Site icon Vistara News

Kangana Ranaut: ಇನ್ನೂ ಗದ್ದೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಕಂಗನಾ ತಾಯಿ! ನಾನೇ ಕಾರಣ ಎಂದ ಕಂಗನಾ

#image_title

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಸುದ್ದಿಯಲ್ಲಿರುವವರು. ಇದೀಗ ಅವರು ತಮ್ಮ ತಾಯಿಯ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅನೇಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಹಲವಾರು ಸಿನಿಮಾಗಳಲ್ಲಿ ನಟಿಸಿ, ಪ್ರಶಸ್ತಿಗಳನ್ನು ಬಾಚಿಕೊಂಡಿರುವ ನಟಿಯ ತಾಯಿ ಈಗಲೂ ಗದ್ದೆಯಲ್ಲಿ ಕೆಲಸ ಮಾಡುತ್ತಾರಂತೆ. ಅದಕ್ಕೆ ಕಾರಣ ತಾನೇ ಕಾರಣ ಎಂದು ನಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actress Kangana Ranaut: ಅಖ್ತರ್ ಮಾತನ್ನು ಮೆಚ್ಚಿದ ಕಂಗನಾ; ಅವಳ ಮೆಚ್ಚುಗೆ ಮುಖ್ಯವಲ್ಲ ಎಂದ ಜಾವೇದ್
ಕಂಗನಾ ಭಾನುವಾರದಂದು ತಮ್ಮ ತಾಯಿ ಗದ್ದೆಯೊಳಗೆ ಕೆಲಸ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದು, “ಇದು ನನ್ನ ತಾಯಿ. ಇಂದಿಗೂ ಪ್ರತಿದಿನ 7-8 ತಾಸು ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ಯಾರಾದರೂ ಮನೆಗೆ ಬಂದು ಕಂಗನಾ ಅವರ ತಾಯಿಯನ್ನು ಭೇಟಿ ಮಾಡಬೇಕು ಎಂದು ಹೇಳಿದರೆ ಕೈ ತೊಳೆದುಕೊಂಡು, ಟೀ ತಂದುಕೊಟ್ಟು ನಾನೇ ಅವರ ತಾಯಿ ಎಂದು ಹೇಳುತ್ತಾರೆ. ಮನೆಗೆ ಬಂದವರಿಗೆ ನೀವೇ ಟೀ, ಕಾಫಿ ಮಾಡಿಕೊಡುವ ಅವಶ್ಯಕತೆ ಏನಿದೆ ಎಂದು ನಾನು ಕೇಳಿದ್ದಕ್ಕೆ, ‘ಅವರೆಲ್ಲರೂ ನಿನ್ನನ್ನು ಪ್ರೀತಿಸುವವರು. ಅವರ ಸೇವೆ ಮಾಡುವುದು ನಮ್ಮ ಸೌಭಾಗ್ಯ’ ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ.

ಕಂಗನಾ ಹಾಗೂ ಅವರ ತಾಯಿ


ಹಾಗೆಯೇ ಮಾತು ಮುಂದುವರಿಸಿರುವ ನಟಿ, “ನಾನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಕುಟುಂಬದಿಂದ ಬಂದವಳು. ಅಮ್ಮ 25 ವರ್ಷಗಳ ಕಾಲ ಸಂಸ್ಕೃತ ಶಿಕ್ಷಕಿಯಾಗಿದ್ದವರು. ನನ್ನ ವರ್ತನೆ ಏಕೆ ಹೀಗಿದೆ, ನಾನೇಕೆ ಎಲ್ಲರಂತೆ ಕನಿಷ್ಠಳಾಗಿ ವರ್ತಿಸುವುದಿಲ್ಲ, ಮದುವೆಗಳಲ್ಲಿ ಹೋಗಿ ಕುಣಿಯುವುದಿಲ್ಲ ಎನ್ನುವುದಕ್ಕೆ ಇದೇ ಕಾರಣ. ನಾನು ನನಗಾಗಿ ಏನನ್ನೂ ಮಾಡಿಕೊಂಡಿಲ್ಲ. ಬರುವ ಎಲ್ಲ ಹಣವನ್ನು ಸಿನಿಮಾಕ್ಕೆ ಹಾಕಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

“ಮದುವೆಗಳಲ್ಲಿ ಕುಣಿಯುವವರಿಗೆ, ಹಣದ ಆಸೆಗೆ ಐಟಂ ಹಾಡು ಮಾಡುವ ಭಿಖಾರಿ ಚಲನಚಿತ್ರ ಮಾಫಿಯಾಗೆ ನಿಜವಾದ ಪಾತ್ರ ಭೌತಿಕ ಸಂಪತ್ತನ್ನು ಮೀರಿದೆ ಎಂದು ಎಂದಿಗೂ ತಿಳಿದಿರುವುದಿಲ್ಲ. ಅದಕ್ಕಾಗಿಯೇ ನಾನು ಅವರನ್ನು ಎಂದಿಗೂ ಗೌರವಿಸುವುದಿಲ್ಲ.” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Actress Kangana Ranaut : ಕಾಂತಾರಾ ಫಿಲ್ಮ್ ದಿ ಬೆಸ್ಟ್ ಸಿನಿಮಾ, ರಿಷಭ್ ಅವರೇ ದಿ ಬೆಸ್ಟ್ ಆ್ಯಕ್ಟರ್ ಎಂದ ಕಂಗನಾ!
“ಸಿನಿಮಾ ಮಾಫಿಯಾ ಯಾವಾಗಲೂ ನನ್ನ ವರ್ತನೆಯನ್ನು ದುರಹಂಕಾರ ಎಂದು ಕರೆಯುತ್ತದೆ. ಆದರೆ ನನ್ನ ತಾಯಿ ನನ್ನನ್ನು ರೊಟ್ಟಿ ಮತ್ತು ಉಪ್ಪು ಕೊಟ್ಟು ಬೆಳೆಸಿದ್ದಾರೆ. ಧರ್ಮಕ್ಕೆ ಹೊಂದದ ಏನನ್ನೂ ಮಾಡಬೇಡ ಎಂದು ಹೇಳಿಕೊಟ್ಟಿದ್ದಾರೆ. ಇದು ಅಹಂಕಾರವೋ ಅಥವಾ ಸಮಗ್ರತೆಯೋ? ನಾನು ಬೇರೆ ನಟಿಯರಂತೆ ಗಾಸಿಪ್ ಮಾಡುವುದಿಲ್ಲ, ನಟರ ಕೋಣೆಗೆ ಹೋಗುವುದಿಲ್ಲ, ಮದುವೆಗಳಲ್ಲಿ ಕುಣಿಯುವುದಿಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಹುಚ್ಚಿ ಎಂದು ಕರೆದಿದ್ದಾರೆ. ಯಾರನ್ನಾದರೂ ಗುರಿಯಾಗಿಸಲು, ಕಿರುಕುಳ ನೀಡಲು ಅಥವಾ ಪ್ರತ್ಯೇಕಿಸಲು ಇದೂ ಒಂದು ಕಾರಣವೇ? ನೀವು ನನಗೆ ಏನನ್ನೂ ಮಾಡಲಾಗುವುದಿಲ್ಲ. ಏಕೆಂದರೆ ನಾನು ಇಲ್ಲಿನ ಪಿಶಾಚಿಗಳನ್ನು ಓಡಿಸಲು ಬಂದಿರುವವಳು” ಎಂದು ನಟಿ ಸಿನಿ ಕ್ಷೇತ್ರದ ಬಗ್ಗೆ ಹೇಳಿದ್ದಾರೆ.

Exit mobile version