Site icon Vistara News

Kannada New Movie: ʻಕಣ್ಣಲ್ಲೇ ನಟಿಸೊ ಒಂದೊಳ್ಳೇ ನಟʼಅಂದ್ರು ಪ್ರೇಕ್ಷಕರು; ʻಕ್ಷೇತ್ರಪತಿʼ ಚಿತ್ರಕ್ಕೆ ಜೈಕಾರ!

Kshetrapathi Movie

ಬೆಂಗಳೂರು: ಕೆಜಿಎಫ್‌ ಪಾತ್ರದಲ್ಲಿನ ಮೂಲಕ ಗಮನ ಸೆಳೆದಿರುವ ಅರ್ಚನಾ ಜೋಯಿಸ್‌ ಮತ್ತು ʻಗುಳ್ಟುʼ ಖ್ಯಾತೀಯ ನವೀನ್‌ ಶಂಕರ್‌ ನಟನೆಯ ʼಕ್ಷೇತ್ರಪತಿʼ(Kannada New Movie) ಸಿನಿಮಾ (Kshetrapathi ) ಆಗಸ್ಟ್‌ 18ರಂದು ತೆರೆ ಕಂಡಿದೆ. ಮೊದಲ ಪ್ರಯತ್ನದಲ್ಲೇ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ ಕ್ಷೇತ್ರಪತಿ. ಪ್ರೇಕ್ಷಕರು ಸಿನಿಮಾವನ್ನು ಹೊಗಳಿದ್ದಾರೆ. ʻಕಣ್ಣಲ್ಲೇ ನಟಿಸೊ ಒಂದೊಳ್ಳೇ ನಟʼ ಎಂದು ನವೀನ್​ ಶಂಕರ್ (naveen shankar)​ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಕರ್ನಾಟಕದಲ್ಲಿ ಕ್ರಾಂತಿ ಸೃಷ್ಟಿಸಬಲ್ಲ ಕೃಷಿಕನ ಕಥೆ..ರೈತನ ಬವಣೆ, ಭಾವನೆ, ನಮ್ಮ ಉತ್ತರ ಕರ್ನಾಟಕದ ಭಾಷೆಯಿಂದ, ಚಿತ್ರೀಕರಣ ನಡೆದ ಜಾಗಗಳಿಂದ ಎಲ್ಲಾ ಮಂದಿ ಎದಿಗೆ ನಾಟುವ ಚಿತ್ರ ಎಂದು ಒಬ್ಬರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ʻʻಇನ್ನೂ ಬಾಳ್‌ ಬರೋದೈತೀ. ಗೆಲುವು ಕಟ್ಟಿಟ್ಟ ಬುತ್ತಿ. ಕನ್ನಡಿಗರು ಬೆಂಬಲಿಸಿದರೆ ಕರ್ನಾಟಕಕ್ಕೆ ಹೆಚ್ಚು ಕೀರ್ತಿ ತಂದ್ಕೊಡ್ತಾರೆʼʼಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಸಿನಮಾ ಸಕ್ಕಾತ್ತಾಗಿದೆ. ಇಡೀ ಕರುನಾಡಲ್ಲೇ ಒಂದು ರೆವಲ್ಯೂಶನ್‌ ಆಗಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ನವೀನ್‌ ಶಂಕರ್‌ ಇಂಜಿನಿಯರ್‌ ಪಾತ್ರದಲ್ಲಿ, ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. . ರೈತಾಪಿ ಕುಟುಂಬದ ಬಸವ ಎಂಬ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 

ಚಿತ್ರದ ಪಲ್ಲಕಿ ಹಾಡು ರಿಲೀಸ್‌ ಆದ ಬಳಿಕ ಚಿತ್ರದ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿತ್ತು. ಚಿತ್ರದ ಪೋಸ್ಟರ್‌ ಕೂಡ ಚಿತ್ರದಲ್ಲಿ ಏನೋ ಹೊಸತನ ಕಾಣಿಸುತ್ತಿದೆ ಎಂದು ಸಿನಿ ರಸಿಕರು ಊಹಿಸಿದ್ದರು. ಗುಳ್ಟು ಚಿತ್ರದ ನಂತರ ಒಂದು ದೊಡ್ಡ ಬ್ರೇಕ್‌ಗಾಗಿ ಕಾಯುತ್ತಿದ್ದ ನವೀನ್‌ ಶಂಕರ್‌, ಒಂದೊಳ್ಳೆ ಕತೆಯನ್ನ ಆಯ್ದುಕೊಂಡಿದ್ದು, ಸಿನಿ ರಸಿಕರಿಗೆ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದ್ದಾರೆ.

Exit mobile version