Financial Year End: ಈ ಹಣಕಾಸು ವರ್ಷದ ಅಂತ್ಯ ಮಾರ್ಚ್​ 31ರೊಳಗೆ ನೀವು ಮಾಡಲೇಬೇಕಾದ 5 ಕೆಲಸಗಳು ಇವು Vistara News
Connect with us

ಮನಿ ಗೈಡ್

Financial Year End: ಈ ಹಣಕಾಸು ವರ್ಷದ ಅಂತ್ಯ ಮಾರ್ಚ್​ 31ರೊಳಗೆ ನೀವು ಮಾಡಲೇಬೇಕಾದ 5 ಕೆಲಸಗಳು ಇವು

ಯಾವುದೇ ಮ್ಯೂಚ್ಯುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್​ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ ಎಂದು ಸೆಬಿ (Securities and Exchange Board of India) ಸುತ್ತೋಲೆ ಹೊರಡಿಸಿದೆ.

VISTARANEWS.COM


on

Complete These 5 tasks before Financial Year End
Koo

ಮಾರ್ಚ್​ 31 ಸಮೀಪಿಸುತ್ತಿದೆ. ಎಲ್ಲ ಹಣಕಾಸು ವ್ಯವಹಾರಗಳಿಗೂ ಇದು ನಿರ್ಣಾಯಕ ಘಟ್ಟ ಮತ್ತು ಗಡುವು. ಈ ಮಾರ್ಚ್​ 31ರೊಳಗೆ (Financial Year End) ನೀವು ಒಂದಷ್ಟು ಕಾರ್ಯಗಳನ್ನು ಮುಗಿಸಿರದೆ ಇದ್ದರೆ, ಇದು ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಅವು ಯಾವವು? ಇಲ್ಲಿದೆ ನೋಡಿ ಮಾರ್ಚ್​ 31ರೊಳಗೆ ನೀವು ಬಹುಮುಖ್ಯವಾಗಿ ಮಾಡಬೇಕಾದ ಐದು ಕೆಲಸಗಳು..

1. ಪಾನ್​ ಮತ್ತು ಆಧಾರ್ ಕಾರ್ಡ್​ ಲಿಂಕ್ ಮಾಡಿಸಿ
ಇದು ಅತ್ಯಂತ ಪ್ರಮುಖವಾಗಿ ನೀವು ಮಾಡಬೇಕಾದ ಕೆಲಸ. ನೀವಿನ್ನೂ ಆಧಾರ್ ಕಾರ್ಡ್ ಮತ್ತು ಪಾನ್​ ಕಾರ್ಡ್ ಲಿಂಕ್ ಮಾಡಿಸಿರದೆ ಇದ್ದರೆ, ಈ ಮಾರ್ಚ್​ 31ರೊಳಗೆ ಮಾಡಿಬಿಡಿ. ಹಾಗೊಮ್ಮೆ ಮಾಡದೆ ಇದ್ದರೆ ನಿಮಗೆ 1000 ರೂಪಾಯಿ ದಂಡ ಬೀಳುತ್ತದೆ ಮತ್ತು ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಮತ್ತೆ ಪಾನ್​ ಕಾರ್ಡ್​​ನ್ನು ಮರು ಸಕ್ರಿಯಗೊಳಿಸಲು 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

2. ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ
ನೀವಿನ್ನೂ ಯಾವುದೇ ರೀತಿಯ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರದೆ ಇದ್ದರೆ ಮಾರ್ಚ್​ 31ರೊಳಗೆ ಅದನ್ನು ಮಾಡಿ. ಪಿಪಿಎಫ್​, ಸುಕನ್ಯಾ ಸಮೃದ್ಧಿ ಯೋಜನೆ, ನಿಶ್ಚಿತ ಠೇವಣಿ (Fixed Deposit )ಗಳಲ್ಲಿ ಹಣ ಹೂಡಿಕೆ ಮಾಡಿ. ಈ ಮೂಲಕ ನಿಮ್ಮ ತೆರಿಗೆ ಉಳಿತಾಯದ ಲಾಭ ಪಡೆಯಿರಿ.

3. ಮ್ಯೂಚ್ಯುಯಲ್ ಫಂಡ್​ಗಳ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳಿಸಿ
ಯಾವುದೇ ಮ್ಯೂಚ್ಯುಯಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್​ 31ರೊಳಗೆ ಅದರ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿರುವುದು ಕಡ್ಡಾಯ ಎಂದು ಸೆಬಿ (Securities and Exchange Board of India) ಸುತ್ತೋಲೆ ಹೊರಡಿಸಿದೆ. ಅದರಲ್ಲಿ ನೀವೊಮ್ಮೆ ವಿಫಲವಾದರೆ ನಿಮ್ಮ ಅಕೌಂಟ್​ ಫ್ರೀಜ್​ ಆಗುತ್ತದೆ. ಅಂದರೆ ಬ್ಯಾಂಕ್​ ನಿಮ್ಮ ಅಕೌಂಟ್​ನಿಂದ ಕೆಲವು ವ್ಯವಹಾರಗಳನ್ನು ತಡೆ ಹಿಡಿಯುತ್ತದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಹೊಸ ವರ್ಷದಲ್ಲಿ ಹಳೆ ಬಜೆಟ್, ಎಡವಟ್ಟು ಮಾಡಿದ ಗೆಹ್ಲೋಟ್

4. ಎನ್​ಎಸ್​ಇ ಮ್ಯೂಚುಯಲ್​ ಫಂಡ್​ ಪ್ಲಾಟ್​ಫಾರ್ಮ್​​ನಲ್ಲಿ ಮೊಬೈಲ್​ ನಂಬರ್​ ಮತ್ತು ಇಮೇಲ್ ಐಡಿ ದೃಢೀಕರಿಸಿ
ನ್ಯಾಷನಲ್​ ಸ್ಟಾಕ್​ ಮಾರ್ಕೆಟ್​ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ)ದ ಮ್ಯೂಚುಯಲ್​ ಫಂಡ್ ವೇದಿಕೆ (ಎನ್​ಎಫ್​ಎಂ)ನಲ್ಲಿ ನಿಮ್ಮ ಮೊಬೈಲ್​ ಸಂಖ್ಯೆ ಮತ್ತು ಇಮೇಲ್​ ಐಡಿಯನ್ನು ದೃಢೀಕರಿಸಬೇಕು. ಇದು ಮಾರ್ಚ್​ 31ರೊಳಗೆ ಆಗಬೇಕು. ಎನ್​ಎಸ್​ಇಯಲ್ಲಿ ವ್ಯವಹಾರ ಹೊಂದಿರುವವರಿಗೆ ಇದು ಅನ್ವಯ.

5. ಪಿಪಿಎಫ್​ ಅಕೌಂಟ್​​ಗೆ 500 ರೂ. ವರ್ಗಾಯಿಸಿ
ನಿಮ್ಮ ಪಿಪಿಎಫ್​ ಅಕೌಂಟ್​​ (Public Provident Fund)ಗೆ ಮಾರ್ಚ್​ 31ರೊಳಗೆ 500 ರೂಪಾಯಿ ವರ್ಗಾಯಿಸಿ. ಈ ಪಿಪಿಎಫ್​ ನಿಯಮದ ಅನುಸಾರ ಪ್ರತಿ ಹಣಕಾಸು ವರ್ಷಾಂತ್ಯದಲ್ಲಿ ಖಾತೆದಾರರು ತಮ್ಮ ಖಾತೆಗೆ 500 ರೂ.ವರ್ಗಾಯಿಸಬೇಕು. ಅದಿಲ್ಲದೆ ಹೋದರೆ ಅವರ ಪಿಪಿಎಫ್​ ಅಕೌಂಟ್​ ನಿಷ್ಕ್ರಿಯಗೊಳ್ಳುತ್ತದೆ. ನೀವು ಪಿಪಿಎಫ್​ ಅಕೌಂಟ್ ಹೊಂದಿದ್ದರೆ, ತಿಂಗಳಾಂತ್ಯದೊಳಗೆ 500 ರೂ.ಹಾಕಿಬಿಡಿ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

Small savings schemes : ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಸಂಭವ

ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸುವ ಸಾಧ್ಯತೆ ಇದೆ. ಸರ್ಕಾರಿ ಬಾಂಡ್‌ಗಳ ಆದಾಯದಲ್ಲಿ ಇತ್ತೀಚಿನ ಏರಿಕೆ ಇದಕ್ಕೆ ಪುಷ್ಟಿ ( Small savings schemes) ನೀಡಿದೆ.

VISTARANEWS.COM


on

Edited by

cash
Koo

ನವ ದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು (Small savings schemes) ಏರಿಸುವ ಸಾಧ್ಯತೆ ಇದೆ. 2023ರ ಏಪ್ರಿಲ್-ಜೂನ್‌ ಅವಧಿಯ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಕಳೆದ 6 ತಿಂಗಳುಗಳಲ್ಲಿ ಇವುಗಳ ಬಡ್ಡಿ ದರದಲ್ಲಿ 0.30%ರಿಂದ 1.40% ತನಕ ಏರಿಕೆಯಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಸರಕಾರಿ ಸಾಲಪತ್ರಗಳಲ್ಲಿ ಸಿಗುವ ಆದಾಯದ ಆಧಾರದಲ್ಲಿ ನಿಗದಿಪಡಿಸುತ್ತದೆ. ಐದು ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳ ಆದಾಯ 0.30% ಏರಿಕೆಯಾಗಿದ್ದು, 10 ವರ್ಷ ಅವಧಿಯ ಬಾಂಡ್‌ ಆದಾಯ 0.20% ಏರಿಕೆಯಾಗಿದೆ.

ಸಣ್ಣ ಉಳಿತಾಯ ಯೋಜನೆಜನವರಿ-ಮಾರ್ಚ್ ಅವಧಿಗೆ ಬಡ್ಡಿ ದರ
‌ಉಳಿತಾಯ ಠೇವಣಿ4.0%
1 ವರ್ಷದ ಟೈಮ್‌ ಡಿಪಾಸಿಟ್6.6%
‌2 ವರ್ಷದ ಟೈಮ್‌ ಡಿಪಾಸಿಟ್6.8%
‌3 ವರ್ಷದ ಟೈಮ್‌ ಡಿಪಾಸಿಟ್6.9%
‌5 ವರ್ಷದ ಟೈಮ್‌ ಡಿಪಾಸಿಟ್7.0%
‌5 ವರ್ಷದ ರಿಕರಿಂಗ್‌ ಡಿಪಾಸಿಟ್7.0%
ಹಿರಿಯ ನಾಗರಿಕರ ಉಳಿತಾಯ ಯೋಜನೆ8.0%
ಮಾಸಿಕ ಆದಾಯ ಖಾತೆ7.1%
ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್7.0%
ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆ7.1%
ಕಿಸಾನ್‌ ವಿಕಾಸ್‌ ಪತ್ರ7.2%
ಸುಕನ್ಯಾ ಸಮೃದ್ಧಿ ಖಾತೆ ಯೋಜನೆ7.6%

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಸರ್ಕಾರಿ ಬಾಂಡ್‌ಗಳ ಆದಾಯ ಇಳಿಕೆಯಾಗಿತ್ತು. ಇದರ ಪರಿಣಾಮ ಸಣ್ಣ ಉಳಿತಾಯ ಯೋಜನೆಗಖ ಬಡ್ಡಿ ದರ ಕುಸಿದಿತ್ತು. ಆದರೆ ಆರ್‌ಬಿಐ ರೆಪೊ ದರ ಏರಿಕೆಯ ಬಳಿಕ ಬ್ಯಾಂಕ್‌ಗಳು ಠೇವಣಿ ಬಡ್ಡಿ ದರಗಳನ್ನು ಏರಿಸಿವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಏರಿಕೆಯಾಗುವ ನಿರೀಕ್ಷೆ ಉಂಟಾಗಿದೆ.

Continue Reading

ಪ್ರಮುಖ ಸುದ್ದಿ

PAN-Aadhaar linking : ಪ್ಯಾನ್‌ -ಆಧಾರ್‌ ಮಾತ್ರವಲ್ಲ, ಈ ಹಣಕಾಸು ವಿಚಾರಗಳಿಗೂ ಗಡುವು ವಿಸ್ತರಣೆ

ಪ್ಯಾನ್‌ – ಆಧಾರ್‌ ಮಾತ್ರವಲ್ಲದೆ, ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌, ಟ್ರೇಡಿಂಗ್‌ ಖಾತೆಗೆ ನಾಮಿನಿ ( PAN-Aadhaar linking) ಹೆಸರಿಸಲು ನಿಗದಿಯಾಗಿದ್ದ ಗಡುವನ್ನು ಮುಂದೂಡಲಾಗಿದೆ. ವಿವರ ಇಲ್ಲಿದೆ.

VISTARANEWS.COM


on

Edited by

Demat account
Koo

ಪ್ಯಾನ್ -ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು (PAN-Aadhaar linking deadline) ನಿಗದಿಯಾಗಿದ್ದ 2023ರ ಮಾರ್ಚ್‌ 31ರ ಗಡುವನ್ನು ಜೂನ್‌ 30ಕ್ಕೆ ವಿಸ್ತರಿಸಲಾಗಿದೆ. ಆದರೆ ಇದೊಂದೇ ಅಲ್ಲದೆ, ಇನ್ನೂ ಕೆಲವು ಹಣಕಾಸು ವಿಷಯಗಳ ಗಡುವನ್ನು ವಿಸ್ತರಿಸಲಾಗಿದೆ. ವಿವರ ಇಂತಿದೆ.

ಉದಾಹರಣೆಗೆ ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವು 2023ರ ಮಾರ್ಚ್‌ 31ರಿಂದ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ. ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ನಾಮಿನೇಶನ್‌ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್‌, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.

2022ರ ಜೂನ್‌ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ನಾಮಿನೇಶನ್‌ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್‌ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್‌ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ.

ನಾಮಿನೇಶನ್‌ ಏಕೆ? ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್‌ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್‌ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್‌ ಫಂಡ್‌ ಸಂಸ್ಥೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಮ್ಯೂಚುವಲ್‌ ಫಂಡ್‌ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ?

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ನಾಮಿನೇಶನ್‌ ಅರ್ಜಿಯನ್ನು ಮೊದಲು ಭರ್ತಿಗೊಳಿಸಬೇಕು. ಸಹಿ ಹಾಕಬೇಕು, ಬಳಿಕ ಮ್ಯೂಚುವಲ್‌ ಫಂಡ್‌ ಕಂಪನಿಗೆ ಅಥವಾ ನೋಂದಾಯಿತ ಏಜೆನ್ಸಿಗೆ ರವಾನಿಸಬೇಕು. ಆನ್‌ಲೈನ್‌ ಮೂಲಕವೂ ನಾಮಿನಿಯನ್ನು ಸೇರಿಸಬಹುದು.

ಡಿಮ್ಯಾಟ್‌, ಟ್ರೇಡಿಂಗ್‌ ಖಾತೆಗೆ ನಾಮಿನಿ ಸೇರಿಸಲು ಗಡುವು ವಿಸ್ತರಣೆ:

ಮಾರುಕಟ್ಟೆ ನಿಯಂತ್ರಕ ಸೆಬಿಯು ಡಿಮ್ಯಾಟ್‌ ಮತ್ತು ಟ್ರೇಡಿಂಗ್‌ ಖಾತೆಗೆ ನಾಮಿನಿಯನ್ನು ಸೇರಿಸಲು ಗಡುವನ್ನು 2023ರ ಸೆಪ್ಟೆಂಬರ್‌ 30 ತನಕ ವಿಸ್ತರಿಸಿದೆ.

ಡಿಮ್ಯಾಟ್‌ ಖಾತೆಗೆ ನಾಮಿನಿಯನ್ನು ಸೇರಿಸುವ ವಿಧಾನ:

ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಡಿಮ್ಯಾಟ್‌ ಖಾತೆಗೆ ನಾಮಿನಿಯನ್ನು ಸೇರಿಸಬಹುದು. ಡಿಮ್ಯಾಟ್‌ ಖಾತೆಯನ್ನು ತೆರೆದು ಪ್ರೊಫೈಲ್‌ ಸೆಗ್ಮೆಂಟ್‌ಗೆ (Profile Segment) ತೆರಳಬೇಕು.

ಡಿಮ್ಯಾಟ್‌ ಅಕೌಂಟ್‌ಗೆ ಲಾಗಿನ್‌ ಆದ ಬಳಿಕ Add Nominee ಅಥವಾ Opt-out ಆಯ್ಕೆ ಮಾಡಿಕೊಳ್ಳಿ.

ವಿವರಗಳನ್ನು ಭರ್ತಿಗೊಳಿಸಿ, ಐಡಿ ಪ್ರೂಫ್‌ ಸಲ್ಲಿಸಿ.

ಆಧಾರ್‌ ಒಟಿಪಿ ಮೂಲಕ ಇ-ಸೈನ್‌ ಪ್ರಕ್ರಿಯೆ ಪೂರ್ಣಗೊಳಿಸಿ. ನಾಮಿನಿಯ ವಿವರಗಳನ್ನು ನಮೂದಿಸಿ.

Continue Reading

ಪ್ರಮುಖ ಸುದ್ದಿ

PPF Investment : ಪಿಪಿಎಫ್‌ ಸೇರಿ ಸಣ್ಣ ಉಳಿತಾಯ ಹೂಡಿಕೆಗಳ ನಿಯಮ ಸಡಿಲ, ಪ್ಯಾನ್‌ ಬದಲಿಗೆ ಆಧಾರ್‌ ಬಳಕೆ ಶೀಘ್ರ

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ, ಪ್ಯಾನ್‌ ಬದಲಿಗೆ ಆಧಾರ್‌ ಬಳಕೆಗೆ ಅನುಮತಿ ನೀಡುವುದರಿಂದ, ಗ್ರಾಮೀಣ ಭಾಗದಲ್ಲಿ ಹೂಡಿಕೆ ಹೆಚ್ಚಳವಾಗುವ (PPF Investment) ನಿರೀಕ್ಷೆ ಉಂಟಾಗಿದೆ.

VISTARANEWS.COM


on

Edited by

small savings
Koo

ನವ ದೆಹಲಿ: ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳಲ್ಲಿನ (PPF Investment ) ಹೂಡಿಕೆ ಕುರಿತ ಕೆವೈಸಿ (KYC) ನಿಯಮಾವಳಿಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಪ್ಯಾನ್‌ ಬದಲಿಗೆ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿಟ್ಟುಕೊಂಡು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. (small savings schemes)

ಕೆವೈಸಿ ನಿಯಮ ಸಡಿಲಗೊಳಿಸುವ ಭಾಗವಾಗಿ ಮೂರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ಪ್ಯಾನ್‌ ಕಾರ್ಡ್‌ ಬದಲು ಆಧಾರ್‌ ಬಳಸಿಯೂ ಹೂಡಿಕೆಯನ್ನು ಮಾಡಬಹುದು. ಏಕೆಂದರೆ ಭಾರತದಲ್ಲಿ ಪ್ಯಾನ್‌ ಕಾರ್ಡ್‌ ಬಳಕೆದಾರರಿಗಿಂತ ಹೆಚ್ಚು ಆಧಾರ್‌ ಕಾರ್ಡ್‌ದಾರರು ಇದ್ದಾರೆ. ಈ ನೀತಿ ಸಡಿಲಗೊಳಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಠೇವಣಿಗಳು ಲಭಿಸುವ ಸಾಧ್ಯತೆ ಇದೆ.

ಎರಡನೆಯದಾಗಿ ಯಾವುದೇ ವಿವಾದ ಇಲ್ಲದೆ ಮೃತಪಟ್ಟಿರುವ ಠೇವಣಿದಾರರ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ಸರಾಗವಾಗಿ ಹಸ್ತಾಂತರಿಸಲು ಪ್ರಕ್ರಿಯೆ ಸುಗಮವಾಗಲಿದೆ. ಮೂರನೆಯದಾಗಿ ನಾಮಿನೇಶನ್‌ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ (National small savings fund) ಹೂಡಿಕೆಯ ಹರಿವು ಹೆಚ್ಚಲಿದೆ. ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾಸಮೃದ್ಧಿ, ಎನ್‌ಎಸ್‌ಸಿ ಇತ್ಯಾದಿಗಳು ಸಣ್ಣ ಉಳಿತಾಯ ಯೋಜನೆಗಳಾಗಿವೆ.

Continue Reading

ಪ್ರಮುಖ ಸುದ್ದಿ

PAN-Aadhaar Link : ಈಗ ಪ್ಯಾನ್-ಆಧಾರ್‌ ಲಿಂಕ್‌ ಮಾಡಲು ಎಷ್ಟು ದಂಡ ನೀಡಬೇಕು?

ಪ್ಯಾನ್ – ಆಧಾರ್‌ ಲಿಂಕ್‌ ಮಾಡಲು 2023ರ ಜೂನ್‌ 30 ತನಕ ಗಡುವನ್ನು ವಿಸ್ತರಿಸಲಾಗಿದೆ. (PAN-Aadhaar Link) ಆದರೆ 1000 ರೂ.ಗಳ ದಂಡ ಮುಂದುವರಿದಿದೆ.

VISTARANEWS.COM


on

Edited by

Pan Aadhaar link
Koo

ಕೇಂದ್ರ ಸರ್ಕಾರವು ಪ್ಯಾನ್‌ ಮತ್ತು ಆಧಾರ್‌ ಲಿಂಕ್‌ ಮಾಡುವ ವಿಚಾರದಲ್ಲಿ ಗಡುವನ್ನು 2023ರ ಜೂನ್‌ 30ಕ್ಕೆ ವಿಸ್ತರಿಸಿದೆ. ಹೀಗಿದ್ದರೂ, ಈ ಎರಡು ದಾಖಲೆಗಳನ್ನು ಲಿಂಕ್‌ ಮಾಡಲು ದಂಡವನ್ನು ಕಟ್ಟಬೇಕಾಗುತ್ತದೆ. 2022ರ ಮಾರ್ಚ್‌ 31 ತನಕ ಪ್ಯಾನ್- ಆಧಾರ್‌ ಲಿಂಕ್‌ ಉಚಿತವಾಗಿತ್ತು. (PAN-Aadhaar Link) ಬಳಿಕ ಸರ್ಕಾರ 2023ರ ಮಾರ್ಚ್‌ 31 ತನಕ, ಅಂದರೆ ಒಂದು ವರ್ಷ ವಿಸ್ತರಿಸಿತು. ಆದರೆ 1,000 ರೂ. ದಂಡವನ್ನೂ ವಿಧಿಸಿತು. ಈಗ ದಂಡವನ್ನು ಮುಂದುವರಿಸಲಾಗಿದೆ.

1,000 ರೂ. ದಂಡ:

ನೀವು ಹೊಸತಾಗಿ ಪ್ಯಾನ್‌ ಕಾರ್ಡ್‌ ಮಾಡಬಹುದು. ಇದಕ್ಕಾಗಿ 1,000 ರೂ. ದಂಡ ನೀಡಬೇಕಾಗಿಲ್ಲ. ಆದರೆ ಈಗಾಗಲೇ ಪ್ಯಾನ್‌ ಕಾರ್ಡನ್ನು ಬ್ಯಾಂಕ್‌, ಐಟಿ ರಿಟರ್ನ್ಸ್‌ ಇತ್ಯಾದಿಗೆ ಬಳಸಿದ್ದರೆ, ಹೊಸ ಪ್ಯಾನ್‌ ಕಾರ್ಡ್‌ ಮಾಡುವುದು ಸೂಕ್ತವಲ್ಲ. ಆದ್ದರಿಂದ 1,000 ರೂ. ದಂಡವನ್ನು ಕೊಟ್ಟು ಪ್ಯಾನ್ – ಆಧಾರ್‌ ಲಿಂಕ್‌ ಮಾಡುವುದು ಉತ್ತಮ ಎನ್ನುತ್ತಾರೆ ಬೆಂಗಳೂರಿನ ಚಾರ್ಟರ್ಡ್‌ ಅಕೌಂಟೆಂಟ್‌ ವಿಜಯ್‌ ಸಾಗರ್‌ ಶೆಣೈ. (PAN-Aadhaar Linking)‌ 2023ರ ಜೂನ್‌ 30 ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡದಿದ್ದರೆ ನಿಷ್ಕ್ರಿಯ ಎನ್ನಿಸಲಿದೆ. ನಿಷ್ಕ್ರಿಯ ಪ್ಯಾನ್‌ ಕಾರ್ಡ್‌ ಅನ್ನು 1,000 ರೂ. ಶುಲ್ಕ ಕೊಟ್ಟು 30 ದಿನಗಳೊಳಗೆ ಸಕ್ರಿಯಗೊಳಿಸಬಹುದು.

SMS ಮೂಲಕ PAN ಮತ್ತು Aadhaar ಲಿಂಕ್‌ ಮಾಡುವುದು ಹೇಗೆ?

1. UIDPAN < 12- ಅಂಕಿಗಳ ಆಧಾರ್ ><10- ಅಂಕಿಗಳ ಪ್ಯಾನ್‌ >

2. ಈ ಎಸ್ಸೆಮ್ಮೆಸ್‌ ಅನ್ನು ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆ ಬಳಸಿ, 56161 ಅಥವಾ 567678 ಕ್ಕೆ ಕಳಿಸಿ.

ಪ್ಯಾನ್-ಆಧಾರ್‌ ಲಿಂಕ್‌ ಹೇಗೆ?

  • ಆದಾಯ ತೆರಿಗೆ ಇಲಾಖೆಯು ಪ್ಯಾನ್‌ ಅನ್ನು ಆಧಾರ್‌ ಜತೆಗೆ ಲಿಂಕ್‌ ಮಾಡಲು ಹಲವು ವಿಧಾನಗಳನ್ನು ಕಲ್ಪಿಸಿದೆ.
  • ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಪೋರ್ಟಲ್‌  https://incometaxindiaefiling.gov.in ಮೂಲಕ ಲಿಂಕ್‌ ಮಾಡಬಹುದು.
  • ಈ ವೆಬ್‌ ಸೈಟ್‌ನಲ್ಲಿ (www.incometax.gov.in) ರಿಜಿಸ್ಟರ್‌ ಆಗದಿದ್ದಲ್ಲಿ ರಿಜಿಸ್ಟರ್‌ ಆಗಿ. ನಿಮ್ಮ ಪ್ಯಾನ್‌ ನಂಬರ್‌ ಯೂಸರ್‌ ಐಡಿ ಆಗಿರುತ್ತದೆ. ಜನ್ಮ ದಿನಾಂಕ ಪಾಸ್‌ ವರ್ಡ್‌ ಆಗಿರುತ್ತದೆ.
  • ಲಾಗಿನ್‌ ಆದ ಬಳಿಕ ಪೇಜ್‌ನಲ್ಲಿ ಲಿಂಕ್‌ ಯುವರ್‌ ಪ್ಯಾನ್‌ ವಿತ್‌ ಆಧಾರ್‌ ಲಭಿಸುತ್ತದೆ. ಸಿಗದಿದ್ದರೆ ಪ್ರೊಫೈಲ್‌ ಸೆಟ್ಟಿಂಗ್ಸ್‌ಗೆ ಹೋಗಿ ಲಿಂಕ್‌ ಆಧಾರ್‌ ಮೇಲೆ ಕ್ಲಿಕ್ಕಿಸಿ.
  • ಪ್ಯಾನ್‌ ವಿವರಗಳನ್ನು ಪರಿಶೀಲಿಸಿ. ಹೊಂದಾಣಿಕೆ ಆಗದಿದ್ದರೆ ಸರಿಪಡಿಸಬೇಕಾಗುತ್ತದೆ. ಹೊಂದಾಣಿಕೆ ಆಗುವುದಿದ್ದರೆ ಲಿಂಕ್‌ ನೌ ಬಟನ್‌ ಒತ್ತಿರಿ.
  • ಯಶಸ್ವಿಯಾಗಿ ಲಿಂಕ್‌ ಆದ ಬಳಿಕ ಮೆಸೇಜ್‌ ಸಿಗುತ್ತದೆ.
  • NSDL/UTIIL ಕಚೇರಿಗೆ ತೆರಳಿ ಪ್ಯಾನ್- ಆಧಾರ್‌ ಲಿಂಕ್‌ ಮಾಡಬಹುದು.
  • ಪ್ಯಾನ್ -ಆಧಾರ್‌ ಲಿಂಕ್‌ ಮಾಡಲು ಗಡುವು ತಪ್ಪಿದರೆ ಬಳಿಕ ಪ್ಯಾನ್‌ ನಿಷ್ಕ್ರಿಯ ಎನ್ನಿಸುವುದು.

ಯಾರು ಆಧಾರ್-ಪ್ಯಾನ್‌ ಲಿಂಕ್‌ ಮಾಡಬೇಕು?

ಆದಾಯ ತೆರಿಗೆ ಕಾಯಿದೆಯ 139ಎಎ ಸೆಕ್ಷನ್‌ ಪ್ರಕಾರ 2017ರ ಜುಲೈ1ಕ್ಕೆ ಹಾಗೂ ಬಳಿಕ ಪ್ಯಾನ್‌ ಕಾರ್ಡ್‌ ಗಳಿಸಿದ ಪ್ರತಿಯೊಬ್ಬರೂ ಆಧಾರ್-ಪ್ಯಾನ್‌ ಲಿಂಕ್‌ ಮಾಡಬೇಕು. ಆದರೆ ಇಲ್ಲಿ ಕೆಲವರಿಗೆ ಇದು ಕಡ್ಡಾಯವಲ್ಲ. ಈ ವಿನಾಯಿತಿಯು ಅಸ್ಸಾಂ, ಜಮ್ಮು ಕಾಶ್ಮೀರ, ಮೇಘಾಲಯದ ನಿವಾಸಿಗಳಿಗೆ ಅನ್ವಯವಾಗುತ್ತದೆ. ಭಾರತದ ನಾಗರಿಕರಲ್ಲದವರು, 80 ವರ್ಷ ಮೀರಿದವರು ವಿನಾಯಿತಿ ಪಡೆದಿದ್ದಾರೆ.

Continue Reading
Advertisement
Modi With Kharge
ಅಂಕಣ4 mins ago

ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು

ಆರೋಗ್ಯ5 mins ago

New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್!‌ ಭಾರತದಲ್ಲೇ ಮೊದಲ ಕೇಸ್‌!

ವೈರಲ್ ನ್ಯೂಸ್9 mins ago

Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್‌ ಆಗ್ತಿದೆ ಈತನ ಕೆಲಸ

Boys death
ಕರ್ನಾಟಕ15 mins ago

Mysterious death : ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ

6 die of suffocation in Delhi After Due to mosquito coil
ದೇಶ36 mins ago

ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ

Gas tragedy
ಕರ್ನಾಟಕ37 mins ago

Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

Dakshina Kannada District 1st PUC result 2023 declared; here how to check
ಶಿಕ್ಷಣ56 mins ago

1st PUC Result 2023 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

Producer K Manju from Padmanabha Nagar assembly constituency Entry into the political arena
ರಾಜಕೀಯ58 mins ago

K. Manju: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನಿರ್ಮಾಪಕ ಕೆ ಮಂಜು? ರಾಜಕೀಯ ಅಖಾಡಕ್ಕೆ ಎಂಟ್ರಿ?

is State is Impotent? why did stop hate speech, asks supreme Court
ಕೋರ್ಟ್1 hour ago

Supreme Court: ದ್ವೇಷ ಭಾಷಣ ತಡೆಗೆ ಸರ್ಕಾರಕ್ಕೆ ಶಕ್ತಿ ಇಲ್ಲವೇ?: ಕೇಂದ್ರ ವಿರುದ್ಧ ಸುಪ್ರೀಂ ಕೋರ್ಟ್ ಗರಂ

karnataka election AT Ramaswamy and NY Gopalakrishna resigns
ಕರ್ನಾಟಕ1 hour ago

Karnataka Election: ಜೆಡಿಎಸ್‌, ಬಿಜೆಪಿಯ ತಲಾ ಒಂದು ವಿಕೆಟ್‌ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ10 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ21 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!