ್ಕ ನೀರಿನಂತೆ ಕೈಕೇಯಿಯ ಲಾಲನೆ ಪಾಲನೆಯಲ್ಲಿ ಆಕೆ ತನ್ನ ನೋವನ್ನು ಮರೆತವಳು. ಅಶ್ವಪತಿ ಕೈಕೇಯಿಯ ತಾಯಿಯನ್ನು ಕೈಕೆ ಕೈಗೂಸಾಗಿರುವಾಗಲೇ ಕಾಡಿಗೆ ಅಟ್ಟಿದ್ದ. ಅದಕ್ಕೆ ಕಾರಣ ಅರಸನಿಗೆ ಪ್ರಾಣಿ ಪಕ್ಷಿಗಳ ಭಾಷೆ ಅರ್ಥವಾಗುತ್ತಿತ್ತು. ಅದನ್ನು ತನಗೆ ಹೇಳಲೇ ಬೇಕೆನ್ನುವ ಹಟಹಿಡಿದ ಕಾರಣಕ್ಕೆ ಆಕೆಯನ್ನು ಹಸಿ ಬಾಣಂತಿಯಾಗಿರುವಾಗಲೇ ಕಾಡಿನಲ್ಲಿ ಬಿಟ್ಟಿದ್ದ. ತಾಯಿಯಿಲ್ಲದ ತಬ್ಬಲಿಗೆ ತಾಯಿಯಾದವಳು ಮಂಥರೆ. ಅವಳ ಪಾಲಿಗೆ ಕೈಕೆಗೆ ಏನಾದರೂ ಆಯಿತೆಂದರೆ ಸಹಿಸಲಾರದ ಸಂಗತಿ. ತನ್ನ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೆ ಅಜ್ಜಿಯಂದಿರಿಗೆ ಮಮತೆ ಹೆಚ್ಚಿರುತ್ತದೆ. ಈ ಕಾರಣದಿಂದ ಭರತನ ಏಳಿಗೆಯನ್ನು ಬಯಸಿದರೆ ಅದು ಸಹಜವೂ ಹೌದು. ರಾಮನ ಮೇಲಿನ ಹುಚ್ಚು ಮಮತೆಯ ಕಾರಣಕ್ಕೆ ಆತನಿಗೆ ಶತಾಯು ಗತಾಯು ಪಟ್ಟಗಟ್ಟಬೇಕೆನ್ನುವುದು ದಶರಥನ ಇಚ್ಚೆಯಾದರೆ, ಕೈಕೆಯಿಯ ಸಂತಾನವೇ ಪಟ್ಟವೇರಬೇಕೆನ್ನುವ ಮೋಹ ಮಂಥರೆಯಲ್ಲಿದೆ. ಹೀಗೆ ಲೋಕದ ಒಳಿತಿಗಲ್ಲ, ತಮಗೆ ಬೇಕಾದವರು ಪಟ್ಟವೇರಲಿ ಎನ್ನುವ ಸ್ವಾರ್ಥ ಇಲ್ಲಿ ಕೆಲಸ ಮಾಡಿದೆ.

ರಾಜತ್ವವೆನ್ನುವುದು ವಿಷ್ಣುವಿನ ಪ್ರತಿನಿಧಿಯಾಗಿ ಇರುವ ಸ್ಥಾನ. ರಾಮನಂತಹ ಪರಿಪೂರ್ಣ ವ್ಯಕ್ತಿ ಇಂಥಹ ಮನಸ್ಥಿತಿಯಲ್ಲಿ ಪಟ್ಟವನ್ನೇರಿದರೆ ಅದು ಒಂದು ದೋಷವೇ. ಕಾವ್ಯದ ಪ್ರಾರಂಭದಲ್ಲಿ ನಾರದರ ಹತ್ತಿರ ವಾಲ್ಮೀಕಿ ಕೇಳಿಕೊಂಡಂತೆ ಹದಿನಾರು ಗುಣ ಸಂಪನ್ನನಾದ ರಾಮ ದಶರಥನ ಇಚ್ಛೆಯಂತೆ ಪಟ್ಟಕ್ಕೆ ಏರಿದ್ದರೆ ಅದೊಂದು ದೋಷವಾಗಿಬಿಡುತ್ತಿತ್ತು. ಅಧಿಕಾರವೆನ್ನುವುದು ಭೋಗವಲ್ಲ, ಹೊಣೆಗಾರಿಕೆಯಾಗಿ ನೋಡಬೇಕು. ಮಾನುಶಃ ಲೀಲೆಯಲ್ಲಿ ಗುಣವಂತನಾದ ವ್ಯಕ್ತಿಯ ಕುರಿತು ರಾಮಾಯಣವನ್ನು ರಚಿಸಲಾಗಿದೆ. ಗುಲಗಂಜಿಯಷ್ಟು ದೋಷವಿದ್ದರೂ ಕವಿ ವಾಲ್ಮೀಕಿ ತನ್ನ ಮನಸ್ಸಿನಲ್ಲಿ ಪಡಿಮೂಡಿದಾಕೃತಿಗೆ ತಾನೇ ಮುಗ್ಧನಾಗಲಾರ.

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ;

ಅಡಿಗರು ಕಡೆದ ಪಾತ್ರದ ನೆನಪನ್ನು ಇಲ್ಲಿ ಮಾಡಿಕೊಳ್ಳಬೇಕು.

ಅಂತರಂಗದ ಅರಸಿ ಕೋಪಾಗಾರವನ್ನು ಸೇರಿದರೆ ದಶರಥ ಮಹಾರಾಜ ತನ್ನ ಕಾರ್ಯ ಈಡೇರಿತೆಂದು ಸಂತೋಷದ ಅತಿರೇಕಕ್ಕೆ ಹೋಗಿದ್ದ. ಮದವೇರಿದ ಆತ ಅದನ್ನು ಇಳಿಸಿಕೊಳ್ಳುವ ಬಯಕೆಯ ಸಲುವಾಗಿ ಹೊರಟಿದ್ದ.

ವಿವರ ಮುಂದಿನ ಸಂಚಿಕೆಯಲ್ಲಿ…..

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

Continue Reading

ಕೋಲಾರ

Assault Case : ದೇವಸ್ಥಾನದಲ್ಲಿ ಸೌಂಡ್ ಕಮ್ಮಿ ಮಾಡಿ ಎಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಮಾರಣಾಂತಿಕ ಹಲ್ಲೆ

Assault Case : ಓದಲು ತೊಂದರೆ ಆಗುತ್ತಿದೆ ದೇವಸ್ಥಾನದ ಸ್ಪೀಕರ್‌ ಸೌಂಡ್‌ ಕಮ್ಮಿ ಮಾಡಿ ಎಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರಿಗೆ ಕಿಡಿಗೇಡಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತಂದೆಗೆ ಹೊಡೆಯುವುದ್ದನ್ನು ವಿರೋಧಿಸಿದಕ್ಕೆ ಮಗನಿಗೂ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

By

assault case in kolar
Koo

ಕೋಲಾರ: ಕ್ಷುಲ್ಲಕ ವಿಚಾರಕ್ಕೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ (Kotiganahalli Ramaiah) ಅವರ ಮೇಲೆ ಗಂಭೀರವಾಗಿ ಹಲ್ಲೆ (Assault Case) ನಡೆಸಲಾಗಿದೆ. ತಂದೆಯನ್ನು ರಕ್ಷಿಸಲು ಬಂದ ಮಗನಿಗೂ ಹೊಡೆದಿದ್ದಾರೆ. ಕೋಲಾರದ (Kolar news) ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಘಟನೆ ನಡೆದಿದೆ.

ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ- ಸಂಜೆ ಧ್ವನಿವರ್ಧಕದ ಮೂಲಕ ಜೋರಾಗಿ ಮೈಕ್‌ ಹಾಕಲಾಗಿತ್ತು. ಇಂದು ಗುರುವಾರ ಬೆಳಗ್ಗೆಯೂ ಧ್ವನಿವರ್ಧಕದ ಸೌಂಡ್ ಹೆಚ್ಚು ಮಾಡಿದ್ದಾರೆ. ಹೀಗಾಗಿ ಕೋಟಿಗಾನಹಳ್ಳಿ ರಾಮಯ್ಯ ಸೌಂಡ್‌ ಕಡಿಮೆ ಮಾಡಿ, ಓದಲು ತೊಂದರೆ ಆಗುತ್ತೆ ಎಂದು ಹೇಳಿದ್ದಾರೆ.

ಹೀಗಾಗಿ ಕೋಟಿಗಾನಹಳ್ಳಿ ರಾಮಯ್ಯ ಬುಡ್ಡಿ ದೀಪದಲ್ಲಿ ಇರಬಾರದು ಎಂದು ಗಲಾಟೆ ಮಾಡಿ ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಗ್ರಾಮದ ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೆ ಒಳಗಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗ ಮೇಘಾವರ್ಷ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ಮಾಡಿದ ಮಂಜುನಾಥ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಅಪ್ಪಚ್ಚಿಯಾದ ಓಮ್ನಿ ಕಾರು; ಮೂವರು ದಾರುಣ ಸಾವು

Group clash : ರಾಯಚೂರಲ್ಲಿ ಗುಂಪು ಘರ್ಷಣೆ; ರಾಡ್‌, ದೊಣ್ಣೆಯಿಂದ ಬಡಿದಾಟ

ರಾಯಚೂರು: ರಾಯಚೂರಲ್ಲಿ (Raichur News) ನ್ಯಾಯ ಪಂಚಾಯತಿ ವಿಚಾರಕ್ಕೆ ಗುಂಪು (Group clash) ಘರ್ಷಣೆಯಾಗಿದೆ. ರಾಯಚೂರು ಹೊರವಲಯದ ಅಸ್ಕಿಹಾಳ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. 3 ವರ್ಷಗಳಿಂದ ಎರಡೂ ತಂಡಗಳ ಯುವಕರ ಮಧ್ಯೆ ಕಿರಿಕ್ ನಡೆಯುತ್ತಿತ್ತು. ಇದೇ ವಿಚಾರಕ್ಕೆ ನ್ಯಾಯ ಪಂಚಾಯತ್ ಮಾಡಲು ನರಸಪ್ಪ ಎಂಬವರು ಮುಂದಾಗಿದ್ದರು. ನೀವು ನ್ಯಾಯ ಪಂಚಾಯತಿ ಮಾಡೋಷ್ಟು ದೊಡ್ಡವರು ಎಂದು ಶುರುವಾದ ಮಾತು, ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಸಂಘರ್ಷಕ್ಕೆ ಕಾರಣವಾಗಿದೆ.

ಘಟನೆಯಲ್ಲಿ ರೇಷ್ಮಾ, ನರಸಪ್ಪ, ಮನೋಹರ್, ಗಿರಿಜಾ ಸೇರಿ ನಾಲ್ವರಿಗೆ ಗಾಯವಾಗಿದೆ. ಸದ್ಯ ಗಾಯಾಳುಗಳಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಂಗಪ್ಪ ಸೇರಿದಂತೆ ಒಟ್ಟು 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಅಂಕಣ

ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ದಶಮುಖ ಅಂಕಣ: ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

dashamukha column spring time
Koo

ಈ ಅಂಕಣವನ್ನು ಇಲ್ಲಿ ಓದಿ:

dashamukha column logo

ದಶಮುಖ ಅಂಕಣ: ಋತುಗಳು (Seasons) ವಿಶ್ವದೆಲ್ಲೆಡೆ ಒಂದೇ ತೆರನಾಗಿಲ್ಲ. ಕೆನಡಾ, ಅಮೆರಿಕದ ಬೇಸಿಗೆಯ (Summer) ಋತುವಿನಲ್ಲಿ ಭಾರತದಲ್ಲಿ ಮಳೆಗಾಲ (monsoon); ಈ ದಿನಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯದಲ್ಲಿ ಚಳಿಗಾಲ (winter)! ಭೌಗೋಳಿಕವಾಗಿ ಆ ದೇಶಗಳು ಎಲ್ಲೆಲ್ಲಿವೆ ಎನ್ನುವುದರ ಮೇಲೆ ಯಾವ ದಿನಗಳಲ್ಲಿ ಯಾವ ಋತು ಎನ್ನುವುದು ನಿರ್ಧಾರವಾಗುವುದು ಸಾಮಾನ್ಯ ವಿದ್ಯಮಾನ. ಸ್ಪ್ರಿಂಗ್ ಟೈಮ್ ಅಥವಾ ಹೂ ಬಿಡುವ ದಿನಗಳು ಸಹ ಸಹಜವಾಗಿ ಭಿನ್ನವೇ ಆಗಿರುತ್ತದೆ. ದಿನಗಳು ಬೇರೆಯಾದರೂ, ಆ ದಿನಗಳಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳು ಬೇರೆಯಲ್ಲವಲ್ಲ. ನಮ್ಮಲ್ಲಿದು ವಸಂತ ಋತು. ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

ನಮ್ಮ ವಸಂತ ಋತುವಿಗೂ ಹೊಸತನಕ್ಕೂ ಇರುವುದು ಅಂಟು, ನಂಟು- ಎರಡೂ ಹೌದು. ಹಾಗೆಂದೇ ಭಾರತದ ಒಳಗಿನ ಲೆಕ್ಕವಿಲ್ಲದಷ್ಟು ಜಾತಿ, ಭಾಷೆ, ಪ್ರಾಂತ್ಯಗಳ ಜನ ವಸಂತ ಋತುವಿನುದ್ದಕ್ಕೂ ಹೊಸ ವರ್ಷ ಇಲ್ಲವೇ ಸುಗ್ಗಿಯ ಹಬ್ಬವನ್ನಾಚರಿಸುತ್ತಾರೆ. ಸಾಮಾನ್ಯವಾಗಿ ಕೇಳಿಬರುವ ಯುಗಾದಿ, ಗುಡಿಪಡ್ವಾಗಳ ಹೊರತಾಗಿ ಸಿಖ್ ಬಾಂಧವರು ಆಚರಿಸುವ ಬೈಸಾಖಿ, ಅಸ್ಸಾಂನ ಬೋಹಾಗ್ ಬಿಹು ಅಥವಾ ರಂಗೋಲಿ ಬಿಹು, ಬಂಗಾಳದ ಪೊಲೇಹ ಬೊಐಸಾಖ್, ಕಾಶ್ಮೀರದ ನವ್ರಿ, ಸಿಂಧಿ ಜನರ ಚೇತಿ ಚಾಂದ್, ಸೌರಮಾನ ಯುಗಾದಿ ಅಥವಾ ವಿಶು, ಹಿಮಾಚಲ ಪ್ರದೇಶದ ದೋಗ್ರಾ, ಒಡಿಸ್ಸಾದ ವಿಶು ಸಂಕ್ರಾಂತಿ, ಮಣಿಪುರದ ಚೈರೋಬ… ಅಂತೂ ದೇಶದ ಉದ್ದಗಲಕ್ಕೂ ಒಂದಿಲ್ಲೊಂದು ಹೆಸರಿನಿಂದ ವಸಂತನ ಆಗಮನವನ್ನು ಹೊಸವರ್ಷವೆಂದೇ ಸಂಭ್ರಮಿಸುತ್ತಾರೆ. ಶಿಶಿರದಲ್ಲಿ ಬೋಳಾಗಿ ನಿಂತ ಪ್ರಕೃತಿಯೆಲ್ಲ ಹಸಿರು ಧರಿಸಿ, ಲೋಕಕ್ಕೆಲ್ಲ ಉಸಿರು ತುಂಬುವ ಈ ದಿನಗಳಲ್ಲಿ ನಾವು ಮಾತ್ರವೇ ಯುಗಾದಿ ಆಚರಿಸುತ್ತೇವೆ ಎಂದು ಭಾವಿಸುವಂತಿಲ್ಲ. ವಿಶ್ವದ ಎಷ್ಟೊಂದು ಸಂಸ್ಕೃತಿಗಳು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತವೆ ಗೊತ್ತೆ?

ಹೌದು, ಭಾರತದಲ್ಲಿ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ದೇಶಗಳಲ್ಲಿ ವಸಂತ ಋತುವಿನಲ್ಲೇ ಹೊಸ ವರ್ಷದ ಆಚರಣೆಯಿದೆ. ಜನವರಿ ಮೊದಲ ತಾರೀಖಿನ ಹೊಸವರ್ಷವೆಂಬುದು ಬೇರೆಯದೇ ಆದ ಕ್ಯಾಲೆಂಡರಿನ ಲೆಕ್ಕಾಚಾರ. ಆದರೆ ಪ್ರಕೃತಿಯ ಎಣಿಕೆಗೆ ಸ್ಪಂದಿಸುವುದು ನಮ್ಮ ಯುಗಧರ್ಮ. ಪ್ರಕೃತಿಯಂತೆಯೇ ಶತಶತಮಾನಗಳಿಂದ ನಡೆದು ಬಂದಂಥ ನಿರಂತರತೆಯಿದು. ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ತತ್ವ ಬಹುಶಃ ನಾಗರೀಕತೆಯಷ್ಟೇ ಹಳೆಯದಿರಬೇಕು. ಈ ಮಾತಿನ ವ್ಯಾಪ್ತಿಯನ್ನು ತಿಳಿಯುವುದಕ್ಕೆ ಫೆಬ್ರವರಿಯಿಂದ ಪ್ರಾರಂಭವಾಗಿ ಎಪ್ರಿಲ್ವರೆಗಿನ ದಿನಗಳಲ್ಲಿ ಬರುವ ಬೇರೆಬೇರೆ ದೇಶಗಳ ಸಾಂಪ್ರದಾಯಿಕ ಹೊಸವರ್ಷಗಳನ್ನು ಸಹ ತಿಳಿಯಬೇಕು ನಾವು. ಚೀನಾ, ಕೊರಿಯ, ವಿಯೆತ್ನಾಂ, ಟಿಬೆಟ್, ಇರಾನ್, ಕಜಕಿಸ್ತಾನ, ಉಜ್ಬೆಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯ, ಥಾಯ್ಲೆಂಡ್… ಪಟ್ಟಿ ಇನ್ನೂ ಉದ್ದವಿದೆ. ಈ ಎಲ್ಲಾ ದೇಶಗಳಲ್ಲಿ ಕ್ಯಾಲೆಂಡರ್ ಹೊಸ ವರ್ಷದ ಹೊರತಾಗಿ ಹೂ ಬಿಡುವ ಕಾಲದಲ್ಲಿ ಸಾಂಪ್ರದಾಯಿಕವಾದ ಬೇರೆಯದೇ ರೀತಿಯಲ್ಲಿ ನವವರ್ಷವನ್ನು ಸ್ವಾಗತಿಸುತ್ತಾರೆ.

ಯಾವುದೇ ದೇಶದಲ್ಲಾದರೂ, ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹೊಸ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಲೋಭ ತೋರುವವನೇ ಅಲ್ಲ. ಹಾಗಾದರೆ ವಸಂತ ಎಂದರೆ ಸಂತಸ ಮಾತ್ರವೇ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಹೊಸತನ, ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಹೇಳುತ್ತಿದ್ದರೆ ಇನ್ನೂ ಎಷ್ಟೊಂದು ಇದೆಯಲ್ಲ. ಅಲ್ಲಿಗೆ ವಸಂತನಿಗೂ ಹೊಸತನಕ್ಕೂ ತಳುಕು ಹಾಕುವುದು ಗಡಿ, ಸೀಮೆಗಳನ್ನು ಮೀರಿದ ಭಾವ; ಇಡೀ ಯುಗಧರ್ಮದ ಸ್ವಭಾವ ಎಂದಾಯಿತು.

Spring Tourism

ವಸಂತನ ಋತುವಿನ ಅಥವಾ ಚೈತ್ರಮಾಸದ ವರ್ಣನೆಗಳು ಸಂಸ್ಕೃತ ಕಾವ್ಯಗಳಿಂದ ತೊಡಗಿ, ಹಳೆಗನ್ನಡ ಕಾವ್ಯಗಳಿಂದ ಹಿಡಿದು, ಇಂದಿನವರೆಗೂ ಕಂಡುಬರುತ್ತದೆ. ಇವೆಲ್ಲವುಗಳಲ್ಲಿ ಕಾಣುವುದು ಪ್ರಕೃತಿಯಲ್ಲಿರುವ, ಆ ಮೂಲಕ ನಮ್ಮಲ್ಲೂ ಇರುವಂಥ ಹೊಸತನ. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಕಾಳಿದಾಸ. ಆತನ ʻಮಾಳವಿಕಾಗ್ನಿ ಮಿತ್ರʼದಲ್ಲಿ ವಸಂತನ ಒಂದಿಷ್ಟು ವರ್ಣನೆಗಳನ್ನು ಕಾಣಬಹುದು. ಆದರೆ ಎಲ್ಲಕ್ಕಿಂತ ಮನಸೆಳೆಯುವುದು ಆತನ ʻಋತುಸಂಹಾರʼದಲ್ಲಿನ ವರ್ಣನೆಗಳು. ವರುಷದ ಆರೂ ಋತುಗಳನ್ನು ವರ್ಣಿಸುವ ಈ ಖಂಡಕಾವ್ಯದ ಕೊನೆಯ ಸರ್ಗದಲ್ಲಿ ಬರುವ ವಸಂತನ ವರ್ಣನೆಗಳ ಕನ್ನಡಾನುವಾದ (ಕೃಪೆ- ಹಂಸಾನಂದಿ) ಹೀಗಿವೆ- “ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು/ ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ/ ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ/ ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು// ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು/ ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು/ ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು/ ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ”

ಹಳೆಗನ್ನಡದ ವಿಷಯಕ್ಕೆ ಬಂದರೆ ಮೊದಲು ನೆನಪಾಗುವವನು ಪಂಪ. ʻನೀನೇ ಭುವನಕ್ಕಾರಾಧ್ಯನೈ, ಭೃಂಗ ಕೋಕಿಳ ಕೀರ ಪ್ರಿಯ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ವಸಂತದಲ್ಲಿ ತೂಗುವ ಮಾವಿನ ಮರವನ್ನು ಕೊಂಡಾಡುತ್ತಾನೆ. ಅಭಿನವ ಪಂಪನೆಂದೇ ಹೆಸರಾಗಿದ್ದ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿನ ರಾಮ, ಕಳೆದು ಹೋದ ತನ್ನ ಸೀತೆಯನ್ನು ಹುಡುಕುತ್ತಾ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆಯಿದೆ. ಹಿಂದಿನವರು ನಿಸರ್ಗದೊಂದಿಗೆ ಇಷ್ಟೊಂದು ನಿಕಟವಾಗಿ ಬೆರೆತು ಬದುಕಿದ್ದರ ಹಿನ್ನೆಲೆಯಲ್ಲೇ, ಪ್ರಕೃತಿಗೆ ಹೊಸತನ ಬಂದ ಕಾಲದಲ್ಲಿ ಅವರಿಗೂ ಹೊಸತನ ಬಂದಂತೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಹರಿಹರ, ಕುಮಾರವ್ಯಾಸನಿಂದ ತೊಡಗಿ ಅವರಿಗಿಂತ ಇತ್ತೀಚಿನ ಜಯದೇವ ಕವಿಯ ಕಾವ್ಯಗಳೆಲ್ಲ ವಸಂತನಿಂದ, ಚೈತ್ರದಿಂದ ಸಿಂಗಾರಗೊಂಡಂಥವು.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಹೊಸಗನ್ನಡ ಕವಿಗಳೂ ಹೊಸವರ್ಷದ ಹೊಸತನಕ್ಕೆ ಸೋತವರೇ. ರಸಋಷಿ ಕುವೆಂಪು ಅವರು, “ಗೀತೆಯ ಘೋಷದಿ ನವ ಅತಿಥಿಯ ಕರೆ/ ಹೃದಯ ದ್ವಾರವನಗಲಕೆ ತೆರೆ ತೆರೆ/ ನವಜೀವನ ರಸ ಬಾಳಿಗೆ ಬರಲಿ/ ನೂತನ ಸಾಹಸವೈತರಲಿ” ಎಂದು ತಮ್ಮ ʻಯುಗಾದಿʼ ಎನ್ನುವ ಕವನದಲ್ಲಿ ಆಶಿಸುತ್ತಾರೆ. ಕೆ.ಎಸ್. ನರಸಿಂಹಸ್ವಾಮಿಯವರ ಮಧುಮಾಸದ ಹೊಸತನ ಇದಕ್ಕಿಂತ ಭಿನ್ನವಲ್ಲ. “ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ/ ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ/ ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ/ ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ” ಎಂದು ಸಂಭ್ರಮಿಸುತ್ತಾರೆ. ನಿಸಾರ್ ಅಹಮದ್ ಅವರ ʻವರ್ಷಾದಿʼ ಕವಿತೆಯಲ್ಲಿ, “ಹೊಸ ಬಟ್ಟೆಯ ತೊಟ್ಟ ಚೈತ್ರ/ ಜಲದರ್ಪಣ ಮಗ್ನ ನೇತ್ರ/ ಮುಗಿಲಿನ ಪಂಚಾಂಗ ತೆರೆಸಿ/ ಕುಳಿತಿಹ ಫಲ ತಿಳಿಯ ಬಯಸಿ” ಎಂದು ಚೈತ್ರಮಾಸದ ನವ್ಯತೆಯನ್ನು ಭವ್ಯತೆಯನ್ನು ವರ್ಣಿಸುತ್ತಾರೆ. ಜಿ.ಎಸ್.ಶಿವರುದ್ರಪ್ಪನವರ ʻಯುಗಾದಿಯ ಹಾಡʼನ್ನೂ ಕಾಡುವುದು ಚೈತ್ರ ಮಾಸಕ್ಕಿರುವ ಹೊಸ ಸ್ಪರ್ಶವೇ. “ಬಂದ ಚೈತ್ರದ ಹಾದಿ ತೆರೆದಿದೆ/ ಬಣ್ಣ-ಬೆಡಗಿನ ಮೋಡಿಗೆ/ ಹೊಸತು ವರ್ಷದ ಹೊಸತು ಹರ್ಷದ/ ಬೇವು ಬೆಲ್ಲದ ಬೀಡಿಗೆ” ಎಂದು ಹಾಡುತ್ತಾರೆ. ಇವರುಗಳು ಮಾತ್ರವಲ್ಲ, ವರಕವಿ ಬೇಂದ್ರೆ, ಪು.ತಿ.ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗರ ಆದಿಯಾಗಿ ನಮ್ಮೆಲ್ಲ ಮೇರು ಕವಿಗಳಿಗೆ ವಸಂತನಿಗೂ ಹೊಸತನಕ್ಕೂ ನಡುವೆ ಪ್ರವಹಿಸುವ ವಾಹಿನಿ ಕಾಡಿದೆ.

ಎಲೆಗಳು ಉದುರುವಾಗಲೂ, ಚಿಗುರುವಾಗಲೂ ಪ್ರಕೃತಿಯದ್ದು ಅದೇ ಹದ. ಈ ನಡುವಿನ ಅವಧಿಯಲ್ಲಿ ಏನು ನಡೆಯುತ್ತದೆಂಬ ಗುಟ್ಟನ್ನೆಂದೂ ಬಿಟ್ಟುಕೊಡದ ನಿಸರ್ಗ, ನಮಗೆ ತೋರಿಸಿ ಕೊಡುವುದು ಹೊಸತನವನ್ನು ಮಾತ್ರ. ಇದನ್ನೇ ಉಂಡು, ಉಟ್ಟು ನಡೆಯೋಣ. ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಹೊಸ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ಪ್ರಕೃತಿಯಂತೆಯೇ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Continue Reading
Advertisement
IPL 2024
ಪ್ರಮುಖ ಸುದ್ದಿ2 mins ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ15 mins ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ47 mins ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ53 mins ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ60 mins ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ1 hour ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ1 hour ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Universal Coaching Centre
ಬೆಂಗಳೂರು2 hours ago

UPSC Results 2023: ಯುಪಿಎಸ್‌ಸಿ ಪರೀಕ್ಷೆ; ಯುನಿವರ್ಸಲ್‌ನ 18 ಅಭ್ಯರ್ಥಿಗಳ ಅಭೂತಪೂರ್ವ ಸಾಧನೆ

Sanju Samson
ಪ್ರಮುಖ ಸುದ್ದಿ3 hours ago

Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

UPSC Result 2024
ಶಿಕ್ಷಣ3 hours ago

UPSC Result 2024: 12 ಪ್ರಯತ್ನದ ಹೊರತಾಗಿಯೂ ಸಿಗದ ಯಶಸ್ಸು; ಯುಪಿಎಸ್‌ಸಿ ಆಕಾಂಕ್ಷಿಯ ಪೋಸ್ಟ್‌ ವೈರಲ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ19 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌