Site icon Vistara News

Alia Bhatt: ಯಶ್‌ ಬಳಿಕ ಆಲಿಯಾ ಭಟ್‌ ಕೂಡ ʻರಾಮಾಯಣʼ ಸಿನಿಮಾದಿಂದ ಹೊರಕ್ಕೆ!

Alia Bhatt Yash

ಬೆಂಗಳೂರು: ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರು ಮೂರು ಪಾರ್ಟ್​ನಲ್ಲಿ ‘ರಾಮಾಯಣ’ ಮಾಡಲು (Nitesh Tiwari Ramayana) ಮುಂದಾಗಿದ್ದಾರೆ ಎಂದು ಈ ಮುಂಚೆಯೇ ವರದಿಯಾಗಿತ್ತು. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ( Ranbir Kapoor as Ram), ಸೀತೆಯ ಪಾತ್ರಕ್ಕೆ ಆಲಿಯಾ ಭಟ್ (Alia Bhatt) ಹಾಗೂ ರಾವಣನ ಪಾತ್ರಕ್ಕೆ ಯಶ್ (Kannada star Yash play Ravana) ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆ ನಿತೇಶ್​ಗೆ ಇತ್ತು. ಆದರೆ ಆಗಲೇ ಯಶ್‌ ಹೊರಗೆ ಬಂದಿದ್ದರು. ಇದರ ಬೆನ್ನಲ್ಲೇ ಆಲಿಯಾ ಭಟ್‌ ಕೂಡ ಸಿನಿಮಾದಿಂದ ಹೊರನಡೆದಿದ್ದಾರೆ.

ವರದಿಯ ಪ್ರಕಾರ, ಡೇಟ್‌ ಹೊಂದಾಣಿಕೆ ಸಮಸ್ಯೆಗಳಿಂದಾಗಿ ಆಲಿಯಾ ಈ ಯೋಜನೆಯ ಭಾಗವಾಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಚಿತ್ರದಲ್ಲಿ ಸೀತೆಯ ಪಾತ್ರವನ್ನು ಮಾಡಲು ಅವರು ಮಾತುಕತೆ ನಡೆಸುತ್ತಿದ್ದರು, ಇದರಲ್ಲಿ ರಾಮನ ಪಾತ್ರಕ್ಕೆ ರಣಬೀರ್ ಕಪೂರ್, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹಾಗೂ ರಾವಣನ ಪಾತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ನಿರ್ದೇಶಕರ ಲೆಕ್ಕಾಚಾರ ಈಗ ತಪ್ಪಾಗಿದೆ. ವರದಿಯ ಪ್ರಕಾರ, ಚಿತ್ರೀಕರಣದ ಪ್ರಾರಂಭದಲ್ಲಿಯೇ ವಿಳಂಬವಾಗಿದೆ.

“ಕಾಸ್ಟಿಂಗ್‌ಗೆ ಸಂಬಂಧಿಸಿದಂತೆ, ರಣಬೀರ್ ಕಪೂರ್ ಇನ್ನೂ ರಾಮನ ಪಾತ್ರಕ್ಕೆ ನಟಿಸಲು ಬದ್ಧರಾಗಿದ್ದಾರೆ, ಆದರೆ ಆಲಿಯಾ ಭಟ್ ಅವರನ್ನು ಚಿತ್ರತಂಡ ಸಂಪರ್ಕಿಸಿದೆ. ಆದರೆ ಡೇಟ್‌ ಹೊಂದಾಣಿಕೆ ಸಮಸ್ಯೆಗಳಿಂದಾಗಿ ಆಲಿಯಾ ಈ ಪ್ರಾಜೆಕ್ಟ್‌ಗೆ ಮುಂದುವರಿಯಲು ಸಾಧ್ಯವಾಗಲಿಲ್ಲ” ಎನ್ನಲಾಗಿದೆ. ಈ ಹಿಂದೆ ಯಶ್ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ‘ಹಾರ್ಟ್ ಆಫ್ ಸ್ಟೋನ್’ ಬಳಿಕ ಆಲಿಯಾ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ.

ಇದನ್ನೂ ಓದಿ: Alia Bhatt Video : 100 ಕೋಟಿ ಕ್ಲಬ್‌ನ ರಾಣಿ ಆಲಿಯಾ! ಈಕೆಯ ಹೆಚ್ಚು ಗಳಿಕೆಯ ಸಿನಿಮಾಗಳಿವು

ಯಶ್‌ ಜತೆ ಆಗಲೇ ಚರ್ಚಿಸಿದ್ದ ನಿತೇಶ್ ತಿವಾರಿ

ಜನವರಿ 28ರಂದು, ನಿತೇಶ್ ತಿವಾರಿ ಮತ್ತು ಮಧು ಮಂತೇನಾ ರಾವಣನ ಪಾತ್ರದಲ್ಲಿ ನಟಿಸಲು ಯಶ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಕಳೆದ ಎಂಟು ತಿಂಗಳಿನಿಂದ ಸಂಭಾಷಣೆಗಳು ನಡೆಯುತ್ತಿವೆ ಎಂದು ಮೂಲವು ಹಂಚಿಕೊಂಡಿತ್ತು. ರಾಮಾಯಣದ ಹೊರತಾಗಿ, ಯಶ್ ಕೂಡ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಯಶ್‌ ಅವರು ಸಿನಿಮಾಗೆ ಅಧಿಕೃತವಾಗಿ ಸಹಿ ಹಾಕುವುದು ಅಷ್ಟೇ ಬಾಕಿ ಇದೆ ಎನ್ನಲಾಗಿತ್ತು. ಈ ಮೊದಲು ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಅಪ್​ಡೇಟ್ ಸಿಕ್ಕಿರಲಿಲ್ಲ.

Exit mobile version