Site icon Vistara News

Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!

Kannada New Movie

ಬೆಂಗಳೂರು; ರಾಣಾ ಸಿನಿಮಾ ಬಳಿಕ ಶ್ರೇಯಸ್ ಕೆ ಮಂಜು ಹೊಸ ಸಿನಿಮಾಕ್ಕೆ (Kannada New Movie) ದಿಲ್ ದಾರ್ ಎಂದು ಹೊಸ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಮಾರ್ಚ್‌ 31ರಂದು ಬೆಂಗಳೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗೆ ಕ್ಲ್ಯಾಪ್ ಮಾಡಿ ಟೈಟಲ್ ಅನಾವರಣ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮೆರಾಗೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಟೈಟಲ್ ರಿವೀಲ್ ಮಾಡಿ ಮಾತಾನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ʻʻಸಿನಿಮಾ ಮಾಡಬೇಕು ಅಂದರೆ ದಿಲ್ ಬೇಕು. ನಟ ಶ್ರೇಯಸ್ ಮಂಜು ಹಾಗೂ ಇಡೀ ಚಿತ್ರತಂಡಕ್ಕೆ ಶುಭಾಶಯʼʼ ತಿಳಿಸಿದರು.

ದಿಲ್ ದಾರ್ ನಿರ್ದೇಶಕ ಮಧು ಗೌಡ ಮಾತನಾಡಿ, ʻʻಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ರೆಡಿ ಮಾಡಿದಾಗ ದಿಲ್ ದಾರ್ ಟೈಟಲ್ ಫಿಕ್ಸ್ ಮಾಡಿದಾಗ. ಯಾರು ಇದ್ದಾರೆ ದಿಲ್ ದಾರ್ ಎಂದು ಯೋಚಿಸಿದಾಗ ಸಿಕ್ಕಿದ್ದ ಶ್ರೇಯಸ್ ಮಂಜು ನೆನಪಾದರುʼʼ ಎಂದರು.

ಇದನ್ನೂ ಓದಿ: Kannada New Movie : ಶ್ರೇಯಸ್‌ ಕೆ ಮಂಜು ಹೊಸ ಸಿನಿಮಾ ಅನೌನ್ಸ್; ಪಡ್ಡೆಹುಲಿಗೆ ಪ್ರಿಯಾಂಕಾ ಕುಮಾರ್‌ ಜೋಡಿ

ಏಷ್ಯಾನೆಟ್ ಮೂವೀ ಬ್ಯಾನರ್ ನಡಿ ಆರ್ ಸಂತೋಷ್ ಕುಮಾರ್(ಎಸ್ ವಿಟಿ) ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

Exit mobile version