Site icon Vistara News

Dhruva Sarja: ಬ್ರೈನ್ ಡೆಡ್ ಆದ ಧ್ರುವ ಸರ್ಜಾ ಅಭಿಮಾನಿಯ ಅಂಗಾಗ ದಾನ: ನಟ ಹೇಳಿದ್ದೇನು?

Dhruva Sarja fan Brain dead What did the actor say

ಬೆಂಗಳೂರು: ನಟ ಧ್ರುವ ಸರ್ಜಾ (Dhruva Sarja) ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್ ಫೆಬ್ರವರಿ 14 ರಂದು ಬೈಕ್ ಅಪಘಾತದಿಂದಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ. ಚಿಕ್ಕಬಳ್ಳಾಪೂರದ ಶಿಡ್ಲಘಟ್ಟ ಬಳಿ ನಡೆದ ರಸ್ತೆ ಅಪಘಾತದಲ್ಲಿ ಹೆ‍ಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪರಿಣಾಮ, ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈವರೆಗೂ ಅವರು ಕೋಮಾದಿಂದ ಆಚೆ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಟ ಧ್ರುವ ಸರ್ಜಾ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರಂತೆ. ನಟ ಧ್ರುವ ಸರ್ಜಾ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಧ್ರುವ ಸರ್ಜಾ ಮಾತನಾಡಿ ʻʻನನ್ನ ಅಭಿಮಾನಿಯ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಬೈಕ್ ಅಪಘಾತದಲ್ಲಿ ಗಂಭೀರವಾಗಿ ಪೃಥ್ವಿರಾಜ್‌ಗೆ ಗಾಯವಾಗಿದೆ. ಬ್ರೈನ್ ಡೆಡ್ ಆಗಿದೆ. ಸಾಕಷ್ಟು ಭಾರಿ ನನ್ನ ಭೇಟಿಯಾಗಿದ್ದ. ನನಗೆ ಸಾಕಷ್ಟು ಪರಿಚಯ ಕೂಡ ಇದ್ದ. ದಯಮಾಡಿ ಎಲ್ಲರೂ ಹೆಲ್ಮೆಟ್ ಹಾಕಿ ಗಾಡಿಯನ್ನು ಓಡಿಸಿ. ಅವರ ತಂದೆ ತಾಯಿ ದೇಹ ದಾನ ಮಾಡಲು ಮುಂದಾಗಿದ್ದಾರೆʼʼ ಎಂದರು.

ಇದನ್ನೂ ಓದಿ: Dhruva Sarja: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ʻಮಾರ್ಟಿನ್‌ʼ ಸಿನಿಮಾದ ಬಿಗ್‌ ಅಪ್‌ಡೇಟ್‌ ಇಲ್ಲಿದೆ!

ಅಭಿಮಾನಿಯ ಆಸೆ ಈಡೇರಿಸಿದ ನಟ ಧ್ರುವ ಸರ್ಜಾ

ಗಾಯಳು ತಂದೆ ದೇವರಾಜ್ ಮಾತನಾಡಿ ʻʻಪ್ರೇಮಿಗಳ ದಿನದಂದು ಅಪಘಾತ ನಡೆದಿದೆ. ನನ್ನ ಮಗನಿಗೆ 19 ವರ್ಷ ಮಾತ್ರ. ಅಪ್ಪಟ ಧ್ರುವ ಸರ್ಜಾ ಅಭಿಮಾನಿ ಅವನು. ಅವನ ಕೊನೆಯ ಆಸೆ ಧ್ರುವ ಸರ್ಜಾ ಅವರನ್ನು ನೋಡುವುದು. ಆ ದಿನ ನನ್ನ ಮಗ ಹೆಲ್ಮೆಟ್ ಹಾಕಿರಲಿಲ್ಲ ಹಾಗಾಗಿ ಈ ಕರಾಳ ದಿನ ಬಂದಿದೆʼʼಎಂದರು.


Exit mobile version