Site icon Vistara News

‘ಗೋದ್ರಾʼ ಸಿನಿಮಾ ಟೈಟಲ್‌ ಚೇಂಜ್‌ ಆಯ್ತು ಡಿಯರ್‌ !

'ಗೋದ್ರಾʼ

ಬೆಂಗಳೂರು: ನಟ ಸತೀಶ್‌ ನಿನಾಸಂ ಅಭಿನಯದ ಗೋದ್ರಾ ಸಿನಿಮಾಗೆ ಹಲವು ದಿನಗಳ ಹಿಂದೇಯೇ ಸೆನ್ಸಾರ್‌ ಆಗಿತ್ತು. ಈ ಸಿನಿಮಾದಲ್ಲಿ ಶೃದ್ಧಾ ಶ್ರೀನಾಥ್‌, ವಸಿಷ್ಠ ಸಿಂಹ ಮುಂತಾದವರು ನಟಿಸಿದ್ದಾರೆ.

ನಂದೀಶ್‌ ನಿರ್ದೇಶಕರಾಗಿದ್ದು, ಸೆನ್ಸಾರ್ ಪ್ರಕ್ರಿಯೆ ಮುಗಿದರೂ ಸಿನಿಮಾ ತೆರೆಕಂಡಿರಲಿಲ್ಲ. ಇದೀಗ ಸಿನಿಮಾ ಶೀರ್ಷಿಕೆ ಚೆಂಚ್‌ ಆಗಿದೆ. ಈ ಕುರಿತು ಚಿತ್ರತಂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಕಥಾಹಂದರ ಹೊಂದಿದೆ. ಗೋದ್ರಾ ಸಿನಿಮಾ ಇದೀಗ ʼಡಿಯರ್‌ ವಿಕ್ರಂʼ ಆಗಿ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.ʼ

ಇದನ್ನೂ ಓದಿ | ಎಲ್ಲ ಯುದ್ಧಗಳು ಭೂಮಿಯಲ್ಲಿ ನಡೆಯೊಲ್ಲ! ಮತ್ತೆಲ್ಲಿ? 15ಕ್ಕೆ ಹೇಳ್ತಾರೆ ನೀನಾಸಂ

ಏನಂತಾರೆ ಚಿತ್ರತಂಡ?

ʼಸೆನ್ಸಾರ್‌ ಮಂಡಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಮಂಡಳಿಯ ಸದಸ್ಯರು ಚಲನಚಿತ್ರವನ್ನು ವೀಕ್ಷಿಸಿದರು. ನಂತರ  ಶೀರ್ಷಿಕೆಯನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ. ಗೋದ್ರಾದಲ್ಲಿ ನಡೆದ ಘಟನೆಗೂ ಹಾಗೂ ಕಥೆಗೂ ಸಂಬಂಧವಿಲ್ಲ ಎಂದು ಮನವಿ ಮಾಡಿ ಅವರಿಗೆ ತಿಳಿಸಲು ಪ್ರಯತ್ನ ಮಾಡಿದೆವು. ಆದರೆ ಮನವಿ ಪುರಸ್ಕರಿಸಲಿಲ್ಲ . ಸಿಬಿಎಫ್‌ಸಿಗೆ ಬದ್ಧರಾಗಿದ್ದಕ್ಕೆ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುತ್ತಿರುವುದಾಗಿʼ ಚಿತ್ರತಂಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ʼಡಿಯರ್‌ ವಿಕ್ರಂʼ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆಗುತ್ತಿಲ್ಲ. ಬದಲಾಗಿ ಒಟಿಟಿಯಲ್ಲಿ ತೆರೆ ಕಾಣಲಿದೆ. ಇದರ ಒಟಿಟಿ ಪ್ರಸಾರ ಹಕ್ಕುಗಳು ವೂಟ್‌ ಸೆಲೆಕ್ಟ್‌ ಪಡೆದುಕೊಂಡಿದೆ. ರಿಲೀಸ್‌ ಡೇಟ್‌ ಆದಷ್ಟು ಬೇಗ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಸತೀಶ್ ನಿನಾಸಂ, ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ ಜತೆಗೆ ಅಚ್ಯುತ್ ಕುಮಾರ್, ರಕ್ಷಾ ಸೋಮಶೇಖರ್, ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ | ಈ ವರ್ಷ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಯಾವುದು ಗೊತ್ತೇ?

Exit mobile version