Edited By: Pragati Bhandari

ದೇಹಕ್ಕೆ ಅಗತ್ಯವಾದ ನೀರಿನೊಂದಿಗೆ ದೊರೆಯುವ ನಿಂಬೆ ರಸ ಜೀರ್ಣಕಾರಿ.

ವಿಟಮಿನ್‌ ಸಿ ಅಂಶವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ, ಸೋಂಕುಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ.

ನೆಗಡಿ, ಕೆಮ್ಮು ಮುಂತಾದ ಋತುಮಾನದ ಕಿರಿಕಿರಿಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ.

ಶರೀರದ ಶಕ್ತಿ ಚೈತನ್ಯಗಳು ಹೆಚ್ಚಿ, ದಿನವಿಡೀ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ.

ಚರ್ಮ ನುಣುಪಾಗಿ ಕಾಂತಿಯುಕ್ತವಾಗಲು ನಿಂಬೆ ನೀರು ಸಹಾಯ ಮಾಡುತ್ತದೆ.

ಸಿ ಜೀವಸತ್ವವು ಉತ್ಕರ್ಷಣ ನಿರೋಧಕವಾಗಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ.

ದೇಹದ ಚಯಾಪಚಯ ಹೆಚ್ಚಿಸಿ, ತೂಕ ಇಳಿಸುವವರಿಗೆ ನಿಂಬೆ ನೀರು ನೆರವಾಗುತ್ತದೆ.