Site icon Vistara News

Rakhi Sawant: ಹಿಂದು ಎಂಬ ಕಾರಣಕ್ಕೆ ಆದಿಲ್‌ ಮನೆಯವರು ಸೇರಿಸಿಕೊಳ್ಳುತ್ತಿಲ್ಲ: ಮೈಸೂರಿನಲ್ಲಿ ಗಳಗಳನೇ ಅತ್ತ ರಾಖಿ ಸಾವಂತ್‌!

Rakhi Sawant In mysore

ಬೆಂಗಳೂರು: ಬಾಲಿವುಡ್‌ ನಟಿ ರಾಖಿ ಸಾವಂತ್‌ (Rakhi Sawant) ಕೌಟುಂಬಿಕ ಪ್ರಕರಣ ಹಲವು ದಿನೇ ದಿನೇ ಹೆಚ್ಚಾಗುತ್ತಿದೆ. ಮೈಸೂರು ಮೂಲದ ಆದಿಲ್‌ ಖಾನ್‌ ದುರಾನಿಯನ್ನು ಮದುವೆಯಾಗಿದ್ದ ನಟಿ ರಾಖಿ ಸಾವಂತ್ ಮೋಸ ಹೋಗಿದ್ದಾರೆ. ನಟಿ ರಾಖಿ ಸಾವಂತ್​ ಇದೀಗ ಮೈಸೂರಿಗೆ ಬಂದು ಕಣ್ಣೀರು ಹಾಕಿದ್ದಾರೆ. ಮೈಸೂರು ಕೋರ್ಟ್‌ಗೆ ನಟಿ ಹಾಜರಾಗಿದ್ದು, ʻʻನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದುʼʼ ಎಂದು ಮಾಧ್ಯಮದ ಎದುರು ಕಣ್ಣೀರು ಇಟ್ಟಿದ್ದಾರೆ.

ಮಾಧ್ಯಮದ ಮುಂದೆ ರಾಖಿ ಸಾವಂತ್‌ ʻʻನನ್ನ ಪತಿಯನ್ನ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದ್ದಾರೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು. ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು. ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆʼʼಎಂದರು.

ಇದನ್ನೂ ಓದಿ: Rakhi Sawant: ನನ್ನ ಬೆತ್ತಲೆ ವಿಡಿಯೊಗಳನ್ನು ಮಾರಾಟ ಮಾಡಿದ್ದಾನೆ: ಆದಿಲ್ ವಿರುದ್ಧ ರಾಕಿ ಸಾವಂತ್‌ ಹೊಸ ಆರೋಪ

ʻʻಆದಿಲ್‌ ಖಾನ್‌ ತಂದೆ ಜತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ನಾನು ಹಿಂದು ಆಗಿದ್ದೆ. ಆದರೆ ಈಗ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದೇನೆ. ನನ್ನ ಬಳಿ 1.65 ಕೋಟಿ ರೂ. ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌. ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ. ಇದರಿಂದ ಮುಂಬೈಗೆ ಬರುತ್ತೇನೆ ಎಂದ . ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ ನನಗೆ. ನ್ಯಾಯ ಕೊಡಿಸಿʼʼಎಂದು ಗಳಗಳನೇ ಅತ್ತಿದ್ದಾರೆ .

Exit mobile version