Site icon Vistara News

Pathaan Film | ʻಪಠಾಣ್‌ʼ ಮಹತ್ವಾಕಾಂಕ್ಷೆಯ ಚಿತ್ರ, ನನಗೆ ನನ್ನ ಸಿನಿಮಾ ಮೇಲೆ ಮಾತ್ರ ಗಮನ: ರಾಜ್‌ಕುಮಾರ್ ಸಂತೋಷಿ!

Pathaan Film

ಬೆಂಗಳೂರು : ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರ ಮುಂಬರುವ ಚಿತ್ರ ‘ಗಾಂಧಿ ಗೋಡ್ಸೆ ಏಕ್ ಯುದ್ಧ್’ ಮತ್ತು ಶಾರುಖ್‌ ಅಭಿನಯದ ‘ಪಠಾಣ್‌’ (Pathaan Film) ಸಿನಿಮಾಗಳು ಒಟ್ಟಿಗೆ ತೆರೆ ಕಾಣಲಿವೆ. 2018ರ ‘ಝೀರೋ’ ನಂತರ ಶಾರುಖ್ ನಾಯಕನಾಗಿ ಪಠಾಣ್‌ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಗಾಂಧಿ ಗೋಡ್ಸೆ ಏಕ್ ಯುದ್ಧ್’ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ, ಸಂತೋಷಿ ತಮ್ಮ ಚಿತ್ರದ ಕುರಿತು ಮಾತನಾಡಿದ್ದಾರೆ. ಜತೆಗೆ ಶಾರುಖ್‌ ‘ಪಠಾಣ್’ ಚಿತ್ರಕ್ಕಾಗಿ ಶುಭ ಹಾರೈಸಿದ್ದಾರೆ.

ರಾಜ್‌ಕುಮಾರ್ ಸಂತೋಷಿ ಮಾತನಾಡಿ ʻʻನಮ್ಮದು ಮನೋರಂಜನೆಯ ಚಿತ್ರವಲ್ಲ, ಇದು ತುಂಬಾ ವಿಭಿನ್ನವಾದ ಚಿತ್ರ. ಅಂತಹ ಬಾಕ್ಸಾಫೀಸ್ ಘರ್ಷಣೆ ವಿಷಯಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ಎರಡೂ ಚಿತ್ರಗಳು ವಿಭಿನ್ನವಾಗಿವೆ. ನಾನು ನನ್ನ ಚಿತ್ರದ ಮೇಲೆ ಮಾತ್ರ ಗಮನಹರಿಸುತ್ತೇನೆ, ”ಎಂದು ಸಂತೋಷಿ ಮಾತನಾಡಿದ್ದಾರೆ.

ಇದನ್ನೂ ಓದಿ | Pathaan Movie | ಪಠಾಣ್‌ ಸಿನಿಮಾದ ನಗ್ನತೆಯನ್ನು ಭಾರತೀಯ ಸಿನಿಮಾಗಳಲ್ಲಿ ಪ್ರದರ್ಶಿಸಬಾರದು: ಅನಂತ್‌ನಾಗ್

ʻʻಶಾರುಖ್ ಖಾನ್ ಅವರನ್ನು ಅವರನ್ನು ಬಹಳ ವರ್ಷಗಳಿಂದ ನೋಡಿದ್ದೇನೆ. ಅವರು ತುಂಬ ಒಳ್ಳೆಯ ವ್ಯಕ್ತಿ, ಅವರು ತಮ್ಮ ಚಿತ್ರಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಅವರ ಚಿತ್ರಕ್ಕಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ. ಯಶ್ ರಾಜ್ ಫಿಲ್ಮ್ಸ್ ಬಹಳ ಹೆಸರುವಾಸಿಯಾದ ಬ್ಯಾನರ್. ಪಠಾಣ್‌ ಮಹತ್ವಾಕಾಂಕ್ಷೆಯ ಚಿತ್ರ. ಅವರಿಗೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ ಮತ್ತು ಅವರು ಚಲನಚಿತ್ರವನ್ನು ವೀಕ್ಷಿಸುತ್ತಾರೆ” ಎಂದು ಸಂತೋಷಿ ಹೇಳಿದ್ದಾರೆ.

ರಾಜ್‌ಕುಮಾರ್ ಸಂತೋಷಿ ಮಾತು ಮುಂದುವರಿಸಿ ʻʻಗಾಂಧಿ ಗೋಡ್ಸೆ-ಏಕ್ ಯುದ್ಧ್’ ಮಹಾತ್ಮ ಗಾಂಧಿ ಮತ್ತು ನಾಥೂರಾಮ್ ಗೋಡ್ಸೆ ನಡುವಿನ ಎರಡು ವಿರುದ್ಧವಾದ ಸಿದ್ಧಾಂತಗಳ ಯುದ್ಧವನ್ನು ಚಿತ್ರಿಸುತ್ತದೆ. ನಾವು ಅರ್ಧ ಗಂಟೆ ಕಾಲ ಸೆನ್ಸಾರ್ ಬೋರ್ಡ್ ಕಚೇರಿಯಲ್ಲಿ ಕಾದಿದ್ದೆವು. ಅವರೆಲ್ಲರೂ ಸಂತೋಷಪಟ್ಟರು. ಪರಿಷ್ಕರಣೆ ಸಮಿತಿ ಕೂಡ ಚಿತ್ರಕ್ಕೆ ತನ್ನ ಒಪ್ಪಿಗೆ ನೀಡಿದೆ. ಕಾಲೇಜುಗಳು ಮತ್ತು ಶಾಲೆಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಬೇಕು ಎಂದು CBFC ಸದಸ್ಯರು ಸೂಚಿಸಿದ್ದಾರೆʼʼ ಎಂದು ಹೇಳಿದ್ದಾರೆ.

ಈ ಚಲನಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. 9 ವರ್ಷಗಳ ನಂತರ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ರಾಜಕುಮಾರ್‌ ಸಂತೋಷಿ . ಈ ಚಿತ್ರವು ಗಣರಾಜ್ಯೋತ್ಸವದ ದಿನ, ಜನವರಿ 26, 2023 ರಂದು ಥಿಯೇಟರ್‌ಗಳಿಗೆ ಬರಲಿದೆ. ಐತಿಹಾಸಿಕ ಪಾತ್ರಗಳನ್ನು ದೀಪಕ್ ಅಂತಾನಿ, ಚಿನ್ಮಯ್ ಮಾಂಡ್ಲೇಕರ್, ಆರಿಫ್ ಜಕಾರಿಯಾ ಮತ್ತು ಪವನ್ ಚೋಪ್ರಾ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ತನಿಶಾ ಸಂತೋಷಿ ಮತ್ತು ಅನುಜ್ ಸೈನಿ ಎಂಬ ಚೊಚ್ಚಲ ಕಲಾವಿದರೂ ಇದ್ದಾರೆ.

ಸಿನಿಮಾದಲ್ಲಿ ಗಾಂಧಿ ಅವರ ಪಾತ್ರವನ್ನು ದೀಪಕ್‌ ಅಂತನಿ ನಿರ್ವಹಿಸಿದರೆ, ಚಿನ್ಮಯ್‌ ಮಾಂಡ್ಲೇಕರ್‌ ನಾಥುರಾಮ್‌ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಸಂಗೀತವನ್ನು ಎಆರ್ ರೆಹಮಾನ್ ಸಂಯೋಜಿಸಿದ್ದಾರೆ. ಇದನ್ನು ಮನಿಲಾ ಸಂತೋಷಿ ನಿರ್ಮಿಸಿದ್ದಾರೆ. ಶಾರುಖ್‌ ಅಭಿನಯದ ʻಪಠಾಣ್‌ʼ ಸಿನಿಮಾ ರಿಲೀಸ್‌ ಆದ ಒಂದು ದಿನ ಬಳಿಕ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Rajkumar Santoshi | ʻಗಾಂಧಿ ಗೋಡ್ಸೆ – ಏಕ್ ಯುದ್ಧ್ʼ ಟ್ರೈಲರ್‌ ಔಟ್‌!

Exit mobile version