Site icon Vistara News

Darshan Thoogudeepa: `ಏಕಾಂಗಿ’ ಸಂದೇಶ ನೀಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌; ಫ್ಯಾನ್ಸ್‌ಗೆ ಮತ್ತಷ್ಟು ಗೊಂದಲ!

Darshan Thoogudeepa

ಬೆಂಗಳೂರು: ಕಳೆದೆರಡು ದಿನಗಳಿಂದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ (Darshan Thoogudeepa) ವಿಭಿನ್ನವಾಗಿ ಟ್ವೀಟ್ ಮಾಡುತ್ತಿದ್ದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗುತ್ತಿದೆ. ಆಗಸ್ಟ್ 28ರಂದು ದಿಢೀರನೇ ಎರಡು ಜೋಡೆತ್ತಿನ ಫೋಟೊ ಜತೆಗೆ “ಕಾಲಾಯ ತಸ್ಮಯ್ ನಮಃ..” ಎಂದು ಟ್ವೀಟ್ ಮಾಡಿದ್ದರು. ಕಿಚ್ಚನ (kichcha sudeepa) ಜತೆ ಸಂದಾನದ ಸುಳಿವು ನೀಡಿದ್ರು ಅನ್ನುವಾಗಲೇ ಇದೀಗ ʻಏಕಾಂಗಿ ಆಗಿ ಇರಿʼ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ಟ್ವೀಟ್ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ದರ್ಶನ್‌ ತಮ್ಮ ಟ್ವೀಟ್‌ನಲ್ಲಿ ʻʻಬಿ ಅಲೋನ್ ಟು ಬಿ ಹ್ಯಾಪಿ.. ಬಿ ಹ್ಯಾಪಿ ಟು ಬಿ ಅಲೋನ್.. ವಿಥ್ ಮೈ ಸೆಲೆಬ್ರೆಟೀಸ್. (ಏಕಾಂಗಿ ಆಗಿ ಇರಿ.. ಸಂತೋಷದಿಂದ ಇರಲು.. ಸಂತೋಷದಿಂದ ಇರಲು, ಏಕಾಂಗಿ ಆಗಿ ಇರಿ..ನನ್ನ ಸೆಲೆಬ್ರಿಟಿಗಳೊಂದಿಗೆ)” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್‌ ನೋಡಿ ಫ್ಯಾನ್ಸ್‌ ತರಹೇವಾರಿ ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ.

ಸುಮಲತಾ ಅವರ ಜನುಮದ ದಿನದಂದು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ 26 ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕೆ ಕಿಚ್ಚ ಸುದೀಪ್​ ಹಾಗೂ ದರ್ಶನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಇಬ್ಬರೂ ತಮ್ಮ ಮುನಿಸನ್ನು ತೊರೆದು ಒಂದಾಗಲಿದ್ದಾರೆ ಎಂದು ಹೇಳಲಾಗಿತ್ತು. ಕೇಕ್ ಕಟ್ಟಿಂಗ್ ವೇಳೆ ದರ್ಶನ್- ಸುದೀಪ್ ಇಬ್ಬರು ವೇದಿಕೆ ಏರಿದ್ದು ನೋಡಿ ಮಾತನಾಡುತ್ತಾರೇನೋ ಎಂದು ಫ್ಯಾನ್ಸ್‌ ಕಾದಿದ್ದರು. ಆದರೆ ಪಾರ್ಟಿಯಲ್ಲಿ ಇಬ್ಬರು ಮಾತನಾಡಲಿಲ್ಲ. ಅವರ ಪಾಡಿಗೆ ಅವರು ಇವರ ಪಾಡಿಗೆ ಇವರು ಬಂದು ಹೋಗಿದ್ದರು. ಆದರೆ ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇವರಿಬ್ಬರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದರು. ಇದಾದ ಬಳಿಕ ಹೊಸ ಟ್ವೀಟ್‌ ಹಂಚಿಕೊಂಡಿದ್ದರು ದರ್ಶನ್‌.

ದರ್ಶನ್‌ ಟ್ವೀಟ್‌

ಇದನ್ನೂ ಓದಿ: Darshan Thoogudeepa:ʻ ಕಾಲಾಯ ತಸ್ಮಯ್ ನಮಃʼಎಂದ ದರ್ಶನ್‌; ಸಂಧಾನದ ಸುಳಿವು ನೀಡಿದ್ರಾ ಚಾಲೆಂಜಿಂಗ್‌ ಸ್ಟಾರ್‌?

ದರ್ಶನ್‌ ಅವರು “ಕಾಲಾಯ ತಸ್ಮಯ್ ನಮಃ” ಎನ್ನುವ ಸಾಲನ್ನು ಜೋಡೆತ್ತಿನೊಂದಿಗೆ ಫೋಸ್ಟ್‌ ಹಂಚಿಕೊಂಡಿದ್ದರು. ʻʻಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆʼʼ ಎನ್ನುವ ಅರ್ಥವಿದೆ. ಈ ಜೋಡೆತ್ತುಗಳನ್ನು ದರ್ಶನ್- ಸುದೀಪ್‌ ಅವರಿಗೆ ಫ್ಯಾನ್ಸ್‌ ಹೋಲಿಸಿ ಕಮೆಂಟ್ ಮಾಡಿದ್ದರು. ಈ ಜೋಡೆತ್ತುಗಳ ಹಾಗೆ ಮತ್ತೆ ಜತೆಯಾಗಿ ಎಂತಲೂ ವಿಶ್‌ ಮಾಡಿದ್ದರು. ಇದೇ ಖುಷಿಯಲ್ಲಿರುವಾಗಲೇ ‘ಏಕಾಂಗಿ’ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿ ಮತ್ತೇನೋ ಸಂದೇಶ ನೀಡಿದ್ದಾರೆ.

Exit mobile version