Site icon Vistara News

Akshya Kumar: ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಕ್ಷಯ್ ಕುಮಾರ್!

Akshya Kumar

ಬೆಂಗಳೂರು: ‘ಕಣ್ಣಪ್ಪ’ ತೆಲುಗು ಚಿತ್ರರಂಗದಲ್ಲಿ ಶೀಘ್ರದಲ್ಲಿಯೇ ಸೆಟ್ಟೇರಲಿರುವ ಚಿತ್ರವಾಗಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಕೆಲವು ಖ್ಯಾತ ನಟರು ನಟಿಸಲಿದ್ದಾರಂತೆ. ಇತ್ತೀಚಿಗೆ ಕೇಳಿ ಬಂದ ಸುದ್ಧಿಯ ಪ್ರಕಾರ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ (Akshya Kumar) ಅವರು ಈ ಚಿತ್ರದಲ್ಲಿ ನಟಿಸುವುದರ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರಂತೆ.

ನಟ ಅಕ್ಷಯ್ ಕುಮಾರ್ ಅವರು ಶೀಘ್ರದಲ್ಲಿಯೇ ಚಿತ್ರದ ಸೆಟ್ ಗೆ ಸೇರಲಿದ್ದಾರೆ. ಈ ಹಿನ್ನಲೆಯಲ್ಲಿ ಹೈದರಾಬಾದ್ ಗೆ ಆಗಮಿಸಿದ ನಟ ಅಕ್ಷಯ್ ಕುಮಾರ್ ಅವರು ನಟ ವಿಷ್ಣು ಮಂಚು ಮತ್ತು ಮೋಹನ್ ಬಾಬು ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಲ್ಲದೇ ಅಕ್ಷಯ್ ಕುಮಾರ್ ಚಿತ್ರದ ಕ್ಲೈಮ್ಯಾಕ್ಸ್ ನ ಗಮನಾರ್ಹ ಭಾಗ ಸೇರಿದಂತೆ ಕೆಲವು ನಿರ್ಣಾಯಕ ದೃಶ್ಯಗಳನ್ನು ಶೂಟ್ ಮಾಡಲಾಗುವುದಾಗಿ ತಿಳಿಸಿದ್ದಾರೆ.

ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ತೆಲುಗು ಚಲನಚಿತ್ರೋದ್ಯಮಕ್ಕೆ ಸ್ವಾಗತಿಸುವ ಮೂಲಕ ಕಣ್ಣಪ್ಪ ಚಿತ್ರದ ಬಗ್ಗೆ ಜನರ ಆಸಕ್ತಿ ಹೆಚ್ಚಾಗಲಿದೆ. ಕಣ್ಣಪ್ಪ ಮೂಲಕ ತೆಲುಗು ಚಿತ್ರರಂಗಕ್ಕೆ ಅಕ್ಷಯ್ ಕುಮಾರ್ ಅವರು ಪಾದಾರ್ಪಣೆ ಮಾಡುವುದನ್ನು ಘೋಷಿಸಲು ಥ್ರಿಲ್ ಆಗುತ್ತದೆ ಎಂದು ನಟ ವಿಷ್ಣು ಮಂಚು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ ಈ ಬಗ್ಗೆ ಮಾತನಾಡಿದ ನಟ ವಿಷ್ಣು “ ಅಕ್ಷಯ್ ಸರ್ ಅವರೊಂದಿಗೆ ಚಿತ್ರೀಕರಣ ಮಾಡುವುದು ನಿಜಕ್ಕೂ ಖುಷಿಯಾಗಿದೆ. ನಾವು ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಒಟ್ಟಿಗೆ ಪ್ರಾರಂಭಿಸುತ್ತೇವೆ. ಖ್ಯಾತ ನಟ ನಮ್ಮೊಂದಿಗೆ ಸೇರುವುದು ನಮಗೆ ಸಿಕ್ಕ ದೊಡ್ಡ ಗೌರವ. ಅಕ್ಷಯ್ ಕುಮಾರ್ ಕಾರಣದಿಂದ ಕಣ್ಣಪ್ಪ ಚಿತ್ರ ಪ್ಯಾನ್ –ಇಂಡಿಯನ್ ಚಿತ್ರವಾಗಿ ಮೂಡಿಬರಲಿದೆ” ಎಂದು ತಿಳಿಸಿದ್ದಾರೆ.

ಮೋಹನ್ ಬಾಬು ಮತ್ತು ಅವರ ಮಗ, ನಟ ವಿಷ್ಣು ಮಂಚು ನಿರ್ಮಿಸಿರುವ ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಪುರಾಣ ಆಧಾರಿತ ಚಿತ್ರವಾಗಿದ್ದು, ಭಗವಾನ್ ಶಿವನ ಭಕ್ತನ ಕುರಿತಾಗಿದೆ. ಈ ಚಿತ್ರದಲ್ಲಿ ವಿಷ್ಣು ಮಂಚು ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಚಿತ್ರದುರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರಜೋಳಗೆ ಬೆಂಬಲಿಸಲು ಮನವಿ

ಕಣ್ಣಪ್ಪ ಶಿವನ ಭಕ್ತನಾಗಿದ್ದು, ತನ್ನ ಇಷ್ಟದೇವನಾದ ಶಿವನಿಗೆ ಅರ್ಪಣೆಯಾಗಿ ತನ್ನ ಕಣ್ಣನ್ನೇ ಕಿತ್ತುಕೊಟ್ಟನು. ಈ ಹಿಂದೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅದರಲ್ಲಿ ವಿಷ್ಣು ಮಂಚು ಬಿಲ್ಲು ಬಾಣ ಹಿಡಿದು ಜಲಪಾತದಿಂದ ಹೊರಬರುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಣ್ಣಪ್ಪ ಚಿತ್ರದಲ್ಲಿ ಮೋಹನ್ ಬಾಬು, ಶರತ್ ಕುಮಾರ್, ಬ್ರಾಹ್ಮಾನಂದಂ, ಪ್ರೀತಿ ಮುಖಂಧನ್ , ಮಧು ನಟಿಸಿದ್ದಾರೆ.

Exit mobile version