Costly Egg: ದರ ಏರಿಕೆ ರೇಸಿಂಗ್‌ನಲ್ಲಿ ಮೊಟ್ಟೆ ಫಸ್ಟ್‌, ಕೋಳಿ ಲಾಸ್ಟ್‌! Vistara News

ಆಹಾರ/ಅಡುಗೆ

Costly Egg: ದರ ಏರಿಕೆ ರೇಸಿಂಗ್‌ನಲ್ಲಿ ಮೊಟ್ಟೆ ಫಸ್ಟ್‌, ಕೋಳಿ ಲಾಸ್ಟ್‌!

Costly Egg : ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯ ಜೂಟಾಟಕ್ಕೆ ಜನರು ಸುಸ್ತಾಗಿದ್ದಾರೆ. ಈ ನಡುವೆ ದರ ಏರಿಕೆ ರೇಸಿಂಗ್‌ನಲ್ಲಿ ಮೊಟ್ಟೆ ಬೆಲೆ ಜಾಸ್ತಿ ಆಗಿದ್ದರೆ, ಕೋಳಿ ದರ ಕಡಿಮೆ ಆಗಿದೆ.

VISTARANEWS.COM


on

Chicken egg price hiked Poultry prices come down
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಿನ ಬಳಕೆ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದ್ದು, ಜನರು ಹೆಣಗಾಡುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮಾಂಸಹಾರ ಬೆಲೆಯು ಏರಿಳಿತ ಕಾಣುತ್ತಿದೆ. ಒಂದು ಕಡೆ ಮೊಟ್ಟೆ ಪ್ರಿಯರಿಗೆ ರೇಟು ಶಾಕ್‌ ಕೊಟ್ಟರೆ, ಕೋಳಿ ರೇಟು ಕಡಿಮೆ (Costly Egg) ಆಗಿರುವುದು ಖುಷಿ ತಂದಿದೆ.

ಕೋಳಿ ಮೊಟ್ಟೆ ದರವು ಹೆಚ್ಚಾಗಿದ್ದರೆ, ಇತ್ತ ಚಿಕನ್ ದರ ಇಳಿಕೆಯಾಗಿದೆ. ಕಳೆದ 15 ದಿನಗಳಿಂದ ಮೊಟ್ಟೆ ದರ ಏರಿಕೆ ಕಂಡಿದೆ. ಕಳೆದ ವಾರ ಮೊಟ್ಟೆ ದರ 5 ರೂ. ಇತ್ತು. ಆದರೆ ಈಗ 7.50 ರೂ.ಗೆ ಮಾರಾಟವಾಗುತ್ತಿದೆ.

ಮುಂಗಾರು ಮಳೆ ಕೈಕೊಟ್ಟ ಕಾರಣ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಕೋಳಿಗೆ ನೀಡುವ ಆಹಾರ ದರ ಏರಿಕೆ ಹಾದಿಯಲ್ಲಿದ್ದು, ವಿದ್ಯುತ್ ದರ, ಕಾರ್ಮಿಕರ ವೇತನ ಮೊದಲಾದ ಉತ್ಪಾದನಾ ವೆಚ್ಚಗಳಿಂದ ಮೊಟ್ಟೆ ದರವು ಏರಿಕೆಯಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೇಡಿಕೆಗಿಂತ ಪೂರೈಕೆ ಹೆಚ್ಚಳವಾಗಿದೆ. ಬ್ರಾಯ್ಸರ್ ಕೋಳಿ ಈ ಹಿಂದೆ 180 -200 ರೂ.ವರೆಗೂ ಮಾರಾಟವಾಗಿತ್ತು. ಈಗ ಕೆಜಿಗೆ 140 -160 ರೂ. ಇದೆ.

ಇದನ್ನೂ ಓದಿ: Sesame benefits: ಬಂದಿದೆ ಚಳಿಗಾಲ; ಎಳ್ಳು ತಿನ್ನಲು ಇದು ಸಕಾಲ!

ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!

ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿದೆ. ಉಪ್ಪಿಗಿಂತ ಶ್ರೇಷ್ಠವಾದ ರುಚಿ ಬೇರೆ ಇಲ್ಲ. ಯಾಕೆಂದರೆ, ಯಾವ ರುಚಿಯೂ ಇಲ್ಲದೆ ಅಡುಗೆ ಮಾಡಬಹುದೇನೋ, ಆದರೆ, ಉಪ್ಪಿಲ್ಲದ ಊಟ ಕಷ್ಟ. ಉಪ್ಪು ಹಾಕದ ಅಡುಗೆ ಸಪ್ಪೆಯೇ. ಖಾರ, ಹುಳಿ, ಸಿಹಿಯಿಲ್ಲದೆಯೂ ಊಟ ನಡೆದೀತು. ಆದರೆ ಉಪ್ಪಿಲ್ಲದೆ ಬಹಳ ಕಷ್ಟ. ಅದಕ್ಕಾಗಿಯೇ ಉಪ್ಪಿಗೆ ಅಂಥ ಸ್ಥಾನ. ಉಪ್ಪು ಅಂದ ತಕ್ಷಣ ನಾವು ಬೆಳ್ಳನೆಯ ಪುಡಿ ಎಂದೇ ನೆನೆಸಿಕೊಳ್ಳುತ್ತೇವೆ. ಆದರೆ, ಉಪ್ಪಿನಲ್ಲೂ ಸಾಕಷ್ಟು ವಿಧಗಳಿವೆ. ಬಗೆಬಗೆಯ ಖನಿಜಾಂಶಗಳಿಂದ (mineral rich) ಸಮೃದ್ಧವಾಗಿರುವ ಬೇರೆ ಬೇರೆ ಬಗೆಯ ಉಪ್ಪುಗಳು ದೊರೆಯುತ್ತವೆ. ಇವುಗಳ ಆರೋಗ್ಯ ಲಾಭಗಳೂ (health benefits) ವಿಭಿನ್ನ. ಇಂಥ ಉಪ್ಪಿನ ಬಗೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಹಾಗೂ ಅವುಗಳನ್ನು ಬಳಸುವುದರಿಂದ ನಿಮ್ಮ ಅಡುಗೆಯಲ್ಲೂ ಸಾಕಷ್ಟು ವ್ಯತ್ಯಾಸ (Food Tips, kitchen tips) ಕಂಡುಕೊಳ್ಳಬಹುದು.  ಬನ್ನಿ, ಹಾಗಾದರೆ ಬಗೆಬಗೆಯ ಉಪ್ಪುಗಳ (Salt variety) ಬಗೆಗೆ ಸ್ವಲ್ಪ ತಿಳಿಯೋಣ.

1. ಟೇಬಲ್‌ ಸಾಲ್ಟ್‌: ಟೇಬಲ್‌ ಸಾಲ್ಟ್‌ ಎಂಬುದು ಬಹು ಸಾಮಾನ್ಯವಾಗಿ ಎಲ್ಲರೂ ನಿತ್ಯವೂ ಬಳಸುವ ಉಪ್ಪು. ಸಾಮಾನ್ಯ ಉಪ್ಪು ಎಂದೇ ಜನಜನಿತವಾಗೊರುವ ಇದು ಪುಡಿಯಾದ ರೂಪದಲ್ಲಿ ಬೆಳ್ಳಗೆ ಇರುತ್ತದೆ. ನೀರಿನಲ್ಲಿ ಬಹುಬೇಗನೆ ಕರಗುವ ಇದು ಅಡುಗೆಗೆ ಬಹುತೇಕರು ನಿತ್ಯವೂ ಬಳಸುವ ಉಪ್ಪು. ಅತಿಯಾದ ಸಂಸ್ಕರಣಕ್ಕೆ ಒಳಪಟ್ಟು ತಯಾರಾಗಿ ಬಂದಿರುವುದರಿಂದ ಇದರಲ್ಲಿ ಸಾಕಷ್ಟು ಖನಿಜಾಂಶಗಳು ಇರುವುದಿಲ್ಲ. ಬಹುತೇಕವು ಸಂಸ್ಕರಣದ ಸಂದರ್ಭ ನಷ್ಟವಾಗಿರುತ್ತದೆ. ಸಂಸ್ಕರಿಸುವ ಸಂದರ್ಭ ಅಯೋಡಿನ್‌ ಸೇರಿಸಿರುವ ಉಪ್ಪಿದು.

2. ಕೋಶರ್‌ ಸಾಲ್ಟ್‌: ಇದು ಟೇಬಲ್‌ ಸಾಲ್ಟ್‌ನಷ್ಟು ಪುಡಿಯಾದ ರೂಪದಲ್ಲಿ ಇರುವುದಿಲ್ಲ. ಕೊಂಚ ಹರಳಿನ ಗಾತ್ರದಲ್ಲಿ ದೊರೆಯುತ್ತದೆ. ಇದೂ ಕೂಡಾ ಅಡುಗೆಗೆ ಸಾಮಾನ್ಯವಾಗಿ ಬಳಸಲ್ಪಡುತ್ತದೆ. ಇದನ್ನು ಸೋಡಿಯಂ ಕ್ಲೋರೈಡ್‌ನಿಂದ ನೇರವಾಗಿ ತಯಾರಿಸಿರುತ್ತಾರೆ. ಜೊತೆಗೆ ಇದು ಟೇಬಲ್‌ ಸಾಲ್ಟ್‌ ಮಾದರಿಯಲ್ಲಿ ಅಯೋಡಿನ್‌ ಹಾಗೂ ಕ್ಯಾಲ್ಶಿಯ ಸಿಲಿಕೇಟ್‌ ಸೇರಿಸಲ್ಪಟ್ಟಿರುವುದಿಲ್ಲ. ಹಾಗಾಗಿ ಟೇಬಲ್‌ ಸಾಲ್ಟ್‌ನಂತೆ ಇದು ಗಾಢತೆ ಪಡೆದಿರುವುದಿಲ್ಲ. ಅದಕ್ಕಾಗಿಯೇ ಟೇಬಲ್‌ ಸಾಲ್ಟ್‌ ಕೋಶರ್‌ ಸಾಲ್ಟ್‌ಗಿಂತ ಹೆಚ್ಚು ಉಪ್ಪಾಗಿರುತ್ತದೆ.

3. ಸೀ ಸಾಲ್ಟ್‌ (ಸಮುದ್ರ ಉಪ್ಪು): ಹೆಸರೇ ಹೇಳುವಂತೆ ಈ ಉಪ್ಪನ್ನು ಸಮುದ್ರದ ನೀರಿನಿಂತ ಮಾಡಲಾಗುತ್ತದೆ. ಸಮುದ್ರದ ನೀರನ್ನು ಗದ್ದೆಗಳಂಥ ರಚನೆಯಲ್ಲಿ ಹಾಯುವಂತೆ ಮಾಡಿ, ಅಲ್ಲಿ ಉಪ್ಪು ತಯಾರಿಸಲಾಗುತ್ತದೆ. ಈ ಉಪ್ಪು ಅತ್ಯಂತ ಕಡಿಮೆ ಸಂಸ್ಕರಣಕ್ಕೆ ಒಳಪಡುವುದರಿಂದ ಇದರಲ್ಲಿ ಖನಿಜಾಂಶಗಳು ನಷ್ಟವಾಗಿರುವುದಿಲ್ಲ. ಇದು ನೈಸರ್ಗಿಕವಾಗಿ ತಯಾರು ಮಾಡುವುದರಿಂದ ಬಹಳ ಹಿಂದಿನಿಂದಲೂ ಮನೆಗಳಲ್ಲಿ ಅಡುಗೆಯಲ್ಲಿ ಬಳಸಲ್ಪಡುತ್ತಿದೆ. ಕಲ್ಲುಪ್ಪು ಹೆಸರಿನಲ್ಲಿ ಬಳಕೆಯಾಗುವ ಇದಕ್ಕೆ ನಿರ್ಧಿಷ್ಟ ಪುಡಿಯ ಆಕಾರವಿರುವುದಿಲ್ಲ.

4. ಬ್ಲ್ಯಾಕ್‌ ಸಾಲ್ಟ್‌: ಕಾಲಾ ನಮಕ್‌ ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಈ ಉಪ್ಪು ಇನ್ನೊಂದು ಸಾಮಾನ್ಯ ಬಗೆಯ ಉಪ್ಪು. ಇದನ್ನು ಹಿಮಾಲಯದ ಅಗ್ನಿಪರ್ವತಗಳ ಬಂಡೆಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಮೊದಲಾದ ಖನಿಜಾಂಶಗಳಿವೆ. ಸ್ವಲ್ಪ ಬೆರೆಯದೇ ಪರಿಮಳವಿರುವ ಈ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಕೆಲವು ಅಡುಗೆಗೆ ಬಳಸಬಹುದು.

5. ಹಿಮಾಲಯನ್‌ ಪಿಂಕ್‌ ಸಾಲ್ಟ್:‌ ಹಿಮಾಲಯನ್‌ ಸಾಲ್ಟ್‌ ಕೂಡಾ ಹೆಚ್ಚು ಪುಡಿಯಾದ ಆಕಾರದಲ್ಲಿರುವುದಿಲ್ಲ. ಕಲ್ಲುಪ್ಪಿನ ಹಾಗೆ ಹರಳಿನ ರೂಪದಲ್ಲಿರುತ್ತದೆ. ಪಾಕಿಸ್ತಾನ ಹಾಗೂ ಪಂಜಾಬ್‌ ಪ್ರಾಂತ್ಯದಿಂದ ಗಣಿಗಾರಿಕೆ ಮಾಡಿ ಈ ಉಪ್ಪನ್ನು ಸಂಗ್ರಹಿಸಲಾಗುತ್ತದೆ. ಇದು ಪ್ರಕೃತಿ ಸಹಜವಾಗಿಯೇ ಪಿಂಕ್‌ ಬಣ್ಣದಲ್ಲಿದ್ದು, ಇದರಲ್ಲಿ ಸಾಕಷ್ಟು ಖನಿಜ ಲವಣಗಳಿವೆ. ಹಾಗಾಗಿ ಬಹುತೇಕರು ಇತ್ತೀಚೆಗೆ ಟೇಬಲ್‌ ಸಾಲ್ಟ್‌ ಬದಲಾಗಿ ಪಿಂಕ್‌ ಸಾಲ್ಟ್‌ ಬಳಸುತ್ತಿದ್ದಾರೆ. ಇದರ ಬಣ್ಣದಿಂದಾಗಿ ಈ ಉಪ್ಪು ಆಕರ್ಷಕ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಹಾರ/ಅಡುಗೆ

Winter Food: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಮನೆಯಲ್ಲೇ ಚಿಕ್ಕಿಗಳನ್ನು ಮಾಡಿ!

ಒಣಹಣ್ಣು, ಬೀಜಗಳು, (winter food) ಹಸಿರು ತರಕಾರಿಗಳು, ಬೆಲ್ಲ, ಸೇರಿದಂತೆ, ಹಲವು ಬಗೆಯ ತರಕಾರಿಗಳು, ಕಷಾಯಗಳು ದೇಹವನ್ನು ಬಿಸಿ ಮಾಡುತ್ತವೆ. ಇಂಥ ಚಳಿಗಾಲದ ಆಹಾರಗಳ ಪೈಕಿ ಚಿಕ್ಕಿಯೂ ಒಂದು.

VISTARANEWS.COM


on

Winter Food
Koo

ಚಳಿಗಾಲದಲ್ಲಿ (winter food) ಸಾಮಾನ್ಯವಾಗಿ, ದೇಹವನ್ನು ಬಿಸಿ ಮಾಡುವ ಉಷ್ಣ ಪ್ರಕೃತಿಯ ಕೆಲವು ಆಹಾರಗಳನ್ನು ಸೇವಿಸುವುದು ವಾಡಿಕೆ. ಪರ್ವತ ಪ್ರದೇಶಗಳಲ್ಲಿ, ಅಥವಾ ಚಳಿ ಹೆಚ್ಚಿರುವ ಪ್ರದೇಶಗಳಲ್ಲಿ ಚಳಿಗಾಲ ಬರುತ್ತಿದ್ದ ಹಾಗೆಯೇ, ಚಳಿಗಾಲಕ್ಕೆ ಸಂಬಂಧಿಸಿದಂತೆ ಜೀವನಕ್ರಮವೇ ಬದಲಾಗುತ್ತದೆ. ಆಹಾರದಿಂದ ಹಿಡಿದು, ಧರಿಸುವ ಬಟ್ಟೆಗಳು, ಮಾಡುವ ವೃತ್ತಿ ಎಲ್ಲವೂ ಬದಲಾಗುತ್ತದೆ. ಉಳಿದೆಡೆಗಳಲ್ಲಿ ಚಳಿಗಾಲ ಅಂಥ ತೀವ್ರತೆಯಲ್ಲಿ ಇರದಿದ್ದರೂ, ಜನರು ತಮ್ಮ ಜೀವನಕ್ರಮದಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕೊಂಚ ಮಟ್ಟಿನ ಬದಲಾವಣೆಯನ್ನಾದರೂ ಮಾಡಿಯೇ ಮಾಡುತ್ತಾರೆ. ಮುಖ್ಯವಾಗಿ ಆಹಾರ ಕ್ರಮ ಹಾಗೂ ಬಟ್ಟೆಬರೆಯ ವಿಚಾರದಲ್ಲಿ. ಇಂಥ ಸಂದರ್ಭ, ವಾತಾವರಣದಲ್ಲಿ ಉಷ್ಣತೆಯು ಇಳಿಯುತ್ತಿದ್ದ ಹಾಗೆಯೇ ನಮ್ಮ ದೇಹವೂ ಕೂಡಾ ತನ್ನನ್ನು ತಾನು ಬೆಚ್ಚಗೆ ಇರಿಸಿಕೊಳ್ಳಲು ಕೆಲವು ಉಷ್ಣ ಪ್ರಕೃತಿಯ ಆಹಾರವನ್ನು ಬೇಡುತ್ತದೆ. ಪ್ರಕೃತಿಯೂ ಕೂಡಾ ತಾನೇತಾನಾಗಿ, ಆಯಾ ವಾತಾವರಣಕ್ಕೆ ಅನುಗುಣವಾಗಿಯೇ ಆಹಾರವನ್ನು ನೀಡುವುದರಿಂದ ಆಹಾರದ ಆಯ್ಕೆಯಲ್ಲಿ ನಾವೂ ಹೆಚ್ಚು ಕಷ್ಟಪಡಬೇಕಾಗಿಲ್ಲ. ಒಣಹಣ್ಣು, ಬೀಜಗಳು, ಹಸಿರು ತರಕಾರಿಗಳು, ಬೆಲ್ಲ, ಸೇರಿದಂತೆ, ಹಲವು ಬಗೆಯ ತರಕಾರಿಗಳು, ಕಷಾಯಗಳು ದೇಹವನ್ನು ಬಿಸಿ ಮಾಡುವ ಜೊತೆಗೆ, ಚಳಿಗಾಲದಲ್ಲಿ ಸುಲಭವಾಗಿ ಕಾಡುವ ಶೀತ, ನೆಗಡಿ, ಜ್ವರ, ಕೆಮ್ಮಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳೂ ನಮ್ಮನ್ನು ಬಾಧಿಸದಂತೆ ರಕ್ಷಿಸುವ ಕೆಲಸವನ್ನೂ ಮಾಡುತ್ತವೆ. ಇಂಥ ಚಳಿಗಾಲದ ಆಹಾರಗಳ ಪೈಕಿ ಚಿಕ್ಕಿಯೂ ಒಂದು. ಎಳ್ಳು, ನೆಲಗಡಲೆ ಸೇರಿದಂತೆ, ಒಣ ಬೀಜಗಳನ್ನೂ ಹಾಕಿ ಮಾಡುವ ಚಿಕ್ಕಿ ಚಳಿಗಾಲದಲ್ಲಿ ಎಲ್ಲೆಡೆ ದೊರೆಯುವ ಸರಳವಾದ ಸಿಹಿತಿನಿಸು.

Indian traditional sweets Mithai Gajjak Gur Gajjak

ರುಚಿಯಾದ ತಿನಿಸು

ಉತ್ತರ ಭಾರತದಲ್ಲಿ, ಹಿಮಾಲಯದ ಪ್ರಾಂತ್ಯಗಳಲ್ಲಿ ಗಜ್ಜಕ್‌ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಸಿಹಿತಿನಿಸು, ಸಾಮಾನ್ಯರ ಭಾಷೆಯಲ್ಲಿ ಚಿಕ್ಕಿ. ಕಟ್ಲೀಸ್‌ ಎಂಬ ಹೆಸರಿನಿಂದಲೂ ಕೆಲವೆಡೆ ಕರೆಯಲ್ಪಡುತ್ತದೆ. ಬೆಲ್ಲದ ಪಾಕದಲ್ಲಿ ನೆಲಗಡಲೆಯನ್ನೋ, ಎಳ್ಳನ್ನೋ ಹಾಕಿ ಗಟ್ಟಿಯಾದ ತುಂಡುಗಳನ್ನಾಗಿ ಕತ್ತರಿಸಿ ಮಾಡು ತಿನಿಸು ಇದು. ನೆಲಗಡಲೆ, ಎಳ್ಳು, ಬೆಲ್ಲ ಎಲ್ಲವೂ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಮಾಡುವ ಉಷ್ಣ ಪ್ರಕೃತಿಯ ಆಹಾರಗಳು. ಅಷ್ಟೇ ಅಲ್ಲ, ಕ್ಯಾಲ್ಶಿಯಂ, ಕಬ್ಬಿಣಾಂಶ, ಪ್ರೊಟೀನುಗಳೂ ಸಾಕಷ್ಟು ಇರುವ ಆಹಾರ. ದೇಹವನ್ನು ಗಟ್ಟಿಗೊಳಿಸಿ, ಬೆಚ್ಚಗೂ ಇರಿಸಿ, ರೋಗ ನಿರೋಧಕತೆಯನ್ನೂ ಹೆಚ್ಚು ಮಾಡಿಸುವ ಸಮೃದ್ಧ ಆಹಾರವಿದು. ಚಳಿಗಾಲ ಬಂದಾಗ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸುಲಭವಾಗಿ ಮಾಡಬಹುದಾದ ಹಾಗೂ ಮಾಡಿ ತಮ್ಮ ಮಕ್ಕಳಿಗೂ ತಿನ್ನಿಸಲೇ ಬೇಕಾದ ಆಹಾರ ಇದು. ಬನ್ನಿ, ಪರ್ಫೆಕ್ಟ್‌ ಚಿಕ್ಕಿ ಮಾಡಲು ಕೆಲವು ಟಿಪ್ಸ್‌ಗಳು ಇಲ್ಲಿವೆ.

  • ಬೆಲ್ಲದ ಪಾಕ ಮಾಡಲು ನೀರು ಬಳಸಬೇಡಿ. ನೀರು ಬಳಸಿದರೆ, ಇದು ಬೆಲ್ಲದ ಪಾಕದ ಗುಣಮಟ್ಟವನ್ನು ತಗ್ಗಿಸುತ್ತದೆ.
  • ನೀವು ಯಾವೆಲ್ಲ ಒಣ ಬೀಜಗಳನ್ನು ಹಾಕಿ ಚಿಕ್ಕಿ ಮಾಡಬೇಕೆಂದು ಬಯಸುತ್ತಿದ್ದೀರೋ, ಆ ಬೀಜಗಳನ್ನು ಮೊದಲು ಹದವಾಗಿ ತುಪ್ಪದಲ್ಲಿ ಹುರಿಯಿರಿ. ಇದು ಚಿಕ್ಕಿಯ ರುಚಿಯನ್ನು ಹೆಚ್ಚಿಸುತ್ತದೆ.
  • ಬೆಲ್ಲದ ಪಾಕಕ್ಕೆ ಕೊಂಚ ಬೇಕಿಂಗ್‌ ಪೌಡರ್‌ ಸೇರಿಸಬಹುದು. ಇದು ಚಿಕ್ಕಿಯನ್ನು ಗರಿಗರಿಯನ್ನಾಗಿ ಮಾಡುತ್ತದೆ.
  • ನೆಲಗಡಲೆಯ ಚಿಕ್ಕಿಯೋ, ಎಳ್ಳಿನದೋ, ಅಥವಾ ಒಣಹಣ್ಣು ಹಾಗೂ ಬೀಜಗಳೋ ಎಂಬ ಮೂರ್ನಾಲ್ಕು ಬಗೆಗಳನ್ನು ಮೊದಲೇ ಆಯ್ಕೆಮಾಡಿ. ಒಂದಕ್ಕೊಂದು ಹೊಂದುವ ಕಾಂಬಿನೇಶನ್‌ನಲ್ಲಿ ಮಾಡಿ.

ಮಾಡುವ ವಿಧಾನ

ಮೊದಲು ನೆಲಗಡಲೆಯನ್ನು ಹುರಿದುಕೊಳ್ಳಿ. ಸ್ವಲ್ಪ ಅವನ್ನು ಕ್ರಷ್‌ ಮಾಡಿ. ತೀರಾ ಪುಡಿಪುಡಿಯಾಗಿಸುವುದು ಬೇಡ. ನಂತರ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಬೆಲ್ಲವನ್ನು ಹಾಕಿ. ಅದು ಪಾಕವಾಗಲು ಬಿಡಿ. ಬೆಲ್ಲವೆಲ್ಲ ಕರಗಿ ಪಾಕವಾದ ಮೇಲೆ, ಅದು ಪಾಕದ ಹದಕ್ಕೆ ಕೊಂಚ ಗಟ್ಟಿಯಾಗಲು ಹಾಗೆಯೇ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಪಾಕ ಸರಿಯಾದ ಹದಕ್ಕೆ ಬಂದಿದೆಯೇ ಎಂದು ಪರೀಕ್ಷಿಸಲು ಒಧೆರಡು ಹನಿ ಚಿಮುಕಿಸಿ ನೋಡಬಹುದು. ಈಗ ಕ್ರಷ್‌ ಮಾಡಿದ ನೆಲಗಡಲೆಯನ್ನು ಸೇರಿಸಿ. ನೆಲಗಡಲೆ ಅಲ್ಲದಿದ್ದರೆ, ಯಾವುದರ ಚಿಕ್ಕಿ ಮಾಡುತ್ತೀರೋ ಅವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಒಂದು ಟ್ರೇಯಲ್ಲಿ ತುಪ್ಪ ಸವರಿ, ಈ ಮಿಶ್ರಣವನ್ನು ಹರಡಿ. ಇದು ಸಂಪೂರ್ಣ ತಣ್ಣಗಾದ ಮೇಲೆ ಇವನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ. ರುಚಿಯಾದ ಚಿಕ್ಕಿ ತಿನ್ನಲು ರೆಡಿ! ಚಳಿಗಾಲದಲ್ಲಿ ಊಟದ ನಂತರ ತಿನ್ನಲು ಆರೋಗ್ಯಕರ ಸಿಹಿತಿನಿಸಿದು.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

Continue Reading

ಆರೋಗ್ಯ

Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

ನೀವು 40 ದಾಟಿದ ಮಹಿಳೆಯಾಗಿದ್ದಲ್ಲಿ, ಆರೋಗ್ಯದ ಕಡೆಗೆ ಗಮನ ಹರಿಸುವ ಜೊತೆಗೆ ಈ ಆಹಾರಗಳ ಸೇವನೆಯನ್ನು (Healthy Food For Women) ಮಾತ್ರ ಮರೆಯಬೇಡಿ.

VISTARANEWS.COM


on

woman eating
Koo

40 ದಾಟಿದ ಕೂಡಲೇ ಮಹಿಳೆಯಲ್ಲಿ ಆಗುವ ಬದಲಾವಣೆಗಳು ಅನೇಕ. ಹಾರ್ಮೋನಿನ ಏರುಪೇರು, ಕ್ಯಾಲ್ಶಿಯಂ ಕೊರತೆ, ಭಾವನಾತ್ಮಕ ಸಮಸ್ಯೆಗಳು, ಜೀರ್ಣಕ್ರಿಯೆ ಸಮಸ್ಯೆಗಳೂ ಸೇರಿದಂತೆ ಮಹಿಳೆ ಹಲವು ಮಜಲುಗಳನ್ನು ದೈಹಿಕವಾಗಿ, ಮಾನಸಿಕವಾಗಿ ದಾಟಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಗಳು, ಕೆಲಸದ ಒತ್ತಡ, ಹೆರಿಗೆ, ಆರೋಗ್ಯದ ಕಡೆಗೆ ಗಮನ ಕಡಿಮೆಯಾದ ಕಾರಣಗಳಿಂದ ಮಹಿಳೆ ತನ್ನ ಆರೋಗ್ಯದಲ್ಲಿ ಈ ವಯಸ್ಸಿನ ನಂತರ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇಂಥ ಸಂದರ್ಭ ಮಹಿಳೆಗೆ ಮಾನಸಿಕ ಸಾಂಗತ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೆ ಪೂರಕವಾದ ಸಲಹೆ, ನೆರವು ಹಾಗೂ ಸಮತೋಲಿತ ಆಹಾರ ಸೇವನೆಯೂ (balanced diet) ಅತ್ಯಂತ ಅಗತ್ಯ. ಬನ್ನಿ, ನೀವು 40 ದಾಟಿದ ಮಹಿಳೆಯಾಗಿದ್ದಲ್ಲಿ, ಆರೋಗ್ಯದ ಕಡೆಗೆ ಗಮನ ಹರಿಸುವ ಜೊತೆಗೆ ಈ ಆಹಾರಗಳ ಸೇವನೆಯನ್ನು (Healthy Food For Women) ಮಾತ್ರ ಮರೆಯಬೇಡಿ.

1. ಸೇಬು: ದಿನಕ್ಕೊಂದು ಸೇಬು ಹಣ್ಣನ್ನು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಹಳೇ ಗಾದೆ ನೀವು ಕೇಳಿರಬಹುದು. ಅದು ಸತ್ಯ ಕೂಡಾ. ಸೇಬು ಹಣ್ಣೊಂದನ್ನು ನಿತ್ಯವೂ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ನಾರಿನಂಶ ಹಾಗೂ ಫ್ಲೇವನಾಯ್ಡ್‌ಗಳು ಅಧಿಕವಾಗಿವೆ. ದೇಹದ ಉರಿಯೂತ, ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆಗೊಳಿಸುವ ಜೊತೆಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

2. ಗ್ರೀನ್‌ ಚಹಾ: ಗ್ರೀನ್‌ ಟೀ ಎಂಬ ಚಹಾ ಸಾಕಷ್ಟ ಆಂಟಿ ಆಕ್ಸಿಡೆಂಟ್‌ಗಳಿರುವ ಚಹಾ. ಇದು ಸಾಮಾನ್ಯ ಚಹಾಕ್ಕಿಂತ ಭಿನ್ನವಾದ ಪ್ರಯೋಜನಗಳನ್ನು ನೀಡುವುದರಿಂದ ೪೦ ದಾಟಿದ ಮಹಿಳೆ ಮಾತ್ರವಲ್ಲ, ಎಲ್ಲ ಮಹಿಳೆಯರೂ ಪುರುಷರೂ ಕುಡಿಯಬೇಕಾದ್ದು. ದೇಹದ ಚೀರ್ಣಕ್ರಿಯೆಯನ್ನು ಚುರುಕುಗೊಳಿಸಿ ತೂಕವನ್ನು ಸಮತೋಲನಗೊಳಿಸಿ ಆರೋಗ್ಯ ನೀಡುತ್ತದೆ.

3. ಮೆಂತ್ಯಕಾಳು: ಮೆಂತ್ಯ ಕಾಳಿನ ಸೇವನೆ ದೇಹದ ಕೊಬ್ಬನ್ನು ಇಳಿಸಲು ಅತ್ಯಂತ ಸುಲಭ ಸರಳವಾದ ಉಪಾಯ. ಇದು ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸಗಳ ಉತ್ಪಾದನೆಗೆ ಪ್ರಚೋದನೆ ನೀಡಿ, ಚಯಾಪಚಯ ಕ್ರಿಯೆಯನ್ನು ಪ್ರಚೋದಿಸುತ್ತದೆ.

methi seeds

4. ಅಗಸೆ ಬೀಜ: ಫ್ಲ್ಯಾಕ್‌ ಸೀಡ್‌ ಅಥವಾ ಅಗಸೆ ಬೀಜದಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಹೇರಳವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಕೊಬ್ಬಾಗಿದೆ. ಜೊತೆಗೆ ೪೦ ದಾಟಿದ ಮಹಿಳೆಯರಲ್ಲಿ ಸಾಮಾನಯವಾಗಿ ಕಂಡು ಬರುವ ಹಾರ್ಮೋನ್‌ ಸಮಸ್ಯೆಗಳು ಹಾಗೂ ಮುಟ್ಟಿನ ತೊಂದರೆಗಳಿಗೂ ಇದು ಅತ್ಯಂತ ಒಳ್ಳೆಯದು.

5. ಬೆಣ್ಣೆ ಹಣ್ಣು: ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಪೊಟಾಶಿಯಂ ಹಾಗೂ ಆರೋಗ್ಯಕರ ಕೊಬ್ಬು ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿದೆ. ಚರ್ಮದ ಕಾಂತಿಗೆ, ಚರ್ಮ ಸುಕ್ಕಾಗದಂತೆ ತಡೆಯಲು, ಹೊಳಪಿನ ಕೂದಲಿಗೆ ಹಾಗೂ ರಕ್ತದೊತ್ತಡದ ಸಮತೋಲನಕ್ಕೆ ಬೆಣ್ಣೆ ಹಣ್ಣು ಅತ್ಯಂತ ಯೋಗ್ಯವಾದ ಹಣ್ಣು.

avocado health benefit

6. ಬೀಜಗಳು: ಒಣಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ನಾರಿನಂಶ ಹೇರಳವಾಗಿದ್ದು, ಹೃದಯದ ಆರೋಗ್ಯಕ್ಕೆ, ಮಧುಮೇಹ ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಇವುಗಳು ಒಳ್ಳೆಯದನ್ನೇ ಮಾಡುತ್ತದೆ.

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

7. ಹಸಿರು ಸೊಪ್ಪುಗಳು: ಹಸಿರು ಸೊಪ್ಪುಗಳಲ್ಲಿ ವಿಟಮಿನ್‌ ಕೆ ಹೇರಳವಾಗಿದ್ದು, ಇದರ ಜೊತೆಗೆ ಫೋಲೇಟ್‌, ಕ್ಯಾಲ್ಶಿಯಂ, ಬೀಟಾ ಕೆರೋಟಿನ್‌ಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಪಾಲಕ್‌, ಬಸಳೆ, ಮೆಂತೆ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಹಸಿರು ಸೊಪ್ಪುಗಳೂ ಕೂಡಾ, ಪೋಷಕಾಂಶಗಳ ಭಂಡಾರವನ್ನೇ ಹೊಂದಿರುವುದರಿಂದ ಮಹಿಳೆಯರು ಆಗಾಗ ತಿನ್ನಲೇಬೇಕಾದ ಆಹಾರ ಇವು.

soppu

8. ಮೊಸರು: ಪ್ರತಿ ದಿನವೂ ಒಂದು ಕಪ್‌ ಗಟ್ಟಿಯಾದ ಮೊಸರಿನ ಸೇವನೆ ಮಹಿಳೆಯರಿಗೆ ಒಳ್ಳೆಯದು. ಮಹಿಳೆಯರು 40 ದಾಟಿದ ಮೇಲೆ ನಿಧಾನವಾಗಿ ಕ್ಯಾಲ್ಶಿಯಂ ಮತ್ತಿತರ ಪೋಷಕಾಂಶಗಳ ಕೊರತೆಯಿಂದ ಮೂಳೆಗಳು ಶಕ್ತಿ ಕುಂದಿ, ಅನುಭವಿಸುವ ಆರೋಗ್ಯ ಸಮಸ್ಯೆಗಳಿಗೆ ನಿಸರ್ಗದತ್ತವಾದ ಕ್ಯಾಲ್ಶಿಯಂ ಮೂಲಗಳಿರುವ ಆಹಾರ ಸೇವನೆ ತ್ಯಂತ ಅಗತ್ಯ. ಮೊಸರಿನಲ್ಲಿ ಕ್ಯಾಲ್ಶಿಯಂ ಸೇರಿದಂತೆ ಪ್ರೊಬಯಾಟಿಕ್‌ ಗುಣಗಳಿರುವುದರಿಂದ ಜೀರ್ಣಕ್ರಿಯೆಗೂ ಇದು ಒಳ್ಳೆಯದು. ಈ ಎಲ್ಲ ಆಹಾರಗಳೂ ಹಿತಮಿತವಾಗಿದ್ದರೆ ಆರೋಗ್ಯವೂ ಸರಿಯಾದ ಹಾದಿಯಲ್ಲಿರುತ್ತದೆ ಎಂಬುದನ್ನು ಮಾತ್ರ ಮರೆಯದಿರಿ.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Continue Reading

ಆರೋಗ್ಯ

Dry Fruits Benefits: ಒಣಹಣ್ಣುಗಳನ್ನೂ, ಬೀಜಗಳನ್ನೂ ತಿನ್ನಿ: ಕ್ಯಾನ್ಸರ್‌ ನಿರೋಧಕತೆ ಬೆಳೆಸಿಕೊಳ್ಳಿ!

ಕೆಲವು ಆರೋಗ್ಯಕರ ಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳು ಬರದಂತೆ ನಾವು ಜಾಗ್ರತೆ ವಹಿಸಬಹುದು. ಬನ್ನಿ, ಯಾವೆಲ್ಲ ಒಣಹಣ್ಣು ಹಾಗೂ ಬೀಜಗಳಲ್ಲಿ (dry fruits benefits) ಕ್ಯಾನ್ಸರ್‌ ವಿರೋಧಿ ಗುಣಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

dry fruits
Koo

ಕ್ಯಾನ್ಸರ್‌ (cancer) ಜಗತ್ತಿನಾದ್ಯಂತ ಅತ್ಯಂತ ಭಯ ಹುಟ್ಟಿಸಿರುವ ರೋಗಗಳಲ್ಲಿ ಒಂದು. ಗೊತ್ತೇ ಆಗದಂತೆ ದೇಹದಲ್ಲಿ ಭೂತಾಕಾರವಾಗಿ ಬೆಳೆದುಬಿಡುವ ಸಮಸ್ಯೆ ಇದು. ರೋಗಿಗೆ ತನ್ನ ದೇಹದಲ್ಲೇ ರಾಕ್ಷಸನೊಬ್ಬ ಬೆಳೆಯುತ್ತಿದ್ದಾನೆಂಬ ಅರಿವೂ ಕೂಡಾ ಬಹಳ ಸಲ ಆಗುವುದೇ ಇಲ್ಲ. ಯಾವುದೇ ಅಂಗವನ್ನೂ ಆಕ್ರಮಿಸಿ ನಿಧಾನವಾಗಿ ತನ್ನ ಕಬಂಧ ಬಾಹುಗಳನ್ನು ಚಾಚಿ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯುವ ಈ ಕ್ಯಾನ್ಸರ್‌ ಎಂಬ ಹೆಮ್ಮಾರಿಯ ಹೆಸರು ಕೇಳಿದೊಡನೆಯೇ ಬಹಳಷ್ಟು ಮಂದಿ ನಡುಗಿಬಿಡುತ್ತಾರೆ. ಇನ್ನು ಕ್ಯಾನ್ಸರ್‌ ವಿರುದ್ಧ ಹೋರಾಡಿ ಜಯಗಳಿಸುವುದೆಂದರೆ ಸುಲಭದ ಮಾತಲ್ಲ. ಆದರೆ, ಅಷ್ಟು ಧೃತಿಗೆಡುವ ಅಗತ್ಯವಿಲ್ಲ, ಅದು ಸಾಧ್ಯವಿದೆ ಎಂದು ಸಾಧಿಸಿ ತೋರಿಸಿ ಫೀನಿಕ್ಸ್‌ನಂತೆ ಎದ್ದು ಬಂದು ನಮ್ಮ ನಡುವೆ ಸ್ಪೂರ್ತಿಯಾಗಿ ಬದುಕುತ್ತಿರುವ ಮಂದಿಯೂ ಇದ್ದಾರೆ.

ಇಂಥ ಕ್ಯಾನ್ಸರ್‌ ನಮಗೆ ಬರದಂತೆ ಕಾಪಾಡುವುದರಲ್ಲಿ ನಮ್ಮ ಕೈಯಲ್ಲೇನಿದೆ ಎಂದು ನಾವು ಕೈಚೆಲ್ಲಿ ಕೂರಬೇಕಿಲ್ಲ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳು ಬರದಂತೆ ನಾವು ಜಾಗ್ರತೆ ವಹಿಸಬಹುದು. ಕೆಲವು ಆಹಾರ ಕ್ರಮಗಳ (Healthy food) ಅಳವಡಿಕೆ, ಜೀವನಕ್ರಮದಲ್ಲಿ ಬದಲಾವಣೆ (Lifestyle change) ಇತ್ಯಾದಿ ಇತ್ಯಾದಿಗಳ ಬಗ್ಗೆ ಅರಿವು ಹೆಚ್ಚು ಮಾಡಿಕೊಳ್ಳುವ ಅಗತ್ಯವೂ ಇದೆ. ಒಂದು ಅಧ್ಯಯನದ ಪ್ರಕಾರ, ಒಣ ಹಣ್ಣುಗಳನ್ನೂ, ಬೀಜಗಳನ್ನೂ ನಿತ್ಯವೂ ಸೇವನೆ ಮಾಡುವ ಮೂಲಕ ಕ್ಯಾನ್ಸರ್‌ ನಿರೋಧಕತೆಯನ್ನು ನಾವು ಬೆಳೆಸಿಕೊಳ್ಳಬಹುದು ಎಂಬುದು. ಹಾಗಂತ, ಇವು ಒಳ್ಳೆಯದೆಂದ ಇವನ್ನೇ ಹೆಚ್ಚು ತಿಂದು ತೂಕ ಹೆಚ್ಚಿಸಿಕೊಳ್ಳುವ ಅಪಾಯವೂ ಇದೆ. ಆ ಮೂಲಕ ಬೇರೆ ಅಪಾಯಗಳನ್ನು ಸ್ವಾಗತಿಸುವ ಹಾಗಾದೀತು. ಹಾಗಾಗಿ, ಹಿತಮಿತವಾಗಿ ತಿನ್ನುವುದು ಇಲ್ಲಿ ಮುಖ್ಯವೆನಿಸುತ್ತದೆ. ಬನ್ನಿ, ಯಾವೆಲ್ಲ ಒಣಹಣ್ಣು ಹಾಗೂ ಬೀಜಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳಿವೆ ಎಂಬುದನ್ನು ನೋಡೋಣ.

1. ಬಾದಾಮಿ, ಹೇಜಲ್‌ನಟ್‌, ಪೈನ್‌ ನಟ್‌ ಮೊದಲಾದ ಒಣ ಬೀಜಗಳಲ್ಲಿ ಆಲ್ಫಾ ಟೋಕೋಫೆರಾಲ್‌ ಎಂಬ ವಿಟಮಿನ್‌ ಇ ಇದೆ. ಇದು ಆಂಟಿ ಆಕ್ಸಿಡೆಂಟ್‌ ಗುಣಗಳನ್ನು ಹೊಂದಿರುವುದರಿಂದ ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

2. ವಾಲ್‌ನಟ್‌, ಪಿಸ್ತಾ ಮತ್ತಿತರ ಒಣಬೀಜಗಳಲ್ಲಿಹಾರ್ಬರ್‌ ಟೋಕೋಟ್ರೈನಾಲ್‌ಗಳು ಹಾಗೂ ಗಮ್ಮಾ- ಟೋಕೋಫೆರಾಲ್ಗಳು ಇವೆ. ಇದು ವಿಟಮಿನ್‌ ಇ ಯ ಪರ್ಯಾಯವಾಗಿದ್ದು ಇದು ಆಲ್ಫಾ ಟೋಕೋಫೆರಾಲ್‌ಗಿಂತಲೂ ಒಂದು ಪಟ್ಟು ಹೆಚ್ಚೇ ಆಂಟಿ ಇನ್‌ಫ್ಲಮೇಟರಿ ಗುಣಗಳನ್ನು ಹೊಂದುವ ಮೂಲಕ ಕ್ಯಾನ್ಸರ್‌ ನಿರೋಧಕವಾಗಿಯೂ ದೇಹದಲ್ಲಿ ಕೆಲಸ ಮಾಡುತ್ತದೆ.

nuts

3. ಒಣಹಣ್ಣುಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳಿದ್ದು, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೆಚ್ಚಿವೆ. ಇವುಗಳಲ್ಲಿರುವ ಫೈಟೋ ಕೆಮಿಕಲ್‌ಗಳಾದ, ಟರ್ಪೀನ್‌, ಆಂಥೋಸಯನಿನ್‌, ಕೌಮಾರಿನ್‌, ಕ್ಸಾಂಥೋನ್‌ ಹಾಗೂ ಕೆರೋಟಿನಾಯ್ಡ್‌ಗಳು ಕ್ಯಾನ್ಸರ್‌ ನಿರೋಧಕವಾಗಿ ದೇಹದಲ್ಲಿ ಕೆಲಸ ಮಾಡುತ್ತವೆ.

ಇದನ್ನೂ ಓದಿ: Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

4. ಅಮೆರಿಕನ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಕ್ಯಾನ್ಸರ್‌ ರೀಸರ್ಚ್‌ನ ಪ್ರಕಾರ, ಎಲ್ಲ ಬಗೆಯ ಬೀಜಗಳು ಮುಖ್ಯವಾಗಿ ವಾಲ್ನಟ್‌ ಕ್ಯಾನ್ಸರ್‌ ನಿರೋಧಕ ಗುಣವನ್ನು ಹೊಂದಿವೆ. ವಾಲ್ನಟ್‌ನಲ್ಲಿರುವ ಪೆಡಂಕ್ಯುಲಾಗಿನ್‌ ಅಂಶವು ಯುರೋಲಿಥಿನ್‌ ಆಗ ಬದಲಾಯಿಸುವ ಮೂಲಕ ಸ್ತನ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ. ಹಾಗಾಗಿ ಮಹಿಳೆಯರಿಗೆ ಮುಖ್ಯವಾಗಿ ವಾಲ್ನಟ್‌ ಬಹಳ ಒಳ್ಳೆಯದು.

5. ಒಣದ್ರಾಕ್ಷಿಯ ನಿತ್ಯ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಇದು ಪ್ರೊಸ್ಟಾಗ್ಲಾಂಡಿನ್‌ ಮೆಟಬೋಲೈಟ್‌ ಸ್ರವಿಸುವ ಮೂಲಕ ಕ್ಯಾನ್ಸರ್‌ ಅಂಗಾಂಶಗಳ ಬೆಳವಣಿಗೆಯಾಗದಂತೆ ತಡೆಯುತ್ತದೆ.

6. ಒಣ ಪ್ಲಮ್‌ ಹಣ್ಣಿನಲ್ಲಿ ಅತ್ಯುತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಬೀಟಾ ಕೆರೋಟಿನ್‌ ಹಾಗೂ ಕಾರ್ಬೋಲಿನ್‌, ಫಿನೋಲಿಕ್‌ ಅಂಶಗಳೂ ಇವೆ. ಇವೆಲ್ಲವೂ, ಹೊಟ್ಟೆ ಹಾಗೂ ಸಂಬಂಧಿತ ಅಂಗಗಳಲ್ಲಿ ಕ್ಯಾನ್ಸರ್‌ ಬರದಂತೆ ತಡೆಯುತ್ತವೆ.

7. ಒಣ ಅಂಜೂರ: ಒಣ ಅಂಜೂರ ಹಣ್ಣಿನಲ್ಲಿ ನಾರಿನಂಶವೂ ಸಾಕಷ್ಟು ವಿಟಮಿನ್‌ಗಳೂ, ಖನಿಜಾಂಶಗಳೂ, ಪಾಲಿಫಿನಾಲ್‌ಗಳೂ ಶ್ರೀಮಂತವಾಗಿದ್ದು ಕ್ಯಾನ್ಸರ್‌ಗೆ ಅತ್ಯುತ್ತಮವಾಗಿದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading

ಆರೋಗ್ಯ

Food Tips: ನೇರಳೆ ಬಣ್ಣದ ತರಕಾರಿಗಳನ್ನೇಕೆ ನಾವು ತಿನ್ನಬೇಕು ಗೊತ್ತೇ?

ನೇರಳೆ ಬಣ್ಣದ ತರಕಾರಿಗಳೂ (Violet vegetables) ಕೂಡಾ ಇತರ ತರಕಾರಿಗಳಿಗಿಂತ ಭಿನ್ನ. ಇವುಗಳಲ್ಲಿ ಇತರ ತರಕಾರಿಗಳಲ್ಲಿ ಕಾಣಸಿಗದ ಅಪರೂಪದ ಪೋಷಕಾಂಶವಿದೆ. ಅದರ ಹೆಸರು ಆಂಥೋಸಯನಿನ್.‌

VISTARANEWS.COM


on

violet vegetables
Koo

ಬಣ್ಣದಲ್ಲೇನಿದೆ ಎಂದು ನೀವು ಕೇಳಬಹುದು. ದೊಣ್ಣೆ ಮೆಣಸಿನಕಾಯಿ ಹಸಿರಾದರೇನು, ಕೆಂಪಾದರೇನು, ಹಳದಿಯಾದರೇನು, ಯಾವುದೇ ಬಣ್ಣದಲ್ಲಿರಲಿ ಬಣ್ಣ, ರುಚಿ ದೊಣ್ಣೆ ಮೆಣಸಿನಕಾಯಿಯೇ ಅಲ್ಲವೇ ಎಂದು ವಾದ ಮಾಡಬಹುದು. ಇನ್ನು ಕ್ಯಾಬೇಜು ತಿಳಿ ಹಸಿರು ಬಣ್ಣದ್ದಾದರೇನು, ನೇರಳೆ ಬಣ್ಣದ್ದಾದರೇನು ಎಂದೂ ಅನಿಸಬಹುದು. ಸಾಮಾನ್ಯ ಬಣ್ಣದ ಹಸಿರು ತರಕಾರಿಗಳು ಸಾಮಾನ್ಯರ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾದರೆ, ಈ ವಿಶೇಷ ಬಣ್ಣಗಳಲ್ಲಿ ಸಿಗುವ ತರಕಾರಿಗಳು ಮಾತ್ರ ದುಪ್ಪಟ್ಟು ಬೆಲೆ ತೆತ್ತು ಯಾಕೆ ಕೊಳ್ಳಬೇಕು ಎಂದೂ ಎನಿಸಬಹುದು. ಬಹಳ ಸಾರಿ, ಮಾಡಿದ ಅಡುಗೆಯನ್ನು ಅಲಂಕರಿಸಲು, ಬಣ್ಣಗಳಲ್ಲಿ ಚಂದ ಕಾಣಿಸುವಂತೆ ಮಾಡಲು ಇವನ್ನು ಕೊಂಡರೂ, ಇವುಗಳಿಂದ ಹೆಚ್ಚು ಉಪಯೋಗ ಇಲ್ಲ ಎಂದು ನಿಮಗನಿಸಿದರೆ ಅದು ತಪ್ಪು. ತರಕಾರಿಯ ಬಣ್ಣಗಳಿಗೂ ಅದರ ಬಣ್ಣವನ್ನವಲಂಬಿಸಿರುವ ವಿಶೇಷ ಮಹತ್ವವಿದೆ.

ನೇರಳೆ ಬಣ್ಣದ ತರಕಾರಿಗಳೂ (Violet vegetables) ಕೂಡಾ ಇತರ ತರಕಾರಿಗಳಿಗಿಂತ ಭಿನ್ನ. ಇವುಗಳಲ್ಲಿ ಇತರ ತರಕಾರಿಗಳಲ್ಲಿ ಕಾಣಸಿಗದ ಅಪರೂಪದ ಪೋಷಕಾಂಶವಿದೆ. ಅದರ ಹೆಸರು ಆಂಥೋಸಯನಿನ್(anthocyanins).‌ ಇದರಿಂದ ಹಲವು ಬಗೆಯಲ್ಲಿ ಇದು ಆರೋಗ್ಯಕರವಾಗಿರಲು (Healthy food) ತನ್ನ ಕಾಣಿಕೆ ಸಲ್ಲಿಸುತ್ತದೆ. ನೇರಳೆ ಬಣ್ಣದ ಕ್ಯಾರೆಟ್‌, ಮೂಲಂಗಿ, ಸಿಹಿಗೆಣಸು, ಹೂಕೋಸು, ಕ್ಯಾಬೇಜು, ಬದನೆಕಾಯಿ, ಬ್ಲ್ಯಾಕ್‌ಬೆರಿ, ದ್ರಾಕ್ಷಿ ಹೀಗೆ ಯಾವುದೇ ಹಣ್ಣು ತರಕಾರಿಗಳನ್ನು ತೆಗೆದುಕೊಳ್ಳಿ ಅವುಗಳಲ್ಲಿ ಆಂಥೋಸಯನಿನ್‌ ಇರುತ್ತದೆ. ಬನ್ನಿ, ಇಂದು ನಾವಿಲ್ಲಿ ಮುಖ್ಯವಾಗಿ, ನೇರಳೆ ಬಣ್ಣದ ಕ್ಯಾಬೇಜು ಇತರ ಕ್ಯಾಬೇಜುಗಳಿಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಪೋಷಕಾಂಶಗಳನ್ನು (nutrients) ಹೊಂದಿದೆ ಎಂಬುದನ್ನು ನೋಡೋಣ.

1. ನೇರಳೆ ಬಣ್ಣದ ಕ್ಯಾಬೇಜಿನಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ವಿಟಮಿನ್‌ ಕೆ ಹಾಗೂ ಬಿ೬ ಕೂಡಾ ಸಾಕಷ್ಟು ಪ್ರಮಾಣದಲ್ಲಿದೆ. ಜೊತೆಗೆ ಮ್ಯಾಂಗನೀಸ್‌, ನಾರಿನಂಶ, ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇದರಲ್ಲಿವೆ.

2. ಕ್ಯಾಬೇಜಿಗೆ ನೇರಳೆ ಬಣ್ಣವನ್ನು ಕೊಡುವ ಆಂಥೋಸಯನಿನ್‌ ಇದರಲ್ಲಿ ಹೇರಳವಾಗಿರುವುದರಿಂದ ಇದು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟನ್ನು ನೀಡುತ್ತದೆ. ಜೊತೆಗೆ ಆಕ್ಸಿಡೇಟಿವ್‌ ಸ್ಟ್ರೆಸ್‌ ಅನ್ನು ದೇಹದಿಂದ ಕಡಿಮೆಗೊಳಿಸುತ್ತದೆ.

3. ಹೃದಯದ ಆರೋಗ್ಯಕ್ಕೆ ಈ ನೇರಳೆ ಕ್ಯಾಬೇಜು ಬಹಳ ಒಳ್ಳೆಯದು. ಇದರಲ್ಲಿ ಹೇರಳವಾಗಿರುವ ಆಂಥೋಸಯನಿನ್‌ಗಳು ಹಾಗೂ ಪಾಲಿಫೀನಾಲ್‌ಗಳು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಕೊಲೆಸ್ಟೆರಾಲ್‌ ಕಡಿಮೆಗೊಳಿಸಿ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

4. ಇದರಲ್ಲಿ ಹೇರಳವಾಗಿ ನಾರಿನಂಶವೂ ಇರುವುದರಿಂದ ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಜೀರ್ಣಾಂಗವ್ಯೂಹವನ್ನು ಆರೋಗ್ಯವಾಗಿರಿಸಿ ಮಲಬದ್ಧತೆಯನ್ನೂ ನಿವಾರಿಸುತ್ತದೆ.

5. ನೇರಳೆ ಕ್ಯಾಬೇಜಿನಲ್ಲಿ ಅಧಿಕಾವಹಿರುವ ಫೈಟೀ ನ್ಯೂಟ್ರಿಯೆಂಟ್‌ಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಕೆಲವು ಬಗೆಯ ಕ್ಯಾನ್ಸರ್‌ನನ್ನೂ ಬರದಂತೆ ತಡೆಗಟ್ಟುತ್ತದೆ.

6. ನೇರಳೆ ಕ್ಯಾಬೇಜಿನಲ್ಲಿ ವಿಟಮಿನ್‌ ಎ ಕೂಡಾ ಹೆಚ್ಚಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಉತ್ತಮ ದೃಷ್ಟಿಗೆ ಹಾಗೂ ಕಣ್ಣಿನ ಇತರ ಸಮಸ್ಯೆಗಳಿಗೂ ಇದು ಅತ್ಯುತ್ತಮ.

ಇದನ್ನೂ ಓದಿ: Food Tips: ಈ ಆಹಾರಗಳನ್ನು ಬೇಯಿಸಿದರೇ ಪೋಷಕಾಂಶಗಳಿಂದ ಸಮೃದ್ಧ, ಮರೆಯಬೇಡಿ

7. ಇದರಲ್ಲಿರುವ ವಿಟಮಿನ್‌ ಕೆ, ಎಲುಬಿನ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಎಲುಬು ಕ್ಯಾಲ್ಶಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಎಲುಬು ನಷ್ಟವಾಗದಂತೆ ನೋಡಿಕೊಳ್ಳುತ್ತದೆ.

8. ತೂಕ ಇಳಿಸಿಕೊಳ್ಳುವ ಮಂದಿಗೂ ಇದು ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ, ನೇರಳೆ ಕ್ಯಾಬೇಜು ತೂಕ ಇಳಿಸಲು ಸಹಾಯ ಮಾಡುತ್ತದೆ.

9. ನೇರಳೆ ಕ್ಯಾಬೇಜಿನಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳೂ ಹೆಚ್ಚಿವೆ. ಹೀಗಾಗಿ ಇದು ಯಾವುದೇ ಬಗೆಯ ಉರಿಯೂತ ಇತ್ಯಾದಿ ಸಮಸ್ಯೆಗಳನ್ನು ತಡೆಯುತ್ತದೆ. ಸಂಧಿವಾತದಂತಹ ಸಮಸ್ಯೆಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಉರಿಯೂತಕ್ಕೂ ಹೀಗಾಗಿ ಇದು ಬಹಳ ಒಳ್ಳೆಯದು.

ಇದನ್ನೂ ಓದಿ: Food Tips: ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!

Continue Reading
Advertisement
Raja Marga Father and Daughter
ಅಂಕಣ10 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ28 mins ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ58 mins ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ1 hour ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್1 hour ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ8 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್8 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್8 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ9 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ13 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ19 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌