Site icon Vistara News

Emergency Teaser | ಇಂದಿರಾ ಗಾಂಧಿ ಲುಕ್‌ನಲ್ಲಿ ಖಡಕ್‌ ಆಗಿ ಮಿಂಚಿದ ಕಂಗನಾ, ಅವರೇ ನಾಯಕಿ, ಅವರೇ ನಿರ್ದೇಶಕಿ

Emergency Teaser

ಬೆಂಗಳೂರು: ಕಂಗನಾ ರಣಾವತ್‌ ಒಂಥರಾ ಖಡಕ್‌ ಲೇಡಿ. ಇದ್ದಿದ್ದನ್ನು ಇದ್ದ ಹಾಗೆ, ಮುಖಕ್ಕೆ ಹೊಡೆದಂತೆ ಹೇಳಬಲ್ಲವರು. ಅದೇ ರೀತಿ ಪುರುಷ ಪ್ರಧಾನ ಸಿನಿಮಾ ರಂಗದಲ್ಲಿ ಸಿಂಹಿಣಿಯಂತೆ ಗರ್ಜಿಸುತ್ತಿರುವವರು. ಇದೀಗ ಅವರ ಸ್ವಭಾವಕ್ಕೆ, ಆ ಪವರ್‌ಫುಲ್‌ ಕ್ಯಾರೆಕ್ಟರ್‌ಗೆ ಸರಿ ಹೊಂದುವ ಪಾತ್ರವೊಂದನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ. ಅದುವೇ ಇಂದಿರಾ ಗಾಂಧಿ!

ಇದೀಗ ʻಎಮರ್ಜೆನ್ಸಿʼ ಸಿನಿಮಾ ಟೀಸರ್‌ (Emergency Teaser) ಬಿಡುಗಡೆಗೊಂಡಿದ್ದು, ಇಂದಿರಾ ಗಾಂಧಿ ಲುಕ್‌ನಲ್ಲಿ ಕಂಗನಾ ಸಖತ್‌ ಆಗಿ ಮಿಂಚುತ್ತಿದ್ದಾರೆ.‌ ಆ ಉಡುಪು, ವಸ್ತ್ರವಿನ್ಯಾಸ ಹಾಗೂ ಮೇಕಪ್ ನೋಡುವಾಗ ಇಂದಿರಾ ಗಾಂಧಿ ಮತ್ತೆ ಎದ್ದು ಬಂದಂತೆ ಕಾಣುತ್ತಿದ್ದಾರೆ ಕಂಗನಾ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಈ ಚಿತ್ರದಲ್ಲಿ ಕಂಗನಾ ಕೇವಲ ನಟನೆ ಮಾತ್ರ ಮಾಡ್ತಾ ಇಲ್ಲ, ನಿರ್ದೇಶಕಿಯೂ ಅವರೇ.

ಇದನ್ನೂ ಓದಿ | Dhaakad | ಸಿನಿಮಾ ಸೋತಿದೆ ಎಂದು ಚುಚ್ಚು ಮಾತನಾಡಿದವರು ಪೆಚ್ಚಾಗುವಂತೆ ಪ್ರತ್ಯುತ್ತರ ಕೊಟ್ಟ ಕಂಗನಾ!

ಟೀಸರ್‌ ಬಿಡುಗಡೆ ವೇಳೆ ಮಾತನಾಡಿದ ಕಂಗನಾ ರಣಾವತ್‌, “ತುರ್ತು ಪರಿಸ್ಥಿತಿಯು ಭಾರತದ ರಾಜಕೀಯ ಇತಿಹಾಸದ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ಒಂದು. ಅದು ನಾವು ಅಧಿಕಾರವನ್ನು ನೋಡುವ ವಿಧಾನವನ್ನು ಬದಲಾಯಿಸಿದೆ ಮತ್ತು ಅದಕ್ಕಾಗಿಯೇ ನಾನು ಈ ಕಥೆಯನ್ನು ಹೇಳಲು ನಿರ್ಧರಿಸಿದೆ. ನಾನು ವಿಷಯದ ಬಗ್ಗೆ ಸಂಶೋಧನೆ ಮಾಡಲು ಸಾಕಷ್ಟು ಸಮಯವನ್ನು ಕಳೆದಿದ್ದೇನೆʼ ಎಂದಿದ್ದಾರೆ.

ಚಲನಚಿತ್ರವನ್ನು ನಿರ್ದೇಶಿಸುತ್ತಿರುವುದು ಒಂದು ‘ಪ್ರಚಂಡ ಪ್ರಯಾಣ’ ಎಂದು ಬರೆದುಕೊಂಡಿದ್ದಾರೆ. “ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಸಿನಿಮಾದಲ್ಲಿ ಕೆಲಸ ಮಾಡಿದ ನಂತರ, ನನಗಿಂತ ಉತ್ತಮವಾಗಿ ಯಾರೂ ಅದನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನಾನು ಅಂತಿಮವಾಗಿ ಕಂಡುಕೊಂಡೆ. ಹಾಗಾಗಿ ನಾನೇ ನಿರ್ದೇಶಕಿಯಾದೆ. ರಿತೇಶ್ ಶಾ ಅವರು ಸಂಭಾಷಣೆ ಬರೆದಿದ್ದಾರೆ. ನನ್ನ ಉತ್ಸಾಹ ಹೆಚ್ಚಾಗಿದೆ. ಇದೊಂದು ಅದ್ಭುತ ಪ್ರಯಾಣವಾಗಲಿದೆʼ ಎಂದು ಖುಷಿ ಹಂಚಿದ್ದಾರೆ.

ಕಂಗನಾ ರಣಾವತ್‌ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೇಳುವಷ್ಟು ಗೆಲುವು ಸಿಕ್ಕಿರಲಿಲ್ಲ. ಸಿನಿಮಾಗಿಂತಲೂ ವಿವಾದದ ಸುದ್ದಿಯಲ್ಲಿಯೇ ಹೆಚ್ಚಾಗಿ ಸದ್ದು ಮಾಡುತ್ತಿದ್ದರು ಕಂಗನಾ. ʻಮೆಂಟಲ್‌ ಹೈ ಕ್ಯಾʼ, ʻಪಂಗಾʼ, ʻತಲೈವಿʼ ಮತ್ತು ʻಧಾಕಡ್‌ʼ ಸಿನಿಮಾಗಳ ಮೂಲಕ ಕಂಗನಾ ಸೋತಿದ್ದಾರೆ. ಆದರೆ, ಇಲ್ಲಿ ಗೆಲ್ಲಲೇಬೇಕು ಎನ್ನುವ ಛಲ ಹೊಂದಿದ್ದಾರೆ.

ಇದನ್ನೂ ಓದಿ | ಆ ಪರಶಿವನೂ ಶಿವಸೇನೆಯನ್ನು ಉಳಿಸಲಾರ; ಉದ್ಧವ್‌ ರಾಜೀನಾಮೆ ಬೆನ್ನಲ್ಲೇ ಕಂಗನಾ ಖಡಕ್‌ ಮಾತು

Exit mobile version