ಬೆಂಗಳೂರು: ದೇಶದ ಸೂಪರ್ ಹಿಟ್ಸ್ ಸಿನಿಮಾಗಳ ಮೇಕರ್ ವಿಜಯ್ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ ಅಯೋಧ್ಯೆ ರಾಮನಿಗಾಗಿ “ರಾಮ ಮಂಗಳಂ” (Ram Mandir) ಗಾಯನ ಗುಚ್ಚ ಅರ್ಪಣೆ ಮಾಡಿದೆ. 17ನೇ ಶತಮಾನದ ರಾಮಭಕ್ತ, ಪುರಾಣ ಪ್ರಸಿದ್ಧ ಗಾಯಕ ಶ್ರೀ ಭದ್ರಾಚಲ ರಾಮದಾಸು ರಚಿಸಿದ್ದ `ರಾಮಮಂಗಳಂ’ ಗೀತೆಗೆ ಗಾಯನ ಸ್ವರೂಪ ಕೊಟ್ಟಿದ್ದಾರೆ.
ರಾಮಮಂದಿರ ಲೋಕಾರ್ಪಣೆ ಸುದಿನವನ್ನು ಒಂದು ದೇಶ, ಒಂದು ಸಂಸ್ಕೃತಿ ಎನ್ನುವ ರೀತಿಯಲ್ಲಿ ರಾಮಮಂಗಳಂ ಗೀತೆ ಸಂಯೋಜಿಸಲಾಗಿದೆ. ಕರ್ನಾಟಕದ ಕಲಾಶ್ರೀ ಖ್ಯಾತಿಯ ಪಂಡಿತ್ ಪ್ರವೀಣ್ ಡಿ ರಾವ್ ಸಾರಥ್ಯದಲ್ಲಿ ವಿ.ಎಸ್.ಶೃತಿ, ಅರುಂಧತಿ ವಶಿಷ್ಠಾ, ಪೂಜಾರಾವ್, ಚಿನ್ಮಯಿ ಚಂದ್ರಶೇಖರ್, ನಿಖಿಲ್ ಪಾರ್ಥಸಾರಥಿ, ಸಾಥ್ವಿಕ್ ಚಕ್ರವರ್ತಿ, ಹೆಚ್.ಸಿ.ಭಾರ್ಗವ್, ಮಧ್ವೇಶ್ ಭಾರದ್ವಾಜ್, ಎಂ.ಆರ್.ಅಭಿಷೇಕ್ ಸೇರಿರುವ ಗಾಯಕರ ತಂಡ ರಾಮಮಂಗಳ ಗೀತೆಗೆ ಧ್ವನಿಯಾಗಿದ್ದಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊಂಬಾಳೆ ಫಿಲ್ಮ್ಸ್ ವತಿಯಿಂದ ರಾಮಮಂಗಳಂ ಗೀತೆ ಸಂಯೋಜಿಸಿ, ಅಯೋಧ್ಯೆ ರಾಮನಿಗೆ ಸಮರ್ಪಿಸಿದ್ದಾರೆ.
A historic chapter of Bharat unfolds as the whole nation unites in celebration. The inauguration of the #RamMandir in #Ayodhya is a testament to our shared cultural heritage.
— Hombale Films (@hombalefilms) January 21, 2024
Let's come together as one nation, celebrating the spirit of unity and harmony. Embracing the cultural… pic.twitter.com/ghoaGb5oBd
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಸೋಮವಾರ (ಜನವರಿ 22) ಪ್ರಾಣಪ್ರತಿಷ್ಠೆ ನೆರವೇರಿಸಲಾಗುತ್ತದೆ. ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ.
ಇದನ್ನೂ ಓದಿ: Ram Mandir: ರಾಮನ ಪ್ರಾಣ ಪ್ರತಿಷ್ಠಾಪನೆ ದಿನ ರಜೆ ಘೋಷಿಸಿ; ಆರ್. ಅಶೋಕ್, ಎಚ್ಡಿಕೆ ಆಗ್ರಹ
ಪ್ರಾಣ ಪ್ರತಿಷ್ಠಾ ಎಂದರೇನು?
ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.
ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.