Site icon Vistara News

Ram Charan: ರಾಮ್‌ಚರಣ್‌ ಮಗಳ ಆರೈಕೆಗೆ ಸೆಲೆಬ್ರೆಟಿಗಳ ಮೆಚ್ಚಿನ ʻದಾದಿʼ ನೇಮಕ!

ramcharan upasana hired taimur ali khans nanny for daughter

ಬೆಂಗಳೂರು: ಮದುವೆಯಾಗಿ 11 ವರ್ಷಗಳ ಬಳಿಕ ರಾಮ್‌ ಚರಣ್‌ (Ram Charan)-‌ ಉಪಾಸನಾ ದಂಪತಿ ಹೆಣ್ಣು ಮಗುವಿಗೆ ಪೋಷಕರಾದರು. ಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ (Klin Kaara konidela). ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ. ಉಪಾಸನಾ ಹಾಗೂ ರಾಮ್ ಚರಣ್ ತಮ್ಮ ಮಗಳಿಗಾಗಿ ವಿಶೇಷವಾಗಿ ಕೋಣೆಯನ್ನು ಡಿಸೈನ್ ಮಾಡಿಸಿ ಸುದ್ದಿಯಾಗಿದ್ದರು. ಇದೀಗ ಮಗಳ ಆರೈಕೆಗಾಗಿ ಬಹಳ ಜನಪ್ರಿಯ ದಾದಿಯನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ ತಿಂಗಳಿಗೆ ಮೂರು ಲಕ್ಷ ಸಂಬಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಕೆಲ ದಿನಗಳ ಹಿಂದೆ ರಾಮ್‌ಚರಣ್ ದಂಪತಿ ಮಗಳ ಸಮೇತ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದರು. ಅವರ ಜತೆ ದಾದಿ ಸಾವಿತ್ರಿ ಸಹ ಇದ್ದರು. ಸಾವಿತ್ರಿ ದಾದಿ ಕೆಲ ವರ್ಷಗಳ ಹಿಂದೆ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಮಗ ತೈಮೂರ್ ಅಲಿಖಾನ್ ಕೇರ್ ಟೇಕರ್ ಆಗಿದ್ದರು. ಕರೀನಾ ಕಪೂರ್ ಮಗಳ ಪೋಷಣೆ ಬಳಿಕ ಸಾವಿತ್ರಿ ನಟ ಶಾಹಿದ್ ಕಪೂರ್ ಮಗಳ ಆರೈಕೆಗೆ ನೇಮಕವಾಗಿದ್ದರು. ದಾದಿ ಸದ್ಯ ರಾಮ್‌ಚರಣ್ ಮನೆ ಸೇರಿದ್ದಾರೆ. ಸದ್ಯ ರಾಮ್‌ಚರಣ್ ಆಕೆಗೆ ತಿಂಗಳಿಗೆ 3 ಲಕ್ಷದ ವರೆಗೆ ಸಂಬಳ ನೀಡುತ್ತಾರೆ ಎನ್ನುವ ವದಂತಿ ಹರಿದಾಡುತ್ತಿದೆ.

ರಾಮ್‌ಚರಣ್‌ ಪತ್ನಿ ಉಪಾಸನಾ ಮದುವೆ ಆಗಿ ವರ್ಷಗಳೇ ಕಳೆದರೂ ತಾಯಿಯಾಗದ ಕಾರಣಕ್ಕೆ ಟೀಕೆಗಳನ್ನು ಎದುರಿಸಿದ್ದರು. ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ವಿನ್ಯಾಸದಲ್ಲಿದೆ ರಾಮ್‌ ಚರಣ್ ದಂಪತಿ ಮಗಳ ಕೋಣೆ!

ಮಗು ಜನಿಸುವ ಮುನ್ನವೇ ವಿಶೇಷ ಕೋಣೆಯನ್ನು ಉಪಾಸನಾ ಡಿಸೈನ್ ಮಾಡಿಸಿ ಆಗಿತ್ತು. ಮಗುವಿಗಾಗಿ ಮಾಡಿಸಿರುವ ಕೋಣೆಯನ್ನು ಡಿಸೈನ್ ಮಾಡಿರುವುದು ಆರ್ಕ್​ಡೈಜೆಸ್ಟ್ ಇಂಡಿಯಾ ಹೆಸರಿನ ಸಂಸ್ಥೆ. ಪವಿತ್ರಾ ರಾಜಾರಾಂ ಅವರು ಕೋಣೆಯನ್ನು ವಿನ್ಯಾಸಗೊಳಿಸಿದ್ದರು. ದಂಪತಿ ಕಾಡಿನ ಮೇಲಿನ ಪ್ರೀತಿಯಿಂದ ಸ್ಫೂರ್ತಿ ಪಡೆದಿದ್ದಾರೆʼʼಎಂದು ಉಪಾಸನಾ ವಿಡಿಯೊ ಮೂಲಕ ಹೇಳಿಕೊಂಡಿದ್ದರು. ಹಲವಾರು ಸ್ಟಫ್ಡ್ ಆಟಿಕೆಗಳು ಮತ್ತು ವಿಶೇಷವಾಗಿ ಕ್ಯುರೇಟೆಡ್ ವಾಲ್‌ಪೇಪರ್ ಹೊಂದಿದೆ ಈ ಕೋಣೆ. ಉಪಾಸನಾ ಹಾಗೂ ರಾಮ್ ಚರಣ್ ಇಬ್ಬರಿಗೂ ಅರಣ್ಯವೆಂದರೆ ಬಹಳ ಪ್ರೀತಿಯಾದ್ದರಿಂದ ಅದೇ ಥೀಮ್ ಇರಿಸಿ ಮಗಳ ಕೋಣೆಯನ್ನು ಡಿಸೈನ್ ಮಾಡಿಸಿದ್ದರು. ಮರ, ಗಿಡಗಳ ಭಿನ್ನ ರೀತಿಯ ಚಿತ್ರಗಳು ಇಡೀ ಕೋಣೆಯ ತುಂಬೆಲ್ಲ ಇತ್ತು.

ಇದನ್ನೂ ಓದಿ: Ram Charan: ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ರಾಮ್​ ಚರಣ್​!

”ನಾನು ಹಾಗೂ ರಾಮ್ ಚರಣ್ ಹೋದ ಕಡೆಗಳಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಸೇರಿಸಿದ್ದೇವೆ. ಇಲ್ಲಿರುವ ಎಲ್ಲ ವಸ್ತಗಳಲ್ಲಿ ನಾವು, ನಮ್ಮ ನೆನಪು ಇದೆ. ಹಾಗಾಗಿಯೇ ಈ ಸ್ಥಳ ಬಹಳ ವಿಶೇಷವಾಗಿದೆ. ಮಗು ಮೊದಲು ನೋಡುವ ವಸ್ತುಗಳು, ವ್ಯಕ್ತಿಗಳು, ದೃಶ್ಯಗಳು ಬಹಳ ಮುಖ್ಯ ಹಾಗಾಗಿ ಪ್ರಕೃತಿಯನ್ನೇ ಮೂಲವಾಗಿರಿಸಿ ಕೋಣೆಯನ್ನು ವಿನ್ಯಾಸ ಮಾಡಲಾಗಿದೆ” ಎಂದಿದ್ದರು ಉಪಾಸನಾ ಕೋನಿಡೆಲಾ.

ರಾಮ್‌ಚರಣ್‌ ಸದ್ಯ ಗೇಮ್ ಚೇಂಜರ್‌ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version