Site icon Vistara News

Darshan Thoogudeepa: ಕಿಡ್ನಿ ಫೇಲ್ಯೂರ್‌ ಆದ ಅಭಿಮಾನಿಗೆ ನೆರವಾದ ʻಯಜಮಾನʼ ದರ್ಶನ್‌! ವಿಡಿಯೊ ವೈರಲ್‌!

Darshan Thoogudeepa

ಬೆಂಗಳೂರು: ರಾಖಿ ಹಬ್ಬದಂದು ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ (Darshan Thoogudeepa) ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕದ ತಮ್ಮ ಅಭಿಮಾನಿಗಳಿಗೆ ಅಕ್ಕ ತಂಗಿಯಂದಿರಿಗೆ ದರ್ಶನ್ ರಕ್ಷಾ ಬಂಧನದ (raksha bandhan 2023) ಶುಭಾಶಯಗಳನ್ನು ತಿಳಿಸಿದ್ದರು. ರಕ್ಷಾಬಂಧನ ಸಂಭ್ರಮದ ವೇಳೆ ಆದರ್ಶ್‌ ಎಂಬ ಅಭಿಮಾನಿಯೊಬ್ಬರು ತಮ್ಮ ಕಷ್ಟವನ್ನು ನೆಚ್ಚಿನ ನಟನ ಬಳಿ ಕೇಳಿಕೊಂಡಿದ್ದರು. ಕೂಡಲೇ ಆತನಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅವರು ವಿಡಿಯೊ ಮಾಡಿ ಮಾತನಾಡಿದ್ದಾರೆ. ಇದೀಗ ದರ್ಶನ್‌ ಅವರ ಮಾನವೀಯತೆಗೆ ಅವರ ಫ್ಯಾನ್ಸ್‌ ಹಾಡಿ ಹೊಗಳುತ್ತಿದ್ದಾರೆ.

ಕಿಡ್ನಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿಯೊಬ್ಬರಿಗೆ ಇತ್ತೀಚೆಗೆ ನಟ ದರ್ಶನ್ ನೆರವಾಗಿದ್ದಾರೆ. ಇದೀಗ ಅಭಿಮಾನಿ ಆದರ್ಶ್‌ ಅವರು ವಿಡಿಯೊ ಮೂಲಕ ದರ್ಶನ್‌ ಬಗ್ಗೆ ಹೇಳಿಕೊಂಡಿದ್ದಾರೆ. ʻʻಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಆದರ್ಶ್. ನಾನು ದರ್ಶನ್ ಅವರ ಅಭಿಮಾನಿ. ನನ್ನ ಎರಡೂ ಕಿಡ್ನಿ ಫೇಲ್ಯೂರ್ ಆಗಿತ್ತು. ದರ್ಶನ್ ಸರ್‌ನ ಭೇಟಿ ಮಾಡುವ ಆಸೆ ಇತ್ತು. ನಾಗರಾಜ್‌ ಅಣ್ಣನನ್ನು ಕೇಳಿಕೊಂಡೆ. ಅವರು ಭೇಟಿ ಮಾಡಿಸಿದರು. ಸಹಾಯ ಮಾಡಿದರು. ದರ್ಶನ್ ಸರ್‌ಗೂ ಗೋವಿಂದಣ್ಣನಿಗೂ ಧನ್ಯವಾದ” ಎಂದು ಹೇಳಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Darshan Thoogudeepa: ದರ್ಶನ್‌ಗೆ ರಾಖಿ ಕಟ್ಟಿದಳು ʼರಾಬರ್ಟ್‌ʼ ಚಿತ್ರದ ನಾಯಕಿ! ಆಕೆ ನೀಡಿದ ಸಂದೇಶವೂ ಮಾರ್ಮಿಕ!

ಸಿನಿಮಾಗಳ ವಿಚಾರಕ್ಕೆ ಬಂದರೆ ದಾಸ ದರ್ಶನ್ ಈಗ ‘ಕಾಟೇರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ.ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ‘ಕಾಟೇರ’ ಚಿತ್ರಕ್ಕಿದೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದಿದೆ.

ಕೆಲವು ದಿನಗಳ ಹಿಂದೆ ದರ್ಶನ್‌ ಅವರು ಟ್ವೀಟ್‌ ಮೂಲಕ ಹೆಚ್ಚು ಸುದ್ದಿಯಾಗಿದ್ದರು. ದರ್ಶನ್‌ ಅವರು “ಕಾಲಾಯ ತಸ್ಮಯ್ ನಮಃ” ಎನ್ನುವ ಸಾಲನ್ನು ಜೋಡೆತ್ತಿನೊಂದಿಗೆ ಫೋಸ್ಟ್‌ ಹಂಚಿಕೊಂಡಿದ್ದರು. ʻʻಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆʼʼ ಎನ್ನುವ ಅರ್ಥವಿದೆ. ಈ ಜೋಡೆತ್ತುಗಳನ್ನು ದರ್ಶನ್- ಸುದೀಪ್‌ ಅವರಿಗೆ ಫ್ಯಾನ್ಸ್‌ ಹೋಲಿಸಿ ಕಮೆಂಟ್ ಮಾಡಿದ್ದರು. ಈ ಜೋಡೆತ್ತುಗಳ ಹಾಗೆ ಮತ್ತೆ ಜತೆಯಾಗಿ ಎಂತಲೂ ವಿಶ್‌ ಮಾಡಿದ್ದರು. ಇದೇ ಖುಷಿಯಲ್ಲಿರುವಾಗಲೇ ‘ಏಕಾಂಗಿ’ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿ ಮತ್ತೇನೋ ಸಂದೇಶ ನೀಡಿದ್ದರು.

Exit mobile version