Site icon Vistara News

Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ

Puneeth Rajkumar

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನುಮದಿನದ ಅಂಗವಾಗಿ ಅಭಿಮಾನಿಗಳ ಸಾಗರ ಅಪ್ಪು ಸಮಾಧಿಗೆ ಹರಿದುಬರುತ್ತಿದೆ. ಚಿಕ್ಕ ಮಕ್ಕಳು ಗುಲಾಬಿ ಹಿಡಿದು ಅಪ್ಪು ಸಮಾಧಿಗೆ ಆಗಮಿಸುತ್ತಿದ್ದಾರೆ. ಅಪ್ಪು ಮಾಲೆ ಧರಿಸಿ ಹೊಸಪೇಟೆಯಿಂದ ಅಭಿಮಾನಿಗಳು ಬಂದಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆಯೂ ಆಯಿತು. ಇದೀಗ ರಾಘವೇಂದ್ರ ರಾಜ್‌ಕುಮಾರ್‌ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ ʻʻಅಪ್ಪು ಎಲ್ಲಿಯೂ ಹೋಗಿಲ್ಲ. ನಿಮಗೆ ಸ್ಪೂರ್ತಿ ನೀಡಲು ಮತ್ತೆ ಬರುತ್ತಾನೆ. ಸ್ಟಾರ್ ಅಷ್ಟೇ ಹೋಗಿದ್ದು ಪವರ್ ಇಲ್ಲೇ ಇದೆ. ಅಭಿಮಾನಿಗಳ ಮೂಲಕ ಮತ್ತೆ ಹುಟ್ಟಿ ಬರುತ್ತಾನೆʼʼ ಎಂದರು. ಸ್ಮಾರಕದ ವಿಚಾರವಾಗಿ ನಟ ಮಾತನಾಡಿ ʻಅಪ್ಪಾಜಿ, ಅಮ್ಮಾದು ಹಾಗೂ ಪುನೀತ್‌ ಅವರ ಮೂರು ಸ್ಮಾರಕಗಳು ಆಗಿವೆ. ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆʼʼ ಎಂದರು.

ಇದನ್ನೂ ಓದಿ: Puneeth Rajkumar: ಪೋಸ್ಟರ್‌ಗೆ ಸೀಮಿತವಾಯಿತು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಸ್ಫೂರ್ತಿ ದಿನ

ಕರ್ನಾಟಕದಲ್ಲಿ ಅಪ್ಪು ಸಂಭ್ರಮ

ಹುಟ್ಟುಹಬ್ಬದ ಅಂಗವಾಗಿ ಒಂದು ದಿನ ಮೊದಲೇ ರಾತ್ರಿ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರವನ್ನು ಪ್ರದರ್ಶನ ಆಯೋಜಿಸಲಾಗಿತ್ತು. ಪುನೀತ್‌ ಅವರ ಜನ್ಮದಿನ ಪ್ರಯುಕ್ತ ಅಭಿಮಾನಿಗಳು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಅಭಿಮಾನಿಗಳಿಗೆ ಅನ್ನದಾನ, ಶಾಲೆಗಳಿಗೆ ಪುಸ್ತಕ, ಸ್ಕೂಲ್‌ ಬ್ಯಾಗ್‌ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದಾರೆ. ಪುನೀತ್‌ ಜನ್ಮದಿನದಂದೇ ಬಿಡುಗಡೆ ಆಗುತ್ತಿರುವ ‘ಕಬ್ಜ’ ಚಿತ್ರವನ್ನು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಲಾಗಿದೆ.

Exit mobile version