Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು - Vistara News

ಧಾರ್ಮಿಕ

Sree Narayana Guru Jayanthi | ಕಗ್ಗತ್ತಲ ಹಾದಿಯಲಿ ಕೈದೀವಿಗೆ ಹಿಡಿದು ನಡೆದವರು ಶ್ರೀ ನಾರಾಯಣ ಗುರು

ರಾಷ್ಟ್ರದ ಸಮಗ್ರತೆಗೆ ಮತ್ತು ಉನ್ನತಿಗೆ ನಾರಾಯಣ ಗುರುಗಳು ನೀಡಿದ ರಚನಾತ್ಮಕ ಮತ್ತು ಸಮನ್ವಯದ ಮಾರ್ಗ ಈಗಲೂ ತೋರುಗಂಬವಾಗಿದೆ. ಇಂದು ಶ್ರೀ ನಾರಾಯಣ ಗುರುಗಳ ಜಯಂತಿ (Sree Narayana Guru Jayanthi). ಈ ಹಿನ್ನೆಲೆಯಲ್ಲಿ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Sree Narayana Guru Jayanthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Sree Narayana Guru Jayanthi

ಸತೀಶ್. ಜಿ. ಕೆ. ತೀರ್ಥಹಳ್ಳಿ
ಕಾಲದ ಹಿತ, ಹಿಡಿತಕ್ಕೆ ಒಳಪಟ್ಟು ಸಮಾಜ ತನ್ನ ಆಶಯ, ಸ್ವರೂಪಗಳನ್ನು ಮುರಿದುಕಟ್ಟಿಕೊಳ್ಳುವುದು ಅನಿವಾರ್ಯ. ಯಾಕೆಂದರೆ ಬದುಕು ನಿಂತ ನೀರಲ್ಲ, ಹರಿವ ನದಿ, ನಿಂತರದು ಬಗ್ಗಡ. ಸಮಾಜಗಳೂ ಹಾಗೆಯೇ. ಚಲನಾಶೀಲತೆಯೇ ಅದರ ಜೀವಾಳ.

ಇತಿಹಾಸದುದ್ದಕ್ಕೂ ಅಜ್ಞಾನದಿಂದಲೋ, ಸ್ವಾರ್ಥಸಾಧನೆಗೋ ಸೃಜಿಸಿದ ಕೊಳೆ ತೊಳೆಯುವ ಕಾಯಕವನ್ನು ಅಲ್ಲಲ್ಲಿ ಸಾಧುಸಂತರು ಮಾಡುತ್ತಲೇ ಬಂದಿದ್ದಾರೆ. ಆಯಾಯ ಕಾಲಘಟ್ಟದಲ್ಲಿ ಬೇರೂರಿದ್ದ ಮೌಢ್ಯ, ತಾರತಮ್ಯ, ಶೋಷಣೆಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸಿದ್ದಾರೆ, ಸಮಸಮಾಜವನ್ನು ಕನಸಿದ್ದಾರೆ, ಅರಿವಿನ ಬೆಳಕನ್ನು ಹರಿಸಿದ್ದಾರೆ. ಬಾವಿಯೊಳಗಿನ ಚಿಲುಮೆಗಳಲ್ಲಿ ಆಗಾಗ ಹೂಳು ತುಂಬಿಕೊಳ್ಳುವುದಿದೆ. ಹೂಳು ತೆಗೆಯುತ್ತಿದ್ದಂತೆ ಜಲದ ಕಣ್ಣುಗಳು ತೆರೆದು, ಜೀವಜಲ ಒಸರುತ್ತದಲ್ಲ ಹಾಗೆ, ವಿಕಾಸದ ಹಾದಿಯಲ್ಲಿ ಸಹಬಾಳ್ವೆ-ಔನತ್ಯದ ಮಾರ್ಗವಾಗಿ ಕಂಡಿದ್ದು ದೇವರು-ಧರ್ಮಗಳು. ಅದೇ ಹೆಸರಲ್ಲಿ ನಡೆದುಹೋದ ಅನಾಚಾರ-ಕ್ರೌರ್ಯಗಳು ಗ್ರಹಿಕೆಯನ್ನೂ ಮೀರಿದಂತವು. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಮಲಗಿದ್ದ ಜಗತ್ತನ್ನು ಚಿವುಟಿಹೋದ ಬುದ್ಧ, ಬಸವ, ದಾಸ ಪರಂಪರೆಯೊಟ್ಟಿಗೆ ವಿಭಿನ್ನವಾಗಿ ನಿಲ್ಲುವ, ಶತಮಾನದ ಮಹಾಸಂತರೇ ಬ್ರಹ್ಮಶ್ರೀ ನಾರಾಯಣ ಗುರುಗಳು.

Sree Narayana Guru Jayanthi
ಶ್ರೀ ನಾರಾಯಣ ಗುರುಗಳು ಹುಟ್ಟಿದ ಮನೆ

ಕೇರಳದ ತಿರುವನಂತಪುರಂನಿಂದ ೧೨ಕಿಮೀ ದೂರದ ಚೆಂಬಳಂತಿಯಲ್ಲಿ ೧೮೫೬ರಲ್ಲಿ, ತಿರುಓಣಂ ಹಬ್ಬವಾದ ಮೂರನೇದಿನದ ಶತಭಿಷ ನಕ್ಷತ್ರದಂದು, ಮದ್ಯಮವರ್ಗದ ಈಳವ ಕುಟುಂಬದಲ್ಲಿನ ಶಿಕ್ಷಕರು, ನಾಟಿವೈದ್ಯರಾಗಿದ್ದ ಮಾಡಾನ್ ಆಸಾನ್ ಮತ್ತು ಕುಟ್ಟಿಯಮ್ಮಾಳ್ ದಂಪತಿಯ ಮಗನಾಗಿ ಜನಿಸಿದವರು ನಾರಾಯಣ ಗುರುಗಳು.

ದೇಶಕಾಲವನ್ನು ಮೀರಿದ ವ್ಯಕ್ತಿತ್ವ
ತಮ್ಮ ವೇದಾಧ್ಯಯನ, ವಿಶಿಷ್ಟ ಚಿಂತನೆಗಳಲ್ಲಿ ಅರಳಿದ ಅವರದು ದೇಶಕಾಲವನ್ನು ಮೀರಿದ ವ್ಯಕ್ತಿತ್ವ. ಮಹಿಳೆಯರು, ಶೂದ್ರವರ್ಗ ಮತ್ತು ಶೂದ್ರಾತಿಗಳಲ್ಲಿ ಸಾಂಸ್ಕೃತಿಕ ಪುನುರುತ್ಥಾನ, ಆತ್ಮಾಭಿಮಾನ ಮತ್ತು ವಿದ್ಯಾದಾನದ ರುವಾರಿಯಾಗಿ ಅವತರಿಸಿದವರು. ತಮ್ಮ ಅಪಾರ ಬುದ್ಧಿವಂತಿಕೆ ಮತ್ತು ದೂರದೃಷ್ಟಿತ್ವದ ಕಾರ್ಯಯೋಜನೆಗಳ ಮೂಲಕ ಗಾಢಾಂಧಕಾರದಲ್ಲಿ ಮುಳುಗಿದ್ದವರ ಬದುಕಿಗೊಂದು ಜೀವಕಸುವನ್ನು ತುಂಬಿದರು.

ಉತ್ತರದ ಸಮಾಜ ಸುಧಾರಕರೊಟ್ಟಿಗೆ, ಒಡಿಶಾದ ಮಹಿಮಾಧರ್ಮ, ಫುಲೆಯವರ ಸತ್ಯಶೋಧಕ ಸಮಾಜ, ಛತ್ತಿಸ್ ಘಡದ ಸತ್ನಮ್ ಪಂಥ, ತಮಿಳುನಾಡಿನ ಪೆರಿಯಾರ್, ಕೊಲ್ಲಾಪುರದ ಸಾಹುಮಹಾರಾಜರು ಉಂಟುಮಾಡಿದ ಸಮಕಾಲೀನ ಕ್ರಾಂತಿಯಂತೆ ೧೮೮೮ರಲ್ಲಿ ನಾರಾಯಣ ಗುರುಗಳು ಅರವಿಪುರಂನ ಶಿವದೇಗುಲವನ್ನು ಸ್ಥಾಪಿಸಿದಾಗಲೂ ದೊಡ್ಡ ಸಂಚಲನ ಉಂಟಾಗಿತ್ತು. ನಾರಾಯಣ ಗುರುಗಳು ಮತ್ತವರ ನಿಕಟವರ್ತಿಗಳು ಹುಟ್ಟುಹಾಕಿದ ಕ್ರಾಂತಿಕಾರಕ ಚಳುವಳಿಗಳಲ್ಲಿ ಗುರುಗಳ ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಪುನುರುತ್ಥಾನ, ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ ಆಂದೋಲನಗಳು, ಶಿಕ್ಷಣದ ಹಕ್ಕಿನ ಹೋರಾಟದಲ್ಲಿ ಕುಮಾರನ್ ಆಶಾನ್ ಬಳಗದ ಪ್ರಯತ್ನ, ಸಿ.ಕೇಶವನ್ ನೇತೃತ್ವದ ರಾಜಕೀಯ ಹಕ್ಕು ಹೋರಾಟ, ಟಿ.ಕೆ ಮಾಧವನ್ ನೇತೃತ್ವದಲ್ಲಿ ನಡೆದ ಅಸ್ಪೃಷ್ಯತೆ ವಿರೋಧಿ ಹೋರಾಟಗಳನ್ನೂ ತಿಳಿಯಬೇಕಾದ ಅವಶ್ಯಕತೆ ಇದೆ.

ದೇವರ ನಾಡಾಗಿಸಿದ ಸಂತ
ಕೇರಳದಲ್ಲಾಗ ಕ್ರೌರ್ಯವು ವಿಜ್ರಂಭಿಸುವ ಕಾಲವಾಗಿತ್ತು. ಅವರ್ಣೀಯರಿಗೆ ಕೆರೆಬಾವಿಗಳಲ್ಲಿ ನೀರೆತ್ತುವುದು, ಬ್ಯಾಂಕ್, ಅಂಚೆಕಚೇರಿ ಪ್ರವೇಶಿಸುವುದು, ಮಹಡಿಮೇಲೆ ವಾಸಿಸುವುದು, ಸರ್ಕಾರಿ ನೌಕರಿಗೆ ಸೇರುವುದು, ಕಥಕ್ಕಳಿಯಂಥಾ ನೃತ್ಯಗಳಲ್ಲಿ ದೇವರ ಪಾತ್ರ ಮಾಡುವುದೆಲ್ಲಾ ನಿಷಿದ್ಧವಾಗಿತ್ತು. ಆಭರಣ, ಚಪ್ಪಲಿ, ವಿಶೇಷವಾಗಿ ಮಹಿಳೆಯರು ಮೈತುಂಬ ವಸ್ತ್ರಧರಿಸಲೂ ನಿರ್ಬಂಧವಿತ್ತು. ತೆರೆದೆದೆಯಲ್ಲಿ ಎದುರಾಗಿ, ಗಾತ್ರದ ಆಧಾರದಲ್ಲಿ ‘ಸ್ತನಗಂದಾಯ’ ಕಟ್ಟಬೇಕಿತ್ತು. ಮಡಿಮೈಲಿಗೆಯ ಹೆಸರಲ್ಲಿ ಶೂದ್ರರು ಮೇಲ್ವರ್ಗದವರಿಂದ ಇಂತಿಷ್ಟೇ ಅಡಿ ದೂರವಿರಲೇಬೇಕೆಂಬ ಸಾಮಾಜಿಕ ಕಟ್ಟಳೆಯಿತ್ತು.

ಮಧ್ಯಾಹ್ನ ಮಾತ್ರವೇ ರಸ್ತೆಗಳಲ್ಲಿ ಸಂಚರಿಸಬೇಕು, ಅವರ ನೆರಳು ಮೇಲ್ವರ್ಗಕ್ಕೆ ತಾಕಕೂಡದು. ಶೂದ್ರರು ಸದಾಕಾಲ ಕೈಲೊಂದು ಮಡಕೆ ಹಿಡಿದುಸಾಗುತ್ತಾ ಅದಕ್ಕೇ ಉಗುಳಬೇಕೆಂಬ ಕಟ್ಟುಪಾಡಿತ್ತು. ಇನ್ನು ಧಾರ್ಮಿಕ ವ್ಯವಸ್ಥೆಯದಂತೂ ಹೀನಾಯಸ್ಥಿತಿ. ದೇವಸ್ಥಾನಗಳನ್ನು ಪ್ರವೇಶಿಸಲು, ಸರ್ಕಾರವೇ ನಡೆಸುವ ಶಾಲೆಗಳಲ್ಲಿ ಕಲಿಯಲು, ವೇದಪಠಣಗಳನ್ನು ಆಲಿಸಲೂ ಅವಕಾಶವಿರಲಿಲ್ಲ. ನಿಯಮವನ್ನು ಉಲ್ಲಂಘಿಸಿ ಧಾರ್ಮಿಕ ಕಾರ್ಯವನ್ನು ಆಲಿಸಿದವರ, ಪೂಜೆ ಮಾಡಲು ಬಯಸಿದವರ ಕಿವಿಗೆ ಕಾದ ಸೀಸ ಎರೆಯಬೇಕು, ನಾಲಿಗೆ ಕತ್ತರಿಸಬೇಕು ಎಂಬಂತಹ ಕಠೋರ ನಿಯಮಗಳಿದ್ದವು.

Sree Narayana Guru Jayanthi

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಮನಸ್ಥಿತಿಯದು. ಶೇ.೮೫ರಷ್ಟಿದ್ದ ಶೋಷಿತ ಸಮುದಾಯಗಳು ಎರಡನೇ ದರ್ಜೆ ಪ್ರಜೆಗಳಾಗಿ, ಕನಿಷ್ಠ ಮಾನವಹಕ್ಕುಗಳಿರದ ನಿತ್ಯನರಕವನ್ನು ಬದುಕಬೇಕಾಗಿತ್ತು. ಇಂತಹ ಶೋಚನೀಯ ಪರಿಸ್ಥತಿಯಲ್ಲಿರುವಾಗಯೇ ಅಲ್ಲಿಗೆ ಸಂದರ್ಶಿಸಿದ್ದ ಸ್ವಾಮಿ ವಿವೇಕಾನಂದರು ಕೇರಳವನ್ನು ‘ಅದು ಹುಚ್ಚಾಸ್ಪತ್ರೆ!’ ಎಂದಿದ್ದರು. ಅದೇ ನೆಲದಲ್ಲಿ ಜನ್ಮವೆತ್ತಿ ಸಮರ್ಥ ಸಮಾಜ ಚಿಕಿತ್ಸೆಯಲ್ಲಿ ಒದಗುತ್ತಾ, ಅಲ್ಲಿಯ ಮಾನಸಿಕತೆಯನ್ನು ಸುಧಾರಿಸಿ ‘ದೇವರನಾಡು’ ಎಂದು ಪರಿವರ್ತಿಸಿದ್ದು ಗುರುಗಳ ಸಾಧನೆ. ಅದೇ ಬೆಳಕಲ್ಲಿ ಮುಂದದು ಸಾಕ್ಷರ ನಾಡಾಗಿ, ಕೋಮುಸೌಹಾರ್ಧದ ಬೀಡಾಗಿ ಬದಲಾಗಿರುವುದೂ ಗಮನಾರ್ಹ.

ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವಂತೆ ‘ಮಾನವ ಕುಲಕ್ಕೇ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು’ ಆಶಯದೊಂದಿಗೆ ಸರ್ವಸಮಾನತೆಗೆ ಕರೆಯಿತ್ತರಲ್ಲದೆ ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದರು, ‘ಸಂಘಟನೆಯಿಂದ ಬಲಯುತರಾಗಿರಿ ಮತ್ತು ಶಿಕ್ಷಣದಿಂದ ನಿರ್ಭೀತರಾಗಿರಿ’ ಎಂಬ ಪ್ರೇರಣೆಯೊಂದಿಗೆ ‘ಉದ್ಧಾರೇತಾತ್ಮನಾತ್ಮಾನಂ’ ಗೀತೋಕ್ತಿಯಂತೆ ತನ್ನ ಉದ್ಧಾರ ತನ್ನಿಂದಲೇ ಎಂಬ ದಿವ್ಯಸಂದೇಶ ನೀಡಿದರು.

ಯುದ್ಧ ಮಾಡದೇ ಎದುರಾಳಿಯ ಗೆದ್ದರು!
ಇತಿಹಾಸದಲ್ಲಿಯೇ ಪ್ರಥಮವೆಂಬಂತೆ, ಗುರುಗಳು ಹಲವಾರು ಸರ್ವಧರ್ಮ ಸಮ್ಮೇಳನಗಳನ್ನು ಸಂಘಟಿಸಿ, ಸಹೋದರತ್ವವನ್ನು ಸಾರಿದರು. ಜೀವಿತಾವಧಿಯಲ್ಲಿ ಹಲವಾರು ಶಾಲೆಗಳು, ಆಸ್ಪತ್ರೆಗಳನ್ನೂ ತೆರೆದರು. ಕೈಗಾರಿಕಾ ಸಮ್ಮೇಳನಗಳನ್ನೂ ನಡೆಸಿದರು. ಧರ್ಮಪ್ರಸಾರ, ಧರ್ಮಜಾಗೃತಿಗಾಗಿ ಶ್ರೀಲಂಕಾಗೂ ತೆರಳಿದ್ದರು. ದೇವಸ್ಥಾನ ಪ್ರವೇಶಕ್ಕೆ ಚಳುವಳಿ ನಡೆಸದೆ, ಪರ್ಯಾಯವಾದ ಅವರ್ಣೀಯರ ದೇವಾಲಯ ಸ್ಥಾಪಿಸಿದ್ದು ಮಾತ್ರವಲ್ಲ ತಳವರ್ಗಕ್ಕೆ ಸಂಘಟನಾಶಕ್ತಿ ತುಂಬಿದರು. ಆ ಹಾದಿಯಲ್ಲಿ ನೋವುಗಳಿದ್ದವು. ಆದರೂ ಅವರು ವಿನಯದ ಮಾರ್ಗಬಿಡಲಿಲ್ಲ. ಯಾರೊಂದಿಗೂ ಸಮರ ಸಾರಲಿಲ್ಲ. ಸಂಘರ್ಷಕ್ಕಿಳಿಯಲಿಲ್ಲ. ಸಂಧಾನದ, ಸಮನ್ವಯದ ದಾರಿಯಲ್ಲಿ ಯುದ್ಧಹೂಡದೆಯೇ ಎದುರಾಳಿಗಳನ್ನು ಗೆದ್ದಿದ್ದರು.

ನೆರೆಯ ತಮಿಳುನಾಡಿನಲ್ಲಿ ಪೆರಿಯಾರ್ ನೇತ್ರುತ್ವದಲ್ಲಿ ಬಲತ್ಕಾರಯುತ ದೇಗುಲ ಪ್ರವೇಶ, ವಿಗ್ರಹ ಧ್ವಂಸ ಕಾರ್ಯಾಚರಣೆ, ಧರ್ಮಗ್ರಂಥಗಳನ್ನು ಸುಡುವಂತಹ ಸಂಘರ್ಷದ ಹಾದಿಗಳಿದ್ದಾಗಲೂ ನಾರಾಯಣ ಗುರುಗಳು ಸೌಹಾರ್ಧದ ಹಾದಿಯನ್ನು ತುಳಿದರು. ಹಿಂದೂ ಧರ್ಮದ ಕೌರ್ಯವನ್ನು ಸದ್ದಿಲ್ಲದೆ, ರಕ್ತರಹಿತ ಕ್ರಾಂತಿಯ ಮೂಲಕ ಮೀರಲೆತ್ನಿಸಿದರು. ಧರ್ಮದಲ್ಲಿ ತಮ್ಮ ಪಾಲೂ ಇದೆಯೆಂದು ಅರ್ಥೈಸಿ ಸಾವಿರಾರು ವರ್ಷಗಳಿಂದ ಧರ್ಮಕ್ಕಂಟಿದ್ದ ಕಳಂಕವನ್ನು ತಮ್ಮ ಮೂವತೈದು ವರ್ಷಗಳಲ್ಲಿ ತೊಳೆಯೆತ್ನಿಸಿ ಧರ್ಮ ಪುನರುತ್ಥಾನದ ರುವಾರಿಯಾದರು. ಆ ಮೂಲಕ ದೊಡ್ಡಮಟ್ಟದ ಮತಾಂತರ ಸಾಧ್ಯತೆಯನ್ನು ನಿವಾರಿಸಿದರು.

ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ ಎಂದರು!
ಕಾಲಾಂತರದಿಂದ ದೇವಸ್ಥಾನ ಪ್ರವೇಶವಂಚಿತರಾಗಿ ಸೋತು ಬಂದವರನ್ನು ಸಂತೈಸಿ “ದೇವರಿದ್ದಲ್ಲಿಗೆ ನಿಮ್ಮನ್ನು ಬಿಡದಿದ್ದರೇನಂತೆ, ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ..” ಎಂದು ೧೮೮೮ರಲ್ಲಿ ಅರವೀಪುರಂನಲ್ಲಿ ಅವರ್ಣೀಯರಿಗಾಗಿಯೇ ಶಿವಮಂದಿರವನ್ನು ಸ್ಥಾಪಿಸಿದರು. ವಿಗ್ರಹದ ಹುಡುಕಾಟದಲ್ಲಿದ್ದಾಗ ಪಕ್ಕದ ನದಿಯಲ್ಲಿ ಮುಳುಗಿ ಎದ್ದುಬರುವಾಗ ಕಲ್ಲೊಂದನ್ನು ಹೊತ್ತುತಂದು ‘ಲಿಂಗ’ ಎಂದು ಪ್ರತಿಷ್ಠಾಪಿಸಿದ್ದರು. ತಳಸಮುದಾಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದ್ದು ಜಾಗತಿಕ ಚರಿತ್ರೆಯಲ್ಲಿ ದೊಡ್ಡ ಮೈಲಿಗಲ್ಲು.

ಅವರ ನಿಕಟವರ್ತಿ ಕುಮಾರನ್ ಆಸಾನ್ ಬಣ್ಣಿಸುವಂತೆೆ “ಅದು ಜಾತೀಯತೆಯೆಂಬ ದೈತ್ಯವೃಕ್ಷಕ್ಕೆ ಬಿದ್ದ ಮೊದಲ ಕೊಡಲಿ ಏಟು..” ಪೂಜೆ ವೈಯಕ್ತಿಕ, ಜಾತಿಭೇದ, ಮತದ್ವೇಷಗಳಿಲ್ಲದೆ ಸರ್ವರೂ ಸಹೋದರತ್ವದಿ ಆರಾಧಿಸುವ ಕ್ಷೇತ್ರವೆಂದರು. ನಂತರ ಸುಮಾರು ೭೫ ದೇಗುಲಗಳು ಕೇರಳ, ತಮಿಳುನಾಡು ಮತ್ತು ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲು ಕಾರಣರಾದರು. ದೇಗುಲಗಳು ಅದ್ದೂರಿ ಪೂಜೆ-ಪುನಸ್ಕಾರಗಳಿಗಿಂತ ಸಾರ್ವಜನಿಕ ಆರಾಧನಾ ತಾಣಗಳಾಗಬೇಕು, ಅಧ್ಯಯನ ಕೇಂದ್ರಗಳಾಗಬೇಕೆಂದು ಬಯಸಿದರು. ಸ್ಥಾಪಿಸಿದ್ದ ದೇವಾಲಯಗಳಾಗಿ ಅರ್ಚಕರನ್ನಾಗಿ ಶೂದ್ರ ಸಮುದಾಯದವರನ್ನು ನೇಮಿಸಿ, ಶಿವಗಿರಿಯಲ್ಲಿ ವೇದಾದ್ಯಯನ, ಬ್ರಹ್ಮವಿದ್ಯೆಗಳ ತರಬೇತಿ ಕೇಂದ್ರವನ್ನು ತೆರೆದರು.

Sree Narayana Guru Jayanthi

ಸರಳ ಬದುಕು, ಸ್ವಚ್ಛತೆ, ಗುಡಿಕೈಗಾರಿಕೆ ಸ್ಥಾಪನೆ, ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದರು. “ದರ್ಶನಮಾಲಾ”, “ಆತ್ಮೋಪದೇಶ ಶತಕಂ”, “ದೈವದಶಕಂ” ಮುಂತಾದ ಕೃತಿಗಳ ಮೂಲಕವೂ ಲೋಕಜ್ಞಾನದ ದಾರಿತೋರಿದ್ದರು. ೧೯೦೩ರಲ್ಲಿ ನಾರಾಯಣ ಗುರುಗಳು, ಒಡನಾಡಿಗರಾದ ಡಾ.ಪಲ್ಪು ಮತ್ತು ಕವಿ ಕುಮಾರನ್ ಆಸನ್‌ರೊಂದಿಗೆ ಸೇರಿ ಮುನ್ನಡೆಸಿದ ‘ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ’ ಪ್ರತಿರೋಧ ಚಳುವಳಿಯ ಉದ್ದೇಶವೇ ಮನುಷ್ಯ ಘನತೆಯ ಸಮಾಜ ನಿರ್ಮಾಣ ಮಾಡುವುದಾಗಿತ್ತು. ಶೋಷಿತವರ್ಗದ ಸಬಲೀಕರಣಕ್ಕದು ಬದ್ಧವಾಯಿತು. ಹಿಂದೂಧರ್ಮದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆ ಮತ್ತು ಕಂದಾಚಾರಗಳು ಶೋಷಿತ ಸಮೂದಾಯಗಳನ್ನು ಅನ್ಯಧರ್ಮದೆಡೆಗೆ ನೂಕಿದ್ದವು. ಇಂತಹ ಸಂದಿಗ್ಧತೆಯಲ್ಲಿ ಧರ್ಮವನ್ನು ಮರುವ್ಯಾಖ್ಯಾನಿಸಿ, ಲಿಂಗ ಮತ್ತು ಜಾತಿ ಸಮಾನತೆಯನ್ನು ಪ್ರತಿಪಾದಿಸಿತು.

ಶತಮಾನಗಳ ಹಿಂದೆಯೇ, ಸಾಮಾಜಿಕ ಸುಧಾರಣೆಯ ಭಾಗವಾಗಿ, ಸಂಪತ್ತಿನ ಅಸಹ್ಯಕರ ಪ್ರದರ್ಶನಕ್ಕೊಡ್ಡುವ ಅದ್ಧೂರಿ ಮದುವೆಗಳನ್ನು ನಿರಾಕರಿಸಿ ತಮ್ಮ ವಿಶಿಷ್ಟ ಸರಳವಿವಾಹ ಪದ್ಧತಿಯೊಂದನ್ನು ಪರಿಚಯಿಸಿದರು. ಮದ್ಯವರ್ಜನೆಗೆ ಮನವೊಲಿಸಿ, ಹೆಂಡಮಾರುವ ಈಳವರಿಗೆ ಪರ್ಯಾಯ ಉದ್ಯೋಗವಾಗಿ ನಾರಿನೋದ್ಯಮದಂತಹ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಕುಟುಂಬದ ಸ್ವಾಸ್ಥ್ಯ ಮತ್ತು ಸಾಮಾಜಿಕ ಚೇತರಿಕೆಗಾಗಿ ಕೆಳವರ್ಗದ ಮನಪರಿವರ್ತನೆಗೆ ಹಂಬಲಿಸಿದರು. ಆಧ್ಯಾತ್ಮಕ ಸಂತನೊಬ್ಬ ಹೀಗೆ ಲೌಕಿಕವಾಗಿ ಚಿಂತಿಸಿದ್ದು ದೇಶದ ಚರಿತ್ರೆಯಲ್ಲಿ ಅಪರೂಪವಾದುದು.

ಆರ್ಥಿಕ ಅಸಮಾನತೆಯೂ ಕ್ರೂರವಾಗಿತ್ತು, ಕೆಲವೇ ಬಲಾಢ್ಯರ ಪಾಲಾದ ಭೂ-ಒಡೆತನವು ಭೂರಹಿತರನ್ನು ಶೋಷಿಸುವುದು, ಅವರನ್ನು ಮತದಾನ ಇನ್ನಿತರ ಹಕ್ಕುಗಳಿಂದ ಹೊರಗಿಡುವುದು, ಬೆಳೆದಿದ್ದರ ಬಹುಪಾಲು ಕಂದಾಯವನ್ನಾಗಿ ವಸೂಲಿ ಮಾಡಿ ಬಡಜನರನ್ನು ಖಾಯಂ ಜೀತಕ್ಕೆ ನೂಕುವುದು. ಮುಂತಾದ ದೌರ್ಜನ್ಯಗಳ ವಿರುದ್ಧ ತಳೆದ ಸ್ಪಷ್ಟ ನಿಲುವುಗಳಲ್ಲಿ ಅವರೊಬ್ಬ ವೈಜ್ಞಾನಿಕ ಸಮಾಜವಾದದ ಪ್ರತಿಪಾದಕರಾಗಿಯೂ ಅನೇಕರಿಗೆ ಕಂಡರು.

Sree Narayana Guru Jayanthi
ಗಾಂಧೀಜಿಯವರೊಂದಿಗೆ ಶ್ರೀ ನಾರಾಯಣ ಗುರು

ಗಾಂಧಿ, ರವೀಂದ್ರರು ಮೆಚ್ಚಿದ್ದರು
ಘನ ಉದ್ದೇಶದೊಂದಿಗೇ ಜನ್ಮವೆತ್ತಿದವರಂತಿದ್ದ ಗುರುಗಳು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಳುವಳಿಗಳನ್ನು ಬಲವಾಗಿ ಸಂಘಟಿಸುವಾಗ ಅವರದ್ದು ಮೂವತ್ತೆರಡರ ಹರೆಯ!. ವಿಶ್ವಗುರು ರವೀಂದ್ರರು “ನಾನು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದೇನೆ, ಅಸಂಖ್ಯ ದಾರ್ಶನಿಕರನ್ನು ಭೇಟಿಯಾಗಿದ್ದೇನೆ, ಆದರೆ ನಾರಾಯಣಗುರುಗಳಂತಹ ಜ್ಞಾನಸಂಪನ್ನನನ್ನು, ಆಧ್ಯಾತ್ಮಿಕ ಔನ್ನತ್ಯ ಪಡೆದ ವಿಭೂತಿ ಪುರುಷರನ್ನೂ ನಾನು ಈವರೆಗೂ ಕಂಡಿಲ್ಲ..” ಎಂದರೆ, ೧೯೨೫ರಲ್ಲಿ ಗುರುಗಳನ್ನು ಭೇಟಿ ಮಾಡಿದ ಗಾಂಧೀಜಿಯವರು “ಗುರುಗಳನ್ನು ಸಂದರ್ಶಿಸಿದ್ದು ತಮ್ಮ ಸುದೈವ.. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದಿದ್ದರು.

ಲೋಕದ ಅಗತ್ಯಗಳೇನೆಂಬುದರ ಬಗ್ಗೆ ಅವರಿಗಿದ್ದ ದೂರದೃಷ್ಟಿತ್ವಗಳು ಎಂದಿಗೂ ಅನುಕರಣನೀಯ. ವಿಪರ್ಯಾಸವೆಂದರೆ, ನಾವೆಲ್ಲರೂ ಗುರುಗಳ ಆದರ್ಶಗಳನ್ನು ವಿಚಾರವಾಗಿ ಎದೆಯಲ್ಲಿಟ್ಟುಕೊಳ್ಳುವ ಬದಲು ಅವರನ್ನು ಗುಡಿಕಟ್ಟಿ ಕೂಡಿಹಾಕಿರುವುದು!. ಜೀವಪರವಾಗಿ ಬದುಕು ಸವೆಸಿದ ದಾರ್ಶನಿಕರನ್ನೆಲ್ಲಾ ಜಾತಿ-ಧರ್ಮಗಳ ಸಂಕೋಲೆಯಿಂದ ಬಿಡಿಸಿ ಅವರು ಚೆಲ್ಲಿದ ಬೆಳಕಲ್ಲಿ ನಾವೀಗ ಸಾಗಬೇಕಿದೆ. ನಮ್ಮನ್ನೆಲ್ಲಾ ಕಾಯಬೇಕಿರುವುದು ದ್ವೇ಼ಷ-ರೋಷಗಳಲ್ಲ, ಸ್ವಾರ್ಥ-ಸಂಕುಚಿತತೆಯಲ್ಲ. ಮನುಷ್ಯಪ್ರೀತಿ, ಸಹಕಾರ ಮತ್ತು ಸೌಹಾರ್ಧತೆಗಳು.

ರಾಷ್ಟ್ರದ ಸಮಗ್ರತೆಗೆ ಮತ್ತು ಉನ್ನತಿಗೆ ಗುರುಗಳು ನೀಡಿದ ರಚನಾತ್ಮಕ ಮತ್ತು ಸಮನ್ವಯದ ಮಾರ್ಗವು ಈಗಲೂ ಎಲ್ಲೆಡೆ ತೋರುಗಂಬವಾಗಿ ಉಳಿದಿದೆ. ಅವರ ಸಂದೇಶಗಳು ಲಡಾಕ್‌ನ ಎತ್ತರದ ಪ್ರದೇಶದಲ್ಲಿಯೂ ಕೆತ್ತಲ್ಪಟ್ಟಿದೆ. ಅವರ ಸಭ್ಯತೆಯ ಬದುಕು, ಸಾಮಾಜಿಕ ಕಳಕಳಿ, ಸಹಬಾಳ್ವೆಯ ಅರಿವು, ವಾಸ್ತವ ಪ್ರಜ್ಞೆ, ಅಭಿವೃದ್ಧಿಯ ಆಶಯಗಳು ಆದರ್ಶ ಸಮಾಜದ ದಿಕ್ಸೂಚಿಗಳಂತಿವೆ. ಮತ್ತೆಮತ್ತೆ ಕಾಡುವ, ಪ್ರಚೋದಿಸುವ, ವಿಕಸಿಸುವ ಅಂತಹ ಜ್ಞಾನಮಾರ್ಗದಲ್ಲಿ ಇವತ್ತಿನ ಸಮಾಜ ಹೆಜ್ಜೆಹಾಕಬೇಕಾದ ತುರ್ತಿದೆ.

ಲೇಖರು ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು

ಇದನ್ನೂ ಓದಿ | ರಾಜ ಮಾರ್ಗ | ಅವರು ಹೋರಾಡಿದ್ದು ಅಸಮಾನತೆ ವಿರುದ್ಧ, ಪ್ರತಿಪಾದಿಸಿದ್ದು ಆತ್ಮೋದ್ಧಾರ, ಆತ್ಮವಿಶ್ವಾಸದ ಮಂತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Ram Navami: ಅಯೋಧ್ಯೆ ಬಾಲಕ ರಾಮನಿಗೆ ಮೊದಲ ರಾಮ ನವಮಿ; ಇಲ್ಲಿದೆ ಅಪೂರ್ವ ಕ್ಷಣಗಳ ಫೋಟೊ ಗ್ಯಾಲರಿ

Ram Navami: ಇಂದು ರಾಮ ನವಮಿ. ರಾಮನ ಭಕ್ತರು ಅತ್ಯಂತ ಸಡಗರದಿಂದ ರಾಮ ನವಮಿಯನ್ನು ಆಚರಿಸುತ್ತಿದ್ದಾರೆ. ಈ ಬಾರಿ ಆಚರಣೆ ಇನ್ನೂ ವಿಶೇಷ ಎನಿಸಿಕೊಂಡಿದ್ದು ಅಯೋಧ್ಯೆ ರಾಮನಿಗೆ ಇದು ಮೊದಲ ರಾಮ ನವಮಿ ಎನ್ನುವ ಕಾರಣಕ್ಕೆ. ಈ ವಿಶೇಷ ದಿನವನ್ನು ಇನ್ನೂ ಸ್ಮರಣೀಯವಾಗಿಸಿದ್ದು, ಬಾಲಕ ರಾಮನ ಹಣೆಯ ಮೇಲೆ ಮೂಡಿದ ಸೂರ್ಯ ತಿಲಕ. ಸುಮಾರು 4-5 ನಿಮಿಷಗಳ ಕಾಲ ಪ್ರಭು ಶ್ರೀರಾಮನ ಹಣೆಯ ಮೇಲೆ ಕಂಗೊಳಿಸಿದ ಸೂರ್ಯ ತಿಲಕವನ್ನು ನೋಡಿ ಭಕ್ತರು ರೋಮಾಂಚನಗೊಂಡಿದ್ದಾರೆ. ಇಲ್ಲಿದೆ ಆ ಅಪೂರ್ವ ಕ್ಷಣದ ಫೋಟೊ.

VISTARANEWS.COM


on

Ram Navami
Koo

ಅಯೋಧ್ಯೆ: ದೇಶಾದ್ಯಂತ ಇಂದು (ಏಪ್ರಿಲ್‌ 17) ಸಂಭ್ರಮದಿಂದ ರಾಮ ನವಮಿ (Ram Navami)ಯನ್ನು ಆಚರಿಸಲಾಗುತ್ತಿದೆ. ಜತೆಗೆ ಈ ಬಾರಿ ಇನ್ನೂ ವಿಶೇಷ ಎನಿಸಿದ್ದು ಅಯೋಧ್ಯೆಯ ಬಾಲಕ ರಾಮನಿಗೆ ಮೊದಲ ರಾಮ ನವಮಿ ಎನ್ನುವ ಕಾರಣಕ್ಕೆ (Ayodhya Ram Mandir). ಲಕ್ಷಾಂತರ ಮಂದಿ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದುಕೊಂಡರು. ಇದೇ ವೇಳೆ ಇನ್ನೊಂದು ಚಮತ್ಕಾರವೂ ನಡೆಯಿತು. ಸೂರ್ಯ ರಶ್ಮಿ ಬಾಲಕ ರಾಮನ ಹಣೆ ಮೇಲೆ ತಿಲಕದಂತೆ ಕಂಗೊಳಿಸಿತು. ಸುಮಾರು 4-5 ನಿಮಿಷಗಳ ಕಾಲ ಪ್ರಭು ಶ್ರೀರಾಮನ ಹಣೆಯ ಮೇಲೆ ಕಂಗೊಳಿಸಿದ ಸೂರ್ಯ ತಿಲಕವನ್ನು ನೋಡಿ ಭಕ್ತರು ರೋಮಾಂಚನಗೊಂಡರು. ಇಲ್ಲಿದೆ ಆ ವಿಸ್ಮಯಕಾರಿ ಕ್ಷಣಗಳ ಫೋಟೊಗಳು.

ಇದನ್ನೂ ಓದಿ: Ram Navami: ಅಯೋಧ್ಯೆ ಶ್ರೀರಾಮನಿಗೆ ಮನಮೋಹಕ ಸೂರ್ಯ ತಿಲಕ; ಇಲ್ಲಿದೆ ನೋಡಿ ವಿಡಿಯೊ

Continue Reading

ದೇಶ

Ram Navami: ಅಯೋಧ್ಯೆ ರಾಮ ಮಂದಿರಲ್ಲಿ ಮೊದಲ ರಾಮ ನವಮಿ; ದೇಶದ ಜನತೆಗೆ ಮೋದಿ ನೀಡಿದ ಸಂದೇಶ ಇದು

Ram Navami: ದೇಶಾದ್ಯಂತ ರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ನಂತರದ ಮೊದಲ ರಾಮ ನವಮಿ ಒಂದು ಪೀಳಿಗೆಯ ಮೈಲಿಗಲ್ಲು. ಶತಮಾನಗಳ ಭಕ್ತಿಯನ್ನು ಭರವಸೆ ಮತ್ತು ಪ್ರಗತಿಯ ಹೊಸ ಯುಗದೊಂದಿಗೆ ಹೆಣೆಯಲಾಗುತ್ತದೆ. ಇದು ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ದಿನ” ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

VISTARANEWS.COM


on

Ram Navami
Koo

ನವದೆಹಲಿ: ಇಂದು (ಏಪ್ರಿಲ್‌ 17) ದೇಶಾದ್ಯಂತ ರಾಮ ನವಮಿ (Ram Navami)ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನತೆಗೆ ರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜತೆಗೆ ಅಯೋಧ್ಯೆ ರಾಮ ಮಂದಿರ (Ayodhya Ram Mandir)ದಲ್ಲಿ ಪ್ರಾಣ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ನಂತರದ ಮೊದಲ ರಾಮ ನವಮಿ ಒಂದು ಪೀಳಿಗೆಯ ಮೈಲಿಗಲ್ಲು. ಶತಮಾನಗಳ ಭಕ್ತಿಯನ್ನು ಭರವಸೆ ಮತ್ತು ಪ್ರಗತಿಯ ಹೊಸ ಯುಗದೊಂದಿಗೆ ಹೆಣೆಯಲಾಗುತ್ತದೆ. ಇದು ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ದಿನ” ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼಅಯೋಧ್ಯೆಯ ರಾಮ ಮಂದಿರ ಹಲವು ವರ್ಷಗಳಿಂದ ದೇಶದ ಜನರು ಮಾಡಿದ ಕಠಿಣ ಪರಿಶ್ರಮ ಮತ್ತು ತ್ಯಾಗದ ಫಲ. ಇದು ಅಸಂಖ್ಯಾತ ರಾಮನ ಭಕ್ತರು ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಂತರನ್ನು ನೆನಪಿಸಿಕೊಳ್ಳುವ ಮತ್ತು ಗೌರವ ಸಲ್ಲಿಸುವ ಸಂದರ್ಭವೂ ಆಗಿದೆʼʼ ಎಂದು ಅವರು ಹೇಳಿದ್ದಾರೆ.

“ಪ್ರಭು ಶ್ರೀ ರಾಮನ ಆಶೀರ್ವಾದವು ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ನೀತಿ ಮತ್ತು ಶಾಂತಿಯತ್ತ ನಡೆಯುವಂತೆ ರಾಮ ನಮಗೆ ಮಾರ್ಗದರ್ಶನ ನೀಡಲಿ. ನಮ್ಮ ಜೀವನವನ್ನು ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಬೆಳಗಿಸಲಿ” ಎಂದು ಮೋದಿ ಬೇಡಿಕೊಂಡಿದ್ದಾರೆ. ʼʼಭಗವಾನ್ ರಾಮ ಭಾರತೀಯರ ಹೃದಯದಲ್ಲಿ ಆಳವಾಗಿ ಬೇರೂರಿದ್ದಾನೆ. ಮರ್ಯಾದಾ ಪುರುಷೋತ್ತಮ ಭಗವಾನ್ ರಾಮ ಅವರ ಜೀವನ ಮತ್ತು ಆದರ್ಶಗಳು ‘ವಿಕಸಿತ್‌ ಭಾರತ್’ ನಿರ್ಮಾಣಕ್ಕೆ ಬಲವಾದ ಆಧಾರವಾಗುತ್ತವೆ ಎಂಬುದರ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ರಾಮನ ಆಶೀರ್ವಾದವು ‘ಆತ್ಮ ನಿರ್ಭರ ಭಾರತ’ದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ” ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.

ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

ಅಯೋಧ್ಯೆಯಲ್ಲಿ ಭಕ್ತಜನ ಸಾಗರ

ಇನ್ನು ಅಯೋಧ್ಯೆ ರಾಮ ಮಂದಿರದತ್ತ ಭಕ್ತ ಜನ ಸಾಗರವೇ ಹರಿದು ಬಂದಿದೆ. ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮ ನವಮಿ ಆಗಿರುವ ಕಾರಣದಿಂದ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ರಾಮನಿಗೆ ಉಣಬಡಿಸಲು 56 ಬಗೆಯ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ.

Continue Reading

ದೇಶ

Ayodhya Ram Mandir: ಇಂದು ಅಯೋಧ್ಯೆ ಶ್ರೀರಾಮನಿಗೆ ಮನಮೋಹಕ ಸೂರ್ಯ ತಿಲಕ; ಮನೆಯಲ್ಲೇ ಹೀಗೆ ನೋಡಿ

Ayodhya Ram Mandir: ಇಂದು (ಏಪ್ರಿಲ್‌ 17) ರಾಮ ನವಮಿ. ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇಂದು ಸೂರ್ಯ ತಿಲಕ ಇಡಲಿದ್ದಾನೆ. ಇದನ್ನು ಮನೆಯಲ್ಲೇ ಕೂತು ನೀವೂ ವೀಕ್ಷಿಸಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Ayodhya Ram Mandir
Koo

ಅಯೋಧ್ಯೆ: ಇಂದು (ಏಪ್ರಿಲ್‌ 17) ರಾಮ ನವಮಿ  (Ram Navami). ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ಶ್ರೀ ರಾಮ ನವಮಿ (Ayodhya Ram Mandir). ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ಇಂದು ನೆರವೇರಲಿದೆ.

ಏನಿದು ಸೂರ್ಯ ತಿಲಕ ?

ಈ ಸುಂದರ ರಾಮ ವಿಗ್ರಹದ ಹಣೆಯ ಮೇಲೆ 3ರಿಂದ 5 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಮಧ್ಯಾಹ್ನ 12. 16ಕ್ಕೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಬಾಲರಾಮನ ಹಣೆಯಲ್ಲಿ ಸೂರ್ಯ ತಿಲಕ ಕಂಗೊಳಿಸಲಿದ್ದು, ಇದಕ್ಕೆ ಬೇಕಾದ ವಿಶಿಷ್ಟ ವೈಜ್ಞಾನಿಕ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ವರ್ಷ ರಾಮ ನವಮಿಯಂದು ಈ ಚಮತ್ಕಾರ ನಡೆಯಲಿದೆ.

ಹೀಗೆ ಕಣ್ತುಂಬಿಕೊಳ್ಳಿ

‘ಸೂರ್ಯತಿಲಕ’ ಏಪ್ರಿಲ್ 17ರ ಬೆಳಗ್ಗೆ 11.58ಕ್ಕೆ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 12.03ರ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಮ ಭಕ್ತರಿಗಾಗಿ ಪ್ರಸಾರ ಭಾರತಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದ್ದು, ಮನೆಯಲ್ಲೇ ವೀಕ್ಷಿಸಬಹುದು. ರಾಮ ನವಮಿಯಂದು ನೀವು ಮನೆಯಲ್ಲಿ ಕುಳಿತೇ ಈ ಸೂರ್ಯ ಅಭಿಷೇಕವನ್ನು ವೀಕ್ಷಿಸಬಹುದು. ಈ ಸಂಪೂರ್ಣ ಕಾರ್ಯಕ್ರಮ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಅಯೋಧ್ಯೆ ಸೇರಿದಂತೆ ಹಲವು ನಗರಗಳಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಡಿಡಿ ನ್ಯೂಸ್ ಮತ್ತು ಡಿಡಿ ನ್ಯಾಷನಲ್ ಯೂಟ್ಯೂಬ್ ಚಾನಲ್‌ನಲ್ಲಿಯೂ ಲೈವ್ ಕವರೇಜ್ ಲಭ್ಯ. ಹೆಚ್ಚುವರಿಯಾಗಿ ಪಿವಿಆರ್ ಐನಾಕ್ಸ್, ಮಾಧ್ಯಮ ಚಾನಲ್‌ಗಳ ಸಹಯೋಗದೊಂದಿಗೆ ಭಾರತದ 70ಕ್ಕೂ ಹೆಚ್ಚು ನಗರಗಳಲ್ಲಿ ತನ್ನ 160+ ಚಿತ್ರಮಂದಿರಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.

ಪ್ರಯೋಗ ಯಶಸ್ವಿ

ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಿದೆ. ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಎರಡರಿಂದ ಎರಡೂವರೆ ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಬೀಳಲಿದೆ. ಬಳಿಕ ಮತ್ತೆ ಎರಡೂವರೆ ನಿಮಿಷ ಭಾಗಶಃ ಬೀಳುತ್ತದೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಗೋವಿಂದ್ ರಾವ್ ತಿಳಿಸಿದ್ದಾರೆ.

ಏನಿದು ತಂತ್ರಜ್ಞಾನ?

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಒಂದಿಷ್ಟು ನಿಮಿಷ ರಾಮನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಇಲ್ಲಿ ಅಳವಡಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ತಿಲಕವನ್ನು ಉಂಟು ಮಾಡುತ್ತವೆ.

ತಜ್ಞರ ಉಪಸ್ಥಿತಿ

ಸೂರ್ಯ ತಿಲಕದ ಪ್ರಯೋಗವನ್ನು ನಡೆಸಿದ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ತಜ್ಞರು ರಾಮ ನವಮಿಯಂದು ‘ಸೂರ್ಯ ಅಭಿಷೇಕ’ ಯಶಸ್ವಿ ನೆರವೇರಿಸಲು ಅಯೋಧ್ಯೆಯಲ್ಲೇ ಉಪಸ್ಥಿತರಿದ್ದಾರೆ. ಸಿಬಿಆರ್ ಐ ಯ ನಿರ್ದೇಶಕ ರೂರ್ಕಿ, ಪ್ರೊ. ಪ್ರದೀಪ್ ಕುಮಾರ್ ರಾಮಂಚಾರ್ಲಾ ಮತ್ತು ಪ್ರೊ. ದೇವದತ್ ಘೋಷ್ ಸೂರ್ಯ ತಿಲಕ ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading
Advertisement
Saffron Row
ದೇಶ1 min ago

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

gold rate today 18
ಚಿನ್ನದ ದರ18 mins ago

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Rohit sharma
ಕ್ರೀಡೆ21 mins ago

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

summer special trains
ಬೆಂಗಳೂರು30 mins ago

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Senior citizen
ಲೈಫ್‌ಸ್ಟೈಲ್36 mins ago

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Lok sabha election-2024
Latest40 mins ago

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Darshan and Sumalatha Ambareesh
ಪ್ರಮುಖ ಸುದ್ದಿ47 mins ago

Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

Uttarakaanda Movie doodh peda diganth mirchi mallige
ಸ್ಯಾಂಡಲ್ ವುಡ್59 mins ago

Uttarakaanda Movie: ʻಉತ್ತರಕಾಂಡʼ ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್ ಈಗʻಮಿರ್ಚಿ ಮಲ್ಲಿಗೆʼ!

Shubman Gill
ಕ್ರೀಡೆ1 hour ago

Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Lok Sabha Election
ದೇಶ1 hour ago

Lok Sabha Election: ನಾಳೆ ಮೊದಲ ಹಂತದ ಮತದಾನ; ಪ್ರಜಾಪ್ರಭುತ್ವದ ಹಬ್ಬಕ್ಕೆ ಹೇಗಿದೆ ಸಿದ್ಧತೆ?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌