Site icon Vistara News

Kannada New Movie: ಕನ್ನಡದಲ್ಲಿಯೇ ಬರೆದುಕೊಂಡು ಹಾಡಿದ ʻಬಾಹುಬಲಿʼ ಸಂಗೀತ ನಿರ್ದೇಶಕ!

mm keeravani

ಬೆಂಗಳೂರು: ಖ್ಯಾತ ಸಂಗೀತ ಸಂಯೋಜಕ-ಗಾಯಕ ಎಂಎಂ ಕೀರವಾಣಿ (MM.Keeravani) ಅವರು ಮುಂಬರುವ ಕನ್ನಡ ಚಲನಚಿತ್ರ (Kannada New Movie) `ರಂಗಸಮುದ್ರ’ ಸಿನಿಮಾಕ್ಕಾಗಿ (Rangasamudra Movie) “ಹತ್ತೂರಿನ ದೀಪ” ಎಂಬ ಹಾಡನ್ನು ಕನ್ನಡದಲ್ಲಿಯೇ ಬರೆದುಕೊಂಡು ಹಾಡಿದ್ದಾರೆ. ಈ ವೇಳೆ ತಮ್ಮ ಕನ್ನಡ ನಂಟು ಹಾಗೂ ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದ ದಿನವನ್ನು ನೆನೆದಿದ್ದಾರೆ.

ಈ ವೇಳೆ ಎಂಎಂ ಕೀರವಾಣಿ ಅವರು ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದ ದಿನವನ್ನು ನೆನೆದಿದ್ದಾರೆ. ಬೆಂಗಳೂರಿನಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೊದಿಂದ ತನ್ನ ಸಿನಿಪಯಣ ಶುರುವಾಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ರಂಗಸಮುದ್ರ ನಿರ್ದೇಶಕ ರಾಜ್ ಕುಮಾರ್ ಅಸ್ಕಿ, ಸಾಹಿತಿ ವಾಗೀಶ್ ಚನ್ನಗಿರಿ ಹಾಗೂ ಸಂಗೀತ ನಿರ್ದೇಶಕ ದೇಸಿ ಮೋಹನ್ ಪ್ಯಾಥೋ ಸಾಂಗ್‌ವನ್ನು ಕೀರವಾಣಿಯವರ ಬಳಿ ಹಾಡಿಸಬೇಕು ಎಂದು ಬಯಸಿದ್ದರು. ಇದಾದ ನಂತರ ಕೀರವಾಣಿ ಅವರು ಹಾಡಲು ಒಪ್ಪಿಕೊಂಡರು ಎಂದು ಚಿತ್ರತಂಡ ಹೇಳಿಕೊಂಡಿದೆ.

ಕನ್ನಡದ ಜನಪ್ರಿಯ ನಟ ದೊಡ್ಡಣ್ಣ ತಮ್ಮ ಆತ್ಮೀಯ ಗೆಳೆಯ ಎಂದು ತಿಳಿಸಿದರು. ಸಂಗೀತ ಸಂಯೋಜಕ ದೇಸಿ ಮೋಹನ್ ಅವರ ಸಾಹಿತ್ಯಕ್ಕೆ ಕೀರವಾಣಿ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಎಸ್ ರಾಜಮೌಳಿ ಅವರೊಂದಿಗೆ ಚಿತ್ರವನ್ನು ವೀಕ್ಷಿಸುವುದಾಗಿ ಅವರು ನಿರ್ಮಾಪಕರಿಗೆ ತಿಳಿಸಿದರು. ಇನ್ನು ‘ರಂಗಸಮುದ್ರ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು ಎಂದು ತಿಳಿದಾಗ ಭಾವುಕರಾಗಿದ್ದರು.

ಇದನ್ನೂ ಓದಿ: Kannada New Movie: ಕ್ರಷ್ ಚಿತ್ರದ ಟ್ರೈಲರ್, ಹಾಡು ಬಿಡುಗಡೆ!

ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಸೇರಿದಂತೆ ಹಲವು ನಟಿಸಿದ್ದಾರೆ.ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಸೇರಿದಂತೆ ಹಲವು ನಟಿಸಿದ್ದಾರೆ.

ಎಂಎಂ ಕೀರವಾಣಿ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಅಳಿಮಯ್ಯ (1993), ಭೈರವ (1994), ಸ್ವಾತಿ (1994) ಸೇರಿದಂತೆ ಹಲವಾರು ಕನ್ನಡ ಚಲನಚಿತ್ರ ಹಾಡುಗಳಿಗೆ ಸಂಯೋಜಿಸಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಕೆಲವು ಹಾಡುಗಳನ್ನು ಹಾಡಿದ್ದಾರೆ. 2024ರ ಜನವರಿ 12ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

Exit mobile version