Financial Year End: ಈ ಹಣಕಾಸು ವರ್ಷದ ಅಂತ್ಯ ಮಾರ್ಚ್​ 31ರೊಳಗೆ ನೀವು ಮಾಡಲೇಬೇಕಾದ 5 ಕೆಲಸಗಳು ಇವು - Vistara News

ಮನಿ ಗೈಡ್

Financial Year End: ಈ ಹಣಕಾಸು ವರ್ಷದ ಅಂತ್ಯ ಮಾರ್ಚ್​ 31ರೊಳಗೆ ನೀವು ಮಾಡಲೇಬೇಕಾದ 5 ಕೆಲಸಗಳು ಇವು

ಯಾವುದೇ ಮ್ಯೂಚ್ಯುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್​ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ ಎಂದು ಸೆಬಿ (Securities and Exchange Board of India) ಸುತ್ತೋಲೆ ಹೊರಡಿಸಿದೆ.

VISTARANEWS.COM


on

Complete These 5 tasks before Financial Year End
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾರ್ಚ್​ 31 ಸಮೀಪಿಸುತ್ತಿದೆ. ಎಲ್ಲ ಹಣಕಾಸು ವ್ಯವಹಾರಗಳಿಗೂ ಇದು ನಿರ್ಣಾಯಕ ಘಟ್ಟ ಮತ್ತು ಗಡುವು. ಈ ಮಾರ್ಚ್​ 31ರೊಳಗೆ (Financial Year End) ನೀವು ಒಂದಷ್ಟು ಕಾರ್ಯಗಳನ್ನು ಮುಗಿಸಿರದೆ ಇದ್ದರೆ, ಇದು ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಅವು ಯಾವವು? ಇಲ್ಲಿದೆ ನೋಡಿ ಮಾರ್ಚ್​ 31ರೊಳಗೆ ನೀವು ಬಹುಮುಖ್ಯವಾಗಿ ಮಾಡಬೇಕಾದ ಐದು ಕೆಲಸಗಳು..

1. ಪಾನ್​ ಮತ್ತು ಆಧಾರ್ ಕಾರ್ಡ್​ ಲಿಂಕ್ ಮಾಡಿಸಿ
ಇದು ಅತ್ಯಂತ ಪ್ರಮುಖವಾಗಿ ನೀವು ಮಾಡಬೇಕಾದ ಕೆಲಸ. ನೀವಿನ್ನೂ ಆಧಾರ್ ಕಾರ್ಡ್ ಮತ್ತು ಪಾನ್​ ಕಾರ್ಡ್ ಲಿಂಕ್ ಮಾಡಿಸಿರದೆ ಇದ್ದರೆ, ಈ ಮಾರ್ಚ್​ 31ರೊಳಗೆ ಮಾಡಿಬಿಡಿ. ಹಾಗೊಮ್ಮೆ ಮಾಡದೆ ಇದ್ದರೆ ನಿಮಗೆ 1000 ರೂಪಾಯಿ ದಂಡ ಬೀಳುತ್ತದೆ ಮತ್ತು ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಮತ್ತೆ ಪಾನ್​ ಕಾರ್ಡ್​​ನ್ನು ಮರು ಸಕ್ರಿಯಗೊಳಿಸಲು 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

2. ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ
ನೀವಿನ್ನೂ ಯಾವುದೇ ರೀತಿಯ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರದೆ ಇದ್ದರೆ ಮಾರ್ಚ್​ 31ರೊಳಗೆ ಅದನ್ನು ಮಾಡಿ. ಪಿಪಿಎಫ್​, ಸುಕನ್ಯಾ ಸಮೃದ್ಧಿ ಯೋಜನೆ, ನಿಶ್ಚಿತ ಠೇವಣಿ (Fixed Deposit )ಗಳಲ್ಲಿ ಹಣ ಹೂಡಿಕೆ ಮಾಡಿ. ಈ ಮೂಲಕ ನಿಮ್ಮ ತೆರಿಗೆ ಉಳಿತಾಯದ ಲಾಭ ಪಡೆಯಿರಿ.

3. ಮ್ಯೂಚ್ಯುಯಲ್ ಫಂಡ್​ಗಳ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳಿಸಿ
ಯಾವುದೇ ಮ್ಯೂಚ್ಯುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್​ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ ಎಂದು ಸೆಬಿ (Securities and Exchange Board of India) ಸುತ್ತೋಲೆ ಹೊರಡಿಸಿದೆ. ಅದರಲ್ಲಿ ನೀವೊಮ್ಮೆ ವಿಫಲವಾದರೆ ನಿಮ್ಮ ಅಕೌಂಟ್​ ಫ್ರೀಜ್​ ಆಗುತ್ತದೆ. ಅಂದರೆ ಬ್ಯಾಂಕ್​ ನಿಮ್ಮ ಅಕೌಂಟ್​ನಿಂದ ಕೆಲವು ವ್ಯವಹಾರಗಳನ್ನು ತಡೆ ಹಿಡಿಯುತ್ತದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಹೊಸ ವರ್ಷದಲ್ಲಿ ಹಳೆ ಬಜೆಟ್, ಎಡವಟ್ಟು ಮಾಡಿದ ಗೆಹ್ಲೋಟ್

4. ಎನ್​ಎಸ್​ಇ ಮ್ಯೂಚುಯಲ್​ ಫಂಡ್​ ಪ್ಲಾಟ್​ಫಾರ್ಮ್​​ನಲ್ಲಿ ಮೊಬೈಲ್​ ನಂಬರ್​ ಮತ್ತು ಇಮೇಲ್ ಐಡಿ ದೃಢೀಕರಿಸಿ
ನ್ಯಾಷನಲ್​ ಸ್ಟಾಕ್​ ಮಾರ್ಕೆಟ್​ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ)ದ ಮ್ಯೂಚುಯಲ್​ ಫಂಡ್ ವೇದಿಕೆ (ಎನ್​ಎಫ್​ಎಂ)ನಲ್ಲಿ ನಿಮ್ಮ ಮೊಬೈಲ್​ ಸಂಖ್ಯೆ ಮತ್ತು ಇಮೇಲ್​ ಐಡಿಯನ್ನು ದೃಢೀಕರಿಸಬೇಕು. ಇದು ಮಾರ್ಚ್​ 31ರೊಳಗೆ ಆಗಬೇಕು. ಎನ್​ಎಸ್​ಇಯಲ್ಲಿ ವ್ಯವಹಾರ ಹೊಂದಿರುವವರಿಗೆ ಇದು ಅನ್ವಯ.

5. ಪಿಪಿಎಫ್​ ಅಕೌಂಟ್​​ಗೆ 500 ರೂ. ವರ್ಗಾಯಿಸಿ
ನಿಮ್ಮ ಪಿಪಿಎಫ್​ ಅಕೌಂಟ್​​ (Public Provident Fund)ಗೆ ಮಾರ್ಚ್​ 31ರೊಳಗೆ 500 ರೂಪಾಯಿ ವರ್ಗಾಯಿಸಿ. ಈ ಪಿಪಿಎಫ್​ ನಿಯಮದ ಅನುಸಾರ ಪ್ರತಿ ಹಣಕಾಸು ವರ್ಷಾಂತ್ಯದಲ್ಲಿ ಖಾತೆದಾರರು ತಮ್ಮ ಖಾತೆಗೆ 500 ರೂ.ವರ್ಗಾಯಿಸಬೇಕು. ಅದಿಲ್ಲದೆ ಹೋದರೆ ಅವರ ಪಿಪಿಎಫ್​ ಅಕೌಂಟ್​ ನಿಷ್ಕ್ರಿಯಗೊಳ್ಳುತ್ತದೆ. ನೀವು ಪಿಪಿಎಫ್​ ಅಕೌಂಟ್ ಹೊಂದಿದ್ದರೆ, ತಿಂಗಳಾಂತ್ಯದೊಳಗೆ 500 ರೂ.ಹಾಕಿಬಿಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Money Guide: ಎಫ್‌ಡಿ ಯಾವ ಬ್ಯಾಂಕ್‌ನಲ್ಲಿಟ್ಟರೆ ಉತ್ತಮ? ಬಡ್ಡಿ ದರ ಎಲ್ಲಿ, ಎಷ್ಟಿದೆ?

Money Guide: ಸ್ಥಿರ ಠೇವಣಿಗಳು ಕಡಿಮೆ ಅಪಾಯ ಹೊಂದಿರುವುದರಿಂದ ಎಲ್ಲರೂ ಇದರಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಯಾವ ಯಾವ ಬ್ಯಾಂಕ್ ಗಳು ಎಷ್ಟು ಬಡ್ಡಿ ದರಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಇದರಿಂದ ನಮ್ಮ ಹೂಡಿಕೆ ಮೇಲೆ ಹೆಚ್ಚು ಲಾಭ ಪಡೆಯಬಹುದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

Money Guide
Koo

ಕಡಿಮೆ ಅಪಾಯ ಹೊಂದಿರುವ ಸ್ಥಿರ (fixed deposit), ನಿಗದಿತ ಅವಧಿಯ ಠೇವಣಿಯಲ್ಲಿ (term deposit) ಹೂಡಿಕೆ (investment) ಮಾಡಲು (Money Guide) ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದರಲ್ಲಿ ಬಡ್ಡಿ (interest rates) ಅಷ್ಟಾಗಿ ಸಿಗದೇ ಇದ್ದರೂ ನಾವು ಹೂಡಿಕೆ ಮಾಡಿರುವ ಹಣ ಮಾತ್ರ ಸುರಕ್ಷಿತವಾಗಿ ನಿಗದಿತ ಸಮಯದಲ್ಲಿ ನಮ್ಮ ಕೈ ಸೇರುತ್ತದೆ.

ತಮ್ಮಲ್ಲಿರುವ ಹಣವನ್ನು ಹೂಡಿಕೆದಾರರು ಪೂರ್ವನಿರ್ಧರಿತ ಅವಧಿಗೆ ಸುರಕ್ಷಿತವಾಗಿ ಇಡಲು ಮತ್ತು ಆಯ್ಕೆ ಮಾಡಿದ ಅವಧಿಯ ಉದ್ದಕ್ಕೂ ಅಥವಾ ಮುಕ್ತಾಯದ ಅನಂತರ ನಿಯಮಿತ ಮಧ್ಯಂತರಗಳಲ್ಲಿ ಸ್ಥಿರ ಬಡ್ಡಿ ಪಾವತಿಗಳನ್ನು ಪಡೆಯಲು ಸ್ಥಿರ ಠೇವಣಿ ಅತ್ಯುತ್ತಮ ಆಯ್ಕೆಯಾಗಿದೆ.

ಸ್ಥಿರ ಠೇವಣಿಗೆ ವಿವಿಧ ಬ್ಯಾಂಕ್‌ಗಳು ಶೇ. 3ರಿಂದ 7.50ರಷ್ಟು ಬಡ್ಡಿ ದರಗಳನ್ನು ಪಾವತಿ ಮಾಡುತ್ತದೆ. ಇದು ಹೂಡಿಕೆಯ ಅವಧಿಯನ್ನು ಅವಲಂಬಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿ ದರವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ:Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವ ಮೊದಲು ವಿವಿಧ ಬ್ಯಾಂಕ್‌ಗಳು ನೀಡುವ ಸ್ಥಿರ ಠೇವಣಿ (ಎಫ್‌ಡಿ) ದರಗಳನ್ನು ಹೋಲಿಸುವುದು ಸೂಕ್ತ. ಇದಕ್ಕಾಗಿ ಎಫ್‌ಡಿಗಳನ್ನು ಒದಗಿಸುವ ನಾಲ್ಕು ಬ್ಯಾಂಕ್‌ಗಳ ಕುರಿತು ಮಾಹಿತಿ ಇಲ್ಲಿದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ (ಎಫ್‌ಡಿ) ಎರಡು ಕೋಟಿಗಿಂತ ಕಡಿಮೆ ಠೇವಣಿ ಹೂಡಿಕೆ ಮಾಡುವ ಗ್ರಾಹಕರಿಗೆ ಶೇ. 3ರಿಂದ 7ರವರೆಗೆ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಪಡೆಯುತ್ತಾರೆ. ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಎಫ್ ಡಿಗಳಿಗೆ ಬ್ಯಾಂಕ್ ಶೇ. 6.80ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಇದಲ್ಲದೆ, ಎರಡು ವರ್ಷಗಳಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ಠೇವಣಿ ಮಾಡುವವರಿಗೆ ಬ್ಯಾಂಕ್ ಶೇ. 7ರಷ್ಟು ಬಡ್ಡಿ ದರವನ್ನು ನೀಡುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 3.50ರಿಂದ 7.50ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ, ಸಾಮಾನ್ಯ ಹೂಡಿಕೆದಾರರಿಗೆ ಬಡ್ಡಿ ದರವು ಶೇ. 6.75ರಷ್ಟು ಇರುತ್ತದೆ. ಆದರೆ ಹಿರಿಯ ನಾಗರಿಕರು ಒಂದು ವರ್ಷದ ಯೋಜನೆಯಲ್ಲಿ ಶೇ. 7.25ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ.

ಐಸಿಐಸಿಐ ಬ್ಯಾಂಕ್ (ICICI)

5 ಕೋಟಿಗಿಂತ ಕಡಿಮೆ ಠೇವಣಿ ಮಾಡುವ ಗ್ರಾಹಕರಿಗೆ ಐಸಿಐಸಿಐ ಶೇ. 3ರಿಂದ 7.50ರಷ್ಟು ಬಡ್ಡಿ ದರಗಳನ್ನು ಒದಗಿಸುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ದರಗಳು 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಶೇ. 3.50 ರಿಂದ 7.50 ರವರೆಗೆ ಹೆಚ್ಚಳವಾಗುತ್ತದೆ. ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಶೇ. 6.70 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ (HDFC)

ಹೆಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ನಿಯಮಿತ ಹೂಡಿಕೆದಾರರು ಶೇ. 6.60 ರಷ್ಟು ಬಡ್ಡಿ ದರವನ್ನು ಪಡೆಯಬಹುದು. ಆದರೆ ಹಿರಿಯ ನಾಗರಿಕರು ಅಂತಹ ಠೇವಣಿಗಳ ಮೇಲೆ ಶೇ. 7.10 ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 3ರಿಂದ 7.75 ರಷ್ಟು ಬಡ್ಡಿದರಗಳನ್ನು ಒದಗಿಸುತ್ತದೆ. ಇದು ಮುಕ್ತಾಯದ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ.

Continue Reading

ದೇಶ

Amit shah: ಅಮಿತ್ ಶಾ ದಂಪತಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವ 10 ಕಂಪನಿಗಳಿವು!

Amit shah: ಅಮಿತ್ ಶಾ ಮತ್ತು ಅವರ ಪತ್ನಿ ಸೋನಲ್ ಶಾ ದಂಪತಿ ತಮ್ಮ ಆಸ್ತಿಯ ಶೇ. ೬೦ರಷ್ಟು ಸಂಪತ್ತನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿರುವುದಾಗಿ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಘೋಷಿಸಿದ್ದು, ಅವರ ಒಟ್ಟು ಆಸ್ತಿ ಮೌಲ್ಯ ಕಳೆದ ಐದು ವರ್ಷಗಳಲ್ಲಿ ಎಷ್ಟಾಗಿದೆ ಗೊತ್ತೇ ?

VISTARANEWS.COM


on

By

Amit shah
Koo

ನವದೆಹಲಿ: ಗೃಹ ಸಚಿವ (home minister) ಅಮಿತ್ ಶಾ (Amit shah) ಮತ್ತು ಅವರ ಪತ್ನಿ ಸೋನಾಲ್ ಶಾ (sonal shah) ಅವರು ಕಳೆದ ಐದು ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ (share market) ಹೂಡಿಕೆ (investment) ಮಾಡಿದ್ದು. ಇದು ಶೇ. 71ರಷ್ಟು ಬೆಳೆದಿದೆ. 2024ರ ಏಪ್ರಿಲ್ 15 ರ ವೇಳೆಗೆ 37.4 ಕೋಟಿ ರೂ. ಆಗಿದೆ ಎಂದು ಭಾರತೀಯ ಚುನಾವಣಾ ಆಯೋಗ (Election Commission of India) ಮಾಹಿತಿ ನೀಡಿದೆ.

ಅಮಿತ್ ಶಾ, ಪತ್ನಿ ತಮ್ಮ ಸಂಪತ್ತಿನ ಸುಮಾರು ಶೇ. 60ರಷ್ಟನ್ನು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಅವರ ದೊಡ್ಡ ಸಂಪತ್ತಾಗಿದೆ. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ ಅಫಿಡವಿಟ್‌ ನಲ್ಲಿ ಈ ಘೋಷಣೆ ಮಾಡಿದ್ದಾರೆ. ಈಕ್ವಿಟಿ ಮಾರುಕಟ್ಟೆಯ ಹೊರತಾಗಿ, ಶಾ ಮತ್ತು ಅವರ ಪತ್ನಿ ಸಣ್ಣ ಉಳಿತಾಯ ಯೋಜನೆಗಳು, ಚಿನ್ನ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಅಮಿತ್ ಶಾ ಅವರ ಒಟ್ಟು ಆಸ್ತಿಯಲ್ಲಿ ಶೇ. 57ರಷ್ಟು ಮಾತ್ರ ನಿತ್ಯದ ವ್ಯವಹಾರಗಳಿಗೆ ಹೋಗುತ್ತದೆ. ಉಳಿದವು ಆಸ್ತಿ, ಉಳಿತಾಯ ಖಾತೆ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳು, ಚಿನ್ನ ಮತ್ತು ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯಂತಹ ಯೋಜನೆಗಳಲ್ಲಿ ಹೂಡಿಕೆಯ ರೂಪದಲ್ಲಿರುತ್ತದೆ.

ಇದನ್ನೂ ಓದಿ: Lok Sabha Election: ಬಿಜೆಪಿಗೆ 350 ಸೀಟು ಖಚಿತ ಎಂದ ಖ್ಯಾತ ಅರ್ಥಶಾಸ್ತ್ರಜ್ಞ; ಅವರ ಪ್ರಿಡಿಕ್ಷನ್‌ ಹೀಗಿದೆ

ಶಾ ಮತ್ತು ಅವರ ಪತ್ನಿ ತೆಗೆದುಕೊಂಡ ಹೂಡಿಕೆ ನಿರ್ಧಾರಗಳು ಸ್ಪಷ್ಟ ಮಾದರಿಯನ್ನು ಪ್ರದರ್ಶಿಸುವುದಿಲ್ಲ. ಏಕೆಂದರೆ ಅವರ ಹೂಡಿಕೆಗಳು ಬಹು ವಲಯಗಳಲ್ಲಿ ವ್ಯಾಪಿಸಿರುವ 242 ಕಂಪೆನಿಗಳಲ್ಲಿವೆ. ಗಮನಾರ್ಹ ಅಂಶವೆಂದರೆ ಅವರು ಕೇವಲ 10 ಕಂಪನಿಗಳಲ್ಲಿ 1 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಈ ದಂಪತಿಗಳು ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಮಾಡಿದ ಒಟ್ಟು ಹೂಡಿಕೆಯ ಶೇ. 43ರಷ್ಟಿದೆ.

ಸೋನಾಲ್ ಮತ್ತು ಅಮಿತ್ ಶಾ ಅವರ ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ಸ್ಟಾಕ್‌ಗಳ ಮೇಲಿನ ಇಕ್ವಿಟಿ ಹೂಡಿಕೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ಕೇವಲ ಎರಡು ಬ್ಯಾಂಕುಗಳಾದ ಕೆನರಾ ಬ್ಯಾಂಕ್ ನಲ್ಲಿ 2.96 ಕೋಟಿ ರೂ. ಮತ್ತು ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ನಲ್ಲಿ 1.89 ಕೋಟಿ ರೂ. ಅನ್ನು ಹೂಡಿಕೆ ಮಾಡಿದ್ದಾರೆ. ಇದು ತಮ್ಮ ಸಂಪೂರ್ಣ ಷೇರು ಮಾರುಕಟ್ಟೆ ಹಂಚಿಕೆಯಲ್ಲಿ ಸುಮಾರು ಶೇ. 13ರಷ್ಟು ಹೊಂದಿವೆ. ಇದಲ್ಲದೆ ಪತಿ ಪತ್ನಿ ಇಬ್ಬರೂ ಬಂಧನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಕೆಲವು ಅಂಗಸಂಸ್ಥೆಗಳಲ್ಲಿ ಸಣ್ಣ ಹೂಡಿಕೆಗಳನ್ನು ಮಾಡಿದ್ದಾರೆ.

ಇಬ್ಬರೂ ಸೇರಿ 1 ಕೋಟಿ ರೂ. ಗಿಂತ ಹೆಚ್ಚು ಹೂಡಿಕೆ ಮಾಡಿರುವ ಕಂಪೆನಿಗಳ ಪಟ್ಟಿಯಲ್ಲಿ ಹಲವಾರು ಪ್ರಮುಖ ಎಫ್‌ಎಂಸಿಜಿ ಕಾಣಿಸಿಕೊಂಡಿದೆ ಎಂದು ಅಫಿಡವಿಟ್ ತೋರಿಸುತ್ತದೆ.

ಅವರು ಪ್ರಾಕ್ಟರ್ & ಗ್ಯಾಂಬಲ್ ಹೈಜೀನ್ ಮತ್ತು ಹೆಲ್ತ್‌ಕೇರ್ ಲಿಮಿಟೆಡ್‌ನಲ್ಲಿ 1.9 ಕೋಟಿ ರೂ , ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನಲ್ಲಿ 1.35 ಕೋಟಿ ರೂ. ಮತ್ತು ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್‌ನಲ್ಲಿ 1.07 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಒಟ್ಟಾಗಿ, ಈ ಮೂರು ಕಂಪೆನಿಗಳಲ್ಲಿ ಇಬ್ಬರೂ ತಮ್ಮ ಸ್ಟಾಕ್ ಹೂಡಿಕೆಯ ಶೇ. 12ರಷ್ಟು ಹೊಂದಿದ್ದಾರೆ.

ಇದಲ್ಲದೇ ಗುಜರಾತ್ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ 1.79 ಕೋಟಿ ರೂ., ಲಕ್ಷ್ಮಿ ಮೆಷಿನ್ ವರ್ಕ್ಸ್ ಲಿಮಿಟೆಡ್ ನಲ್ಲಿ 1.75 ಕೋಟಿ ರೂ., ಎಂಆರ್‌ಎಫ್ ಲಿಮಿಟೆಡ್ ನಲ್ಲಿ 1.29 ಕೋಟಿ ರೂ., ಭಾರ್ತಿ ಏರ್‌ಟೆಲ್ ಲಿಮಿಟೆಡ್ ನಲ್ಲಿ 1.22 ಕೋಟಿ ರೂ., ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ 1.05 ಕೋಟಿ ರೂ. ಮತ್ತು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ 1.05 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಶಾ ಮತ್ತು ಅವರ ಪತ್ನಿ ಈ ಎಲ್ಲ ಕಂಪೆನಿಗಳು 1 ಕೋಟಿ ರೂ. ಗೂ ಹೆಚ್ಚು ಹೂಡಿಕೆ ಮಾಡಿರುವ ಇತರ ಕಂಪೆನಿಗಳಾಗಿವೆ.

ಒಟ್ಟಾರೆಯಾಗಿ ಶಾ ಮತ್ತು ಅವರ ಪತ್ನಿಯವರ ಒಟ್ಟು ಆಸ್ತಿಗಳು – ಚರ ಮತ್ತು ಸ್ಥಿರ ಎರಡೂ 2024 ರಲ್ಲಿ 65.7 ಕೋಟಿ ರೂ.ಗೆ ಹೆಚ್ಚಾಗಿದೆ. 2019 ರಲ್ಲಿ ಇವರ ಒಟ್ಟು ಅಸ್ತಿ 40.3 ಕೋಟಿ ರೂ. ಗಲಾಗಿತ್ತು. ಇದು ಈ ಬಾರಿ ಶೇ. 63ರಷ್ಟು ಏರಿಕೆಯಾಗಿದೆ. ಇವರಿಬ್ಬರು ಚರ ಆಸ್ತಿಗಳಲ್ಲಿನ ಹೂಡಿಕೆಯು ಶೇ. 82ರಷ್ಟಿದ್ದು, ಸ್ಥಿರ ಆಸ್ತಿಯ ಮೌಲ್ಯವು ಐದು ವರ್ಷಗಳಲ್ಲಿ ಕೇವಲ ಶೇ. 36ರಷ್ಟು ಏರಿಕೆಯಾಗಿದೆ.

Continue Reading

ಮನಿ ಗೈಡ್

Health Insurance: ಆರೋಗ್ಯ ವಿಮೆ ಖರೀದಿಗೆ ಇನ್ನು ವಯಸ್ಸಿನ ನಿರ್ಬಂಧ ಇಲ್ಲ; ಹೊಸ ಬದಲಾವಣೆ ಏನೇನು?

Health Insurance: ಆರೋಗ್ಯ ವಿಮೆಯನ್ನು ಖರೀದಿ ಮಾಡಲು ಇಚ್ಛಿಸುವವರಿಗೆ ಗುಡ್ ನ್ಯೂಸ್ . ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ ವಿಮೆ ಖರೀದಿಗೆ ಇದ್ದ ವಯಸ್ಸಿನ ಮಿತಿ, ಕ್ಲೈಮ್ ಗಳಿಗೆ ಕಾಯುವ ಗರಿಷ್ಠ ಅವಧಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Health Insurance
Koo

ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರೂ ಹೊಸ ಆರೋಗ್ಯ ವಿಮೆಯನ್ನು (Health Insurance) ಖರೀದಿ ಮಾಡಬಹುದು. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಆರೋಗ್ಯ ವಿಮೆ ಖರೀದಿ ಮಾಡಲು ನಿಗದಿ ಪಡಿಸಿದ್ದ ವಯಸ್ಸಿನ ಮಿತಿಯನ್ನು (age limit) ತೆಗೆದುಹಾಕಿರುವುದರಿಂದ 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಆರೋಗ್ಯ ವಿಮೆಯನ್ನು ಖರೀದಿಸಲು ಸಾಧ್ಯವಾಗುತ್ತದೆ.

2024ರ ಏಪ್ರಿಲ್ 1ರಿಂದ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಕ್ಯಾನ್ಸರ್‌ನಂತಹ (cancer) ತೀವ್ರ ವೈದ್ಯಕೀಯ ಪರಿಸ್ಥಿತಿ ಹೊಂದಿರುವ ಜನರಿಗೆ ಪಾಲಿಸಿಗಳನ್ನು ನಿರಾಕರಿಸಲಾಗುತ್ತದೆ. ಆರೋಗ್ಯ ವಿಮೆಯ ಕಾಯುವ ಅವಧಿಯನ್ನು (waiting period ) 48 ತಿಂಗಳಿಂದ 36ಕ್ಕೆ ಇಳಿಸಲಾಗಿದೆ. ಈ ಪರಿಷ್ಕರಣೆಗಳನ್ನು ಎಲ್ಲಾ ಹೊಸ ನೀತಿಗಳಿಗೆ ಅನ್ವಯಿಸಲಾಗುತ್ತದೆ ಮತ್ತು ನವೀಕರಣದ ಅನಂತರ ಅಸ್ತಿತ್ವದಲ್ಲಿರುವ ನೀತಿಗಳಿಗೆ ಸಂಯೋಜಿಸಲಾಗುತ್ತದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಹೊಸ ಆರೋಗ್ಯ ವಿಮಾ ನಿಯಮಗಳು ಕಡಿಮೆ ಕಾಯುವ ಅವಧಿಗಳು ಮತ್ತು ಪಾಲಿಸಿದಾರರಿಗೆ ಸುಧಾರಿತ ಕ್ಲೈಮ್ ಸೆಟಲ್ ಮೆಂಟ್ ನಿಯಮಗಳಿಗೆ ಒತ್ತು ನೀಡಿದೆ.
ನಿರ್ಧಿಷ್ಟ ಕಾಯಿಲೆಗಳಿಗೆ ಕಾಯುವ ಅವಧಿಯನ್ನು 8 ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ. ಇದರೊಂದಿಗೆ ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಗಾಗಿ ಕಾಯುವ ಅವಧಿಯನ್ನೂ ಕಡಿಮೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಆರೋಗ್ಯ ನೀತಿಯನ್ನು ಖರೀದಿಸಲು ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: Gold Rate Today: ವೀಕೆಂಡ್‌ನಲ್ಲಿ ಬೆಲೆ ಏರಿಕೆ ಕಾಣದ ಚಿನ್ನ, ಈಗಲೇ ಖರೀದಿಸಿದರೆ ಚೆನ್ನ

ವಯಸ್ಸು ಮಿತಿಯಿಲ್ಲ

ವಿಮಾ ಕಂಪೆನಿಗಳು ಈವರೆಗೆ 65 ವರ್ಷ ವಯಸ್ಸಿನೊಳಗಿನವರಿಗೆ ಮಾತ್ರ ನಿಯಮಿತ ಆರೋಗ್ಯ ರಕ್ಷಣೆಯನ್ನು ಭರವಸೆ ನೀಡುತ್ತಿತ್ತು. ಇದೀಗ ನಿಯಮಗಳನ್ನು ಬದಲಾಯಿಸುವ ಮೂಲಕ ಆರೋಗ್ಯ ನೀತಿಯನ್ನು ಖರೀದಿಸಲು ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಲಾಗಿದೆ.

ಕಾಯುವ ಅವಧಿ ಇಳಿಕೆ

2024ರ ಮಾರ್ಚ್ 31ರ ವರೆಗಿನ ನಿಷೇಧದ ಅವಧಿಯು 8 ವರ್ಷಗಳಾಗಿತ್ತು. ಇದನ್ನು ಈಗ ಆರು ವರ್ಷಕ್ಕೆ ಇಳಿಸಲಾಗಿದೆ. ಇದರಿಂದಾಗಿ ವಿಮೆಯ ಕ್ಲೈಮ್ ಗಳಿಗೆ ವಿಮಾದಾರರು ಆರು ವರ್ಷಗಳ ಬಳಿಕ ಅರ್ಹರಾಗುತ್ತಾರೆ.
ವಂಚನೆಯ ಹೊರತಾಗಿ ವಿಮಾದಾರರ ಹಕ್ಕನ್ನು ನಿರಾಕರಿಸಲಾಗದ ಕ್ಲೈಮ್ ಮೋರಟೋರಿಯಂ ಅವಧಿಯನ್ನು 8 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದೆ. ವಿಮಾದಾರರು ಬಹಿರಂಗಪಡಿಸದೇ ಇರುವ ಅಥವಾ ತಪ್ಪಾಗಿ ನೀಡಿರುವ ಮಾಹಿತಿ ಆಧಾರದ ಮೇಲೆ ಐದು ವರ್ಷಕ್ಕೆ ಕ್ಲೈಮ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ.

60 ತಿಂಗಳ ನಿರಂತರ ಕವರೇಜ್ ಬಳಿಕ ವಿಮಾ ಕಂಪೆನಿಯು ಗ್ರಾಹಕರ ಯಾವುದೇ ಕ್ಲೈಮ್ ಅನ್ನು ಬಹಿರಂಗಪಡಿಸದಿರುವುದು ಮತ್ತು ತಪ್ಪಾಗಿ ನಿರೂಪಿಸಿದ ಆಧಾರದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು IRDAI ಹೇಳಿದ್ದು, ವಂಚನೆ ಸಾಬೀತಾದರೆ ಮಾತ್ರ ವಿಮಾದಾರನಿಗೆ ಕ್ಲೈಮ್ ಅನ್ನು ತಿರಸ್ಕರಿಸಬಹುದು.

5 ವರ್ಷಗಳ ಬಳಿಕ ತಿರಸ್ಕರಿಸಲಾಗುವುದಿಲ್ಲ

ಕಂಪೆನಿಯು ವಿಮಾದಾರನಿಗೆ ಐದು ವರ್ಷಗಳ ಬಳಿಕ ಕ್ಲೈಮ್ ನೀಡುವುದನ್ನು ತಿರಸ್ಕರಿಸುವಂತಿಲ್ಲ. ಉದಾಹರಣೆಗೆ ಪಾಲಿಸಿದಾರರು ಸತತ ಐದು ವರ್ಷಗಳವರೆಗೆ ಆರೋಗ್ಯ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸಿದ ಮೇಲೆ ವಿಮಾ ಕಂಪೆನಿಯು ಪಾಲಿಸಿದಾರರ ಕ್ಲೈಮ್ ಅನ್ನು ತಿರಸ್ಕರಿಸಲು ಸಾಧ್ಯವಿಲ್ಲ.

ಸಾಮಾನ್ಯವಾಗಿ, ವಿಮಾ ಕಂಪೆನಿಗಳು ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾದಂತಹ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಒದಗಿಸದ ಆಧಾರದ ಮೇಲೆ ಕ್ಲೈಮ್‌ಗಳನ್ನು ತಿರಸ್ಕರಿಸುತ್ತವೆ. ಪಾಲಿಸಿದಾರರು ಆಸ್ಪತ್ರೆಗೆ ದಾಖಲಾಗಲು ಬೇರೆ ಯಾವುದಾದರೂ ಕಾರಣವಾಗಿದ್ದರೂ ಸಹ. ವಿಮಾ ಕಂಪೆನಿಗಳು ಕ್ಲೈಮ್ ಅನ್ನು ತಿರಸ್ಕರಿಸುವುದಲ್ಲದೆ, ಬಹಿರಂಗಪಡಿಸದ ಕಾರಣ ಪಾಲಿಸಿಯನ್ನು ರದ್ದುಗೊಳಿಸುತ್ತವೆ.

ಯಾರಿಗೆ ಪ್ರಯೋಜನ?

ವಿಮಾದಾರರು ಈ ಹಿಂದೆ 4 ವರ್ಷಗಳವರೆಗೆ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಗೆ ವ್ಯಾಪ್ತಿಯನ್ನು ಹೊರಗಿಡಬಹುದು. ಈಗ ಕಾಯುವ ಅವಧಿಯನ್ನು ಗರಿಷ್ಠ 3 ವರ್ಷಕ್ಕೆ ಇಳಿಸಲಾಗಿದೆ. ಇದು ಹೊಸ ಪಾಲಿಸಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಅಸ್ತಿತ್ವದಲ್ಲಿರುವ ಪಾಲಿಸಿದಾರರು ಹೊಸ 3 ವರ್ಷದ ಮಿತಿಯೊಂದಿಗೆ ಹೊಂದಾಣಿಕೆ ಮಾಡಲು ನವೀಕರಣದ ಅನಂತರ ಅವರ ಕಾಯುವ ಅವಧಿಯನ್ನು ಕಡಿಮೆಗೊಳಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು.

ಉದಾಹರಣೆಗೆ ಮಧುಮೇಹವಿದ್ದರೆ ಕನಿಷ್ಟ ಮೂರು ಪ್ರೀಮಿಯಂಗಳನ್ನು ಪಾವತಿಸಿದ ಬಳಿಕ ವಿಮಾದಾರರು ಈ ಸ್ಥಿತಿಗೆ ಸಂಬಂಧಿಸಿದ ಆಸ್ಪತ್ರೆಯ ಕ್ಲೈಮ್‌ಗಳನ್ನು ಕವರ್ ಮಾಡುತ್ತಾರೆ.

ವಿಮಾದಾರರು ಐದು ವಾರ್ಷಿಕ ಪ್ರೀಮಿಯಂಗಳನ್ನು ಪಾವತಿಸಿದ್ದರೆ ಆರೋಗ್ಯ ಸ್ಥಿತಿಯನ್ನು ಮರೆಮಾಚುವ ಅಥವಾ ತಪ್ಪಾದ ಮಾಹಿತಿಯನ್ನು ಒದಗಿಸಿರುವ ಆಧಾರದ ಮೇಲೆ ಕ್ಲೈಮ್ ಅನ್ನು ಕಂಪೆನಿಗೆ ತಿರಸ್ಕರಿಸಲಾಗುವುದಿಲ್ಲ.

ಬಹುತೇಕ ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳು ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ ನಿರ್ದಿಷ್ಟ ಕಾಯುವ ಅವಧಿಯೊಂದಿಗೆ ಬರುತ್ತವೆ. ಅಂದರೆ ಕೆಲವು ನಿರ್ದಿಷ್ಟ ಕಾಯಿಲೆಯ ವ್ಯಾಪ್ತಿಯು ಕಾಯುವ ಅವಧಿಯ ಅನಂತರವೇ ಪ್ರಾರಂಭವಾಗುತ್ತದೆ. ಇಲ್ಲಿಯವರೆಗೆ ನಿಯಮಗಳು ನಾಲ್ಕು ವರ್ಷಗಳ ಕಾಯುವ ಅವಧಿಯನ್ನು ಕಡ್ಡಾಯಗೊಳಿಸಿದ್ದು, ಅದನ್ನು ಈಗ 3 ವರ್ಷಕ್ಕೆ ಇಳಿಸಲಾಗಿದೆ.

ಅನೇಕ ವಿಮಾದಾರರು 4 ಅಥವಾ 3 ವರ್ಷಗಳಿಗಿಂತಲೂ ಕಡಿಮೆ ಅವಧಿಯ ಕಾಯುವಿಕೆಯೊಂದಿಗೆ ಯೋಜನೆಗಳನ್ನು ನೀಡುತ್ತಾರೆ ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಹೊಸ ನಿಯಮವು ಈಗ ಕಡಿಮೆ ಮಿತಿಯನ್ನು ಹೊಂದಿಸಿರುವುದರಿಂದ IRDAI ನ ಈ ಕ್ರಮವು ಗರಿಷ್ಠ ಗ್ರಾಹಕರಿಗೆ ಸಹಾಯ ಮಾಡುತ್ತದೆ.

Continue Reading

ಮನಿ ಗೈಡ್

Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

Family health insurance: ಕುಟುಂಬದ ಯೋಗಕ್ಷೇಮಕ್ಕಾಗಿ ಆರೋಗ್ಯ ವಿಮೆಯನ್ನು ಆಯ್ಕೆ ಮಾಡುವ ಮುನ್ನ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು. ಇದರಿಂದ ನಮ್ಮ ಬಜೆಟ್ ಹಾಗೂ ಕುಟುಂಬಕ್ಕೆ ಪರಿಪೂರ್ಣವಾಗಿ ಹೊಂದಿಕೆಯಾಗುವ ಆರೋಗ್ಯ ವಿಮೆಯನ್ನು ನಾವು ಪಡೆದುಕೊಳ್ಳಬಹುದು.

VISTARANEWS.COM


on

By

Family health insurance
Koo

ಬೆಂಗಳೂರು: ಕುಟುಂಬದ ಆರೋಗ್ಯ ವಿಮೆಯ (Family health insurance) ಕುರಿತು ಮಾತನಾಡಿರುವ ತಜ್ಞರೊಬ್ಬರು ಕನಿಷ್ಠ 5 ಲಕ್ಷ ರೂ. ವರೆಗಿನ ಹಣಕಾಸಿನ ಭದ್ರತೆಯನ್ನು (Money Guide) ಪ್ರತಿಯೊಂದು ಕುಟುಂಬ (family) ಸದ್ಯದ ಪರಿಸ್ಥಿತಿಯಲ್ಲಿ ಹೊಂದಿರಲೇಬೇಕು ಎನ್ನುತ್ತಾರೆ. ಯಾಕೆಂದರೆ ಮೆಡಿಕಲ್ ತುರ್ತು ಪರಿಸ್ಥಿತಿಯಲ್ಲಿ (medical emergency) ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ ಇಡೀ ಕುಟುಂಬವೇ ಒಬ್ಬನ ಆರೋಗ್ಯ ವೆಚ್ಚದಿಂದಾಗಿ (Health care costs) ಬೀದಿಗೆ ಬೀಳಬೇಕಾಗುತ್ತದೆ ಎನ್ನುತ್ತಾರೆ ಅವರು.

ಇವತ್ತು ಕುಟುಂಬದ ಯೋಗಕ್ಷೇಮವನ್ನು (well-being) ಹೆಚ್ಚು ಭದ್ರ ಪಡಿಸಿಕೊಳ್ಳಬೇಕಾಗಿದೆ. ಇದು ಯಾವುದೇ ಹಣಕಾಸಿನ ಒತ್ತಡವಿಲ್ಲದೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ನಾವು ಮೊದಲೇ ಪಡೆದುಕೊಳ್ಳುವ ಖಚಿತತೆಯಾಗಿದೆ. ಕುಟುಂಬ ಆರೋಗ್ಯ ವಿಮೆಯು ಈ ನಿಟ್ಟಿನಲ್ಲಿ ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ. ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ಇದು ನಮಗೆ ರಕ್ಷಣೆ ನೀಡುತ್ತದೆ. ಆದರೆ ಆರೋಗ್ಯ ವಿಮೆ ಖರೀದಿ ವೇಳೆ ನಾವು ಪಾಕೆಟ್-ಸ್ನೇಹಿ ನೀತಿಯಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ.

ಕೈಗೆಟುಕುವ ಕುಟುಂಬ ಆರೋಗ್ಯ ವಿಮೆಯನ್ನು ಖರೀದಿಸುವ ಮುನ್ನ ಕೆಲವೊಂದು ಅಂಶಗಳನ್ನು ನಾವು ಗಮನಿಸಲೇಬೇಕು.


ಕುಟುಂಬದ ಅಗತ್ಯ ಎಷ್ಟಿದೆ?

ಕುಟುಂಬಕ್ಕಾಗಿ ವಿಮೆ ಆಯ್ಕೆಗಳನ್ನು ಪರಿಶೀಲಿಸುವ ಮೊದಲು ಕುಟುಂಬದ ಆರೋಗ್ಯ ಅಗತ್ಯತೆಗಳನ್ನು ನೋಡಿಕೊಳ್ಳಬೇಕು. ವಯಸ್ಸು, ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು, ನಿರೀಕ್ಷಿತ ಆರೋಗ್ಯ ಅಗತ್ಯತೆಗಳನ್ನು ಪರಿಗಣಿಸಿ. ಇದರಿಂದ ಕುಟುಂಬದ ನಿರ್ದಿಷ್ಟ ಸಂದರ್ಭಗಳಿಗೆ ಅನುಗುಣವಾಗಿ ಸೂಕ್ತ ವಿಮೆ ಸೌಲಭ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

ಕವರೇಜ್ ಮತ್ತು ವೆಚ್ಚದ ನಡುವೆ ಸಮತೋಲನ

ಆರೋಗ್ಯ ವಿಮೆಯಲ್ಲಿ ಸಮಗ್ರ ಕವರೇಜ್ ಎಲ್ಲರೂ ಬಯಸುತ್ತಾರೆ. ಆದರೆ ಸಾಮಾನ್ಯವಾಗಿ ಪ್ರೀಮಿಯಂನಲ್ಲಿ ಇದು ಸೇರಿರುತ್ತದೆ. ಆದರೆ ಕುಟುಂಬದ ಆರೋಗ್ಯ ರಕ್ಷಣೆಯ ಆದ್ಯತೆಗಳನ್ನು ಮೌಲ್ಯಮಾಪನ ಮಾಡಿ ಸಾಕಷ್ಟು ಕವರೇಜ್ ಮತ್ತು ಕೈಗೆಟುಕುವ ನಡುವೆ ಸಮತೋಲನವನ್ನು ಸಾಧಿಸಿ. ನಿರ್ದಿಷ್ಟ ಅಗತ್ಯಗಳಿಗಾಗಿ ಆಡ್-ಆನ್ ರೈಡರ್‌ಗಳೊಂದಿಗೆ ಅಗತ್ಯವಾದ ಕವರೇಜ್ ಅನ್ನು ಆಯ್ಕೆ ಮಾಡಿಕೊಂಡರೆ ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡು ಪಾಲಿಸಿಯನ್ನು ಸರಿಹೊಂದಿಸಲು ಸಹಾಯವಾಗುತ್ತದೆ.


ಪ್ರೀಮಿಯಂ ಮತ್ತು ಕಡಿತ

ವಿಮೆ ಪ್ರಾರಂಭವಾಗುವ ಮೊದಲು ಕಡಿತಗಳನ್ನು ಪರೀಕ್ಷಿಸಿ. ಕಡಿಮೆ ಪ್ರೀಮಿಯಂ ಎಂದು ಮಾತ್ರ ಯೋಚನೆ ಮಾಡುವುದು ಸರಿಯಲ್ಲ. ಸ್ವಲ್ಪ ಹೆಚ್ಚಿನ ಪ್ರೀಮಿಯಂ ಹೊಂದಿರುವ ಆದರೆ ಕಡಿಮೆ ಕಡಿತಗೊಳ್ಳುವ ದೀರ್ಘಾವಧಿಯಲ್ಲಿ ಹೆಚ್ಚು ವೆಚ್ಚ ಪರಿಣಾಮಕಾರಿಯಾಗಬಹುದು ಎಂದು ಸಾಬೀತಾಗುವ, ವಿಶೇಷವಾಗಿ ಆಗಾಗ್ಗೆ ಆರೋಗ್ಯದ ಅಗತ್ಯತೆಗಳನ್ನು ಹೊಂದಿಕೆಯಾಗುವ ಪ್ರೀಮಿಯಂ ಮೊತ್ತವನ್ನು ಆಯ್ದುಕೊಳ್ಳಿ.

ನೆಟ್‌ವರ್ಕ್ ಪರಿಗಣಿಸಿ

ವಿಮಾ ಯೋಜನೆಗಳು ಸಾಮಾನ್ಯವಾಗಿ ರಿಯಾಯಿತಿ ದರಗಳನ್ನು ನೀಡುವ ಆರೋಗ್ಯ ಪೂರೈಕೆದಾರರ ನೆಟ್‌ವರ್ಕ್‌ಗಳೊಂದಿಗೆ ಬರುತ್ತವೆ. ಈ ನೆಟ್‌ವರ್ಕ್‌ಗಳ ಪ್ರವೇಶಿಸುವ ಮೊದಲು ಗುಣಮಟ್ಟವನ್ನು ನೋಡಿಕೊಳ್ಳಿ. ಹತ್ತಿರದ, ಹೆಚ್ಚು ಸೌಕರ್ಯಗಳನ್ನು ಒಳಗೊಂಡಿರುವ, ಆದ್ಯತೆಯ ಆರೋಗ್ಯ ಪೂರೈಕೆದಾರರನ್ನು ಸೇರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇನ್-ನೆಟ್‌ವರ್ಕ್ ಪೂರೈಕೆದಾರರನ್ನು ಆಯ್ಕೆ ಮಾಡಿದರೆ ಓವರ್‌ಹೆಡ್‌ಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಹೆಚ್ಚುವರಿ ಪ್ರಯೋಜನ

ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚುವರಿ ಪ್ರಯೋಜನಗಳಿವೆಯೇ ಎಂಬುದನ್ನು ವಿಮೆ ಖರೀದಿಯ ಮೊದಲು ನೋಡಿ. ಕೆಲವೊಂದನ್ನು ಪ್ರೀಮಿಯಂನಲ್ಲಿ ಸೇರಿಸಬಹುದು. ಮಾತೃತ್ವ ಆರೈಕೆ, ಮಾನಸಿಕ ಆರೋಗ್ಯ ಬೆಂಬಲ ಅಥವಾ ಪರ್ಯಾಯ ಚಿಕಿತ್ಸೆಗಳನ್ನು ನಿಮ್ಮ ಪ್ರೀಮಿಯಂ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದನ್ನು ನೋಡಿಕೊಳ್ಳಿ. ಇದರ ವೆಚ್ಚ ಮತ್ತು ಆಗುವ ಲಾಭದ ಅನುಪಾತಗಳನ್ನು ಮೌಲ್ಯಮಾಪನ ಮಾಡಿಕೊಳ್ಳಿ.

ಮುನ್ನೆಚ್ಚರಿಕೆ ಕವರೇಜ್ ಇದೆಯೇ ಪರಿಶೀಲಿಸಿ

ಆರೋಗ್ಯ ಮುನ್ನೆಚ್ಚರಿಕೆಗಾಗಿ ಆರೈಕೆಗೆ ಒತ್ತು ನೀಡುವ ನಿಯಮಗಳನ್ನು ಒಳಗೊಂಡಿರುವ ವಿಮೆಯ ಮೇಲೆ ಹೂಡಿಕೆ ಮಾಡಿ. ದಿನನಿತ್ಯದ ತಪಾಸಣೆ, ವ್ಯಾಕ್ಸಿನೇಷನ್‌ ಮತ್ತು ಸ್ಕ್ರೀನಿಂಗ್‌ಗಳ ವ್ಯಾಪ್ತಿಯು ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ಶೀಘ್ರದಲ್ಲಿ ಚಿಕಿತ್ಸೆ ಪಡೆದು ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ವೆಚ್ಚದ ಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.

ಪಾವತಿ ಆಯ್ಕೆಗಳನ್ನು ಹುಡುಕಿ

ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ನೀಡುವ ವಿಮೆದಾರರನ್ನು ನೋಡಿ. ವಾರ್ಷಿಕ ಒಟ್ಟು ಮೊತ್ತದ ಪಾವತಿಗಳಿಗೆ ಹೋಲಿಸಿದರೆ ಮಾಸಿಕ ಅಥವಾ ತ್ರೈಮಾಸಿಕ ಪಾವತಿ ಬಜೆಟ್ ನಿರ್ಬಂಧಗಳೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತದೆ. ಹೆಚ್ಚುವರಿಯಾಗಿ ವೆಚ್ಚವನ್ನು ಕಡಿಮೆ ಮಾಡಿ ಉಳಿತಾಯವನ್ನು ಗರಿಷ್ಠಗೊಳಿಸಲು ವಾರ್ಷಿಕ ಪಾವತಿಗಳಿಗೆ ರಿಯಾಯಿತಿಗಳ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ.

ವಿಮಾ ಪಾಲಿಸಿ ಬಗ್ಗೆ ಸಂಶೋಧಿಸಿ

ಕುಟುಂಬಕ್ಕೆ ಸರಿಯಾದ ವಿಮಾ ಪಾಲಿಸಿಯನ್ನು ಹುಡುಕುತ್ತಿದ್ದರೆ ಸಂಪೂರ್ಣ ಸಂಶೋಧನೆಯು ಅಗತ್ಯ. ಇದಕ್ಕಾಗಿ ಆನ್‌ಲೈನ್ ನಲ್ಲಿ ನೋಡಬಹುದು. ಗೆಳೆಯರ ಶಿಫಾರಸು ಪಡೆಯಿರಿ. ಅಗತ್ಯವಿದ್ದರೆ ವಿಮಾ ಸಲಹೆಗಾರರನ್ನು ಸಂಪರ್ಕಿಸಿ. ವಿಮೆಯಲ್ಲಿರುವ ನಿಯಮಗಳು, ವ್ಯಾಪ್ತಿ ಮಿತಿಗಳು ಮತ್ತು ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಿ.


ವಿನಾಯಿತಿಗಳ ಬಗ್ಗೆ ಪರಿಶೀಲಿಸಿ

ವಿಮೆ ಖರೀದಿಯ ಮೊದಲು ಯಾವುದನ್ನೆಲ್ಲ ಇದು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಇದನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಉತ್ತಮ. ಕೆಲವೊಂದು ಹೊರಗಿಡಬಹುದಾದ ಅಥವಾ ಸೇರಿಸಿಕೊಳ್ಳಬಹುದಾದ ಸೌಕರ್ಯಗಳಿರುತ್ತವೆ. ಇದು ತುರ್ತು ಸಂದರ್ಭಗಳಲ್ಲಿ ನಿರೀಕ್ಷಿತ ವೆಚ್ಚಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಕ್ಷೇಮ ಪ್ರೋತ್ಸಾಹದ ಪ್ರಯೋಜನ ಪಡೆಯಿರಿ

ಕೆಲವು ವಿಮಾ ಪೂರೈಕೆದಾರರು ಆರೋಗ್ಯಕರ ನಡವಳಿಕೆಯನ್ನು ಪ್ರೋತ್ಸಾಹಿಸಲು ಕ್ಷೇಮ ಕಾರ್ಯಕ್ರಮಗಳು ಮತ್ತು ಪ್ರೋತ್ಸಾಹಕಗಳನ್ನು ನೀಡುತ್ತವೆ. ಇದು ಫಿಟ್‌ನೆಸ್ ಚಟುವಟಿಕೆಗಳಲ್ಲಿ ಭಾಗವಹಿಸಲು, ಧೂಮಪಾನವನ್ನು ತ್ಯಜಿಸಲು ಅಥವಾ ತಡೆಗಟ್ಟುವ ಸ್ಕ್ರೀನಿಂಗ್‌ಗಳಿಗೆ ಹಾಜರಾಗಲು ಬಹುಮಾನಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕುಟುಂಬದ ಆರೋಗ್ಯವನ್ನು ಸುಧಾರಿಸಬಹುದು. ಇದರಿಂದ ವಿಮಾ ಕಂತುಗಳನ್ನು ಸಂಭಾವ್ಯವಾಗಿ ಕಡಿಮೆ ಮಾಡಬಹುದು ಅಥವಾ ಪ್ರೋತ್ಸಾಹಕಗಳನ್ನು ಗಳಿಸಬಹುದು.

ಗುಂಪು ವಿಮಾ ಆಯ್ಕೆ

ಉದ್ಯೋಗದಾತರು, ವೃತ್ತಿಪರ ಸಂಘಗಳು ಅಥವಾ ಸಮುದಾಯ ಸಂಸ್ಥೆಗಳ ಮೂಲಕ ಗುಂಪು ವಿಮಾ ಆಯ್ಕೆಗಳನ್ನು ಅನ್ವೇಷಿಸಿ. ಗುಂಪು ವಿಮಾ ಯೋಜನೆಗಳು ಸಾಮಾನ್ಯವಾಗಿ ವೈಯಕ್ತಿಕ ನೀತಿಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ದರ ಮತ್ತು ವಿಶಾಲ ವ್ಯಾಪ್ತಿಯ ಆಯ್ಕೆಗಳನ್ನು ನೀಡುತ್ತವೆ.

ವಾರ್ಷಿಕ ನೀತಿಯಲ್ಲೇನಿದೆ ?

ಪಾಲಿಸಿಯು ಕುಟುಂಬದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಾರ್ಷಿಕವಾಗಿ ಪಾಲಿಸಿಯನ್ನು ಪರಿಶೀಲಿಸುವುದು ಅತ್ಯಗತ್ಯ. ಮದುವೆ, ಹೆರಿಗೆ ಅಥವಾ ಉದ್ಯೋಗದಲ್ಲಿನ ಬದಲಾವಣೆಗಳಂತಹ ಜೀವನದ ಬದಲಾವಣೆಗಳು ಕವರೇಜ್ ಮಟ್ಟಗಳು ಅಥವಾ ನೀತಿ ರಚನೆಗೆ ಹೊಂದಾಣಿಕೆಯಾಗುವುದನ್ನು ಈ ಸಂದರ್ಭದಲ್ಲಿ ಖಾತರಿಪಡಿಸಬಹುದು.

Continue Reading
Advertisement
Road Accident
ಉಡುಪಿ10 mins ago

Road Accident : ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು

supreme court baba ramdev IMA
ಪ್ರಮುಖ ಸುದ್ದಿ11 mins ago

Patanjali Case: ಮೊದಲು ನಿಮ್ಮನ್ನು ಸರಿಪಡಿಸಿಕೊಳ್ಳಿ: ಪತಂಜಲಿ ಪ್ರಕರಣದಲ್ಲಿ ವೈದ್ಯಕೀಯ ಸಂಘಕ್ಕೂ ಸುಪ್ರೀಂ ಚಾಟಿ

Lok Sabha Election 2024 Are you planning to visit Mysore Palace on April 26 No entry if no vote
Lok Sabha Election 202415 mins ago

Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

Murder case in hublli
ಹುಬ್ಬಳ್ಳಿ33 mins ago

Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ

Rafael Nadal
ಕ್ರೀಡೆ46 mins ago

Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

Modi in Karnataka PM Narendra Modi to visit from April 28 and 29
Lok Sabha Election 202458 mins ago

Modi in Karnataka: ಏಪ್ರಿಲ್‌ 28 – 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ; ಯಾವ ಯಾವ ಕ್ಷೇತ್ರದಲ್ಲಿ ಮತ ಬೇಟೆ?

Murder Case In Bengaluru
ಬೆಂಗಳೂರು1 hour ago

Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಅತಿಯಾದ ಸೆಕ್ಸ್‌ಗೆ ಒತ್ತಾಯಿಸಿದವಳನ್ನು ಬೆಡ್‌ ರೂಂನಲ್ಲೇ ಕೊಂದ ಯುವಕ

MDH everest spices row
ದೇಶ1 hour ago

Spices Row: ಸಿಂಗಾಪುರ, ಹಾಂಕಾಂಗ್‌ ಬಳಿಕ ಭಾರತದಲ್ಲೂ ಎವರೆಸ್ಟ್, ಎಂಡಿಎಚ್‌ ಮಸಾಲೆ ಪರಿಶೀಲನೆ ಶುರು

Narendra Modi and Siddaramaiah
ರಾಜಕೀಯ2 hours ago

Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

Gukesh D
ಕ್ರೀಡೆ2 hours ago

Gukesh D: ಡಿ.ಗುಕೇಶ್‌ ಸಾಧನೆಗಾಗಿ ವೈದ್ಯ ವೃತ್ತಿಯನ್ನೇ ತೊರೆದಿದ್ದ ತಂದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು21 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ22 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌