Edited By: Pragati Bhandari

ಟಾಸ್ಕ್‌ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಪ್ರಬಲ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದೀಗ ವರ್ತೂರ್‌ ಅವರು ʻಬೆಂಕಿʼ ತನಿಷಾ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. 

ʻʻಬೆಂಕಿ ಯೋಚನೆಯಲ್ಲಿ ಮುಳುಗಿ ಹೋಗಿದ್ದಾರೆ ವರ್ತೂರ್‌ʼʼಎಂದರು ನಮ್ರತಾ

ಈ ರೀತಿ ಒಬ್ಬರಿಗೋಸ್ಕರ ಕನವರಿಸಿಕೊಂಡವರನ್ನು ನಾನು ಇತಿಹಾಸದಲ್ಲಿ ನೋಡಿಲ್ಲ ಎಂದರು ತುಕಾಲಿ ಸಂತೋಷ್‌

ವರ್ತೂರ್‌ ಕೂಡ ತನಿಷಾ ವಾಪಸ್ ಬಂದ್ರೆ ಸಾಕು ಎಂದಿದ್ದಾರೆ. 

ತುಕಾಲಿ ಕೂಡ ʻʻಏನಾಗಿರಲಿಲ್ಲ, ಪ್ರಾಬ್ಲಮ್ ಇದ್ದಿದ್ದರೆ ಬಿಗ್ ಬಾಸ್ ಹೇಳುತ್ತಿದ್ರು. ಒಂದು ಬೆಡ್ ರೆಸ್ಟ್ ಬೇಕಿರತ್ತೆʼʼಎಂದರು.

ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೇರ ನಡೆನುಡಿಯ ತನಿಷಾ ಮೊದಲಿನಿಂದಲೂ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ.