Site icon Vistara News

Kichcha Sudeep: ಕಿಚ್ಚ ಸುದೀಪ್, ಎಮ್‌ಎನ್‌ ಕುಮಾರ್‌ ಸಂಧಾನ ಸಭೆಗೆ ದಿನಾಂಕ ಫಿಕ್ಸ್‌!

kichcha sudeepa mn kumar Shivarajkumar Ravichandran

ಬೆಂಗಳೂರು: ಕಿಚ್ಚ ಸುದೀಪ್‌ (Kichcha Sudeep) ಹಾಗೂ ನಿರ್ಮಾಪಕ ಎಮ್‌ ಎನ್‌ ಕುಮಾರ್‌ ಜಟಾಪಟಿ ದಿನೇದಿನೇ ತಾರಕಕ್ಕೇರುತ್ತಿದೆ. ಈಗಾಗಲೇ ಸೂರಪ್ಪ ಬಾಬು ಅವರು ಚಂದ್ರಚೂಡ್‌ ಅವರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ತಮ್ಮ ಹಾಗೂ ಸುದೀಪ್‌ ಮಧ್ಯೆ ಯಾರೋ ಹುಳಿ ಹಿಂಡುತ್ತಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಇತ್ತ ಸುದೀಪ್‌ ಹಾಗೂ ಎಮ್‌ ಎನ್‌ ಕುಮಾರ್‌ ಸಂಧಾನ ಸಭೆ ಅಂತ್ಯ ಕಾಣುತ್ತಿಲ್ಲ. ರವಿಚಂದ್ರನ್ (Ravichandran) ಅವರು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಮತ್ತು ಶಿವರಾಜ್ ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಸಂದಾನ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ಲೈ 23ರಂದು ಎರಡನೇ ರೌಂಡ್‌ ಸಭೆ ಸೇರಿ ಚರ್ಚೆ ಆಗಬೇಕಿತ್ತು. ಮೂಲಗಳ ಮಾಹಿತಿಯಂತೆ ಬುಧವಾರ (ಜು.26) ಅಥವಾ ಗುರುವಾರ(ಜು.27)ರಂದು ಸಭೆ ನಡೆಯುವ ಸಾಧ್ಯತೆ ಇದೆ. ಸ್ವತಃ ರವಿಚಂದ್ರನ್ ಅವರೇ ಸುದೀಪ್ ಮತ್ತು ಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದು ಚಿತ್ರರಂಗದ ಸಮಾನಮನಸ್ಕರು ಸೇರಿ ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಲಿದ್ದಾರಂತೆ. ರವಿಚಂದ್ರನ್, ಶಿವಣ್ಣ, ರಾಕ್‌ಲೈನ್ ವೆಂಕಟೇಶ್, ಭಾ ಮ. ಹರೀಶ್, ಉಮೇಶ್ ಬಣಕಾರ್ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಸುದೀಪ್ ಹಾಗೂ ಎಮ್‌ಎನ್‌ ಕುಮಾರ್ ಜತೆ ರವಿಚಂದ್ರನ್ ಮಾತನಾಡಿ ಆಗಿದೆ. ಇಬ್ಬರೂ ರವಿಚಂದ್ರನ್ ಹಾಗೂ ಶಿವಣ್ಣ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬುಧವಾರ ಎಲ್ಲದಕ್ಕೂ ತೆರೆ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: Kichcha Sudeep: ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ರೋಷಾಗ್ನಿ; ತಾರಕಕ್ಕೇರಿದೆ  ಕಿಚ್ಚನ ಕಾಂಟ್ರವರ್ಸಿ!

ಈಗಾಗಲೇ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ರಾತ್ರಿ ಹತ್ತು ಗಂಟೆಯವರೆಗೂ ನಡೆದಿದೆ. ಸುದೀಪ್, ಕುಮಾರ್, ರಾಕ್‌ಲೈನ್ ವೆಂಕಟೇಶ್, ಭಾ. ಮಾ ಹರೀಶ್, ಉಮೇಶ್ ಬಣಕಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

Exit mobile version