Site icon Vistara News

Coffee Nadu Chandu: ಶಿವಣ್ಣನ ಜನುಮದಿನಕ್ಕೆ ಆಟೋ ಓಡಿಸಿಕೊಂಡೇ ಬೆಂಗಳೂರಿಗೆ ಬಂದ ಕಾಫಿನಾಡು ಚಂದು!

Coffee Nadu Chandu

ಬೆಂಗಳೂರು: ಜುಲೈ 12 ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್ ಅವರ ಜನುಮದಿನ. ಶಿವಣ್ಣ ಹಾಗೂ ಪುನೀತ್​ ಅಭಿಮಾನಿ ಕಾಫಿನಾಡು ಚಂದು (Coffee Nadu Chandu) ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಆಟೋ ಏರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ ಎಂಬುದು ವಿಶೇಷ. ಶಿವಣ್ಣನ ಭೇಟಿ ಮಾಡಿ ವಿಶ್ ತಿಳಿಸುವ ಉದ್ದೇಶ ಹೊಂದಿದ್ದಾರೆ.

ಕಾಫಿ ನಾಡು ಚಂದು ಮಾತನಾಡಿ ʻʻನಾನು ಪುನೀತ್‌ ಅಣ್ಣ, ಶಿವಣ್ಣನವರ ಅಭಿಮಾನಿ. ಕರ್ನಾಟಕದ ಜನತೆಗೆ ಕಾಫಿ ನಾಡು ಚಂದು ಮಾಡುತ್ತಿರುವ ನಮಸ್ಕಾರಗಳು. ಇವತ್ತು ನಮ್ಮ ದೇವ್ರು ಬರ್ತಡೇ. ದೇವರು ಅಂದರೆ ನನಗೆ ಶಿವಣ್ಣ ಹಾಗೂ ಪುನೀತಣ್ಣ. ಶಿವಣ್ಣನ ಬರ್ತಡೇಗೆ ನಾನು ಅವರ ಮನೆ ಮುಂದೆ ಬಂದಿದ್ದೇನೆ. ಇಲ್ಲಿರುವ ಅಣ್ಣ ತಮ್ಮಂದಿರಿಗೂ ಅಕ್ಕ ತಂಗಿಯಂದಿರಿಗೂ ಒಳ್ಳೆದಾಗಲಿ. ಮತ್ತೆ ಎಲ್ಲ ಚಾನೆಲ್‌ನವರಿಗೂ ಕೂಡ. ದೊಡ್ಮನೆ ಕುಟುಂಬದವರಿಗೂ ಯಾವತ್ತೂ ಸುಖವಾಗಿರಲಿ ಎಂದು ನಮ್ಮ ಮಂಜುನಾಥ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇನೆʼʼ ಎಂದು ಮಾಧ್ಯಮದವರ ಮುಂದೆ ಮಾತನಾಡಿದ್ದಾರೆ.

ಅಮೆರಿಕ, ಸ್ವಿಜರ್ಲ್ಯಾಂಡ್‌‌‌ಗೂ ಕಾಫಿನಾಡು ಚಂದು ಸಾಂಗ್ ಮಾಡಿ ಕಳುಹಿಸಿದ್ದಾರೆ. ಈ ಬಗ್ಗೆ ಕಾಫಿನಾಡು ಚಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. ಬೇಲೂರಿಂದ ಬೆಂಗಳೂರು ತನಕ ಸೆಲ್ಫಿಗೆ ಮುಗಿಬಿದ್ದಿದ್ರು ಎಂಬುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Shiva Rajkumar Birthday: ಶಿವಣ್ಣನ ಜನುಮದಿನಕ್ಕೆ ಸಾಲು ಸಾಲು ಸಿನಿಮಾ ಪೋಸ್ಟರ್‌!

ಶಿವರಾಜ್ ಕುಮಾರ್ ಜನುಮದಿನಕ್ಕೆ ಫ್ಯಾನ್ಸ್ ಕಡೆಯಿಂದ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾತ್ರಿ 11:30ಕ್ಕೆ ನಾಗವಾರದ ಮನೆಯಲ್ಲಿ ಆಪ್ತರ ಜತೆ ಆಚರಣೆ ಶಿವಣ್ಣ, ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದರು. ಬಳಿಕ 10:30ಕ್ಕೆ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಪೂಜೆ ಮಾಡಲಾಗಿದೆ. ಇದಾದ ನಂತರ ಶಿವಣ್ಣ ನಟನೆಯ ಘೋಸ್ಟ್ ಸಿನಿಮಾದ ಟೀಸರ್ 11:45ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ಲಾಂಚ್ ಆಗಿದೆ. ಮತ್ತೆ ಸಂಜೆ ನಾಗವಾರದ ಮನೆಯಲ್ಲಿ ಅಭಿಮಾನಿಗಳ ಜತೆ ಸಂಭ್ರಮಾಚರಣೆ ಮಾಡಲಿದ್ದಾರೆ.

ಈಗಾಗಲೇ ಶಿವಣ್ಣ ಅವರ ಸಾಲು ಸಾಲು ಸಿನಿಮಾಗಳ ಪೋಸ್ಟರ್‌ಗಳು ಬಿಡುಗಡೆಗೊಂಡಿದೆ. ಬಿಗ್ ಡ್ಯಾಡಿ ಟೀಸರ್‌ ಮೂಲಕ ರಗಡ್‌ ಡೈಲಾಗ್‌ನಲ್ಲಿ ಮಿಂಚಿದ್ದಾರೆ ಶಿವಣ್ಣ.

Exit mobile version