Site icon Vistara News

Keerthy Suresh: ಮದ್ವೆ ಬಗ್ಗೆ ನಾನೇ ಅಪ್‌ಡೇಟ್ ಮಾಡ್ತಿನಿ, ಅಲ್ಲಿವರೆಗೆ ಸುಮ್ನಿರಿ; ಪತ್ರಕರ್ತರ ಬಾಯ್ಮುಚ್ಚಿಸಿದ ‘ಮಹಾನಟಿ’

Keerthy Suresh wedding

ಬೆಂಗಳೂರು; ನಟಿ ಕೀರ್ತಿ ಸುರೇಶ್‌ (Keerthy Suresh) ದುಬೈ ಮೂಲದ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ಮ್ಯಾನ್ ಜತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ವೈರಲ್‌ ಆಗಿತ್ತು. ಆದರೆ ಈ ಸುದ್ದಿ ಕುರಿತು ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದರು. ಮುಂದಿನ ಚಿತ್ರ ʻಮಾಮನ್ನನ್ʼ (Maamannan) ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಸಹ ಈ ವಿಷಯ ಪ್ರಸ್ತಾಪವಾಗಿದೆ. ಪತ್ರಕರ್ತರೊಬ್ಬರು ನಟಿಯ ಮದುವೆ ವಿಚಾರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಇದೀಗ ಕೀರ್ತಿ ಸುರೇಶ್‌ ʻʻನನ್ನ ಮದುವೆಯ ಬಗೆಗಿನ ಮಾಹಿತಿಯನ್ನು ತಾನೇ ಹಂಚಿಕೊಳ್ಳಲಿದ್ದು, ಅಲ್ಲಿಯವರೆಗೂ ಸುಖಾಸುಮ್ಮನೆ ಸುದ್ದಿಗಳನ್ನು ಮಾಡಬಾರದಂತೆʼʼ ಮನವಿ ಮಾಡಿದ್ದಾರೆ.

ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ನಾಯಕಿಯಾಗಿ ಕೀರ್ತಿ ಸುರೇಶ್ ಸಿನಿ ರಂಗಕ್ಕೆ ಪರಿಚಯವಾದರು. ತೆಲುಗಿನಲ್ಲಿ ನೇನು ಲೋಕಲ್ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಪ್ರಸ್ತುತ, ಭೋಲಾ ಶಂಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ‌ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಧ್ಯೆ ನಟಿಯ ಮಸುವೆ ಪ್ರಸ್ತಾಪಗಳು ಬರುತ್ತಿವೆ.

ಇದೀಗ ಕೀರ್ತಿ ಸುರೇಶ್‌ ʻʻನನ್ನ ಮದುವೆಯ ಬಗೆಗಿನ ಮಾಹಿತಿಯನ್ನು ತಾನೇ ಹಂಚಿಕೊಳ್ಳಲಿದ್ದು, ಅಲ್ಲಿಯವರೆಗೂ ಸುಖಾಸುಮ್ಮನೆ ಸುದ್ದಿಗಳನ್ನು ಮಾಡಬಾರದಂತೆʼʼ ಮನವಿ ಮಾಡಿದ್ದಾರೆ. ಈಗ ತಾನೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಘು ತಾತ ಸಿನಿಮಾದ ಚಿತ್ರೀಕರಣ ಕೀರ್ತಿ ಸುರೇಶ್ ಮುಗಿಸಿದ್ದಾರೆ.

ಇದನ್ನೂ ಓದಿ: Keerthy Suresh: ಹೊಂಬಾಳೆ ಫಿಲ್ಮ್ಸ್‌ ಮೊದಲ ತಮಿಳು ಚಿತ್ರದ ಶೂಟಿಂಗ್‌ ಮುಕ್ತಾಯ!

ಈ ವರ್ಷ ನಾನಿ ಜತೆ ದಸರಾ ಚಿತ್ರದಲ್ಲಿ ನಟಿಸಿ ಭರ್ಜರಿ ಯಶಸ್ಸು ಗಳಿಸಿರುವ ಕೀರ್ತಿ ಸುರೇಶ್ ಕೈನಲ್ಲಿ ಸದ್ಯ ಹಲವಾರು ಚಿತ್ರಗಳಿದ್ದು, ಸೈರನ್, ರಿವಾಲ್ವರ್ ರೈತ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.

Exit mobile version