Site icon Vistara News

Actor Nani: ರಾಮ್ ಚರಣ್ ಜತೆ ತನ್ನನ್ನು ತಾನು ಹೋಲಿಸಿಕೊಂಡ ಟಾಲಿವುಡ್‌ ನಾನಿ: ನೆಪೋಟಿಸಂ ಬಗ್ಗೆ ನಟ ಹೇಳಿದ್ದೇನು?

Actor Nani opens up on nepotism, compares himself with Ram Charan

ಬೆಂಗಳೂರು: ಟಾಲಿವುಡ್‌ ನಟ ನಾನಿ (Actor Nani) ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ. ಇತ್ತೀಚೆಗೆ ರಾಣಾ ದಗ್ಗುಬಾಟಿ ಜತೆಗೆ ತೆಲುಗು ಸೆಲೆಬ್ರಿಟಿ ಟಾಕ್ ಶೋಗಾಗಿ ಆಗಮಿಸಿದ್ದರು. ಸಿನಿಮಾ ಹಿನ್ನೆಲೆಯಿಂದ ಬಂದಿರದ ನಾನಿ ಇಂಡಸ್ಟ್ರಿಯಲ್ಲಿ ತನ್ನದೇ ಆದ ದಾರಿಯನ್ನು ರೂಪಿಸಿಕೊಂಡಿದ್ದು, ನೆಪೋಟಿಸಂ ಕುರಿತ ಪ್ರಶ್ನೆಗೆ ಉತ್ತರಿಸುವಾಗ ರಾಮ್ ಚರಣ್ ಜತೆ ತನ್ನನ್ನು ತಾನು ಹೋಲಿಸಿಕೊಂಡಿದ್ದಾರೆ.

ನಾನಿ ಮತ್ತು ರಾಣಾ ಇಬ್ಬರೂ ನಿಜಮ್ ವಿತ್ ಸ್ಮಿತಾ ಎಂಬ ಚಾಟ್ ಶೋನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಗಾಯಕಿ ಸ್ಮಿತಾ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ನಾನಿ ಹಾಗೂ ರಾಣಾ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ಮಾತನಾಡಿರುವ ಪ್ರೊಮೊ ವೈರಲ್‌ ಆಗಿದೆ.

ನೆಪೋಟಿಸಂ ಬಗ್ಗೆ ನಾನಿ ಮಾತನಾಡುವಾಗ ʻʻನನ್ನ (ನಾನಿ) ಮೊದಲ ಚಿತ್ರವನ್ನು ಒಂದು ಲಕ್ಷ ಜನರು ವೀಕ್ಷಿಸುತ್ತಾರೆ, ಆದರೆ ರಾಮ್‌ ಚರಣ್ ಅವರ ಮೊದಲ ಚಿತ್ರವನ್ನು ಒಂದು ಕೋಟಿ ಜನರು ವೀಕ್ಷಿಸುತ್ತಾರೆ. ಜನರು ಯಾವಾಗಲೂ ತಮ್ಮ ಆರಾಧ್ಯದೈವನ ಪುತ್ರ ಹಾಗೂ ಮತ್ತು ಪುತ್ರಿಯರನ್ನು ಹಿರಿತೆರೆಯಲ್ಲಿ ನೋಡಲು ಬಯಸುವುದರಿಂದ ಸ್ವಜನಪಕ್ಷಪಾತವನ್ನು ಉತ್ತೇಜಿಸುವ ಜವಾಬ್ದಾರಿ ಪ್ರೇಕ್ಷಕರದ್ದೇ ಆಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Nani | ಫ್ರೆಂಡ್‌ಶಿಪ್‌ ಡೇಗೆ ನಾನಿ ನಟನೆಯ ದಸರಾ ಸಿನಿಮಾ ಪೋಸ್ಟರ್‌ ರಿವೀಲ್‌: ನಾನಿ ಜತೆ ಮಿಂಚಿದ ಕನ್ನಡದ ನಟ

ಅದೇ ಪ್ರೋಮೊದಲ್ಲಿ ರಾಣಾ ಕೂಡ ನೆಪೋಟಿಸಂ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪರಂಪರೆಯನ್ನು ಸಾಗಿಸುವುದು ಪ್ರೇಕ್ಷಕರ ಹೆಮ್ಮೆ ಎಂದರು. “ನಿಮ್ಮ ಪೋಷಕರ ಸಾಧನೆಗಳು ಮತ್ತು ಪರಂಪರೆಯನ್ನು ನೀವು ಮುಂದುವರಿಸಲು ಸಾಧ್ಯವಾಗದಿದ್ದರೆ, ನೀವು ನಿಮ್ಮ ಕುಟುಂಬಕ್ಕೆ ಅಪಚಾರ ಮಾಡುತ್ತಿದ್ದೀರಿ ಎಂದು ಅರ್ಥ ಎಂದು” ರಾಣಾ ಹೇಳಿದ್ದಾರೆ. ಈ ಪ್ರೋಮೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಪ್ರೊಮೊ

ನಾನಿ ತಮ್ಮ ಮೊದಲ ಪ್ಯಾನ್-ಇಂಡಿಯಾ ಸಿನಿಮಾ ʻದಸರಾʼ ಬಿಡುಗಡೆಗೆ ಸಿದ್ಧವಾಗುತ್ತಿದ್ದಾರೆ. ಮೂಲತಃ ತೆಲುಗಿನಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಮಾರ್ಚ್ 30 ರಂದು ಬಿಡುಗಡೆಯಾಗಲಿದೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಾನಿ,ʻʻಕಳೆದ ವರ್ಷ ತೆಲುಗು ಚಿತ್ರರಂಗದಿಂದ RRR ಬಂದಿತ್ತು. ಕೆಜಿಎಫ್ ಮತ್ತು ಕಾಂತಾರ ಕನ್ನಡ ಚಿತ್ರರಂಗದಿಂದ ಬಂದವು. 2023ರಲ್ಲಿ ತೆಲುಗು ಚಿತ್ರರಂಗದಿಂದ ದಸರಾ ಬರಲಿದೆʼʼ ಎಂದು ಆತ್ಮವಿಶ್ವಾಸದಿಂದ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Actor Nani: ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡ ನ್ಯಾಚುರಲ್ ಸ್ಟಾರ್ ನಾನಿ: ‘ದಸರಾ’ ಟೀಸರ್‌ ಔಟ್‌!

ದಸರಾ ಚಿತ್ರವನ್ನು ಶ್ರೀಕಾಂತ್ ಒಡೆಲ್ಲ ನಿರ್ದೇಶಿಸಿದ್ದಾರೆ. ಇದರಲ್ಲಿ ಕೀರ್ತಿ ಸುರೇಶ್, ಸಾಯಿ ಕುಮಾರ್ ಮತ್ತು ಶೈನ್ ಟಾಮ್ ಚಾಕೊ ಮುಂತಾದವರು ನಟಿಸಿದ್ದಾರೆ.

Exit mobile version