Site icon Vistara News

Duniya Vijay: ಕವಿರಾಜ್ ಜತೆ ಪಾರ್ಟಿಗೆ ರೆಡಿಯಾದ ದುನಿಯಾ ವಿಜಿ ; ಬಿಗ್‌ ಅಪ್‌ಡೇಟ್‌ ಕೊಟ್ಟʻಭೀಮʼ !

Duniya Vijay with bheema Film team

ಬೆಂಗಳೂರು: ಊರಿಗೊಬ್ಳೆ ಪದ್ಮಾಪತಿ…’ ಸಾಂಗ್ ಯಾರ್ ತಾನೆ ಕೇಳಿಲ್ಲ. ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ರಮ್ಯಾ ಪದ್ಮಾಪತಿಯಾಗಿ ಹಾಡಿಗೆ ಹೆಜ್ಜೆ ಹಾಕಿದ್ದರು. ರಮ್ಯಾಗೆ ದುನಿಯಾ ವಿಜಯ್‌ (Duniya Vijay) ಸಾಥ್ ನೀಡಿದ್ದರು. ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಸಿನಿಮಾದ ಹಾಡು ಇದಾಗಿದ್ದು ಇಬ್ಬರೂ ಸಖತ್ ಆಗಿ ಹೆಜ್ಜೆ ಹಾಕಿದ್ದರು. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡಿಗೆ ಸಾಹಿತ್ಯ ರಚಿಸಿದ್ದು ಖ್ಯಾತ ಚಿತ್ರಸಾಹಿತಿ ಕವಿರಾಜ್. ಈ ಹಾಡಿನ ಬಳಿಕ ರಮ್ಯಾ ಸ್ಯಾಂಡಲ್‌ವುಡ್ ಪದ್ಮಾವತಿ ಅಂತಲೇ ಖ್ಯಾತಿ ಗಳಿಸಿದರು. ಅಷ್ಟರ ಮಟ್ಟಿಗೆ ಈ ಹಾಡು ಹಿಟ್ ಆಗಿತ್ತು. ಆ ಸೂಪರ್ ಹಿಟ್ ಹಾಡಿನ ಬಗ್ಗೆ ಈಗ್ಯಾಕೆ ಅಂತೀರಾ? ಕವಿರಾಜ್ ಮತ್ತು ದುನಿಯ ವಿಜಯ್‌ ಕಾಂಬಿನೇಷ್‌ನಲ್ಲಿ (Duniya Vijay Bheema Movie Update) ಮತ್ತೊಂದು ವಿಶೇಷ ಹಾಡು ಮೂಡಿ ಬರುತ್ತಿದೆ. ‘ಪದ್ಮಾವತಿ’ ಹಾಡಿನ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್‌ಗೆ ಸಜ್ಜಾಗಿದೆ ಈ ಜೋಡಿ.

ದುನಿಯಾ ವಿಜಯ್ ಸದ್ಯ ‘ಭೀಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ವಿಜಯ್‌ ರಿಲೀಸ್ ತಯಾರಿಯಲ್ಲಿದ್ದಾರೆ. ‘ಭೀಮ’ ಸಿನಿಮಾಗಾಗಿ ಕವಿರಾಜ್ ವಿಶೇಷ ಹಾಡೊಂದನ್ನು ಬರೆದಿದ್ದಾರೆ. ಅಂದು ‘ಪದ್ಮಾವತಿ’ ಎಂದು ಮೋಡಿ ಮಾಡಿದ್ದ ಕವಿರಾಜ್ ಇದೀಗ, ‘ಬೇಡ ಬೇಡ ದೊಡ್ಡ ಪಾರ್ಟಿ…’ ಎನ್ನುತ್ತ ಮತ್ತೆ ಗಾಯಪ್ರಿಯರ ಮುಂದೆ ಬರ್ತಿದ್ದಾರೆ. ಈ ಬಗ್ಗೆ ಕವಿರಾಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Duniya Vijay | ಜನುಮದಿನದ ಸಂಭ್ರಮದಲ್ಲಿ ದುನಿಯಾ ವಿಜಯ್‌: `ಭೀಮ’ ಟೀಸರ್‌ ಔಟ್‌!

‘ಬೇಡ ದೊಡ್ಡ ದೊಡ್ಡ ಪಾರ್ಟಿ.. ಕುಡಿಸು ನೀ ಸಾಕು ಬೈ ಟೂ ಟೀ…’ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಭೀಮ ಸಿನಿಮಾದ ಹೈ ವೋಲ್ಟೇಜ್ ಹಾಡು ಇದಾಗಿದೆ. ಅಂದಹಾಗೆ ಭೀಮ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚರಣ್ ರಾಜ್ ಸಂಗೀತ, ಕವಿರಾಜ್ ಸಾಹಿತ್ಯ ಹಾಗೂ ದುನಿಯಾ ವಿಜಯ್ ನಟನೆ. ಈ ಮೂವರ ಕಾಂಬಿನೇಷನ್‌ನಲ್ಲಿ ಬರ್ತಿರುವ ಹಾಡಿನ ಮೇಲೆ ನಿರೀಕ್ಷೆ ಈಗಾಗಲೇ ಹೆಚ್ಚಾಗಿದ್ದು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

ʻʻದುನಿಯಾ ವಿಜಯ್ ತಂತ್ರಜ್ಞರನ್ನು ತುಂಬಾ ಚೆನ್ನಾಗಿ ನೋಡಿಕಳ್ಳುತ್ತಾರೆ, ಅಷ್ಟೆಯಲ್ಲದೇ ಅವರಿಗೆ ಸಲ್ಲ ಬೇಕಾದ ಗೌರವವನ್ನು ನೀಡುತ್ತಾರೆ. ಹಾಗಾಗಿಯೇ ವಿಜಿ ಎಂದರೆ ತಂತ್ರಜ್ಞರಿಗೆ ಇಷ್ಟʼʼ ಎಂದು ಚಿತ್ರಸಾಹಿತಿ ಕವಿರಾಜ್ ಹೇಳಿದ್ದಾರೆ. ಸುಂದರ ಸಾಲುಗಳ ಜತೆಗೆ ಕವಿರಾಜ್ ಚೇರ್ ಮೇಲೆ ಕುಳಿತಿದ್ದು ಸುತ್ತ ಭೀಮ ಟೀಂ ನಿಂತಿರುವ ಫೋಟೊವನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Duniya Vijay | ತೆಲುಗು ಸಿನಿಮಾಗಾಗಿ ಸಖತ್‌ ದಪ್ಪ ಆಗಿದ್ದಾರೆ ದುನಿಯಾ ವಿಜಯ್

‘ಭೀಮ’ ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ ಭೀಮ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Exit mobile version