Site icon Vistara News

Guru Shishyaru | ಶರಣ್‌ ಅಭಿನಯದ ಗುರು ಶಿಷ್ಯರು ಸಿನಿಮಾ ವೀಕ್ಷಿಸಿದ ಯಡಿಯೂರಪ್ಪ, ಅಶೋಕ್‌

Guru Shishyaru

ಬೆಂಗಳೂರು : ಶರಣ್‌ ಅಭಿನಯದ ಗುರು ಶಿಷ್ಯರು ಸಿನಿಮಾ (Guru Shishyaru) ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ವೀಕ್ಷಿಸಲು ರಾಜಕೀಯ ಗಣ್ಯರು ಆಗಮಿಸಿದ್ದರು. ಕಾರಣಾಂತರದಿಂದ ಸಿಎಂ ಬೊಮ್ಮಯಿ ಆಗಮಿಸಿಲ್ಲ ಎನ್ನಲಾಗಿದೆ. ಮಾಜಿ‌ ಸಿಎಂ ಯಡಿಯೂರಪ್ಪ, ಸಚಿವ ಆರ್ ಅಶೋಕ್ ‌,ಶಾಸಕ ರಾಜುಗೌಡ ಹಾಗೂ ಇತರೆ ಗಣ್ಯರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

ಸ್ಯಾಂಡಲ್‌ವುಡ್‌ ನಟ ಶರಣ್‌ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಗುರು ಶಿಷ್ಯರು ಸಿನಿಮಾ (Guru Shishyaru) ಸೆ.23ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದ ಈ ಚಿತ್ರಕ್ಕೆ ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದ್ದರು. ಬೊಮ್ಮಾಯಿ ಜತೆಗಿನ ಫೋಟೊವನ್ನು ಶರಣ್‌ ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದರು.

ಇದನ್ನೂ ಓದಿ | Anganwadi | ರಾಜ್ಯದಲ್ಲಿ 4000 ಅಂಗನವಾಡಿ ನಿರ್ಮಾಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ ಭರವಸೆ

ಫೋಟೊ ಜತೆ ʻʻಈ ಚಿತ್ರದಲ್ಲಿ ಖೋಖೋ ಆಟವನ್ನು ಹೈಲೈಟ್‌ ಮಾಡಿ ತೋರಿಸಿದಕ್ಕೆ ನಮ್ಮ ತಂಡವನ್ನು ಪ್ರಶಂಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧನ್ಯವಾದಗಳು. ತಮ್ಮ ಹಲವಾರು ಕೆಲಸದ ನಡುವೆಯೂ ನಮ್ಮ ತಂಡವನ್ನು ಭೇಟಿ ಮಾಡಿದ್ದು ಖುಷಿ ನೀಡಿದೆʼʼಎಂದು ಬರೆದುಕೊಂಡಿದ್ದರು.

ರಾಜ್ಯದ ಎಲ್ಲೆಡೆ ಸಿನಿಮಾ ಉತ್ತಮ ಪ್ರದರ್ಶನಗಳನ್ನು ಕಾಣುತ್ತಿದೆ. ಚಿತ್ರದಲ್ಲಿ ಕನ್ನಡದ ನಟರಾದ ಶರಣ್, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ರವಿಶಂಕರ್ ಗೌಡ ಹಾಗೂ ನೆನಪಿರಲಿ ಪ್ರೇಮ್ ಪುತ್ರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ | Ajay Rao Movie | ಸಿನಿಮಾ ನಿರ್ಮಾಣಕ್ಕೆ ಅಜಯ್‌ ರಾವ್‌ ಕಂಬ್ಯಾಕ್‌

Exit mobile version