Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

ಈ ವಾರ ಅಂದರೆ ಫೆಬ್ರವರಿ 25 ರಿಂದ ಮಾರ್ಚ್‌ 04 ರವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ (Weekly Horoscope), ಯಾವ ರಾಶಿಯವರ ಅದೃಷ್ಟ ಸಂಖ್ಯೆ ಎಷ್ಟು, ಶುಭ ದಿಕ್ಕು ಯಾವುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೇಷ: ಸುಖ, ಸಮೃದ್ಧಿಯ ಕಾಲ

Weekly Horoscope

ಹೊಸದೇ ರೀತಿಯ ವಿಧಾನದಲ್ಲಿ ಬದುಕಿನ ಸಂದರ್ಭವನ್ನು ಪರಿವರ್ತನಗೊಳಿಸಿಕೊಳ್ಳಲು ಮನಸ್ಸು ಮಾಡಿದ್ದರೆ ಅಗತ್ಯವಾಗಿ ಈ ಕುರಿತು ಸೂಕ್ತವಾದ ನಿರ್ಧಾರ ರೂಪಿಸಿಕೊಳ್ಳಿ. ಚಂದ್ರನ ಸುಹಾಸಕರ ಓಡಾಟದ ಅವಧಿಗಳು ನಿಮಗೆ ಪರಿಪೂರ್ಣ ಮನೋಶಾಂತಿ, ಸುಖ, ಸಮೃದ್ಧಿ ತರಲು ಸೂಕ್ತವಾಗಿವೆ. ತಿಳಿದಿರದ ಯಾವುದೇ ವಿಚಾರವನ್ನು ವಿದ್ಯುತ್‌ ಉಪಕರಣಗಳ ಸಂಬಂಧವಾಗಿ ಮಾಡಲು ಮುಂದಾದಿರಿ, ಅಪಾಯವನ್ನು ಆಹ್ವಾನಿಸಿಕೊಳ್ಳದಿರಿ. ತಿಳಿದವರಿಂದ ಸಹಾಯ ಪಡೆಯಿರಿ. ಮಹಾ ವಿಷ್ಣುವನ್ನು ಸ್ತುತಿಸಿ.
ಶುಭ ಸಂಖ್ಯೆ: 3 ಶುಭ ದಿಕ್ಕು: ನೈಋತ್ಯ

ವೃಷಭ : ಲಾಭ ತಂದು ಕೊಡುವ ವಾರ

Weekly Horoscope

ಪರಿಣಾಮಕಾರಿಯಾದ ಲಾಭದ ವಿಚಾರದಲ್ಲಿ ದೈವಾನುಗ್ರಹ ನಿಮ್ಮ ನೆರವಿಗೆ ಬರಲಿದೆ. ನಿಮ್ಮ ಕುಲ ಕಸುಬಿನ ವಿಚಾರದಲ್ಲೂ ಉತ್ತಮವಾದ ಫಲ ಪಡೆಯಲು ಕಾಲ ಉತ್ತಮವೇ ಆಗಿದೆ. ಯಾರೋ ಅಮಾಯಕರ ಬಳಿ ಒರಟಾಗಿ ವರ್ತನೆ ತೋರದಿರಿ. ಬಿಕ್ಕಟ್ಟುಗಳು ಎದುರಾಗುವ ಸಂಭಾವ್ಯತೆಗಳು ಜಾಸ್ತಿ. ಮನೆಯಲ್ಲಿ ಸದಸ್ಯರೆಲ್ಲರ ವಿಶ್ವಾಸವನ್ನು ಪಡೆದೇ ನಿಮ್ಮ ಕೆಲಸ ಕಾರ್ಯಗಳನ್ನು ನಡೆಸಿ. ಬೆಳ್ಳಿ ಹೂಗಳ ಜತೆ ತುಸು ಅರಿಷಿಣ, ಕುಂಕುಮ, ಅಕ್ಷತೆ ಸೇರಿಸಿ ಶ್ರೀದೇವಿ ದುರ್ಗಾಳನ್ನು ಆರಾಧಿಸಿ, ಕ್ಷೇಮವಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಮಿಥುನ : ವಿದೇಶಿ ಪ್ರವಾಸಕ್ಕೆ ಅವಕಾಶವಿದೆ!

Weekly Horoscope

ಭಾಗ್ಯದ ವಿಚಾರ ನಿಮ್ಮ ಮನಸ್ಸಿನ ಲೆಕ್ಕಾಚಾರದಂತೆ ನಡೆಯಲು ಈಗ ನಿಮಗೆ ಉತ್ತಮ ಕಾಲ. ಮಕ್ಕಳನ್ನು ವಿಶ್ವಾಸಕ್ಕೆ ಪಡೆಯಿರಿ. ಕುಜನ ಸಂಬಂಧವಾದ ಕಿರಿಕಿರಿಯ ಪರಿಣಾಮವಾಗಿ ಕೇತುವು ಮಕ್ಕಳ ವಿಚಾರದಲ್ಲಿ ಕೆಲ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಸಾಧ್ಯ. ವಿದೇಶ ಪ್ರವಾಸಕ್ಕೂ ಅವಕಾಶ. ಅವಕಾಶದ ಸಂದರ್ಭದಲ್ಲಿ ವ್ಯಾಪಾರ, ವ್ಯವಹಾರ ವಿಷಯಗಳ ಕರಾರುವಕ್ಕಾದ ವಿಷಯ ಸೂಚಿಗಳೊಂದಿಗಿನ ವೇಳಾಪಟ್ಟಿಯಿಂದ ಉತ್ತಮ ಯಶಸ್ಸು ಮನಃ ಸಂಕಲ್ಪದಂತೆ ಸಾಧ್ಯವಾಗುತ್ತದೆ. ದುರ್ಗಾ ಸ್ತುತಿ ಉತ್ತಮ.
ಶುಭ ಸಂಖ್ಯೆ : 7 ಶುಭ ದಿಕ್ಕು: ಈಶಾನ್ಯ

ಕಟಕ : ರಾಜಕಾರಣಿಗಳಿಗೆ ಹೆಚ್ಚಿನ ಸ್ಪರ್ಧೆ

Weekly Horoscope

ಬಿಸಿಲು ಎದ್ದೇಳುತ್ತಿರುವ ಸುಡು ಸೂರ್ಯನ ಹೊತ್ತು ಇದಾಗಿದೆ. ಪರದಾಟವಾಗಿದೆ ದಿನ ಮಾನ ಎಂಬ ಅರಿವು ನಿಧಾನವಾಗಿ ಬರೆಹರಿಯದ ತೊಡಕಾಗಿ ನಿಂತಿದೆ ನಿಮ್ಮಲ್ಲಿ. ಬೇಗುದಿಯ ಹೊರೆ ಹೊತ್ತ ಚಂದ್ರನು ಅಷ್ಟಮದಲ್ಲಿ ಸ್ಥಿತನಾದ ಶನೈಶ್ವರನ ಬಾಧೆಯಿಂದ ಅಸಹಾಯಕನಾಗಿದ್ದಾನೆ. ನಿಮ್ಮ ವರ್ಚಸ್ಸು, ತೇಜಸ್ಸು, ಉತ್ಸಾಹ, ಲವಲವಿಕೆಗಳ ವಿಚಾರದಲ್ಲಿ ಜಾಗೃತರಾಗಿರಿ. ಇದೀಗ ಕಗ್ಗಂಟುಗಳನ್ನು ನಿರ್ಮಿಸಿ ಇನ್ನೂ ಹೆಚ್ಚಿನ ಬಾಧೆ ನಿರ್ಮಿಸಬಹುದು ಎಚ್ಚರ. ರಾಜಕಾರಣಿಗಳಿಗೆ ಹೆಚ್ಚಿನ ಸರ್ಧೆ, ತಾಕಲಾಟಗಳಿವೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ನೈಋತ್ಯ

ಸಿಂಹ: ಗಣಪತಿಯಿಂದ ನಿಮಗೆ ಶುಭವಾರ

Weekly Horoscope

ಗಣೇಶನ ಮೂಲಕವಾಗಿ ಸಿದ್ಧಿ, ಯಶ್ಸು, ಧೈರ್ಯ, ಲವಲವಿಕೆ ಹೊಂದಲು ಅನುಕೂಲಕರ ಸಮಯ ಇದು. ರಾಹು ಸಂಬಂಧವಾದ ಅಥವಾ ಶುಕ್ರನ ಸಂಬಂಧವಾದ ದೋಷ ಪರಿಹಾರಕ್ಕೆ ಮುಂದಾಗಿ ಶಕ್ತಿಯನ್ನು ವಿಸ್ತರಿಸಿಕೊಳ್ಳಿ. ರಾಜಕೀಯ ನಾಯಕರುಗಳಿಗೆ, ರಾಜಕೀಯ ಧುರೀಣರಿಗೆ ಸಿಂಹ ಬಲ ಒದಗಿ ಬಂದರೆ ಪೂರ್ಣ ಮಟ್ಟದ ರಾಜಕೀಯ ವರ್ಚಸ್ಸು, ಅಧಿಕಾರ ಸಂಪಾದಿಸಿಕೊಳ್ಳಲು ಮುಖ್ಯವಾಗಿ ಶ್ರೀದೇವಿ ಲಲಿತಾ ಮಾತೆಯ ಅನುಗ್ರಹವಿದೆ. ಚೈತನ್ಯರೂಪಿಯಾದ ದತ್ತಾತ್ರೇಯನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಉತ್ತರ

ಕನ್ಯಾ: ಅವಸರ ಅಪಘಾತಕ್ಕೆ ಕಾರಣ

Weekly Horoscope

ಯಾವುದೇ ನಿಮ್ಮ ಕೆಲಸ ಕಾರ್ಯಗಳ ವಿಷಯದಲ್ಲಿ ಬಾಳ ಸಂಗಾತಿಯೊಡನೆ ಚರ್ಚೆ, ಮಾತುಕತೆ, ಸಲಹೆ, ಸೂಚನೆಗಳು ಯಶಸ್ಸಿಗೆ ದಾರಿ ನಿರ್ಮಾಣ ಮಾಡಿಕೊಡುತ್ತವೆ. ಎಂಜಿನಿಯರ್‌, ಡಾಕ್ಟರ್‌ ಹಾಗೂ ಷೇರ್‌ ಪತ್ರ ವಹಿವಾಟುದಾರರಿಗೆ ರವಿ ಬುಧರು ಬೆಂಬಲ ನೀಡುವ ವಿಚಾರದಲ್ಲಿ ಅವಕಾಶ ಜಾಸ್ತಿ. ಆದರೆ ಅವಸರವನ್ನು ಮಾಡದಿರಿ. ತೀರಾ ವಿಳಂಬದ ನಿರ್ಣಯಗಳೂ ಬೇಡ. ವಿವಾಹಾಪೇಕ್ಷಿಗಳಿಗೆ ಸೂಕ್ತ ಸಂಗಾತಿ ಒದಗಿ ಬರಲು ಅವಕಾಶವಿದೆ. ಶಿವನನ್ನು ಧ್ಯಾನಿಸಿ, ಸ್ತುತಿಸಿ, ಗೆಲ್ಲಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ

ತುಲಾ: ಅತಿಯಾದ ಆತ್ಮ ವಿಶ್ವಾಸ ಬೇಡ

Weekly Horoscope

ಆತ್ಮ ವಿಶ್ವಾಸ ಬೇಕೇ ಬೇಕು. ಆದರೆ ಅತಿಯಾದ ಆತ್ಮವಿಶ್ವಾಸವನ್ನು ಸದ್ಯ ಹೊಂದದಿರಿ. ನೀವು ಬುದ್ಧಿವಂತರೇ ಆದರೂ ಕೆಲವು ವಿಷಮ ಪರಿಸ್ಥಿತಿಯ ಒತ್ತಡದಿಂದಾಗಿ ಚಾಣಾಕ್ಷವಾದ ನಿರ್ಧಾರ ರೂಪಿಸಿಕೊಳ್ಳಲು ಅನುಕೂಲವಾಗದು. ರಾಜಕಾರಣಿಗಳು, ಟೆಕ್ಕಿಗಳು, ಆಯಾತ- ನಿರ್ಯಾತ ವಹಿವಾಟುದಾರರು ವಿಶ್ಸುತಾ ಸೂಕ್ತ ಭವಾನಿ ಹಾಗೂ ಶಕ್ತಿ ಮಾರುತಿಯ ಆರಾಧನೆ ಅಥವಾ ವಿಶೇಷ ಧ್ಯಾನ, ಜಪ, ತಪ ಮಂತ್ರಾದಿಗಳಿಂದ ಸ್ತುತಿಗಳ ಮೂಲಕವೇ ಯುಕ್ತ, ಪ್ರಬಲ ಯಶ ಸಂಪಾದಿಸಬೇಕು.
ಶುಭ ಸಂಖ್ಯೆ : 6 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ಮಹಾಲಕ್ಷ್ಮೀ ಆರಾಧನೆಯಿಂದ ಉತ್ತಮ ಫಲ

Weekly Horoscope

ವಿಶೇಷವಾದ ಶ್ರೀ ಮಹಾಲಕ್ಷ್ಮೀ ಆರಾಧನೆಯಿಂದ ಧನ, ಧಾನ್ಯ, ಸಮೃದ್ಧಿ, ಜನರ ಒಲವು, ಬೆಂಬಲ, ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಬೇಕಾದ ಸಿದ್ಧಿ ಸಂಪಾದಿಸಲು ಸಾಧ್ಯ. ಸಿನಿಮಾ ರಂಗವೇ ಆಗಿರಲಿ, ಹಲವು ರೀತಿಯ ಕೈಗಾರಿಕೆ ಅಥವಾ ಸಗಟು ವ್ಯಾಪಾರ, ವ್ಯವಹಾರ ಹೊಂದಿದ ಜನರಿಗೆ ದತ್ತಾತ್ರಯನ ಆರಾಧನೆಯಿಂದ ಸಿದ್ಧಿ ಇದೆ. ಹೊಸ ಕೆಲಸ ಅರಸುತ್ತಿರುವ ಮಂದಿ ದಾಸವಾಳದ ಹೂವು ಮತ್ತು ಸೇವಂತಿಗೆ ಹೂಗಳಿಂದ ಗಣಪತಿ, ಇಲ್ಲ ನರಸಿಂಹ ದೇವರನ್ನು ಸ್ತುತಿಸಿ. ಚಿನ್ನಾಭರಣ ವ್ಯಾಪಾರಿಗಳು ಮಾತ್ರ ಹುಷಾರಾಗಿರಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ

ಧನಸ್ಸು: ಉನ್ನತ ವ್ಯಾಸಂಗಕ್ಕೆ ಸೂಕ್ತ ಸಮಯ

Weekly Horoscope

ಸಮಾಧಾನದ ವಿಚಾರವಾಗಿ ಮಕ್ಕಳ ಪ್ರಗತಿ ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ನಿಮಗೂ ಹೆಚ್ಚಿನ ವ್ಯಾಸಂಗಕ್ಕೆ ಕಾಲ ಕೂಡಿ ಬರಲು ಈಗ ಸೂಕ್ತ ಅವಕಾಶಗಳು ಲಭ್ಯ. ಹಣದ ವಿಚಾರದಲ್ಲಿ ಕೆಲವು ಅದೃಷ್ಟಕಾರಕ ಬೆಳವಣಿಗೆಗಳನ್ನು ನೀವು ಕಾಣಬಲ್ಲಿರಿ. ಕೋರ್ಟ್‌ ವಿಚಾರವೇ ನಿಮ್ಮ ಸಮಾಧಾನವನ್ನು ಕೆಲ ಮಟ್ಟಿಗೆ ವ್ಯಾಕುಲತೆಯಲ್ಲಿ ಇಡಬಹುದು. ತುಸು ತಡವಾದರೂ ನ್ಯಾಯದಲ್ಲಿ ನಂಬಿಕೆ ಇಟ್ಟ ನೀವು ನಿರ್ಣಯಕವಾದ ಗುರಿ ತಲುಪಬಲ್ಲಿರಿ. ಶ್ರೀ ಗುರುರಾಯರ ಆರಾಧನೆ ನಡೆಸಿ ರಕ್ಷೆ ಇದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಪಶ್ಚಿಮ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ತಾಳಿದವನು ಬಾಳಿಯಾನು!

Weekly Horoscope

ಒತ್ತಡ, ಒತ್ತಡ, ಒತ್ತಡ ಎಂಬ ಸ್ಥಿತಿ ಇದೆ. ಹಣಕಾಸಿನ ವಿಚಾರವೇ ಒತ್ತಡವನ್ನು ನಿರ್ಮಿಸುತ್ತಿದೆ. ಇಲ್ಲಾ ಹಣ, ಸಂಬಳ, ಪ್ರಾಪ್ತಿ, ಲಾಭ ಇದ್ದರೂ ಒತ್ತಡದಿಂದಾಗಿ ಕೆಲಸ ಮಾಡುವ ಸ್ಥಳದಲ್ಲಿ, ಮನೆಯಲ್ಲಿ ತಾಳ್ಮೆ ತಪ್ಪಿ ಹೋಗುತ್ತಿದೆ. ಕಿರುಚುವಿಕೆ, ಕೈಯೊಳಗಿನ ವಸ್ತುಗಳನ್ನು ಕೋಪದಿಂದ ಎಸೆಯುವ ಪ್ರವೃತ್ತಿ ನಿಗ್ರಹಿಸಿಕೊಳ್ಳಿ. ಚಂದ್ರನ ವ್ಯತ್ಯಸ್ಥ ಸ್ಥಿತಿ, ಬಲಾಢ್ಯ ಶನೈಶ್ವರನನ್ನೂ ಗಡಗಡನೆ ನಡುಗುವ ಸ್ಥಿತಿಗೆ ತಳ್ಳುತ್ತದೆ, ನೆನಪಿಡಿ. ಶ್ರೀ ರಾಮ ರಕ್ಷಾ ಸ್ತೋತ್ರ ಓದಿ. ಸಮಾಧಾನ ಹೊಂದಿರಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ

ಕುಂಭ: ಆರ್ಥಿಕ ವಿಚಾರದಲ್ಲಿ ಪರದಾಟಗಳಿಲ್ಲ

Weekly Horoscope

ಮೆಚ್ಚುವಂತೆ ಮಾತನಾಡಬಲ್ಲಿರಿ. ಆರ್ಥಿಕ ವಿಚಾರದಗಳ ದಿಕ್ಕಲ್ಲೂ ಪರದಾಟವಾಗಲಾರದು. ನಿಮ್ಮ ಸಮಸ್ಯೆ ಮನಸ್ಸನ್ನು ಕಳವಳಕ್ಕೆ ದೂಡಿ, ಎಂತದೋ, ಯಾವುದೋ, ವಿಭಿನ್ನ ಸನ್ನಿವೇಶದಲ್ಲಿ ಧೈರ್ಯ ಕಳಕೊಳ್ಳುವ ಸ್ಥಿತಿ ಎದುರಾಗುವ ವರ್ತಮಾನವನ್ನು ನಿಯಂತ್ರಿಸಲು ವಿಫಲವಾಗುವುದು. ಹನುಮಾನ್‌ ಚಾಲೀಸ್‌ ಪಠಿಸಿ, ಪ್ರತಿಯೊಂದು ಹೊಸ ಯೋಜನೆ ರೂಪಿಸುವಾಗಲೂ ನಿಖರವಾದ ಕಾರ್ಯಕ್ರಮ ಪಟ್ಟಿ, ಸಂಭಾವ್ಯ ಖರ್ಚು ವೆಚ್ಚಗಳ ಬಗ್ಗೆ ತಿಳಿದಿರಿ. ಏನೊಂದೂ ತಯಾರಿ ಇರದೆ ಹೆಜ್ಜೆ ಇಡದಿರಿ. ಪಂಚಮುಖಿ ಹನುಮನನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ಮೀನ : ಹುಂಬುತನದ ಧೈರ್ಯ ಬೇಡ

Weekly Horoscope

ʻʻಧೈರ್ಯಂ ಸರ್ವತ್ರ ಸಾಧನಂʼʼ ಎಂಬುದು ಸತ್ಯವಾದರೂ ಹುಂಬುತನದ ಧೈರ್ಯ ಬೇಡ. ನೀವು ಬುದ್ಧಿವಂತರು ಎಂಬುದು ಸತ್ಯ. ಆದರೆ ಏಕಾಏಕಿ ನಿಯಂತ್ರಣ ತಪ್ಪಿ ವಸ್ತುಸ್ಥಿತಿ ನಿಮ್ಮದಾದ ವಿಶ್ವಾಸವನ್ನು ಬುಡ ಸಹಿತ ಅಲ್ಲಾಡಿಸಲು ಸಾಧ್ಯ. ಗೊತ್ತು ಗುರಿ ಇರದೆ ಯಾರನ್ನೋ ನಂಬಿ ಮುಂದಾಗುವ ಎಡಬಿಡಂಗಿತನ ಬೇಡ. ಸಿನಿಮಾ ರಂಗದ ಚಿನ್ನ, ಬೆಳ್ಳಿ, ರತ್ನ, ಮುತ್ತು ವ್ಯಾಪಾರಿಗಳು ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಕೊಂಡವರು ತಾಳ್ಮೆಯ, ಜಾಣ್ಮೆಯ ಹೆಜ್ಜೆ ಇಡಿ. ಶ್ರೀ ಲಲಿತಾ ಸ್ತುತಿ ಕ್ಷೇಮ.
ಶುಭ ಸಂಖ್ಯೆ :1 ಶುಭ ದಿಕ್ಕು: ಪೂರ್ವ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MS Dhoni : ಮೊಣಕಾಲು ನೋವಿನಿಂದ ರೈನಾ ಕೈಹಿಡಿದು ಮೆಟ್ಟಿಲು ಇಳಿದ ಧೋನಿ…

MS Dhoni: ಧೋನಿ ಕಳೆದ ವರ್ಷ ಮೊಣಕಾಲಿನಿಂದ ಬಳಲುತ್ತಿದ್ದರು. ಕುಂಟುತ್ತಾ ಆಡಿದ್ದರು. ಆ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಸಮಸ್ಯೆ ಇನ್ನೂ ಮುಂದುವರೆದಿದೆ. ಸಿಎಸ್​ಕೆ ಮಾಜಿ ನಾಯಕ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ಋತುವಿನಲ್ಲಿ ಕುಂಟುತ್ತಾ ನಡೆಯುತ್ತಿದ್ದಾರೆ. ಅಂತೆಯೇ ತಮ್ಮ ಕಾಮೆಂಟ್ ಕರ್ತವ್ಯಗಳನ್ನು ಮುಗಿಸಿದ ರೈನಾ ಜತೆ ನಡೆಯುತ್ತಾ ಹೋಗಿದ್ದರು. ಈ ವೇಳೆ ಮೆಟ್ಟಿಲುಗಳಿಂದ ಇಳಿಯುವಾಗ ಧೋನಿ ಕೈ ಹಿಡಿದು ನೆರವು ನೀಡಿದ ಪ್ರಸಂಗ ನಡೆಯಿತು.

VISTARANEWS.COM


on

MS Dhoni
Koo

ಬೆಂಗಳೂರು: ಸುರೇಶ್ ರೈನಾ ಐಪಿಎಲ್​ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಅವರು ಚೆನ್ನೈ ಸೂಪರ್​ ಕಿಂಗ್ಸ್​ ಜತೆಗಿನ ಸಂಬಂಧ ಕಡಿದುಕೊಂಡಿಲ್ಲ. ಧೋನಿ (MS Dhoni) ಹಾಗೂ ಅವರ ಬಳಗದ ಜತೆಯೇ ಸುತ್ತಾಡುತ್ತಿದ್ದಾರೆ. ರೈನಾ ಕ್ರಿಕೆಟ್​ ವೀಕ್ಷಕ ವಿವರಣೆಗಾರರಾಗಿದ್ದರೂ ಮಾಜಿ ನಾಯಕನ ನೆರವಿಗೆ ಸದಾ ನಿಲ್ಲುತ್ತದೆ. ಅಂತೆಯೇ ಅವರು ಐಪಿಎಲ್​ ನಲ್ಲಿ (IPL 2024) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಧೋನಿಗೆ ನೆರವು ನೀಡಿದ ಪ್ರಸಂಗ ನಡೆಯಿತು.

ಧೋನಿ ಕಳೆದ ವರ್ಷ ಮೊಣಕಾಲಿನಿಂದ ಬಳಲುತ್ತಿದ್ದರು. ಕುಂಟುತ್ತಾ ಆಡಿದ್ದರು. ಆ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಸಮಸ್ಯೆ ಇನ್ನೂ ಮುಂದುವರೆದಿದೆ. ಸಿಎಸ್​ಕೆ ಮಾಜಿ ನಾಯಕ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ಋತುವಿನಲ್ಲಿ ಕುಂಟುತ್ತಾ ನಡೆಯುತ್ತಿದ್ದಾರೆ. ಅಂತೆಯೇ ತಮ್ಮ ಕಾಮೆಂಟ್ ಕರ್ತವ್ಯಗಳನ್ನು ಮುಗಿಸಿದ ರೈನಾ ಜತೆ ನಡೆಯುತ್ತಾ ಹೋಗಿದ್ದರು. ಈ ವೇಳೆ ಮೆಟ್ಟಿಲುಗಳಿಂದ ಇಳಿಯುವಾಗ ಧೋನಿ ಕೈ ಹಿಡಿದು ನೆರವು ನೀಡಿದ ಪ್ರಸಂಗ ನಡೆಯಿತು. ಮೊಣಕಾಲು ನೋವಿನಿಂದ ಮೆಟ್ಟಿಲು ಇಳಿಯಲು ಅವರು ಕಷ್ಟ ಪಡುತ್ತಿದ್ದದ್ದು ಈ ವೇಳೆ ಬೆಳಕಿಗೆ ಬಂತು.

ನೋವಿನಲ್ಲೂ ಸಿಕ್ಸರ್ ಬಾರಿಸುತ್ತಿದ್ದಾರೆ ಧೋನಿ; ದಿಗ್ಗಜನ ಬದ್ಧತೆಗೆ ಸಿಎಸ್​​ಕೆ ಕೋಚ್ ಮೆಚ್ಚುಗೆ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಮೊಣಕಾಲು ಗಾಯದಿಂದ ಬಳಲುತ್ತಿದ್ದರೂ ಕ್ರಿಕೆಟ್​ ಕುರಿತ ಅಚಲ ಬದ್ಧತೆಗಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಎಸ್​ಕೆ ಬೌಲಿಂಗ್ ಸಲಹೆಗಾರ ಎರಿಕ್ ಸಿಮನ್ಸ್ ಧೋನಿಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದು, ಅವರ ದೃಢನಿಶ್ಚಯದ ಬಲವನ್ನು ಬಹಿರಂಗಪಡಿಸಿದ್ದಾರೆ. ಮೊಣಕಾಲು ಗಾಯಕ್ಕೆ ಸಂಬಂಧಿಸಿದ ನೋವು ಮತ್ತು ಸಂಭಾವ್ಯ ಅಪಾಯಗಳ ಹೊರತಾಗಿಯೂ, ಧೋನಿ ಅದನ್ನು ಅವರ ಪ್ರದರ್ಶನ ಅಥವಾ ಉತ್ಸಾಹವನ್ನು ಕಡಿಮೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

ಮುಂಬೈ ಇಂಡಿಯನ್ಸ್ ವಿರುದ್ಧದ ಗಮನಾರ್ಹ ಪಂದ್ಯದಲ್ಲಿ ಧೋನಿ ಇನಿಂಗ್ಸ್​ನ ಕೊನೆಯ ನಾಲ್ಕು ಎಸೆತಗಳಲ್ಲಿ ಪರಾಕ್ರಮ ತೋರಿದ್ದರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್​ನಲ್ಲಿ 26 ರನ್ ಗಳಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. ಮಿಂಚಿನ ದಾಳಿಯು ಸಿಎಸ್​ಕೆ ತಂಡಕ್ಕೆ 20 ರನ್​ಗಳ ಗೆಲುವಿಗೆ ಕಾರಣವಾಯಿತು. ಅಲ್ಲದೆ ತಂಡವನ್ನು ಇದು ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನಕ್ಕೆ ಏರಿತು.

“ಮುಂಬೈ ತಂಡ ನಮ್ಮನ್ನು 200 ಕ್ಕಿಂತ ಕಡಿಮೆ ರನ್​ಗೆ ಸೀಮಿತಗೊಳಿಸಲು ನೋಡುತ್ತಿದ್ದರು. ಆದರೆ, ಧೋನಿ ಚಿತ್ರಣ ಬದಲಿಸಿದರು. ಪ್ರತಿ ಬಾರಿಯೂ ನಾವು ಧೋನಿಯ ಹತ್ತಿರವಿರುತ್ತೇವೆ. ಅವರು ನಮ್ಮನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ. ಕೊನೆಯಲ್ಲಿ ಬ್ಯಾಟಿಂಗ್​ಗೆ ಇಳಿದು ಚೆಂಡನ್ನು ಸಿಕ್ಸರ್​ಗೆ ಅಟ್ಟುವುದು ಹಾಗೂ ಅದನ್ನೇ ಮುಂದುವರಿಸಿದ್ದಾರೆ. ಅವರು ನೆಟ್ಸ್​ನಲ್ಲಿ ಅಸಾಧಾರಣವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. , “ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹೇಳಿದ್ದಾರೆ.

ಧೋನಿ ಮೊಣಕಾಲು ಸಮಸ್ಯೆಯೊಂದಿಗೆ ಆಡುತ್ತಿದ್ದಾರೆ ಎಂದು ಸಿಮನ್ಸ್ ಒಪ್ಪಿಕೊಂಡರು/ ಆದರೆ ಅವರು ಅದನ್ನು ಯಾವುದೇ ನೋವನ್ನು ಪ್ರದರ್ಶಿಸದೆ ಎದುರಿಸಿದ್ದಾರೆ. “ಪ್ರತಿಯೊಬ್ಬರೂ ಅವನಿಗಿಂತ ಅವರ ಗಾಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಧೋನಿ ಹಾಗಲ್ಲ. ನಾನು ಕಂಡ ಅತ್ಯಂತ ಕಠಿಣ ವ್ಯಕ್ತಿಗಳಲ್ಲಿ ಅವರು ಒಬ್ಬರು. ಅವನು ಎಷ್ಟರ ಮಟ್ಟಿಗೆ ನೋವಿನಲ್ಲಿರಬಹುದು ಎಂಬುದು ನಮಗೆ ತಿಳಿದಿದೆ. ಆದರೂ ಅವರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ “ಎಂದು ಸಿಮನ್ಸ್​ ಹೇಳಿದರು.

Continue Reading

ಕರ್ನಾಟಕ

UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ

UPSC Results 2023: ಯುಪಿಎಸ್‌ಸಿ ಪರೀಕ್ಷೆಯಲ್ಲಿ 100ನೇ ರ‍್ಯಾಂಕ್‌ ಪಡೆಯುವ ಮೂಲಕ ವಿಜಯಪುರದ ಮೂಲದ ವಿಜೇತಾ ಬಿ. ಹೊಸಮನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

VISTARANEWS.COM


on

UPSC Results 2023
Koo

ಬೆಂಗಳೂರು: ಕನಸು ಕಾಣುವುದು ಮನುಷ್ಯನ ಸಹಜವಾದ ಗುಣ, ಆದರೆ ಆ ಕನಸನ್ನು ನನಸಾಗಿಸಿಕೊಳ್ಳೋದು ಬೆರಳೆಣಿಕೆಯಷ್ಟು ಮಂದಿ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ (UPSC Results 2023) ಮಂಗಳವಾರ ಪ್ರಕಟವಾಗಿದೆ. ಒಟ್ಟು 1016 ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದು, ರಾಜ್ಯದ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಸಾಧನೆಗೈದಿದ್ದಾರೆ. ಈ ಪೈಕಿ 100ನೇ ರ‍್ಯಾಂಕ್‌ ಪಡೆಯುವ ಮೂಲಕ ವಿಜಯಪುರದ ಮೂಲದ ವಿಜೇತಾ ಬಿ. ಹೊಸಮನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜಯಪುರ ಮೂಲದ ವಿಜೇತಾ ಭೀಮಸೇನ ಹೊಸಮನಿ ಅವರ ಕುಟುಂಬ ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದೆ. ವಿಜೇತಾ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ವಿಜೇತಾ ವಿದ್ಯಾಭ್ಯಾಸ ಮಾಡಿದ್ದು, 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದರು.

ಪ್ರಥಮ ಪಿಯುಸಿ ವಿಜಯಪುರ ನಗರದ ತುಂಗಳ ಕಾಲೇಜು, ದ್ವಿತೀಯ ಪಿಯುಸಿ ದರಬಾರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಕ್ಲಾಟ್ ಪರೀಕ್ಷೆ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ
ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದು, ಕ್ರಿಮಿನಲ್ ಲಾ ದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.

2020 ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದು, ಆನ್ ಲೈನ್ ತರಬೇತಿ ಹಾಗೂ ಮನೆಯಲ್ಲೇ ಹೆಚ್ಚಿನ ಅಭ್ಯಾಸ ಮಾಡಿ ಇವರು ಸಾಧನೆ ಮಾಡಿದ್ದಾರೆ. ಇಂಡಿಯನ್ ರೆವೆನ್ಯೂ ಸರ್ವೀಸ್‌ನಲ್ಲಿ ಸ್ಥಾನ ಸಿಗೋ ಸಾಧ್ಯತೆ ಇದೆ. ಹುಬ್ಬಳ್ಳಿಯ ಸಿಲ್ವರ್ ಟೌನ್‌ನ ನಿವಾಸದಲ್ಲಿ ವಿಜೇತಾಗೆ ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ | UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

ದಾವಣಗೆರೆಯ ಸೌಭಾಗ್ಯ ರಾಜ್ಯಕ್ಕೆ 2ನೇ ಸ್ಥಾನ

ದಾವಣಗೆರೆ: ಯುಪಿಎಸ್‌ಸಿ ಫಲಿತಾಂಶದಲ್ಲಿ ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ್ ಅವರು 101ನೇ ರ‍್ಯಾಂಕ್‌ ಪಡೆಯುವ ಮೂಲಕ ಕರ್ನಾಟಕದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ದಾವಣಗೆರೆ ಆಂಜನೇಯ ಬಡಾವಣೆಯ ನಿವಾಸಿ ಸೌಭಾಗ್ಯ (22) ಧಾರವಾಡದಲ್ಲಿ ಕೋಚಿಂಗ್ ಪಡೆದಿದ್ದರು.

ಶರಣಮ್ಮ ಹಾಗೂ ಶರಣಯ್ಯ ಸ್ವಾಮಿ ದಂಪತಿಯ ಪುತ್ರಿ ಸೌಭಾಗ್ಯ ಎಸ್. ಬೀಳಗಿಮಠ್, ಸದ್ಯ ಧಾರವಾಡದಲ್ಲಿ ನೆಲೆಸಿದ್ದಾರ. ಇವರ ತಂದೆ ರೈತರಾಗಿದ್ದು, ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನವರು. ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆದಿದ್ದಾರೆ.

ಕೋಲಾರದ ಯುವಕನಿಗೆ 939ನೇ ರ‍್ಯಾಂಕ್‌

ಕೋಲಾರ: ಯುಪಿಎಸ್ಸಿ ಫಲಿತಾಂಶದಲ್ಲಿ ಕೋಲಾರದ ಯುವಕನಿಗೆ 939ನೇ ರ‍್ಯಾಂಕ್‌ ಬಂದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೋಪಾಲಪುರ ಗ್ರಾಮದ ಶಿಕ್ಷಕ ದಂಪತಿ ಪುತ್ರ ಗೌತಮ್ 939ನೇ ರ‍್ಯಾಂಕ್‌ ಪಡೆದಿದ್ದಾರೆ. ಈ ರ‍್ಯಾಂಕ್‌ನಲ್ಲಿ ಐಎಎಸ್‌ ಹುದ್ದೆ ಸಿಗುವುದು ಕಷ್ಟ, ಮತ್ತೊಂದು ಬಾರಿ ಪರೀಕ್ಷೆ ಬರೆಯುವುದಾಗಿ ಗೌತಮ್‌ ತಿಳಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ಯುಪಿಎಸ್ಸಿಗೆ ಯುವಕ ತಯಾರಿ ನಡೆಸಿದ್ದು, ಪೋಷಕರಿಗೆ ಧನ್ಯವಾದ ತಿಳಿಸಿದ್ದಾರೆ. ತಾಲೂಕಿನ ಶಿಕ್ಷಕರು ಯುವಕನನ್ನು ಸನ್ಮಾನಿಸಿ, ಸಿಹಿ ತಿನಿಸಿದ್ದಾರೆ.

ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪುರ ಯುವಕನ ಸಾಧನೆ

ವಿಜಯಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪುರದ ಸಂತೋಷ ಶ್ರೀಕಾಂತ ಶಿರಾಡೋಣ 641ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾಭ್ಯಾಸ ನಡೆಸಿದ್ದು, 6 ರಿಂದ 8 ತರಗತಿ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆ, 8 ರಿಂದ 10ನೇ ತರಗತಿ ವಿಜಯಪುರ ತಾಲೂಕಿನ‌ ಕಗ್ಗೋಡದ ಸಂಗನಬಸವ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ಪಿಯುಸಿ ಹೈದರಾಬಾದಿನ ವಿಚೇತನಾ ಕಾಲೇಜು, ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ‌ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ. 2019 ನಿಂದ ಯುಪಿಎಸ್ಸಿ ಪ್ರಯತ್ನ ನಡೆಸುತ್ತಿದ್ದು, 2023ರಲ್ಲಿ ಉತ್ತೀರ್ಣರಾಗಿದ್ದಾರೆ. ದೆಹಲಿಯ ವಾದಿರಾಮ್ ಕೋಚಿಂಗ್ ಸೆಂಟರ್‌ನಲ್ಲಿ ಸಂತೋಷ್ ತರಬೇತಿ ಪಡೆದಿದ್ದರು. ಸಂತೋಷ್‌ ಸಾಧನೆಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ 20ಕ್ಕೂ ಹೆಚ್ಚು ಕನ್ನಡಿಗರು ತೇರ್ಗಡೆ

ಈ ಬಾರಿ ಒಟ್ಟು 1,016 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದು, ಲಖನೌನ ಆದಿತ್ಯ ಶ್ರೀವಾಸ್ತವ ದೇಶಕ್ಕೆ ಅಗ್ರಸ್ಥಾನ ಪಡೆದಿದ್ದು, ಒಡಿಶಾದ ಅನಿಮೇಶ್ ಪ್ರಧಾನ್ ಎರಡನೇ ಸ್ಥಾನ ಪಡೆದಿದ್ದು, ತೆಲಂಗಾಣದ ಅನನ್ಯಾ ರೆಡ್ಡಿ ಮೂರನೇ ಸ್ಥಾನ ಪಡೆದಿದ್ದಾರೆ.

UPSC Results 2023
ಶಾಂತಪ್ಪ ಕುರುಬರ್

ಅದೇ ರೀತಿ ಯುಪಿಎಸ್ಸಿಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಕನ್ನಡಿಗರು ತೇರ್ಗಡೆಯಾಗುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಇದರಲ್ಲಿ ಆಚಾರ್ಯ ಐ.ಎ.ಎಸ್. ಅಕಾಡೆಮಿಯಿಂದ 3 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸತತ ಎರಡು ವರ್ಷಗಳಿಂದ ಐಎಎಸ್ ತರಬೇತಿಯಲ್ಲಿ ವಿಶೇಷ ಸ್ಥಾನ ಪಡೆದು, ಅನೇಕ ಬಡ ವಿದ್ಯಾರ್ಥಿಗಳ ಐಎಎಸ್ ಸಾಧನೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ | UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

ಇನ್ನು ಈ ಸಾಧನೆಗೆ ಸತತ ಪ್ರಯತ್ನ, ಶ್ರದ್ಧೆ ಹಾಗೂ ಆತ್ಮ ವಿಶ್ವಾಸವೆ ಕಾರಣ ಎನ್ನುತ್ತಿದ್ದಾರೆ ವಿಜೇತರು. ಜೊತೆಗೆ ಬಳ್ಳಾರಿಯ ಶಾಂತಪ್ಪ ಕುರುಬರ್ 644 ರ್ಯಾಂಕ್ ಪಡೆದಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿ ವಿಜೇತರಾಗಿದ್ದಾರೆ. ಸತತವಾಗಿ ಕಷ್ಟವನ್ನೇ ನೋಡಿಕೊಂಡು ಬಂದ ಇವರು ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಅಗಿದ್ದರು. ತಾಯಿ ಕೂಲಿ ಕೆಲಸ ಮಾಡಿ ಇವರನ್ನು ಸಾಕಿದ್ದಾರೆ. ಇವರು PSI ಹುದ್ದೆಯಲ್ಲಿದ್ದು, ಕೆಲ್ಸದ ಜೊತೆಗೆ ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ಜೊತೆಗೆ ಕನ್ನಡದಲ್ಲೇ ಪರೀಕ್ಷೆ ಬರೆದು ಪಾಸಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಇನ್ನು ಇದೆ ಅಕಾಡೆಮಿಯಲ್ಲಿ ಓದಿದ್ದ ಬಾನು ಪ್ರಕಾಶ್ 600 ರ್ಯಾಂಕ್ ಪಡೆದಿದ್ದರೆ. ಮೂಲತಃ ಮೈಸೂರಿನವರಾದ ಇವರು ಕೊನೆ ಬಾರಿ ಕೂಡ ಐಪಿಎಸ್ ಪರೀಕ್ಷೆಯಲ್ಲಿ ಪಾಸ್ ಅಗಿದ್ದರು.

Continue Reading

Lok Sabha Election 2024

Modi in Karnataka: ಏಪ್ರಿಲ್‌ 20ರಂದು ರಾಜ್ಯಕ್ಕೆ ಮೋದಿ; ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಬೃಹತ್‌ ಸಮಾವೇಶ

Modi in Karnataka: ಏಪ್ರಿಲ್‌ 20ರಂದು ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.

VISTARANEWS.COM


on

Modi in Karnataka on April 20 Massive rallies in Chikkaballapura and Bengaluru
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿಯೇ ಇದೆ. ಚುನಾವಣೆ ಘೋಷಣೆಯಾಗಿ ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಏಪ್ರಿಲ್ 20ರಂದು ಮೋದಿ ರಾಜ್ಯಕ್ಕೆ )Modi in Karnataka) ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಮೋಡಿ ಮಾಡಲಿದ್ದಾರೆ.

ಮೈಸೂರಿನ ಬೃಹತ್‌ ಸಮಾವೇಶ ಹಾಗೂ ಮಂಗಳೂರಿನ ರೋಡ್‌ ಶೋ ಯಶಸ್ಸಿನ ನಂತರ ಪುನಃ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ!

ಏಪ್ರಿಲ್‌ 20ರಂದು ಮೊದಲಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಪಕ್ಕದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಪರವೂ ಮತಯಾಚನೆ ಮಾಡಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಬೃಹತ್‌ ರ‍್ಯಾಲಿ

ಶನಿವಾರ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಪ್ರಚಾರ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೊಳಗೊಂಡಂತೆ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೆ ಸಿಗುವುದೇ ಮೋದಿ ಬೂಸ್ಟ್‌!

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಡಾ. ಸಿ.ಎನ್.‌ ಮಂಜುನಾಥ್‌ ಅವರನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಡಿಎ ಅಭ್ಯರ್ಥಿಗಳ ನಡುವೆ ಟಫ್‌ ಫೈಟ್‌ ಏರ್ಪಟ್ಟಿದೆ. ಕಾರಣ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮತಗಳು ಕ್ರೋಡೀಕರಣಗೊಂಡರೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಅವರ ಗೆಲುವಿನ ಹಾದಿ ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಬ್ರದರ್ಸ್‌ ರಾತ್ರಿ – ಹಗಲು ಎನ್ನುವಂತೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಕ್ಷೇತ್ರದ ಗೆಲುವಿಗೆ ನಾನಾ ಕಸರತ್ತುಗಳನ್ನು, ರಣತಂತ್ರಗಳನ್ನು ಹೆಣೆಯುತ್ತಾ ಬರುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಸಹ ಬರಲಿದ್ದು, ಅವರು ಪಕ್ಷದ ಅಭ್ಯರ್ಥಿಯಾದ ಡಾ. ಸಿ.ಎನ್.‌ ಮಂಜುನಾಥ್‌ ಪರ ಏನು ಹೇಳಲಿದ್ದಾರೆ? ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ವಿರುದ್ಧ ಯಾವ ಬಾಂಬ್‌ ಎಸೆಯಲಿದ್ದಾರೆ? ಇದು ಮತದಾರರ ಮೇಲೆ ಬೀರುವ ಪರಿಣಾಮ ಏನು ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

ಮೈಸೂರು ಸಮಾವೇಶದಲ್ಲಿ ಗುಡುಗಿದ್ದ ಮೋದಿ!

ಮೈಸೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ, ಹಿಂದುತ್ವದ ವಿರುದ್ಧ ಆ ಪಕ್ಷ ಹಾಗೂ ಮಿತ್ರ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ದೂರಿದ್ದರು. ಇನ್ನು ದೇಶದ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಇಲ್ಲಿನ ಕಾಂಗ್ರೆಸ್‌ ಸರ್ಕಾರವು ಎಟಿಎಂ ಆಗಿದ್ದು, ನೂರಾರು ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್‌ 20 ರಂದು ನಡೆಯಲಿರುವ ಎರಡು ಸಮಾವೇಶಗಳಲ್ಲಿ ಮೋದಿ ಏನು ಮಾತನಾಡಲಿದ್ದಾರೆ? ಯಾವೆಲ್ಲ ಹೊಸ ವಿಷಯಗಳನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ಪ್ರಮುಖ ಸುದ್ದಿ

IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

IPL 2024: ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ನೀವು ಅವರನ್ನು ಹೇಗೆ ಪ್ರೇರೇಪಿಸುವಿರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. . ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು,” ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತೊಂದು ನಿರಾಶಾದಾಯಕ ಸೋಲಿಗೆ ಒಳಗಾಗಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿಯಲ್ಲಿ ಆಘಾತಕಾರಿ ಫಲಿತಾಂಶ ಎದುರಿಸಿದೆ. ಪ್ರತಿ ಋತುವಿನಲ್ಲಿ, ಫ್ರಾಂಚೈಸಿ ತಮ್ಮ ಅಭಿಮಾನಿಗಳ ಹೃದಯದಲ್ಲಿ ಭರವಸೆಗಳನ್ನು ಮೂಡಿಸುತ್ತದೆ/ ನಂತರ ಕಳಪೆ ಪ್ರದರ್ಶನದಿಂದ ಅವರಿಗೆ ಬೇಸರ ಮೂಡಿಸುತ್ತದೆ. 2024 ರ ಅಭಿಯಾನವು ಅದಕ್ಕಿಂತ ಭಿನ್ನವಾಗಿಲ್ಲ. ಆರ್​ಸಿಬಿ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿ 10 ತಂಡಗಳ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂಡಿತರು ಆರ್​​ಸಿಬಿಯ ಸೋಲಿಗೆ ಕಾರಣಗಳನ್ನು ಹುಡುಕುತ್ತಲೇ ಇದ್ದಾರೆ. ಅಂತೆಯೇ ಮಾಜಿ ಸ್ಫೋಟಕ ಬ್ಯಾಟರ್​​ ವಿರೇಂದ್ರ ಸೆಹ್ವಾಗ್ ಈ ತಮ್ಮದೇ ಅಭಿಪ್ರಾಯಗಳನ್ನು ನೀಡಿದ್ದಾರೆ. ಅವರ ಪ್ರಕಾರ ಆರ್​ಸಿಬಿಯ ದೊಡ್ಡ ಸಮಸ್ಯೆಯೆಂದರೆ ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆ.

ನಿಮ್ಮ ಬಳಿ 12ರಿಂದ 15 ಭಾರತೀಯ ಆಟಗಾರರು ಇದ್ದಾರೆ. ಕೇವಲ 10 ವಿದೇಶಿ ಆಟಗಾರರನ್ನು ಹೊಂದಿದ್ದೀರಿ. ನಿಮ್ಮ ಇಡೀ ಸಹಾಯಕ ಸಿಬ್ಬಂದಿ ವರ್ಗ ವಿದೇಶಿಯರಾಗಿದ್ದರೆ. ಅದುವೇ ಸಮಸ್ಯೆಯಾಗಿದೆ. ಅವರಲ್ಲಿ ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ನೀವು ಅವರನ್ನು ಹೇಗೆ ಪ್ರೇರೇಪಿಸುವಿರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. . ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು,” ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

ಆಟಗಾರರಿಗೆ ಆರಾಮದಾಯಕ ಪರಿಸ್ಥಿತಿ ಸಿಗಬೇಕು. ನಾಯಕ ಫಾಫ್ ಡು ಪ್ಲೆಸಿಸ್ ಅವರ ಮುಂದೆ ನಿಲ್ಲುವುದೇ ಇಲ್ಲ. ಯಾಕೆಂದರೆ ಅವರಿಗೆ ಭಾಷೆ ಬರುವುದಿಲ್ಲ. ಅವರು ಏನನ್ನಾದರೂ ಕೇಳಿದರೆ, ಅವರು ಉತ್ತರಿಸಬೇಕಾಗುತ್ತದೆ. ನಾಯಕ ಭಾರತೀಯನಾಗಿದ್ದರೆ, ಆಟಗಾರನ ಮನಸ್ಸಿನಲ್ಲಿ ಏನಾಗುತ್ತಿದೆ ಹಂಚಿಕೊಳ್ಳಬಹುದು. ವಿದೇಶಿ ಆಟಗಾರರಿಗೆ ಇದೇ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡಬೇಕಾಗಿತ್ತು. ಹೀಗಾಗಿ ಆರ್​ಸಿಬಿಗೆ ಕನಿಷ್ಠ 2-3 ಭಾರತೀಯ ಸಹಾಯಕ ಸಿಬ್ಬಂದಿಯ ಅಗತ್ಯವಿದೆ ಎಂದು ಸೆಹ್ವಾಗ್ ವಿಶ್ಲೇಷಣೆ ಮಾಡಿದ್ದಾರೆ.

ಆಯ್ಕೆಯೇ ಸರಿಲ್ಲಿ

ಭಾರತ ಮತ್ತು ಕೋಲ್ಕತಾ ನೈಟ್ ರೈಡರ್ಸ್​ ತಂಡ ಮಾಜಿ ಬ್ಯಾಟರ್​ ಮನೋಜ್ ತಿವಾರಿ, ಆರ್​ಸಿಬಿಯ ಸಮಸ್ಯೆಗಳು ಭೀಕರವಾಗಿದೆ ಎಂದಿದ್ದಾರೆ. ಹರಾಜು ಟೇಬಲ್​ನಲ್ಲಿಯೇ ಕಳಪೆ ನೇಮಕ ನಡೆಯುತ್ತಿದೆ. ಅದುವೇ ಅವರ ತೊಂದರೆಗಳ ಹಿಂದಿನ ದೊಡ್ಡ ಕಾರಣ ಎಂದ ಹೇಳಿದ್ದಾರೆ.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ; ಏನಿದು ಕೇಸ್​?

“ಸಮಸ್ಯೆ ಎಲ್ಲಿದೆ ಎಂದು ನನಗೆ ತಿಳಿದಿದೆ. ಹರಾಜು ಟೇಬಲ್ ನಿಂದ ನಿರ್ವಹಣೆಯವರೆಗೆ ಎಲ್ಲ ಕಡೆಯೂ ಇದೆ. ಈ ಫ್ರಾಂಚೈಸಿಯ ಎಲ್ಲಾ ಉತ್ತಮ ಆಟಗಾರರು ಇತರ ತಂಡಗಳಿಗಾಗಿ ಹೋಗಿ ಅತ್ಯುತ್ತಮವಾಗಿ ಆಡುತ್ತಾರೆ. ಆ ತಂಡದಲ್ಲಿ ಪ್ರಮುಖ ವಿಕೆಟ್ ಟೇಕಿಂಗ್​ ಬೌಲರ್ (ಯಜುವೇಂದ್ರ ಚಾಹಲ್) ಅವರನ್ನು ಕೈಬಿಡಲಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಮುಂದುವರಿಸುವುದಿಲ್ಲ. ಅವರು ಅವರನ್ನು 2016ರರ ಫೈನಲ್ ಗೆ ಮುನ್ನಡೆಸಿದವರು. 40 ಕೋಟಿ ರೂ.ಗಿಂತ ಹೆಚ್ಚಿನ ಒಟ್ಟು ಹಣ ಪಡೆದಿರುವ ಫ್ರಾಂಚೈಸಿಯ 4 ದುಬಾರಿ ಆಟಗಾರರು ಬೆಂಚ್ ಕಾಯುತ್ತಿದ್ದಾಋಎ. ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್. ಸಿರಾಜ್​​ಗೆ ವಿಶ್ರಾಂತಿ ನೀಡಲಾಗಿದೆ. ತುಂಬಾ ಹಣವನ್ನು ಖರ್ಚು ಮಾಡಿ ಅವರನ್ನು ಹೊರಗೆ ಕೂರಿಸಲಾಗುತ್ತದೆ. ಇವೆಲ್ಲವೂ ಸಮಸ್ಯೆಯೇ ಎಂದು “ಎಂದು ತಿವಾರಿ ಹೇಳಿದ್ದಾರೆ.

ಬ್ಯಾಟಿಂಗ್ ಅಲ್ಲಿ ಸಮಸ್ಯೆಯಲ್ಲ. ಆ ತಂಡದ ಸಮಸ್ಯೆ ಯಾವಾಗಲೂ ಬೌಲಿಂಗ್ ಆಗಿತ್ತು. ಅವರಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲ. ನೀವು ವಿಲ್ ಜಾಕ್ಸ್ ಅವರಿಗೆ ಮೊದಲ ಓವರ್​ ಕೊಡಲಾಗುತ್ತದೆ. ಕೆಲವೊಮ್ಮೆ ಮಹಿಪಾಲ್ ಲೊಮ್ರೊಗೂ ಬೌಲಿಂಗ್​. ಮೈದಾನದಲ್ಲಿನ ಕೆಲವು ನಾಯಕತ್ವದ ನಿರ್ಧಾರಗಳು ಭಯಾನಕವಾಗಿವೆ. ಪ್ರತಿಯೊಂದು ಮೂಲೆಯಿಂದಲೂ ತಪ್ಪಾಗಿದೆ. ಅವರು ಸಂಪೂರ್ಣವಾಗಿ ಮರುಸಂಘಟನೆಗೊಳ್ಳಬೇಕು ಮತ್ತು ದೀರ್ಘಕಾಲೀನ ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು.

ಬೆಂಗಳೂರು ತಂಡಕ್ಕೆ ಇದು ಇನ್ನೂ ಮುಗಿದ ಅಧ್ಯಾಯವಲ್ಲ. ಫಾಫ್ ಡು ಪ್ಲೆಸಿಸ್ ಪಡೆ ಪ್ಲೇಆಫ್ಗೆ ಪ್ರವೇಶಿಸಲು ದೈತ್ಯ ಪ್ರಯತ್ನದ ಅಗತ್ಯವಿದೆ.

Continue Reading
Advertisement
Drinking water problem Provide water immediately by tanker says DC
ಉತ್ತರ ಕನ್ನಡ1 min ago

Uttara Kannada News: ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಉತ್ತರ ಕನ್ನಡ ಡಿಸಿ ಸೂಚನೆ

MS Dhoni
ಪ್ರಮುಖ ಸುದ್ದಿ2 mins ago

MS Dhoni : ಮೊಣಕಾಲು ನೋವಿನಿಂದ ರೈನಾ ಕೈಹಿಡಿದು ಮೆಟ್ಟಿಲು ಇಳಿದ ಧೋನಿ…

UPSC Results 2023
ಕರ್ನಾಟಕ8 mins ago

UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ

Modi in Karnataka on April 20 Massive rallies in Chikkaballapura and Bengaluru
Lok Sabha Election 202415 mins ago

Modi in Karnataka: ಏಪ್ರಿಲ್‌ 20ರಂದು ರಾಜ್ಯಕ್ಕೆ ಮೋದಿ; ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಬೃಹತ್‌ ಸಮಾವೇಶ

IPL 2024
ಪ್ರಮುಖ ಸುದ್ದಿ41 mins ago

IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

Money Guide
ಮನಿ-ಗೈಡ್42 mins ago

Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Lok Sabha Election 2024 Sanganna Karadi resigns from primary membership of BJP
Lok Sabha Election 202448 mins ago

Lok Sabha Election 2024: ಸಂಸತ್‌ ಸ್ಥಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಗಣ್ಣ ಕರಡಿ ರಾಜೀನಾಮೆ; ನಾಳೆ ಕಾಂಗ್ರೆಸ್‌ ಸೇರ್ಪಡೆ?

BJP and JDS leaders Meeting in shira, Support Govinda Karajola for all round development of Chitradurga says Umesh Karajola
ತುಮಕೂರು48 mins ago

Lok Sabha Election 2024: ಚಿತ್ರದುರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರಜೋಳಗೆ ಬೆಂಬಲಿಸಲು ಮನವಿ

S S Patil as the new president of Afazalpur Taluk Bar Association
ಕಲಬುರಗಿ51 mins ago

Kalaburagi News: ಅಫಜಲಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಎಸ್.ಪಾಟೀಲ್‌

union Minister Pralhad joshi statement in hubli
ಹುಬ್ಬಳ್ಳಿ53 mins ago

Lok Sabha Election 2024: ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಹಿರಿಯಣ್ಣ ಆಗಲಿದೆ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ16 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌