Site icon Vistara News

Kaatera Press Meet: ಬರೋಬ್ಬರಿ 2 ವರ್ಷದ ಬಳಿಕ ಮಾಧ್ಯಮಗಳ ಮುಂದೆ ನಟ ದರ್ಶನ್! ‘ಕಾಟೇರ’ ಬಗ್ಗೆ ಹೇಳಿದ್ದೇನು?

Kaatera Press Meet Of Darshan

ಬೆಂಗಳೂರು: ಬರೋಬ್ಬರಿ ಎರಡು ವರ್ಷಗಳ ನಂತರ ಮಾಧ್ಯಮಗಳ ಮುಂದೆ ನಟ ದರ್ಶನ್ ಬಂದಿದ್ದಾರೆ. ಕಾಟೇರ ಚಿತ್ರ ಕುರಿತಾದ ಸುದ್ದಿಗೋಷ್ಠಿಯಲ್ಲಿ ಅವರು ಪಾಲ್ಗೊಂಡರು. ಕಾಟೇರ ಸಿನಿಮಾದಲ್ಲಿ ದರ್ಶನ್​ಗೆ (Darshan Thoogudeepa) ಜೋಡಿಯಾಗಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್​ ನಟಿಸುತ್ತಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಶ್ರುತಿ, ಕುಮಾರ್​ ಗೋವಿಂದ್​ ಮುಂತಾದವರು ಅಭಿನಯಿಸುತ್ತಿದ್ದಾರೆ. ‘ಕಾಟೇರ’ (Kaatera) ಸಿನಿಮಾಗೆ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ರಾಕ್​ಲೈನ್​ ವೆಂಕಟೇಶ್​ ನಿರ್ಮಾಣ ಮಾಡುತ್ತಿದ್ದಾರೆ.

ನಟ ದರ್ಶನ್ ಮಾತು

ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ನಟ ದರ್ಶನ್ ಅವರು ಕಾಟೇರ ಚಿತ್ರದ ಮಾಹಿತಿ ನೀಡಿದರು. ”ಕಾಟೇರ ಏನು ಅಂತ ಎಲ್ರೂ ಕೇಳ್ತಾ ಇದ್ದರು. ಇದು 70ರ ದಶಕದ ಸಿನಿಮಾ. ಎಲ್ಲಾ ಸ್ಟಾರ್ ಗಳಿಗಿಂತ ಸಿನಿಮಾ ದೊಡ್ಡದು. ಈ ಸಿನಿಮಾಕ್ಕೆ ನನ್ನ ಡೇಟ್ಸ್ 85 ಅಷ್ಟೇ ಇತ್ತು. ಈಗ 71 ದಿನ ಪೂರೈಸಿದೆ. ವಿನೋದ್ ಆಳ್ವಾ ಸರ್ ಜೊತೆ ನಂಗೆ ಮೊದಲ ಸಿನಿಮಾ. ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿದ್ದೆ ಎಂದು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ನಟ ಜಗಪತಿ ಬಾಬು ಅವರು ತುಂಬಾ ಮೂಡಿ. ರಾಬರ್ಟ್ ಸಿನಿಮಾ ಆಗಲಿ, ಈ‌ ಸಿನಿಮಾ ಆಗಲಿ.. ಮನೆಯಿಂದ ಅವರೇ ಅಡುಗೆ ಮಾಡಿಸಿ ತಂದಿದ್ದರು. ಕ್ಯಾರವ್ಯಾನ್ ಗೆ ಹೋಗದೆ ಅಲ್ಲೇ ಚೇರ್ ಹಾಕಿ ಕೂರ್ತಿದ್ವಿ. ಎಲ್ಲರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಡೈರೆಕ್ಟರ್ ಹೇಳಿದಂತೆ ಸ್ಪೇಸ್ ಬಗ್ಗೆ ನಾ ಯಾಕೆ ಮಾತಾಡಲಿ ಎಂದು ಪ್ರಶ್ನಿಸಿದರು.

ನಟಿ ರಕ್ಷಿತಾ ಅವರು ಸಾಲಿಗೆ ಹೊಸ ನಟಿ ಆರಾಧಾನಾ ನಿಲ್ಲುತ್ತಾರೆ. ಅವರು ಒನ್ ಟೇಕ್ ಆರ್ಟಿಸ್ಟ್. ಇನ್ನು ಮಾಲಾಶ್ರೀ ಅವರ ಬಗ್ಗೆ ನಾವು ಮಾತಾಡೋಕೆ ಆಗುತ್ತಾ ಎಂದು ಹೇಳಿದರು.

ಅಶ್ಲೀಲತೆ ಇಲ್ಲದ ಸಿನಿಮಾ

ಈ ಸಿನಿಮಾದಲ್ಲಿ ಫಸ್ಟ್‌ನಿಂದ ಲಾಸ್ಟ್ ವರೆಗೆ ಆಶ್ಲೀಲತೆ ಇಲ್ಲ . ಸಭ್ಯವಾದ ಸಂಭಾಷಣೆ ಇದೆ. ಅದ್ಭುತವಾದ ನಿರ್ಮಾಪಕರಿದ್ದಾರೆ. ಸೆಟ್ ಗೆ ಬರ್ತಾ ಇರಲಿಲ್ಲ.. ಎಲ್ಲವನ್ನೂ ಒದಗಿಸಿದ್ದಾರೆ. ಇದು ಇಂಡಿವಿಶ್ಯುವಲ್ ಶೋ ಅಲ್ಲ. ಪ್ಲೇಟ್ ತೊಳೆಯೋನಿಂದ ಹಿಡಿದು ಎಲ್ಲರಿಗೂ ಈ ಸಿನಿಮಾ ಸೇರಲಿದೆ. ನಟ ಬಿರಾದಾರ್, ಪದ್ಮಾ ವಸಂತಿ ಮೇಡಂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿರೋದು ದಾರಿ.. ಮುಂದಿರೋದು ಜವಾಬ್ದಾರಿ.. ಇದು ಸಿನಿಮಾ ಲೈನ್ ಎಂದು ಹೇಳುವ ಮೂಲಕ ಕಾಟೇರ ಬಗ್ಗೆ ದರ್ಶನ್ ಸುಳಿವು ನೀಡಿದರು.

ಮಾಲಶ್ರೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ʻʻಇಂಥ ಒಳ್ಳೆಯ ತಂಡದ ಜತೆ ಮಗಳು ಕೆಲಸ ಮಾಡಿರುವುದು ಖುಷಿಯಾಗುತ್ತಿದೆ. ಈ ಸಿನಿಮಾ ಯಶಸ್ಸು ಕಾಣಲಿ.ʼʼ ಅಂದರು. ಅವಿನಾಶ್‌ ಮಾತನಾಡಿ ʻʻರಾಕ್‌ಲೈನ್‌ ಬ್ಯಾನರ್‌ ಅಲ್ಲಿ ತುಂಬಾ ವರ್ಷಗಳಿಂದ ಸಿನಿಮಾ ಮಾಡಿಕೊಂಡು ಬಂದಿದ್ದೆ. ತರುಣ್‌ ಜತೆ ನನ್ನದು 3ನೇ ಸಿನಿಮಾ ಇದು. ದರ್ಶನ್‌ ಜತೆನೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೆ. ಚಿತ್ರ ಸೊಗಸಾಗಿ ಮೂಡಿ ಬಂದಿದೆʼʼಎಂದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ರಾಕಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. 2022 ವರಮಹಾಲಕ್ಷ್ಮಿ ಹಬ್ಬದಂದು ಚಿತ್ರಕ್ಕೆ ರಾಧನಾ ರಾಮ್ ನಾಯಕಿಯಾಗಿ ಆಯ್ಕೆಯಾದರು.

ಇದನ್ನೂ ಓದಿ: Darshan Thoogudeepa: ಕಿಡ್ನಿ ಫೇಲ್ಯೂರ್‌ ಆದ ಅಭಿಮಾನಿಗೆ ನೆರವಾದ ʻಯಜಮಾನʼ ದರ್ಶನ್‌! ವಿಡಿಯೊ ವೈರಲ್‌!

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸುಧಾಕರ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ‘ಕಾಟೇರ’ ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.

Exit mobile version