Site icon Vistara News

‘ಮಗಳು ಜಾನಕಿ’ ಖ್ಯಾತಿಯ ಕಲಾವಿದ ಮಂಡ್ಯ ರವಿ ಇನ್ನಿಲ್ಲ; ಜಾಂಡೀಸ್​​ನಿಂದ ಹದಗೆಟ್ಟಿತ್ತು ಆರೋಗ್ಯ

Mandya Ravi died Due to Jaundice

ಬೆಂಗಳೂರು: ಕಿರುತೆರೆ ನಟ ಮಂಡ್ಯ ರವಿ ಇಂದು ನಿಧನರಾಗಿದ್ದಾರೆ. ಕಾಮಾಲೆ ರೋಗದಿಂದ ಬಳಲುತ್ತಿದ್ದ ಅವರನ್ನು ಕಳೆದ ಕೆಲವು ದಿನಗಳ ಹಿಂದೆಯೇ ಬೆಂಗಳೂರಿನ ಬಿಜಿಎಸ್​ ಗ್ಲೋಬಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಮಧ್ಯಾಹ್ನದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕಿಡ್ನಿ, ಲಿವರ್​​ಗಳೆಲ್ಲ ಕಾರ್ಯ ನಿಲ್ಲಿಸಿದ್ದವು.

ಮಂಡ್ಯ ರವಿ (ರವಿ ಪ್ರಸಾದ್​) ಅವರು ಖ್ಯಾತ ನಿರ್ದೇಶಕ ಟಿ.ಎನ್​.ಸೀತಾರಾಮ್​ ಅವರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಗಳು ಜಾನಕಿ’ ಯಲ್ಲಿ ಜಾನಕಿಯ ತಂದೆ ಪಾತ್ರ ನಿರ್ವಹಿಸಿದ್ದರು. ಅದರಲ್ಲಿ ಅವರೊಬ್ಬ ರಾಜಕಾರಣಿಯಾಗಿ ನಟಿಸಿದ್ದರು. ವಿಲನ್​ ಶೇಡ್​ ಇರುವ ಆ ರೋಲ್​ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ‘ಮುಕ್ತ’ ಮತ್ತು ‘ಮುಕ್ತ ಮುಕ್ತ’ ದಲ್ಲೂ ನಟಿಸಿದ್ದರು. ಹಾಗೇ, ಕಲರ್ಸ್​​ನ ಇನ್ನೊಂದು ಧಾರಾವಾಹಿ ‘ನಮ್ಮನೆ ಯುವರಾಣಿ’ಯಲ್ಲೂ ರವಿ ಪ್ರಸಾದ್ ಅಭಿನಯಿಸಿದ್ದಾರೆ. ಈ ಸೀರಿಯಲ್​ನಲ್ಲಿ ಅಭಿನಯ ಮಾಡುತ್ತಿದ್ದಾಗಲೇ ಅವರ ಆರೋಗ್ಯ ಕೈಕೊಟ್ಟಿತ್ತು.

ರವಿ ಪ್ರಸಾದ್ ಮೊದಲು ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ಹೋದಾಗ ಕಾಣಿಸಿಕೊಂಡಿದ್ದು ಕಿಡ್ನಿ ಸಮಸ್ಯೆಯಾಗಿತ್ತು. ಹಲವು ಬಾರಿ ಡಯಾಲಿಸಿಸ್​ಗೆ ಕೂಡ ಒಳಗಾಗಿದ್ದರು. ಇತ್ತೀಚೆಗೆ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Mandya Ravi | ಕಿರುತೆರೆ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಗಂಭೀರ

Exit mobile version