Site icon Vistara News

Actress Kangana Ranaut: ಅಖ್ತರ್ ಮಾತನ್ನು ಮೆಚ್ಚಿದ ಕಂಗನಾ; ಅವಳ ಮೆಚ್ಚುಗೆ ಮುಖ್ಯವಲ್ಲ ಎಂದ ಜಾವೇದ್

#image_title

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Actress Kangana Ranaut) ಮತ್ತು ಹಿರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರ ನಡುವಿನ ಸಮರ ಎಲ್ಲರಿಗೂ ತಿಳಿದೇ ಇದೆ. ಇಬ್ಬರೂ ಒಬ್ಬರ ಬಗ್ಗೆ ಒಬ್ಬರು ಮಾತನಾಡಿಕೊಂಡು ಮಾನನಷ್ಟ ಎಂದು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಆದರೆ ಇದೀಗ ಅದೇ ಕಂಗನಾ, ಜಾವೇದ್ ಅವರನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Actress Kangana Ranaut : ಕಾಂತಾರಾ ಫಿಲ್ಮ್ ದಿ ಬೆಸ್ಟ್ ಸಿನಿಮಾ, ರಿಷಭ್ ಅವರೇ ದಿ ಬೆಸ್ಟ್ ಆ್ಯಕ್ಟರ್ ಎಂದ ಕಂಗನಾ!
ಹೌದು. ಜಾವೇದ್ ಅಖ್ತರ್ ಅವರು ಇತ್ತೀಚೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆಗ ಮುಂಬೈನ 26/11 ದಾಳಿ ಬಗ್ಗೆ ಮಾತನಾಡಿದ ಅವರು, “ನಾವು ಮುಂಬೈ ಜನರು. ಅಂದು ನಮ್ಮಲ್ಲಿಗೆ ಬಂದು ದಾಳಿ ನಡೆಸಿದ್ದು, ಬೇರೆ ಯಾವುದೋ ದೇಶದವರಲ್ಲ. ಇಲ್ಲಿನವರೇ. ಈಗಲೂ ಅವರು ಇಲ್ಲಿಯೇ ಇದ್ದಾರೆ. ಹಾಗಾಗಿ ಭಾರತ ಆ ದಾಳಿಯ ಬಗ್ಗೆ ಪಾಕಿಸ್ತಾನವನ್ನು ದೂರುತ್ತಲೇ ಇರುತ್ತದೆ. ಆ ಕಾರಣಕ್ಕೆ ನೀವು ಭಾರತವನ್ನು ದ್ವೇಷಿಸಬಾರದು,” ಎಂದು ಪಾಕಿಸ್ತಾನಿಯರಿಗೆ ಹೇಳಿದ್ದರು.

ಅವರ ಮಾತಿನ ತುಣುಕಿರುವ ವಿಡಿಯೊವನ್ನು ಹಂಚಿಕೊಂಡಿರುವ ಕಂಗನಾ, “ಪ್ರತಿ ಸಲ ನಾನು ಜಾವೇದ್ ಅವರ ಹಾಡುಗಳನ್ನು ಕೇಳಿದಾಗ ಅವರಿಗೆ ಸರಸ್ವತಿ ದೇವಿ ಅದೇಗೆ ಒಲಿದಳು ಎನ್ನುವ ಪ್ರಶ್ನೆ ಕಾಡುತ್ತಿತ್ತು. ಆದರೆ ಇಲ್ಲಿ ನೋಡಿ, ಪ್ರತಿ ಮನುಷ್ಯನಲ್ಲೂ ಸ್ವಲ್ಪವಾದರೂ ಸತ್ಯತೆ ಇರುತ್ತದೆ. ಹಾಗಿದ್ದರೆ ಮಾತ್ರವೇ ದೇವರು ಅವರ ಜತೆಗಿರುತ್ತಾರೆ. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ. ಆದರೆ ಇದಕ್ಕೆ ಜಾವೇದ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಕಂಗನಾ ಅವರ ಹೇಳಿಕೆ ಬಗ್ಗೆ ಮಾಧ್ಯಮವೊಂದು ಜಾವೇದ್ ಅವರನ್ನು ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿರುವ ಅವರು, “ನಾನು ಕಂಗನಾರನ್ನು ಮುಖ್ಯ ವ್ಯಕ್ತಿ ಎಂದು ಪರಿಗಣಿಸುವುದೇ ಇಲ್ಲ. ಹಾಗಿದ್ದ ಮೇಲೆ ಅವರ ಹೇಳಿಕೆ ಮುಖ್ಯವಾಗುವುದು ಹೇಗೆ? ಅವರನ್ನು ಮರೆತು ಮುಂದೆ ನಡೆಯಿರಿ” ಎಂದು ಹೇಳಿದ್ದಾರೆ.

Exit mobile version