Site icon Vistara News

Allu Arjun: ಚಿರಕಾಲ ನೆನಪಿನಲ್ಲಿ ಉಳಿಯುವಂಥ ಚಿತ್ರ ನೀಡುತ್ತೇವೆ: ಹೊಸ ಸಿನಿಮಾ ಬಗ್ಗೆ ಅಲ್ಲು ಅರ್ಜುನ್‌ ಹೇಳಿದ್ದೇನು?

Hopefully, we give a memorable film says Allu Arjun

ಬೆಂಗಳೂರು: ಪುಷ್ಪ-2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಲ್ಲು ಅರ್ಜುನ್ (Allu Arjun) ತಮ್ಮ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡದ ಹೊಸ ಪ್ರಾಜೆಕ್ಟ್‌ಗಾಗಿ ಅರ್ಜುನ್ ರೆಡ್ಡಿ (Sandeep Reddy Vanga) ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಕೈಜೋಡಿಸಿದ್ದಾರೆ. ನಟ ಅಲ್ಲು ಅರ್ಜುನ್ ಟ್ವಿಟರ್‌ನಲ್ಲಿ ಯೋಜನೆಯ ಬಗ್ಗೆ ʻʻಈಗ ಸ್ವಲ್ಪ ಸಮಯದಿಂದ ಈ ಯೋಜನೆ ಎದುರು ನೋಡುತ್ತಿದ್ದೇನೆ. ಚಿರಕಾಲ ನೆನಪಿನಲ್ಲಿ ಉಳಿಯುವಂತಹ ಚಿತ್ರ ನೀಡುತ್ತೇವೆ ʼʼಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ” ನಿಜವಾಗಿಯೂ ಸಂದೀಪ್ ರೆಡ್ಡಿ ವಂಗಾ ಅವರ ಚಿತ್ರದಲ್ಲಿ ಹೊಸತನ್ನು ಊಹಿಸುತ್ತಿದ್ದೇನೆ. ವಂಗಾ ಸರ್ ನಿರ್ದೇಶನ ಮತ್ತು ಅಲ್ಲು ಸರ್ ಅವರ ನಟನೆಗೆ ಕಾಯುತ್ತಿದ್ದೇವೆ. ಹೊಸ ಸಿನಿಮಾ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆʼʼ ಎಂದು ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಭೂಷಣ್ ಕುಮಾರ್ (Bhushan Kumar), ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಮತ್ತು ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹೊಸ ಯೋಜನೆಯ ಬಗ್ಗೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಲನಚಿತ್ರವನ್ನು ಟಿ-ಸಿರೀಸ್ ಫಿಲ್ಮ್ಸ್ ಪ್ರೊಡಕ್ಷನ್ ಮತ್ತು ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಲಿದೆ. ನಿರ್ಮಾಪಕ ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜತೆ ಸಹ-ನಿರ್ಮಾಪಕ ಶಿವ ಚಾನಾನ ಮತ್ತು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗೆ ಪರಸ್ಪರ ಭೇಟಿಯಾಗಿದ್ದರು.

ಇದನ್ನೂ ಓದಿ: Allu Arjun: ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜತೆ ಅಲ್ಲು ಅರ್ಜುನ್‌; ಹುಚ್ಚೆದ್ದು ಕುಣಿದ ಅಭಿಮಾನಿಗಳು!

ಅಲ್ಲು ಅರ್ಜುನ್ ನೇತೃತ್ವದ ಈ ಚಿತ್ರದ ಚಿತ್ರೀಕರಣವು ಸಂದೀಪ್ ವಂಗಾ ಅವರ ʻಸ್ಪಿರಿಟ್ʼ ಸಿನಿಮಾ ಚಿತ್ರೀಕರಣದ ನಂತರ ಈ ಯೋಜನೆ ಶುರುವಾಗಲಿದೆ ಎನ್ನಲಾಗಿದೆ. ಸ್ಪಿರಿಟ್ ಸಿನಿಮಾವನ್ನು ಕೂಡ ಟಿ-ಸೀರೀಸ್ ಫಿಲ್ಮ್ಸ್ ಪ್ರೊಡಕ್ಷನ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಸಹ ನಿರ್ಮಿಸುತ್ತದೆ. ಅಲ್ಲು ಅರ್ಜುನ್‌ ಅವರ ಹೊಸ ಯೋಜನೆ ಬಗ್ಗೆ T-ಸಿರೀಸ್‌ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಪ್ರಕಟಣೆ ಹೊರಡಿಸಿದೆ. ಅರ್ಜುನ್ ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ಪುಷ್ಪ-2 ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

Exit mobile version