Site icon Vistara News

Anupam Kher: ಅನುಪಮ್ ಖೇರ್ ಕಚೇರಿಗೆ ನುಗ್ಗಿ ಕಳ್ಳರಿಂದ ಲೂಟಿ!

Anupam Kher Men Stole Safe From Office

ಬೆಂಗಳೂರು: ಬುಧವಾರ (ಜೂನ್ 19) ರಾತ್ರಿ ಅನುಪಮ್ ಖೇರ್ (Anupam Kher) ಅವರ ಮುಂಬೈ ಕಚೇರಿಗೆ ನುಗ್ಗಿ ಕಳ್ಳರು ಲೂಟಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುಪಮ್ ಖೇರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ಕಳ್ಳತನ ಆಗಿರೋ ವಸ್ತುಗಳು ಯಾವವು ಎನ್ನುವುದರ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.ಬಾಗಿಲಿನ ಚಿಲಕವೂ ಮುರಿದಿದೆ ಎಂದು ಹೇಳಿಕೊಂಡಿದ್ದಾರೆ.

ಇಬ್ಬರು ಕಳ್ಳರು ಕದ್ದ ವಸ್ತುಗಳೊಂದಿಗೆ ಆಟೋರಿಕ್ಷಾಕ್ಕೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ. ಖೇರ್ ಅವರ ಕಚೇರಿ ಬಾಗಿಲು ಕೂಡ ಮುರಿದಿದ್ದು ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

ಅನುಪಮ್ ಖೇರ್ ಎಕ್ಸ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ʻಕಳೆದ ರಾತ್ರಿ ಇಬ್ಬರು ಕಳ್ಳರು ವೀರ ದೇಸಾಯಿ ರಸ್ತೆಯಲ್ಲಿರುವ ನನ್ನ ಕಚೇರಿಯ ಎರಡು ಬಾಗಿಲುಗಳನ್ನು ಮುರಿದಿದ್ದಾರೆ. ಮನೆಯ ಬಾಗಿಲನ್ನು ಒಡೆದು ಕಳ್ಳರು ಕಚೇರಿ ಒಳಗೆ ಎಂಟ್ರಿ ಪಡೆದಿದ್ದಾರೆ. ಕಚೇರಿ ಪೂರ್ತಿಯಾಗಿ ಅವರು ಹುಡುಕಾಡಿದ್ದಾರೆ. ಆ ಬಳಿಕ ಅವರು ಸಿನಿಮಾದ ನೆಗೆಟಿವ್​ಗಳನ್ನು ಕದ್ದೊಯ್ದಿದ್ದಾರೆ. ಇನ್ನು, ಅವರು ಹಣ ಇಟ್ಟ ಬೀರುನ ಓಪನ್ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಎಫ್‌ಐಆರ್ ದಾಖಲಾಗಿದೆ ಮತ್ತು ಶೀಘ್ರದಲ್ಲೇ ಕಳ್ಳರನ್ನು ಹಿಡಿಯಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಏಕೆಂದರೆ ಸಿಸಿಟಿವಿ ಕ್ಯಾಮೆರಾದಲ್ಲಿ, ಇಬ್ಬರೂ ಆಟೋದಲ್ಲಿ ಕುಳಿತಿರುವುದನ್ನು ಕಾಣಬಹುದು, ”ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಅನುಪಮ್ ಖೇರ್ ಶೀಘ್ರದಲ್ಲೇ ಕಂಗನಾ ರಣಾವತ್‌ ನಿದೇಶನದ ಏಮರ್ಜೆನ್ಸಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್‌ (Anupam Kher) ತಮ್ಮ 538ನೇ ಚಿತ್ರವನ್ನು ಘೋಷಿಸಿದ್ದಾರೆ. ಜುಲೈ 8ರಂದು ಅನುಪಮ್ ಖೇರ್ ಇನ್‌ಸ್ಟಾಗ್ರಾಮ್‌ ಮೂಲಕ ರವೀಂದ್ರನಾಥ ಟ್ಯಾಗೋರ್ ಪಾತ್ರವನ್ನು ಮಾಡುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಚಿತ್ರದ ಹೆಸರನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

Exit mobile version