Global Warming: 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಜಾಗತಿಕ ತಾಪಮಾನ; ಇದೆಷ್ಟು ಅಪಾಯ? Vistara News

ಪರಿಸರ

Global Warming: 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಜಾಗತಿಕ ತಾಪಮಾನ; ಇದೆಷ್ಟು ಅಪಾಯ?

Global Warming: ಹಸಿರುಮನೆ ಅನಿಲಗಳ ಹೊರ ಸೂಸುವಿಕೆ ಪ್ರಮಾಣ ಹೆಚ್ಚಾಗಿದ್ದು, ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ವೃದ್ಧಿಸಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

VISTARANEWS.COM


on

globle warming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ (Global Warming) ಹೆಚ್ಚಾಗುತ್ತಿರುವುದು ಕಳವಳ ಮೂಡಿಸುತ್ತಿದೆ. ಈ ಮಧ್ಯೆ ಹಸಿರುಮನೆ ಅನಿಲ ಹೊರಸೂಸುವಿಕೆಯು (Global greenhouse gas emissions) 2022ರಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದರಿಂದ ಈ ವರ್ಷದ 86 ದಿನಗಳು ಈಗಾಗಲೇ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನದ ಮಿತಿಯನ್ನು ಮೀರಿದೆ ಎಂದು ವಿಶ್ವಸಂಸ್ಥೆಯ (UN) ಹೊಸ ವರದಿ ತಿಳಿಸಿದೆ.

ಈ ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ತಾಪಮಾನ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 2022ರಲ್ಲಿ ಜಾಗತಿಕವಾಗಿ 57.4 ಶತಕೋಟಿ ಟನ್ ಕಾರ್ಬನ್‌ ಡೈ ಆಕ್ಸೈಡ್ ಹೊರಸೂಸಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 1.2ರಷ್ಟು ಹೆಚ್ಚಾಗಿದೆ ಮತ್ತು 2019ರಲ್ಲಿ ಕಂಡು ಬಂದ ಹಿಂದಿನ ದಾಖಲೆ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂದು ವರ್ಷಾಂತ್ಯದ ಹವಾಮಾನ ಬದಲಾವಣೆ ಸಮ್ಮೇಳನಕ್ಕೆ ಮುಂಚಿತವಾಗಿ ಯುಎನ್ ಎನ್ವಿರಾನ್‌ಮೆಂಟ್‌ ಪ್ರೋಗ್ರಾಂ(UN Environment Programme-UNEP)ನ ವಾರ್ಷಿಕ ಪ್ರಕಟಣೆಯಾದ ಎಮಿಷನ್ ಗ್ಯಾಪ್ ರಿಪೋರ್ಟ್ ತಿಳಿಸಿದೆ.

ಕೋವಿಡ್‌ ಕಾಲಘಟ್ಟದಲ್ಲಿ ನಿಯಂತ್ರಣ

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ ಮಹಾಮಾರಿ ವಾತಾವರಣಕ್ಕೆ ಒಂದಷ್ಟು ನೆಮ್ಮದಿಯನ್ನು ಕಲ್ಪಿಸಿತ್ತು. ಅಂದರೆ 2020ರಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಪರಿಣಾಮ ವಿಷಾನಿಲ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ 2021ರಲ್ಲಿ ಮತ್ತೆ ಚಟುವಟಿಕೆಗಳಿಗೆ ಮತ್ತೆ ವೇಗ ದೊರೆತ ಪರಿಣಾಮ ಅನಿಲ ಹೊರಸೂಸುವಿಕೆಯು ಬಹುತೇಕ 2019ರ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಟಾಪ್‌ 3 ದೇಶಗಳು

ಚೀನಾ ಮತ್ತು ಅಮೆರಿಕ ಅನಿಲ ಹೊರಸೂಸುವಿಕೆಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ. 2022ರಲ್ಲಿಯೂ ಈ ದೇಶಗಳು ಅತ್ಯಧಿಕ ಪ್ರಮಾಣದಲ್ಲಿ ಹಸಿರುಮನೆ ಅನಿಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿವೆ. ಹಾಗೆಯೇ ಮೂರನೇ ಅತಿದೊಡ್ಡ ಅನಿಲ ಹೊರಸೂಸುವ ರಾಷ್ಟ್ರವಾಗಿ ಭಾರತ ಇದೆ. ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಬ್ರೆಜಿಲ್ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2030ರ ವೇಳೆಗೆ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸಲು ಹಸಿರುಮನೆ ಅನಿಲ ಹೊರಸೂಸುವಿಕೆ ಶೇ. 42ರಷ್ಟು ಕಡಿಮೆಯಾಗಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ. 2024ರಿಂದ ಜಾಗತಿಕವಾಗಿ ಅನಿಲ ಹೊರಸೂಸುವಿಕೆ ಪ್ರಮಾಣವು ಪ್ರತಿವರ್ಷ ಕನಿಷ್ಠ 8.7 ಪ್ರತಿಶತದಷ್ಟು ಕಡಿಮೆಯಾಗಬೇಕಾಗುತ್ತದೆ. ಕೋವಿಡ್ 19ರ ಕಾರಣದಿಂದ 2019 ಮತ್ತು 2020ರ ನಡುವೆ ಹಸಿರುಮನೆ ಅನಿಲ ಪ್ರಮಾಣ 4.7 ಪ್ರತಿಶತದಷ್ಟು ಕುಸಿದಿತ್ತು.

2023ರ ವರ್ಷವು 2016ರ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಹಿಂದೆಂದಿಗಿಂತಲೂ ಹೆಚ್ಚು ಬಿಸಿಯಾದ ವರ್ಷವಾಗಿ ಹೊರಹೊಮ್ಮಲು ಸಜ್ಜಾಗಿದೆ. ಈ ವರ್ಷದ ಬಹುತೇಕ ಪ್ರತಿ ತಿಂಗಳು ಒಂದಲ್ಲ ಒಂದು ತಾಪಮಾನದ ದಾಖಲೆಯನ್ನು ನಿರ್ಮಿಸಿದೆ. ಸೆಪ್ಟೆಂಬರ್ ಅತ್ಯಂತ ಬಿಸಿಯಾದ ತಿಂಗಳಾಗಿ ಹೊರಹೊಮ್ಮಿದೆ. ಈ ವರ್ಷ 86 ದಿನಗಳ ದೈನಂದಿನ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಸರಾಸರಿಗಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚೇ ದಾಖಲಾಗಿರುವುದು ಕಳವಳಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

2015ರ ಪ್ಯಾರಿಸ್ ಒಪ್ಪಂದವು ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಪ್ರಸ್ತುತ ನೀತಿಗಳು ಸರಿಸುಮಾರು 2.4 ಡಿಗ್ರಿ ಸೆಲ್ಸಿಯಸ್ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

2028ರ ಸಿಒಪಿ33 ಶೃಂಗದ ಆತಿಥ್ಯ ವಹಿಸಲು ಭಾರತ ಸಿದ್ಧ; ಪ್ರಧಾನಿ ಮೋದಿ ಪ್ರಸ್ತಾಪ

COP28: ದುಬೈನಲ್ಲಿ ಹವಾಮಾನ ಬದಲಾವಣೆ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದಾರೆ.

VISTARANEWS.COM


on

India is ready to host cop33 in 2028 Says PM Narendra Modi at Cop28
Koo

ದುಬೈ: 2028ರಲ್ಲಿ ಭಾರತವು ಸಿಒಪಿ33 ಶೃಂಗಸಭೆಯನ್ನು (COP33 Summit) ಆಯೋಜಿಸುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಂತಾರಾಷ್ಟ್ರೀಯ ಸಮುದಾಯದ ಮುಂದಿಟ್ಟಿದ್ದಾರೆ. ಭಾರತವು ಹವಾಮಾನ ಬದಲಾವಣೆ ಪ್ರಕ್ರಿಯೆಗಾಗಿ ವಿಶ್ವಸಂಸ್ಥೆಯ ಕಾರ್ಯನೀತಿಗೆ ಬದ್ಧವಾಗಿದೆ. ಅದಕ್ಕಾಗಿಯೇ, 2028ರಲ್ಲಿ ಭಾರತದಲ್ಲಿ ಸಿಒಪಿ33 ಶೃಂಗಸಭೆಯನ್ನು ಆಯೋಜಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ದುಬೈನಲ್ಲಿ (Dubai) ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (COP28) ಪಾಲ್ಗೊಂಡು ಹೇಳಿದರು. ಈ ವೇಳೆ ಅವರು ವಿಶ್ವ ಹವಾಮಾನ ಕ್ರಿಯೆಯ ಶೃಂಗಸಭೆಯಲ್ಲಿ ತಮ್ಮ ಭಾಷಣ ಮಾಡಿದರು.

2030ರವರೆಗೆ ಹೊರಸೂಸುವಿಕೆಯನ್ನು 45% ರಷ್ಟು ಕಡಿಮಗೊಳಿಸುವುದು ಭಾರತದ ಗುರಿಯಾಗಿದೆ. ನಾವು ಪಳೆಯುಳಿಕೆಯಲ್ಲದ ಇಂಧನದ ಪಾಲನ್ನು 50% ಗೆ ಹೆಚ್ಚಿಸಲು ನಿರ್ಧರಿಸಿದ್ದೇವೆ. ನಾವು 2070 ರ ವೇಳೆಗೆ ನಿವ್ವಳ ಶೂನ್ಯದ ಗುರಿಯತ್ತ ಮುಂದುವರಿಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ರಾಜ್ಯಗಳ ಮುಖ್ಯಸ್ಥರು ಮತ್ತು ಸರ್ಕಾರಗಳ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಗಮನಾರ್ಹ ಸಮತೋಲನವನ್ನು ಭಾರತವು ಜಗತ್ತಿಗೆ ಉತ್ತಮ ಉದಾಹರಣೆಯನ್ನು ನೀಡಿದೆ ಎಂದು ಹೇಳಿದರು. ಸಿಒಪಿ28 ಅಧ್ಯಕ್ಷ ಸುಲ್ತಾನ್ ಅಲ್ ಜಾಬರ್ ಮತ್ತು ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆಯ ಅಧ್ಯಕ್ಷ ಸೈಮನ್ ಸ್ಟೀಲ್ ಅವರೊಂದಿಗೆ ಆರಂಭಿಕ ಭಾಷಣಕಾರರಾಗಿ ಮೋದಿ ಮಾತ್ರ ಏಕೈಕ ನಾಯಕರಾಗಿದ್ದರು.

ತಗ್ಗಿಸುವುದು ಮತ್ತು ಹೊಂದಾಣಿಕೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಧಾನಿ ಕರೆ ನೀಡಿದರು ಮತ್ತು ಪ್ರಪಂಚದಾದ್ಯಂತ ಶಕ್ತಿ ಪರಿವರ್ತನೆಯು ಕೇವಲ ಮತ್ತು ಸಮಗ್ರವಾಗಿರಬೇಕು ಎಂದು ಪ್ರಧಾನಿ ಹೇಳಿದರು. ಭೂಮಿ ತಾಯಿಯು, ತನ್ನ ಭವಿಷ್ಯದ ರಕ್ಷಣೆಗಾಗಿ ನಮ್ಮತ್ತ ನೋಡುತ್ತಿದ್ದಾಳೆ. ನಾವು ಈ ವಿಷಯದಲ್ಲಿ ಯಶಸ್ವಿಯಾಗಬೇಕು ಮತ್ತು ಹೆಚ್ಚು ನಿರ್ಣಾಯಕವಾಗಿ ವರ್ತಿಸಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಹವಾಮಾನ ಬದಲಾವಣೆಯಿಂದ ಜಾಗತಿಕ ಜಿಡಿಪಿ ನಷ್ಟ ಎಂದು ಅಧ್ಯಯನ ವರದಿ

ಹವಾಮಾನ ಬದಲಾವಣೆಯು (Climate Change) ಜನರ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಈಗ ಹೊಸದಾಗಿ ಬಿಡುಗಡೆಯಾಗಿರುವ ವರದಿಯ ಪ್ರಕಾರ(Study Report), ಹವಾಮಾನ ಬದಲಾವಣೆಯಿಂದಾಗಿ ವಿಶ್ವದ ಆರ್ಥಿಕತೆ ಕೂಡ ತಗ್ಗುತ್ತಿದೆ(Global GDP). ಸಿಒಪಿ28 (COP28) ಸಮಾವೇಶವು ಮುಂದಿರುವಂತೆ ಬಿಡುಗಡೆಯಾಗಿರುವ ಈ ವರದಿಯು ಸಾಕಷ್ಟು ಆತಂಕಕ್ಕೂ ಕಾರಣವಾಗಿದೆ. ಡೆಲವೇರ್ ವಿಶ್ವವಿದ್ಯಾನಿಲಯದ ವರದಿಯು ಮಾನವ ಪ್ರೇರಿತ ಹವಾಮಾನ ಬದಲಾವಣೆಯ ಪರಿಣಾಮಗಳು ಕಳೆದ ವರ್ಷ ಜಾಗತಿಕ ಆರ್ಥಿಕ ಉತ್ಪಾದನೆಯಿಂದ ಶೇಕಡಾ 6.3 ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಿದೆ. ದುಬೈನಲ್ಲಿ (Dubai) ಗುರುವಾರದಿಂದ ಸಿಒಪಿ28 ಸಭೆ ನಡೆಯುತ್ತಿದೆ.

ಈ ವರದಿಯ ಅಂಕಿ ಅಂಶಗಳು ಹವಾಮಾನ ಬದಲಾವಣೆಯ ನೇರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಕೃಷಿ ಮತ್ತು ಉತ್ಪಾದನೆಗೆ ಅಡೆತಡೆಗಳು ಮತ್ತು ಹೆಚುತ್ತಿರುವ ತಾಪಮಾನದಿಂದಾಗಿ ಉತ್ಪಾದಕತೆ ಮೇಲೆ ದುಷ್ಪರಿಣಾಮ, ಹಾಗೆಯೇ ವಿವಿಧ ದೇಶಗಳ ಜಾಗತಿಕ ವ್ಯಾಪಾರ ಮತ್ತು ಹೂಡಿಕೆಗಳ ಮೇಲೂ ಪರಿಣಾಮ ಬೀರುತ್ತಿವೆ.

ಹವಾಮಾನ ಬದಲಾವಣೆಯಿಂದಾಗಿ ಪ್ರಪಂಚವು ಲಕ್ಷಾಂತರ ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಇದರ ಹೆಚ್ಚಿನ ಹೊರೆ ಬಡ ದೇಶಗಳ ಮೇಲೆ ಬಿದ್ದಿದೆ ಎಂದು ಡೆಲವೇರ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಜೇಮ್ಸ್ ರೈಸಿಂಗ್ ಹೇಳಿದ್ದಾರೆ. ಈ ಮಾಹಿತಿಯು ಇಂದು ಅನೇಕ ದೇಶಗಳು ಈಗಾಗಲೇ ಎದುರಿಸುತ್ತಿರುವ ಸವಾಲುಗಳನ್ನು ಮತ್ತು ಅವುಗಳನ್ನು ಪರಿಹರಿಸಲು ತುರ್ತಾಗಿ ಅಗತ್ಯವಿರುವ ಬೆಂಬಲವನ್ನು ಸ್ಪಷ್ಟಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.

ಸರಾಸರಿ ವ್ಯಕ್ತಿಯಿಂದ ಉಂಟಾಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಲೆಕ್ಕ ಹಾಕಿದಾಗ 2022ರಲ್ಲಿ ಜಾಗತಿಕ ಜಿಡಿಪಿಯ ನಷ್ಟವು ಜಿಡಿಪಿಯ 1.8 ಪ್ರತಿಶತ ಅಥವಾ ಸುಮಾರು 1.5 ಟ್ರಿಲಿಯನ್ ಡಾಲರ್ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಎರಡು ಸಂಖ್ಯೆಗಳ ನಡುವಿನ ವ್ಯತ್ಯಾಸವು ಪರಿಣಾಮಗಳ ಅಸಮಾನ ವಿತರಣೆಯನ್ನು ಪ್ರತಿಬಿಂಬಿಸುತ್ತದೆ, ಇದು ಕಡಿಮೆ-ಆದಾಯದ ದೇಶಗಳು ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: COP28: ಹವಾಮಾನ ಬದಲಾವಣೆಯಿಂದ ಜಾಗತಿಕ ಜಿಡಿಪಿ ನಷ್ಟ, ಏನು ಕಾರಣ?

Continue Reading

ಪರಿಸರ

COP28: ಹವಾಮಾನ ಬದಲಾವಣೆಯಿಂದ ಜಾಗತಿಕ ಜಿಡಿಪಿ ನಷ್ಟ, ಏನು ಕಾರಣ?

COP28: ಕಳೆದ ಬಾರಿಯ ಸಿಒಪಿ27 ಈಜಿಪ್ಟ್‌ನಲ್ಲಿ ನಡೆದಿತ್ತು. ಈ ವರ್ಷದ ಸಿಒಪಿ28 ಇದೇ ಗುರುವಾರದಿಂದ ದುಬೈನಲ್ಲಿ ನಡೆಯಲಿದೆ.

VISTARANEWS.COM


on

global gdp reduced by climate change Says study report and talks will take at COP28
Koo

ನವದೆಹಲಿ: ಹವಾಮಾನ ಬದಲಾವಣೆಯು (Climate Change) ಜನರ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಈಗ ಹೊಸದಾಗಿ ಬಿಡುಗಡೆಯಾಗಿರುವ ವರದಿಯ ಪ್ರಕಾರ(Study Report), ಹವಾಮಾನ ಬದಲಾವಣೆಯಿಂದಾಗಿ ವಿಶ್ವದ ಆರ್ಥಿಕತೆ ಕೂಡ ತಗ್ಗುತ್ತಿದೆ(Global GDP). ಸಿಒಪಿ28 (COP28) ಸಮಾವೇಶವು ಮುಂದಿರುವಂತೆ ಬಿಡುಗಡೆಯಾಗಿರುವ ಈ ವರದಿಯು ಸಾಕಷ್ಟು ಆತಂಕಕ್ಕೂ ಕಾರಣವಾಗಿದೆ. ಡೆಲವೇರ್ ವಿಶ್ವವಿದ್ಯಾನಿಲಯದ ವರದಿಯು ಮಾನವ ಪ್ರೇರಿತ ಹವಾಮಾನ ಬದಲಾವಣೆಯ ಪರಿಣಾಮಗಳು ಕಳೆದ ವರ್ಷ ಜಾಗತಿಕ ಆರ್ಥಿಕ ಉತ್ಪಾದನೆಯಿಂದ ಶೇಕಡಾ 6.3 ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಿದೆ. ದುಬೈನಲ್ಲಿ (Dubai) ಗುರುವಾರದಿಂದ ಸಿಒಪಿ28 ಸಭೆ ನಡೆಯಲಿದೆ.

ಈ ವರದಿಯ ಅಂಕಿ ಅಂಶಗಳು ಹವಾಮಾನ ಬದಲಾವಣೆಯ ನೇರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಕೃಷಿ ಮತ್ತು ಉತ್ಪಾದನೆಗೆ ಅಡೆತಡೆಗಳು ಮತ್ತು ಹೆಚುತ್ತಿರುವ ತಾಪಮಾನದಿಂದಾಗಿ ಉತ್ಪಾದಕತೆ ಮೇಲೆ ದುಷ್ಪರಿಣಾಮ, ಹಾಗೆಯೇ ವಿವಿಧ ದೇಶಗಳ ಜಾಗತಿಕ ವ್ಯಾಪಾರ ಮತ್ತು ಹೂಡಿಕೆಗಳ ಮೇಲೂ ಪರಿಣಾಮ ಬೀರುತ್ತಿವೆ.

ಹವಾಮಾನ ಬದಲಾವಣೆಯಿಂದಾಗಿ ಪ್ರಪಂಚವು ಲಕ್ಷಾಂತರ ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಇದರ ಹೆಚ್ಚಿನ ಹೊರೆ ಬಡ ದೇಶಗಳ ಮೇಲೆ ಬಿದ್ದಿದೆ ಎಂದು ಡೆಲವೇರ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಜೇಮ್ಸ್ ರೈಸಿಂಗ್ ಹೇಳಿದ್ದಾರೆ. ಈ ಮಾಹಿತಿಯು ಇಂದು ಅನೇಕ ದೇಶಗಳು ಈಗಾಗಲೇ ಎದುರಿಸುತ್ತಿರುವ ಸವಾಲುಗಳನ್ನು ಮತ್ತು ಅವುಗಳನ್ನು ಪರಿಹರಿಸಲು ತುರ್ತಾಗಿ ಅಗತ್ಯವಿರುವ ಬೆಂಬಲವನ್ನು ಸ್ಪಷ್ಟಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.

ಸರಾಸರಿ ವ್ಯಕ್ತಿಯಿಂದ ಉಂಟಾಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಲೆಕ್ಕ ಹಾಕಿದಾಗ 2022ರಲ್ಲಿ ಜಾಗತಿಕ ಜಿಡಿಪಿಯ ನಷ್ಟವು ಜಿಡಿಪಿಯ 1.8 ಪ್ರತಿಶತ ಅಥವಾ ಸುಮಾರು 1.5 ಟ್ರಿಲಿಯನ್ ಡಾಲರ್ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಎರಡು ಸಂಖ್ಯೆಗಳ ನಡುವಿನ ವ್ಯತ್ಯಾಸವು ಪರಿಣಾಮಗಳ ಅಸಮಾನ ವಿತರಣೆಯನ್ನು ಪ್ರತಿಬಿಂಬಿಸುತ್ತದೆ, ಇದು ಕಡಿಮೆ-ಆದಾಯದ ದೇಶಗಳು ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಎಂದು ತಿಳಿಸಲಾಗಿದೆ.

ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು, ಹೆಚ್ಚಿನ ಜನಸಂಖ್ಯೆ ಇರುವ ದೇಶಗಳು ಶೇ.8.3ರಷ್ಟು ಜಿಡಿಪಿ ನಷ್ಟವನ್ನು ಅನುಭವಿಸಿವೆ. ವಿಶೇಷವಾಗಿ ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕ್ರಮವಾಗಿ ಈ ಪ್ರದೇಶಗಳ ರಾಷ್ಟ್ರಗಳು ಅವುಗಳ ಜಿಡಿಪಿಯ ಶೇ.14. ಮತ್ತು ಶೇ.11.2ರಷ್ಟು ನಷ್ಟ ಅನುಭವಿಸಿವೆ. ಆದರೆ, ಮತ್ತೊಂದೆಡೆ ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೆಚ್ಚಿನ ಲಾಭವನ್ನು ಮಾಡಿಕೊಂಡಿವೆ. ಕಳೆದ ವರ್ಷದ ಜಿಡಿಪಿಯಲ್ಲಿ ಯುರೋಪಿಯನ್ ರಾಷ್ಟ್ರಗಳು ಶೇ.5ರಷ್ಟು ಲಾಭಪಡೆದುಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಈಜಿಪ್ಟ್‌ನಲ್ಲಿ ನಡೆದ ಜಿಒಪಿ27 ಮಾತುಕತೆಯಲ್ಲಿ, ಹವಾಮಾನ ವಿಪತ್ತುಗಳು ಮತ್ತು ವಿಪರೀತ ಹವಾಮಾನದಿಂದ ಆಗು ನಷ್ಟವನ್ನು ನಿಭಾಯಿಸಲು ದುರ್ಬಲ ದೇಶಗಳಿಗೆ ಸಹಾಯ ಮಾಡಲು ಮೀಸಲಾದ ನಿಧಿಯನ್ನು ಸ್ಥಾಪಿಸಲು ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಹಾಗಾಗಿ, ಈಗ ನಡೆಯಲಿರುವ ಸಿಒಪಿ28 ಮೀಟಿಂಗ್‌ನಲ್ಲಿ ಯಾರು ಎಷ್ಟು ನಿಧಿಯನ್ನು ನೀಡಲಿದ್ದಾರೆ ಎಂಬ ಚರ್ಚೆಯಾಗಲಿದೆ. ಗುರವಾರದಿಂದ ದುಬೈನಲ್ಲಿ ಸಿಒಪಿ28 ಶುರುವಾಗಲಿದೆ.

ಈ ಸುದ್ದಿಯನ್ನೂ ಓದಿ: Warmest February: 122 ವರ್ಷದಲ್ಲೇ ದಾಖಲೆಯಲ್ಲಿ ‘ಬಿಸಿ’ಯಾದ ಫೆಬ್ರವರಿ! ಹವಾಮಾನ ಬದಲಾವಣೆ ಎಫೆಕ್ಟ್?

Continue Reading

ಕರ್ನಾಟಕ

Operation Tiger : ಮಹಿಳೆ ಸಹಿತ ಇಬ್ಬರ ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್?

Operation Tiger : ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಅರಣ್ಯಾಧಿಕಾರಿಗಳ ಸಾಹಸಿಕ ಕಾರ್ಯಾಚರಣೆಯಲ್ಲಿ ಹುಲಿಯೊಂದು ಸೆರೆಯಾಗಿದೆ. ಇದು ಇಬ್ಬರನ್ನು ಬಲಿ ಪಡೆದಿತ್ತು.

VISTARANEWS.COM


on

Operation Tiger in Nanjanagudu
ನಂಜನಗೂಡಿನಲ್ಲಿ ಸೆರೆಯಾದ ಹುಲಿ
Koo

ಮೈಸೂರು: ನವೆಂಬರ್‌ 25ರಂದು ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದ ರೈತ ಮಹಿಳೆ ರತ್ನಮ್ಮ (55) ಸೇರಿದಂತೆ ಒಂದೇ ತಿಂಗಳಲ್ಲಿ ಇಬ್ಬರು ದನಗಾಹಿಗಳನ್ನು ಬಲಿ ಪಡೆದ ನರಹಂತಕ ಹುಲಿಯನ್ನು (Killer Tiger) ಕೊನೆಗೂ ಸೆರೆ ಹಿಡಿಯಲಾಗಿದೆ (Tiger Captured). ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ನಡೆಸುತ್ತಿದ್ದ ಕಾರ್ಯಾಚರಣೆ (Operation Tiger) ಕೊನೆಗೂ ಸೋಮವಾರ ರಾತ್ರಿ 1.30ರ ಸುಮಾರಿಗೆ ಯಶಸ್ವಿಯಾಗಿದ್ದು, ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.

ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಹುಲಿ ಸೆರೆಯಾಗಿದೆ. ಗ್ರಾಮ ಹೊರವಲಯದಲ್ಲಿ ಹಸುವಿನ ಮಾಂಸವನ್ನು ಇಡಲಾಗಿತ್ತು. ಮತ್ತು ಅದರ ಬರುವಿಕೆಗಾಗಿ ಕಳೆದ ಕೆಲವು ದಿನಗಳಿಂದ ಕಾವಲು ಕಾಯಲಾಗುತ್ತಿತ್ತು. ಸೋಮವಾರ ರಾತ್ರಿ ಆಗಮಿಸಿದ ಹುಲಿ ಮಾಂಸಕ್ಕೆ ಬಾಯಿ ಹಾಕುತ್ತಿದ್ದಂತೆಯೇ ದೂರದಿಂದಲೇ ಅದಕ್ಕೆ ಅರಿವಳಿಕೆ ಔಷಧವನ್ನು ಶೂಟ್‌ ಮಾಡಲಾಯಿತು. ಹೊಡೆತ ತಿಂದ ಹುಲಿ ಸುಮಾರು ಒಂದು ಕಿಮೀ ದೂರದವರೆಗೆ ಸಾಗಿ ಕುಸಿದು ಬಿದ್ದಿದೆ. ಬಳಿಕ ಅದನ್ನು ಬೋನಿಗೆ ಹಾಕಿ ಸಾಗಿಸಲಾಗಿದೆ.

ಮೇ 25ರಂದು ಮಧ್ಯಾಹ್ನ ರತ್ನಮ್ಮ ಅವರು ದನ ಮೇಯಿಸಲು ಕಾಡಂಚಿಗೆ ತೆರಳಿದ್ದರು. ಈ ವೇಳೆ ಬಳ್ಳೂರು ಗ್ರಾಮದ ಹುಂಡಿಯಲ್ಲಿ ಹುಲಿ ಅವರ ಮೇಲೆ ಎರಗಿ ಕೊಂದು ಹಾಕಿತ್ತು. ಮಾತ್ರವಲ್ಲ, ಅವರ ದೇಹದ ಎಡಭಾಗವನ್ನು ತಿಂದು ಹಾಕಿತ್ತು. ಅದಕ್ಕಿಂತ ಮೊದಲು ಇಲ್ಲಿ ಹುಲಿ ಎರಡು ಬಾರಿ ದಾಳಿ ಮಾಡಿತ್ತು. ಒಮ್ಮೆ ಇನ್ನೊಬ್ಬ ದನಗಾಹಿಯನ್ನು ಕೊಂದು ಹಾಕಿತ್ತು.

Operation Tiger in Nanjanagudu
ಹುಲಿಯನ್ನು ಹಿಡಿಯಲು ಬೋನನ್ನು ಸಿದ್ಧಪಡಿಸಲಾಗಿರುವುದು

ಈ ಘಟನೆ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಇದಾದ ಬಳಿಕ ಅರಣ್ಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಬೇಟೆಗೆ ಶುರು ಮಾಡಿದ್ದರು. ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 200 ಸಿಬ್ಬಂದಿಗಳನ್ನು ಸೇರಿಸಿಕೊಂಡು ಕಾರ್ಯಾಚರಣೆ ಆರಂಭವಾಗಿತ್ತು.

ಹುಲಿಯ ಜಾಡನ್ನು ಪತ್ತೆ ಹಚ್ಚುವ ಕೆಲಸ, ಅದರ ಚಲನವಲನಗಳ ಮೇಲೆ ಕಣ್ಣಿಡುವ ಕೆಲಸ ನಡೆಯಿತು. ಡ್ರೋನ್‌ಗಳನ್ನು ಬಳಸಿ ಆ ಪ್ರದೇಶದ ಎಲ್ಲ ಕಡೆ ಜಾಲಾಡಲಾಯಿತು. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹೆಡಿಯಾಳ ಅರಣ್ಯ ವಲಯದಲ್ಲಿ ಭಾರಿ ಹುಡುಕಾಟವೇ ನಡೆಯಿತು. ಇದಕ್ಕೆ ಪಾರ್ಥ, ರೋಹಿತ್‌ ಮತ್ತು ಹಿರಣ್ಯ ಎಂಬ ಆನೆಗಳ ಬಳಕೆಯೂ ನಡೆಯಿತು. ಗ್ರಾಮದ ಹಲವು ಕಡೆಗಳಲ್ಲಿ ಬೋನುಗಳನ್ನು ಇರಿಸಲಾಗಿತ್ತು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಧಿಕಾರಿ ಕುಮಾರ್ ಪುಷ್ಕರ್ ಅವರೇ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.

ಕೊನೆಗೂ ಹುಲಿಯ ಜಾಡು ಸಿಕ್ಕಿತು!

ನವೆಂಬರ್‌ 25ರಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಹುಲಿಯನ್ನು ಹೇಗಾದರೂ ಹಿಡಿಯಲೇಬೇಕು ಎಂಬ ಶಪಥ ತೊಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಹುಲಿಯ ಜಾಡುಗಳನ್ನು ಹಿಡಿದಾಗ ಅದು ಒಂದು ನಿರ್ದಿಷ್ಟ ಪ್ರದೇಶಕ್ಕೆ ಬರುತ್ತದೆ ಎನ್ನುವುದರ ಸುಳಿವು ಸಿಕ್ಕಿತು.

Operation Tiger in Nanjanagudu
ಹುಲಿಯ ಜಾಡು ಹಿಡಿಯಲು ಡ್ರೋನ್‌ ಕೂಡಾ ಬಳಸಲಾಗಿತ್ತು

ಅರಣ್ಯಾಧಿಕಾರಿಗಳು ಆ ಭಾಗದ ಕೆಲವು ಕಡೆ ಬೋನುಗಳನ್ನು ಇಟ್ಟರು. ಆದರೆ, ಅವುಗಳು ಬೋನುಗಳು ಎಂದು ಗೊತ್ತಾಗದಂತೆ ಅವುಗಳಿಗೆ ಬಳಿಗಳನ್ನು ಸುತ್ತಿದರು. ಇತ್ತ ಒಂದು ನಿರ್ದಿಷ್ಟ ಜಾಗದಲ್ಲಿ ಹಸುವಿನ ಮಾಂಸವನ್ನು ಹಾಕಲಾಗಿತ್ತು.

Operation Tiger in NanjanaguduOperation Tiger in Nanjanagudu
ಹುಲಿ ಕಾರ್ಯಾಚರಣೆಗೆ ಆನೆಗಳನ್ನೂ ಬಳಸಲಾಗಿತ್ತು

ಹುಲಿ ಈ ಮಾಂಸವನ್ನು ವಾಸನೆ ಆಧರಿಸಿ ಇಲ್ಲಿಗೆ ಬಂದರೆ ಅದರ ಮೇಲೆ ಅರಿವಳಿಕೆ ಶೂಟ್‌ ಮಾಡಲು ಅನುಕೂಲವಾಗುವಂತೆ ಬೋವಿನಲ್ಲಿ ವ್ಯವಸ್ಥೆ ಸಜ್ಜುಗೊಳಿಸಿ ಇಡಲಾಗಿತ್ತು. ಆದರೆ, ಹುಲಿಗೆ ಯಾವ ಸಂಶಯವೂ ಬಾರದಂತೆ ಈ ವಾಹನವನ್ನು ಕೂಡಾ ಬಳ್ಳಿಗಳಿಂದ ಮುಚ್ಚಲಾಗಿತ್ತು. ಅಲ್ಲಿ ಮನುಷ್ಯರ ಚಲನವಲನದ ಯಾವ ಸುಳಿವೂ ಸಿಗದಂತೆ ಮುನ್ನೆಚ್ಚರಿಕೆ ವಹಿಸಿ ಕಾಯಲಾಗುತ್ತಿತ್ತು. ಡ್ರೋನ್‌ ಸೇರಿದಂತೆ ಬೇರೆ ಕ್ಯಾಮೆರಾಗಳು ಕೂಡಾ ಮರೆಯಲ್ಲಿ ಸಜ್ಜಾಗಿದ್ದವು.

ದನದ ಮಾಂಸ ಇಟ್ಟು ಕಾಯುವ ಕಾರ್ಯಾಚರಣೆಯ ರಿಹರ್ಸಲ್

ಮಧ್ಯರಾತ್ರಿ 1.05ಕ್ಕೆ ಆಗಮಿಸಿದ ಹುಲಿ

ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಹುಲಿ ಕಾರ್ಯಾಚರಣೆ ನಡೆದಿತ್ತು. ರಾತ್ರಿ 1.05ರ ಹೊತ್ತಿಗೆ ಹುಲಿ ಆ ಭಾಗಕ್ಕೆ ಬಂದಿತ್ತು. ಅದು ಮಾಂಸದ ಬಳಿಗೆ ಹೋಗುತ್ತಿದ್ದಂತೆಯೇ ಸ್ವಲ್ಪವೇ ದೂರದಲ್ಲಿ ಮರೆಯಲ್ಲಿ ಬೋನಿನಲ್ಲಿ ಕುಳಿತಿದ್ದ ಬಂಡೀಪುರ ವೈದ್ಯಾಧಿಕಾರಿ ಡಾ.ವಾಸಿಂ ಅವರು ಅಲ್ಲಿಂದಲೇ ಅರಿವಳಿಕೆ ಮದ್ದು ಶೂಟ್ ಮಾಡಿದಾಗ ಮಧ್ಯ ರಾತ್ರಿ 1.15 ಆಗಿತ್ತು.

Operation Tiger in Nanjanagudu
ಬಳ್ಳಿಗಳಿಂದ ಮುಚ್ಚಿದ ಬೋನಿನಿಂದ ಹುಲಿಯ ಮೇಲೆ ಅರಿವಳಿಕೆ ಶೂಟ್

ವೈದ್ಯಾಧಿಕಾರಿಗಳ ಅರಿವಳಿಕೆ ಶೂಟ್‌ನಿಂದ ವಿಚಲಿತವಾದ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ಆದರೆ, ಅದಕ್ಕೆ ಹೆಚ್ಚು ದೂರ ಹೋಗುವುದು ಸಾಧ್ಯವಾಗಿಲ್ಲ. ಹಾಗಂತ ಅದು ಹೋದ ಭಾಗಕ್ಕೆ ಒಮ್ಮೆಗೇ ನುಗ್ಗುವುದು ಕೂಡಾ ಸಾಧುವಾಗಿರಲಿಲ್ಲ. ಹಾಗಾಗಿ ಎಲ್ಲ ಪರಿಸ್ಥಿತಿಗಳನ್ನು ವಿಶ್ಲೇಷಿಸಿ ಕೊನೆಗೆ ಹುಲಿ ಹೋದ ಜಾಡನ್ನು ಅನುಸರಿಸಿದಾಗ ಸುಮಾರು ಒಂದು ಕಿ.ಮೀ. ದೂರದಲ್ಲಿ ಹುಲಿ ಬಿದ್ದಿರುವುದು ಕಂಡಿತು.‌

ಇದನ್ನೂ ಓದಿ: Tiger Attack: ಮಹಿಳೆಯ ಅರ್ಧ ದೇಹವನ್ನೇ ತಿಂದ ನರಭಕ್ಷಕ; ಮೈಸೂರಲ್ಲಿ ಹುಲಿ ದಾಳಿಗೆ ಮತ್ತೆ ಬಲಿ

ಬಳಿಕ ಅದನ್ನು ಬಲೆ ಹಾಕಿ ದಿಗ್ಬಂಧಿಸಲಾಯಿತು. ಪ್ರಜ್ಞೆ ತಪ್ಪಿದ್ದ ಹುಲಿಯನ್ನು ಬಳಿಕ ಸುಮಾರು 3 ಗಂಟೆಯ ಹೊತ್ತಿಗೆ ಗ್ರಾಮಸ್ಥರಿಗೆ ತೋರಿಸಲಾಯಿತು. ಹುಲಿಯನ್ನು ರಾತ್ರಿಯೇ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್‌ ಮಾಡಲಾಯಿತು. ಹುಲಿಯ ಆರೋಗ್ಯ ತಪಾಸಣೆಯ ಬಳಿಕ ಅರಣ್ಯ‌ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದೇಶ

Air pollution: ದಿಲ್ಲಿ ಮಾತ್ರವಲ್ಲ, ಭಾರತದ ಇನ್ನೂ ಎರಡು ನಗರಗಳ ವಾಯು ವಿಶ್ವದಲ್ಲೇ ಅತಿ ಕಳಪೆ

ಸ್ವಿಡ್ಜರ್‌ಲ್ಯಾಂಡಿನ IQAir ಸಂಸ್ಥೆಯ ವಿಶ್ವದ ಅತ್ಯಂತ ವಾಯು ಕಲುಷಿತ (Air pollution) ನಗರಗಳ ಟಾಪ್ 10 ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದೆ.

VISTARANEWS.COM


on

Air Pollution
Koo

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ (Supreme court) ಆದೇಶದ ಹೊರತಾಗಿಯೂ ಹೊಸದಿಲ್ಲಿ ಸೇರಿದಂತೆ ರಾಜಧಾನಿ ಪ್ರದೇಶದಲ್ಲಿ (NCR) ದೀಪಾವಳಿ ಹಬ್ಬದ (Deepavali 2023) ಪ್ರಯುಕ್ತ ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದ್ದು, ಮೊದಲೇ ತೀವ್ರ ಹಂತಕ್ಕೆ ಹೋಗಿರುವ ವಾಯುಮಾಲಿನ್ಯ (Air pollution) ಇನ್ನಷ್ಟು ಹೆಚ್ಚಾಗಿದೆ.

ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಕಡೆಗಳಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ನಿಷೇಧವನ್ನು ಉಲ್ಲಂಘಿಸಿ ಪಟಾಕಿ ಸಿಡಿಸಲಾಗಿದೆ. ದೆಹಲಿಯ ಜನರು ಇದೀಗ ವಾತಾವರಣವನ್ನು ಆವರಿಸಿದ ದಟ್ಟವಾದ ಹೊಗೆಮಂಜಿನಿಂದ (Delhi Air pollution)  ಆವೃತಗೊಂಡಿದ್ದಾರೆ. ಸ್ವಿಡ್ಜರ್‌ಲ್ಯಾಂಡಿನ IQAir ಸಂಸ್ಥೆಯ ವಿಶ್ವದ ಅತ್ಯಂತ ವಾಯು ಕಲುಷಿತ ನಗರಗಳ ಟಾಪ್ 10 ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯು ವಾಯು ಗುಣಮಟ್ಟ ಸೂಚ್ಯಂಕ (AQI) 420 ಮೀರಿದ್ದು, ʼಅಪಾಯಕಾರಿʼ ಹಂತವನ್ನೂ ದಾಟಿ ಹೋಗಿದೆ.

ದಿಲ್ಲಿಯ ಜತೆಗೆ ದೇಶದ ಇನ್ನಿತರ ಎರಡು ಮೆಟ್ರೋ ನಗರಗಳಲ್ಲಿಯೂ- ಕೋಲ್ಕತ್ತಾ ಮತ್ತು ಮುಂಬಯಿ- ವಾಯು ಪರಿಸ್ಥಿತಿ ಇಷ್ಟೇ ತೀವ್ರವಾಗಿ ಹದಗೆಟ್ಟಿದೆ. ಚಳಿಗಾಲದ ಮಂಜು ಹಾಗೂ ದೀಪಾವಳಿ ಆಚರಣೆಯ ಪಟಾಕಿ ಸ್ಫೋಟಗಳಿಂದಾಗಿ ಹದಗೆಟ್ಟಿರುವ ಸನ್ನಿವೇಶವಿದಾಗಿದೆ. ವಾಯುಮಾಲಿನ್ಯ ಪಟ್ಟಿಯಲ್ಲಿ ಕೋಲ್ಕತ್ತಾ ಮತ್ತು ಮುಂಬಯಿ ಕ್ರಮವಾಗಿ ನಾಲ್ಕು ಮತ್ತು ಎಂಟನೇ ಸ್ಥಾನಗಳಲ್ಲಿ ಇವೆ.

ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿ (WBPCB) ಪ್ರಕಾರ, ಕೋಲ್ಕತ್ತಾದ ಹೆಚ್ಚಿನ ಭಾಗಗಳಲ್ಲಿ AQI 250 ಅಂಕವನ್ನು ಮೀರಿದೆ. ಮುಂಬಯಿಯಲ್ಲಿ, ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR- India) ಪ್ರಕಾರ, AQI 234ರ ʼಕಳಪೆʼ ವರ್ಗಕ್ಕೆ ಇಳಿದಿದೆ.

0ಯಿಂದ 100ರವರೆಗಿನ AQI ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. 100ರಿಂದ 200ರವರೆಗೆ ಮಧ್ಯಮ. 200ರಿಂದ 300ರವರೆಗೆ ಕಳಪೆ ಮತ್ತು 300ರಿಂದ 400ರವರೆಗೆ ಅತ್ಯಂತ ಕಳಪೆ. 400ರಿಂದ 500 ಅಥವಾ ಅದಕ್ಕಿಂತ ಹೆಚ್ಚಿನದನ್ನು ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.

ಬೇರಿಯಂ ಮತ್ತು ಇತರ ನಿಷೇಧಿತ ರಾಸಾಯನಿಕಗಳಿಂದ ತಯಾರಿಸಿದ ಪಟಾಕಿಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನವೆಂಬರ್ 7ರಂದು ಆದೇಶ ನೀಡಿತ್ತು. ಈ ನಿಷೇಧವನ್ನು ಎಲ್ಲ ರಾಜ್ಯಗಳಿಗೂ ಕಡ್ಡಾಯಗೊಳಿಸಲಾಗಿದೆ. ತೀವ್ರ ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ.

“ನಿಮ್ಮಲ್ಲಿರುವದನ್ನು ಹಂಚಿಕೊಂಡರೆ ಮಾತ್ರ ಸಂಭ್ರಮಾಚರಣೆ ಮಾಡಬಹುದು. ಪರಿಸರವನ್ನು ಕಲುಷಿತಗೊಳಿಸುವುದರಿಂದ ಅಲ್ಲ. ನೀವು ಹಾಗೆ ಮಾಡಿದರೆ ಸ್ವಾರ್ಥಿಗಳಾಗಿರುತ್ತೀರಿ. ಈ ದಿನಗಳಲ್ಲಿ ಮಕ್ಕಳಲ್ಲ, ಹಿರಿಯರೇ ಹೆಚ್ಚು ಪಟಾಕಿಗಳನ್ನು ಸುಡುತ್ತಿದ್ದಾರೆ” ಎಂದು ಪೀಠ ಹೇಳಿತ್ತು. ಎಸ್‌ಸಿ ಆದೇಶದ ನಡುವೆಯೂ ಪಟಾಕಿ ಸಿಡಿಸಲಾಗಿದೆ. ರಾತ್ರಿಯಾಗುತ್ತಿದ್ದಂತೆ ಅದರ ತೀವ್ರತೆ ಹೆಚ್ಚಾಯಿತು.

ಪಟಾಕಿಗಳ ಮೇಲೆ ನಿಷೇಧವನ್ನು ಒಂದಲ್ಲ ಒಂದು ರೀತಿಯಲ್ಲಿ ಹೇರಲಾಗುತ್ತಿದೆ. ಆದರೆ ಇವು ಜಾರಿಯಾಗುತ್ತಿಲ್ಲ. ʼʼಇದು ಅತ್ಯಂತ ಗಂಭೀರವಾದ ವಿಚಾರ. ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳನ್ನು ಕರೆದು ಈ ಆದೇಶವನ್ನು ಏಕೆ ಜಾರಿಗೊಳಿಸಲಿಲ್ಲ ಎಂದು ಕೇಳಬೇಕು” ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಹೇಳಿದ್ದಾರೆ.

ಪಟಾಕಿ ಸುಡುವುದರ ಹೊರತಾಗಿ ಕೃಷಿ ತ್ಯಾಜ್ಯದ ಬೆಂಕಿ, ವಾಹನಗಳಿಂದ ಹೊಗೆ ಹೊರಸೂಸುವಿಕೆ ಮತ್ತು ಕೈಗಾರಿಕಾ ಹೊರಸೂಸುವಿಕೆಗಳು ರಾಷ್ಟ್ರ ರಾಜಧಾನಿ ಮತ್ತು ಇತರ ಸ್ಥಳಗಳಲ್ಲಿ ವಾಯು ಮಾಲಿನ್ಯದ ಇತರ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: Delhi Air Pollution: ತಕ್ಷಣ ತ್ಯಾಜ್ಯ ಸುಡುವಿಕೆ ನಿಲ್ಲಿಸಿ: ಪಂಜಾಬ್‌ ಸೇರಿ 5 ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ತಾಕೀತು

Continue Reading
Advertisement
Kichcha Sudeep Save Snehith Gowda And Michel From Eliminations
ಬಿಗ್ ಬಾಸ್9 mins ago

BBK SEASON 10: ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು; ಈ ವಾರ ನೋ ಎಲಿಮಿನೇಶನ್‌! ಸ್ನೇಹಿತ್- ಮೈಕಲ್‌ ಸೇಫ್‌!

Kodagu News
ಕರ್ನಾಟಕ38 mins ago

ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ?

Ishwar Sahu
ದೇಶ1 hour ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ1 hour ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ2 hours ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ2 hours ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ2 hours ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ3 hours ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ3 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ4 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ4 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ21 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌