Site icon Vistara News

Randeep Hooda | ಕುದುರೆಯಿಂದ ಬಿದ್ದು ಗಾಯಗೊಂಡ ನಟ ರಣದೀಪ್ ಹೂಡಾ ಆಸ್ಪತ್ರೆಗೆ ದಾಖಲು: ಸ್ಥಿತಿ ಗಂಭೀರ

Randeep Hooda

ಬೆಂಗಳೂರು: ಬಾಲಿವುಡ್‌ ನಟ ರಣದೀಪ್ ಹೂಡಾ (Randeep Hooda ) ಅವರು ಕುದುರೆ ಸವಾರಿ ಮಾಡುವಾಗ ಬಿದ್ದು ಗಾಯಗೊಂಡಿದ್ದಾರೆ. ಜನವರಿ ೧೩ರಂದು ಸಾವರ್ಕರ್‌ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಅವರು ಕುದುರೆಯಿಂದ ಬಿದ್ದಿದ್ದರು. ಬಿದ್ದ ಪರಿಣಾಮವಾಗಿ ಅವರಿಗೆ ಪ್ರಜ್ಞೆ ತಪ್ಪಿತ್ತು, ಜತೆಗೆ ತೀವ್ರ ಗಾಯವಾಗಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ರಣದೀಪ್ ಅವರಿಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ನಟ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೂಡಾ ಅವರು ʻಸಾವರ್ಕರ್ʼ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾ ದೃಶ್ಯಕ್ಕಾಗಿ ಅವರು ಕುದುರೆ ಸವಾರಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೂಡಾ ಅವರು ಸಾವರ್ಕರ್ ಪಾತ್ರ ಮಾಡುವುದಕ್ಕಾಗಿಯೇ ಅವರು 22 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಚಿತ್ರದಲ್ಲಿ ಅಂಕಿತಾ ಲೋಖಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Bengaluru Pothole : ಬೈಕ್‌ನಲ್ಲಿ ತೆರಳುತ್ತಿದ್ದಾಗ ಕುಸಿದ ರಸ್ತೆ; ಕಂದಕಕ್ಕೆ ಬಿದ್ದ ಸವಾರ ಆಸ್ಪತ್ರೆಗೆ ದಾಖಲು

ಸದ್ಯಕ್ಕೆ ವೈದ್ಯರು ಸಂಪೂರ್ಣ ಬೆಡ್‌ ರೆಸ್ಟ್‌ಗೆ ರಣದೀಪ್ ಹೂಡಾ ಅವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆಯೂ ರಾಧೆ ಸಿನಿಮಾದ ಶೂಟಿಂಗ್ ವೇಳೆಯೂ ರಣದೀಪ್ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ವರದಿ ಪ್ರಕಾರ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ಅವರು ಸೆಟ್‌ನಲ್ಲಿ ಗಾಯಗೊಂಡರು. ಗಾಯದ ಹೊರತಾಗಿಯೂ, ರಣದೀಪ್ ಚಿತ್ರೀಕರಣವನ್ನು ಮುಂದುವರಿಸಿದ್ದರು ಮತ್ತು ಅದನ್ನು ಮಧ್ಯದಲ್ಲಿ ನಿಲ್ಲಿಸಿರಲಿಲ್ಲ.

ಇದನ್ನೂ ಓದಿ | Mahek Chahal | `ನಾಗಿನ್ 6′ ಧಾರಾವಾಹಿ ಖ್ಯಾತಿಯ ಮಹಕ್ ಚಹಲ್ ಆಸ್ಪತ್ರೆಗೆ ದಾಖಲು

Exit mobile version