Bengaluru Tour: ನಿಮ್ಮ ಮನೆಗೆ ನೆಂಟರು ಬಂದಾಗ ಸುಲಭವಾಗಿ ಬೆಂಗಳೂರು ತೋರಿಸುವುದು ಹೇಗೆ? - Vistara News

ಪ್ರವಾಸ

Bengaluru Tour: ನಿಮ್ಮ ಮನೆಗೆ ನೆಂಟರು ಬಂದಾಗ ಸುಲಭವಾಗಿ ಬೆಂಗಳೂರು ತೋರಿಸುವುದು ಹೇಗೆ?

ಬೆಂಗಳೂರಿಗೆ ಬರುವ ಪ್ರವಾಸಿಗರಿಗೆಂದೇ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನ ಒಂದು ದಿನದ ಪ್ರವಾಸಿ ಪ್ಯಾಕೇಜ್‌ (Bengaluru Tour) ನಡೆಸುತ್ತಿದೆ. ಅದರ ವಿವರ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿಗರಾಗಿರುವ ನಿಮ್ಮ ಮನೆಗೆ ನೆಂಟರು ಬಂದಿದ್ದಾರೆ. ಬೆಂಗಳೂರಿಗೆ ಹೊಸಬರಾಗಿರುವ ಅವರಿಗೆ ಬೆಂಗಳೂರನ್ನು ಸುತ್ತಿಸಬೇಕು. ಆದರೆ ನಿಮ್ಮ ಬಳಿ ಅಷ್ಟೊಂದು ಸಮಯವಿಲ್ಲ ಅಥವಾ ಅವರನ್ನು ಕರೆದುಕೊಂಡು ಹೋಗುವುದಕ್ಕೆ ವಾಹನವಿಲ್ಲ. ಹಾಗಿರುವಾಗ ನೀವು ಅವರನ್ನು ಸುರಕ್ಷಿತವಾಗಿ ಹೇಗೆ ಬೆಂಗಳೂರು ಸುತ್ತಿಸಬಹುದು ಎಂದು ಯೋಚಿಸಬಹುದು. ಯೋಚನೆ ಬಿಡಿ, ಏಕೆಂದರೆ ನೆಂಟರನ್ನು ಬೆಂಗಳೂರು ಸುತ್ತಿಸುವ ನಿಮ್ಮ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯೇ ಹೊತ್ತುಕೊಳ್ಳುತ್ತದೆ. ಅದಕ್ಕೆಂದೇ ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್‌ (Bengaluru Tour) ಅನ್ನೂ ನೀಡುತ್ತಿದೆ.

ಇದನ್ನೂ ಓದಿ: Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್‌ 10 ಪ್ರವಾಸಿ ತಾಣಗಳಿವು

ಒಂದು ದಿನದ ಮಟ್ಟಿನ ಬೆಂಗಳೂರು ಪ್ರವಾಸದ ಪ್ಯಾಕೇಜ್‌ ಅನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಡೆಸುತ್ತಿದೆ. ನಗರದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವುದಷ್ಟೇ ಅಲ್ಲದೆ, ಅಲ್ಲಿನ ವಿಶೇಷತೆಗಳನ್ನೂ ನಿಮಗೆ ತಿಳಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

ಯಾವ ಯಾವ ಸ್ಥಳಗಳ ವೀಕ್ಷಣೆ?

* ಇಸ್ಕಾನ್‌

* ರಾಜರಾಜೇಶ್ವರಿ ದೇಗುಲ

* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

* ಜವಹರಲಾಲ್‌ ನೆಹರು ವಿಜ್ಞಾನ ಪ್ರದರ್ಶನಾಲಯ ಮತ್ತು ತಾರಾಲಯ

ಎಷ್ಟೊತ್ತಿಗೆ ಎಲ್ಲಿಗೆ?

7.30 : ಪ್ರವಾಸಕ್ಕೆ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳುವವರು ಬೆಳಗ್ಗೆ 7.30ಕ್ಕೆ ಯಶವಂತಪುರದ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿರಬೇಕು.

7.45 : ಮೊದಲನೆಯದಾಗಿ ಪ್ರವಾಸಿಗರನ್ನು ಯಶವಂತಪುರದಲ್ಲಿರುವ ಇಸ್ಕಾನ್‌ ದೇಗುಲಕ್ಕೆ ಕರೆದೊಯ್ಯಲಾಗುವುದು. ಒಂದು ಗಂಟೆಯ ಕಾಲ ಈ ದೇವಸ್ಥಾನದ ದರ್ಶನ ಮಾಡಿಸಲಾಗುವುದು.

8.45 – 9.15 : ರಾಜರಾಜೇಶ್ವರಿ ದೇಗುಲ

10.30 – 1.00 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

1.00 – 1.30: ಬನ್ನೇರುಘಟ್ಟದ ಮಯೂರ ವನಶ್ರೀ ಹೋಟೆಲ್‌ನಲ್ಲಿ ಊಟ

4.30 – 5.15 : ಜವಹರಲಾಲ್‌ ನೆಹರು ತಾರಾಲಯ

6.30 : ಯಶವಂತಪುರದ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಚೇರಿಯಲ್ಲಿ ಪ್ರವಾಸ ಕೊನೆಗೊಳ್ಳುವುದು.

ಶುಲ್ಕ ಎಷ್ಟು?

ಪೂರ್ತಿ ಒಂದು ದಿನದ ಈ ಪ್ರವಾಸದಲ್ಲಿ ಪ್ರವಾಸಿಗರನ್ನು ಡಿಲಕ್ಸ್‌ ಎಸಿ ಬಸ್ಸಿನಲ್ಲಿ ಬೆಂಗಳೂರು ಸುತ್ತಿಸಲಾಗುವುದು. ಅದಕ್ಕೆಂದು ಒಬ್ಬರು 495 ರೂ. ಶುಲ್ಕ ಭರಿಸಬೇಕು. 5 ವರ್ಷದ ಮೇಲಿನವರಿಗೆ ಮಾತ್ರವೇ ಪ್ರವಾಸಕ್ಕೆ ಅವಕಾಶವಿದ್ದು, ಎಲ್ಲರಿಗೂ ಒಂದೇ ತೆರನಾದ ಶುಲ್ಕವಿದೆ. ಈ ಪ್ರವಾಸ ಮಂಗಳವಾರದ ಹೊರತುಪಡಿಸಿ ಬೇರೆಲ್ಲ ದಿನಗಳೂ ಇರುತ್ತದೆ.

ಉಪಯೋಗವೇನು?

ಈ ಪ್ರವಾಸದಲ್ಲಿ ಬರುವ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವನ್ನು ನೋಡುವುದಕ್ಕೆ ಸಾಕಷ್ಟು ಸಮಯ ನೀಡಲಾಗುವುದು. ಹಾಗೆಯೇ ಪ್ರತಿ ಸ್ಥಳದ ಬಗ್ಗೆ ವಿವರಗಳನ್ನು ನೀಡಲಾಗುವುದು. ಅದಕ್ಕೆಂದೇ ವೃತ್ತಿಪರ ಪ್ರವಾಸಿ ಮಾರ್ಗದರ್ಶಿಗಳು ನಿಮ್ಮೊಂದಿಗೆ ಬರುತ್ತಾರೆ. ರಾಜ್ಯ, ಕೇಂದ್ರ ಮತ್ತು PSUಗಳ ಉದ್ಯೋಗಿಗಳಿಗೆ LTC ಸೌಲಭ್ಯಗಳು ಇರುತ್ತದೆ.

ಈ ಪ್ರವಾಸಕ್ಕೆ ಹೋಗಬಯಸುವವರು https://www.kstdc.co/tour-packages/bengaluru-full-day-trip/ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8043344334 ಸಂಖ್ಯೆಗೆ ಕರೆ ಮಾಡಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

Char Dham Yatra 2024: ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ್ ಗೆ ನಡೆಸುವ ಯಾತ್ರೆಗೆ ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದ ಬಳಿಕ ಈ ನಾಲ್ಕು ದೇವಾಲಯದ ಬಾಗಿಲುಗಳು ತೆರೆಯಲಿದ್ದು, ಆರು ತಿಂಗಳ ಕಾಲ ಭಕ್ತರ ಭೇಟಿಗೆ ಅವಕಾಶವಿದೆ. ಆದರೆ ಅಲ್ಲಿಗೆ ಹೋಗಲು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Char Dham Yatra 2024
Koo

ಚಾರ್ ಧಾಮ್ ಯಾತ್ರೆ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತಾರೆ. ಆದರೆ ಎಲ್ಲರಿಗೂ ಅಲ್ಲಿ ಹೋಗೋ ಅವಕಾಶ ಸಿಗುವುದಿಲ್ಲ. ಹಲವು ಬಾರಿ ಯೋಜನೆ ಮಾಡಿ ಯಾವುದೋ ಕಾರಣದಿಂದ ಅದನ್ನು ಮುಂದೂಡಿರುತ್ತಾರೆ. ಆದರೆ ಈ ಬಾರಿ ಬೇಸಿಗೆ ರಜೆಯಲ್ಲೇ (summer holidays) ಚಾರ್ ಧಾಮ್ ಯಾತ್ರೆ (Char Dham Yatra 2024) ಮಾಡಿ ಬರಬಹುದು.

ಚಾರ್ ಧಾಮ್ ಯಾತ್ರೆ ಎಂದೇ ಕರೆಯಲ್ಪಡುವ ಉತ್ತರಾಖಂಡದ (uttarakhand) ನಾಲ್ಕು ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ (Gangotri), ಯಮುನೋತ್ರಿ (Yamunotri), ಕೇದಾರನಾಥ ( Kedarnath) ಮತ್ತು ಬದರಿನಾಥರ (Badrinath) ವಾರ್ಷಿಕ ತೀರ್ಥಯಾತ್ರೆಯ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿದೆ.
ಯಾತ್ರೆಗೆ ಬರಲು ಇಚ್ಛಿಸುವವರು ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 10ರಂದು ಪ್ರಾರಂಭ

ವಾರ್ಷಿಕ ಚಾರ್ ಧಾಮ್ ಯಾತ್ರೆಯು ಮೇ 10ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಈ ಮೂರು ದೇಗುಲಗಳಲ್ಲಿ ಬಾಗಿಲನ್ನು ಭಕ್ತರಿಗಾಗಿ ತೆರೆಯಲಾಗುತ್ತದೆ. ಬದರಿನಾಥ ದೇವಾಲಯದ ಬಾಗಿಲು ಮೇ 12 ರಂದು ಸಾರ್ವಜನಿಕರಿಗೆ ತೆರೆಯಲಾಗುವುದು.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಆರು ತಿಂಗಳು ಬಂದ್

ಪ್ರತಿ ವರ್ಷ ಲಕ್ಷಾಂತರ ಭಕ್ತರು ಎತ್ತರದಲ್ಲಿರುವ ಈ ಪವಿತ್ರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಚಳಿಗಾಲದ ತಿಂಗಳ ಆರಂಭದಿಂದ ಸುಮಾರು ಆರು ತಿಂಗಳ ಕಾಲ ಮುಚ್ಚಲಾಗುತ್ತದೆ. ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಿನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ.

ಪ್ರದಕ್ಷಿಣಾಕಾರ ಪೂಜೆ

ಹಿಂದೂ ಧರ್ಮದಲ್ಲಿ ಈ ಪವಿತ್ರ ದೇವಾಲಯಗಳು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಇಲ್ಲಿ ಪ್ರದಕ್ಷಿಣಾಕಾರವಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎಂದೇ ನಂಬಲಾಗಿದೆ. ಹೀಗಾಗಿ ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ, ಗಂಗೋತ್ರಿ ಕಡೆಗೆ ಸಾಗುತ್ತದೆ, ಕೇದಾರನಾಥದ ಭೇಟಿ ಬಳಿಕ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

ನೋಂದಣಿ ಹೇಗೆ?

ಚಾರ್ ಧಾಮ್ ಯಾತ್ರೆಗೆ ಹೋಗಲು ಇಚ್ಛಿಸುವವರು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಚಾರ್ ಧಾಮ್ ಯಾತ್ರೆಗಾಗಿ ಗೊತ್ತುಪಡಿಸಿದ ಅಧಿಕೃತ ವೆಬ್‌ಸೈಟ್‌ನಲ್ಲಿ andtouristcare.uk.gov.in ಅಥವಾ registrationandtouristcare.uk.gov.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಮೊದಲು ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಅಥವಾ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹೆಸರು, ಸಂಪರ್ಕ ಸಂಖ್ಯೆ, ಇಮೇಲ್ ಐಡಿ, ಇತ್ಯಾದಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಿ.

ಬಳಿಕ ಹೊಸ ಡ್ಯಾಶ್‌ಬೋರ್ಡ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ವ್ಯಕ್ತಿಯು ಪ್ರಯಾಣದ ದಿನಾಂಕಗಳು, ಪ್ರವಾಸಿಗರ ಸಂಖ್ಯೆ, ಭೇಟಿ ನೀಡಲು ದೇವಾಲಯಗಳು ಸೇರಿದಂತೆ ಹೆಚ್ಚಿನ ಪ್ರವಾಸದ ವಿವರಗಳನ್ನು ನೋಡಬಹುದು.
ನೋಂದಣಿ ಪೂರ್ಣಗೊಂಡ ಅನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಂದಣಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ ಮತ್ತು ಮುಂದೆ ಚಾರ್ ಧಾಮ್ ಯಾತ್ರೆಗಾಗಿ ನೋಂದಣಿ ಪತ್ರವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.

ನೋಂದಣಿಗೆ ಬೇರೆ ಅವಕಾಶವೂ ಇದೆ

ವೆಬ್‌ಸೈಟ್‌ನ ಹೊರತಾಗಿ ಪ್ರವಾಸಿಗರು ಟೂರಿಸ್ಟ್‌ಕೇರರ್ ತಾರಾಖಂಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಲು ಇನ್ನೊಂದು ಮಾರ್ಗವೆಂದರೆ WhatsApp ನಲ್ಲಿ 8394833833 ಗೆ ಸಂದೇಶ ಕಳುಹಿಸುವುದು. ಪ್ರವಾಸೋದ್ಯಮ ಇಲಾಖೆಯು ಟೋಲ್ ಫ್ರೀ ಸಂಖ್ಯೆ 0135-1364 ಅನ್ನು ಡಯಲ್ ಮಾಡುವ ಮೂಲಕ ನೋಂದಣಿ ಸೇವೆಯನ್ನು ಪೂರ್ಣಗೊಳಿಸಬಹುದು.

ಇದಲ್ಲದೇ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ರಿಷಿಕೇಶ ಮತ್ತು ಹರಿದ್ವಾರದಲ್ಲಿ ನೋಂದಣಿ ಕೌಂಟರ್‌ಗಳನ್ನು ಸ್ಥಾಪಿಸಿದೆ. ಅಲ್ಲಿ ಯಾತ್ರಾರ್ಥಿಗಳು ಆಫ್‌ಲೈನ್ ನೋಂದಣಿ ನಡೆಸಬಹುದು. ಯಾತ್ರಿಕರು ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ಇಲ್ಲಿ ತೋರಿಸಬೇಕಾಗುತ್ತದೆ.

ದೇಗುಲಗಳ ವಿಶೇಷತೆ


ಯಮುನೋತ್ರಿ ಧಾಮ್ ದೇವಾಲಯವು ಯಮುನಾ ನದಿಯ ಮೂಲಕ್ಕೆ ಸಮೀಪದಲ್ಲಿ 3,293 ಮೀಟರ್ ಎತ್ತರದಲ್ಲಿ ಕಿರಿದಾದ ಕಂದರದಲ್ಲಿದೆ. ದೇವಾಲಯವು ಅಕ್ಷಯ ತೃತೀಯದಂದು ತೆರೆಯುತ್ತದೆ. ಚಳಿಗಾಲಕ್ಕಾಗಿ ಮುಂಚಿತವಾಗಿ ಯಮ ದ್ವಿತೀಯ ಅಂದರೆ ದೀಪಾವಳಿಯ ಅನಂತರ ಎರಡನೇ ದಿನ ಮುಚ್ಚುತ್ತದೆ. ಯಮುನೆಯ ನಿಜವಾದ ಮೂಲವು ಸುಮಾರು 4,421 ಮೀಟರ್ ಎತ್ತರದಲ್ಲಿ ದೇವಸ್ಥಾನಕ್ಕಿಂತ ಸ್ವಲ್ಪ ಮುಂದಿದೆ.


ಗಂಗೋತ್ರಿ ಗಂಗಾ ನದಿಯ ಅಥವಾ ಗೌಮುಖ ನದಿಯ ಮೂಲವೆಂದು ಪರಿಗಣಿಸಲಾಗಿದೆ. ಗಂಗೋತ್ರಿ ಧಾಮವು ಭಾಗೀರಥಿಯ ಬಲದಂಡೆಯಲ್ಲಿ ಸಮುದ್ರ ಮಟ್ಟದಿಂದ 3,140 ಮೀಟರ್ ಎತ್ತರದಲ್ಲಿದೆ.


ಕೇದಾರನಾಥ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥವು ರುದ್ರಪ್ರಯಾಗ ಜಿಲ್ಲೆಯ ಮಂದಾಕಿನಿ ನದಿಯ ಸಮೀಪದಲ್ಲಿದೆ.


ಭಗವಾನ್ ವಿಷ್ಣುವಿನ ಪವಿತ್ರ ಚಾರ್ ಧಾಮಗಳಲ್ಲಿ ಒಂದಾಗಿರುವ ಬದರಿನಾಥವನ್ನು ಭೂಮಿಯ ಮೇಲಿನ ವೈಕುಂಠ ಅಂದರೆ ಭಗವಾನ್ ವಿಷ್ಣುವಿನ ನಿವಾಸ ಎಂದು ಪರಿಗಣಿಸಲಾಗಿದೆ. ಸುಮಾರು 3,100 ಮೀ. ಎತ್ತರದಲ್ಲಿ ಗರ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಡದಲ್ಲಿ ಈ ಪವಿತ್ರ ಪಟ್ಟಣವು ನಾರ್ ಮತ್ತು ನಾರಾಯಣ ಪರ್ವತ ಶ್ರೇಣಿಗಳ ನಡುವೆ ಇದೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಋಷಿ ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ನಂಬಲಾಗಿದೆ.

Continue Reading

ಪ್ರವಾಸ

Summer Tour: ಹಚ್ಚ ಹಸುರಿನ ಪ್ರಶಾಂತ ನಗರ ಶಿಲ್ಲಾಂಗ್; ಬೇಸಿಗೆ ಪ್ರವಾಸಕ್ಕೆ ಸೂಕ್ತ

Summer Tour: ಭಾರತದ ಇತರೆ ರಾಜಧಾನಿಗಳಲ್ಲಿರುವಂತೆ ಹೆಚ್ಚಿನ ಜನದಟ್ಟಣೆಯಿಲ್ಲದ ಸುಂದರ ನಗರ ಶಿಲ್ಲಾಂಗ್. ಮೋಡಿ ಮಾಡುವ ಹಲವು ಸುಪ್ರಸಿದ್ದ ತಾಣಗಳನ್ನು ಹೊಂದಿರುವ ಶಿಲ್ಲಾಂಗ್ ದಟ್ಟ ಅರಣ್ಯದ ನಡುವೆ ಕುಳಿತಿದೆಯೇನೋ ಎಂಬಂತೆ ಭಾಸವಾಗುತ್ತದೆ.

VISTARANEWS.COM


on

By

summer trip
Koo

ಜಗತ್ತಿನಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿಯಿಂದ (cherrapunji) 55 ಕಿ.ಮೀ ದೂರದಲ್ಲಿರುವ ಮೇಘಾಲಯದ (meghalaya) ರಾಜಧಾನಿ ಶಿಲ್ಲಾಂಗ್ (Shillong) ತನ್ನ ನೈಸರ್ಗಿಕ ಸೌಂದರ್ಯದಿಂದ ದೇಶ- ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಬೇಸಗೆಯಲ್ಲಿ (Summer Tour) ಹಸುರು ಬೆಟ್ಟಗಳ ನಡುವೆ ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದ್ದರೆ ಶಿಲ್ಲಾಂಗ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಶಿಲ್ಲಾಂಗ್ ಗೆ ಭೇಟಿ ನೀಡಿದರೆ ಇಲ್ಲಿ ತಪ್ಪಿಸಿಕೊಳ್ಳಬಾರದ 9 ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ. ಹಚ್ಚಹಸುರಿನ ಬೆಟ್ಟಗಳ ನಡುವೆ ನೆಲೆಯಾಗಿರುವ ಶಿಲ್ಲಾಂಗ್ ನೈಸರ್ಗಿಕ ಔದಾರ್ಯ ಮತ್ತು ರೋಮಾಂಚಕ ಸಂಸ್ಕೃತಿಯಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲೇ ಜಲಪಾತ, ಸರೋವರ, ವಸ್ತುಸಂಗ್ರಹಾಲಯ, ಮಾರುಕಟ್ಟೆಗಳು ಸೇರಿದಂತೆ ಇನ್ನು ಹಲವು ಆಕರ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಈ ಒಂಬತ್ತು ಮುಖ್ಯ ಸ್ಥಳಗಳಿವೆ.

ಇದನ್ನೂ ಓದಿ: Summer Tour: ಬಿರು ಬೇಸಿಗೆಯಲ್ಲೂ ತಂಪಾದ ಅನುಭವ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು

ಶಿಲ್ಲಾಂಗ್ ಶಿಖರ

ಶಿಲ್ಲಾಂಗ್ ಶಿಖರದಿಂದ ಪನೋರಮಾಗಳು ರುದ್ರರಮಣೀಯ ಕಣಿವೆಯ ವೀಕ್ಷಣೆಗಾಗಿ ನಗರದ ಅತ್ಯುನ್ನತ ಕೇಂದ್ರ. ಇಲ್ಲಿಗೆ ಭೇಟಿ ನೀಡಿದ ವೇಳೆ ಮೊದಲು ಶಿಲ್ಲಾಂಗ್ ಪೀಕ್ ಗೆ ಭೇಟಿ ನೀಡಿ. 1965 ಮೀಟರ್ ಎತ್ತರದಲ್ಲಿರುವ ಇದು ಕೆಳಗಿನ ಹಸಿರು ಬೆಟ್ಟಗಳು ಮತ್ತು ಸರೋವರದ ದೃಶ್ಯದಿಂದ ಎಲ್ಲರನ್ನೂ ಬೆರಗುಗೊಳಿಸುತ್ತದೆ ಸಮೀಪದಲ್ಲೇ ಕೆಫೆಟೇರಿಯಾಗಲಿವೆ. ನಗರ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಹತ್ತಿರದಲ್ಲಿರುವ ಕೆಫೆಯಲ್ಲಿ ಶುಂಠಿ, ನಿಂಬೆ ಚಹಾ ಮತ್ತು ಜಿಲೇಬಿ ಅನ್ನು ಸವಿಯಬಹುದು.


ಉಮಿಯಂ ಸರೋವರ

ಶಿಲ್ಲಾಂಗ್‌ನಿಂದ ಉತ್ತರಕ್ಕೆ ಸುಮಾರು 15 ಕಿ.ಮೀ. ದೂರದಲ್ಲಿ ಹಸುರಿನಿಂದ ಕೂಡಿದ ಬೆಟ್ಟಗಳ ನಡುವೆ ನೆಲೆಸಿರುವ ಬಾರಾಪಾನಿ ಸರೋವರ ಎಂದೂ ಕರೆಯಲ್ಪಡುವ ಸಮ್ಮೋಹನಗೊಳಿಸುವ ಉಮಿಯಂ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಮಂಜಿನಿಂದ ಆವೃತವಾದ ಬೆಟ್ಟದ ಸಿಲ್ಹೌಟ್‌ಗಳು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ದಡಗಳಲ್ಲಿ ಸಾಕಷ್ಟು ರೆಸಾರ್ಟ್ ಗಳು ಇರುವುದರಿಂದ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು. ಇದಕ್ಕೆ ಹತ್ತಿರವಾಗಿ ಲುಮ್ ನೆಹರು ಪಾರ್ಕ್ ಇದೆ.


ಆನೆ ಜಲಪಾತ

ನೈಸರ್ಗಿಕ ಸೌಂದರ್ಯದ ನಡುವಿನ ಮೂರು-ಹಂತದ ಕ್ಯಾಸ್ಕೇಡಿಂಗ್ ಎಲಿಫೆಂಟ್ ಫಾಲ್ಸ್‌ ಅತ್ಯಾಕರ್ಷಕವಾಗಿದೆ. ಹಸಿರು ಬಂಡೆಗಳ ಕೆಳಗೆ ನೈಸರ್ಗಿಕ ಕೊಳಕ್ಕೆ ಧುಮುಕುತ್ತವೆ. ಆನೆಯ ಸೊಂಡಿಲನ್ನು ಹೋಲುವ ಹರಿವು ಅದಕ್ಕೆ ವಿಶಿಷ್ಟವಾದ ಹೆಸರನ್ನು ನೀಡಿದೆ. ಸೊಂಪಾದ ಅರಣ್ಯದ ನಡುವೆ ಪ್ರಾಚೀನ ನೋಟಗಳು ಮೋಡಿಮಾಡುತ್ತವೆ. 49 ಅಡಿ ಎತ್ತರವಿರುವ ಈ ಜಲಪಾತ ಶಿಲ್ಲಾಂಗ್‌ನಿಂದ 12 ಕಿ.ಮೀ. ದೂರದಲ್ಲಿದೆ.


ಡಾನ್ ಬಾಸ್ಕೋ ಮ್ಯೂಸಿಯಂ

ಅಸ್ಸಾಂ ಟ್ರಿಬ್ಯೂನ್ ಪ್ರೆಸ್ ಬಳಿಯ ಡಾನ್ ಬಾಸ್ಕೋ ಮ್ಯೂಸಿಯಂನಲ್ಲಿರುವ ಈಶಾನ್ಯ ಭಾರತದ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲಾಕೃತಿಗಳು, ವೇಷಭೂಷಣಗಳು, ಆಯುಧಗಳು, ಸಂಗೀತ ವಾದ್ಯಗಳನ್ನು ಛಾಯಾಚಿತ್ರಗಳು ಮತ್ತು ಖಾಸಿ, ಗಾರೋ ಮತ್ತು ಜೈನ್ತಿಯಂತಹ ಜನಾಂಗೀಯ ಸಮುದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ. ಇಲ್ಲಿಗೆ ಬೆಳಗ್ಗೆ 9 ರಿಂದ 5.30 ರವರೆಗೆ ಭೇಟಿ ನೀಡಬಹುದು. ಭಾನುವಾರದಂದು ಇದನ್ನು ಮುಚ್ಚಲಾಗುತ್ತದೆ.

ಪ್ರೆಟಿ ವಾರ್ಡ್‌ನ ಸರೋವರ

ಪೆಡಲ್ ಬೋಟಿಂಗ್ ಇಷ್ಟಪಡುವವರಿಗೆ ಮೇಘಾಲಯದ ಬೊಟಾನಿಕಲ್ ಗಾರ್ಡನ್ಸ್‌ನ ಮಧ್ಯ ಇರುವ ವಾರ್ಡ್‌ನ ಸರೋವರ ಮೋಡಿ ಮಾಡುತ್ತದೆ. ಅರಳುತ್ತಿರುವ ನೈದಿಲೆಗಳು, ಸುತ್ತಮುತ್ತಲಿನ ಆರ್ಕಿಡ್‌ಗಳು ಮತ್ತು ಪೈನ್ ಮರಗಳು ಸುಂದರ ಪ್ರಶಾಂತ ವಾತಾವರಣದ ಸವಿ ಉಣಿಸುವುದು. 1891 ರಲ್ಲಿ ಬ್ರಿಟಿಷರು ನಿರ್ಮಿಸಿದ್ದು, ಸುಂದರವಾದ ಉದ್ಯಾನ, ಕೆಫೆಗಳು ಇಲ್ಲಿನ ಆಕರ್ಷಣೆಯಾಗಿದೆ.

ಸೇಕ್ರೆಡ್ ಮಾವ್‌ಫ್ಲಾಂಗ್ ವುಡ್

ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಾವ್‌ಫ್ಲಾಂಗ್ ಹಳ್ಳಿಯಲ್ಲಿ ದಟ್ಟವಾದ ತೋಪುಗಳ ನಡುವೆ ನಡೆದಾಡುವ ಸುಂದರ ಅನುಭೂತಿಯನ್ನು ನೀಡುತ್ತದೆ. ಇದು ಸ್ಥಳೀಯ ಖಾಸಿ ದೇವತೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇಲ್ಲಿ ಪುರಾತನ ಮರಗಳು, ಅಪರೂಪದ ಸಸ್ಯಗಳನ್ನು ಕಾಣಬಹುದು. ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ.

ಪೊಲೀಸ್ ಬಜಾರ್‌

ಶಾಪಿಂಗ್ ಪ್ರಿಯರಿಗಾಗಿ ಇಲ್ಲಿರುವ ಫಂಕಿ ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಥಳೀಯ ಕರಕುಶಲ ಮಳಿಗೆಳು ಅತ್ಯಾಕರ್ಷಕವಾಗಿದೆ. ಹಂದಿಮಾಂಸದ ಮೊಮೊಗಳು, ದೋಸೆಗಳು ಮತ್ತು ಬಬಲ್ ಚಹಾದೊಂದಿಗೆ ಜನಾಂಗೀಯ ಬುಡಕಟ್ಟು ಆಭರಣಗಳು, ಬಿದಿರಿನ ಕರಕುಶಲ ವಸ್ತುಗಳು ಮತ್ತು ಟ್ರೆಂಡಿ ಜಾಕೆಟ್‌ಗಳನ್ನು ಖರೀದಿ ಮಾಡಬಹುದು. ಇಲ್ಲಿ ಸಾಂಪ್ರದಾಯಿಕ ಉಡುಪುಗಳು, ಕರಕುಶಲ ವಸ್ತುಗಳು ಸಿಗುತ್ತವೆ.


ಶಿಲ್ಲಾಂಗ್ ಕೋರ್ಸ್‌

ಸುಂದರವಾದ ಶಿಲ್ಲಾಂಗ್ ಗಾಲ್ಫ್ ಕೋರ್ಸ್‌ನಲ್ಲಿ ಒಂದು ದಿನ ಸ್ವಿಂಗ್ ಅಭ್ಯಾಸ ಮಾಡಬಹುದು. ನೀಲಿ ಆಕಾಶದ ಕೆಳಗೆ ಪೈನ್ ಮರಗಳಿಂದ ಸುತ್ತುವರೆದಿರುವ ಇದು 1898 ರಲ್ಲಿ ಟಿಷ್ ನಾಗರಿಕ ಸೇವಕರಿಂದ ಸ್ಥಾಪಿಸಲಾದ ಭಾರತದ ಅತ್ಯಂತ ಹಳೆಯ ಗಾಲ್ಫ್ ಕೋರ್ಸ್ ಎನ್ನಲಾಗುತ್ತದೆ.


ಕ್ಯಾಥೆಡ್ರಲ್

ಶಿಲ್ಲಾಂಗ್ ನಲ್ಲಿ ಡಾನ್ ಬಾಸ್ಕೊ ಸ್ಕ್ವೇರ್ ಬಳಿಯ ಭವ್ಯವಾದ ಮತ್ತು ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರುವ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್ ಕ್ಯಾಥೆಡ್ರಲ್‌ ಈಶಾನ್ಯದಲ್ಲಿರುವ ಅತ್ಯಂತ ಹಳೆಯ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದಾಗಿದೆ. 1936ರಲ್ಲಿ ಇದನ್ನು ನಿರ್ಮಿಸಲಾಗಿದ್ದು, 1951 ರಲ್ಲಿ ವ್ಯಾಟಿಕನ್‌ನಿಂದ ಪವಿತ್ರಗೊಳಿಸಲಾಯಿತು. ಬಣ್ಣದ ಗಾಜಿನ ಫಲಕಗಳು, ಅವಳಿ ಗಂಟೆ ಗೋಪುರಗಳು ಇಲ್ಲಿನ ಆಕರ್ಷಣೆ.

Continue Reading

ಪ್ರವಾಸ

Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!

Summer Tour: ಸುಂದರ ತಾಣಗಳಲ್ಲಿ ಈ ಬೇಸಿಗೆಯನ್ನು ಕಳೆಯಬೇಕು ಎನ್ನುವ ಯೋಚನೆ ಮಾಡುತ್ತಿದ್ದರೆ ಪಾಂಡಿಚೇರಿಯಲ್ಲಿ ಸುತ್ತಬಹುದು. ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ.

VISTARANEWS.COM


on

By

Summer tour
Koo

ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ತಾಣಕ್ಕೆ ಈ ಬಾರಿ ಬೇಸಿಗೆಯಲ್ಲಿ ಪ್ರವಾಸ (Summer tour) ಹೋಗಬೇಕು ಎನ್ನುವ ಯೋಜನೆ ಇದ್ದರೆ ಭಾರತದ (india) ‘ಫ್ರೆಂಚ್ ರಾಜಧಾನಿ’ ಪಾಂಡಿಚೇರಿಗೆ (Pondicherry) ಪ್ರವಾಸ ಹೊರಡುವ ಪ್ಲಾನ್ ಮಾಡಿಕೊಳ್ಳಬಹುದು. ಅತ್ಯಂತ ಶಾಂತಿಯುತ ನಗರವಾದ ಪಾಂಡಿಚೇರಿ ಫ್ರೆಂಚ್ (french) ಪ್ರೇರಿತ ನಗರ ವಿನ್ಯಾಸದಿಂದಾಗಿ ವಿಶ್ವದಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಸುಂದರ ತಾಣಗಳಲ್ಲಿ ಸುತ್ತಬೇಕು ಎನ್ನುವ ಯೋಚನೆ ಇದ್ದರೆ ಪಾಂಡಿಚೇರಿಯಲ್ಲಿ ಹರಸಾಹಸ ಮಾಡಬೇಕಾಗಿಲ್ಲ. ಯಾಕೆಂದರೆ ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಇಲ್ಲಿನ ಅನುಭವಗಳ ಶ್ರೇಣಿಯು ಪ್ರವಾಸಿಗರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲಿಗೆ ಪ್ರವಾಸ ಯೋಜನೆ ಮಾಡಿಕೊಂಡರೆ ಖಂಡಿತಾ ಯಾರಿಗೂ ನಿರಾಸೆಯಂತೂ ಆಗೋದಿಲ್ಲ.

ಫೆಂಚರ ನೆನಪುಗಳನ್ನು ಹೇಳುವ ಮರಗಳಿಂದ ಕೂಡಿದ ಬೌಲೆವಾರ್ಡ್‌ಗಳು, ಚಿನ್ನದ ಕಡಲತೀರಗಳು ಮತ್ತು ಕಲಾತ್ಮಕವಾಗಿ ಪುನಃಸ್ಥಾಪಿಸಿದ ವಸಾಹತುಶಾಹಿ ವಾಸ್ತುಶಿಲ್ಪಗಳು ಆಧುನಿಕತೆಯೊಂದಿಗೆ ಬೆರೆತು ತನ್ನ ಹಿಂದಿನ ನೆನಪುಗಳ ಕಥೆ ಹೇಳುತ್ತದೆ.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಇತಿಹಾಸದ ಹೆಗ್ಗುರುತು

ಫ್ರೆಂಚ್ ವಸಾಹತುಶಾಹಿ ಟ್ರಯಲ್ ನಲ್ಲಿ ವಾಲ್ಕ್ ಡೌನ್ ಹಿಸ್ಟರಿಯನ್ನು ಕಾಣಬಹುದು. 28 ವಿಕ್ಟೋರಿಯನ್ ಸೈಟ್‌ಗಳಲ್ಲಿ 300 ವರ್ಷಗಳ ಇತಿಹಾಸವನ್ನು ಹೇಳುವಂತಿದೆ. ಮೈರಿ, ರಾಜ್ ನಿವಾಸ್ ಮತ್ತು ಹಳೆಯ ಲೈಟ್‌ಹೌಸ್‌ನಂತಹ ಹೆಗ್ಗುರುತುಗಳು ಬಂದರು ಚಟುವಟಿಗೆಳ ಬಗ್ಗೆ ವರ್ಣಿಸುತ್ತದೆ. ಫ್ರೆಂಚ್ ರಾಜಮನೆತನದ ಹಳದಿ ಬಣ್ಣವನ್ನು ಬಳಸಿ ಸೊಗಸಾದ ಟೌನ್‌ಹೌಸ್‌ಗಳಿಂದ ಲೇಪನ ಮಾಡಿ ನಿರ್ಮಿಸಲಾಗಿರುವ ಲ್ಯಾಟಿನ್ ಕ್ವಾರ್ಟರ್‌ಗಳನ್ನು ಇಲ್ಲಿ ನೋಡಲು ಮರೆಯದಿರಿ. ಇಲ್ಲಿನ ಲೆ ಕೆಫೆಯ ಪ್ಯಾಕೆಟ್ ಊಟದ ಪಾಕಪದ್ಧತಿಯು ರೋಮಾಂಚಕ ಅನುಭವ ಕೊಡುವುದು. ಇದು ಫ್ರಾಂಕೋ-ತಮಿಳು ಸಂಸ್ಕೃತಿಯನ್ನು ಸಾರುತ್ತದೆ.


ಸೆರೆನಿಟಿ ಬೀಚ್‌

ಬೆರಗುಗೊಳಿಸುವ ಸೂರ್ಯೋದಯವನ್ನು ಕಾಣಬೇಕಾದರೆ ಸೆರೆನಿಟಿ ಬೀಚ್ ಗೆ ಹೋಗಬಹುದು. ಸೂರ್ಯೋದಯವನ್ನು ನೋಡುತ್ತಾ ಸಮುದ್ರಕ್ಕೆ ಹೊರಟಿರುವ ಮೀನುಗಾರರನ್ನು ಮುಂಜಾನೆ ಇಲ್ಲಿಗೆ ಭೇಟಿ ಕೊಡಬಹುದು. ಹಸಿರು ಅಲೆಗಳು ಕಿತ್ತಳೆ ಆಕಾಶದಲ್ಲಿ ಕರಗುವಂತೆ ಕಾಣುವ ದೋಣಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇಲ್ಲಿ ಸಾಹಸಮಯ ಜಲಕ್ರೀಡೆಯಲ್ಲೂ ಪಾಲ್ಗೊಳ್ಳಬಹುದು. ಮೀನುಗಾರರ ಬದುಕಿನ ಅನುಭವದೊಂದಿಗೆ ಫ್ರೆಶ್ ಸಮುದ್ರಾಹಾರವನ್ನು ಇಲ್ಲಿ ಸವಿಯಬಹುದು.


ಪ್ರೊಮೆನೇಡ್ ಬೀಚ್ ರಸ್ತೆ

ಪಾಂಡಿಚೇರಿಯ ಪ್ರತಿಯೊಂದು ಬೀಚ್ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದರಲ್ಲಿ ಪ್ರೊಮೆನೇಡ್ ಬೀಚ್ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವುದು ಒಂದು ಸುಂದರ ಅನುಭವ. ಬೀಸುವ ತಂಗಾಳಿಯೊಂದಿಗೆ ಜಲಾಭಿಮುಖವನ್ನು ಹೆಲ್ಮೆಟ್ ಧರಿಸಿ ಬೈಸಿಕಲ್ ಓಡಿಸಲು ಅವಕಾಶವಿದೆ. ಇದರೊಂದಿದೆ ಚಿತ್ತಾಕರ್ಷಕ ಬ್ರಿಟಿಷ್ ವಿಲ್ಲಾಗಳು, ತಮಿಳು ದೇವಾಲಯಗಳನ್ನು ಕಾಣಬಹುದು. ಇಲ್ಲಿ ಕ್ಯಾಂಡಲ್-ಲೈಟ್ ಕೆಫೆಗಳು ಮತ್ತು ಜೆಲಾಟೊ ಜಾಯಿಂಟ್‌ಗಳು ಅದ್ಬುತ ಅನುಭವ ಕೊಡುವುದು.

ಅರಬಿಂದೋ ಆಶ್ರಮ

ಪ್ರಶಾಂತವಾದ ತಾಣದ ಹುಡುಕಾಟದಲ್ಲಿದ್ದಾರೆ ಧ್ಯಾನ ಮಾಡಲು ಸೂಕ್ತವಾದ ಸ್ಥಳ ಮಾತೃಮಂದಿರ ಉದ್ಯಾನವನದಲ್ಲಿರುವ ಅರಬಿಂದೋ ಆಶ್ರಮ. ಮಿರ್ರಾ ಅಲ್ಫಾಸ್ಸಾ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ಇಲ್ಲಿನ ಸುಂದರವಾದ ಹಳ್ಳಿಗಾಡಿನ ಸೊಂಪಾದ ವಿಹಂಗಮ ನೋಟಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಸೊಂಪಾದ ಹುಲ್ಲುಹಾಸುಗಳ ಮೇಲೆ ನಡೆಯುವುದು ಹೆಚ್ಚು ಖುಷಿ ಕೊಡುತ್ತದೆ.

ವೈಬ್ರೆಂಟ್ ಬಜಾರ್

ಕಲಾತ್ಮಕ ಸಮುದಾಯದಿಂದ ನಿರ್ವಹಿಸಲ್ಪಡುವ ವೈಬ್ರೆಂಟ್ ಬಜಾರ್ ವಿಶಿಷ್ಟವಾದ ಸ್ಥಳೀಯ ಸಾಮಗ್ರಿಗಳನ್ನು ಒಳಗೊಂಡಿದೆ. ಕೇರಳದ ಸಾಂಪ್ರದಾಯಿಕ ಬ್ಲಾಕ್ ಪ್ರಿಂಟಿಂಗ್ ವಿಧಾನಗಳನ್ನು ಬಳಸಿಕೊಂಡು ಮುದ್ರಿಸಲಾದ ಬಿಳಿ ಕಾಟನ್ ಶರ್ಟ್‌ಗಳು, ಕೈಯಿಂದ ಮಾಡಿದ ಸಾವಯವ ಸಾಬೂನುಗಳು, ಸಾಂಪ್ರದಾಯಿಕವಾಗಿ ಹೊರತೆಗೆಯಲಾದ ಸುಗಂಧ ದ್ರವ್ಯಗಳು ಮತ್ತು ಜೇನುತುಪ್ಪ ಇಲ್ಲಿ ಹೆಚ್ಚು ಬೇಡಿಕೆಯುಳ್ಳ ವಸ್ತುಗಳು.


ಟೆಂಪಲ್ ರೀಫ್‌ನಲ್ಲಿ ಸ್ಕೂಬಾ

ಉಷ್ಣವಲಯದ ನೀರಿನಲ್ಲಿ ಸ್ಕೂಬಾ ಮಾಡಿ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು. ಸ್ತಬ್ಧ ಬೀಚ್ ಕರಾವಳಿಯಲ್ಲಿ ವರ್ಣರಂಜಿತ ಹವಳದ ಬಂಡೆಗಳಿಂದ ಬೀಸುತ್ತಿರುವ ಸ್ಪಾಟ್ ಏಂಜೆಲ್ ಮೀನುಗಳು, ಬೆರಗುಗೊಳಿಸುವ ನೀರೊಳಗಿನ ಜೀವವೈವಿಧ್ಯವನ್ನು ಹತ್ತಿರದಿಂದ ನೋಡಬಹುದು. ಇದಕ್ಕಾಗಿ ಪರಿಣಿತರು ಮೊದಲ ಬಾರಿಗೆ ಸ್ಕೂಬಾ ಮಾಡುವವರಿಗೆ ತರಬೇತಿ ನೀಡುತ್ತಾರೆ.

ತಮಿಳು- ಫ್ರೆಂಚ್ ಪಾಕಶಾಲೆ

ಪಾಂಡಿಚೇರಿಗೆ ಭೇಟಿ ನೀಡಿದರೆ ತಮಿಳು- ಫ್ರೆಂಚ್ ಪಾಕಶಾಲೆಗೆ ಭೇಟಿಯಾಗುವುದನ್ನು ತಪ್ಪಿಸಬೇಡಿ. ವಿಶ್ವ ಮಟ್ಟದ ಸುಪ್ರಸಿದ್ದ ಖಾದ್ಯಗಳೊಂದಿಗೆ ಸ್ಥಳೀಯ ಮಸಾಲೆಗಳನ್ನು ಬೆಸೆಯುವ ಇನ್ವೆಂಟಿವ್ ಈಸ್ಟ್-ಮೀಟ್ಸ್-ವೆಸ್ಟ್ ಪಾಕಪದ್ಧತಿ ಎಲ್ಲರನ್ನೂ ಸೆಳೆಯುತ್ತದೆ. ಇಲ್ಲಿನ ಸುಪ್ರಸಿದ್ದ ಸಹಿ ಭಕ್ಷ್ಯಗಳೆಂದರೆ ಕ್ರಿಯೋಲ್ ಥಾಲಿ, ಮಸಾಲಾ ಆಮ್ಲೆಟ್, ಕರಿ ಎಲೆಯ ಐಸ್ ಕ್ರೀಮ್, ಸಮುದ್ರಾಹಾರಗಳಲ್ಲಿ ಸ್ಟ್ಯೂ, ತರಕಾರಿ ಕಟ್ಲೆಟ್‌ಗಳು, ಚಿಕ್ ಹೆರಿಟೇಜ್ ಕೆಫೆಗಳಲ್ಲಿ ಕ್ರೋಸೆಂಟ್‌ಗಳು, ಆಕರ್ಷಕ ಬಿಸ್ಟ್ರೋಗಳಲ್ಲಿ ಪಾಂಡಿಯ ಪ್ರಸಿದ್ಧ ಕಾಫಿ, ವೈನ್, ಚೀಸ್ ನ ರುಚಿ ನೋಡಬಹುದು.

Continue Reading

ಪ್ರವಾಸ

Summer Tour: ಬಿರು ಬಿಸಿಲಿನಲ್ಲೂ ತಂಪಾದ ಅನುಭವ ನೀಡುವ ಕೊಡಗಿನಲ್ಲಿ ಸುತ್ತೋಣ ಬನ್ನಿ…

Summer Tour: ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಹಲವು ರೋಮಾಂಚಕ ಅನುಭವ ಕೊಡುವ ತಾಣಗಳಿವೆ. ಕೊಡಗಿಗೆ ಭೇಟಿ ನೀಡುವಾಗ ಈ ಅನುಭವಗಳನ್ನು ನೆನಪಿನ ಜೋಳಿಗೆಯಲ್ಲಿ ಸೇರಿಸಲು ಮರೆಯದಿರಿ.

VISTARANEWS.COM


on

By

Kodagu tour
Koo

ಬೆಂಗಳೂರು: ಎಲ್ಲಿ ಕಣ್ಣು ಹಾಯಿಸಿದರೂ ದಟ್ಟವಾದ ಹಚ್ಚ ಹಸಿರು, ಸುವಾಸನೆ ಬೀರುವ ಕಾಫಿ ತೋಟಗಳು, ಮನ ಸೆಳೆಯುವ ವಿಭಿನ್ನ ಸಂಸ್ಕೃತಿ, ಪ್ರವಾಸಿಗರಿಗೆ ಹಲವು ವಿಶೇಷ ಅನುಭವವನ್ನು ಕಟ್ಟಿಕೊಡುವ ಇದು ಭಾರತದ ಸ್ಕಾಟ್ಲೆಂಡ್ (Scotland of India). ಕರ್ನಾಟಕದ (Karnataka) ಪಶ್ಚಿಮ ಘಟ್ಟದ (Western Ghat) ಪರ್ವತಗಳ ನಡುವೆ ನೆಲೆಯಾಗಿರುವ ಕೊಡಗು (Kodagu) ಭವ್ಯವಾದ ಅನುಭವಗಳನ್ನು ನೀಡುತ್ತದೆ (Summer Tour).

ಎಲ್ಲರನ್ನೂ ಮೋಡಿ ಮಾಡುವ ಕೂರ್ಗ್‌ಗೆ (Coorg) ಭೇಟಿ ನೀಡುವುದಿದ್ದರೆ ಈ ಏಳು ನಂಬಲಾಗದ ಆಕರ್ಷಣೆ, ಸರ್ವೋತ್ಕೃಷ್ಟ ಅನುಭವಗಳನ್ನು ನಿಮ್ಮ ನೆನಪಿನ ಬುಟ್ಟಿಯಲ್ಲಿ ಸೇರಿಸಲು ಮರೆಯದಿರಿ.

ಕಾಡುಗಳ ಮಧ್ಯೆ ಒಂದು ರಾತ್ರಿ

ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಅಡಿಯಲ್ಲಿ ರಾತ್ರಿಯಿಡೀ ಕುಳಿತುಕೊಳ್ಳಲು ಹಲವು ಅವಕಾಶ ಕೊಡಗಿನಲ್ಲಿದೆ. ಪ್ರಕೃತಿಯ ಮಡಿಲಲ್ಲಿ ಸಾಹಸವನ್ನು ಇಷ್ಟಪಡುವವರಿಗೆ ಕೂರ್ಗ್‌ನ ರಾತ್ರಿಯ ಕ್ಯಾಂಪಿಂಗ್‌ನಲ್ಲಿ ಕಾಲ ಕಳೆಯಬಹುದು. ಜಿಲ್ಲೆಯಾದ್ಯಂತ ವಿವಿಧ ಶಿಬಿರಗಳು ರಾತ್ರಿಯಿಡೀ ನಡೆಸಲಾಗುತ್ತದೆ. ಹಗಲಿನಲ್ಲಿ ದಟ್ಟವಾದ ಕಾಡಿನ ಅನ್ವೇಷಣೆಗೆ ಅನುಕೂಲವಾಗುವಂತೆ ಉಪಕರಣಗಳು ಮತ್ತು ಮಾರ್ಗದರ್ಶಿ ಸೇವೆಗಳನ್ನು ನೀಡುತ್ತದೆ.

ಇದನ್ನೂ ಓದಿ: Panaji tour: ಮೋಡಿ ಮಾಡುವ ಪಣಜಿ; ಗೋವಾ ಸುಂದರ ಲೋಕದ ಗೇಟ್‌ವೇ!

ಕಾವೇರಿ ನದಿಯಲ್ಲಿ ಮೀನು ಹಿಡಿಯಿರಿ

ಜಿಲ್ಲೆಗೆ ಪ್ರವೇಶ ಪಡೆಯುವ ಮೊದಲು ಸಣ್ಣ ಬುಗ್ಗೆಯಾಗಿ ತಲಕಾವೇರಿ ಬೆಟ್ಟಗಳಲ್ಲಿ ಕಾವೇರಿ ಹುಟ್ಟುತ್ತದೆ. ಏಕಾಂತವನ್ನು ಬಯಸುವ ಪ್ರವಾಸಿಗರಿಗೆ ಇದರಲ್ಲಿ ಮೀನು ಹಿಡಿಯಲು ಸಾಕಷ್ಟು ಅವಕಾಶವಿದೆ. ಸಿಹಿ ನೀರಿನಲ್ಲಿ ಮೀನುಗಳನ್ನು ಇಲ್ಲಿ ಕಾಣಬಹುದು. ಮಂಜು ಮುಸುಕಿದ ಪರಿಸರದಲ್ಲಿ ಮೀನುಗಳು ಹೆಚ್ಚು ಸಕ್ರಿಯವಾಗಿರುತ್ತವೆ. ವಿವಿಧ ತೊರೆಗಳು, ವರ್ಣರಂಜಿತ ಪಕ್ಷಿಗಳು, ವಿವಿಧ ಜಾತಿಯ ಮರಗಳು ಮನಃಶಾಂತಿಯನ್ನು ನೀಡುತ್ತದೆ.

ಕೂರ್ಗ್ ಸಂಸ್ಕೃತಿ ನೋಡ ಬನ್ನಿ

ಕೊಡಗಿನ ಹೋಂಸ್ಟೇಗಳಲ್ಲಿ ಅಧಿಕೃತ ಕೂರ್ಗಿ ಸಂಸ್ಕೃತಿಯನ್ನು ಕಾಣಬಹದು. ಸಾಂಪ್ರದಾಯಿಕ ಕೊಡವ ನೃತ್ಯಗಳು, ಬಾಯಲ್ಲಿ ನೀರೂರಿಸುವ ಸ್ಥಳೀಯ ಭಕ್ಷ್ಯಗಳು, ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಲು ಮತ್ತು ಮೋಜಿನ ಚಿತ್ರಗಳನ್ನು ಕ್ಲಿಕ್ ಮಾಡಲು ಇದು ಅವಕಾಶ ಕೊಡುತ್ತದೆ. ಪ್ರವಾಸಿಗರಿಗೆ ಇಲ್ಲಿ ಒಂದು ಹೊಸ ಅನುಭವವನ್ನು ಕೊಡಲಿದೆ. ಕೆಲವೊಂದು ಹೋಂ ಸ್ಟೇಗಳನ್ನು ಪೂರ್ವಜರ ಮನೆಗಳಲ್ಲಿ ಮಾಡಲಾಗಿದೆ. ಇದರ ಸುತ್ತಲೂ ಪ್ರದರ್ಶಿಸಲಾದ ಕಲಾಕೃತಿಗಳನ್ನು ಪುರಾತನ ಹಳ್ಳಿಯ ದಿನಗಳನ್ನು ನೆನಪಿಸುತ್ತದೆ.

ರಾಫ್ಟಿಂಗ್ ಅನುಭವ

ಕೊಡಗಿಗೆ ಭೇಟಿ ನೀಡಿದ ಮೇಲೆ ರಾಫ್ಟಿಂಗ್ ಅನುಭವವನ್ನು ಪಡೆಯಲು ಮರೆಯದಿರಿ. ಬಾರಾಪೋಲ್ ನದಿಯ ಘರ್ಜನೆಯ ನಡುವೆ ರಾಪಿಡ್‌ಗಳು ಗ್ರೇಡ್ 3 ಮತ್ತು 4 ವೈಟ್ ವಾಟರ್ ನಲ್ಲಿ 9 ಕಿಲೋ ಮೀಟರ್ ದೂರದವರೆಗೆ ಸಂಚರಿಸುತ್ತದೆ. ಅನುಭವಿ ರಾಫ್ಟರ್‌ಗಳಿಗೆ ರೋಮಾಂಚನವನ್ನು ಒದಗಿಸುತ್ತದೆ. ಕೂರ್ಗ್ ಪಟ್ಟಣದಿಂದ ಕೇವಲ 90 ನಿಮಿಷಗಳ ದೂರದಲ್ಲಿರುವ ಇಲ್ಲಿಗೆ ಜೀಪ್‌ಗಳ ಮೂಲಕ ಶೀಘ್ರದಲ್ಲೇ ತಲುಪಬಹುದು. ಅರಣ್ಯ ಪ್ರದೇಶದ ಮೂಲಕ ದೊಡ್ಡ ಬಂಡೆಗಳ ಸುತ್ತಲೂ ಹರಿಯುವ ನೀರು ಮನಸ್ಸಿಗೆ ಉಲ್ಲಾಸವನ್ನು ಒದಗಿಸುತ್ತದೆ.

ಸಾಂಪ್ರದಾಯಿಕ ಕಾಫಿ ರುಚಿ ನೋಡಿ

ಭಾರತದ ಅತ್ಯುತ್ತಮ ಕಾಫಿ ಬೀಜಗಳನ್ನು ಉತ್ಪಾದಿಸುವ 150ಕ್ಕೂ ಹೆಚ್ಚು ಕಾಫಿ ತೋಟಗಳು ಕೊಡಗಿನಲ್ಲಿದೆ. ಧುಮ್ಮಿಕ್ಕುವ ಹೊಳೆಗಳ ಪಕ್ಕದಲ್ಲಿ ಹರಡಿಕೊಂಡಿರುವ ಕಾಫಿ ತೋಟಗಳಲ್ಲಿ ಸುತ್ತಾಡುವುದು ಒಂದು ರೋಚಕ ಅನುಭವ. ಇಲ್ಲಿನ ಹೆರಿಟೇಜ್ ಫ್ಯಾಕ್ಟರಿಗಳಲ್ಲಿ ಕಾಫಿ ಪುಡಿ ಸಿದ್ಧವಾಗುವುದನ್ನು ನೋಡಬಹುದು. ಇಲ್ಲಿನ ಸ್ಥಳೀಯರು ವಿವಿಧ ಪ್ರಭೇದಗಳ ಕಾಫಿಗಳ ಬಗ್ಗೆ ಹುರಿಯುವ, ಕುದಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.

ಮಡಿಕೇರಿ ಕೋಟೆ

17ನೇ ಶತಮಾನದಲ್ಲಿ ಹಲೇರಿ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿರುವ ಮಡಿಕೇರಿ ಕೋಟೆ ಕೂರ್ಗ್ಸ್ ಇತಿಹಾಸವನ್ನು ವರ್ಣಿಸುತ್ತದೆ. ವಿಜಯನಗರದಿಂದ ಬ್ರಿಟಿಷರ ಕಾಲದವರೆಗಿನ ಹಿಂದಿನ ಶಿಲ್ಪಗಳು, ವೀರರ ಚಿತ್ರಣಗಳು ಮತ್ತು ಕಲ್ಲಿನ ಶಾಸನಗಳನ್ನು ಇಲ್ಲಿ ಕಾಣಬಹುದು. ಕೋಟೆಯ ಬೆಟ್ಟದ ಮೇಲಿನ ತಾಣವು ಸಂಪೂರ್ಣ ಮಡಿಕೇರಿ ಪಟ್ಟಣದ ಚಿತ್ರವನ್ನು ತೋರಿಸುತ್ತದೆ.


ಅಬ್ಬೆ ಫಾಲ್ಸ್‌

ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬೆ ಜಲಪಾತಕ್ಕೆ ಭೇಟಿ ನೀಡದೆ ಕೂರ್ಗ್ ನೆನಪುಗಳು ಪೂರ್ಣಗೊಳ್ಳುವುದಿಲ್ಲ. ತೂಗು ಸೇತುವೆ ಮೂಲಕ ಇದನ್ನು ಹತ್ತಿರದಿಂದ ವೀಕ್ಷಿಸಬಹುದಾಗಿದೆ.
ದಾರಿಯಲ್ಲಿ ಅಪರೂಪದ ಪ್ರಾಣಿಗಳು, ಹಸಿರು ಕಾಡು ಮನಸ್ಸಿಗೆ ತಂಪಿನ ಅನುಭವ ನೀಡುತ್ತದೆ. 70 ಅಡಿ ಎತ್ತರದಿಂದ ಅವಳಿ ಜಲಪಾತಗಳು ಕಾಡು ದಾರಿಯಲ್ಲಿ ಹರಿಯುತ್ತವೆ. ಇದಕ್ಕೆ ಹತ್ತಿರವಾಗಿ ಮಸಾಲೆ ತಯಾರಿ ಘಟಕಗಳು, ಉದ್ಯಾನಗಳು ಇವೆ.

Continue Reading
Advertisement
charlie chaplin rajamarga
ಪ್ರಮುಖ ಸುದ್ದಿ27 mins ago

ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Karnataka Weather Forecast
ಮಳೆ1 hour ago

Karnataka Weather : ವೀಕೆಂಡ್‌ನಲ್ಲಿ ಬೆಂಗಳೂರಲ್ಲಿ ಮಳೆ ಗ್ಯಾರಂಟಿ; ಹಲವೆಡೆ ಗುಡುಗು, ಸಿಡಿಲು ಮುನ್ನೆಚ್ಚರಿಕೆ

Modi in Karnataka today Massive rally in Chikkaballapur and roadshow in Bengaluru
Lok Sabha Election 20242 hours ago

Modi in Karnataka: ರಾಜ್ಯದಲ್ಲಿಂದು ಮೋದಿ ಮೋಡಿ; ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಸಮಾವೇಶ, ಬೆಂಗಳೂರಲ್ಲಿ ರೋಡ್‌ ಶೋ

Kids Sleep
ಲೈಫ್‌ಸ್ಟೈಲ್2 hours ago

Kids Sleep: ಪೋಷಕರೇ ಎಚ್ಚರ; ನಿಮ್ಮ ಮಕ್ಕಳ ನಿದ್ರೆ ಕಸಿದುಕೊಳ್ಳುವ ಈ ವಸ್ತುಗಳನ್ನು ಕೊಡಲೇಬೇಡಿ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

ಕರ್ನಾಟಕ8 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Neha Hiremttt
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Narendra Modi
ದೇಶ8 hours ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ8 hours ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ8 hours ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ16 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌