Site icon Vistara News

Meghana Raj: ಧ್ರುವ ನನ್ನನ್ನು ಸೇರಿ ಯಾರನ್ನೂ ಯಾರೂ ನೋಡಿಕೊಳ್ಳುವ ಅವಶ್ಯತೆ ಇಲ್ಲ; ಮೇಘನಾ ರಾಜ್‌!

Meghana Raj Dhruva Sarja

ಬೆಂಗಳೂರು: ಮೇಘನಾ ರಾಜ್‌ (Meghana Raj) ಅಭಿನಯದ ‘ತತ್ಸಮ ತದ್ಭವ’ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದೆ. ಬಹಳ ದಿನಗಳ ನಂತರ ಮತ್ತೆ ಮೇಘನಾ ಅವರನ್ನು ತೆರೆ ಮೇಲೆ ನೋಡಲು ಅವರ ಫ್ಯಾನ್ಸ್‌ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿನಿರಸಿಕರು ಟ್ರೈಲರ್‌ (meghana raj tatsama tadbhava) ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ಸಂದರ್ಶನವೊಂದರಲ್ಲಿ ಧ್ರುವ ಸರ್ಜಾ (Dhruva Sarja) ಅವರೇ, ಮೇಘನಾ ರಾಜ್‌ ಅವರನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿರುವ ಮೇಘನಾ ರಾಜ್‌, ʻʻಯಾರನ್ನೂ ಯಾರೂ ನೋಡಿಕೊಳ್ಳುವ ಅವಶ್ಯತೆ ಇಲ್ಲʼʼ ಎಂದಿದ್ದಾರೆ.

ಮೇಘನಾ ರಾಜ್‌ ಮಾತನಾಡಿ ʻʻ’ನೋಡಿಕೊಳ್ಳುತ್ತಾರೆ. ಮಾಡ್ತಾರೆ ಇದೆಲ್ಲ ಹೇಳುವುದು ತಪ್ಪು. ನಾನು ಧ್ರುವ ನೋಡಿಕೊಳ್ಳುವುದು ಅಥವಾ ಧ್ರುವ ನನ್ನನ್ನು ನೋಡಿಕೊಳ್ಳುವುದು ಆಗಲಿ ಅದು ಕೇವಲ ಹೊರಗಿನವರು ಹೇಳುವಂತ ಮಾತು. ನಾವು ದೊಡ್ಡವರಾಗಿದ್ದೇವೆ. ವೃತ್ತಿಯಲ್ಲಿ ತೊಡಗಿಕೊಂಡಿದ್ದೇವೆ. ಹೀಗಾಗಿ ನೋಡಿಕೊಳ್ಳುವುದು ಎನ್ನುವ ಪದವನ್ನು ಬಳಸಬಾರದು. ಧ್ರುವ ನನಗೆ ಸಹೋದರೆ ಕೆಲವೊಮ್ಮೆ ಧ್ರುವ ಜತೆ ಏನಾದರೂ ಹಂಚಿಕೊಳ್ಳಬೇಕು ಅನಿಸುತ್ತದೆ. ಅವರಿಗೆ ಕಾಲ್‌ ಮಾಡುತ್ತೇನೆ. ಧ್ರುವಗೆ ಏನೋ ಹೇಳಬೇಕು ಅನಿಸುತ್ತದೆ ಆಗ ಆತ ನನಗೆ ಕರೆ ಮಾಡುತ್ತಾನೆ. ನಿಜ ಹೇಳಬೇಕು ಅಂದರೆ ಮೊದಲಿಗಿಂತ ನಾವು ತುಂಬಾ ಕ್ಲೋಸ್ ಆಗಿದ್ದೀವಿ ಅದಕ್ಕೆ ಈಗ ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆ ಕಾರಣ. ನನ್ನ ಜೀವನದ ಬಿಗ್ ಸಪೋರ್ಟರ್ ಧ್ರುವ ಅಂತ ಹೇಳಬಹುದು’ ಎಂದು ಮೇಘನಾ ರಾಜ್ ಮಾತನಾಡಿದ್ದಾರೆ.

”ನಾವೆಲ್ಲರೂ ದೊಡ್ಡವರು, ನಾನು ಧ್ರುವ ಸರ್ಜಾನನ್ನಾಗಲೀ, ಧ್ರುವ ನನ್ನನ್ನಾಗಲೀ ನೋಡಿಕೊಳ್ಳುವ ಅವಶ್ಯಕತೆಯಿಲ್ಲ. ಇಬ್ಬರಿಗೂ ಕೆಲಸ ಇದೆ, ಯಾರೂ ಯಾರನ್ನೂ ನೋಡಿಕೊಳ್ಳುವ ಅವಶ್ಯತೆ ಇಲ್ಲ. ಮೊದಲು ಹೇಗಿದ್ದೆವೋ ಈಗಲೂ ಅದೇ ರೀತಿ ಇದ್ದೇವೆ. ಧ್ರುವ ನನಗೆ ಬ್ಯಾಕ್‌ ಬೋನ್‌ ಇದ್ದಂತೆ, ಕಾಲ್‌ ಮಾಡಿದರೆ ಮಕ್ಕಳ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಶಿಷ್ಯ ಸ್ಕೂಲ್‌ಗೆ ಹೋಗುತ್ತಿದ್ದಾನಾ ಎಂದು ಧ್ರುವ ರಾಯನ್‌ ಬಗ್ಗೆ ಕೇಳುತ್ತಾರೆ, ನಿನ್ನ ಮಗಳು ರಾತ್ರಿ ಸುಮ್ಮನೆ ಮಲಗುತ್ತಾಳಾ ಎಂದು ನಾನು ಕೇಳುತ್ತೇನೆ. ಇದನ್ನು ಹೊರತುಪಡಿಸಿ ಏನಾದರೂ ಫನ್ನಿ ಮಾತುಕತೆ ಇರುತ್ತದೆ” ಎಂದು ಮೇಘನಾ, ಧ್ರುವ ಸರ್ಜಾ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Meghana Raj: ಅಂತೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಮೇಘನಾ ರಾಜ್‌!

ʼತತ್ಸಮ ತದ್ಭವʼ ಸಿನಿಮಾ

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ ಎಂದು ಚಿತ್ರತಂಡ ಈ ಮುಂಚೆಯೇ ಮಾಹಿತಿ ಹಂಚಿಕೊಂಡಿತ್ತು. , ಹಿರಿಯ ನಟಿ ಶ್ರುತಿ ಕೂಡ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಜೀವ ತುಂಬಿದ್ದಾರೆ. ಇದೊಂದು ಸಸ್ಪೆನ್ಸ್‌ ಕ್ರೈಂ ಜಾನರ್‌ನ ಸಿನಿಮಾ ಎಂದು ಸಿನಿತಂಡ ಮಾಹಿತಿ ಕೊಟ್ಟಿದೆ. ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಅಭಿನಯಿಸಿದ್ದಾರೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 15 ತೆರೆಗೆ ಬರಲಿದೆ.

Exit mobile version