Site icon Vistara News

Gowri Movie: ಸಮರ್ಜಿತ್‌ಗೆ ನಾಚಿಕೆಯಿಂದ ದೋಸೆ ತಿನ್ನಿಸಿದ ಸಾನ್ಯಾ ಅಯ್ಯರ್; ಇದೇನು ಡೇಟಿಂಗಾ ಎಂದು ಪ್ರಶ್ನೆ ಇಟ್ಟ ಫ್ಯಾನ್ಸ್!

Gowri Movie Saanya Iyer Samar Lankesh eating dosa with together

ಬೆಂಗಳೂರು: ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್ ಅಭಿನಯದ ‘ಗೌರಿ’ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಅಗಲು ಸಿದ್ಧವಾಗಿದ್ದು, ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಗೌರಿ ಚಿತ್ರದ (Gowri Movie) ಟ್ರೈಲರ್‌ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಸೋಮವಾರ ಅನಾವರಣ ಮಾಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ದೋಸೆ ತಿನ್ನಿಸುತ್ತಿರುವ ವಿಡಿಯೊ ಭಾರಿ ವೈರಲ್‌ ಆಗುತ್ತಿದೆ. ಸಾನ್ಯಾ ಅಯ್ಯರ್‌ಗೆ ಟೀ ಕುಡಿಸ್ತಿದ್ದಾರೆ ಸಮರ್ಜಿತ್‌. ನಾಚಿಕೊಳ್ತಾ ಟೀ ಹೀರುವ ಸಾನ್ಯಾ ಅಯ್ಯರ್, ಸೂಪರ್ ಎಂದು ಕೈಸನ್ನೆ ಮಾಡ್ತಾರೆ. ಸಾನ್ಯಾ ಕೂಡ ಸಮರ್ಜಿತ್‌ಗೆ ದೋಸೆ ತಿನ್ನಿಸಿದ್ದಾರೆ.

ಸಮರ್ಜಿತ್ ಸರ್ಪ್ರೈಸ್ ಆಗಿ ಟೀ ತಟ್ಟೆಯನ್ನು ಸಾನ್ಯಾ ಮುಂದಿಟ್ಟಾಗ ಸ್ವಲ್ಪ ಅನುಮಾನಿಸಿದ್ದ ಸಾನ್ಯಾ, ನಂತರ ನಾಚುತ್ತಲೇ ಟೀ ಕುಡಿದಿದ್ದರು.ದೋಸೆ ತಿನ್ನುವ ಸರದಿ ಸಮರ್ಜಿತ್ ಅವರಿಗೆ ಬಂದಿತ್ತು. ಸಾನ್ಯಾ ದೋಸೆ ತಿನ್ನಿಸಲು ಬಂದರೆ ಸಮರ್ಜಿತ್ ಲಂಕೇಶ್ ನಾಚಿ ನೀರಾಗಿದ್ದರು. ಕೊನೆಗೂ ತುತ್ತು ತಿಂದ ಸಮರ್ಜಿತ್, ಸಾನ್ಯಾ ಕೈನಿಂದ ಬಂದ ದೋಸೆ ಸ್ವೀಟ್ ಆಗಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಶಿವಾನಂದ ಸರ್ಕಲ್ ನಲ್ಲಿರುವ ಫ್ಯಾಮಿಲಿ ರೆಸ್ಟೋರೆಂಟ್ ಗೆ ಕೂಡ ಜೋಡಿ ಭೇಟಿ ನೀಡಿದ್ದರು. ಅಲ್ಲಿ ಲೈವ್ ಬಂದ ಸಾನ್ಯಾ ಅಯ್ಯರ್, ಚಂದ್ರು ಅವರನ್ನು ಮಾತನಾಡಿಸಿದ್ದಾರೆ. ಗೌರಿ ಚಿತ್ರ ವೀಕ್ಷಣೆ ಮಾಡುವಂತೆ ಚಂದ್ರು ಕೂಡ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻಇವ್ರಿಬ್ರೂ ಮೂವಿ ಮಾಡ್ತಾ ಇದ್ದಾರೋ ಇಲ್ಲ ಡೇಟಿಂಗ್ ಮಾಡ್ತಾ ಇದ್ದಾರೆ ಗೊತ್ತಾಗ್ತಾ ಇಲ್ಲʼʼಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್ ಅವರು ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು, ʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಿದ್ದಾರೆ.

ಈ ಚಿತ್ರಕ್ಕೆ ಎಜೆ ಶೆಟ್ಟಿ ಛಾಯಾಗ್ರಹಣವಿದ್ದು, ಬಿ.ಎ.ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

Exit mobile version