Site icon Vistara News

Kannada New Movie: ʻಬಹದ್ದೂರ್ʼ ಚೇತನ್ ಸಿನಿಮಾಗೆ ʻಗಟ್ಟಿಮೇಳ’ದ ನಾಯಕ!

RAKKSH RAAM Chetan

ಬೆಂಗಳೂರು: ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳ ನಿರ್ದೇಶಕ ಚೇತನ್ ಕುಮಾರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆಗಸ್ಟ್‌ 25ರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ರಿವೀಲ್ ಮಾಡಿದೆ. ʻಬರ್ಮʼ (BURMA Kannada New Movie) ಎಂಬ ವಿಭಿನ್ನ ಬಗೆಯ ಟೈಟಲ್ ಇರುವ ಸಿನಿಮಾಗೆ ಗಟ್ಟಿಮೇಳ ಧಾರಾವಾಹಿಯ ʻರಕ್ಷ್ ರಾಮ್ʼ (Rakksh Raam) ನಾಯಕ. ಸಂಸ್ಕೃತದಲ್ಲಿ ಬರ್ಮ ಅಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ.

ʻಬರ್ಮʼ ಆ್ಯಕ್ಷನ್ ಮತ್ತು ಎಂಟರ್​ಟೈನ್​ನ್ಮೆಂಟ್​ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ವಿ. ಹರಿಕೃಷ್ಣ ಈ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಬಹದ್ದೂರ್, ಭರ್ಜರಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ ಹಾಗೂ ಚೇತನ್ (CHETHAN KUMAR P) ಜೋಡಿ ಮೂರನೇ ಬಾರಿಗೆ ಒಂದಾಗುತ್ತಿರುವುದು ಸಿನಿರಸಿಕರಇಗೆ ನಿರೀಕ್ಷೆ ಹೆಚ್ಚಿಸಿದೆ.

ಬರ್ಮ ಸಿನಿಮಾ ಅನೌನ್ಸ್ ದಿನವೇ ಆಡಿಯೊ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ರಕ್ಷ್ ರಾಮ್ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದು, ಬರ್ಮ ಮೂಲಕ ಪ್ಯಾನ್ ಇಂಡಿಯಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಪ್ರತಿ ಸಿನಿಮಾದಲ್ಲೊಂದು ಹೊಸತನ ಹೊತ್ತು ತರುತ್ತಾರೆ. ಅದೇ ನಿರೀಕ್ಷೆ ಬರ್ಮ ಸಿನಿಮಾ ಮೇಲೆಯೂ ಇದೆ.

ಸೆಪ್ಟೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್ನುಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಒಂದೊಂದಾಗಿ ಚಿತ್ರತಂಡ ನೀಡಲಿದೆ.

ಇದನ್ನೂ ಓದಿ: Kannada Serials TRP: ʻಗಟ್ಟಿಮೇಳʼ ಹಿಂದಿಕ್ಕಿದ ʻಸೀತಾ ರಾಮʼ; ಹೊಸ ಧಾರಾವಾಹಿಗಳದ್ದೇ ಕಾರುಬಾರು!

ರಕ್ಷ್ ರಾಮ್ ಯಾರು?

ʻಗಟ್ಟಿಮೇಳ’ ಸೀರಿಯಲ್‌ನಲ್ಲಿ ರಕ್ಷ್ ರಾಮ್‌ ಅವರು ವೇದಾಂತ್ ವಸಿಷ್ಠ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಪುಟ್ಟಗೌರಿ ಮದುವೆ’ ಸೀರಿಯಲ್ ಮೂಲಕ ಅವರು ಸಾಕಷ್ಟು ಖ್ಯಾತಿ ಪಡೆದಿದ್ದರು. ಕೆಲ ದಿನಗಳ ಕಾಲ ಧಾರಾವಾಹಿಯಿಂದ ಬ್ರೇಕ್ ಪಡೆದುಕೊಂಡಿದ್ದ ರಕ್ಷ್ ಗಟ್ಟಿಮೇಳ ಸೀರಿಯಲ್ ತಂಡ ಸೇರಿಕೊಂಡಿದ್ದಾರೆ.ಈ ಧಾರಾವಾಹಿಯಲ್ಲಿ ರಕ್ಷ್‌ ಮತ್ತು ನಿಶಾ ರವಿಕೃಷ್ಣನ್ ಅವರ ಜೋಡಿ ನೋಡುಗರ ಮನಸ್ಸು ಗೆದ್ದಿದೆ.

ಲಾಕ್‌ಡೌನ್ ಘೋಷಣೆಯಾಗುವ ಮುನ್ನ ರಕ್ಷ್ ರಾಮ್‌ ಅವರ ಅಭಿನಯದ ‘ನರಗುಂದ ಬಂಡಾಯ’ ಸಿನಿಮಾ ರಿಲೀಸ್ ಆಗಿತ್ತು. ರಕ್ಷ್ ಕೈಯಲ್ಲಿ ಇನ್ನು ಕೆಲ ಸಿನಿಮಾಗಳಿವೆ.

Exit mobile version