Site icon Vistara News

Jagapathi Babu: ಬದುಕಿ, ಬದುಕಲು ಬಿಡಿ ಎಂದು ಬೇಸರದ ಪೋಸ್ಟ್‌ ಹಂಚಿಕೊಂಡ ನಟ ಜಗಪತಿ ಬಾಬು !

Jagapathi Babu

ಬೆಂಗಳೂರು: ಬಹುಭಾಷಾ ನಟ ಜಗಪತಿ ಬಾಬು (Jagapathi Babu) ಕೆಲವು ಅಭಿಮಾನಿಗಳ ಸಂಘ ಮತ್ತು ಟ್ರಸ್ಟ್‌ನೊಂದಿಗೆ ಸಂಬಂಧವನ್ನು ಮುರಿದುಕೊಳ್ಳುವಲ್ಲಿ ಮುಂದಾಗಿದ್ದಾರೆ. ಹೆಚ್ಚಿನವರು ಕೇವಲ ಅಭಿಮಾನಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಅಭಿಮಾನಿಗಳ ಸಂಘಗಳು ತನಗೆ ಅನಾನುಕೂಲವನ್ನುಂಟು ಮಾಡುವ ಮಟ್ಟಕ್ಕೆ ತಲುಪಿದೆ ಎಂದು ಜಗಪತಿ ಬಾಬು ಪೋಸ್ಟ್‌ ಹಂಚಿಕೊಂಡಿದ್ದಾರೆ.

ʻʻಕಳೆದ 33 ವರ್ಷಗಳಲ್ಲಿ, ನಾನು ನನ್ನ ಅಭಿಮಾನಿಗಳು ಮತ್ತು ಅವರ ಕುಟುಂಬಗಳ ಪರವಾಗಿ ನಿಂತಿದ್ದೇನೆ. ಕುಟುಂಬದ ಸದಸ್ಯರಂತೆ ಅವರೊಂದಿಗೆ ಬೆರೆಯುತ್ತಿದ್ದೆ. ಆದರೆ ಅದು ಈಗ ಬದಲಾಗಿದೆ ಎಂದು ತೋರುತ್ತದೆ. ದುರಾಶೆ ಮತ್ತು ನಿರೀಕ್ಷೆಗಳು ಪ್ರೀತಿ ಮತ್ತು ಅಭಿಮಾನವನ್ನು ಬದಲಿಸಿ ಈಗ ನನಗೆ ತೊಂದರೆ ನೀಡಲು ಪ್ರಾರಂಭಿಸಿವೆ .ನನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುವ ನನ್ನ ಅಭಿಮಾನಿಗಳಿಗೆ ನಾನು ಯಾವಾಗಲೂ ಇರುತ್ತೇನೆ. ಬದುಕಿ ಬದುಕಲು ಬಿಡಿ” ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಟನ ಈ ಪೋಸ್ಟ್‌ ವೈರಲ್‌ ಆದ ಕೂಡಲೇ ಅಭಿಮಾನಿಗಳು ಮತ್ತು ನೆಟ್ಟಿಗರು ಕಾರಣವನ್ನು ಕೇಳಲು ಶುರು ಮಾಡಿದ್ದಾರೆ.

ಇದನ್ನೂ ಓದಿ: Jagapathi Babu: ಪುಷ್ಪ-2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿರುವ ಜಗಪತಿ ಬಾಬು

ಜಗಪತಿ ಬಾಬು (Jagapathi Babu) ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಏಪ್ರಿಲ್ 21ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾದಲ್ಲಿ ಜಗಪತಿ ಬಾಬು ನಟಿಸಿದ್ದರು. ಇದೀಗ ನಟ ಅಲ್ಲು ಅರ್ಜುನ್ ಅವರ ಪುಷ್ಪ-2 ಸಿನಿಮಾದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Exit mobile version