Site icon Vistara News

Kangana Ranaut : ಪ್ರಿಯಾಂಕಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್‌ ಜೋಹರ್ ಕಾರಣ ಎಂದ ಕಂಗನಾ!

#image_title

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಸದಾ ಸೋಶಿಯಲ್‌ ಮೀಡಿಯಾ ಮೂಲಕ ಸುದ್ದಿ ಮಾಡುವವರು. ಇದೀಗ ನಟಿ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್‌ ಜೋಹರ್‌ ಅವರ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್‌ ಅವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Kangana Ranaut: ಚಿತ್ರರಂಗದಲ್ಲೇ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಬಳಸುತ್ತಿರುವ ನಟಿ ಕಂಗನಾ ರಣಾವತ್!
ಟ್ವಿಟರ್‌ನಲ್ಲಿ ಸಾಲು ಸಾಲು ಟ್ವೀಟ್‌ ಮಾಡಿರುವ ನಟಿ, “ಪ್ರಿಯಾಂಕಾ ವಿರುದ್ಧ ಹಲವರು ಗ್ಯಾಂಗ್‌ ಮಾಡಿಕೊಂಡರು. ಅವರ ಸಿನಿಮಾ ಕ್ಷೇತ್ರವನ್ನು ಬಿಟ್ಟು ಹೋಗುವಂತೆ ಹಿಂದೆ ಬಿದ್ದರು. ಸ್ವಯಂ ಪ್ರಯತ್ನದಿಂದ ಮೇಲೆ ಬಂದಿದ್ದ ಹೆಣ್ಣೊಬ್ಬರು ಭಾರತವನ್ನೇ ಬಿಟ್ಟು ಹೋಗುವಂತೆ ಮಾಡಿದರು. ಕರಣ್‌ ಜೋಹರ್‌ ಅವರು ಆಕೆಯನ್ನು ಬ್ಯಾನ್‌ ಮಾಡಿದ ವಿಚಾರ ಎಲ್ಲರಿಗೂ ತಿಳಿದಿದೆ” ಎಂದು ಬರೆದುಕೊಂಡಿದ್ದಾರೆ.


“ಶಾರುಖ್‌ ಖಾನ್‌ ಅವರೊಂದಿಗೆ ಪ್ರಿಯಾಂಕಾ ಸ್ನೇಹದಿಂದ ಇದ್ದಿದ್ದು ಕರಣ್‌ಗೆ ಆಗಲಿಲ್ಲ. ಹಾಗಾಗಿ ಅವರ ವಿರುದ್ಧ ಎಲ್ಲರನ್ನೂ ಎತ್ತಿಕಟ್ಟಿದರು. ಅದೇ ಕಾರಣಕ್ಕೆ ಆಕೆ ಭಾರತವನ್ನೇ ತೊರೆಯಬೇಕಾಯಿತು. ಈ ಅಸಹ್ಯಕರ, ಅಸೂಯೆ, ನೀಚ ಮತ್ತು ವಿಷಕಾರಿ ವ್ಯಕ್ತಿಗೆ ಚಲನಚಿತ್ರೋದ್ಯಮದ ಸಂಸ್ಕೃತಿ ಮತ್ತು ಪರಿಸರವನ್ನು ಹಾಳು ಮಾಡಿದ್ದಾರೆ. ಅವರ ಗ್ಯಾಂಗ್‌ ಮೇಲೆ ದಾಳಿ ನಡೆಸಿ ಬಂಧಿಸಬೇಕು” ಎಂದು ನಟಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Kangana Ranaut: ಇನ್ನೂ ಗದ್ದೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಕಂಗನಾ ತಾಯಿ! ನಾನೇ ಕಾರಣ ಎಂದ ಕಂಗನಾ
ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ತಾವು ಬಾಲಿವುಡ್‌ ತೊರೆಯುವುದಕ್ಕೆ ಕಾರಣ ಹೇಳಿಕೊಂಡಿದ್ದರು. “ಬಾಲಿವುಡ್‌ನಲ್ಲಿ ನನ್ನ ಮೂಲೆಗೆ ಹಾಕಲಾಯಿತು. ರಾಜಕೀಯ ಮಾಡಲಾಯಿತು. ಅದರಿಂದ ಬೇಸತ್ತು ಹೊರಬಂದೆ” ಎಂದು ಅವರು ಹೇಳಿದ್ದರು. ನಟಿ 2015ರಲ್ಲಿ ಬಾಲಿವುಡ್‌ ತೊರೆದು ಹಾಲಿವುಡ್‌ ಸೇರಿಕೊಂಡಿದ್ದಾರೆ.

Exit mobile version