Edited By: Pragati Bhandari

ಜೀರಿಗೆಯನ್ನು ಕುದಿಯುವ ನೀರಿನಲ್ಲಿ ಕೆಲಕಾಲ ನೆನೆಸಿದರಾಯಿತು. ಬೇಕಿದ್ದರೆ ಶುಂಠಿ, ಪೆಪ್ಪರ್‌ ಮುಂತಾದವುಗಳನ್ನು ಸೇರಿಸಿಕೊಳ್ಳಬಹುದು.

ಜೀರಿಗೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಉರಿಯೂತವನ್ನು ಕಡಿಮೆ ಮಾಡುತ್ತವೆ  

ಶರೀರದ ಚಯಾಪಚಯವನ್ನು ಹೆಚ್ಚಿಸಿ, ಬೊಜ್ಜು, ತೂಕ ಇಳಿಕೆಗೆ ಇದು ನೆರವಾಗುತ್ತದೆ

ಹೊಟ್ಟೆಯುಬ್ಬರ, ಅಜೀರ್ಣ, ಹುಳಿತೇಗು, ಆಸಿಡಿಟಿಯಂಥ ಸಮಸ್ಯೆಗಳ ನಿವಾರಣೆಗೆ ಇದು ಒಳ್ಳೆಯ ಮದ್ದು

ಇದರಲ್ಲಿ ನಾರಿನಂಶ ಸಾಕಷ್ಟಿದ್ದು, ಕಳ್ಳ ಹಸಿವೆಯನ್ನು ನಿವಾರಿಸಿ, ಅತಿಯಾಗಿ ತಿನ್ನದಂತೆ ತಡೆಯುತ್ತದೆ

ದೇಹದಲ್ಲಿ ಜಮೆಯಾಗಿರುವ ಕೊಬ್ಬು, ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣ ಜೀರಿಗೆಗಿದೆ

ರಕ್ತದೊತ್ತಡ, ಮಧುಮೇಹಗಳ ನಿಯಂತ್ರಣಕ್ಕೆ ನೆರವಾಗುವ ಇದು, ಹೃದಯ ಆರೋಗ್ಯಕ್ಕೂ ಪೂರಕ

ಅಡುಗೆಯ ರುಚಿಯನ್ನು ಹೆಚ್ಚಿಸುವ ಜೀರಿಗೆ ಆರೋಗ್ಯಕ್ಕೂ ಅಗತ್ಯವಾಗಿ ಬೇಕಾದಂಥದ್ದು