Site icon Vistara News

Banners Of Jr NTR: ಜ್ಯೂ. ಎನ್‌ಟಿಆರ್‌ ಬ್ಯಾನರ್, ಫ್ಲೆಕ್ಸ್ ಕಿತ್ತು ಬಿಸಾಕಿ ಎಂದ ಬಾಲಯ್ಯ!

Balayya remove Jr NTR, Kalyanram banner from NTR ghat

ಬೆಂಗಳೂರು: ತೆಲುಗು ನಟ ಎನ್‌ಟಿಆರ್‌ 28ನೇ ಪುಣ್ಯಸ್ಮರಣೆ ಅಂಗವಾಗಿ ನಟ ನಂದಮೂರಿ ಬಾಲಕೃಷ್ಣ ಅವರು ಸ್ಮಾರಕಕ್ಕೆ ಜನವರಿ 18ರಂದು ಭೇಟಿ ನೀಡಿ ನಮನ ಸಲ್ಲಿಸಿದ್ದರು. ಜ್ಯೂ. ಎನ್​ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಆಗಲೇ ಆಗಮಿಸಿ ಎನ್​ಟಿಆರ್ ಸಮಾಧಿಗೆ ನಮಿಸಿ ತೆರಳಿದ್ದರು. ಜ್ಯೂ. ಎನ್‌ಟಿಆರ್ ಹಾಗೂ ಚಿಕ್ಕಪ್ಪ ಬಾಲಕೃಷ್ಣ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗಳು ಹಲವು ದಿನಗಳಿಂದ ಆಗುತ್ತಿತ್ತು. ಪೂರಕ ಎಂಬಂತೆ ಬಾಲಕೃಷ್ಣ ಅವರು ಅಲ್ಲಿ ಹಾಕಿದ್ದ ಜ್ಯೂ. ಎನ್‌ಟಿಆರ್‌ ಅವರ ಬ್ಯಾನರ್, ಫ್ಲೆಕ್ಸ್ (Banners Of Jr NTR ) ಎಲ್ಲಾ ನೋಡಿ ಕೂಡಲೇ ತೆಗೆಸಿಬಿಡಿ ಎಂದು ಆಪ್ತರಿಗೆ ಗರಂ ಆಗಿ ಹೇಳಿದ್ದಾರೆ. ಇದು ಕ್ಯಾಮರೆ ಕಣ್ಣಲ್ಲಿ ಸೆರೆಯಾಗಿದೆ. ಇದೀಗ ಈ ಬಗ್ಗೆ ವಿವಾದಗಳು ಹುಟ್ಟಿಕೊಂಡಿವೆ.

ಬಾಲಯ್ಯ ಹೀಗೆ ಹೇಳುತ್ತಿದ್ದಂತೆ ಒಂದಷ್ಟು ಜನ ಜ್ಯೂ. ಎನ್‌ಟಿಆರ್ ಬ್ಯಾನರ್ ತೆಗೆದಿದ್ದಾರೆ. ಬಾಲಯ್ಯ ಹೇಳಿದ್ದಕ್ಕೆ ಬ್ಯಾನರ್ ತೆರವು ಮಾಡಲಾಯಿತು ಎನ್ನಲಾಗುತ್ತಿದೆ. ಕೆಲ ತಿಂಗಳ ಮುಂಚೆ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಸೇರಿಕೊಂಡು ಎನ್​ಟಿಆರ್ ಅವರ ಜನ್ಮಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಜ್ಯೂ. ಎನ್​ಟಿಆರ್ ಹಾಗೂ ಕಲ್ಯಾಣ್ ರಾಮ್​ಗೆ ಆಹ್ವಾನ ನೀಡಿರಲಿಲ್ಲ. ಅಲ್ಲದೆ, ಜೂ ಎನ್​ಟಿಆರ್ ಚಿತ್ರವನ್ನು ಹಿಡಿದು ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳನ್ನು ವಾಪಸ್ಸು ಕಳಿಸಲಾಗಿತ್ತು.

ಇದನ್ನೂ ಓದಿ: Devara Movie : ಜ್ಯೂ. ಎನ್​ಟಿಆರ್​ ಹುಟ್ಟುಹಬ್ಬಕ್ಕೆ ‘ದೇವರಾ’ ಫಸ್ಟ್ ಲುಕ್​​ ಪೋಸ್ಟರ್​ ರಿಲೀಸ್​​

ಬಾಲಕೃಷ್ಣ ಹಾಗೂ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬೀಗರು ಆಗಬೇಕು. ಇತ್ತೀಚೆಗೆ ಸ್ಕಿಲ್ ಸ್ಕ್ಯಾಮ್ ವಿಚಾರವಾಗಿ ಚಂದ್ರಬಾಬು ನಾಯ್ಡು ಬಂಧನವಾಗಿತ್ತು. ಕೆಲ ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದರು. ಆ ಸಂದರ್ಭದಲ್ಲಿ ಜ್ಯೂ. ಎನ್‌ಟಿಆರ್ ಪ್ರತಿಕ್ರಿಯಿಸಿರಲಿಲ್ಲ. ನಂದಮೂರಿ ಕುಟುಂಬ ಸದಸ್ಯರೆಲ್ಲಾ ಚಂದ್ರಬಾಬು ಪರ ನಿಂತಿದ್ದರು. ಜ್ಯೂ.ಎನ್‌ಟಿಆರ್‌ ಮಾತ್ರ ಸುಮ್ಮನಿದ್ದರು. ಇದೇ ವಿಚಾರಕ್ಕೆ ಬಾಲಯ್ಯ ಹಾಗೂ ಜ್ಯೂ. ಎನ್‌ಟಿಆರ್ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು ಎನ್ನಲಾಗುತ್ತಿದೆ. ಚಂದ್ರಬಾಬು ಜತೆಗೆ ಬಾಲಕೃಷ್ಣ ಹಾಗೂ ಜೂ. ಎನ್‌ಟಿಆರ್ ನಡುವಿನ ಅಂತರ ಹೆಚ್ಚಾಗಿದೆ.

Exit mobile version